Check out the new design

قۇرئان كەرىم مەنىلىرىنىڭ تەرجىمىسى - كاناداچە تەرجىمىسى- بەشىير مىيسۇرى * - تەرجىمىلەر مۇندەرىجىسى


مەنالار تەرجىمىسى سۈرە: بەقەرە   ئايەت:

ಅಲ್- ಬಕರ

الٓمّٓ ۟ۚ
ಅಲಿಫ್-ಲಾಮ್ ಮೀಮ್
ئەرەپچە تەپسىرلەر:
ذٰلِكَ الْكِتٰبُ لَا رَیْبَ ۖۚۛ— فِیْهِ ۚۛ— هُدًی لِّلْمُتَّقِیْنَ ۟ۙ
ಇದು (ದೈವಿಕ) ಗ್ರಂಥ ಇದರಲ್ಲಿ ಯಾವ ಸಂದೇಹವೂ ಇಲ್ಲ. ಭಯಭಕ್ತಿಯುಳ್ಳವರಿಗೆ ಮಾರ್ಗದರ್ಶಕವಾಗಿದೆ.
ئەرەپچە تەپسىرلەر:
الَّذِیْنَ یُؤْمِنُوْنَ بِالْغَیْبِ وَیُقِیْمُوْنَ الصَّلٰوةَ وَمِمَّا رَزَقْنٰهُمْ یُنْفِقُوْنَ ۟ۙ
ಅವರು ಅಗೋಚರ ವಿಷಯ (ದೇವರು ಪರಲೋಕ, ಪುನರ್ಜೀವನ ಮುಂತಾದವು)ಗಳಲ್ಲಿ ವಿಶ್ವಾಸವಿಡುತ್ತಾರೆ ಹಾಗೂ ನಮಾಜ್ ಸಂಸ್ಥಾಪಿಸುತ್ತಾರೆ ಮತ್ತು ನಾವು ಅವರಿಗೆ ನೀಡಿರುವ (ಸಂಪತ್ತಿನಿಂದ) ಖರ್ಚು ಮಾಡುತ್ತಾರೆ.
ئەرەپچە تەپسىرلەر:
وَالَّذِیْنَ یُؤْمِنُوْنَ بِمَاۤ اُنْزِلَ اِلَیْكَ وَمَاۤ اُنْزِلَ مِنْ قَبْلِكَ ۚ— وَبِالْاٰخِرَةِ هُمْ یُوْقِنُوْنَ ۟ؕ
(ಓ ಪೈಗಂಬರರೇ) ಅವರು ನಿಮ್ಮೆಡೆಗೆ ಅವತೀರ್ಣಗೊಳಿಸಿದ್ದಲ್ಲೂ, (ಕುರ್‌ಆನ್) ಮತ್ತು ನಿಮಗಿಂತ ಮುಂಚೆ ಅವತೀರ್ಣಗೊಳಿಸಿರುವ ಗ್ರಂಥಗಳಲ್ಲೂ ವಿಶ್ವಾಸವಿಡುವವರು ಹಾಗೂ ಪರಲೋಕದ ಕುರಿತು ಧೃಢವಾಗಿ ನಂಬುವವರಾಗಿದ್ದಾರೆ.
ئەرەپچە تەپسىرلەر:
اُولٰٓىِٕكَ عَلٰی هُدًی مِّنْ رَّبِّهِمْ ۗ— وَاُولٰٓىِٕكَ هُمُ الْمُفْلِحُوْنَ ۟
ಅಂತಹವರೇ ತಮ್ಮ ಪ್ರಭುವಿನ ಕಡೆಯಿಂದ ಸನ್ಮಾರ್ಗದಲ್ಲಿರುವವರು ಹಾಗೂ ಅವರೇ ಯಶಸ್ಸು ಪಡೆಯುವವರು ಆಗಿದ್ದಾರೆ.
ئەرەپچە تەپسىرلەر:
اِنَّ الَّذِیْنَ كَفَرُوْا سَوَآءٌ عَلَیْهِمْ ءَاَنْذَرْتَهُمْ اَمْ لَمْ تُنْذِرْهُمْ لَا یُؤْمِنُوْنَ ۟
ನಿಶ್ಚಯವಾಗಿಯೂ ಸತ್ಯನಿಷೇಧಿಗಳಿಗೆ ನೀವು (ಅಲ್ಲಾಹನ ಯಾತನೆಯ) ಮುನ್ನೆಚ್ಚರಿಕೆ ನೀಡಿದರೂ, ನೀಡದಿದ್ದರೂ ಅವರ ಪಾಲಿಗೆ ಸಮಾನಾವಾಗಿದೆ, ಅವರು ವಿಶ್ವಾಸವಿಡುವುದಿಲ್ಲ.
ئەرەپچە تەپسىرلەر:
خَتَمَ اللّٰهُ عَلٰی قُلُوْبِهِمْ وَعَلٰی سَمْعِهِمْ ؕ— وَعَلٰۤی اَبْصَارِهِمْ غِشَاوَةٌ ؗ— وَّلَهُمْ عَذَابٌ عَظِیْمٌ ۟۠
ಅಲ್ಲಾಹನು ಅವರ ಹೃದಯಗಳ ಮೇಲೆ ಮತ್ತು ಕಿವಿಗಳ ಮೇಲೆ ಮುದ್ರೆಯೊತ್ತಿರುತ್ತಾನೆ ಮತ್ತು ಅವರ ಕಣ್ಣುಗಳ ಮೇಲೆ ಪರದೆ ಇದೆ ಹಾಗೂ ಅವರಿಗೆ ಘೋರ ಯಾತನೆಯಿದೆ.
ئەرەپچە تەپسىرلەر:
وَمِنَ النَّاسِ مَنْ یَّقُوْلُ اٰمَنَّا بِاللّٰهِ وَبِالْیَوْمِ الْاٰخِرِ وَمَا هُمْ بِمُؤْمِنِیْنَ ۟ۘ
ಕೆಲವು ಜನರು (ಕಪಟವಿಶ್ವಾಸಿಗಳು) ನಾವು ಅಲ್ಲಾಹನಲ್ಲೂ, ಅಂತ್ಯ ದಿನದಲ್ಲೂ ವಿಶ್ವಾಸವಿರಿಸಿದ್ದೇವೆ ಎನ್ನುತ್ತಾರೆ. ಆದರೆ ವಾಸ್ತವದಲ್ಲಿ ಅವರು ವಿಶ್ವಾಸಿಗಳಲ್ಲ.
ئەرەپچە تەپسىرلەر:
یُخٰدِعُوْنَ اللّٰهَ وَالَّذِیْنَ اٰمَنُوْا ۚ— وَمَا یَخْدَعُوْنَ اِلَّاۤ اَنْفُسَهُمْ وَمَا یَشْعُرُوْنَ ۟ؕ
ಅವರು (ತಮ್ಮ ಭ್ರಮೆಯಲ್ಲಿ) ಅಲ್ಲಾಹನನ್ನು ಮತ್ತು ಸತ್ಯವಿಶ್ವಾಸಿಗಳನ್ನು ವಂಚಿಸಲು ಪ್ರಯತ್ನಿಸುತ್ತಾರೆ. ವಾಸ್ತವದಲ್ಲಿ ಅವರು ಸ್ವತಃ ತಮ್ಮನ್ನೇ ವಂಚಿಸಿಕೊಳ್ಳುತ್ತಿದ್ದಾರೆ, ಆದರೆ ಅವರು ಗ್ರಹಿಸುವುದಿಲ್ಲ.
ئەرەپچە تەپسىرلەر:
فِیْ قُلُوْبِهِمْ مَّرَضٌ ۙ— فَزَادَهُمُ اللّٰهُ مَرَضًا ۚ— وَلَهُمْ عَذَابٌ اَلِیْمٌ ۙ۬۟ — بِمَا كَانُوْا یَكْذِبُوْنَ ۟
ಅವರ ಹೃದಯಗಳಲ್ಲಿ (ಕಪಟದ) ರೋಗವಿದೆ. ಅಲ್ಲಾಹನು ಅವರ ರೋಗವನ್ನು ಇನ್ನಷ್ಟು ಹೆಚ್ಚಿಸಿದನು ಮತ್ತು ಅವರ ಸುಳ್ಳಿನ ನಿಮಿತ್ತ ಅವರಿಗೆ ವೇದನಾಜನಕ ಯಾತನೆಯಿದೆ.
ئەرەپچە تەپسىرلەر:
وَاِذَا قِیْلَ لَهُمْ لَا تُفْسِدُوْا فِی الْاَرْضِ ۙ— قَالُوْۤا اِنَّمَا نَحْنُ مُصْلِحُوْنَ ۟
ನೀವು ಭೂಮಿಯಲ್ಲಿ ಕ್ಷೋಭೆಯನ್ನು ಹರಡದಿರಿ ಎಂದು ಅವರೊಡನೆ ಹೇಳಲಾದರೆ, ನಾವು ಸುಧಾರಕರು ಮಾತ್ರ ಆಗಿದ್ದೇವೆ ಎಂದು ಅವರು ಹೇಳುತ್ತಾರೆ.
ئەرەپچە تەپسىرلەر:
اَلَاۤ اِنَّهُمْ هُمُ الْمُفْسِدُوْنَ وَلٰكِنْ لَّا یَشْعُرُوْنَ ۟
(ವಿಶ್ವಾಸಿಗಳೆ) ಜಾಗೃತೆ ! ವಾಸ್ತವದಲ್ಲಿ ಅವರೇ ಕ್ಷೋಭೆ ಹರಡುವರು, ಆದರೆ ಅವರಿಗೆ ತಿಳುವಳಿಕೆ ಇರುವುದಿಲ್ಲ.
ئەرەپچە تەپسىرلەر:
وَاِذَا قِیْلَ لَهُمْ اٰمِنُوْا كَمَاۤ اٰمَنَ النَّاسُ قَالُوْۤا اَنُؤْمِنُ كَمَاۤ اٰمَنَ السُّفَهَآءُ ؕ— اَلَاۤ اِنَّهُمْ هُمُ السُّفَهَآءُ وَلٰكِنْ لَّا یَعْلَمُوْنَ ۟
ಇತರ ಜನರು (ಪೈಗಂಬರರ ಅನುಚರರು) ವಿಶ್ವಾಸವಿರಿಸಿದ ಹಾಗೆ ನೀವು ವಿಶ್ವಾಸವಿಸಿರಿ ಎಂದು ಅವರೊಡನೆ ಹೇಳಲಾದರೆ, ಏನು? ಮೂರ್ಖರು ವಿಶ್ವಾಸವಿರಿಸಿದ ಹಾಗೆ ನಾವು ವಿಶ್ವಾಸವಿರಿಸಬೇಕೆ? ಎಂದು ಅವರು ಹೇಳುತ್ತಾರೆ. ಜಾಗೃತೆ! ನಿಜವಾಗಿಯು ಅವರೇ ಮೂರ್ಖರಾಗಿದ್ದಾರೆ. ಆದರೆ ಅವರು ಅರಿಯುವುದಿಲ್ಲ.
ئەرەپچە تەپسىرلەر:
وَاِذَا لَقُوا الَّذِیْنَ اٰمَنُوْا قَالُوْۤا اٰمَنَّا ۖۚ— وَاِذَا خَلَوْا اِلٰی شَیٰطِیْنِهِمْ ۙ— قَالُوْۤا اِنَّا مَعَكُمْ ۙ— اِنَّمَا نَحْنُ مُسْتَهْزِءُوْنَ ۟
ಅವರು ವಿಶ್ವಾಸಿಗಳನ್ನು ಭೇಟಿಯಾದಾಗ ನಾವು ವಿಶ್ವಾಸಿಗಳಾಗಿದ್ದೇವೆ ಎಂದು ಹೇಳುತ್ತಾರೆ. ಹಾಗೂ ಅವರು ತಮ್ಮ (ಒಡನಾಡಿಗಳಾದ) ಶೈತಾನರನ್ನು ಏಕಾಂತದಲ್ಲಿ ಭೇಟಿಯಾದಾಗ, ನಾವು ನಿಮ್ಮೊಂದಿಗಿದ್ದೇವೆ ಎನ್ನುತ್ತಾರೆ. ನಾವಂತು ಅವರನ್ನು (ವಿಶ್ವಾಸಿಗಳನ್ನು) ಗೇಲಿ ಮಾಡುವವರಾಗಿದ್ದೇವೆ (ಎನ್ನುತ್ತಾರೆ).
ئەرەپچە تەپسىرلەر:
اَللّٰهُ یَسْتَهْزِئُ بِهِمْ وَیَمُدُّهُمْ فِیْ طُغْیَانِهِمْ یَعْمَهُوْنَ ۟
ಅಲ್ಲಾಹನು ಅವರನ್ನು ಗೇಲಿ ಮಾಡುತ್ತಿದ್ದಾನೆ. ಹಾಗೂ ಅವನು ಅವರನ್ನು ಅತಿಕ್ರಮದಲ್ಲಿ ಅಲೆದಾಡುತ್ತಿರಲು ಸಡಿಲ ಬಿಡುತ್ತಾನೆ.
ئەرەپچە تەپسىرلەر:
اُولٰٓىِٕكَ الَّذِیْنَ اشْتَرَوُا الضَّلٰلَةَ بِالْهُدٰی ۪— فَمَا رَبِحَتْ تِّجَارَتُهُمْ وَمَا كَانُوْا مُهْتَدِیْنَ ۟
ಇವರೇ ಸನ್ಮಾರ್ಗದ ಬದಲಿಗೆ ದುರ್ಮಾರ್ಗವನ್ನು ಖರೀದಿಸಿದವರಾಗಿದ್ದಾರೆ. ಅವರ ವ್ಯಾಪಾರವು ಲಾಭ ನೀಡಲಿಲ್ಲ ಮತ್ತು ಅವರು ಸನ್ಮಾರ್ಗ ಹೊಂದುವವರಾಗಿರಲಿಲ್ಲ.
ئەرەپچە تەپسىرلەر:
مَثَلُهُمْ كَمَثَلِ الَّذِی اسْتَوْقَدَ نَارًا ۚ— فَلَمَّاۤ اَضَآءَتْ مَا حَوْلَهٗ ذَهَبَ اللّٰهُ بِنُوْرِهِمْ وَتَرَكَهُمْ فِیْ ظُلُمٰتٍ لَّا یُبْصِرُوْنَ ۟
ಅವರ ಉಪಮೆಯು ಒಬ್ಬ ಬೆಂಕಿಯುರಿಸಿದವನAತಿದೆ. ಅದು ಅವನ ಸುತ್ತಮುತ್ತಲಿರುವುದನ್ನು ಬೆಳಗಿದಾಗ, ಅಲ್ಲಾಹನು ಅವರ ಪ್ರಕಾಶವನ್ನು ಕಸಿದುಕೊಂಡನು. ಹಾಗೂ ಅವರನ್ನು ಅಂಧಕಾರಗಳಲ್ಲಿ ಬಿಟ್ಟುಬಿಟ್ಟನು. ಅವರು ದೃಷ್ಟಿ ಹೊಂದಿದವರಾಗಿರಲಿಲ್ಲ.
ئەرەپچە تەپسىرلەر:
صُمٌّۢ بُكْمٌ عُمْیٌ فَهُمْ لَا یَرْجِعُوْنَ ۟ۙ
ಅವರು ಕಿವುಡರು, ಮೂಕರು, ಅಂಧರಾಗಿದ್ದಾರೆ. ಆದ್ದರಿಂದ ಅವರು (ಸತ್ಯದೆಡೆಗೆ) ಮರಳಲಾರರು.
ئەرەپچە تەپسىرلەر:
اَوْ كَصَیِّبٍ مِّنَ السَّمَآءِ فِیْهِ ظُلُمٰتٌ وَّرَعْدٌ وَّبَرْقٌ ۚ— یَجْعَلُوْنَ اَصَابِعَهُمْ فِیْۤ اٰذَانِهِمْ مِّنَ الصَّوَاعِقِ حَذَرَ الْمَوْتِ ؕ— وَاللّٰهُ مُحِیْطٌ بِالْكٰفِرِیْنَ ۟
ಅಥವಾ ಅವರ ಇನ್ನೊಂದು ಉಪಮೆಯು ಆಕಾಶದಿಂದ ಸುರಿಯುವ ಭಾರೀ ಮಳೆಯಂತಿದೆ. ಅದರಲ್ಲಿ ಅಂಧಕಾರಗಳೂ, ಗುಡುಗೂ, ಮಿಂಚೂ ಇವೆ. ಸಿಡಿಲಿನ ಆರ್ಭಟದ ನಿಮಿತ್ತ ಮರಣವನ್ನು ಭಯಗೊಂಡು ಅವರು ತಮ್ಮ ಬೆರಳುಗಳನ್ನು ಕಿವಿಯೊಳಗೆ ತೂರಿಸಿಕೊಳ್ಳುತ್ತಾರೆ. ಮತ್ತು ಅಲ್ಲಾಹನು ಸತ್ಯ ನಿಷೇಧಿಗಳನ್ನು ಆವರಿಸಿರುತ್ತಾನೆ.
ئەرەپچە تەپسىرلەر:
یَكَادُ الْبَرْقُ یَخْطَفُ اَبْصَارَهُمْ ؕ— كُلَّمَاۤ اَضَآءَ لَهُمْ مَّشَوْا فِیْهِ ۙۗ— وَاِذَاۤ اَظْلَمَ عَلَیْهِمْ قَامُوْا ؕ— وَلَوْ شَآءَ اللّٰهُ لَذَهَبَ بِسَمْعِهِمْ وَاَبْصَارِهِمْ ؕ— اِنَّ اللّٰهَ عَلٰی كُلِّ شَیْءٍ قَدِیْرٌ ۟۠
ಸದ್ಯದಲ್ಲೇ ಮಿಂಚು ಅವರ ಕಣ್ಣುಗಳನ್ನು ಕಸಿದುಕೊಳ್ಳುವಂತಿದೆ. ಅವರಿಗೆ ಬೆಳಕಾದಾಗಲೆಲ್ಲಾ ಅದರಲ್ಲಿ ನಡೆಯುತ್ತಾರೆ. ಹಾಗೂ ಅವರ ಮೇಲೆ ಕತ್ತಲಾವರಿಸಿದಾಗ ನಿಂತುಬಿಡುತ್ತಾರೆ. ಅಲ್ಲಾಹನು ಇಚ್ಛಿಸಿರುತ್ತಿದ್ದರೆ. ಅವರ ಕಿವಿಯನ್ನು ಮತ್ತು ಅವರ ಕಣ್ಣುಗಳನ್ನು ವ್ಯರ್ಥಗೊಳಿಸುತ್ತಿದ್ದನು. ವಾಸ್ತವದಲ್ಲಿ ಅಲ್ಲಾಹನು ಸಕಲ ಸಂಗತಿಗಳ ಮೇಲೆ ಸಾಮರ್ಥ್ಯವುಳ್ಳವನಾಗಿದ್ದಾನೆ.
ئەرەپچە تەپسىرلەر:
یٰۤاَیُّهَا النَّاسُ اعْبُدُوْا رَبَّكُمُ الَّذِیْ خَلَقَكُمْ وَالَّذِیْنَ مِنْ قَبْلِكُمْ لَعَلَّكُمْ تَتَّقُوْنَ ۟ۙ
ಓ ಜನರೇ, ನೀವು ನಿಮ್ಮನ್ನೂ, ನಿಮಗಿಂತ ಮುಂಚಿನ ಜನರನ್ನೂ ಸೃಷ್ಟಿಸಿದ ನಿಮ್ಮ ಪಾಲಕ ಪ್ರಭುವನ್ನು ಆರಾಧಿಸಿರಿ. ನೀವು (ಅಲ್ಲಾಹನ ಯಾತನೆಯಿಂದ) ರಕ್ಷಣೆಹೊಂದಬಹುದು.
ئەرەپچە تەپسىرلەر:
الَّذِیْ جَعَلَ لَكُمُ الْاَرْضَ فِرَاشًا وَّالسَّمَآءَ بِنَآءً ۪— وَّاَنْزَلَ مِنَ السَّمَآءِ مَآءً فَاَخْرَجَ بِهٖ مِنَ الثَّمَرٰتِ رِزْقًا لَّكُمْ ۚ— فَلَا تَجْعَلُوْا لِلّٰهِ اَنْدَادًا وَّاَنْتُمْ تَعْلَمُوْنَ ۟
ಅವನೆ ನಿಮಗಾಗಿ ಭೂಮಿಯನ್ನು ಹಾಸನ್ನಾಗಿಯು, ಆಕಾಶವನ್ನು ಮೇಲ್ಛಾವಣಿಯನ್ನಾಗಿಯು ಮಾಡಿರುವನು ಮತ್ತು ಆಕಾಶದಿಂದ ನೀರನ್ನು ಸುರಿಸಿ ಅದರ ಮೂಲಕ ಫಲ ಬೆಳೆಗಳನ್ನು ಹೊರತಂದು ನಿಮಗೆ ಅನ್ನಾಧಾರವನ್ನು ನೀಡಿದನು. ಜಾಗೃತೆ! ನೀವು (ಈ ಸತ್ಯವನ್ನು) ಅರಿತವರಾಗಿದ್ದೂ ಅಲ್ಲಾಹನಿಗೆ ಸರಿಸಮಾನರನ್ನು (ಉಪದೇವರುಗಳನ್ನು) ಮಾಡದಿರಿ.
ئەرەپچە تەپسىرلەر:
وَاِنْ كُنْتُمْ فِیْ رَیْبٍ مِّمَّا نَزَّلْنَا عَلٰی عَبْدِنَا فَاْتُوْا بِسُوْرَةٍ مِّنْ مِّثْلِهٖ ۪— وَادْعُوْا شُهَدَآءَكُمْ مِّنْ دُوْنِ اللّٰهِ اِنْ كُنْتُمْ صٰدِقِیْنَ ۟
ನಾವು ನಮ್ಮ ದಾಸನ (ಮುಹಮ್ಮದ್(ಸ) ರವರ) ಮೇಲೆ ಅವತೀರ್ಣಗೊಳಿಸಿದ ಗ್ರಂಥದಲ್ಲಿ (ಕುರ್‌ಆನ್) ನಿಮಗೆ ಸಂದೇಹವಿದ್ದರೆ ನೀವು ಅದರಂತಹ ಒಂದು ಅಧ್ಯಾಯವನ್ನು ರಚಿಸಿ ತನ್ನಿರಿ. ಮತ್ತು ಅಲ್ಲಾಹನ ಹೊರತು ನಿಮ್ಮ ಸಹಾಯಕರನ್ನೂ ಕರೆದುಕೊಳ್ಳಿರಿ ನೀವು ಸತ್ಯವಂತರಾಗಿದ್ದರೆ.
ئەرەپچە تەپسىرلەر:
فَاِنْ لَّمْ تَفْعَلُوْا وَلَنْ تَفْعَلُوْا فَاتَّقُوا النَّارَ الَّتِیْ وَقُوْدُهَا النَّاسُ وَالْحِجَارَةُ ۖۚ— اُعِدَّتْ لِلْكٰفِرِیْنَ ۟
ಇನ್ನು ನೀವು ಹಾಗೆ ಮಾಡದಿದ್ದಲ್ಲಿ ಮತ್ತು ಖಂಡಿತ ನೀವು ಹಾಗೆಂದಿಗೂ ಮಾಡಲಾರಿರಿ. ಆದ್ದರಿಂದ ನೀವು ಮನುಷ್ಯರನ್ನು ಮತ್ತು ಶಿಲೆಗಳÀನ್ನು ಇಂಧನವಾಗಿ ಉರಿಸಲಾಗುವ ನರಕಾಗ್ನಿಯನ್ನು ಭಯಪಡಿರಿ. ಅದನ್ನು ಸತ್ಯನಿಷೇಧಿಗಳಿಗೆ ಸಿದ್ಧsಗೊಳಿಸಲಾಗಿದೆ.
ئەرەپچە تەپسىرلەر:
وَبَشِّرِ الَّذِیْنَ اٰمَنُوْا وَعَمِلُوا الصّٰلِحٰتِ اَنَّ لَهُمْ جَنّٰتٍ تَجْرِیْ مِنْ تَحْتِهَا الْاَنْهٰرُ ؕ— كُلَّمَا رُزِقُوْا مِنْهَا مِنْ ثَمَرَةٍ رِّزْقًا ۙ— قَالُوْا هٰذَا الَّذِیْ رُزِقْنَا مِنْ قَبْلُ وَاُتُوْا بِهٖ مُتَشَابِهًا ؕ— وَلَهُمْ فِیْهَاۤ اَزْوَاجٌ مُّطَهَّرَةٌ وَّهُمْ فِیْهَا خٰلِدُوْنَ ۟
ಓ ಪೈಗಂಬರರೇ ! ಸತ್ಯವಿಶ್ವಾಸವಿರಿಸಿ ಸತ್ಕರ್ಮಗಳನ್ನು ಕೈಗೊಂಡವರಿಗೆ ತಳಭಾಗದಲ್ಲಿ ನದಿಗಳು ಹರಿಯುತ್ತಿರುವ ಸ್ವರ್ಗೋದ್ಯಾನಗಳಿವೆ ಎಂದು ಸುವಾರ್ತೆ ನೀಡಿರಿ. ಅವರಿಗೆ ಅವುಗಳಲ್ಲಿಂದ ಫಲಗಳನ್ನು ಆಹಾರವಾಗಿ ನೀಡಲಾದಾಗಲೆಲ್ಲಾ ಅವರು (ಅದರ ಬಾಹ್ಯ ರೂಪವನ್ನು ನೋಡಿ) ಇದು ಮೊದಲು ನಮಗೆ ನೀಡಲಾದಂತಹದ್ದೇ ಆಗಿದೆ ಎನ್ನುವರು. ಮತ್ತು ಅವರಿಗೆ ಪರಸ್ಪರ ಸಾದೃಷ್ಯವಿರುವಂತಹ ಫಲಗಳನ್ನು ನೀಡಲಾಗುವುದು ಮತ್ತು ಅವರಿಗೆ ಅದರಲ್ಲಿ ಪರಿಶುದ್ಧರಾದ ಪತ್ನಿಯರಿರುವರು ಹಾಗೂ ಅವರು ಅದರಲ್ಲಿ (ಆ ಸ್ವರ್ಗದಲ್ಲಿ) ಶಾಶ್ವತವಾಗಿರುವರು.
ئەرەپچە تەپسىرلەر:
اِنَّ اللّٰهَ لَا یَسْتَحْیٖۤ اَنْ یَّضْرِبَ مَثَلًا مَّا بَعُوْضَةً فَمَا فَوْقَهَا ؕ— فَاَمَّا الَّذِیْنَ اٰمَنُوْا فَیَعْلَمُوْنَ اَنَّهُ الْحَقُّ مِنْ رَّبِّهِمْ ۚ— وَاَمَّا الَّذِیْنَ كَفَرُوْا فَیَقُوْلُوْنَ مَاذَاۤ اَرَادَ اللّٰهُ بِهٰذَا مَثَلًا ۘ— یُضِلُّ بِهٖ كَثِیْرًا وَّیَهْدِیْ بِهٖ كَثِیْرًا ؕ— وَمَا یُضِلُّ بِهٖۤ اِلَّا الْفٰسِقِیْنَ ۟ۙ
ನಿಸ್ಸಂದೇಹವಾಗಿಯೂ ಅಲ್ಲಾಹನು ಯಾವುದೇ ಉಪಮೆಯನ್ನು ನೀಡಲು ನಾಚಿಕೆ ಪಡುವುದಿಲ್ಲ. ಅದು ಸೊಳ್ಳೆಯದ್ದಾಗಿರಲಿ, ಅಥವಾ ಅದಕ್ಕಿಂತ ಕ್ಷುಲ್ಲಕ ವಸ್ತುವಿನದ್ದೇ ಆಗಲಿ, ಆದರೆ ಸತ್ಯವಿಶ್ವಾಸಿಗಳು ಅದನ್ನು ತಮ್ಮ ಪ್ರಭುವಿನ ಕಡೆಯ ಸತ್ಯವೆಂದು ತಿಳಿಯುತ್ತಾರೆ. ಮತ್ತು ಸತ್ಯನಿಷೇಧಿಗಳು ಈ ಉಪಮೆಯ ಮೂಲಕ ಅಲ್ಲಾಹನು ಉದ್ದೇಶಿಸಿರುವುದಾದರೂ ಏನು ಎನ್ನುತ್ತಾರೆ. ಇದರ ಮೂಲಕ ಅವನು ಬಹುತೇಕ ಜನರನ್ನು ಪಥಭ್ರಷ್ಟಗೊಳಿಸುತ್ತಾನೆ. ಹಾಗೂ ಇದರ ಮೂಲಕ ಅನೇಕ ಜನರನ್ನು ಸ್ವರ್ಗಕ್ಕೆ ಮುನ್ನಡೆಸುತ್ತಾನೆ. ಮತ್ತು ಇದರ ಮೂಲಕ ಅವನು ಕರ್ಮ ಭ್ರಷ್ಟರನ್ನು ಮಾತ್ರ ಪಥಭ್ರಷ್ಟಗೊಳಿಸುತ್ತಾನೆ.
ئەرەپچە تەپسىرلەر:
الَّذِیْنَ یَنْقُضُوْنَ عَهْدَ اللّٰهِ مِنْ بَعْدِ مِیْثَاقِهٖ ۪— وَیَقْطَعُوْنَ مَاۤ اَمَرَ اللّٰهُ بِهٖۤ اَنْ یُّوْصَلَ وَیُفْسِدُوْنَ فِی الْاَرْضِ ؕ— اُولٰٓىِٕكَ هُمُ الْخٰسِرُوْنَ ۟
ಅವರು ಅಲ್ಲಾಹನ ಕರಾರನ್ನು ಸಧೃಢಗೊಳಿಸಿದ ನಂತರ ಉಲ್ಲಂಘಿಸುವವರು ಅಲ್ಲಾಹನು ಕೂಡಿಸಲು ಆದೇಶಿಸಿರುವ ಸಂಬಂಧವನ್ನು ಮುರಿಯುವವರು ಭೂಮಿಯಲ್ಲಿ ಕ್ಷೋಭೆಯನ್ನು ಹರಡುವವರಾಗಿದ್ದಾರೆ. ಅವರೇ ನಷ್ಟ ಹೊಂದುವÀವರಾಗಿರುತ್ತಾರೆ.
ئەرەپچە تەپسىرلەر:
كَیْفَ تَكْفُرُوْنَ بِاللّٰهِ وَكُنْتُمْ اَمْوَاتًا فَاَحْیَاكُمْ ۚ— ثُمَّ یُمِیْتُكُمْ ثُمَّ یُحْیِیْكُمْ ثُمَّ اِلَیْهِ تُرْجَعُوْنَ ۟
ನೀವು ಅಲ್ಲಾಹನನ್ನು ಹೇಗೆ ನಿರಾಕರಿಸುವಿರಿ?. ನೀವಂತೂ ನಿರ್ಜಿವಿಗಳಾಗಿದ್ದಿರಿ! ಅವನು ನಿಮ್ಮನ್ನು ಜೀವಂತಗೊಳಿಸಿದನು, ತರುವಾಯ ಅವನು ನಿಮ್ಮನ್ನು ಮರಣಗೊಳಿಸುವನು, ಪುನಃ ನಿಮ್ಮನ್ನು ಜೀವಂತಗೊಳಿಸುವನು. ಅನಂತರ ನೀವು ಅವನೆಡೆಗೇ ಮರಳಿಸಲಾಗುವಿರಿ.
ئەرەپچە تەپسىرلەر:
هُوَ الَّذِیْ خَلَقَ لَكُمْ مَّا فِی الْاَرْضِ جَمِیْعًا ۗ— ثُمَّ اسْتَوٰۤی اِلَی السَّمَآءِ فَسَوّٰىهُنَّ سَبْعَ سَمٰوٰتٍ ؕ— وَهُوَ بِكُلِّ شَیْءٍ عَلِیْمٌ ۟۠
ಅವನೇ ನಿಮಗಾಗಿ ಭೂಮಿಯಲ್ಲಿರುವ ಸಕಲವನ್ನು ಸೃಷ್ಟಿಸಿದವನು. ಬಳಿಕ ಅವನು ಆಕಾಶದೆಡೆಗೆ ಗಮನ ಹರಿಸಿದನು ಮತ್ತು ಅವುಗಳನ್ನು ಏಳು ಆಕಾಶಗಳನ್ನಾಗಿ ರೂಪಿಸಿದನು ಮತ್ತು ಅವನು ಸಕಲ ವಸ್ತುಗಳ ಸರ್ವಜ್ಞಾನಿಯಾಗಿರುವನು.
ئەرەپچە تەپسىرلەر:
وَاِذْ قَالَ رَبُّكَ لِلْمَلٰٓىِٕكَةِ اِنِّیْ جَاعِلٌ فِی الْاَرْضِ خَلِیْفَةً ؕ— قَالُوْۤا اَتَجْعَلُ فِیْهَا مَنْ یُّفْسِدُ فِیْهَا وَیَسْفِكُ الدِّمَآءَ ۚ— وَنَحْنُ نُسَبِّحُ بِحَمْدِكَ وَنُقَدِّسُ لَكَ ؕ— قَالَ اِنِّیْۤ اَعْلَمُ مَا لَا تَعْلَمُوْنَ ۟
“ನಾನು ಭೂಮಿಯಲ್ಲಿ ಒಬ್ಬ ಪ್ರತಿನಿಧಿಯನ್ನು ನಿಶ್ಚಯಿಸುವವನಿದ್ದೇನೆ”. ಎಂದು ನಿಮ್ಮ ಪ್ರಭು (ಮಲಕ್) ರೊಡನೆ ಹೇಳಿದ ಸಂದರ್ಭವನ್ನು ಸ್ಮರಿಸಿರಿ. ಆಗ ಅವರು “ನೀನು ಭೂಮಿಯಲ್ಲಿ ಕ್ಷೋಭೆ ಹರಡುವವರನ್ನು, ರಕ್ತ ಹರಿಸುವವರನ್ನು ಸೃಷ್ಟಿಸುವೆಯಾ?” ಎಂದರು. ವಸ್ತುತಃ ನಾವು ನಿನ್ನ ಸ್ತುತಿ, ಕೀರ್ತನೆಯನ್ನು ಮಾಡುತ್ತೇವೆ ಮತ್ತು ನಿನ್ನ ಪಾವಿತ್ರತೆಯವನ್ನು ಕೊಂಡಾಡುತ್ತೇವೆ. ಅಲ್ಲಾಹನು ಹೇಳಿದನು “ನೀವು ಅರಿಯದೇ ಇರುವುದನ್ನು ನಾನು ಚೆನ್ನಾಗಿ ಬಲ್ಲೆನು”.
ئەرەپچە تەپسىرلەر:
وَعَلَّمَ اٰدَمَ الْاَسْمَآءَ كُلَّهَا ثُمَّ عَرَضَهُمْ عَلَی الْمَلٰٓىِٕكَةِ فَقَالَ اَنْۢبِـُٔوْنِیْ بِاَسْمَآءِ هٰۤؤُلَآءِ اِنْ كُنْتُمْ صٰدِقِیْنَ ۟
ಅಲ್ಲಾಹನು ಆದಮರಿಗೆ ಸಕಲ ವಸ್ತುಗಳ ನಾಮಗಳನ್ನು ಕಲಿಸಿದನು. ಆ ವಸ್ತುಗಳನ್ನು ಮಲಕ್‌ಗಳ(ದೇವದೂತರ)ಮುಂದೆ ಪ್ರದರ್ಶಿಸಿದನು ತರುವಾಯ ಹೇಳಿದನು; ನೀವು ಸತ್ಯವಾದಿಗಳಾಗಿದ್ದರೆ ಇವುಗಳ ನಾಮಗಳನ್ನು ನನಗೆ ತಿಳಿಸಿರಿ.
ئەرەپچە تەپسىرلەر:
قَالُوْا سُبْحٰنَكَ لَا عِلْمَ لَنَاۤ اِلَّا مَا عَلَّمْتَنَا ؕ— اِنَّكَ اَنْتَ الْعَلِیْمُ الْحَكِیْمُ ۟
ಅವರು ಹೇಳಿದರು ನೀನು ಪರಮ ಪಾವನನು! ನೀನು ನಮಗೆ ಕಲಿಸಿರುವುದರ ಹೊರತು ಇನ್ನಾವುದೇ ಜ್ಞಾನ ನಮಗಿಲ್ಲ. ಖಂಡಿತವಾಗಿಯೂ ನೀನು ಪರಿಪೂರ್ಣ ಜ್ಞಾನವುಳ್ಳವನು ಯುಕ್ತಿಪೂರ್ಣನು ಆಗಿರುವೆ.
ئەرەپچە تەپسىرلەر:
قَالَ یٰۤاٰدَمُ اَنْۢبِئْهُمْ بِاَسْمَآىِٕهِمْ ۚ— فَلَمَّاۤ اَنْۢبَاَهُمْ بِاَسْمَآىِٕهِمْ ۙ— قَالَ اَلَمْ اَقُلْ لَّكُمْ اِنِّیْۤ اَعْلَمُ غَیْبَ السَّمٰوٰتِ وَالْاَرْضِ ۙ— وَاَعْلَمُ مَا تُبْدُوْنَ وَمَا كُنْتُمْ تَكْتُمُوْنَ ۟
ಅಲ್ಲಾಹನು ಆದಮರಿಗೆ ಹೇಳಿದನು “ನೀವು ಇವರಿಗೆ ಅವುಗಳ ನಾಮಗಳನ್ನು ತಿಳಿಸಿರಿ” ಅವರು ದೂತರಿಗೆ ಅವುಗಳ ನಾಮಗಳನ್ನು ತಿಳಿಸಿದಾಗ ಅಲ್ಲಾಹನು ಹೇಳಿದನು “ನಾನು ಆಕಾಶಗಳ ಮತ್ತು ಭೂಮಿಯ ಅಗೋಚರ ಜ್ಞಾನವನ್ನು ಬಲ್ಲವನಾಗಿದ್ದೇನೆ ಹಾಗೂ ನೀವು ಬಹಿರಂಗಗೊಳಿಸುವುದನ್ನು ಮತ್ತು ರಹಸ್ಯವಾಗಿಡುವುದನ್ನು ಅರಿಯುವವನಾಗಿದ್ದೇನೆ ಎಂದು ನಿಮಗೆ ಮೊದಲೇ ಹೇಳಿರಲಿಲ್ಲವೆ?”
ئەرەپچە تەپسىرلەر:
وَاِذْ قُلْنَا لِلْمَلٰٓىِٕكَةِ اسْجُدُوْا لِاٰدَمَ فَسَجَدُوْۤا اِلَّاۤ اِبْلِیْسَ ؕ— اَبٰی وَاسْتَكْبَرَ وَكَانَ مِنَ الْكٰفِرِیْنَ ۟
ನಾವು ಮಲಕ್‌ಗಳಿಗೆ (ದೇವದೂತರಿಗೆ) ನೀವು ಆದಮರಿಗೆ ಸಾಷ್ಟಾಂಗವೆರಗಿರೆAದು ಹೇಳಿದ ಸಂಧರ್ಭ; ಆಗ ಇಬ್ಲೀಸನ ಹೊರತು ಎಲ್ಲರೂ ಸಾಷ್ಟಾಂಗವೆರಗಿದರು. ಅವನು (ಇಬ್ಲೀಸ್) ತಿರಸ್ಕರಿಸಿದನು ಹಾಗು ದರ್ಪ ತೋರಿದನು ಮತ್ತು ಇದರ ಪರಿಣಾಮವಾಗಿ ಅವನು ಸತ್ಯನಿಷೇಧಿಗಳಲ್ಲಿ ಸೇರಿಬಿಟ್ಟನು.
ئەرەپچە تەپسىرلەر:
وَقُلْنَا یٰۤاٰدَمُ اسْكُنْ اَنْتَ وَزَوْجُكَ الْجَنَّةَ وَكُلَا مِنْهَا رَغَدًا حَیْثُ شِئْتُمَا ۪— وَلَا تَقْرَبَا هٰذِهِ الشَّجَرَةَ فَتَكُوْنَا مِنَ الظّٰلِمِیْنَ ۟
ನಾವು ಹೇಳಿದೆವು ಓ ಆದಮ್! ನೀವು ಮತ್ತು ನಿಮ್ಮ ಪತ್ನಿಯು ಸ್ವರ್ಗದಲ್ಲಿ ವಾಸಿಸಿರಿ. ಮತ್ತು ನೀವಿಬ್ಬರು ಇಚ್ಛಿಸಿದ್ದಲ್ಲಿಂದ ಯಥೇಚ್ಛವಾಗಿ ತಿನ್ನಿರಿ, ಆದರೆ ಆ ವೃಕ್ಷದ ಸಮೀಪಕ್ಕೂ ಸುಳಿಯಬೇಡಿರಿ. ಅನ್ಯಥ ನೀವು ಅಕ್ರಮಿ (ಪಾಪಿ)ಗಳಲ್ಲಾಗುವಿರಿ.
ئەرەپچە تەپسىرلەر:
فَاَزَلَّهُمَا الشَّیْطٰنُ عَنْهَا فَاَخْرَجَهُمَا مِمَّا كَانَا فِیْهِ ۪— وَقُلْنَا اهْبِطُوْا بَعْضُكُمْ لِبَعْضٍ عَدُوٌّ ۚ— وَلَكُمْ فِی الْاَرْضِ مُسْتَقَرٌّ وَّمَتَاعٌ اِلٰی حِیْنٍ ۟
ಆದರೆ ಶೈತಾನನು ಅವರನ್ನು ಮರುಳಾಗಿಸಿ(ಅಲ್ಲಿದ್ದ ಸುಖ ಭೋಗಗಳಿಂದ) ಹೊರ ಹಾಕಿಸಿದನು. ನಾವು ಹೇಳಿದೆವು; ನೀವು (ಆದಮ್-ಹವ್ವಾ, ಶೈತಾನ್) ಇಲ್ಲಿಂದ ಇಳಿದು ಹೋಗಿರಿ, ನೀವು ಪರಸ್ಪರ ಶತ್ರುಗಳಾಗಿರುವಿರಿ ಮತ್ತು ನಿಮಗೆ ಭೂಮಿಯಲ್ಲಿ ಒಂದು ನಿಶ್ಚಿತ ಕಾಲದವರೆಗೆ ನೆಲೆಯು ಮತ್ತು ಸುಖ ಭೋಗವು ಇರುವುದು.
ئەرەپچە تەپسىرلەر:
فَتَلَقّٰۤی اٰدَمُ مِنْ رَّبِّهٖ كَلِمٰتٍ فَتَابَ عَلَیْهِ ؕ— اِنَّهٗ هُوَ التَّوَّابُ الرَّحِیْمُ ۟
ಆದಮ್ ತಮ್ಮ ಪ್ರಭುವಿನಿಂದ ಕೆಲವು (ಪಶ್ಚಾತ್ತಾಪದ) ವಾಕ್ಯಗಳನ್ನು ಪಡೆದುಕೊಂಡರು. ಅಲ್ಲಾಹನು ಅವುಗಳ ಮೂಲಕ ಅವರ ಪಶ್ಚಾತ್ತಾಪ ಸ್ವೀಕರಿಸಿದನು. ನಿಸ್ಸಂದೇಹವಾಗಿಯೂ ಅವನು ಪಶ್ಚಾತ್ತಾಪ ಸ್ವೀಕರಿಸುವವÀನು ಕರುಣಾನಿಧಿಯು ಆಗಿದ್ದಾನೆ.
ئەرەپچە تەپسىرلەر:
قُلْنَا اهْبِطُوْا مِنْهَا جَمِیْعًا ۚ— فَاِمَّا یَاْتِیَنَّكُمْ مِّنِّیْ هُدًی فَمَنْ تَبِعَ هُدَایَ فَلَا خَوْفٌ عَلَیْهِمْ وَلَا هُمْ یَحْزَنُوْنَ ۟
ನಾವು ಹೇಳಿದೆವು; ನೀವೆಲ್ಲರು ಇಲ್ಲಿಂದ ಇಳಿದು ಹೋಗಿರಿ. ನನ್ನ ಕಡೆಯಿಂದ ನಿಮಗೆ ಮಾರ್ಗದರ್ಶನ ಬಂದಾಗ ಅದನ್ನು ಯಾರು ಅನುಸರಿಸುತ್ತಾರೋ, ಅವರಿಗೆ ಯಾವುದೇ ಭಯ ಮತ್ತು ವ್ಯಥೆ ಇರಲಾರದು.
ئەرەپچە تەپسىرلەر:
وَالَّذِیْنَ كَفَرُوْا وَكَذَّبُوْا بِاٰیٰتِنَاۤ اُولٰٓىِٕكَ اَصْحٰبُ النَّارِ ۚ— هُمْ فِیْهَا خٰلِدُوْنَ ۟۠
ಮತ್ತು ಯಾರು ಸತ್ಯ ನಿಷೇಧಿಸಿ ನಮ್ಮ “ಆಯತ್ (ದುಷ್ಟಾಂತಗಳನ್ನು) ಗಳನ್ನು ಸುಳ್ಳಾಗಿಸಿದರೋ, ಅವರು ನರಕವಾಸಿಗಳು. ಮತ್ತು ಅವರು ಅದರಲ್ಲಿ ಶಾಶ್ವತವಾಗಿರುವರು
ئەرەپچە تەپسىرلەر:
یٰبَنِیْۤ اِسْرَآءِیْلَ اذْكُرُوْا نِعْمَتِیَ الَّتِیْۤ اَنْعَمْتُ عَلَیْكُمْ وَاَوْفُوْا بِعَهْدِیْۤ اُوْفِ بِعَهْدِكُمْ ۚ— وَاِیَّایَ فَارْهَبُوْنِ ۟
ಓ ಇಸ್ರಾಯೀಲ್ ಸಂತತಿಗಳೇ, ನಾನು (ಅಲ್ಲಾಹ್) ನಿಮ್ಮ ಮೇಲೆ ಅನುಗ್ರಹಿಸಿರುವಂತಹ ನನ್ನ ಅನುಗ್ರಹವನ್ನು ನೀವು ಸ್ಮರಿಸಿರಿ ಹಾಗೂ ನನ್ನೊಂದಿಗೆ ಮಾಡಿರುವ ಒಪ್ಪಂದವನ್ನು ಪೂರೈಸಿರಿ. ನಿಮ್ಮ ಜೊತೆ ಮಾಡಿರುವ ಒಪ್ಪಂದವನ್ನು ನಾನು ಪೂರೈಸುವೆನು ಮತ್ತು ನನ್ನನ್ನು ಮಾತ್ರ ನೀವು ಭಯಪಡಿರಿ.
ئەرەپچە تەپسىرلەر:
وَاٰمِنُوْا بِمَاۤ اَنْزَلْتُ مُصَدِّقًا لِّمَا مَعَكُمْ وَلَا تَكُوْنُوْۤا اَوَّلَ كَافِرٍ بِهٖ ۪— وَلَا تَشْتَرُوْا بِاٰیٰتِیْ ثَمَنًا قَلِیْلًا ؗ— وَّاِیَّایَ فَاتَّقُوْنِ ۟
ನಾನು ನಿಮ್ಮ ಬಳಿ ಇರುವ ಗ್ರಂಥಗಳನ್ನು ದೃಢೀಕರಿಸುವಂತದ್ದಾಗಿ (ಮಹಮ್ಮದ್(ಸ) ಪೈಗಂಬರರಿಗೆ) ಅವತೀರ್ಣಗೊಳಿಸಿರುವ ಈ ಗ್ರಂಥದಲ್ಲಿ (ಕುರ್‌ಆನಿನಲ್ಲಿ) ನೀವು ವಿಶ್ವಾಸವಿಡಿರಿ. ನೀವು ಅದನ್ನು ಧಿಕ್ಕರಿಸುವವರಲ್ಲಿ ಮೊದಲಿಗರಾಗಬೇಡಿರಿ. ಮತ್ತು ನನ್ನ ಸೂಕ್ತಿಗಳನ್ನು ತುಚ್ಛ ಬೆಲೆಗೆ ಮಾರಬೇಡಿರಿ ಮತ್ತು ನನ್ನನ್ನು (ಅಲ್ಲಾಹನನ್ನು) ಮಾತ್ರ ಭಯಪಡಿರಿ.
ئەرەپچە تەپسىرلەر:
وَلَا تَلْبِسُوا الْحَقَّ بِالْبَاطِلِ وَتَكْتُمُوا الْحَقَّ وَاَنْتُمْ تَعْلَمُوْنَ ۟
ನೀವು ಸತ್ಯವನ್ನು ಮಿಥ್ಯದೊಂದಿಗೆ ಬೆರಸದಿರಿ ಮತ್ತು ಅರಿತವರಾಗಿದ್ದೂ ಸತ್ಯವನ್ನು (ವಾಸ್ತವಿಕತೆಯನ್ನು) ಮರೆಮಾಚದಿರಿ.
ئەرەپچە تەپسىرلەر:
وَاَقِیْمُوا الصَّلٰوةَ وَاٰتُوا الزَّكٰوةَ وَارْكَعُوْا مَعَ الرّٰكِعِیْنَ ۟
ನೀವು ನಮಾಜನ್ನು ಸಂಸ್ಥಾಪಿಸಿರಿ ಹಾಗೂ ಝಕಾತ್ (ಕಡ್ಡಾಯ ಧನ) ಪಾವತಿಸಿರಿ ಮತ್ತು ಬಾಗುವವರೊಂದಿಗೆ ನೀವೂ ಬಾಗಿರಿ.
ئەرەپچە تەپسىرلەر:
اَتَاْمُرُوْنَ النَّاسَ بِالْبِرِّ وَتَنْسَوْنَ اَنْفُسَكُمْ وَاَنْتُمْ تَتْلُوْنَ الْكِتٰبَ ؕ— اَفَلَا تَعْقِلُوْنَ ۟
ನೀವು ಜನರಿಗೆ ಒಳಿತನ್ನು ಆದೇಶಿಸುತ್ತಾ ಸ್ವತಃ ನಿಮ್ಮನ್ನೇ ಮರೆತು ಬಿಡುತ್ತೀರಾ? ನೀವು ಗ್ರಂಥವನ್ನು ಪಠಿಸುವವರಾಗಿದ್ದೂ ಯೋಚಿಸುವುದಿಲ್ಲವೇ?.
ئەرەپچە تەپسىرلەر:
وَاسْتَعِیْنُوْا بِالصَّبْرِ وَالصَّلٰوةِ ؕ— وَاِنَّهَا لَكَبِیْرَةٌ اِلَّا عَلَی الْخٰشِعِیْنَ ۟ۙ
ಸಹನೆ ಮತ್ತು ನಮಾಜ್‌ನ ಮೂಲಕ (ಅಲ್ಲಾಹ ನೊಂದಿಗೆ) ಸಹಾಯ ಯಾಚಿಸಿರಿ. ಇದು ಭಯಭಕ್ತಿ ಹೊಂದಿದವರ ಹೊರತು ಇತರರಿಗೆ ಪ್ರಯಾಸಕರ ವಾಗಿರುತ್ತದೆ.
ئەرەپچە تەپسىرلەر:
الَّذِیْنَ یَظُنُّوْنَ اَنَّهُمْ مُّلٰقُوْا رَبِّهِمْ وَاَنَّهُمْ اِلَیْهِ رٰجِعُوْنَ ۟۠
ಅವರು ತಮ್ಮ ಪ್ರಭುವನ್ನು ಭೇಟಿಯಾಗಲಿರುವೆವೆಂದೂ ಮತ್ತು ಖಂಡಿತವಾಗಿ ಅವನೆಡೆಗೆ ಮರಳಿ ಹೋಗುವವರೆಂದೂ ಅರಿತವರಾಗಿದ್ದಾರೆ.
ئەرەپچە تەپسىرلەر:
یٰبَنِیْۤ اِسْرَآءِیْلَ اذْكُرُوْا نِعْمَتِیَ الَّتِیْۤ اَنْعَمْتُ عَلَیْكُمْ وَاَنِّیْ فَضَّلْتُكُمْ عَلَی الْعٰلَمِیْنَ ۟
ಓ ಇಸ್ರಾಯೀಲ್ ಸಂತತಿಗಳೇ, ನಾನು (ಅಲ್ಲಾಹ್) ನಿಮ್ಮ ಮೇಲೆ ಅನುಗ್ರಹಿಸಿದ್ದ ನನ್ನ ಅನುಗ್ರಹವನ್ನು ಮತ್ತು ನಾನು ನಿಮ್ಮನ್ನು ಸರ್ವಲೋಕದವರ ಮೇಲೆ ಶ್ರೇಷ್ಠತೆ ದಯಪಾಲಿಸಿದುದನ್ನು ಸ್ಮರಿಸಿರಿ.
ئەرەپچە تەپسىرلەر:
وَاتَّقُوْا یَوْمًا لَّا تَجْزِیْ نَفْسٌ عَنْ نَّفْسٍ شَیْـًٔا وَّلَا یُقْبَلُ مِنْهَا شَفَاعَةٌ وَّلَا یُؤْخَذُ مِنْهَا عَدْلٌ وَّلَا هُمْ یُنْصَرُوْنَ ۟
ಮತ್ತು ಯಾವೊಬ್ಬ ವ್ಯಕ್ತಿಯು ಇನ್ನಾವುದೇ ವ್ಯಕ್ತಿಗೆ ಯಾವ ಪ್ರಯೋಜನಕ್ಕೂ ಬಾರದ, ಯಾವೊಬ್ಬನಿಂದ ಶಿಫಾರಸ್ಸು ಸ್ವೀರಿಸಲಾಗದ, ಯಾವೊಬ್ಬನಿಂದ (ಮುಕ್ತಿ ಪಡೆಯಲು) ಪರಿಹಾರಧನವನ್ನು ಪಡೆಯಲಾಗದ ಮತ್ತು ಅವರಿಗೆ (ಅಪರಾಧಿಗಳಿಗೆ) ಸಹಾಯ ನೀಡಲಾಗದ ಆ ಒಂದು ದಿನವನ್ನು ಭಯಪಡಿರಿ.
ئەرەپچە تەپسىرلەر:
وَاِذْ نَجَّیْنٰكُمْ مِّنْ اٰلِ فِرْعَوْنَ یَسُوْمُوْنَكُمْ سُوْٓءَ الْعَذَابِ یُذَبِّحُوْنَ اَبْنَآءَكُمْ وَیَسْتَحْیُوْنَ نِسَآءَكُمْ ؕ— وَفِیْ ذٰلِكُمْ بَلَآءٌ مِّنْ رَّبِّكُمْ عَظِیْمٌ ۟
ಮತ್ತು ನಾವು ನಿಮ್ಮನ್ನು ಫಿರ್‌ಔನಿನ ಜನರಿಂದ ಕಾಪಾಡಿದ ಸಂಧರ್ಭವನ್ನು ಸ್ಮರಿಸಿರಿ ಅವರು ನಿಮಗೆ ಘೋರ ಶಿಕ್ಷೆಕೊಟ್ಟು ಪೀಡಿಸುತ್ತಿದ್ದರು ಹಾಗೂ ನಿಮ್ಮ ಗಂಡು ಸಂತತಿಗಳನ್ನು ವಧಿಸುತ್ತಿದ್ದರು ಮತ್ತು ಹೆಣ್ಣು ಸಂತತಿಗಳನ್ನು ಜೀವಂತವಾಗಿ ಬಿಡುತ್ತಿದ್ದರು. ನಿಮಗೆ ಆ ಪರಿಸ್ಥಿತಿಯಲ್ಲಿ ನಿಮ್ಮ ಪ್ರಭುವಿನ ಕಡೆಯಿಂದ ಮಹಾ ಪರೀಕ್ಷೆಯಿತ್ತು.
ئەرەپچە تەپسىرلەر:
وَاِذْ فَرَقْنَا بِكُمُ الْبَحْرَ فَاَنْجَیْنٰكُمْ وَاَغْرَقْنَاۤ اٰلَ فِرْعَوْنَ وَاَنْتُمْ تَنْظُرُوْنَ ۟
ಮತ್ತು ನಾವು ನಿಮಗಾಗಿ ಕಡಲನ್ನು ಇಬ್ಭಾಗಿಸಿ ದಾರಿ ಮಾಡಿದ ಸಂಧರ್ಭವನ್ನು ಸ್ಮರಿಸಿರಿ. ನಾವು ನಿಮ್ಮನ್ನು ರಕ್ಷಿಸಿದೆವು ಹಾಗೂ ನಿಮ್ಮ ಕಣ್ಣಮುಂದೆಯೇ ಫಿರ್‌ಔನನ ಜನರನ್ನು ಮುಳುಗಿಸಿಬಿಟ್ಟೆವು.
ئەرەپچە تەپسىرلەر:
وَاِذْ وٰعَدْنَا مُوْسٰۤی اَرْبَعِیْنَ لَیْلَةً ثُمَّ اتَّخَذْتُمُ الْعِجْلَ مِنْ بَعْدِهٖ وَاَنْتُمْ ظٰلِمُوْنَ ۟
ಮತ್ತು ನಾವು ಮೂಸಾ(ಅ)ರವರಿಗೆ ನಲ್ವತ್ತು ರಾತ್ರಿಗಳ ವಾಗ್ದಾನವನ್ನು ಮಾಡಿದ ಸಂಧರ್ಭವನ್ನು ಸ್ಮರಿಸಿರಿ. ತರುವಾಯ ನೀವು ಕರುವನ್ನು (ದೇವರನ್ನಾಗಿ) ಆರಾಧಿಸತೊಡಗಿದಿರಿ ಮತ್ತು ತಮ್ಮ ಪಾಲಿಗೆ ಅಕ್ರಮಿಗಳಾಗಿಬಿಟ್ಟಿರಿ.
ئەرەپچە تەپسىرلەر:
ثُمَّ عَفَوْنَا عَنْكُمْ مِّنْ بَعْدِ ذٰلِكَ لَعَلَّكُمْ تَشْكُرُوْنَ ۟
ಆದರೆ ಇಷ್ಟಾದ ಬಳಿಕವೂ ನೀವು ಕೃತಜ್ಞತೆ ತೋರಬಹುದೆಂದು ನಾವು ನಿಮ್ಮನ್ನು ಕ್ಷಮಿಸಿ ಬಿಟ್ಟೆವು
ئەرەپچە تەپسىرلەر:
وَاِذْ اٰتَیْنَا مُوْسَی الْكِتٰبَ وَالْفُرْقَانَ لَعَلَّكُمْ تَهْتَدُوْنَ ۟
ಮತ್ತು ನೀವು ಸನ್ಮಾರ್ಗ ಪಡೆಯಲ್ಲಿಕ್ಕಾಗಿ ನಾವು ಮೂಸರಿಗೆ ಗ್ರಂಥÀವನ್ನೂ (ತೌರಾತ್) ಸತ್ಯ ಅಸತ್ಯತೆನ್ನು ಬೇರ್ಪಡಿಸುವ ಮಾನದಂಡವನ್ನು ದಯಪಾಲಿಸದೆವು.
ئەرەپچە تەپسىرلەر:
وَاِذْ قَالَ مُوْسٰی لِقَوْمِهٖ یٰقَوْمِ اِنَّكُمْ ظَلَمْتُمْ اَنْفُسَكُمْ بِاتِّخَاذِكُمُ الْعِجْلَ فَتُوْبُوْۤا اِلٰی بَارِىِٕكُمْ فَاقْتُلُوْۤا اَنْفُسَكُمْ ؕ— ذٰلِكُمْ خَیْرٌ لَّكُمْ عِنْدَ بَارِىِٕكُمْ ؕ— فَتَابَ عَلَیْكُمْ ؕ— اِنَّهٗ هُوَ التَّوَّابُ الرَّحِیْمُ ۟
ಮೂಸ(ಅ) ತನ್ನ ಜನರಿಗೆ ಹೇಳಿದ (ಸಂಧರ್ಭವನ್ನು ಸ್ಮರಿಸಿರಿ). ಓ ನನ್ನ ಜನರೇ, ಕರುವನ್ನು ಆರಾಧ್ಯನನ್ನಾಗಿ ಮಾಡಿಕೊಳ್ಳುವ ಮೂಲಕ ನೀವು ಸ್ವತಃ ನಿಮ್ಮ ಮೇಲೆ ಅನ್ಯಾಯ ಮಾಡಿಕೊಂಡಿರುವಿರಿ. ಈಗ ನೀವು ನಿಮ್ಮನ್ನು ಸೃಷ್ಟಿಸಿದವನೆಡೆಗೆ ಪಶ್ಚಾತ್ತಾಪ ಪಟ್ಟು ಮರಳಿರಿ. ಮತ್ತು ನೀವು ಸ್ವತಃ ನಿಮ್ಮನ್ನೇ ವಧಿಸಿರಿ. ಇದು ನಿಮ್ಮ ಪಾಲಿಗೆ ಸೃಷ್ಟಿಸಿದವನ ಬಳಿ ಅತ್ಯುತ್ತಮವಾಗಿದೆ. ಆಗ ಅವನು ನಿಮ್ಮ ಪಶ್ಚಾತ್ತಾಪವನ್ನು ಸ್ವೀಕರಿಸಿದನು. ನಿಸ್ಸಂಶಯವಾಗಿಯು ಅವನು ಪಶ್ಚಾತ್ತಾಪ ಸ್ವೀಕರಿಸುವವನು, ಕರುಣಾನಿಧಿಯು ಆಗಿರುವನು.
ئەرەپچە تەپسىرلەر:
وَاِذْ قُلْتُمْ یٰمُوْسٰی لَنْ نُّؤْمِنَ لَكَ حَتّٰی نَرَی اللّٰهَ جَهْرَةً فَاَخَذَتْكُمُ الصّٰعِقَةُ وَاَنْتُمْ تَنْظُرُوْنَ ۟
ಓ ಮೂಸಾ(ಅ) “ನಾವು ಅಲ್ಲಾಹನನ್ನು ಪ್ರತ್ಯಕ್ಷವಾಗಿ ಕಾಣುವವರೆಗೂ ವಿಶ್ವಾಸವಿಡಲಾರೆವು ಎಂದು ನೀವು ಮೂಸಾ(ಅ)ರವರಿಗೆ ಹೇಳಿದ ಸಂದರ್ಭವನ್ನು ಸ್ಮರಿಸಿರಿ. ಆಗ ನೀವು ನೋಡುತ್ತಿದ್ದಂತೆಯೇ ಸಿಡಿಲು ನಿಮ್ಮ ಮೇಲೆ ಎರೆಗಿಬಿಟ್ಟಿತ್ತು(ಅದು ನಿಮ್ಮ ಮರಣಕ್ಕೆ ಕಾರಣವಾಯಿತು).
ئەرەپچە تەپسىرلەر:
ثُمَّ بَعَثْنٰكُمْ مِّنْ بَعْدِ مَوْتِكُمْ لَعَلَّكُمْ تَشْكُرُوْنَ ۟
ಆದರೆ ನೀವು ಕೃತಜ್ಞತೆ ತೋರಬಹುದೆಂದು, ನಿಮ್ಮ ಮರಣದ ಬಳಿಕ ನಾವು ನಿಮ್ಮನ್ನು ಜೀವಂತಗೊಳಿಸಿ ಎಬ್ಬಿಸಿದೆವು.
ئەرەپچە تەپسىرلەر:
وَظَلَّلْنَا عَلَیْكُمُ الْغَمَامَ وَاَنْزَلْنَا عَلَیْكُمُ الْمَنَّ وَالسَّلْوٰی ؕ— كُلُوْا مِنْ طَیِّبٰتِ مَا رَزَقْنٰكُمْ ؕ— وَمَا ظَلَمُوْنَا وَلٰكِنْ كَانُوْۤا اَنْفُسَهُمْ یَظْلِمُوْنَ ۟
ನಾವು ನಿಮ್ಮ ಮೇಲೆ ಮೋಡವನ್ನು ನೆರಳನ್ನಾಗಿ ಮಾಡಿದೆವು. ಮತ್ತು ನಿಮ್ಮ ಮೇಲೆ ಮನ್ನಾ(೧) ಮತ್ತು ಲಾವಕ್ಕಿಯನ್ನು ಇಳಿಸಿಕೊಟ್ಟೆವು. ಮತ್ತು ನಾವು ನಿಮಗೆ ಆಹಾರವಾಗಿ ನೀಡಿರುವಂತಹ ಶುದ್ಧವಾದವುಗಳನ್ನು ತಿನ್ನಿರಿ ಎಂದೆವು. ಅವರು (ಕೃತಘ್ನರಾಗಿ) ನಮ್ಮ ಮೇಲೆ ಅಕ್ರಮವೆಸಗಲಿಲ್ಲ. ವಸ್ತುತಃ ಅವರು ಸ್ವತಃ ತಮ್ಮ ಮೇಲೆಯೇ ಅಕ್ರಮವೆಸಗುತ್ತಿದ್ದರು.
ئەرەپچە تەپسىرلەر:
وَاِذْ قُلْنَا ادْخُلُوْا هٰذِهِ الْقَرْیَةَ فَكُلُوْا مِنْهَا حَیْثُ شِئْتُمْ رَغَدًا وَّادْخُلُوا الْبَابَ سُجَّدًا وَّقُوْلُوْا حِطَّةٌ نَّغْفِرْ لَكُمْ خَطٰیٰكُمْ ؕ— وَسَنَزِیْدُ الْمُحْسِنِیْنَ ۟
ನೀವು ಈ ಪಟ್ಟಣವನ್ನು (ಜರುಸಲೇಮ್) ಪ್ರವೇಶಿಸಿರಿ. ಮತ್ತು ನೀವು ಇಚ್ಛಿಸುವಲ್ಲಿಂದ ಯತೇಚ್ಛವಾಗಿ ತಿನ್ನಿರಿ, ಹಾಗೂ ತಲೆಬಾಗುತ್ತಾ ದ್ವಾರವನ್ನು ಪ್ರವೇಶಿಸಿರಿ ಮತ್ತು ನಾಲಗೆಯಿಂದ “ಹಿತ್ತತುನ್”(೨) ಎನ್ನುತ್ತಾ. ನಾವು ನಿಮ್ಮ ಪಾಪಗಳನ್ನು ಕ್ಷಮಿಸುವೆವು ಮತ್ತು ಸಜ್ಜನರಿಗೆ ಇನ್ನಷ್ಟು ಹೆಚ್ಚಿಸಿಕೊಡುವೆವು ಎಂದು ನಾವು ನಿಮ್ಮೊಡನೆ ಹೇಳಿದ ಸಂದರ್ಭವನ್ನು ಸ್ಮರಿಸಿರಿ.
ئەرەپچە تەپسىرلەر:
فَبَدَّلَ الَّذِیْنَ ظَلَمُوْا قَوْلًا غَیْرَ الَّذِیْ قِیْلَ لَهُمْ فَاَنْزَلْنَا عَلَی الَّذِیْنَ ظَلَمُوْا رِجْزًا مِّنَ السَّمَآءِ بِمَا كَانُوْا یَفْسُقُوْنَ ۟۠
ಬಳಿಕ ಆ ಅಕ್ರಮಿಗಳು ತಮಗೆ ಹೇಳಲಾದ ಮಾತನ್ನು ಬದಲಿಸಿ ಹೇಳಿದರು. ನಾವು ಆ ಅಕ್ರಮಿಗಳ ಮೇಲೆ ಅವರು ಆಜ್ಞೆಯ ಉಲ್ಲಂಘನೆ ಮಾಡುತ್ತಿದ್ದುದ್ದರ ನಿಮಿತ್ತ ಆಕಾಶದಿಂದ ಯಾತನೆಯನ್ನೆರಗಿಸಿದೆವು.
ئەرەپچە تەپسىرلەر:
وَاِذِ اسْتَسْقٰی مُوْسٰی لِقَوْمِهٖ فَقُلْنَا اضْرِبْ بِّعَصَاكَ الْحَجَرَ ؕ— فَانْفَجَرَتْ مِنْهُ اثْنَتَا عَشْرَةَ عَیْنًا ؕ— قَدْ عَلِمَ كُلُّ اُنَاسٍ مَّشْرَبَهُمْ ؕ— كُلُوْا وَاشْرَبُوْا مِنْ رِّزْقِ اللّٰهِ وَلَا تَعْثَوْا فِی الْاَرْضِ مُفْسِدِیْنَ ۟
ಮೂಸಾ(ಅ) ತಮ್ಮ ಜನರಿಗೋಸ್ಕರ ನೀರನ್ನು ಬೇಡಿದ ಸಂದರ್ಭವನ್ನು ಸ್ಮರಿಸಿರಿ. ನಾವು ಹೇಳಿದೆವು; ನೀವು ನಿಮ್ಮ ಕೋಲಿನಿಂದ ಆ ಬಂಡೆಯ ಮೇಲೆ ಹೊಡೆಯಿರಿ. ಆಗ ಅದರಿಂದ ಹನ್ನೆರಡು ಚಿಲುಮೆಗಳು ಚಿಮ್ಮಿದವು ಮತ್ತು ಪ್ರತಿಯೊಂದು ಪಂಗಡವು ತಮ್ಮ ತಮ್ಮ ನೀರು ಪಡೆಯುವ ಘಟಕವನ್ನು ಅರಿತುಕೊಂಡಿತು. ನೀವು ಅಲ್ಲಾಹನು ನೀಡಿರುವ ಆಹಾರದಿಂದ ತಿನ್ನಿರಿ ಹಾಗೂ ಕುಡಿಯಿರಿ. ಮತ್ತು ನೀವು ಭೂಮಿಯಲ್ಲಿ ಕ್ಷೋಭೆಯನ್ನು ಹರಡದಿರಿ.
ئەرەپچە تەپسىرلەر:
وَاِذْ قُلْتُمْ یٰمُوْسٰی لَنْ نَّصْبِرَ عَلٰی طَعَامٍ وَّاحِدٍ فَادْعُ لَنَا رَبَّكَ یُخْرِجْ لَنَا مِمَّا تُنْۢبِتُ الْاَرْضُ مِنْ بَقْلِهَا وَقِثَّآىِٕهَا وَفُوْمِهَا وَعَدَسِهَا وَبَصَلِهَا ؕ— قَالَ اَتَسْتَبْدِلُوْنَ الَّذِیْ هُوَ اَدْنٰی بِالَّذِیْ هُوَ خَیْرٌ ؕ— اِهْبِطُوْا مِصْرًا فَاِنَّ لَكُمْ مَّا سَاَلْتُمْ ؕ— وَضُرِبَتْ عَلَیْهِمُ الذِّلَّةُ وَالْمَسْكَنَةُ وَبَآءُوْ بِغَضَبٍ مِّنَ اللّٰهِ ؕ— ذٰلِكَ بِاَنَّهُمْ كَانُوْا یَكْفُرُوْنَ بِاٰیٰتِ اللّٰهِ وَیَقْتُلُوْنَ النَّبِیّٖنَ بِغَیْرِ الْحَقِّ ؕ— ذٰلِكَ بِمَا عَصَوْا وَّكَانُوْا یَعْتَدُوْنَ ۟۠
ಓ ಮೂಸಾ(ಅ) ನಾವು ಒಂದೇ ಬಗೆಯ ಆಹಾರವನ್ನು ಸಹಿಸಲಾರೆವು ಆದ್ದರಿಂದ ಭೂಮಿಯ ಉತ್ಪಾದನೆಗಳಾದ ಸೊಪ್ಪು, ಸೌತೆ, ಗೋಧಿ, ಚನ್ನಂಗಿ ಬೇಳೆ, ಈರುಳ್ಳಿ ಇತ್ಯಾದಿಗಳನ್ನು ನಮಗೆ ಉತ್ಪಾದಿಸಿ ಕೊಡಲು ತಾವು ತಮ್ಮ ಪ್ರಭುವಿನೊಂದಿಗೆ ಪ್ರಾರ್ಥಿಸಿರಿ ಎಂದು ಹೇಳಿದ ಸಂದರ್ಭವನ್ನು ಸ್ಮರಿಸಿರಿ. ಆಗ ಮೂಸಾ(ಅ) ಹೇಳಿದರು ಉತ್ತಮವಾದುದರ ಬದಲಿಗೆ ನಿಕೃಷ್ಟವಾದುದ್ದನ್ನು ಬೇಡುವಿರಾ? ಸರಿ ಹಾಗಾದರೆ ನೀವು ಯಾವುದೇ ಪಟ್ಟಣದಲ್ಲಿ ಹೋಗಿ ವಾಸಿಸಿರಿ. ಅಲ್ಲಿ ನಿಮಗೆ ನೀವು ಬೇಡಿದ ಎಲ್ಲವು ಸಿಗುವುದು. ಮತ್ತು (ಇಂತಹ ಹಟಮಾರಿತನದಿಂದಾಗಿ) ಅವರ ಮೇಲೆ ನಿಂದ್ಯತೆಯನ್ನು, ದಾರಿದ್ರö್ಯವನ್ನು ಹೇರಲಾಯಿತು ಮತ್ತು ಅವರು ಅಲ್ಲಾಹನ ಕ್ರೋಧವನ್ನು ಹೊತ್ತುಕೊಂಡು ಮರಳಿದರು. ಏಕೆಂದರೆ ಅವರು ಅಲ್ಲಾಹನ ಸೂಕ್ತಿಗಳನ್ನು ನಿಷೇಧಿಸುತ್ತಿದ್ದರು, ಮತ್ತು ಅನ್ಯಾಯವಾಗಿ ಪೈಗಂಬರರನ್ನು ವಧಿಸುತಿದ್ದರು. ಇದು ಅವರು ಧಿಕ್ಕಾರ ತೋರಿದುದರ ಹಾಗೂ ಮಿತಿಮೀರಿ ಹೋದುದರ ನಿಮಿತ್ತವಾಗಿತ್ತು.
ئەرەپچە تەپسىرلەر:
اِنَّ الَّذِیْنَ اٰمَنُوْا وَالَّذِیْنَ هَادُوْا وَالنَّصٰرٰی وَالصّٰبِـِٕیْنَ مَنْ اٰمَنَ بِاللّٰهِ وَالْیَوْمِ الْاٰخِرِ وَعَمِلَ صَالِحًا فَلَهُمْ اَجْرُهُمْ عِنْدَ رَبِّهِمْ ۪ۚ— وَلَا خَوْفٌ عَلَیْهِمْ وَلَا هُمْ یَحْزَنُوْنَ ۟
ಯಾರು (ಬಾಹ್ಯವಾಗಿ) ವಿಶ್ವಾಸವಿಟ್ಟಿರುವರೋ ಯಹೂದರು, ಕ್ರೆöÊಸ್ತರು, ಸಾಬಿಯರು ಯಾರೇ ಆಗಿರಲಿ (ಅವರು ವಾಸ್ತವದಲ್ಲಿ) ಅಲ್ಲಾಹನಲ್ಲೂ ಅಂತ್ಯ ದಿನದಲ್ಲೂ ವಿಶ್ವಾಸವಿಟ್ಟು ಸತ್ಕರ್ಮವನ್ನು ಕೈಗೊಂಡರೆ ನಿಶ್ಚಯವಾಗಿಯೂ ಅವರಿಗೆ ಅವರ ಪ್ರತಿಫಲವು ಅವರ ಪ್ರಭುವಿನ ಬಳಿ ಇದೆ. ಮತ್ತು ಅವರ ಮೇಲೆ ಭಯವಾಗಲಿ ಮತ್ತು ಅವರಿಗೆ ವ್ಯಥೆಯಾಗಲಿ ಬಾದಿಸದು.
ئەرەپچە تەپسىرلەر:
وَاِذْ اَخَذْنَا مِیْثَاقَكُمْ وَرَفَعْنَا فَوْقَكُمُ الطُّوْرَ ؕ— خُذُوْا مَاۤ اٰتَیْنٰكُمْ بِقُوَّةٍ وَّاذْكُرُوْا مَا فِیْهِ لَعَلَّكُمْ تَتَّقُوْنَ ۟
ನಾವು ನಿಮ್ಮ ಮೇಲೆ ತೂರ್ ಪರ್ವತವನ್ನು ಎತ್ತಿ ಹಿಡಿದು ನಿಮ್ಮಿಂದ (ಯಹೂದರಿಂದ) ಸಧೃಢ ಕರಾರನ್ನು ಪಡೆದುಕೊಂಡ ಸಂಧರ್ಭವನ್ನು ಸ್ಮರಿಸಿರಿ. ಆಗ ನಾವು ಹೇಳಿದೆವು ನಿಮಗೆ ದಯಪಾಲಿಸಿದ (ತೌರಾತ್ ಗ್ರಂಥವನ್ನು) ಸಧೃಢತೆಯಿಂದ ಹಿಡಿದುಕೊಳ್ಳಿರಿ. ಅದರಲ್ಲಿರುವ ವಿಷಯಗಳನ್ನು ಸ್ಮರಿಸಿರಿ. ನೀವು ರಕ್ಷಣೆ ಹೊಂದಬಹುದು.
ئەرەپچە تەپسىرلەر:
ثُمَّ تَوَلَّیْتُمْ مِّنْ بَعْدِ ذٰلِكَ ۚ— فَلَوْلَا فَضْلُ اللّٰهِ عَلَیْكُمْ وَرَحْمَتُهٗ لَكُنْتُمْ مِّنَ الْخٰسِرِیْنَ ۟
ಆದರೆ ನೀವು ಅದರ ಬಳಿಕವು ವಿಮುಖರಾಗಿಬಿಟ್ಟಿರಿ, ನಂತರ ಅಲ್ಲಾಹನ ಅನುಗ್ರಹವು ಅವನ ಕಾರುಣ್ಯವು ನಿಮ್ಮ ಮೇಲೆ ಇಲ್ಲದಿರುತ್ತಿದ್ದರೆ ನೀವು ನಷ್ಟ ಹೊಂದಿದವರಲ್ಲಿ ಆಗಿರುತ್ತಿದ್ದಿರಿ.
ئەرەپچە تەپسىرلەر:
وَلَقَدْ عَلِمْتُمُ الَّذِیْنَ اعْتَدَوْا مِنْكُمْ فِی السَّبْتِ فَقُلْنَا لَهُمْ كُوْنُوْا قِرَدَةً خٰسِـِٕیْنَ ۟ۚ
ನಿಸ್ಸಂಶಯವಾಗಿಯು ನಿಮಗೆ ನಿಮ್ಮ ಪೈಕಿ ಶನಿವಾರದ ವಿಚಾರದಲ್ಲಿ ಮಿತಿ ಮೀರಿದವರ ಅರಿವಿದೆ ಮತ್ತು ನಾವು ಸಹ ಅವರಿಗೆ “ನೀವು ನಿಂದ್ಯ ಕೋತಿಗಳಾಗಿಬಿಡಿರಿ” ಎಂದು ಹೇಳಿದೆವು
ئەرەپچە تەپسىرلەر:
فَجَعَلْنٰهَا نَكَالًا لِّمَا بَیْنَ یَدَیْهَا وَمَا خَلْفَهَا وَمَوْعِظَةً لِّلْمُتَّقِیْنَ ۟
ಹೀಗೆ ನಾವು ಅದನ್ನು ಗತಕಾಲದವರಿಗೂ, ನಂತರದ ಕಾಲದವರಿಗೂ ಒಂದು ಪಾಠವನ್ನಾಗಿಯೂ ಭಯ ಭಕ್ತಿಯುಳ್ಳವರಿಗೆ ಹಿತೋಪದೇಶವನ್ನಾಗಿಯೂ ಮಾಡಿ ಬಿಟ್ಟೆವು.
ئەرەپچە تەپسىرلەر:
وَاِذْ قَالَ مُوْسٰی لِقَوْمِهٖۤ اِنَّ اللّٰهَ یَاْمُرُكُمْ اَنْ تَذْبَحُوْا بَقَرَةً ؕ— قَالُوْۤا اَتَتَّخِذُنَا هُزُوًا ؕ— قَالَ اَعُوْذُ بِاللّٰهِ اَنْ اَكُوْنَ مِنَ الْجٰهِلِیْنَ ۟
ಮೂಸ (ಅ) ತನ್ನ ಜನರೊಡನೆ ಅಲ್ಲಾಹನು ಒಂದು ಹಸುವನ್ನು ಬಲಿ ನೀಡಬೇಕೆಂದು ನಿಮಗೆ ಆದೇಶಿಸುತ್ತಿದ್ದಾನೆ ಎಂದು ಹೇಳಿದ ಸಂಧರ್ಭವನ್ನು ಸ್ಮರಿಸಿರಿ. ಅವರು ಹೇಳಿದರು ನೀವು ನಮ್ಮೊಂದಿಗೆ ತಮಾಷೆಯನ್ನು ಮಾಡುತ್ತಿರುವಿರಾ? ಮೂಸಾ(ಅ) ಹೇಳಿದರು; ನಾನು ಅಂತಹ ಅವಿವೇಕಿಯಾಗುವುದರಿಂದ ಅಲ್ಲಾಹನಲ್ಲಿ ಅಭಯ ಯಾಚಿಸುತ್ತೇನೆ.
ئەرەپچە تەپسىرلەر:
قَالُوا ادْعُ لَنَا رَبَّكَ یُبَیِّنْ لَّنَا مَا هِیَ ؕ— قَالَ اِنَّهٗ یَقُوْلُ اِنَّهَا بَقَرَةٌ لَّا فَارِضٌ وَّلَا بِكْرٌ ؕ— عَوَانٌ بَیْنَ ذٰلِكَ ؕ— فَافْعَلُوْا مَا تُؤْمَرُوْنَ ۟
ಅವರು ಹೇಳಿದರು ಓ ಮೂಸಾ(ಅ) ನೀವು ನಿಮ್ಮ ಪ್ರಭುವಿನೊಡನೆ ನಮಗಾಗಿ ಪ್ರಾರ್ಥಿಸಿರಿ; ಅವನು ನಮಗೆ ಅದು ಹೇಗಿರಬೇಕೆಂದು ವಿವರಿಸಿ ಕೊಡಲಿ. ಅವರು ಹೇಳಿದರು; ಆ ಹಸುವು ಮುದಿಯಾಗದಿರಲಿ, ತೀರ ಎಳೆಯದ್ದಾಗಲಿ ಆಗಿರದೆ ಅವುಗಳೆರಡರ ನಡು ವಯಸ್ಸಿನ ಹದಿ ಹರೆಯದ್ದಾಗಿರಬೇಕು ಎಂದು ಹೇಳುತ್ತಾನೆ. ಇನ್ನು ನಿಮಗೆ ಆದೇಶ ನೀಡಲಾಗುತ್ತಿರುವುದನ್ನು ಮಾಡಿರಿ.
ئەرەپچە تەپسىرلەر:
قَالُوا ادْعُ لَنَا رَبَّكَ یُبَیِّنْ لَّنَا مَا لَوْنُهَا ؕ— قَالَ اِنَّهٗ یَقُوْلُ اِنَّهَا بَقَرَةٌ صَفْرَآءُ ۙ— فَاقِعٌ لَّوْنُهَا تَسُرُّ النّٰظِرِیْنَ ۟
ಅವರು ಹೇಳಿದರು ಅದು ಯಾವ ಬಣ್ಣದ್ದಾಗಿರಬೇಕೆಂದು ತಿಳಿಸಲು ನೀವು ನಿಮ್ಮ ಪ್ರಭವಿನೊಡನೆ ಪ್ರಾರ್ಥಿಸಿರಿ ಎಂದರು. ಅವರು ಹೇಳಿದರು; ಆ ಹಸುವು ಹೊಂಬಣ್ಣದ್ದಾಗಿದ್ದು, ಪ್ರೇಕ್ಷಕರಿಗೆ ಮುದಗೊಳಿಸುವುದಂತಹದ್ದು ಆಗಿರಬೇಕೆಂದು ಅವನು ಹೇಳುತ್ತಾನೆ.
ئەرەپچە تەپسىرلەر:
قَالُوا ادْعُ لَنَا رَبَّكَ یُبَیِّنْ لَّنَا مَا هِیَ ۙ— اِنَّ الْبَقَرَ تَشٰبَهَ عَلَیْنَا ؕ— وَاِنَّاۤ اِنْ شَآءَ اللّٰهُ لَمُهْتَدُوْنَ ۟
ಅದು ಯಾವ ತರಹದ್ದಾಗಿರಬೇಕೆಂದು ಅದರ ಹೆಚ್ಚಿನ ವಿವರ ತಿಳಿಸಲು ನೀವು ನಮಗಾಗಿ ನಿಮ್ಮ ಪ್ರಭುವಿನೊಡನೆ ಪ್ರಾರ್ಥಿಸಿರಿ ಎಂದರು. ಒಂದಕ್ಕೊಂದು ಹೋಲುವ ಹಸುಗಳಿಂದ ನಮಗೆ ಗೊಂದಲವಾಗುತ್ತಿದೆ. ಅಲ್ಲಾಹನೇನಾದರು ಇಚ್ಛಿಸಿದರೆ ನಾವು ಸರಿಯಾದ ದಾರಿ ಪಡೆಯುವೆವು.
ئەرەپچە تەپسىرلەر:
قَالَ اِنَّهٗ یَقُوْلُ اِنَّهَا بَقَرَةٌ لَّا ذَلُوْلٌ تُثِیْرُ الْاَرْضَ وَلَا تَسْقِی الْحَرْثَ ۚ— مُسَلَّمَةٌ لَّا شِیَةَ فِیْهَا ؕ— قَالُوا الْـٰٔنَ جِئْتَ بِالْحَقِّ ؕ— فَذَبَحُوْهَا وَمَا كَادُوْا یَفْعَلُوْنَ ۟۠
ಮೂಸ(ಅ) ಹೇಳಿದರು; ಆ ಹಸುವು ಭೂಮಿಯನ್ನು ಊಳುವುದಕ್ಕಾಗಲೀ, ಕೃಷಿಗೆ ನೀರು ಎತ್ತಲಿಕ್ಕಾಗಲೀ ಬಳಸದ ಅಂಗ ವೈಕಲ್ಯ ಇಲ್ಲದ್ದಾಗಿರಬೇಕು ಎಂದು ಅವನು ಹೇಳುತ್ತಾನೆ. ಆಗ ಅವರು ಹೇಳಿದರು; ನೀವು ಇದೀಗ ಸಂಪೂರ್ಣ ಮಾಹಿತಿಯನ್ನು ನೀಡಿರುವಿರಿ, ಅವರು ಅದನ್ನು ಮಾಡುವ ಸ್ಥಿತಿಯಲ್ಲಿ ಇರಲಿಲ್ಲ. ಆದರೆ ಅವರು ಅದನ್ನು ಒಪ್ಪಿಕೊಂಡರು ಮತ್ತು ಆ ಹಸುವನ್ನು ಕೊಯ್ದು ಬಿಟ್ಟರು.
ئەرەپچە تەپسىرلەر:
وَاِذْ قَتَلْتُمْ نَفْسًا فَادّٰرَءْتُمْ فِیْهَا ؕ— وَاللّٰهُ مُخْرِجٌ مَّا كُنْتُمْ تَكْتُمُوْنَ ۟ۚ
ನೀವು ಒಬ್ಬ ವ್ಯಕ್ತಿಯನ್ನು ಕೊಂದು ಅನಂತರ ಅದರಲ್ಲಿ ಪರಸ್ಪರ ಭಿನ್ನಾಭಿಪ್ರಾಯ ತೋರಿದ ಸಂದರ್ಭ ಮತ್ತು ಅಲ್ಲಾಹನು ನೀವು ರಹಸ್ಯವಾಗಿಡುವುದನ್ನು ಹೊರತರುವವನಾಗಿದ್ದನು.
ئەرەپچە تەپسىرلەر:
فَقُلْنَا اضْرِبُوْهُ بِبَعْضِهَا ؕ— كَذٰلِكَ یُحْیِ اللّٰهُ الْمَوْتٰی وَیُرِیْكُمْ اٰیٰتِهٖ لَعَلَّكُمْ تَعْقِلُوْنَ ۟
ಆಗ ನಾವು ಹೇಳಿದೆವು ! ಆ ಹಸುವಿನ ಒಂದು ತುಂಡನ್ನು ಕೊಲೆಗೀಡಾದವನ ಶರೀರಕ್ಕೆ ತಾಗಿಸಿರಿ. (ಅವನು ಜೀವಂತವಾಗಿ ಏಳುವನು) ಇದೇ ಪ್ರಕಾರ ಅಲ್ಲಾಹನು ಮೃತರನ್ನು ಜೀವಂತಗೊಳಿಸುತ್ತಾನೆ. ನೀವು ಯೋಚಿಸಲ್ಲಿಕ್ಕಾಗಿ ಅವನು ತನ್ನ ದೃಷ್ಟಾಂತಗಳನ್ನು ನಿಮಗೆ ತೋರಿಸಿ ಕೊಡುತ್ತಾನೆ.
ئەرەپچە تەپسىرلەر:
ثُمَّ قَسَتْ قُلُوْبُكُمْ مِّنْ بَعْدِ ذٰلِكَ فَهِیَ كَالْحِجَارَةِ اَوْ اَشَدُّ قَسْوَةً ؕ— وَاِنَّ مِنَ الْحِجَارَةِ لَمَا یَتَفَجَّرُ مِنْهُ الْاَنْهٰرُ ؕ— وَاِنَّ مِنْهَا لَمَا یَشَّقَّقُ فَیَخْرُجُ مِنْهُ الْمَآءُ ؕ— وَاِنَّ مِنْهَا لَمَا یَهْبِطُ مِنْ خَشْیَةِ اللّٰهِ ؕ— وَمَا اللّٰهُ بِغَافِلٍ عَمَّا تَعْمَلُوْنَ ۟
ಅದಾದ ಬಳಿಕ ನಿಮ್ಮ ಹೃದಯಗಳು ಕಲ್ಲಿನಂತೆ ಅಥವಾ ಅದಕ್ಕಿಂತಲೂ ಕಠೋರವಾದವು. ಕೆÀಲವು ಕಲ್ಲುಗಳಿಂದ ಚಿಲಮೆಗಳು ಹೊರಚಿಮ್ಮುತ್ತವೆ ಮತ್ತು ಕೆಲವು ಒಡೆಯುತ್ತವೆ ಹಾಗೂ ಅವುಗಳಿಂದ ಜಲವು ಹೊರ ಬರುತ್ತದೆ. ಮತ್ತು ಕೆಲವು ಅಲ್ಲಾಹನ ಭಯದ ನಿಮಿತ್ತ ಕೆಳಗುರುಳುತ್ತವೆ ಮತ್ತು ಅಲ್ಲಾಹನು ನಿಮ್ಮ ಕೃತ್ಯಗಳ ಕುರಿತು ಅಲಕ್ಷö್ಯನಲ್ಲ.
ئەرەپچە تەپسىرلەر:
اَفَتَطْمَعُوْنَ اَنْ یُّؤْمِنُوْا لَكُمْ وَقَدْ كَانَ فَرِیْقٌ مِّنْهُمْ یَسْمَعُوْنَ كَلٰمَ اللّٰهِ ثُمَّ یُحَرِّفُوْنَهٗ مِنْ بَعْدِ مَا عَقَلُوْهُ وَهُمْ یَعْلَمُوْنَ ۟
ಓ ಸತ್ಯವಿಶ್ವಾಸಿಗಳೇ ಈ ಜನರು (ಯಹೂದರು) ವಿಶ್ವಾಸಿಗಳಾಗಲೆಂದು ನೀವು ಆಶಿಸುತ್ತಿದ್ದೀರಾ? ವಸ್ತುತಃ ಅವರ ಪೈಕಿ ಒಂದು ವರ್ಗವು ಅಲ್ಲಾಹನ ವಚನಗಳನ್ನು ಕೇಳಿ ಅದನ್ನು ಅರ್ಥ ಮಾಡಿಕೊಂಡ ಬಳಿಕವೂ ಅದರಲ್ಲಿ ಬದಲಾವಣೆ ಮಾಡುತ್ತಿದ್ದರು.
ئەرەپچە تەپسىرلەر:
وَاِذَا لَقُوا الَّذِیْنَ اٰمَنُوْا قَالُوْۤا اٰمَنَّا ۖۚ— وَاِذَا خَلَا بَعْضُهُمْ اِلٰی بَعْضٍ قَالُوْۤا اَتُحَدِّثُوْنَهُمْ بِمَا فَتَحَ اللّٰهُ عَلَیْكُمْ لِیُحَآجُّوْكُمْ بِهٖ عِنْدَ رَبِّكُمْ ؕ— اَفَلَا تَعْقِلُوْنَ ۟
ಅವರು (ಯಹೂದಿ) ಸತ್ಯವಿಶ್ವಾಸಿಗಳನ್ನು ಭೇಟಿಯಾದಾಗ ನಾವು ವಿಶ್ವಾಸಿಗಳೆಂದು ಹೇಳುತ್ತಾರೆ. ಮತ್ತು ಅವರು ಪರಸ್ಪರರನ್ನು ಏಕಾಂತದಲ್ಲಿ ಭೇಟಿಯಾದಾಗ ಹೇಳುತ್ತಾರೆ; ನಿಮ್ಮ ಪ್ರಭುವಿನ ಬಳಿ ನಿಮ್ಮ ವಿರುದ್ಧ ಮುಸ್ಲಿಮರಿಗೆ ಆಧಾರವಾಗಲೆಂದು ನಿಮಗೆ ಅಲ್ಲಾಹನು ವ್ಯಕ್ತಗೊಳಿಸಿದ ವಿಚಾರವನ್ನು ನೀವು ಅವರಿಗೆ ತಿಳಿಸಿಕೊಡುತ್ತ್ತಿರುವಿರಾ? ನೀವು ಯೋಚಿಸುವುದಿಲ್ಲವೇ?
ئەرەپچە تەپسىرلەر:
اَوَلَا یَعْلَمُوْنَ اَنَّ اللّٰهَ یَعْلَمُ مَا یُسِرُّوْنَ وَمَا یُعْلِنُوْنَ ۟
ಖಂಡಿತವಾಗಿಯು ಅಲ್ಲಾಹನು ಅವರು ರಹಸ್ಯವಾಗಿಡುವುದನ್ನೂ, ಬಹಿರಂಗಗೊಳಿಸುವುದನ್ನೂ ಅರಿಯುತ್ತಾನೆಂಬವುದನ್ನು ಅವರು ತಿಳಿಯುವುದಿಲ್ಲವೇ
ئەرەپچە تەپسىرلەر:
وَمِنْهُمْ اُمِّیُّوْنَ لَا یَعْلَمُوْنَ الْكِتٰبَ اِلَّاۤ اَمَانِیَّ وَاِنْ هُمْ اِلَّا یَظُنُّوْنَ ۟
ಮತ್ತು ಅವರ ಪೈಕಿ ಕೆಲವರು ನಿರಕ್ಷರಿಗಳಿದ್ದಾರೆ. ಅವರು ಗ್ರಂಥದ ಬಾಹ್ಯ ವಾಕ್ಯಗಳನ್ನು ಮಾತ್ರ ಅರಿಯುತ್ತಾರೆ. ಮತ್ತು ಕೇವಲ ಊಹೆಯನ್ನು ಅನುಸರಿಸುತ್ತಾರೆ.
ئەرەپچە تەپسىرلەر:
فَوَیْلٌ لِّلَّذِیْنَ یَكْتُبُوْنَ الْكِتٰبَ بِاَیْدِیْهِمْ ۗ— ثُمَّ یَقُوْلُوْنَ هٰذَا مِنْ عِنْدِ اللّٰهِ لِیَشْتَرُوْا بِهٖ ثَمَنًا قَلِیْلًا ؕ— فَوَیْلٌ لَّهُمْ مِّمَّا كَتَبَتْ اَیْدِیْهِمْ وَوَیْلٌ لَّهُمْ مِّمَّا یَكْسِبُوْنَ ۟
ಸ್ವತಃ ತಮ್ಮ ಕೈಗಳಿಂದ ಗ್ರಂಥವನ್ನು ಬರೆದು ಅದರಿಂದ ತುಚ್ಛ ಬೆಲೆ ಪಡೆಯಲು ಇದು ಅಲ್ಲಾಹನ ವತಿಯಿಂದ ಬಂದಿದೆ ಎಂದು ಹೇಳುವವರಿಗೆ 'ವೈಲ್'(ಮಹಾನಾಶ)ಇದೆ. ಅವರು ತಮ್ಮ ಕೈಗಳಿಂದ ಬರೆದುದರ ನಿಮಿತ್ತ ಹಾಗೂ (ಗ್ರಂಥದ ಮೂಲಕ) ಸಂಪಾದಿಸಿದುದರ ನಿಮಿತ್ತ ಅವರಿಗೆ ಮಹಾನಾಶವಿದೆ.
ئەرەپچە تەپسىرلەر:
وَقَالُوْا لَنْ تَمَسَّنَا النَّارُ اِلَّاۤ اَیَّامًا مَّعْدُوْدَةً ؕ— قُلْ اَتَّخَذْتُمْ عِنْدَ اللّٰهِ عَهْدًا فَلَنْ یُّخْلِفَ اللّٰهُ عَهْدَهٗۤ اَمْ تَقُوْلُوْنَ عَلَی اللّٰهِ مَا لَا تَعْلَمُوْنَ ۟
ಮತ್ತು (ಆ ಯಹೂದಿಗಳು) ಹೇಳುವರು ನರಕಾಗ್ನಿಯು ನಮ್ಮನ್ನು ಸ್ವಲ್ಪವೂ ಸ್ಪರ್ಷಿಸಲಾರದು, ಒಂದು ವೇಳೆ ಸ್ಪರ್ಷಿಸಿದರೂ ಕೆಲವೇ ದಿನಗಳು ಮಾತ್ರ. ಅವರಿಗೆ ಕೇಳಿರಿ; ನೀವು ಅಲ್ಲಾಹನ ಬಳಿ ಉಲ್ಲಂಘಿಸಲಾಗದAತಹಾ ಒಪ್ಪಂದವೇನಾದರೂ ಪಡೆದುಕೊಂಡಿದ್ದೀರಾ? ಹಾಗಿದ್ದರೆ ಖಂಡಿತವಾಗಿಯು ಅಲ್ಲಾಹ್ ತನ್ನ ಒಪ್ಪಂದವನ್ನು ಎಂದೂ ಉಲ್ಲಂಘಿಸುವುದಿಲ್ಲ. ಅಥವಾ ನಿಮಗೆ ಅರಿವಿಲ್ಲದನ್ನು ಅಲ್ಲಾಹನ ಮೇಲೆ ಆರೋಪಿಸುತ್ತಿರುವಿರಾ?
ئەرەپچە تەپسىرلەر:
بَلٰی مَنْ كَسَبَ سَیِّئَةً وَّاَحَاطَتْ بِهٖ خَطِیْٓـَٔتُهٗ فَاُولٰٓىِٕكَ اَصْحٰبُ النَّارِ ۚ— هُمْ فِیْهَا خٰلِدُوْنَ ۟
ಹಾಗಲ್ಲ (ನರಕಾಗ್ನಿ ನಿಮಗೆ ಯಾಕೆ ಸ್ಪರ್ಷಿಸುವುದಿಲ್ಲ?) ಯಾರು ದುಷ್ಕರ್ಮ ವೆಸಗುತ್ತಾನೋ ಮತ್ತು ಅವನ ಪಾಪಗಳು ಅವನನ್ನು ಆವರಿಸಿ ಬಿಟ್ಟಿರುತ್ತದೋ ಅವರೇ ನರಕವಾಸಿಗಳು ಮತ್ತು ಅವರು ಅದರಲ್ಲಿ ಶಾಶ್ವತವಾಗಿರುವರು.
ئەرەپچە تەپسىرلەر:
وَالَّذِیْنَ اٰمَنُوْا وَعَمِلُوا الصّٰلِحٰتِ اُولٰٓىِٕكَ اَصْحٰبُ الْجَنَّةِ ۚ— هُمْ فِیْهَا خٰلِدُوْنَ ۟۠
ಮತ್ತು ಯಾರು ಸತ್ಯ ವಿಶ್ವಾಸವಿರಿಸಿ, ಸತ್ಕರ್ಮಗಳನ್ನು ಕೈಗೊಳ್ಳುವರೋ ಅವರೇ ಸ್ವರ್ಗವಾಸಿಗಳು ಅವರು ಅದರಲ್ಲಿ ಶಾಶ್ವತವಾಗಿರುವರು.
ئەرەپچە تەپسىرلەر:
وَاِذْ اَخَذْنَا مِیْثَاقَ بَنِیْۤ اِسْرَآءِیْلَ لَا تَعْبُدُوْنَ اِلَّا اللّٰهَ ۫— وَبِالْوَالِدَیْنِ اِحْسَانًا وَّذِی الْقُرْبٰی وَالْیَتٰمٰی وَالْمَسٰكِیْنِ وَقُوْلُوْا لِلنَّاسِ حُسْنًا وَّاَقِیْمُوا الصَّلٰوةَ وَاٰتُوا الزَّكٰوةَ ؕ— ثُمَّ تَوَلَّیْتُمْ اِلَّا قَلِیْلًا مِّنْكُمْ وَاَنْتُمْ مُّعْرِضُوْنَ ۟
ಅಲ್ಲಾಹನ ಹೊರತು ಇನ್ನಾರನ್ನೂ ಆರಾಧಿಸಬೇಡಿರಿ ಮತ್ತು ಮಾತಾಪಿತರೊಂದಿಗೆ ಆಪ್ತ ಸಂಬಂಧಿಕರೊಂದಿಗೆ, ನಿರ್ಗತಿಕರೊಂದಿಗೆ, ಒಳಿತನ್ನು ಮಾಡಿರಿ ಮತ್ತು ಜನರೊಂದಿಗೆ ಒಳ್ಳೆಯ ಮಾತನ್ನಾಡಿರಿ, ನಮಾಜನ್ನು ಸಂಸ್ಥಾಪಿಸಿರಿ ಹಾಗೂ ಝಕಾತ್ ಪಾವತಿಸಿರಿ ಎಂದು ನಾವು ಇಸ್ರಾಯೀಲ್ ಸಂತತಿಗಳೊಂದಿಗೆ ಸದೃಢ ಕರಾರನ್ನು ಪಡೆದುಕೊಂಡ ಸಂದರ್ಭವನ್ನು ಸ್ಮರಿಸಿರಿ. ಆದರೆ ನಿಮ್ಮ ಪೈಕಿ ಅತ್ಯಲ್ಪ ಜನರ ಹೊರತು ನೀವೆಲ್ಲರೂ (ಈ ಒಪ್ಪಂದದಿಂದ) ವಿಮುಖರಾಗಿ ಬಿಟ್ಟಿರಿ ಹಾಗೂ (ಸತ್ಯದಿಂದ) ಅಲಕ್ಷ್ಯತನ ತೋರಿದಿರಿ.
ئەرەپچە تەپسىرلەر:
وَاِذْ اَخَذْنَا مِیْثَاقَكُمْ لَا تَسْفِكُوْنَ دِمَآءَكُمْ وَلَا تُخْرِجُوْنَ اَنْفُسَكُمْ مِّنْ دِیَارِكُمْ ثُمَّ اَقْرَرْتُمْ وَاَنْتُمْ تَشْهَدُوْنَ ۟
ನೀವು ಪರಸ್ಪರ ರಕ್ತಪಾತ ಮಾಡಬಾರದು ಮತ್ತು ಪರಸ್ಪರರನ್ನು ಗಡಿಪಾರು ಮಾಡಬಾರದೆಂದು ನಾವು ನಿಮ್ಮಿಂದ ಸದೃಢ ಕರಾರನ್ನು ಪಡೆದ ಸಂಧರ್ಭವನ್ನು ಸ್ಮರಿಸಿರಿ, ನೀವು ಅದನ್ನು ಅಂಗೀಕರಿಸಿದಿರಿ ಹಾಗೂ ಸ್ವತಃ ನೀವು ಅದರ ಸಾಕ್ಷಿಗಳಾಗಿದ್ದೀರಿ.
ئەرەپچە تەپسىرلەر:
ثُمَّ اَنْتُمْ هٰۤؤُلَآءِ تَقْتُلُوْنَ اَنْفُسَكُمْ وَتُخْرِجُوْنَ فَرِیْقًا مِّنْكُمْ مِّنْ دِیَارِهِمْ ؗ— تَظٰهَرُوْنَ عَلَیْهِمْ بِالْاِثْمِ وَالْعُدْوَانِ ؕ— وَاِنْ یَّاْتُوْكُمْ اُسٰرٰی تُفٰدُوْهُمْ وَهُوَ مُحَرَّمٌ عَلَیْكُمْ اِخْرَاجُهُمْ ؕ— اَفَتُؤْمِنُوْنَ بِبَعْضِ الْكِتٰبِ وَتَكْفُرُوْنَ بِبَعْضٍ ۚ— فَمَا جَزَآءُ مَنْ یَّفْعَلُ ذٰلِكَ مِنْكُمْ اِلَّا خِزْیٌ فِی الْحَیٰوةِ الدُّنْیَا ۚ— وَیَوْمَ الْقِیٰمَةِ یُرَدُّوْنَ اِلٰۤی اَشَدِّ الْعَذَابِ ؕ— وَمَا اللّٰهُ بِغَافِلٍ عَمَّا تَعْمَلُوْنَ ۟
ಅದಾಗ್ಯೂ ನೀವು ಪರಸ್ಪರರನ್ನು ಕೊಂದಿರಿ ಮತ್ತು ನಿಮ್ಮಲ್ಲಿನ ಒಂದು ವರ್ಗವನ್ನು ಗಡಿಪಾರು ಮಾಡಿದಿರಿ ಮತ್ತು ಪಾಪ ಹಾಗೂ ಅತಿಕ್ರಮದ ಕೃತ್ಯಗಳಲ್ಲಿ ಅವರ ವಿರುದ್ಧ ಇನ್ನೊಬ್ಬರ ಪಕ್ಷವಹಿಸಿಕೊಂಡಿರಿ. ಅವರು ನಿಮ್ಮ ಬಳಿಗೆ ಯುದ್ಧ ಕೈದಿಗಳಾಗಿ ಬಂದಾಗ ನೀವು ಫಿದ್‌ಯ (ಪರಿಹಾರ ಧನ) ಕೊಟ್ಟು ಸ್ವತಂತ್ರಗೊಳಿಸಿದಿರಿ. ಆದರೆ ಅವರನ್ನು ಹೊರ ಹಾಕುವುದು ನಿಮ್ಮ ಮೇಲೆ ನಿಷಿದ್ದಗೊಳಿಸಲಾಗಿತ್ತು. ಏನು ನೀವು ಕೆಲವು ನಿಯಮಗಳ ಮೇಲೆ ವಿಶ್ವಾಸವಿಟ್ಟು ಮತ್ತು ಇನ್ನು ಕೆಲವನ್ನು ನಿಷೇಧಿಸುತ್ತಿರುವಿರಾ? ನಿಮ್ಮ ಪೈಕಿ ಹೀಗೆ ಮಾಡುವವರು ಯಾರೇ ಇರಲಿ ಅವರ ಪ್ರತಿಫÀಲವು ಇಹಲೋಕ ಜೀವನದಲ್ಲಿ ನಿಂದ್ಯತೆಯೇ ಇದೆ ಮತ್ತು ಪ್ರಳಯ ದಿನದಂದು ಅವರನ್ನು ಅತ್ಯುಗ್ರ ಯಾತನೆಯೆಡೆಗೆ ತಳ್ಳಲಾಗುವುದು. ಮತ್ತು ನಿಮ್ಮ ಕೃತ್ಯಗಳ ಕುರಿತು ಅಲ್ಲಾಹನು ಅಲಕ್ಷ್ಯನಲ್ಲ.
ئەرەپچە تەپسىرلەر:
اُولٰٓىِٕكَ الَّذِیْنَ اشْتَرَوُا الْحَیٰوةَ الدُّنْیَا بِالْاٰخِرَةِ ؗ— فَلَا یُخَفَّفُ عَنْهُمُ الْعَذَابُ وَلَا هُمْ یُنْصَرُوْنَ ۟۠
ಅವರೇ ಪರಲೋಕದ ಬದಲಿಗೆ ಇಹಲೋಕ ಜೀವನವನ್ನು ಖರೀದಿಸಿಕೊಂಡವರು. ಅವರ ಯಾತನೆಯಲ್ಲಿ ಸ್ವಲ್ಪವೂ ಹಗುರಗೊಳಿಸಲಾಗದು ಮತ್ತು ಅವರಿಗೆ ಯಾವ ಸಹಾಯವೂ ದೊರಕಲಾರದು.
ئەرەپچە تەپسىرلەر:
وَلَقَدْ اٰتَیْنَا مُوْسَی الْكِتٰبَ وَقَفَّیْنَا مِنْ بَعْدِهٖ بِالرُّسُلِ ؗ— وَاٰتَیْنَا عِیْسَی ابْنَ مَرْیَمَ الْبَیِّنٰتِ وَاَیَّدْنٰهُ بِرُوْحِ الْقُدُسِ ؕ— اَفَكُلَّمَا جَآءَكُمْ رَسُوْلٌۢ بِمَا لَا تَهْوٰۤی اَنْفُسُكُمُ اسْتَكْبَرْتُمْ ۚ— فَفَرِیْقًا كَذَّبْتُمْ ؗ— وَفَرِیْقًا تَقْتُلُوْنَ ۟
ನಾವು (ಪೈಗಂಬರ್) ಮೂಸಾರಿಗೆ(ಅ) ಗ್ರಂಥವನ್ನು (ತೌರಾತ್) ದಯಪಾಲಿಸಿದೆವು ಹಾಗೂ ಅವರ ನಂತರ ಅನೇಕ ಸಂದೇಶವಾಹಕರನ್ನು ಕಳುಹಿಸಿದೆವು. ಮರ್ಯಮಳ ಪುತ್ರ ಈಸಾರವರಿಗೆ ಸುಸ್ಪಷ್ಟ ಪುರಾವೆಗಳನ್ನು ದಯಪಾಲಿಸಿದೆವು ಹಾಗೂ ಅವರನ್ನು ನಾವು ಪವಿತ್ರಾತ್ಮನ ಮೂಲಕ ಬಲಪಡಿಸಿದೆವು. ಆದರೆ ನಿಮ್ಮ ಇಚ್ಛೆಗಳಿಗೆ ವಿರುದ್ಧವಾದುದ್ದನ್ನು ಸಂದೇಶವಾಹಕರು ನಿಮ್ಮ ಬಳಿ ತಂದಾಗ ನೀವು ಕೂಡಲೇ ದರ್ಪತೋರಿದಿರಿ. ಹಾಗೆಯೇ ಅವರಲ್ಲಿ ಕೆಲವರನ್ನು ನೀವು ಸುಳ್ಳಾಗಿಸಿದಿರಿ. ಇನ್ನು ಕೆಲವರನ್ನು ವಧಿಸಿದಿರಿ.
ئەرەپچە تەپسىرلەر:
وَقَالُوْا قُلُوْبُنَا غُلْفٌ ؕ— بَلْ لَّعَنَهُمُ اللّٰهُ بِكُفْرِهِمْ فَقَلِیْلًا مَّا یُؤْمِنُوْنَ ۟
ಮತ್ತು (ಯಹೂದರಿಗೆ ಮುಹಮ್ಮದ್(ಸ)ರವರಲ್ಲಿ) ವಿಶ್ವಾಸವಿಡಿರಿ ಎನ್ನಲಾದಾಗ ಅವರು ಹೇಳುತ್ತಾರೆ; ನಮ್ಮ ಹೃದಯಗಳು ಮುಚ್ಚಲಾಗಿವೆ (ಹಾಗಾಗಿ ನಮಗೆ ಅರ್ಥವಾಗುತ್ತಿಲ್ಲ) ಹಾಗಲ್ಲ ಅವರ ಸತ್ಯನಿಷೇಧದ ನಿಮಿತ್ತ ಅಲ್ಲಾಹನು ಅವರನ್ನು ಶಪಿಸಿದ್ದಾನೆ. ಅವರ ವಿಶ್ವಾಸವು ಅತ್ಯಲ್ಪವೇ ಆಗಿದೆ.
ئەرەپچە تەپسىرلەر:
وَلَمَّا جَآءَهُمْ كِتٰبٌ مِّنْ عِنْدِ اللّٰهِ مُصَدِّقٌ لِّمَا مَعَهُمْ ۙ— وَكَانُوْا مِنْ قَبْلُ یَسْتَفْتِحُوْنَ عَلَی الَّذِیْنَ كَفَرُوْا ۚ— فَلَمَّا جَآءَهُمْ مَّا عَرَفُوْا كَفَرُوْا بِهٖ ؗ— فَلَعْنَةُ اللّٰهِ عَلَی الْكٰفِرِیْنَ ۟
ಅವರ ಬಳಿಯಿರುವ ಗ್ರಂಥವನ್ನು (ತೌರಾತ್) ಸತ್ಯವೆಂದು ದೃಢೀಕರಿಸುವ ಗ್ರಂಥವು (ಕುರ್‌ಆನ್) ಅಲ್ಲಾಹನ ವತಿಯಿಂದ ಅವರ ಬಳಿಗೆ ಬಂದಾಗ, (ಅವರು ಅದನ್ನು ನಿರಾಕರಿಸಿಬಿಟ್ಟರು) ಅವರಾದರೂ ಇದಕ್ಕೆ ಮೊದಲು (ಈ ಗ್ರಂಥದ ಮೂಲಕ) ಸತ್ಯನಿಷೇಧಿಸಿದವರ ವಿರುದ್ಧ ವಿಜಯಕ್ಕಾಗಿ ಹಾತೊರೆಯುತ್ತಿದ್ದರು. ಹಾಗೆÀಯೇ ಅವರು ಅರಿತುಕೊಂಡಿದ್ದ ಗ್ರಂಥವು ಅವರ ಬಳಿಗೆ ಬಂದಾಗ ಅದನ್ನು ನಿಷೇಧಿಸಿ ಬಿಟ್ಟರು. ಸತ್ಯನಿಷೇಧಿಗಳ ಮೇಲೆ ಅಲ್ಲಾಹನ ಶಾಪವಿರಲಿ.
ئەرەپچە تەپسىرلەر:
بِئْسَمَا اشْتَرَوْا بِهٖۤ اَنْفُسَهُمْ اَنْ یَّكْفُرُوْا بِمَاۤ اَنْزَلَ اللّٰهُ بَغْیًا اَنْ یُّنَزِّلَ اللّٰهُ مِنْ فَضْلِهٖ عَلٰی مَنْ یَّشَآءُ مِنْ عِبَادِهٖ ۚ— فَبَآءُوْ بِغَضَبٍ عَلٰی غَضَبٍ ؕ— وَلِلْكٰفِرِیْنَ عَذَابٌ مُّهِیْنٌ ۟
ಎಷ್ಟೊಂದು ಕೆಟ್ಟವಸ್ತುವಿಗಾಗಿ ಅವರು ತಮ್ಮನ್ನು ಮಾರಿಕೊಂಡಿದ್ದಾರೆ. ಅಲ್ಲಾಹನು ತನ್ನ ಅನುಗ್ರಹವನ್ನು ತಾನಿಚ್ಚಿಸಿದ ದಾಸನ ಮೇಲೆ ಅವತೀರ್ಣಗೊಳಿಸಿದನು ಎಂಬ ಅಸೂಯೆಯಿಂದ ಅಲ್ಲಾಹನು ಅವತೀರ್ಣಗೊಳಿಸಿದ ಗ್ರಂಥವನ್ನು ಧಿಕ್ಕರಿಸಿಬಿಟ್ಟಿದ್ದಾರೆ. ಆದುದರಿಂದ ಅವರು (ಯಹೂದಿಗಳು)ಕ್ರೋಧದ ಮೇಲೆ ಇನ್ನಷ್ಟು ಕ್ರೋಧಕ್ಕೆ ಪಾತ್ರರಾದರು ಮತ್ತು ಸತ್ಯನಿಷೇಧಿಗಳಿಗೆ ಅಪಮಾನಕರ ಯಾತನೆಯಿದೆ.
ئەرەپچە تەپسىرلەر:
وَاِذَا قِیْلَ لَهُمْ اٰمِنُوْا بِمَاۤ اَنْزَلَ اللّٰهُ قَالُوْا نُؤْمِنُ بِمَاۤ اُنْزِلَ عَلَیْنَا وَیَكْفُرُوْنَ بِمَا وَرَآءَهٗ ۗ— وَهُوَ الْحَقُّ مُصَدِّقًا لِّمَا مَعَهُمْ ؕ— قُلْ فَلِمَ تَقْتُلُوْنَ اَنْۢبِیَآءَ اللّٰهِ مِنْ قَبْلُ اِنْ كُنْتُمْ مُّؤْمِنِیْنَ ۟
ಮತ್ತು ಅವರಿಗೆ ನೀವು ಅಲ್ಲಾಹನ ವತಿಯಿಂದ ಅವತೀರ್ಣಗೊಳಿಸಲಾದ ಈ ಗ್ರಂಥದಲ್ಲಿ (ಕುರ್‌ಆನ್‌ನಲ್ಲಿ) ವಿಶ್ವಾಸಿರಿಸಿರಿ ಎಂದು ಹೇಳಲಾದಾಗ ನಮ್ಮ ಮೇಲೆ ಅವತೀರ್ಣಗೊಂಡ ಗ್ರಂಥದಲ್ಲಿ (ತೌರಾತ್‌ನಲ್ಲಿ) ನಾವು ವಿಶ್ವಾಸವಿರಿಸಿರುತ್ತೇವೆ ಎಂದು ಅವರು ಹೇಳುತ್ತಾರೆ. ಅವರು ಅದರ ನಂತರ ಬಂದಿರುವುದನ್ನು ನಿಷೇಧಿಸುತ್ತಾರೆ. ವಸ್ತುತಃ ಅದು (ಕುರ್‌ಆನ್) ಸತ್ಯವಾಗಿದೆ ಅದು ಅವರಬಳಿ ಇರುವ ಗ್ರಂಥವನ್ನು (ತೌರಾತನ್ನು) ದೃಢೀಕರಿಸುತ್ತದೆ. ಅವರಿಗೆ ಕೇಳಿರಿ ನೀವು ತಮ್ಮ ಗ್ರಂಥಗಳ ಮೇಲೆ ವಿಶ್ವಾಸವಿಡುವವರಾಗಿದ್ದರೆ ಅಲ್ಲಾಹನ ಗತ ಪೈಗಂಬರರನ್ನು ಏಕೆ ವಧಿಸುತ್ತಿದ್ದೀರಿ?
ئەرەپچە تەپسىرلەر:
وَلَقَدْ جَآءَكُمْ مُّوْسٰی بِالْبَیِّنٰتِ ثُمَّ اتَّخَذْتُمُ الْعِجْلَ مِنْ بَعْدِهٖ وَاَنْتُمْ ظٰلِمُوْنَ ۟
ವಸ್ತುತಃ ಸುಸ್ಪಷ್ಟ ಪುರಾವೆಗಳೊಂದಿಗೆ ಮೂಸಾ(ಅ) ನಿಮ್ಮ ಬಳಿಗೆ ಬಂದಿದ್ದರು. ಅದರ ತರುವಾಯ ಕರುವನ್ನು ಆರಾಧಿಸಿ ನೀವೆ ಅಕ್ರಮಿಗಳಾಗಿದ್ದೀರಿ.
ئەرەپچە تەپسىرلەر:
وَاِذْ اَخَذْنَا مِیْثَاقَكُمْ وَرَفَعْنَا فَوْقَكُمُ الطُّوْرَ ؕ— خُذُوْا مَاۤ اٰتَیْنٰكُمْ بِقُوَّةٍ وَّاسْمَعُوْا ؕ— قَالُوْا سَمِعْنَا وَعَصَیْنَا ۗ— وَاُشْرِبُوْا فِیْ قُلُوْبِهِمُ الْعِجْلَ بِكُفْرِهِمْ ؕ— قُلْ بِئْسَمَا یَاْمُرُكُمْ بِهٖۤ اِیْمَانُكُمْ اِنْ كُنْتُمْ مُّؤْمِنِیْنَ ۟
ನಾವು ನಿಮ್ಮ ಮೇಲೆ ತೂರ್ ಪರ್ವತವನ್ನು ಎತ್ತಿ ಹಿಡಿದು ನಿಮ್ಮಿಂದ ದೃಢ ಕರಾರನ್ನು ಪಡೆದುಕೊಂಡ ಸಂಧರ್ಭವನ್ನು ಸ್ಮರಿಸಿರಿ. ಆಗ ನಾವು ನಿಮಗೆ ನೀಡಿರುವುದನ್ನು ಭದ್ರವಾಗಿ ಹಿಡಿದುಕೊಳ್ಳಿರಿ ಹಾಗೂ ಆಲಿಸಿರಿ ಎಂದು ಹೇಳಿದೆವು. ಅವರು (ಯಹೂದಿಯರು) ಹೇಳಿದರು; ನಾವು ಆಲಿಸಿದೆವು ಹಾಗೂ ಧಿಕ್ಕರಿಸಿದೆವು. ಅವರ ಸತ್ಯ ನಿಷೇಧದ ಫಲವಾಗಿ ಅವರ ಹೃದಯಗಳಲ್ಲಿ ಕರುವಿನ ಪ್ರೇಮವನ್ನು (ಅಕ್ಷರಶಃ)ಕುಡಿಸಲಾಗಿದೆ. ಹೇಳಿರಿ, ನೀವು ವಿಶ್ವಾಸಿಗಳಾಗಿದ್ದರೆ ನಿಮ್ಮ ಆ ವಿಶ್ವಾಸವು ನಿಮಗೆ ಆದೇಶಿಸುತ್ತಿರುವುದು ಎಷ್ಟೋ ನಿಕೃಷ್ಟವಾಗಿದೆ.
ئەرەپچە تەپسىرلەر:
قُلْ اِنْ كَانَتْ لَكُمُ الدَّارُ الْاٰخِرَةُ عِنْدَ اللّٰهِ خَالِصَةً مِّنْ دُوْنِ النَّاسِ فَتَمَنَّوُا الْمَوْتَ اِنْ كُنْتُمْ صٰدِقِیْنَ ۟
ಹೇಳಿರಿ, ಅಲ್ಲಾಹನ ಬಳಿಯಿರುವ ಪರಲೋಕ ಭವನವು ಇತರ ಜನರಿಗಿಲ್ಲದೆ ನಿಮಗೆ ಮಾತ್ರ ಮೀಸಲಾಗಿದ್ದರೆ; ನೀವು ಮರಣವನ್ನು ಬಯಸಿರಿ. ನೀವು ಸತ್ಯವಂತರಾಗಿದ್ದರೆ.
ئەرەپچە تەپسىرلەر:
وَلَنْ یَّتَمَنَّوْهُ اَبَدًا بِمَا قَدَّمَتْ اَیْدِیْهِمْ ؕ— وَاللّٰهُ عَلِیْمٌۢ بِالظّٰلِمِیْنَ ۟
ಆದರೆ ಅವರ ಕೈಗಳು ಮಾಡಿಟ್ಟಿರುವ ಪಾಪಗಳ ಪರಿಣಾಮವಾಗಿ ಅವರೆಂದಿಗೂ ಮರಣವನ್ನು ಬಯಸಲಾರರು ಮತ್ತು ಅಕ್ರಮಿಗಳ ಕುರಿತು ಅಲ್ಲಾಹನು ಚೆನ್ನಾಗಿ ಬಲ್ಲನು.
ئەرەپچە تەپسىرلەر:
وَلَتَجِدَنَّهُمْ اَحْرَصَ النَّاسِ عَلٰی حَیٰوةٍ ۛۚ— وَمِنَ الَّذِیْنَ اَشْرَكُوْا ۛۚ— یَوَدُّ اَحَدُهُمْ لَوْ یُعَمَّرُ اَلْفَ سَنَةٍ ۚ— وَمَا هُوَ بِمُزَحْزِحِهٖ مِنَ الْعَذَابِ اَنْ یُّعَمَّرَ ؕ— وَاللّٰهُ بَصِیْرٌ بِمَا یَعْمَلُوْنَ ۟۠
ಓ ಪೈಗಂಬರರೆ ಖಂಡಿತವಾಗಿಯೂ ನೀವು ಜನರ ಪೈಕಿ ಐಹಿಕ ಜೀವನದ ಬಗ್ಗೆ ಬಹುದೇವಾರಾಧಕರಿಗಿಂತಲೂ ಅವರನ್ನು (ಯಹೂದಿಯರನ್ನು) ಅತ್ಯಾಧಿಕ ಆಸೆ ಉಳ್ಳವರಾಗಿ ಕಾಣುವಿರಿ. ಅವರ ಪೈಕಿ ಪ್ರತಿಯೊಬ್ಬನೂ ಸಾವಿರ ವರ್ಷಗಳ ದೀರ್ಘಾಯುಷ್ಯವನ್ನು ಆಶಿಸುತ್ತಾನೆ. ಇನ್ನು ದೀರ್ಘಾಯುಷ್ಯವನ್ನು ನೀಡಲಾದರೂ ಅದು ಅವರನ್ನು ಯಾತನೆಯಿಂದ ಪಾರುಗೊಳಿಸದು, ಅಲ್ಲಾಹನು ಅವರು ಮಾಡುತ್ತಿರುವುದರ ಕುರಿತು ಸೂಕ್ಷö್ಮವಾಗಿ ವೀಕ್ಷಿಸುತ್ತಿದ್ದಾನೆ
ئەرەپچە تەپسىرلەر:
قُلْ مَنْ كَانَ عَدُوًّا لِّجِبْرِیْلَ فَاِنَّهٗ نَزَّلَهٗ عَلٰی قَلْبِكَ بِاِذْنِ اللّٰهِ مُصَدِّقًا لِّمَا بَیْنَ یَدَیْهِ وَهُدًی وَّبُشْرٰی لِلْمُؤْمِنِیْنَ ۟
ಹೇಳಿರಿ (ಓ ಪೈಗಂಬರರೆ) ಜಿಬ್ರೀಲ್‌ನ ಶತ್ರುವಾಗಿರುವವನಿಗೆ (ತಿಳಿದಿರಲಿ ಅವನಿಗೆ ವಿನಾಶವಿದೆ) ನಿಸ್ಸಂದೇಹವಾಗಿ ಇದನ್ನು (ಈ ಕುರ್‌ಆನನ್ನು) ಅವನು (ಜಿಬ್ರೀಲ್) ಅಲ್ಲಾಹನ ಆಜ್ಞೆಯ ಪ್ರಕಾರ ನಿಮ್ಮ ಹೃದಯದ ಮೇಲೆ ಇಳಿಸಿರುವನು. ಅದು, (ಕುರ್‌ಆನ್) ಇದಕ್ಕಿಂತ ಮುಂಚೆ ಅವತೀರ್ಣಗೊಂಡಿರುವ ದೈವಿಕ ಗ್ರಂಥಗಳನ್ನು ಧೃಢೀಕರಿಸುತ್ತದೆ. ಹಾಗೂ ಸತ್ಯವಿಶ್ವಾಸಿಗಳಿಗೆ ಸನ್ಮಾರ್ಗ ದರ್ಶಕವೂ ಸುವಾರ್ತೆಯೂ ಆಗಿದೆ.
ئەرەپچە تەپسىرلەر:
مَنْ كَانَ عَدُوًّا لِّلّٰهِ وَمَلٰٓىِٕكَتِهٖ وَرُسُلِهٖ وَجِبْرِیْلَ وَمِیْكٰىلَ فَاِنَّ اللّٰهَ عَدُوٌّ لِّلْكٰفِرِیْنَ ۟
ಯಾರು ಅಲ್ಲಾಹನಿಗೂ ಅವನ ದೂತರಿಗೂ, ಅವನ ಸಂದೇಶವಾಹಕರಿಗೂ, ಜಿಬ್ರೀಲನಿಗೂ, ಮೀಕಾಯೀಲನಿಗೂ ಶತ್ರುವಾಗಿರುತ್ತಾನೋ ಅಲ್ಲಾಹನು ಸಹ ಅಂತಹ ಸತ್ಯನಿಷೇಧಿಗಳ ಶತ್ರ‍್ರುವಾಗಿರುತ್ತಾನೆ.
ئەرەپچە تەپسىرلەر:
وَلَقَدْ اَنْزَلْنَاۤ اِلَیْكَ اٰیٰتٍۢ بَیِّنٰتٍ ۚ— وَمَا یَكْفُرُ بِهَاۤ اِلَّا الْفٰسِقُوْنَ ۟
(ಓ ಪೈಗಂಬರರೇ) ನಿಸ್ಸಂಶಯವಾಗಿಯು ನಾವು ನಿಮ್ಮೆಡೆಗೆ ಸುಸ್ಪಷ್ಟವಾದ ಪ್ರಮಾಣಗಳನ್ನು ಅವತೀರ್ಣಗೊಳಿಸಿರುತ್ತೇವೆ. ಮತ್ತು ದುಷ್ಟರ ಹೊರತು ಅವುಗಳನ್ನು ಇನ್ನಾರೂ ನಿಷೇಧಿಸುವುದಿಲ್ಲ.
ئەرەپچە تەپسىرلەر:
اَوَكُلَّمَا عٰهَدُوْا عَهْدًا نَّبَذَهٗ فَرِیْقٌ مِّنْهُمْ ؕ— بَلْ اَكْثَرُهُمْ لَا یُؤْمِنُوْنَ ۟
ಅವರು (ಯಹೂದಿಗಳು) ಯಾವುದಾದರೂ ಒಪ್ಪಂದವನ್ನು ಮಾಡಿದಾಗ ಅವರ ಪೈಕಿಯ ಒಂದಲ್ಲಾ ಒಂದು ಪಂಗಡವು ಅದನ್ನು ಮುರಿದು ಹಾಕಲಿಲ್ಲವೇ? ವಾಸ್ತವದಲ್ಲಿ ಅವರಲ್ಲಿ ಅಧಿಕ ಮಂದಿ ವಿಶ್ವಾಸವಿರಿಸುವುದಿಲ್ಲ.
ئەرەپچە تەپسىرلەر:
وَلَمَّا جَآءَهُمْ رَسُوْلٌ مِّنْ عِنْدِ اللّٰهِ مُصَدِّقٌ لِّمَا مَعَهُمْ نَبَذَ فَرِیْقٌ مِّنَ الَّذِیْنَ اُوْتُوا الْكِتٰبَ ۙۗ— كِتٰبَ اللّٰهِ وَرَآءَ ظُهُوْرِهِمْ كَاَنَّهُمْ لَا یَعْلَمُوْنَ ۟ؗ
ಅವರ ಬಳಿಗೆ ಅಲ್ಲಾಹನ ವತಿಯಿಂದ ಯಾವೊಬ್ಬ ಸಂದೇಶವಾಹಕನು ಅವರ ಬಳಿಯಿರುವ ಗ್ರಂಥವನ್ನು ಸತ್ಯವೆಂದು ಧೃಢೀಕರಿಸುವವನಾಗಿ ಬಂದಾಗ, ಗ್ರಂಥದವರ ಪೈಕಿ ಒಂದು ಗುಂಪು ತಮಗೇನೂ ತಿಳಿದಿಲ್ಲವೆಂಬAತೆ ಅಲ್ಲಾಹನ ಗ್ರಂಥವನ್ನು ತಮ್ಮ ಬೆನ್ನ ಹಿಂದೆ ಎಸೆದು ಬಿಟ್ಟಿತು.
ئەرەپچە تەپسىرلەر:
وَاتَّبَعُوْا مَا تَتْلُوا الشَّیٰطِیْنُ عَلٰی مُلْكِ سُلَیْمٰنَ ۚ— وَمَا كَفَرَ سُلَیْمٰنُ وَلٰكِنَّ الشَّیٰطِیْنَ كَفَرُوْا یُعَلِّمُوْنَ النَّاسَ السِّحْرَ ۗ— وَمَاۤ اُنْزِلَ عَلَی الْمَلَكَیْنِ بِبَابِلَ هَارُوْتَ وَمَارُوْتَ ؕ— وَمَا یُعَلِّمٰنِ مِنْ اَحَدٍ حَتّٰی یَقُوْلَاۤ اِنَّمَا نَحْنُ فِتْنَةٌ فَلَا تَكْفُرْ ؕ— فَیَتَعَلَّمُوْنَ مِنْهُمَا مَا یُفَرِّقُوْنَ بِهٖ بَیْنَ الْمَرْءِ وَزَوْجِهٖ ؕ— وَمَا هُمْ بِضَآرِّیْنَ بِهٖ مِنْ اَحَدٍ اِلَّا بِاِذْنِ اللّٰهِ ؕ— وَیَتَعَلَّمُوْنَ مَا یَضُرُّهُمْ وَلَا یَنْفَعُهُمْ ؕ— وَلَقَدْ عَلِمُوْا لَمَنِ اشْتَرٰىهُ مَا لَهٗ فِی الْاٰخِرَةِ مِنْ خَلَاقٍ ۫ؕ— وَلَبِئْسَ مَا شَرَوْا بِهٖۤ اَنْفُسَهُمْ ؕ— لَوْ كَانُوْا یَعْلَمُوْنَ ۟
ಶೈತಾನರು ಸುಲೈಮಾನರ ರಾಜ್ಯಭಾರದಲ್ಲಿ ಓದುತ್ತಿದ್ದಂತಹದನ್ನು (ಯಹೂದಿಯರು) ಹಿಂಬಾಲಿಸಿದರು. ಸುಲೈಮಾನರಂತು ಸತ್ಯನಿಷೇಧಿಸಿರಲಿಲ್ಲ. ಆದರೆ ಸತ್ಯ ನಿಷೇಧವು ಶೈತಾನರದ್ದಾಗಿತ್ತು. ಅವರು ಜನರಿಗೆ ಮಾಟವನ್ನು (ಜಾದುವನ್ನು) ಕಲಿಸುತ್ತಿದ್ದರು. ಮತ್ತು ಬಾಬಿಲೋನಿಯಾದಲ್ಲಿದ್ದ ಹಾರೂತ್-ಮಾರೂತ್‌ರೆಂಬ ಇಬ್ಬರು ದೂತರ ಮೇಲೆ ಅವತೀರ್ಣಗೊಳಿಸಲಾಗಿದ್ದನ್ನೂ (ಯಹೂದಿಯರು) ಹಿಂಬಾಲಿಸಿದರು. ನಾವು (ಹಾರೂತ್-ಮಾರೂತ್) ಒಂದು ಪರೀಕ್ಷೆಯಾಗಿದ್ದೇವೆ. ಆದ್ದರಿಂದ “ನೀನು ಸತ್ಯ ನಿಷೇಧಿಸಬೇಡ” ಎಂದು ಹೇಳದೆ ಅವರಿಬ್ಬರೂ ಯಾವೊಬ್ಬನಿಗೂ ಜಾದುವನ್ನು ಕಲಿಸುತ್ತಿರಲಿಲ್ಲ. ನಂತರ ಜನರು ಅವರಿಂದ ಪತಿ ಪತ್ನಿಯ ನಡುವೆ ಒಡಕುಂಟು ಮಾಡುವುದನ್ನು ಕಲಿತುಕೊಳ್ಳುತ್ತಿದ್ದರು. ವಸ್ತುತಃ ಅವರು ಅಲ್ಲಾಹನು ಬಯಸದ ವಿನಃ ಅದರ ಮೂಲಕ ಯಾರೊಬ್ಬರಿಗೂ ಯಾವ ತೊಂದರೆಯನ್ನೂ ನೀಡಲಾರರು. ಅವರು ತಮಗೆ ಹಾನಿಯೊದಗಿಸುವುದನ್ನು ಮತ್ತು ಲಾಭ ನೀಡದಂತಹದನ್ನೂ ಕಲಿಯುತ್ತಿದ್ದರು ಮತ್ತು ಜಾದುವನ್ನು ಕಲಿಯುವವನಿಗೆ ಪರಲೋಕದಲ್ಲಿ ಯಾವುದೇ ಪಾಲು ಇಲ್ಲವೆಂಬುದನ್ನು ನಿಶ್ಚಯವಾಗಿಯು ಅವರು ತಿಳಿದಿದ್ದರು ಮತ್ತು ಅವರು ತಮ್ಮ ಆತ್ಮಗಳ ಬದಲಿಗೆ ಖರೀದಿಸಿದ್ದು ಎಷ್ಟೋ ನಿಕೃಷ್ಟವಾಗಿದೆ. ಅವರು ಅರಿಯುವವರಾಗಿದ್ದರೆ ಎಷ್ಟು ಚೆನ್ನಾಗಿತ್ತು.
ئەرەپچە تەپسىرلەر:
وَلَوْ اَنَّهُمْ اٰمَنُوْا وَاتَّقَوْا لَمَثُوْبَةٌ مِّنْ عِنْدِ اللّٰهِ خَیْرٌ ؕ— لَوْ كَانُوْا یَعْلَمُوْنَ ۟۠
ಮತ್ತು ನಿಜವಾಗಿಯು ಅವರು ಸತ್ಯವಿಶ್ವಾಸಿಗಳಾಗಿದ್ದರೆ ಹಾಗೂ ಭಯ ಭಕ್ತಿ ಪಾಲಿಸುವವರಾಗಿದ್ದರೆ ಅಲ್ಲಾಹನಿಂದ ಅವರಿಗೆ ಅತ್ಯುತ್ತಮ ಪ್ರತಿಫಲ ದೊರಕುತ್ತಿತ್ತು. ಅವರು ಅರಿಯುತ್ತಿದ್ದರೆ!
ئەرەپچە تەپسىرلەر:
یٰۤاَیُّهَا الَّذِیْنَ اٰمَنُوْا لَا تَقُوْلُوْا رَاعِنَا وَقُوْلُوا انْظُرْنَا وَاسْمَعُوْا ؕ— وَلِلْكٰفِرِیْنَ عَذَابٌ اَلِیْمٌ ۟
ಓ ಸತ್ಯವಿಶ್ವಾಸಿಗಳೇ ನೀವು (ಪೈಗಂಬರ(ಸ)ರನ್ನು ಸಂಭೋಧಿಸುತ್ತಾ) 'ರಾಯಿನಾ' ಎಂದು ಹೇಳಬೇಡಿರಿ. ಆದರೆ ನೀವು 'ಉಂಜರ‍್ನಾ' ಅರ್ಥಾತ್ ನಮ್ಮೆಡೆಗೆ ನೋಡಿರಿ ಎಂದು ಹೇಳಿರಿ ಮತ್ತು ಗಮನಕೊಟ್ಟು ಆಲಿಸಿರಿ ಮತ್ತು ಸತ್ಯ ನಿಷೇಧಿಗಳಿಗೆ ವೇದನಾಜನಕ ಯಾತನೆಯಿದೆ.
ئەرەپچە تەپسىرلەر:
مَا یَوَدُّ الَّذِیْنَ كَفَرُوْا مِنْ اَهْلِ الْكِتٰبِ وَلَا الْمُشْرِكِیْنَ اَنْ یُّنَزَّلَ عَلَیْكُمْ مِّنْ خَیْرٍ مِّنْ رَّبِّكُمْ ؕ— وَاللّٰهُ یَخْتَصُّ بِرَحْمَتِهٖ مَنْ یَّشَآءُ ؕ— وَاللّٰهُ ذُو الْفَضْلِ الْعَظِیْمِ ۟
ನಿಮ್ಮ ಮೇಲೆ ನಿಮ್ಮ ಪ್ರಭುವಿನಿಂದ ಯಾವುದೇ ಒಳಿತು ಅವತೀರ್ಣ ಗೊಳ್ಳುವುದನ್ನು ಗ್ರಂಥದವರ ಪೈಕಿ ಸತ್ಯ ನಿಷೇಧಿಸಿದವರಾಗಲಿ, ಬಹುದೇವರಾಧಕರಾಗಲಿ ಇಷ್ಟಪಡಲಾರರು. ಅಲ್ಲಾಹನು ತನ್ನ ವಿಶೇಷ ಕಾರುಣ್ಯವನ್ನು ತಾನಿಚ್ಛಿಸಿದವರಿಗೆ ದಯಪಾಲಿಸುತ್ತಾನೆ. ಅಲ್ಲಾಹನು ಮಹಾ ಅನುಗ್ರಹ ದಾತನಾಗಿದ್ದಾನೆ.
ئەرەپچە تەپسىرلەر:
مَا نَنْسَخْ مِنْ اٰیَةٍ اَوْ نُنْسِهَا نَاْتِ بِخَیْرٍ مِّنْهَاۤ اَوْ مِثْلِهَا ؕ— اَلَمْ تَعْلَمْ اَنَّ اللّٰهَ عَلٰی كُلِّ شَیْءٍ قَدِیْرٌ ۟
ನಾವು ರದ್ದು ಮಾಡಿದ ಅಥವಾ ಮರೆಸಿಬಿಟ್ಟ ಸೂಕ್ತದ ಬದಲಿಗೆ ನಾವು ಅದಕ್ಕಿಂತಲೂ ಉತ್ತಮವಾದುದನ್ನು ಅಥವಾ ಅದಕ್ಕೆ ಸಮಾನವಾದುದನ್ನು ತರುತ್ತೇವೆ. ನಿಜವಾಗಿಯು ಅಲ್ಲಾಹನು ಸಕಲ ವಿಷಯಗಳ ಮೇಲೆ ಸಾಮರ್ಥ್ಯವುಳ್ಳವನಾಗಿದ್ದಾನೆಂದು ನೀವು ತಿಳಿದಿಲ್ಲವೇ?
ئەرەپچە تەپسىرلەر:
اَلَمْ تَعْلَمْ اَنَّ اللّٰهَ لَهٗ مُلْكُ السَّمٰوٰتِ وَالْاَرْضِ ؕ— وَمَا لَكُمْ مِّنْ دُوْنِ اللّٰهِ مِنْ وَّلِیٍّ وَّلَا نَصِیْرٍ ۟
ಆಕಾಶಗಳ ಭೂಮಿಯ ಅಧಿಪತ್ಯವು ಅಲ್ಲಾಹನಿಗೆ ಮಾತ್ರವಿದೆಯೆಂದು ಮತ್ತು ನಿಮಗೆ ಅಲ್ಲಾಹನ ಹೊರತು ಇನ್ನಾವ ರಕ್ಷಕ ಮಿತ್ರನಾಗಲೀ, ಸಹಾಯಕನಾಗಲಿ ಇಲ್ಲೆವೆಂದು ನೀವು ಅರಿತಿಲ್ಲವೇ?
ئەرەپچە تەپسىرلەر:
اَمْ تُرِیْدُوْنَ اَنْ تَسْـَٔلُوْا رَسُوْلَكُمْ كَمَا سُىِٕلَ مُوْسٰی مِنْ قَبْلُ ؕ— وَمَنْ یَّتَبَدَّلِ الْكُفْرَ بِالْاِیْمَانِ فَقَدْ ضَلَّ سَوَآءَ السَّبِیْلِ ۟
ಇದಕ್ಕೆ ಮೊದಲು (ಪೈಗಂಬರ್) ಮೂಸಾರವರೊಂದಿಗೆ ಪ್ರಶ್ನಿಸಲಾದಂತೆ ನೀವು ನಿಮ್ಮ ಸಂದೇಶವಾಹಕರೊAದಿಗೆ ಪ್ರಶ್ನಿಸುತ್ತೀರಾ? ಯಾರು ಸತ್ಯವಿಶ್ವಾಸದ ಬದಲಿಗೆ ಸತ್ಯನಿಷೇಧವನ್ನು ಕೈಗೊಳ್ಳುತ್ತಾನೋ ಅವನು ನೇರಮಾರ್ಗದಿಂದ ಭ್ರಷ್ಟನಾಗಿ ಬಿಡುತ್ತಾನೆ.
ئەرەپچە تەپسىرلەر:
وَدَّ كَثِیْرٌ مِّنْ اَهْلِ الْكِتٰبِ لَوْ یَرُدُّوْنَكُمْ مِّنْ بَعْدِ اِیْمَانِكُمْ كُفَّارًا ۖۚ— حَسَدًا مِّنْ عِنْدِ اَنْفُسِهِمْ مِّنْ بَعْدِ مَا تَبَیَّنَ لَهُمُ الْحَقُّ ۚ— فَاعْفُوْا وَاصْفَحُوْا حَتّٰی یَاْتِیَ اللّٰهُ بِاَمْرِهٖ ؕ— اِنَّ اللّٰهَ عَلٰی كُلِّ شَیْءٍ قَدِیْرٌ ۟
ಗ್ರಂಥದವರಲ್ಲಿ (ಯಹೂದಿಯರಲ್ಲಿ) ಅಧಿಕ ಮಂದಿ ತಮಗೆ ಸತ್ಯವು ಸ್ಪಷ್ಟವಾದ ಬಳಿಕವೂ ಕೇವಲ ತಮ್ಮ ಅಸೂಯೆಯ ನಿಮಿತ್ತ ನೀವು ವಿಶ್ವಾಸವಿರಿಸಿದ ಬಳಿಕ ನಿಮ್ಮನ್ನು ಅವಿಶ್ವಾಸಿಗಳನ್ನಾಗಿ ಮಾಡಲು ಬಯಸುತ್ತಾರೆ. ಆದ್ದರಿಂದ ಅಲ್ಲಾಹನು ತನ್ನ ಆಜ್ಞೆಯನ್ನು ಜಾರಿಗೊಳಿಸುವವರೆಗೆ ನೀವು ಮನ್ನಿಸಿರಿ ಹಾಗೂ ಬಿಟ್ಟುಬಿಡಿರಿ. ನಿಸ್ಸಂದೇಹವಾಗಿಯು ಅಲ್ಲಾಹನು ಸಕಲ ವಸ್ತುಗಳ ಮೇಲೆ ಸಾಮರ್ಥ್ಯವುಳ್ಳವನಾಗಿದ್ದಾನೆ.
ئەرەپچە تەپسىرلەر:
وَاَقِیْمُوا الصَّلٰوةَ وَاٰتُوا الزَّكٰوةَ ؕ— وَمَا تُقَدِّمُوْا لِاَنْفُسِكُمْ مِّنْ خَیْرٍ تَجِدُوْهُ عِنْدَ اللّٰهِ ؕ— اِنَّ اللّٰهَ بِمَا تَعْمَلُوْنَ بَصِیْرٌ ۟
ಮತ್ತು ನೀವು ನಮಾಝ್‌ಗಳನ್ನು ಸಂಸ್ಥಾಪಿಸಿರಿ, ಝಕಾತ್ ಪಾವತಿಸಿರಿ ಮತ್ತು ನೀವು ನಿಮಗೋಸ್ಕರ ಮುಂಗಡವಾಗಿ ಯಾವುದೇ ಒಳಿತನ್ನು ಕಳುಹಿಸಿದರೂ ಅದನ್ನು ಅಲ್ಲಾಹನ ಬಳಿ ಪಡೆಯಲಿದ್ದೀರಿ. ನಿಸ್ಸಂಶಯವಾಗಿಯು ಅಲ್ಲಾಹನು ನಿಮ್ಮ ಕರ್ಮಗಳನ್ನು ಸೂಕ್ಷö್ಮವಾಗಿ ವೀಕ್ಷಿಸುತ್ತಿದ್ದಾನೆ.
ئەرەپچە تەپسىرلەر:
وَقَالُوْا لَنْ یَّدْخُلَ الْجَنَّةَ اِلَّا مَنْ كَانَ هُوْدًا اَوْ نَصٰرٰی ؕ— تِلْكَ اَمَانِیُّهُمْ ؕ— قُلْ هَاتُوْا بُرْهَانَكُمْ اِنْ كُنْتُمْ صٰدِقِیْنَ ۟
ಅವರು ಹೇಳುತ್ತಾರೆ; ಯಹೂದಿ ಮತ್ತು ಕ್ರೆöÊಸ್ತನಾಗಿರುವವನ ಹೊರತು ಇನ್ನಾರೂ ಸ್ವರ್ಗವನ್ನು ಪ್ರವೇಶಿಸಲಾರನು. ಇದು ಕೇವಲ ಅವರ ಮನದಾಸೆ ಮಾತ್ರವಾಗಿದೆ. ನೀವು ಸತ್ಯವಾದಿಗಳಾಗಿದ್ದರೆ ಯಾವುದಾದದರೂ ಪುರಾವೆಯನ್ನು ತನ್ನಿರಿ ಎಂದು ಅವರೊಡನೆ ಕೇಳಿರಿ.
ئەرەپچە تەپسىرلەر:
بَلٰی ۗ— مَنْ اَسْلَمَ وَجْهَهٗ لِلّٰهِ وَهُوَ مُحْسِنٌ فَلَهٗۤ اَجْرُهٗ عِنْدَ رَبِّهٖ ۪— وَلَا خَوْفٌ عَلَیْهِمْ وَلَا هُمْ یَحْزَنُوْنَ ۟۠
ಹಾಗಲ್ಲ, ಯಾರು ತನ್ನ ಮುಖವನ್ನು ಪ್ರಾಮಾಣಿಕವಾಗಿ ಅಲ್ಲಾಹನಿಗೆ ಸಮರ್ಪಿಸಿಕೊಳ್ಳುತ್ತಾನೋ ನಿಸ್ಸಂಶಯವಾಗಿಯು ಅವನಿಗೆ ಅವನ ಪ್ರಭುವು ಪರಿಪೂರ್ಣ ಪ್ರತಿಫಲ ನೀಡುವನು. ಅವನ ಮೇಲೆ ಯಾವುದೇ ಭಯ ಮತ್ತು ವ್ಯಥೆ ಇರದು.
ئەرەپچە تەپسىرلەر:
وَقَالَتِ الْیَهُوْدُ لَیْسَتِ النَّصٰرٰی عَلٰی شَیْءٍ ۪— وَّقَالَتِ النَّصٰرٰی لَیْسَتِ الْیَهُوْدُ عَلٰی شَیْءٍ ۙ— وَّهُمْ یَتْلُوْنَ الْكِتٰبَ ؕ— كَذٰلِكَ قَالَ الَّذِیْنَ لَا یَعْلَمُوْنَ مِثْلَ قَوْلِهِمْ ۚ— فَاللّٰهُ یَحْكُمُ بَیْنَهُمْ یَوْمَ الْقِیٰمَةِ فِیْمَا كَانُوْا فِیْهِ یَخْتَلِفُوْنَ ۟
ಕ್ರೈಸ್ತರು ಸತ್ಯ ಮಾರ್ಗದಲ್ಲಿಲ್ಲ ಎಂದು ಯಹೂದರು ಹೇಳುತ್ತಾರೆ. ಮತ್ತು ಯಹೂದರು ಸತ್ಯ ಮಾರ್ಗದಲ್ಲಿಲ್ಲ ಎಂದು ಕ್ರೈಸ್ತರು ಹೇಳುತ್ತಾರೆ. ವಸ್ತುತಃ ಉಭಯ ಪಕ್ಷದವರು ಗ್ರಂಥವನ್ನು ಓದುತ್ತಾರೆ. ಮತ್ತು ಜ್ಞಾನವಿಲ್ಲದವರೂ ಇದೇ ಪ್ರಕಾರ ಇವರು ಹೇಳಿದಂತೆಯೇ ಹೇಳುತ್ತಾರೆ. ಇನ್ನು ಅಲ್ಲಾಹನು ಪುನರುತ್ಥಾನ ದಿನದಂದು ಇವರ ನಡುವೆ ಭಿನ್ನತೆ ಹೊಂದಿರುವ ವಿಚಾರದ ಕುರಿತು ತೀರ್ಪು ನೀಡಲಿರುವನು.
ئەرەپچە تەپسىرلەر:
وَمَنْ اَظْلَمُ مِمَّنْ مَّنَعَ مَسٰجِدَ اللّٰهِ اَنْ یُّذْكَرَ فِیْهَا اسْمُهٗ وَسَعٰی فِیْ خَرَابِهَا ؕ— اُولٰٓىِٕكَ مَا كَانَ لَهُمْ اَنْ یَّدْخُلُوْهَاۤ اِلَّا خَآىِٕفِیْنَ ؕ۬— لَهُمْ فِی الدُّنْیَا خِزْیٌ وَّلَهُمْ فِی الْاٰخِرَةِ عَذَابٌ عَظِیْمٌ ۟
ಅಲ್ಲಾಹನ ಮಸೀದಿಗಳಲ್ಲಿ ಅವನ ನಾಮವನ್ನು ಸ್ಮರಿಸುವುದರಿಂದ ತಡೆಯಲು ಹಾಗೂ ಅವುಗಳನ್ನು ಹಾಳುಗೆಡವಲು ಪ್ರಯತ್ನಿಸಿದವನಿಗಿಂತ ದೊಡ್ಡ ಅಕ್ರಮಿಯು ಇನ್ನಾರಿದ್ದಾನೆ? ಇಂತಹವರು ಭಯಗ್ರಸ್ತರಾಗಿಯೇ ಅವುಗಳಲ್ಲಿ ಪ್ರವೇಶಿಸಬೇಕಾಗಿದೆ. ಇವರಿಗೆ ಇಹಲೋಕದಲ್ಲೂ ಅಪಮಾನವಿದೆ ಮತ್ತು ಪರಲೋಕದಲ್ಲೂ ಮಹಾ ಯಾತನೆಯಿದೆ.
ئەرەپچە تەپسىرلەر:
وَلِلّٰهِ الْمَشْرِقُ وَالْمَغْرِبُ ۗ— فَاَیْنَمَا تُوَلُّوْا فَثَمَّ وَجْهُ اللّٰهِ ؕ— اِنَّ اللّٰهَ وَاسِعٌ عَلِیْمٌ ۟
ಪೂರ್ವ ಹಾಗೂ ಪಶ್ಚಿಮಗಳ ಒಡೆಯ ಅಲ್ಲಾಹನೇ ಆಗಿದ್ದಾನೆ.. ನೀವು ಯಾವ ದಿಕ್ಕಿಗೆ ಮುಖ ಮಾಡಿದರೂ ಅಲ್ಲಿ ಅಲ್ಲಾಹನ ಅಸ್ಥಿತ್ವವಿರುವುದು. ನಿಜವಾಗಿಯೂ ಅಲ್ಲಾಹನು ವಿಶಾಲನೂ, ಸರ್ವಜ್ಞಾನಿಯು ಆಗಿದ್ದಾನೆ.
ئەرەپچە تەپسىرلەر:
وَقَالُوا اتَّخَذَ اللّٰهُ وَلَدًا ۙ— سُبْحٰنَهٗ ؕ— بَلْ لَّهٗ مَا فِی السَّمٰوٰتِ وَالْاَرْضِ ؕ— كُلٌّ لَّهٗ قٰنِتُوْنَ ۟
ಅಲ್ಲಾಹನು ಪುತ್ರನನ್ನು ಹೊಂದಿದ್ದಾನೆAದು ಅವರು (ಕ್ರೆöÊಸ್ತರು) ಹೇಳುತ್ತಾರೆ; (ಇವುಗಳಿಂದ) ಅವನು ಪವಿತ್ರನು! ವಾಸ್ತವದಲ್ಲಿ ಆಕಾಶಗಳ ಮತ್ತು ಭೂಮಿಯಲ್ಲಿ ಇರುವುದೆಲ್ಲವೂ ಅವನ ಅಧೀನದಲ್ಲಿದೆ ಮತ್ತು ಪ್ರತಿಯೊಬ್ಬರೂ ಅವನಿಗೆ ವಿಧೇಯರಾಗಿದ್ದಾರೆ.
ئەرەپچە تەپسىرلەر:
بَدِیْعُ السَّمٰوٰتِ وَالْاَرْضِ ؕ— وَاِذَا قَضٰۤی اَمْرًا فَاِنَّمَا یَقُوْلُ لَهٗ كُنْ فَیَكُوْنُ ۟
ಆಕಾಶಗಳನ್ನು ಹಾಗೂ ಭೂಮಿಯನ್ನು ಪೂರ್ವ ಮಾದರಿಯಿಲ್ಲದೇ ಸೃಷ್ಟಿಸಿದವನು ಅವನೇ, ಅವನು ಯಾವುದೇ ಕಾರ್ಯವನ್ನು ನಿರ್ಧರಿಸಿಕೊಂಡರೆ ಅದಕ್ಕೆ 'ಆಗು' ಎಂದು ಹೇಳುತ್ತಾನೆ. ಅದು ಆಗಿ ಬಿಡುತ್ತದೆ.
ئەرەپچە تەپسىرلەر:
وَقَالَ الَّذِیْنَ لَا یَعْلَمُوْنَ لَوْلَا یُكَلِّمُنَا اللّٰهُ اَوْ تَاْتِیْنَاۤ اٰیَةٌ ؕ— كَذٰلِكَ قَالَ الَّذِیْنَ مِنْ قَبْلِهِمْ مِّثْلَ قَوْلِهِمْ ؕ— تَشَابَهَتْ قُلُوْبُهُمْ ؕ— قَدْ بَیَّنَّا الْاٰیٰتِ لِقَوْمٍ یُّوْقِنُوْنَ ۟
ಅಲ್ಲಾಹನು ನಮ್ಮೊಂದಿಗೆ ಏಕೆ ಮಾತನಾಡುವುದಿಲ್ಲ ಅಥವಾ ನಮ್ಮ ಬಳಿಗೆ ಒಂದು ದೃಷ್ಟಾಂತವನ್ನು ಏಕೆ ತರುವುದಿಲ್ಲವೆಂದು ಅಜ್ಞಾನಿಗಳು ಕೇಳುತ್ತಾರೆ. ಇದೇ ಪ್ರಕಾರ ಇಂತಹದೇ ಮಾತನ್ನು ಇವರಿಗಿಂತ ಮುಂಚಿನವರು ಹೇಳಿದ್ದರು. ಇವರ ಮತ್ತು ಅವರ ಹೃದಯಗಳು ಪರಸ್ಪರ ಒಂದೇ ತೆರನಾಗಿವೆ. ವಾಸ್ತವದಲ್ಲಿ ನಾವು ದೃಢ ನಂಬಿಕೆಯುಳ್ಳವರಿಗೆ ದೃಷ್ಟಾಂತಗಳನ್ನು ವಿವರಿಸಿ ಕೊಟ್ಟಿದ್ದೇವೆ.
ئەرەپچە تەپسىرلەر:
اِنَّاۤ اَرْسَلْنٰكَ بِالْحَقِّ بَشِیْرًا وَّنَذِیْرًا ۙ— وَّلَا تُسْـَٔلُ عَنْ اَصْحٰبِ الْجَحِیْمِ ۟
ಖಂಡಿತವಾಗಿಯೂ ನಾವು ನಿಮ್ಮನ್ನು ಸತ್ಯದೊಂದಿಗೆ ಸುವಾರ್ತೆ ಕೊಡುವವರಾಗಿ, ಎಚ್ಚರಿಕೆ ನೀಡುವವರಾಗಿ ಕಳುಹಿಸಿದ್ದೇವೆ. ಮತ್ತು ನರಕವಾಸಿಗಳ ಕುರಿತು ನೀವು ವಿಚಾರಣೆಗೊಳಗಾಗುವುದಿಲ್ಲ.
ئەرەپچە تەپسىرلەر:
وَلَنْ تَرْضٰی عَنْكَ الْیَهُوْدُ وَلَا النَّصٰرٰی حَتّٰی تَتَّبِعَ مِلَّتَهُمْ ؕ— قُلْ اِنَّ هُدَی اللّٰهِ هُوَ الْهُدٰی ؕ— وَلَىِٕنِ اتَّبَعْتَ اَهْوَآءَهُمْ بَعْدَ الَّذِیْ جَآءَكَ مِنَ الْعِلْمِ ۙ— مَا لَكَ مِنَ اللّٰهِ مِنْ وَّلِیٍّ وَّلَا نَصِیْرٍ ۟ؔ
ಯಹೂದರು ಮತ್ತು ಕ್ರೆöÊಸ್ತರು ನೀವು ಅವರ ಸಂಪ್ರದಾಯವನ್ನು ಅನುಸರಿಸುವವರೆಗೆೆ ಎಂದಿಗೂ ನಿಮ್ಮಿಂದ ಸಂತುಷ್ಟರಾಗಲಾರರು. ಹೇಳಿರಿ ವಾಸ್ತವದಲ್ಲಿ ಅಲ್ಲಾಹನ ಮಾರ್ಗದರ್ಶನವೇ ನಿಜವಾದ ಮಾರ್ಗದರ್ಶನವಾಗಿದೆ. ಮತ್ತು ನಿಮ್ಮ ಬಳಿಗೆ ಜ್ಞಾನ ಬಂದ ಬಳಿಕವೂ ಅವರ ಸ್ವಇಚ್ಛೆಯನ್ನು ಅನುಸರಿಸಿದರೆ ನಿಮಗೆ ಅಲ್ಲಾಹನ ಬಳಿ ಯಾವೊಬ್ಬ ರಕ್ಷಕ ಮಿತ್ರನಾಗಲೀ, ಯಾವೊಬ್ಬ ಸಹಾಯಕನಾಗಲೀ ಇರಲಾರನು.
ئەرەپچە تەپسىرلەر:
اَلَّذِیْنَ اٰتَیْنٰهُمُ الْكِتٰبَ یَتْلُوْنَهٗ حَقَّ تِلَاوَتِهٖ ؕ— اُولٰٓىِٕكَ یُؤْمِنُوْنَ بِهٖ ؕ— وَمَنْ یَّكْفُرْ بِهٖ فَاُولٰٓىِٕكَ هُمُ الْخٰسِرُوْنَ ۟۠
ನಾವು ಯಾರಿಗೆ ಗ್ರಂಥವನ್ನು ದಯಪಾಲಿಸಿದ್ದೆವೆಯೋ ಅವರು ಅದರ ಪಾರಾಯಣ ಕ್ರಮದಂತೆ ಪಠಿಸುತ್ತಿರುವರು ಅವರು ಈ ಗ್ರಂಥದಲ್ಲೂ ವಿಶ್ವಾಸವಿರಿಸುತ್ತಾರೆ ಮತ್ತು ಯಾರು ಇದರಲ್ಲಿ ಅವಿಶ್ವಾಸ ಹೊಂದುತ್ತಾರೋ ಅವರೇ ನಷ್ಟ ಹೊಂದಿದವರಾಗಿರುತ್ತಾರೆ.
ئەرەپچە تەپسىرلەر:
یٰبَنِیْۤ اِسْرَآءِیْلَ اذْكُرُوْا نِعْمَتِیَ الَّتِیْۤ اَنْعَمْتُ عَلَیْكُمْ وَاَنِّیْ فَضَّلْتُكُمْ عَلَی الْعٰلَمِیْنَ ۟
ಓ ಇಸ್ರಾಯೀಲ್ ಸಂತತಿಗಳೇ ನಾನು ನಿಮ್ಮ ಮೇಲೆ ಅನುಗ್ರಹಿಸಿದ ನನ್ನ ಅನುಗ್ರಹವನ್ನು ಸ್ಮರಿಸಿರಿ, ನಾನು ನಿಮ್ಮನ್ನು ಸರ್ವಲೋಕದವರ ಮೇಲೆ ಶ್ರೇಷ್ಟತೆ ನೀಡಿದ್ದೆನು.
ئەرەپچە تەپسىرلەر:
وَاتَّقُوْا یَوْمًا لَّا تَجْزِیْ نَفْسٌ عَنْ نَّفْسٍ شَیْـًٔا وَّلَا یُقْبَلُ مِنْهَا عَدْلٌ وَّلَا تَنْفَعُهَا شَفَاعَةٌ وَّلَا هُمْ یُنْصَرُوْنَ ۟
ಯಾವೊಬ್ಬ ವ್ಯಕ್ತಿಯು ಇನ್ನೊಬ್ಬ ವ್ಯಕ್ತಿಗೆ ಯಾವ ಪ್ರಯೋಜನಕ್ಕೂ ಬಾರದ ಯಾವೊಬ್ಬ ವ್ಯಕ್ತಿಯಿಂದ ಯಾವ ಪರಿಹಾರ ಧನವನ್ನು ಸ್ವೀಕರಿಸಲಾಗದ ಯಾರ ಶಿಫಾರಸ್ಸು ಪ್ರಯೋಜನವಾಗದ ಯಾರಿಗೂ ಸಹಾಯ ನೀಡಲಾಗದಂತಹ ಆ ಒಂದು ದಿನವನ್ನು ನೀವು ಭಯಪಡಿರಿ.
ئەرەپچە تەپسىرلەر:
وَاِذِ ابْتَلٰۤی اِبْرٰهٖمَ رَبُّهٗ بِكَلِمٰتٍ فَاَتَمَّهُنَّ ؕ— قَالَ اِنِّیْ جَاعِلُكَ لِلنَّاسِ اِمَامًا ؕ— قَالَ وَمِنْ ذُرِّیَّتِیْ ؕ— قَالَ لَا یَنَالُ عَهْدِی الظّٰلِمِیْنَ ۟
ಇಬ್ರಾಹೀಮರನ್ನು ಅವರ ಪ್ರಭುವು ಅನೇಕ ಆಜ್ಞೆಗಳ ಮೂಲಕ ಪರೀಕ್ಷೆಗೊಳಪಡಿಸಿದ ಸಂದರ್ಭವನ್ನು ಸ್ಮರಿಸಿರಿ, ಅವರು ಅವೆಲ್ಲವನ್ನೂ ನೆರವೇರಿಸಿದರು. ಅಲ್ಲಾಹನು ಹೇಳಿದನು; ನಿಶ್ಚಯವಾಗಿಯು ನಾವು ನಿಮ್ಮನ್ನು ಸಕಲ ಜನರಿಗೆ ನಾಯಕನನ್ನಾಗಿ ನಿಶ್ಚಯಿಸುವವನಿದ್ದೇನೆ. ಅವರು ಹೇಳಿದರು; ನನ್ನ ಸಂತತಿಗಳಿಗೂ ಇದೇ ವಾಗ್ದಾನವೇ? ಸರಿ ಆದರೆ ನನ್ನ ಒಪ್ಪಂದವು ಅಕ್ರಮಿ ಸಂತತಿಗಳಿಗೆ ಅನ್ವಯಿಸುವುದಿಲ್ಲ ಎಂದನು.
ئەرەپچە تەپسىرلەر:
وَاِذْ جَعَلْنَا الْبَیْتَ مَثَابَةً لِّلنَّاسِ وَاَمْنًا ؕ— وَاتَّخِذُوْا مِنْ مَّقَامِ اِبْرٰهٖمَ مُصَلًّی ؕ— وَعَهِدْنَاۤ اِلٰۤی اِبْرٰهٖمَ وَاِسْمٰعِیْلَ اَنْ طَهِّرَا بَیْتِیَ لِلطَّآىِٕفِیْنَ وَالْعٰكِفِیْنَ وَالرُّكَّعِ السُّجُوْدِ ۟
ನಾವು ಕಾಬಾಭವನವನ್ನು ಜನರಿಗೆ ಪುಣ್ಯ ಹಾಗೂ ಶಾಂತಿಯ ಸಮ್ಮಿಲನ ಕೇಂದ್ರವನ್ನಾಗಿ ನಿಶ್ಚಿಯಿಸಿದೆವು. ನೀವು ಇಬ್ರಾಹೀಮರ ಆರಾಧನ ಸ್ಥಳವನ್ನು ನಮಾಝ್‌ನ ಸ್ಥಳವನ್ನಾಗಿ ಮಾಡಿಕೊಳ್ಳಿರಿ ಮತ್ತು ನನ್ನ ಭವನವನ್ನು ಪ್ರದಕ್ಷಣೆಗೈಯ್ಯುವವರಿಗಾಗಿಯು, ಧ್ಯಾನಸ್ಥರಾಗಿ ಕುಳಿತುಕೊಳ್ಳುವವರಿಗಾಗಿಯು ಬಾಗುವವರಿಗಾಗಿಯು ಮತ್ತು ಸಾಷ್ಟಾಂಗ ಮಾಡುವವರಿಗಾಗಿಯು ಸ್ವಚ್ಛವಾಗಿಡಿರಿ ಎಂದು ನಾವು ಇಬ್ರಾಹೀಮ್ ಮತ್ತು ಇಸ್ಮಾಯೀಲರಿಗೆ ಆದೇಶ ನೀಡಿದೆವು.
ئەرەپچە تەپسىرلەر:
وَاِذْ قَالَ اِبْرٰهٖمُ رَبِّ اجْعَلْ هٰذَا بَلَدًا اٰمِنًا وَّارْزُقْ اَهْلَهٗ مِنَ الثَّمَرٰتِ مَنْ اٰمَنَ مِنْهُمْ بِاللّٰهِ وَالْیَوْمِ الْاَخِرِ ؕ— قَالَ وَمَنْ كَفَرَ فَاُمَتِّعُهٗ قَلِیْلًا ثُمَّ اَضْطَرُّهٗۤ اِلٰی عَذَابِ النَّارِ ؕ— وَبِئْسَ الْمَصِیْرُ ۟
(ಆಗ ಇಬ್ರಾಹೀಮ್(ಅ) ಹೇಳಿದರು) ನನ್ನ ಪ್ರಭುವೇ, ಈ ಪ್ರದೇಶವನ್ನು ಶಾಂತಿಯ ನಾಡನ್ನಾಗಿ ಮಾಡು ಮತ್ತು ಇದರ ವಾಸಿಗಳ ಪೈಕಿ ಅಲ್ಲಾಹನಲ್ಲೂ, ಅಂತ್ಯದಿನದಲ್ಲೂ ವಿಶ್ವಾಸವಿರಿಸುವವರಿಗೆ ಫಲ ವೃಕ್ಷಾದಿಗಳಿಂದ ಆಹಾರವನ್ನು ನೀಡು ಎಂದು ಪ್ರಾರ್ಥಿಸಿದ ಸಂದರ್ಭವನ್ನು ಸ್ಮರಿಸಿರಿ. ಅಲ್ಲಾಹನು ಹೇಳಿದನು. ನಾನು ಸತ್ಯನಿಷೇಧಿಗಳಿಗೂ ತಾತ್ಕಾಲಿಕ ಸುಖಭೋಗವನ್ನು ನೀಡುವೆನು ಅನಂತರ (ಸತ್ಯನಿಷೇಧದ ನಿಮಿತ್ತ) ಅವರನ್ನು ನರಕ ಯಾತನೆಯೆಡೆಗೆ ಬರಲು ಅನಿವಾರ್ಯಗೊಳಿಸುವೆನು. ಅವರು ತಲುಪುವ ಸ್ಥಳವು ಅತೀ ನಿಕೃಷ್ಟವಾಗಿದೆ.
ئەرەپچە تەپسىرلەر:
وَاِذْ یَرْفَعُ اِبْرٰهٖمُ الْقَوَاعِدَ مِنَ الْبَیْتِ وَاِسْمٰعِیْلُ ؕ— رَبَّنَا تَقَبَّلْ مِنَّا ؕ— اِنَّكَ اَنْتَ السَّمِیْعُ الْعَلِیْمُ ۟
ಸ್ಮರಿಸಿರಿ ಇಬ್ರಾಹೀಮ್(ಅ) ಮತ್ತು ಇಸ್ಮಾಯೀಲ(ಅ)ರು ಕಾಅಬಾದ ಅಡಿಪಾಯವನ್ನು ಎರಿಸುತ್ತಾ ಹೀಗೆ ಪ್ರಾರ್ಥಿಸುತ್ತಿದ್ದರು; ನಮ್ಮ ಪ್ರಭುವೇ, ನಮ್ಮಿಂದ ಈ ಕಾರ್ಯವನ್ನು ಸ್ವೀಕರಿಸು. ನೀನು ಸರ್ವವನ್ನಾಲಿಸುವವನೂ, ಸರ್ವಜ್ಞಾನಿಯು ಆಗಿರುವೆ.
ئەرەپچە تەپسىرلەر:
رَبَّنَا وَاجْعَلْنَا مُسْلِمَیْنِ لَكَ وَمِنْ ذُرِّیَّتِنَاۤ اُمَّةً مُّسْلِمَةً لَّكَ ۪— وَاَرِنَا مَنَاسِكَنَا وَتُبْ عَلَیْنَا ۚ— اِنَّكَ اَنْتَ التَّوَّابُ الرَّحِیْمُ ۟
ನಮ್ಮ ಪ್ರಭುವೇ, ನಮ್ಮನ್ನು ನಿನ್ನ ವಿಧೇಯದಾಸರನ್ನಾಗಿ ಮಾಡು ಮತ್ತು ನಮ್ಮ ಸಂತತಿಗಳಿAದಲೂ ಒಂದು ಸಮುದಾಯವನ್ನು ನಿನಗೆ ವಿಧೇಯರನ್ನಾಗಿ ಮಾಡು ಹಾಗೂ ನಮಗೆ ಆರಾಧನಾ ಕ್ರಮಗಳನ್ನು ತೋರಿಸಿ ಕೊಡು ಮತ್ತು ನಮ್ಮ ಪಶ್ಚಾತ್ತಾಪವನ್ನು ಸ್ವೀಕರಿಸು. ನಿಸ್ಸಂಶಯವಾಗಿಯು ನೀನೇ ಪಶ್ಚಾತ್ತಾಪ ಸ್ವೀಕರಿಸುವವನು, ಕರುಣಾನಿಧಿಯು ಆಗಿರುವೆ.
ئەرەپچە تەپسىرلەر:
رَبَّنَا وَابْعَثْ فِیْهِمْ رَسُوْلًا مِّنْهُمْ یَتْلُوْا عَلَیْهِمْ اٰیٰتِكَ وَیُعَلِّمُهُمُ الْكِتٰبَ وَالْحِكْمَةَ وَیُزَكِّیْهِمْ ؕ— اِنَّكَ اَنْتَ الْعَزِیْزُ الْحَكِیْمُ ۟۠
ನಮ್ಮ ಪ್ರಭುವೇ ಅವರಿಂದಲೇ ಒಬ್ಬ ಸಂದೇಶವಾಹಕನನ್ನು (ಅವರ ಮಾರ್ಗದರ್ಶನಕ್ಕಾಗಿ) ಅವರಲ್ಲಿ ನಿಯೋಗಿಸು. ಅವರು ಅವರ ಮುಂದೆ ನಿನ್ನ ಸೂಕ್ತಿಗಳನ್ನು ಓದಿ ಹೇಳುತ್ತಾ ಅವರಿಗೆ ಗ್ರಂಥವನ್ನು, ಸುಜ್ಞಾನವನ್ನೂ ಕಲಿಸುತ್ತಾ ಅವರನ್ನು ಸಂಸ್ಕರಿಸಲಿ. ವಾಸ್ತವದಲ್ಲಿ ನೀನು ಪ್ರತಾಪಶಾಲಿಯು, ಯುಕ್ತಿಪೂರ್ಣನೂ ಆಗಿರುವೆ.
ئەرەپچە تەپسىرلەر:
وَمَنْ یَّرْغَبُ عَنْ مِّلَّةِ اِبْرٰهٖمَ اِلَّا مَنْ سَفِهَ نَفْسَهٗ ؕ— وَلَقَدِ اصْطَفَیْنٰهُ فِی الدُّنْیَا ۚ— وَاِنَّهٗ فِی الْاٰخِرَةِ لَمِنَ الصّٰلِحِیْنَ ۟
ತನ್ನನ್ನು ತಾನೇ ಅವಿವೇಕಿಯನ್ನಾಗಿ ಮಾಡಿಕೊಂಡವನ ಹೊರತು ಇನ್ನಾರೂ ಇಬ್ರಾಹೀಮರ ಧರ್ಮದಿಂದ ವಿಮುಖನಾಗಬಲ್ಲ. ನಿಶ್ಚಯವಾಗಿಯು ನಾವು ಅವರನ್ನು ಇಹಲೋಕದಲ್ಲಿ ಆಯ್ದು ಕೊಂಡೆವು ಮತ್ತು ಪರಲೋಕದಲ್ಲೂ ಅವರು ಸಜ್ಜನರೊಂದಿಗಿರುವರು.
ئەرەپچە تەپسىرلەر:
اِذْ قَالَ لَهٗ رَبُّهٗۤ اَسْلِمْ ۙ— قَالَ اَسْلَمْتُ لِرَبِّ الْعٰلَمِیْنَ ۟
ಅವರಿಗೆ ಅವರ ಪ್ರಭುವು ಶರಣಾಗು ಎಂದು ಹೇಳಿದಾಗ (ತಕ್ಷಣ) ಸರ್ವಲೋಕಗಳ ಪ್ರಭುವಿಗೆ ನಾನು ಶರಣಾದೆನು ಎಂದು ಅವರು ಹೇಳಿದರು.
ئەرەپچە تەپسىرلەر:
وَوَصّٰی بِهَاۤ اِبْرٰهٖمُ بَنِیْهِ وَیَعْقُوْبُ ؕ— یٰبَنِیَّ اِنَّ اللّٰهَ اصْطَفٰی لَكُمُ الدِّیْنَ فَلَا تَمُوْتُنَّ اِلَّا وَاَنْتُمْ مُّسْلِمُوْنَ ۟ؕ
ಮತ್ತು ಇದೇ ಉಪದೇಶವನ್ನು ಇಬ್ರಾಹೀಮ್ (ಅ) ಮತ್ತು ಯಾಕೂಬ್(ಅ)ರವರು ತಮ್ಮ ಸಂತತಿಗಳಿಗೆ ನೀಡಿದರು; ಓ ನನ್ನಸಂತತಿಗಳೇ, ಅಲ್ಲಾಹನು ನಿಮಗೋಸ್ಕರ ಈ ಧರ್ಮವನ್ನು ಆಯ್ಕೆ ಮಾಡಿರುವನು. ಜಾಗೃತೆ! ನೀವು ಶರಾಣಾಗಿರುವ ಸ್ಥಿತಿಯಲ್ಲೇ ಮರಣ ಹೊಂದಬೇಕು ಎಂದರು.
ئەرەپچە تەپسىرلەر:
اَمْ كُنْتُمْ شُهَدَآءَ اِذْ حَضَرَ یَعْقُوْبَ الْمَوْتُ ۙ— اِذْ قَالَ لِبَنِیْهِ مَا تَعْبُدُوْنَ مِنْ بَعْدِیْ ؕ— قَالُوْا نَعْبُدُ اِلٰهَكَ وَاِلٰهَ اٰبَآىِٕكَ اِبْرٰهٖمَ وَاِسْمٰعِیْلَ وَاِسْحٰقَ اِلٰهًا وَّاحِدًا ۖۚ— وَّنَحْنُ لَهٗ مُسْلِمُوْنَ ۟
ನೀವು ಯಾಕೂಬರಿಗೆ ಮರಣವು ಸನ್ನಿಹಿತವಾದಾಗ ಹಾಜರಿದ್ದೀರಾ? ಅವರು ತಮ್ಮ ಮಕ್ಕಳಿಗೆ; ನೀವು ನನ್ನ ನಂತರ ಯಾರನ್ನು ಆರಾಧಿಸುವಿರಿ ಎಂದು ಕೇಳಿದಾಗ ಅವರ ಮಕ್ಕಳು ಹೇಳಿದರು; ನಾವು ನಿಮ್ಮ ಆರಾಧ್ಯನೂ, ನಿಮ್ಮ ಪಿತಾಮಹರಾದ ಇಬ್ರಾಹೀಮ್, ಇಸ್ಮಾಯೀಲ್, ಇಸ್‌ಹಾಕರ ಆರಾಧ್ಯನೂ ಆಗಿರುವ ಏಕೈಕ ಆರಾಧ್ಯನನ್ನು ಆರಾಧಿಸುತ್ತೇವೆ ಮತ್ತು ನಾವು ಅವನಿಗೆ ವಿಧೇಯರಾಗಿರುತ್ತೇವೆ ಎಂದರು.
ئەرەپچە تەپسىرلەر:
تِلْكَ اُمَّةٌ قَدْ خَلَتْ ۚ— لَهَا مَا كَسَبَتْ وَلَكُمْ مَّا كَسَبْتُمْ ۚ— وَلَا تُسْـَٔلُوْنَ عَمَّا كَانُوْا یَعْمَلُوْنَ ۟
ಆ ಸಮುದಾಯವೂ ಗತಿಸಿ ಹೋಗಿದೆ. ಅವರು ಸಂಪಾದಿಸಿದ್ದು ಅವರಿಗಿದೆ. ಮತ್ತು ನೀವು ಸಂಪಾದಿಸಿದ್ದು ನಿಮಗಿದೆ. ಅವರ ಕರ್ಮಗಳ ಕುರಿತು ನೀವು ವಿಚಾರಿಸಲ್ಪಡಲಾರಿರಿ.
ئەرەپچە تەپسىرلەر:
وَقَالُوْا كُوْنُوْا هُوْدًا اَوْ نَصٰرٰی تَهْتَدُوْا ؕ— قُلْ بَلْ مِلَّةَ اِبْرٰهٖمَ حَنِیْفًا ؕ— وَمَا كَانَ مِنَ الْمُشْرِكِیْنَ ۟
ನೀವು ಯಹೂದರು ಅಥವಾ ಕ್ರೆöÊಸ್ತರಾದರೆ ಮಾತ್ರ ಸನ್ಮಾರ್ಗ ಪಡೆಯುತ್ತೀರಿ ಎಂದು ಅವರು ಹೇಳುತ್ತಾರೆ. ಹೇಳಿರಿ (ಓ ಪೈಗಂಬರರೇ) (ನಾವಂತೂ) ಸತ್ಯದಲ್ಲಿ ಏಕಾಗ್ರಚಿತ್ತರಾಗಿದ್ದ, ಇಬ್ರಾಹೀಮ(ಅ)ರ ಮಾರ್ಗವನ್ನು ಅನುಸರಿಸುತ್ತೇವೆ. ಮತ್ತು ಅವರು ಬಹುದೇವಾರಾಧಕರಾಗಿರಲಿಲ್ಲ.
ئەرەپچە تەپسىرلەر:
قُوْلُوْۤا اٰمَنَّا بِاللّٰهِ وَمَاۤ اُنْزِلَ اِلَیْنَا وَمَاۤ اُنْزِلَ اِلٰۤی اِبْرٰهٖمَ وَاِسْمٰعِیْلَ وَاِسْحٰقَ وَیَعْقُوْبَ وَالْاَسْبَاطِ وَمَاۤ اُوْتِیَ مُوْسٰی وَعِیْسٰی وَمَاۤ اُوْتِیَ النَّبِیُّوْنَ مِنْ رَّبِّهِمْ ۚ— لَا نُفَرِّقُ بَیْنَ اَحَدٍ مِّنْهُمْ ؗ— وَنَحْنُ لَهٗ مُسْلِمُوْنَ ۟
(ಓ ಸತ್ಯವಿಶ್ವಾಸಿಗಳೇ) ಹೇಳಿರಿ; ನಾವು ಅಲ್ಲಾಹನಲ್ಲೂ, ನಮ್ಮ ಕಡೆಗೆ ಅವತೀರ್ಣಗೊಂಡಿರುವುದರಲ್ಲೂ, ಇಬ್ರಾಹೀಮ್, ಇಸ್ಮಾಯೀಲ್, ಇಸ್‌ಹಾಕ್ ಯಾಕೂಬ್ ಮತ್ತು ಯಾಕೂಬರ ಸಂತಿತಿಯೆಡೆಗೆ ಅವತೀರ್ಣ ಗೊಂಡಿರುವದರಲ್ಲೂ, ಮೂಸಾ, ಈಸಾ ಮತ್ತು ಎಲ್ಲಾ ಪ್ರವಾದಿಗಳೂ ತಮ್ಮ ಪ್ರಭುವಿನ ಕಡೆಯಿಂದ ಅವತೀರ್ಣಗೊಂಡಿರುವುದರಲ್ಲೂ ವಿಶ್ವಾಸವಿರಿಸಿರುತ್ತೇವೆ. ನಾವು ಅವರ ಪೈಕಿ ಯಾರ ನಡುವೆಯೂ ತಾರತಮ್ಯ ಮಾಡುವುದಿಲ್ಲ ಮತ್ತು ನಾವು ಅವನಿಗೆ ಸಂಪೂರ್ಣವಾಗಿ ವಿಧೇಯರಾಗಿದ್ದೇವೆ.
ئەرەپچە تەپسىرلەر:
فَاِنْ اٰمَنُوْا بِمِثْلِ مَاۤ اٰمَنْتُمْ بِهٖ فَقَدِ اهْتَدَوْا ۚ— وَاِنْ تَوَلَّوْا فَاِنَّمَا هُمْ فِیْ شِقَاقٍ ۚ— فَسَیَكْفِیْكَهُمُ اللّٰهُ ۚ— وَهُوَ السَّمِیْعُ الْعَلِیْمُ ۟ؕ
ನೀವು ವಿಶ್ವಾಸವಿರಿಸಿದಂತೆ ಅವರು ವಿಶ್ವಾಸವಿರಿಸಿದರೆ ಸನ್ಮಾರ್ಗ ಪಡೆದುಕೊಳ್ಳುವರು ಮತ್ತು ಅವರು ವಿಮುಖರಾಗುವುದಾದರೆ ವಿರೋಧದಲ್ಲಿದ್ದಾರೆ. ಅವರ ವಿರುದ್ಧ ನಿಮಗೆ ಸಹಾಯಕನಾಗಿ ಅಲ್ಲಾಹನೇ ಸಾಕು ಮತ್ತು ಅವನು ಸರ್ವವನ್ನಾಲಿಸುವವನೂ, ಸರ್ವಜ್ಞಾನಿಯು ಆಗಿದ್ದಾನೆ.
ئەرەپچە تەپسىرلەر:
صِبْغَةَ اللّٰهِ ۚ— وَمَنْ اَحْسَنُ مِنَ اللّٰهِ صِبْغَةً ؗ— وَّنَحْنُ لَهٗ عٰبِدُوْنَ ۟
ಅಲ್ಲಾಹನ ವರ್ಣವನ್ನು (ಧರ್ಮವನ್ನು) ಅಂಗೀಕರಿಸಿರಿ ಮತ್ತು ಅಲ್ಲಾಹನಿಗಿಂತ ಅತ್ಯುತ್ತಮ ವರ್ಣವು (ಧರ್ಮವು) ಯಾರದಿರಬಹುದು ಮತ್ತು ನಾವು ಅವನನ್ನು ಮಾತ್ರ ಆರಾಧಿಸುವವರಾಗಿದ್ದೇವೆ.
ئەرەپچە تەپسىرلەر:
قُلْ اَتُحَآجُّوْنَنَا فِی اللّٰهِ وَهُوَ رَبُّنَا وَرَبُّكُمْ ۚ— وَلَنَاۤ اَعْمَالُنَا وَلَكُمْ اَعْمَالُكُمْ ۚ— وَنَحْنُ لَهٗ مُخْلِصُوْنَ ۟ۙ
(ಓ ಪೈಗಂಬರರೇ) ಹೇಳಿರಿ; ಅಲ್ಲಾಹನ ವಿಚಾರದಲ್ಲಿ ನಮ್ಮೊಂದಿಗೆ ವಾಗ್ವಾದ ನಡೆಸುತ್ತಿರುವಿರಾ? ವಾಸ್ತವದಲ್ಲಿ ಅವನೇ ನಮ್ಮ ಪ್ರಭುವೂ ಮತ್ತು ನಿಮ್ಮ ಪ್ರಭುವೂ ಆಗಿದ್ದಾನೆ. ನಮಗೆ ನಮ್ಮ ಕರ್ಮಫಲವಿದೆ ನಿಮಗೆ ನಿಮ್ಮ ಕರ್ಮಫಲವಿದೆ. ನಾವು ಅವನಿಗೆ ಮಾತ್ರ ಏಕನಿಷ್ಠರಾಗಿದ್ದೇವೆ.
ئەرەپچە تەپسىرلەر:
اَمْ تَقُوْلُوْنَ اِنَّ اِبْرٰهٖمَ وَاِسْمٰعِیْلَ وَاِسْحٰقَ وَیَعْقُوْبَ وَالْاَسْبَاطَ كَانُوْا هُوْدًا اَوْ نَصٰرٰی ؕ— قُلْ ءَاَنْتُمْ اَعْلَمُ اَمِ اللّٰهُ ؕ— وَمَنْ اَظْلَمُ مِمَّنْ كَتَمَ شَهَادَةً عِنْدَهٗ مِنَ اللّٰهِ ؕ— وَمَا اللّٰهُ بِغَافِلٍ عَمَّا تَعْمَلُوْنَ ۟
ಇಬ್ರಾಹೀಮ್, ಇಸ್ಮಾಯೀಲ್, ಇಸ್‌ಹಾಕ್, ಯಾಕೂಬ್ ಹಾಗೂ ಯಾಕೂಬರ ಸಂತತಿಗಳು ಯಹೂದರು ಅಥವಾ ಕ್ರೆöÊಸ್ತರಾಗಿದ್ದರೆಂದು ಎಂದು ನೀವು ಹೇಳುತ್ತಿರುವಿರಾ? (ಓ ಪೈಗಂಬರರೇ) ಕೇಳಿರಿ; ಹೆಚ್ಚು ಬಲ್ಲವರು ನೀವೋ ಅಥವಾ ಅಲ್ಲಾಹನೋ? ಮತ್ತು ಅಲ್ಲ್ಲಾಹನ ಕಡೆಯ ಸಾಕ್ಷö್ಯವು ತನ್ನ ಬಳಿ ಅಡಗಿಸಿದವನಿಗಿಂತ ದೊಡ್ಡ ಅಕ್ರಮಿಯು ಇನ್ನಾರಿದ್ದಾನೆ? ಮತ್ತು ಅಲ್ಲಾಹನು ನೀವು ಮಾಡುತ್ತಿರುವುÀದರ ಕುರಿತು ಅಲಕ್ಷö್ಯನಲ್ಲ.
ئەرەپچە تەپسىرلەر:
تِلْكَ اُمَّةٌ قَدْ خَلَتْ ۚ— لَهَا مَا كَسَبَتْ وَلَكُمْ مَّا كَسَبْتُمْ ۚ— وَلَا تُسْـَٔلُوْنَ عَمَّا كَانُوْا یَعْمَلُوْنَ ۟۠
ಆ ಸಮುದಾಯವು ಗತಿಸಿ ಹೋಗಿದೆ ಅವರು ಸಂಪಾದಿಸಿದ್ದು ಅವರಿಗಿದೆ ಮತ್ತು ನೀವು ಸಂಪಾದಿಸಿದ್ದು ನಿಮಗದೆ. ಅವರ ಕರ್ಮಗಳ ಕುರಿತು ನೀವು ವಿಚಾರಿಸಲ್ಪಡಲಾರಿರಿ.
ئەرەپچە تەپسىرلەر:
سَیَقُوْلُ السُّفَهَآءُ مِنَ النَّاسِ مَا وَلّٰىهُمْ عَنْ قِبْلَتِهِمُ الَّتِیْ كَانُوْا عَلَیْهَا ؕ— قُلْ لِّلّٰهِ الْمَشْرِقُ وَالْمَغْرِبُ ؕ— یَهْدِیْ مَنْ یَّشَآءُ اِلٰی صِرَاطٍ مُّسْتَقِیْمٍ ۟
ಸದ್ಯದಲ್ಲೇ ಜನರ ಪೈಕಿ ಮೂರ್ಖರು ಕೇಳುವರು; ಇವರು ಈ ಮೊದಲು ನಮಾಜಿನಲ್ಲಿ ಲಕ್ಷವಾಗಿರಿಸಿದ್ದ ಕಿಬ್ಲಾ ದಿಕ್ಕಿನಿಂದ ಇವರನ್ನು ಬೇರೆ ದಿಕ್ಕಿಗೆ ತಿರುಗಿಸಿರುವುದರ ಕಾರಣವೇನು? ಹೇಳಿರಿ ಪೂರ್ವ ಹಾಗೂ ಪಶ್ಚಿಮಗಳ ಒಡೆಯ ಅಲ್ಲಾಹನಾಗಿದ್ದಾನೆ. ಅವನು ತಾನಿಚ್ಛಿಸಿದವರನ್ನು ಋಜುವಾದ ಮಾರ್ಗದೆಡೆಗೆ ಮುನ್ನಡೆಸುತ್ತಾನೆ.
ئەرەپچە تەپسىرلەر:
وَكَذٰلِكَ جَعَلْنٰكُمْ اُمَّةً وَّسَطًا لِّتَكُوْنُوْا شُهَدَآءَ عَلَی النَّاسِ وَیَكُوْنَ الرَّسُوْلُ عَلَیْكُمْ شَهِیْدًا ؕ— وَمَا جَعَلْنَا الْقِبْلَةَ الَّتِیْ كُنْتَ عَلَیْهَاۤ اِلَّا لِنَعْلَمَ مَنْ یَّتَّبِعُ الرَّسُوْلَ مِمَّنْ یَّنْقَلِبُ عَلٰی عَقِبَیْهِ ؕ— وَاِنْ كَانَتْ لَكَبِیْرَةً اِلَّا عَلَی الَّذِیْنَ هَدَی اللّٰهُ ؕ— وَمَا كَانَ اللّٰهُ لِیُضِیْعَ اِیْمَانَكُمْ ؕ— اِنَّ اللّٰهَ بِالنَّاسِ لَرَءُوْفٌ رَّحِیْمٌ ۟
ಹೀಗೆ ನಾವು ನಿಮ್ಮನ್ನು ಒಂದು ಸುಮಧ್ಯ (ಉತ್ತಮ) ಸಮುದಾಯವನ್ನಾಗಿ ಮಾಡಿದೆವು. ನೀವು ಜನರ ಮೇಲೆ ಸಾಕ್ಷಿಗಳಾಗುವ ಸಲುವಾಗಿ ಮತ್ತು ಸಂದೇಶವಾಹಕರು (ನಿಮ್ಮ ಮೇಲೆ ಸಾಕ್ಷಿಯಾಗುವ ಸಲುವಾಗಿ. ನೀವು ಈ ಮುಂಚೆ ಇದ್ದ ಕಿಬ್ಲಾ (ಕಾಬಃ) ದಿಕ್ಕನ್ನು ನಾವು ನಿಶ್ಚಯಿಸಿಕೊಟ್ಟಿರುವುದು (ಕಿಬ್ಲಾಃದ ಬದಲಾವಣೆಯು) ಸಂದೇಶವಾಹಕರನ್ನು ಅನುಸರಿಸುವವರು ಯಾರು ಮತ್ತು ವಿಮುಖರಾಗುವವರು ಯಾರೆಂದು ನಾವು ತಿಳಿಯುವ ಸಲುವಾಗಿದೆ. ಇದು ಕ್ಲಿಷ್ಟಕರ ಸಂಗತಿಯಾಗಿದೆ. ಆದರೆ ಇದು ಅಲ್ಲಾಹನು ಯಾರಿಗೆ ಸನ್ಮಾರ್ಗ ದಯಪಾಲಿಸುತ್ತಾನೋ ಅವರಿಗೆ ಕ್ಲಿಷ್ಟಕರವಲ್ಲ. ಅಲ್ಲಾಹನು ನಿಮ್ಮ ಸತ್ಯವಿಶ್ವಾಸವನ್ನು ವ್ಯರ್ಥಗೊಳಿಸುವುದಿಲ್ಲ. ಅವನು ಜನರೊಂದಿಗೆ ಕೃಪಾಳುವೂ, ಕರುಣಾನಿಧಿಯು ಆಗಿದ್ದಾನೆ.
ئەرەپچە تەپسىرلەر:
قَدْ نَرٰی تَقَلُّبَ وَجْهِكَ فِی السَّمَآءِ ۚ— فَلَنُوَلِّیَنَّكَ قِبْلَةً تَرْضٰىهَا ۪— فَوَلِّ وَجْهَكَ شَطْرَ الْمَسْجِدِ الْحَرَامِ ؕ— وَحَیْثُ مَا كُنْتُمْ فَوَلُّوْا وُجُوْهَكُمْ شَطْرَهٗ ؕ— وَاِنَّ الَّذِیْنَ اُوْتُوا الْكِتٰبَ لَیَعْلَمُوْنَ اَنَّهُ الْحَقُّ مِنْ رَّبِّهِمْ ؕ— وَمَا اللّٰهُ بِغَافِلٍ عَمَّا یَعْمَلُوْنَ ۟
ಓ ಸಂದೇಶವಾಹಕರೇ, ನಿಮ್ಮ ಮುಖವು ಆಗಾಗ ಅಕಾಶದೆಡೆಗೆ ಹೊರಳುತ್ತಿರುವುದನ್ನು ನಾವು ಗಮನಿಸುತ್ತಿದ್ದೇವೆ. ಈಗ ಖಂಡಿತವಾಗಿಯೂ ನೀವು ಸಂತೃಪ್ತಿ ಪಡುವಂತಹ ಕಿಬ್ಲಾ ದಿಕ್ಕಿಗೆ ನಾವು ನಿಮ್ಮನ್ನು ತಿರುಗಿಸುತ್ತೇವೆ. ನೀವು ತಮ್ಮ ಮುಖವನ್ನು ಮಸ್ಜಿದುಲ್ ಹರಾಮ್‌ನ ದಿಕ್ಕಿಗೆ ತಿರುಗಿಸಿರಿ ಮತ್ತು ನೀವು ಎಲ್ಲೇ ಇದ್ದರೂ ಅದರ ದಿಕ್ಕಿಗೆ ನಿಮ್ಮ ಮುಖಗಳನ್ನು ತಿರುಗಿಸಿರಿ ಮತ್ತು ಗ್ರಂಥ ನೀಡಲಾದವರು. ಇದು ಕಿಬ್ಲಾಃದ ಬದಲಾವಣೆ ಅಲ್ಲಾಹನ ಕಡೆಯಿಂದ ಸತ್ಯವೆಂದು ಖಚಿತವಾಗಿ ತಿಳಿಯುತ್ತಾರೆ. ಮತ್ತು ಅವರು (ಸತ್ಯನಿಷೇಧಿಗಳು) ಮಾಡುತ್ತಿರುವ ಕೃತ್ಯಗಳ ಕುರಿತು ಅಲ್ಲಾಹನು ಅಲಕ್ಷö್ಯನಲ್ಲ.
ئەرەپچە تەپسىرلەر:
وَلَىِٕنْ اَتَیْتَ الَّذِیْنَ اُوْتُوا الْكِتٰبَ بِكُلِّ اٰیَةٍ مَّا تَبِعُوْا قِبْلَتَكَ ۚ— وَمَاۤ اَنْتَ بِتَابِعٍ قِبْلَتَهُمْ ۚ— وَمَا بَعْضُهُمْ بِتَابِعٍ قِبْلَةَ بَعْضٍ ؕ— وَلَىِٕنِ اتَّبَعْتَ اَهْوَآءَهُمْ مِّنْ بَعْدِ مَا جَآءَكَ مِنَ الْعِلْمِ ۙ— اِنَّكَ اِذًا لَّمِنَ الظّٰلِمِیْنَ ۟ۘ
ನೀವೇನಾದರೂ ಸಕಲ ದೃಷ್ಟಾಂತವನ್ನು ಗ್ರಂಥ ನೀಡಲಾದವರಿಗೆ ನೀಡಿದರೂ ಅವರು ನಿಮ್ಮ ಕಿಬ್ಲಾಃ ದಿಕ್ಕನ್ನು ಅನುಸರಿಸಲಾರರು ಮತ್ತು ಈಗ ನಿಮಗೂ ಸಹ ಅವರ ಕಿಬ್ಲಾಃ ದಿಕ್ಕನ್ನು ಅನುಸರಿಸುವುದು ಯೋಗ್ಯವಲ್ಲ ಮತ್ತು ಯಹೂದಿಯರು ಮತ್ತು ಕ್ರೆöÊಸ್ತರು ಸಹ ಪರಸ್ಪರರ ಕಿಬ್ಲಾಃವನ್ನು ಅನುಸರಿಸುವವರಲ್ಲ ಮತ್ತು ನೀವೇನಾದರೂ ನಿಮ್ಮ ಬಳಿಗೆ ಜ್ಞಾನ ಬಂದ ಬಳಿಕವೂ ಅವರ ಸ್ವೇಚ್ಛೆಗಳನ್ನು ಅನುಸರಿಸಿದರೆ ನಿಜವಾಗಿಯು ನೀವು ಅಕ್ರಮಿಗಳಲ್ಲಾಗುವಿರಿ.
ئەرەپچە تەپسىرلەر:
اَلَّذِیْنَ اٰتَیْنٰهُمُ الْكِتٰبَ یَعْرِفُوْنَهٗ كَمَا یَعْرِفُوْنَ اَبْنَآءَهُمْ ؕ— وَاِنَّ فَرِیْقًا مِّنْهُمْ لَیَكْتُمُوْنَ الْحَقَّ وَهُمْ یَعْلَمُوْنَ ۟ؔ
ನಾವು ಯಾರಿಗೆ ಗ್ರಂಥವನ್ನು ನೀಡಿರುವೆವೋ ಅವರು ತಮ್ಮ ಮಕ್ಕಳನ್ನು ಗುರುತಿಸಿಕೊಳ್ಳವಂತೆ ಅವರನ್ನು (ಮುಹಮ್ಮದರನ್ನು) ಗುರುತಿಸುತ್ತಾರೆ. ಖಂಡಿತವಾಗಿಯೂ ಅವರ ಪೈಕಿ ಒಂದು ಗುಂಪು ತಿಳಿದೂ ತಿಳಿದೂ ಸತ್ಯವನ್ನು ಮರೆ ಮಾಚುತ್ತಿದೆ.
ئەرەپچە تەپسىرلەر:
اَلْحَقُّ مِنْ رَّبِّكَ فَلَا تَكُوْنَنَّ مِنَ الْمُمْتَرِیْنَ ۟۠
ನಿಮ್ಮ ಪ್ರಭುವಿನ ವತಿಯ ಸತ್ಯವಾಗಿದೆ. ಆದ್ದರಿಂದ! ನೀವು ಸಂಶಯಗ್ರಸ್ತರಲ್ಲಿ ಸೇರಬಾರದು.
ئەرەپچە تەپسىرلەر:
وَلِكُلٍّ وِّجْهَةٌ هُوَ مُوَلِّیْهَا فَاسْتَبِقُوْا الْخَیْرٰتِ ؔؕ— اَیْنَ مَا تَكُوْنُوْا یَاْتِ بِكُمُ اللّٰهُ جَمِیْعًا ؕ— اِنَّ اللّٰهَ عَلٰی كُلِّ شَیْءٍ قَدِیْرٌ ۟
ಪ್ರತಿಯೊಂದು ಧರ್ಮದವನಿಗೂ ಒಂದು ದಿಶೆ ಇದೆ. ಆರಾಧನೆಯ ಸಮಯದಲ್ಲಿ ಆ ದಿಶೆಗೆ ಮುಖ ಮಾಡುತ್ತಾರೆ. ನೀವೆಲ್ಲೇ ಇದ್ದರೂ ಅಲ್ಲಾಹನು ನಿಮ್ಮನ್ನು (ಅಂತಿಮ ದಿನದಂದು ಒಟ್ಟುಗೂಡಿಸಿ) ತರುವನು. ವಾಸ್ತವದಲ್ಲಿ ಅಲ್ಲಾಹನು ಸಕಲ ಸಂಗತಿಗಳ ಮೇಲೆ ಸಾಮರ್ಥ್ಯವುಳ್ಳವನಾಗಿದ್ದಾನೆ.
ئەرەپچە تەپسىرلەر:
وَمِنْ حَیْثُ خَرَجْتَ فَوَلِّ وَجْهَكَ شَطْرَ الْمَسْجِدِ الْحَرَامِ ؕ— وَاِنَّهٗ لَلْحَقُّ مِنْ رَّبِّكَ ؕ— وَمَا اللّٰهُ بِغَافِلٍ عَمَّا تَعْمَلُوْنَ ۟
ನೀವು ಎತ್ತ ಕಡೆಯಿಂದ ಪ್ರಯಾಣದಲ್ಲಿ ಹೊರಟರೂ ತಮ್ಮ ಮುಖವನ್ನು (ನಮಾಝ್‌ಗಾಗಿ) ಮಸ್ಜಿದುಲ್ ಹರಾಮ್‌ನ ದಿಕ್ಕಿಗೆ ತಿರುಗಿಸಿರಿ. ಇದು ನಿಮ್ಮ ಪ್ರಭುವಿನ ಕಡೆಯ ಸತ್ಯವಾಗಿದೆ ಮತ್ತು ಅಲ್ಲಾಹನು ನೀವು ಮಾಡುತ್ತಿರುವುದರ ಕುರಿತು ಅಲಕ್ಷö್ಯನಲ್ಲ.
ئەرەپچە تەپسىرلەر:
وَمِنْ حَیْثُ خَرَجْتَ فَوَلِّ وَجْهَكَ شَطْرَ الْمَسْجِدِ الْحَرَامِ ؕ— وَحَیْثُ مَا كُنْتُمْ فَوَلُّوْا وُجُوْهَكُمْ شَطْرَهٗ ۙ— لِئَلَّا یَكُوْنَ لِلنَّاسِ عَلَیْكُمْ حُجَّةٌ ۗ— اِلَّا الَّذِیْنَ ظَلَمُوْا مِنْهُمْ ۗ— فَلَا تَخْشَوْهُمْ وَاخْشَوْنِیْ ۗ— وَلِاُتِمَّ نِعْمَتِیْ عَلَیْكُمْ وَلَعَلَّكُمْ تَهْتَدُوْنَ ۟ۙۛ
ಮತ್ತು ನೀವು ಯಾವ ಕಡೆಯಿಂದ ಹೊರಟರು (ನಮಾಜಿನಲ್ಲಿ) ತಮ್ಮ ಮುಖವನ್ನು ಮಸ್ಜಿದುಲ್ ಹರಾಮ್‌ನ ದಿಕ್ಕಿಗೆ ಮುಖಮಾಡಿರಿ ಮತ್ತು ಓ ಸತ್ಯವಿಶ್ವಾಸಿಗಳೇ, ನೀವೆಲ್ಲೇ ಇದ್ದರೂ (ನಾಮಾಜ್‌ಗೆ) ನಿಮ್ಮ ಮುಖಗಳನ್ನು ಆ ದಿಕ್ಕಿಗೆ ಮುಖಮಾಡಿರಿ. ಇದು ನಿಮ್ಮ ವಿರುದ್ಧ ಜನರ ಯಾವ ಪುರಾವೆಯು ಇರಬಾರದೆಂದಾಗಿರುತ್ತದೆ. ಆದರೆ ಅವರ ಪೈಕಿ ಆಕ್ರಮವೆಸಗಿದವರ ಹೊರತು. ನೀವು ಅವರನ್ನು ಭಯಪಡಬೇಡಿರಿ. ನನ್ನನ್ನು (ಅಲ್ಲಾಹನನ್ನು) ಮಾತ್ರ ಭಯಪಡಿರಿ ಇದು ನೀವು ಸನ್ಮಾರ್ಗ ಪಡೆಯಲೆಂದೂ ಮತ್ತು ನಾನು ನನ್ನ ಅನುಗ್ರಹವನ್ನು ನಿಮ್ಮ ಮೇಲೆ ಪೂರ್ತಿಗೊಳಿಸಲೆಂದೂ ಆಗಿರುತ್ತದೆ.
ئەرەپچە تەپسىرلەر:
كَمَاۤ اَرْسَلْنَا فِیْكُمْ رَسُوْلًا مِّنْكُمْ یَتْلُوْا عَلَیْكُمْ اٰیٰتِنَا وَیُزَكِّیْكُمْ وَیُعَلِّمُكُمُ الْكِتٰبَ وَالْحِكْمَةَ وَیُعَلِّمُكُمْ مَّا لَمْ تَكُوْنُوْا تَعْلَمُوْنَ ۟ؕۛ
ನಾವು ನಿಮ್ಮಿಂದಲೇ ಆದ ಒಬ್ಬ ಸಂದೇಶವಾಹಕರನ್ನು ನಿಮ್ಮಲ್ಲಿಗೆ ಕಳುಹಿಸಿರುತ್ತೇವೆ. ಅವರು ನಿಮಗೆ ನಮ್ಮ ಸೂಕ್ತಿಗಳನ್ನು ಓದಿ ಕೇಳಿಸುತ್ತಾರೆ. ಹಾಗೂ ನಿಮ್ಮನ್ನು ಸಂಸ್ಕರಿಸುತ್ತಾರೆ. ಮತ್ತು ನಿಮಗೆ ಈ ದಿವ್ಯ ಗ್ರಂಥವನ್ನೂ, ಸುಜ್ಞಾನವನ್ನೂ ಹಾಗೂ ನೀವು ಅರಿಯದ ವಿಷಯಗಳನ್ನು ನಿಮಗೆ ಕಲಿಸಿ ಕೊಡುತ್ತಾರೆ.
ئەرەپچە تەپسىرلەر:
فَاذْكُرُوْنِیْۤ اَذْكُرْكُمْ وَاشْكُرُوْا لِیْ وَلَا تَكْفُرُوْنِ ۟۠
ಆದ್ದರಿಂದ ನೀವು ನನ್ನನ್ನು ಸ್ಮರಿಸಿ ನಾನು ಸಹ ನಿಮ್ಮನ್ನು ಸ್ಮರಿಸುತ್ತೇನೆ ಮತ್ತು ನೀವು ನನಗೆ ಕೃತಜ್ಞತೆ ಸಲ್ಲಿಸಿ ಮತ್ತು ನನ್ನೊಂದಿಗೆ ಕೃತಘ್ನತೆ ತೋರದಿರಿ.
ئەرەپچە تەپسىرلەر:
یٰۤاَیُّهَا الَّذِیْنَ اٰمَنُوا اسْتَعِیْنُوْا بِالصَّبْرِ وَالصَّلٰوةِ ؕ— اِنَّ اللّٰهَ مَعَ الصّٰبِرِیْنَ ۟
ಓ ಸತ್ಯ ವಿಶ್ವಾಸಿಗಳೇ, ನೀವು ಸಹನೆ ಮತ್ತು ನಮಾಝ್‌ನ ಮೂಲಕ ಸಹಾಯ ಯಾಚಿಸಿರಿ. ಖಂಡಿತವಾಗಿಯು ಅಲ್ಲಾಹನು ಸಹನಾಶೀಲರೊಂದಿಗಿದ್ದಾನೆ.
ئەرەپچە تەپسىرلەر:
وَلَا تَقُوْلُوْا لِمَنْ یُّقْتَلُ فِیْ سَبِیْلِ اللّٰهِ اَمْوَاتٌ ؕ— بَلْ اَحْیَآءٌ وَّلٰكِنْ لَّا تَشْعُرُوْنَ ۟
ನೀವು ಅಲ್ಲಾಹನ ಮಾರ್ಗದಲ್ಲಿ ಹುತಾತ್ಮರಾದವರನ್ನು ಮೃತರೆಂದು ಹೇಳಬೇಡಿರಿ. ಅವರು ಜೀವಂತವಾಗಿದ್ದಾರೆ. ಆದರೆ ನೀವು (ಅವರ ಜೀವನವನ್ನು) ಗ್ರಹಿಸಲಾರಿರಿ.
ئەرەپچە تەپسىرلەر:
وَلَنَبْلُوَنَّكُمْ بِشَیْءٍ مِّنَ الْخَوْفِ وَالْجُوْعِ وَنَقْصٍ مِّنَ الْاَمْوَالِ وَالْاَنْفُسِ وَالثَّمَرٰتِ ؕ— وَبَشِّرِ الصّٰبِرِیْنَ ۟ۙ
ಒಂದಲ್ಲ ಒಂದು ಬಗೆಯ ಭಯ, ಶಂಕೆ, ಹಸಿವು ಮತ್ತು ಸೊತ್ತು ಸಂಪತ್ತುಗಳ ನಷ್ಟ ಹಾಗೂ ಪ್ರಾಣಹಾನಿಗಳ ಮೂಲಕವು ಹಾಗೂ ಫಲೊತ್ಪಾದನೆಗಳ ಕೊರತೆಯ ಮೂಲಕವೂ ನಾವು ನಿಮ್ಮನ್ನು ಖಂಡಿತ ಪರೀಕ್ಷೆಗೊಳಪಡಿಸುತ್ತೇವೆ. ಮತ್ತು ಇಂತಹಾ ಪರಿಸ್ಥಿತಿಯಲ್ಲಿ ಸಹನಶೀಲರಾಗಿರುವವರಿಗೆ ನೀವು ಸುವಾರ್ತೆಯನ್ನೀಡಿರಿ.
ئەرەپچە تەپسىرلەر:
الَّذِیْنَ اِذَاۤ اَصَابَتْهُمْ مُّصِیْبَةٌ ۙ— قَالُوْۤا اِنَّا لِلّٰهِ وَاِنَّاۤ اِلَیْهِ رٰجِعُوْنَ ۟ؕ
ಇಂತಹವರೇ ತಮಗೆ ವಿಪತ್ತು ಬಾಧಿಸಿದಾಗ ನಾವು ಅಲ್ಲಾಹನ ಅಧೀನಕ್ಕೆ ಸೇರಿದವರು ಮತ್ತು ನಾವು ಅವನೆಡೆಗೇ ಮರಳುವವರಿದ್ದೇವೆ ಎಂದು ಹೇಳುತ್ತಾರೆ.
ئەرەپچە تەپسىرلەر:
اُولٰٓىِٕكَ عَلَیْهِمْ صَلَوٰتٌ مِّنْ رَّبِّهِمْ وَرَحْمَةٌ ۫— وَاُولٰٓىِٕكَ هُمُ الْمُهْتَدُوْنَ ۟
ಇಂತವರ ಮೇಲೆ ತಮ್ಮ ಪ್ರಭುವಿನ ಅನುಗ್ರಹಗಳು ಮತ್ತು ಕಾರುಣ್ಯವು ಇರುವುದು. ಮತ್ತು ಇವರೇ ಸನ್ಮಾರ್ಗ ಪ್ರಾಪ್ತರಾಗಿದ್ದವರಾಗಿದ್ದಾರೆ.
ئەرەپچە تەپسىرلەر:
اِنَّ الصَّفَا وَالْمَرْوَةَ مِنْ شَعَآىِٕرِ اللّٰهِ ۚ— فَمَنْ حَجَّ الْبَیْتَ اَوِ اعْتَمَرَ فَلَا جُنَاحَ عَلَیْهِ اَنْ یَّطَّوَّفَ بِهِمَا ؕ— وَمَنْ تَطَوَّعَ خَیْرًا ۙ— فَاِنَّ اللّٰهَ شَاكِرٌ عَلِیْمٌ ۟
ನಿಶ್ಚಯವಾಗಿ ಸಫಾ ಮತ್ತು ಮರ್ವಾ ಅಲ್ಲಾಹನ ಲಾಂಛನಗಳಲ್ಲಿ ಸೇರಿವೆ ಆದ್ದರಿಂದ ಪವಿತ್ರ ಕಾಬಾ (ಕಾಬಾಭವನ) ದ ಹಜ್ಜ್ ಮತ್ತು ಉಮ್ರಾ ಕೈಗೊಳ್ಳುವವನ ಮೇಲೆ ಅವುಗಳ ಪ್ರದಕ್ಷಣೆ ಮಾಡುವುದರಿಂದ ಯಾವ ದೋಷವು ಇರುವುದಿಲ್ಲ. ಸ್ವಇಚ್ಛೆಯಿಂದ ಒಳಿತನ್ನು ಮಾಡುವವರ ಪಾಲಿಗೆ ಅಲ್ಲಾಹನು ಮೆಚ್ಚುವವನೂ ಸರ್ವಜ್ಞನೂ ಆಗಿದ್ದಾನೆ.
ئەرەپچە تەپسىرلەر:
اِنَّ الَّذِیْنَ یَكْتُمُوْنَ مَاۤ اَنْزَلْنَا مِنَ الْبَیِّنٰتِ وَالْهُدٰی مِنْ بَعْدِ مَا بَیَّنّٰهُ لِلنَّاسِ فِی الْكِتٰبِ ۙ— اُولٰٓىِٕكَ یَلْعَنُهُمُ اللّٰهُ وَیَلْعَنُهُمُ اللّٰعِنُوْنَ ۟ۙ
ನಾವು ಅವತೀರ್ಣಗೊಳಿಸಿದಂತಹ ನಮ್ಮ ಸುಸ್ಪಷ್ಟ ಪುರಾವೆ ಹಾಗೂ ಮಾರ್ಗದರ್ಶನವನ್ನು ಜನರಿಗಾಗಿ ನಾವು ನಮ್ಮ ಗ್ರಂಥದಲ್ಲಿ ವಿವರಿಸಿಕೊಟ್ಟ ಬಳಿಕವೂ ಯಾರು ಮರೆಮಾಚುತ್ತಾರೋ, ಅವರ ಮೇಲೆ ಅಲ್ಲಾಹನು ಶಪಿಸುತ್ತಾನೆ. ಶಪಿಸುವವರೆಲ್ಲಾ ಶಪಿಸುತ್ತಾರೆ.
ئەرەپچە تەپسىرلەر:
اِلَّا الَّذِیْنَ تَابُوْا وَاَصْلَحُوْا وَبَیَّنُوْا فَاُولٰٓىِٕكَ اَتُوْبُ عَلَیْهِمْ ۚ— وَاَنَا التَّوَّابُ الرَّحِیْمُ ۟
ಆದರೆ ಪಶ್ಚಾತ್ತಾಪಪಟ್ಟು ಮರುಳುವವರ, ಹಾಗೂ ಸುಧಾರಣೆ ಮಾಡಿಕೊಳ್ಳುವವರ ಮತ್ತು ಬಚ್ಚಿಟ್ಟಿದ್ದನ್ನು ಸ್ಪಷ್ಟವಾಗಿ ವಿವರಿಸಿ ಕೊಡುವವರ ಪಶ್ಚಾತ್ತಾಪವನ್ನು ನಾನು ಸ್ವೀಕರಿಸುತ್ತೇನೆ ಮತ್ತು ನಾನು ಪಶ್ಚಾತ್ತಾಪ ಸ್ವೀಕರಿಸುವವನೂ, ಕರುಣಾನಿಧಿಯು ಆಗಿರುವೆನು.
ئەرەپچە تەپسىرلەر:
اِنَّ الَّذِیْنَ كَفَرُوْا وَمَاتُوْا وَهُمْ كُفَّارٌ اُولٰٓىِٕكَ عَلَیْهِمْ لَعْنَةُ اللّٰهِ وَالْمَلٰٓىِٕكَةِ وَالنَّاسِ اَجْمَعِیْنَ ۟ۙ
ಖಂಡಿತವಾಗಿಯೂ ಸತ್ಯನಿಷೇಧಿಸಿದವರು ಮತ್ತು ಸತ್ಯನಿಷೇಧಿಗಳಾಗಿದ್ದ ಸ್ಥಿತಿಯಲ್ಲೇ ಮರಣ ಹೊಂದಿದವರ ಮೇಲೆ ಅಲ್ಲಾಹನ ಹಾಗೂ ದೂತರ, ಮತ್ತು ಸರ್ವ ಮನುಷ್ಯರ ಶಾಪವಿರುವುದು.
ئەرەپچە تەپسىرلەر:
خٰلِدِیْنَ فِیْهَا ۚ— لَا یُخَفَّفُ عَنْهُمُ الْعَذَابُ وَلَا هُمْ یُنْظَرُوْنَ ۟
ಅವರು ಅದರಲ್ಲಿ (ಆ ಶಾಪದಲ್ಲಿ) ಶಾಶ್ವತವಾಗಿರುವರು. ಅವರಿಂದ ಯಾತನೆಯನ್ನು ಹಗುರಗೊಳಿಸಲಾಗದು ಮತ್ತು ಅವರಿಗೆ ಕಾಲಾವಕಾಶವನ್ನು ನೀಡಲಾಗದು.
ئەرەپچە تەپسىرلەر:
وَاِلٰهُكُمْ اِلٰهٌ وَّاحِدٌ ۚ— لَاۤ اِلٰهَ اِلَّا هُوَ الرَّحْمٰنُ الرَّحِیْمُ ۟۠
ನಿಮ್ಮ ಆರಾಧ್ಯನು ಏಕೈಕ ಆರಾಧ್ಯನು ಆ ಪರಮ ದಯಾಮಯನು ಕರುಣಾನಿಧಿಯೂ ಆಗಿರುವವನ ಹೊರತು ಯಾವ ನೈಜ ಆರಾಧ್ಯನಿಲ್ಲ.
ئەرەپچە تەپسىرلەر:
اِنَّ فِیْ خَلْقِ السَّمٰوٰتِ وَالْاَرْضِ وَاخْتِلَافِ الَّیْلِ وَالنَّهَارِ وَالْفُلْكِ الَّتِیْ تَجْرِیْ فِی الْبَحْرِ بِمَا یَنْفَعُ النَّاسَ وَمَاۤ اَنْزَلَ اللّٰهُ مِنَ السَّمَآءِ مِنْ مَّآءٍ فَاَحْیَا بِهِ الْاَرْضَ بَعْدَ مَوْتِهَا وَبَثَّ فِیْهَا مِنْ كُلِّ دَآبَّةٍ ۪— وَّتَصْرِیْفِ الرِّیٰحِ وَالسَّحَابِ الْمُسَخَّرِ بَیْنَ السَّمَآءِ وَالْاَرْضِ لَاٰیٰتٍ لِّقَوْمٍ یَّعْقِلُوْنَ ۟
ನಿಸ್ಸಂದೇಹವಾಗಿಯು ಆಕಾಶಗಳ ಹಾಗೂ ಭೂಮಿಯ ಸೃಷ್ಟಿಯಲ್ಲೂ, ರಾತ್ರಿ-ಹಗಲುಗಳ ಬದಲಾವಣೆಯಲ್ಲೂ, ಜನರಿಗೆ ಪ್ರಯೋಜನ ನೀಡುವಂತಹ ವಸ್ತುಗಳೊಂದಿಗೆ ಕಡಲಿನಲ್ಲಿ ಸಂಚರಿಸುತ್ತಿರುವ ಹಡಗುಗಳಲ್ಲೂ, ಆಕಾಶದಿಂದ ಅಲ್ಲಾಹನು ಮಳೆ ನೀರನ್ನು ಇಳಿಸಿ ಅದರ ಮೂಲಕ ನಿರ್ಜೀವ ಭೂಮಿಯನ್ನು ಜೀವಂತಗೊಳಿಸಿರುವುದರಲ್ಲೂ ಅದರಲ್ಲಿ ಸಕಲ ಜಾತಿಯ ಜೀವಗಳನ್ನು ಹಬ್ಬಿಸಿರುವುದರಲ್ಲೂ, ಮಾರುತಗಳ ಗತಿ ಬದಲಾವಣೆಗಳಲ್ಲೂ, ಆಕಾಶ ಮತ್ತು ಭೂಮಿಯ ನಡುವೆ ನಿಯಂತ್ರಿತವಾದ ಮೋಡಗಳಲ್ಲೂ ಬುದ್ಧಿಜೀವಿಗಳಿಗೆ ಅನೇಕ ದೃಷ್ಟಾಂತಗಳಿವೆ.
ئەرەپچە تەپسىرلەر:
وَمِنَ النَّاسِ مَنْ یَّتَّخِذُ مِنْ دُوْنِ اللّٰهِ اَنْدَادًا یُّحِبُّوْنَهُمْ كَحُبِّ اللّٰهِ ؕ— وَالَّذِیْنَ اٰمَنُوْۤا اَشَدُّ حُبًّا لِّلّٰهِ ؕ— وَلَوْ یَرَی الَّذِیْنَ ظَلَمُوْۤا اِذْ یَرَوْنَ الْعَذَابَ ۙ— اَنَّ الْقُوَّةَ لِلّٰهِ جَمِیْعًا ۙ— وَّاَنَّ اللّٰهَ شَدِیْدُ الْعَذَابِ ۟
ಅವರಲ್ಲಿ ಕೆಲವರು ಅಲ್ಲಾಹನ ಜೊತೆ ಇತರರನ್ನು (ಉಪದೇವತೆಗಳನ್ನು) ನಿಶ್ಚಯಿಸಿ ಅಲ್ಲಾಹನನ್ನು ಪ್ರೀತಿಸುವಂತೆ ಅವರನ್ನು ಪ್ರೀತಿಸುತ್ತಾರೆ. ಸತ್ಯವಿಶ್ವಾಸಿಗಳಂತು ಅಲ್ಲಾಹನ್ನು ಅತ್ಯಧಿಕ ಪ್ರೀತಿಸುತ್ತಾರೆ. ಈ ಅಕ್ರಮಿಗಳು ಅಲ್ಲಾಹನ ಶಿಕ್ಷೆಯನ್ನು ಕಾಣುವಾಗ ಶಕ್ತಿ ಸಾಮರ್ಥ್ಯವೆಲ್ಲವೂ ಅಲ್ಲಾಹನಿಗೆ ಮಾತ್ರವಿದೆ ಮತ್ತು ಅಲ್ಲಾಹನು ಉಗ್ರವಾಗಿ ಶಿಕ್ಷಿಸುವವನೆಂದು ದೃಢವಾಗುವುದು.
ئەرەپچە تەپسىرلەر:
اِذْ تَبَرَّاَ الَّذِیْنَ اتُّبِعُوْا مِنَ الَّذِیْنَ اتَّبَعُوْا وَرَاَوُا الْعَذَابَ وَتَقَطَّعَتْ بِهِمُ الْاَسْبَابُ ۟
(ಸತ್ಯನಿಷೇಧಿಗಳ) ನಾಯಕರು ತಮ್ಮ ಅನುಯಾಯಿಗಳಿಂದ ಅವಗಣಿಸುವಾಗ ಮತ್ತು ಅವರು ಯಾತನೆಯನ್ನು ಕಣ್ಣಾರೆ ಕಾಣುವ ಹಾಗೂ ಸಕಲ ಸಂಬAಧಗಳೂ ಮುರಿದುಹೋಗುವ ಸಂಧರ್ಭದಲ್ಲಿ.
ئەرەپچە تەپسىرلەر:
وَقَالَ الَّذِیْنَ اتَّبَعُوْا لَوْ اَنَّ لَنَا كَرَّةً فَنَتَبَرَّاَ مِنْهُمْ كَمَا تَبَرَّءُوْا مِنَّا ؕ— كَذٰلِكَ یُرِیْهِمُ اللّٰهُ اَعْمَالَهُمْ حَسَرٰتٍ عَلَیْهِمْ ؕ— وَمَا هُمْ بِخٰرِجِیْنَ مِنَ النَّارِ ۟۠
ಅನುಯಾಯಿಗಳು ಹೇಳುವರು; ನಮಗೆ ಭೂಲೋಕಕ್ಕೆ ಮರಳುವ ಅವಕಾಶವೇನಾದರು ಇರುತ್ತಿದ್ದರೆ ಅವರು ನಮ್ಮಿಂದ ಬೇಸರಗೊಂಡು ಕಡೆಗಣಿಸಿದಂತೆ ನಾವೂ ಸಹ ಅವರನ್ನು ಕಡೆಗಣಿಸುತ್ತಿದ್ದೇವು. ಇದೇ ಪ್ರಕಾರ ಅಲ್ಲಾಹನು ಅವರ ಕರ್ಮಗಳನ್ನು ಅವರಿಗೆ ಖೇದವಾಗಲೆಂದು ತೋರಿಸಿ ಕೊಡುವನು. ಮತ್ತು ಅವರು ನರಕಾಗ್ನಿಯಿಂದ ಎಂದೂ ಹೊರಹೋಗಲಾರರು.
ئەرەپچە تەپسىرلەر:
یٰۤاَیُّهَا النَّاسُ كُلُوْا مِمَّا فِی الْاَرْضِ حَلٰلًا طَیِّبًا ؗ— وَّلَا تَتَّبِعُوْا خُطُوٰتِ الشَّیْطٰنِ ؕ— اِنَّهٗ لَكُمْ عَدُوٌّ مُّبِیْنٌ ۟
ಓ ಜನರೇ, ಭೂಮಿಯಲ್ಲಿರುವ ಧರ್ಮಸಮ್ಮತ ಹಾಗೂ ಶುದ್ಧ ಆಹಾರವನ್ನು ಸೇವಿಸಿರಿ ಹಾಗೂ ಶೈತಾನನ ಹೆಜ್ಜೆಗಳನ್ನು ಅನುಸರಿಸಬೇಡಿರಿ. ಅವನು ನಿಮಗೆ ಪ್ರತ್ಯಕ್ಷ ಶತ್ರವಾಗಿದ್ದಾನೆ.
ئەرەپچە تەپسىرلەر:
اِنَّمَا یَاْمُرُكُمْ بِالسُّوْٓءِ وَالْفَحْشَآءِ وَاَنْ تَقُوْلُوْا عَلَی اللّٰهِ مَا لَا تَعْلَمُوْنَ ۟
ನಿಶ್ಚಯವಾಗಿಯೂ ಅವನಂತೂ ಪಾಪ ಮತ್ತು ಅಶ್ಲೀಲ ಕೃತ್ಯಗಳನ್ನು, ಹಾಗೂ ಅಲ್ಲಾಹನ ಬಗ್ಗೆ ನಿಮಗೆ ಜ್ಞಾನವಿಲ್ಲದ್ದನ್ನು (ಅದು ಅಲ್ಲಾಹನ ಆದೇಶವೆಂದು) ಹೇಳಲು ನಿಮಗೆ ಪ್ರಚೋದಿಸುತ್ತಾನೆ.
ئەرەپچە تەپسىرلەر:
وَاِذَا قِیْلَ لَهُمُ اتَّبِعُوْا مَاۤ اَنْزَلَ اللّٰهُ قَالُوْا بَلْ نَتَّبِعُ مَاۤ اَلْفَیْنَا عَلَیْهِ اٰبَآءَنَا ؕ— اَوَلَوْ كَانَ اٰبَآؤُهُمْ لَا یَعْقِلُوْنَ شَیْـًٔا وَّلَا یَهْتَدُوْنَ ۟
ನೀವು ಅಲ್ಲಾಹನು ಅವತೀರ್ಣಗೊಳಿಸಿರುವ ಗ್ರಂಥವನ್ನು (ಕುರ್‌ಆನ್) ಅನುಸರಿಸಿರಿ ಎಂದು ಅವರೊಡನೆ ಹೇಳಲಾದಾಗ; ನಾವು ನಮ್ಮ ಪೂರ್ವಿಕರನ್ನು ಯಾವ ಮಾರ್ಗದಲ್ಲಿ ಕಂಡೆವೋ ಅದನ್ನು ಅನುಸರಿಸುತ್ತೇವೆ ಎನ್ನುತ್ತಾರೆ. ಅವರ ಪೂರ್ವಿಕರು ಬುದ್ಧಿಹೀನರೂ ಮತ್ತು ಮಾರ್ಗ ಭ್ರಷ್ಟರಾಗಿದ್ದರೂ ಅವರನ್ನೇ ಅನುಸರಿಸುವಿರಾ?
ئەرەپچە تەپسىرلەر:
وَمَثَلُ الَّذِیْنَ كَفَرُوْا كَمَثَلِ الَّذِیْ یَنْعِقُ بِمَا لَا یَسْمَعُ اِلَّا دُعَآءً وَّنِدَآءً ؕ— صُمٌّۢ بُكْمٌ عُمْیٌ فَهُمْ لَا یَعْقِلُوْنَ ۟
ಸತ್ಯನಿಷೇಧಿಸಿದವರ ಉಪಮೆಯು ಆ ದನಗಾಹಿಯಂತಿದೆ ಅವನು ತನ್ನ ದನಗಳಿಗೆ ಕೂಗುತ್ತಾನೆ. ಅದು ಕೂಗುವವನ ಶಬ್ದವನ್ನಲ್ಲದೆ ಮತ್ತೇನನ್ನು ಕೇಳಿಸಿಕೊಳ್ಳುವುದಿಲ್ಲ. ಅವರು (ಸತ್ಯವನ್ನು ಕೆಳುವುದರಿಂದ) ಕಿವುಡರಾಗಿದ್ದಾರೆ (ಸತ್ಯವನ್ನು ಹೇಳುವುದರಿಂದ) ಮೂಕರಾಗಿದ್ದಾರೆ ಮತ್ತು ಸತ್ಯಮಾರ್ಗವನ್ನು ನೋಡುವುದರಿಂದ ಅಂಧರಾಗಿದ್ದಾರೆ ಅವರಿಗೆ ಬುದ್ಧಿ ಇರುವುದಿಲ್ಲ.
ئەرەپچە تەپسىرلەر:
یٰۤاَیُّهَا الَّذِیْنَ اٰمَنُوْا كُلُوْا مِنْ طَیِّبٰتِ مَا رَزَقْنٰكُمْ وَاشْكُرُوْا لِلّٰهِ اِنْ كُنْتُمْ اِیَّاهُ تَعْبُدُوْنَ ۟
ಓ ಸತ್ಯವಿಶ್ವಾಸಿಗಳೇ, ನಾವು ನಿಮಗೆ ದಯಪಾಲಿಸಿರುವ ಶುದ್ಧವಾದ ಆಹಾರವನ್ನು ತಿನ್ನಿರಿ ಮತ್ತು ಅಲ್ಲಾಹನಿಗೆ ಕೃತಜ್ಞತೆ ಸಲ್ಲಿಸಿರಿ, ನೀವು ಅವನನ್ನು ಮಾತ್ರ ಅರಾಧಿಸುವವರಾಗಿದ್ದರೆ.
ئەرەپچە تەپسىرلەر:
اِنَّمَا حَرَّمَ عَلَیْكُمُ الْمَیْتَةَ وَالدَّمَ وَلَحْمَ الْخِنْزِیْرِ وَمَاۤ اُهِلَّ بِهٖ لِغَیْرِ اللّٰهِ ۚ— فَمَنِ اضْطُرَّ غَیْرَ بَاغٍ وَّلَا عَادٍ فَلَاۤ اِثْمَ عَلَیْهِ ؕ— اِنَّ اللّٰهَ غَفُوْرٌ رَّحِیْمٌ ۟
(ಅಲ್ಲಾಹನಂತು) ನಿಮ್ಮ ಮೇಲೆ ಶವ, ರಕ್ತ, ಹಂದಿಯ ಮಾಂಸ, ಅಲ್ಲಾಹೇತರರ ನಾಮದಲ್ಲಿ ಕೊಯ್ಯಲಾದ ಪ್ರಾಣಿಗಳನ್ನೂ ನಿಷಿದ್ಧಗೊಳಿಸಿದ್ದಾನೆ. ಇನ್ನು ಯಾರು (ನಿಷಿದ್ಧವಾಗಿರುವುದನ್ನು ತಿನ್ನಲು) ನಿರ್ಬಂಧಿತನಾಗುತ್ತಾನೋ ಅವನು ಮೇರೆ ಮೀರುವವನೂ, ಅಕ್ರಮವೆಸಗುವವನೂ ಆಗಿರದಿದ್ದರೆ ಅವನ ಮೇಲೆ ಅವುಗಳ ಸೇವನೆಯಿಂದ ಯಾವ ದೋಷವೂ ಇಲ್ಲ. ಅಲ್ಲಾಹನು ಕ್ಷಮಾಶೀಲನೂ, ಕರುಣಾನಿಧಿಯು ಆಗಿದ್ದಾನೆ.
ئەرەپچە تەپسىرلەر:
اِنَّ الَّذِیْنَ یَكْتُمُوْنَ مَاۤ اَنْزَلَ اللّٰهُ مِنَ الْكِتٰبِ وَیَشْتَرُوْنَ بِهٖ ثَمَنًا قَلِیْلًا ۙ— اُولٰٓىِٕكَ مَا یَاْكُلُوْنَ فِیْ بُطُوْنِهِمْ اِلَّا النَّارَ وَلَا یُكَلِّمُهُمُ اللّٰهُ یَوْمَ الْقِیٰمَةِ وَلَا یُزَكِّیْهِمْ ۖۚ— وَلَهُمْ عَذَابٌ اَلِیْمٌ ۟
ನಿಸ್ಸಂದೇಹವಾಗಿಯು ಅಲ್ಲಾಹನು ಅವತೀರ್ಣಗೊಳಿಸಿದಂತಹ ಗ್ರಂಥವನ್ನು ಅಡಗಿಸಿಡುವವರು ಹಾಗೂ ಅದನ್ನು ತುಚ್ಛ ಲಾಭಕ್ಕಾಗಿ ಮಾರುವವರು ಖಂಡಿತವಾಗಿಯು ತಮ್ಮ ಹೊಟ್ಟೆಗಳಲ್ಲಿ ಅಗ್ನಿಯನ್ನು ತುಂಬುತಿದ್ದಾರೆ. ಅಲ್ಲಾಹನು ಪುನರುತ್ಥಾನ ದಿನದಂದು ಅವರೊಂದಿಗೆ ಮಾತನಾಡುವುದಿಲ್ಲ ಮತ್ತು ಅವರನ್ನು ಸಂಸ್ಕರಿಸುವುದೂ ಇಲ್ಲ. ಮತ್ತು ಅವರಿಗೆ ವೇದನಾಜನಕ ಯಾತನೆಯಿರುವುದು.
ئەرەپچە تەپسىرلەر:
اُولٰٓىِٕكَ الَّذِیْنَ اشْتَرَوُا الضَّلٰلَةَ بِالْهُدٰی وَالْعَذَابَ بِالْمَغْفِرَةِ ۚ— فَمَاۤ اَصْبَرَهُمْ عَلَی النَّارِ ۟
ಅವರು ಸನ್ಮಾರ್ಗದ ಬದಲಿಗೆ ದುರ್ಮಾಗವನ್ನೂ, ಕ್ಷಮೆಯ ಬದಲಿಗೆ ಶಿಕ್ಷೆಯನ್ನೂ ಖರೀದಿಸಿದವರಾಗಿದ್ದಾರೆ. ಮತ್ತು ಅವರು ನರಕಾಗ್ನಿಯ ಯಾತನೆಯನ್ನು ಎಷ್ಟು ಸಹಿಸಿಕೊಳ್ಳುವರು?
ئەرەپچە تەپسىرلەر:
ذٰلِكَ بِاَنَّ اللّٰهَ نَزَّلَ الْكِتٰبَ بِالْحَقِّ ؕ— وَاِنَّ الَّذِیْنَ اخْتَلَفُوْا فِی الْكِتٰبِ لَفِیْ شِقَاقٍ بَعِیْدٍ ۟۠
ಈ ಶಿಕ್ಷೆಗಳ ಕಾರಣ ಅಲ್ಲಾಹನಂತೂ ಸತ್ಯದೊಂದಿಗೆ ಗ್ರಂಥವನ್ನು ಅವತೀರ್ಣಗೊಳಿಸಿದನು ಎಂಬುದೇ ಆಗಿದೆ. ನಿಸ್ಸಂದೇಹವಾಗಿಯೂ ಈ ಗ್ರಂಥದಲ್ಲಿ ಭಿನ್ನತೆ ತೋರುವವರು, ವಿರೋಧದಲ್ಲಿ ಬಹುದೂರ ಸಾಗಿದ್ದಾರೆ.
ئەرەپچە تەپسىرلەر:
لَیْسَ الْبِرَّ اَنْ تُوَلُّوْا وُجُوْهَكُمْ قِبَلَ الْمَشْرِقِ وَالْمَغْرِبِ وَلٰكِنَّ الْبِرَّ مَنْ اٰمَنَ بِاللّٰهِ وَالْیَوْمِ الْاٰخِرِ وَالْمَلٰٓىِٕكَةِ وَالْكِتٰبِ وَالنَّبِیّٖنَ ۚ— وَاٰتَی الْمَالَ عَلٰی حُبِّهٖ ذَوِی الْقُرْبٰی وَالْیَتٰمٰی وَالْمَسٰكِیْنَ وَابْنَ السَّبِیْلِ ۙ— وَالسَّآىِٕلِیْنَ وَفِی الرِّقَابِ ۚ— وَاَقَامَ الصَّلٰوةَ وَاٰتَی الزَّكٰوةَ ۚ— وَالْمُوْفُوْنَ بِعَهْدِهِمْ اِذَا عٰهَدُوْا ۚ— وَالصّٰبِرِیْنَ فِی الْبَاْسَآءِ وَالضَّرَّآءِ وَحِیْنَ الْبَاْسِ ؕ— اُولٰٓىِٕكَ الَّذِیْنَ صَدَقُوْا ؕ— وَاُولٰٓىِٕكَ هُمُ الْمُتَّقُوْنَ ۟
ಪುಣ್ಯವು ನೀವು ನಿಮ್ಮ ಮುಖಗಳನ್ನು ಪೂರ್ವ ಹಾಗೂ ಪಶ್ಚಿಮಗಳ ದಿಕ್ಕುಗಳಿಗೆ ತಿರುಗಿಸುವುದರಲಿಲ್ಲ. ಆದರೆ ವಾಸ್ತವದಲ್ಲಿ ಪುಣ್ಯವು ಒಬ್ಬ ವ್ಯಕ್ತಿಯು ಅಲ್ಲಾಹನಲ್ಲೂ, ಅಂತ್ಯ ದಿನದಲ್ಲೂ, ದೇವದೂತರಲ್ಲೂ, ಗ್ರಂಥಗಳಲ್ಲೂ ವಿಶ್ವಾಸವಿರಿಸಿ ತನಗೆ ಪ್ರಿಯವಾದ ಸಂಪತ್ತನ್ನು ಆಪ್ತ ಸಂಬAಧಿಕರಿಗೂ, ಅನಾಥರಿಗೂ, ನಿರ್ಗತಿಕರಿಗೂ, ಪ್ರಯಾಣಿಕರಿಗೂ, ಬೇಡಿ ಬರುವವರಿಗೂ ನೀಡುವವನು, ಹಾಗೂ ಗುಲಾಮರನ್ನು ವಿಮೋಚಿಸಲಿಕ್ಕಾಗಿ ನೀಡುವವನು ಮತ್ತು ನಮಾಝ್ ಸಂಸ್ಥಾಪಿಸುವವನು, ಝಕಾತ್ ಪಾವತಿಸುವವನು, ವಚನ ಪಾಲಕನು ಮತ್ತು ದಟ್ಟದಾರಿದ್ರö್ಯದಲ್ಲೂ ರೋಗರುಜಿನಗಳಲ್ಲೂ, ಯುದ್ಧ ಸಂದರ್ಭದಲ್ಲೂ ಸಹನೆಯನ್ನು ಪಾಲಿಸುವವನು ಅವರೇ ಸತ್ಯಸಂಧರು ಹಾಗೂ ಅವರೇ ಭಯಭಕ್ತಿ ಹೊಂದಿದವರಾಗಿದ್ದಾರೆ.
ئەرەپچە تەپسىرلەر:
یٰۤاَیُّهَا الَّذِیْنَ اٰمَنُوْا كُتِبَ عَلَیْكُمُ الْقِصَاصُ فِی الْقَتْلٰی ؕ— اَلْحُرُّ بِالْحُرِّ وَالْعَبْدُ بِالْعَبْدِ وَالْاُ بِالْاُ ؕ— فَمَنْ عُفِیَ لَهٗ مِنْ اَخِیْهِ شَیْءٌ فَاتِّبَاعٌ بِالْمَعْرُوْفِ وَاَدَآءٌ اِلَیْهِ بِاِحْسَانٍ ؕ— ذٰلِكَ تَخْفِیْفٌ مِّنْ رَّبِّكُمْ وَرَحْمَةٌ ؕ— فَمَنِ اعْتَدٰی بَعْدَ ذٰلِكَ فَلَهٗ عَذَابٌ اَلِیْمٌ ۟ۚ
ಓ ಸತ್ಯವಿಶ್ವಾಸಿಗಳೇ, (ಕೊಲೆ ಮುಕದ್ದಮೆಗಳಲ್ಲಿ ಅನ್ಯಾಯವಾಗಿ) ಕೊಲೆಗೀಡಾದವರ ಪ್ರತಿಕಾರ ಪಡೆಯುವುದನ್ನು ನಿಮ್ಮ ಮೇಲೆ ಕಡ್ಡಾಯಗೊಳಿಸಲಾಗಿದೆ ಕೊಲೆಗಾರನು ಸ್ವತಂತ್ರ ವ್ಯಕ್ತಿಯಾಗಿದ್ದರೆ, ಆ ಸ್ವತಂತ್ರ ವ್ಯಕ್ತಿಯನ್ನೇ ಕೊಲೆಗಾರನು ಗುಲಾಮನಾಗಿದ್ದರೆ ಆ ಗುಲಾಮನನ್ನೇ ಕೊಲೆಗಾರ, ಸ್ತಿçà ಆಗಿದ್ದರೆ ಆ ಸ್ತಿçÃಯನ್ನೇ, ಕೊಲ್ಲಲಾಗುವುದು. ಕೊಲೆಗೀಡಾದವರ ಸಹೋದರ (ವಾರಿಸುದಾರ) ನಿಂದ ಎನಾದರೂ ಕ್ಷಮೆ ನೀಡಲಾದರೆ ಅವನು ಸದಾಚಾರದೊಂದಿಗೆ ಅನುಸರಿಸಬೇಕು. ಮತ್ತು ಅವನಿಗೆ ರಕ್ತ ಪರಿಹಾರಧನವನ್ನು ನೀಡಬೇಕು. ಇದು ನಿಮ್ಮ ಪ್ರಭುವಿನ ಕಡೆಯ ಒಂದು ವಿನಾಯಿತಿ ಮತ್ತು ಕಾರುಣ್ಯವಾಗಿದೆ. ಇದಾದ ನಂತರವೂ ಯಾರು ಅತಿಕ್ರಮ ತೋರುತ್ತಾನೋ ಅವನಿಗೆ ವೇದನಾಜನಕ ಯಾತನೆಯಿರುವುದು.
ئەرەپچە تەپسىرلەر:
وَلَكُمْ فِی الْقِصَاصِ حَیٰوةٌ یّٰۤاُولِی الْاَلْبَابِ لَعَلَّكُمْ تَتَّقُوْنَ ۟
ಓ ಬುದ್ದಿ ಜೀವಿಗಳೇ ನಿಮಗೆ ಪ್ರತಿಕಾರ ಕ್ರಮದಲ್ಲಿ ಜೀವನವಿದೆ ಇದರಿಂದ ನೀವು (ಅನ್ಯಾಯ ಕೊಲೆಯಿಂದ) ಸುರಕ್ಷಿತವಾಗಿರುವಿರಿ.
ئەرەپچە تەپسىرلەر:
كُتِبَ عَلَیْكُمْ اِذَا حَضَرَ اَحَدَكُمُ الْمَوْتُ اِنْ تَرَكَ خَیْرَا ۖۚ— ١لْوَصِیَّةُ لِلْوَالِدَیْنِ وَالْاَقْرَبِیْنَ بِالْمَعْرُوْفِ ۚ— حَقًّا عَلَی الْمُتَّقِیْنَ ۟ؕ
ನಿಮ್ಮಲ್ಲಿ ಯಾರಿಗಾದರೂ ಮರಣಾಸನ್ನವಾದಾಗ ಅವನು ಸಂಪತ್ತು ಬಿಟ್ಟು ಹೋಗುವುದಾದರೆ ಮಾತಾಪಿತರಿಗೂ, ಆಪ್ತ ಸಂಬAಧಿಕರಿಗೂ ಸದಾಚಾರದೊಂದಿಗೆ ಉಯಿಲು ಮಾಡುವುದನ್ನು ನಿಮ್ಮ ಮೇಲೆ ಕಡ್ಡಾಯಗೊಳಿಸಲಾಗಿದೆ. ಇದು ಭಯಭಕ್ತಿಯುಳ್ಳವರ ಮೇಲೆ ಬಾಧ್ಯತೆಯಾಗಿದೆ.
ئەرەپچە تەپسىرلەر:
فَمَنْ بَدَّلَهٗ بَعْدَ مَا سَمِعَهٗ فَاِنَّمَاۤ اِثْمُهٗ عَلَی الَّذِیْنَ یُبَدِّلُوْنَهٗ ؕ— اِنَّ اللّٰهَ سَمِیْعٌ عَلِیْمٌ ۟ؕ
ಅದನ್ನು ಆಲಿಸಿದ ನಂತರವೂ ಯಾರಾದರೂ ಅದನ್ನು ಬದಲಾಯಿಸಿದರೆ ಅದರ ಪಾಪವು ಅದನ್ನು ಬದಲಾಯಿಸಿದವನ ಮೇಲೆ ಮಾತ್ರ ಇರುವುದು. ವಾಸ್ತವದಲ್ಲಿ ಅಲ್ಲಾಹನು ಸರ್ವವನ್ನಾಲಿಸುವವನೂ, ಸರ್ವಜ್ಞಾನಿಯೂ ಆಗಿದ್ದಾನೆ.
ئەرەپچە تەپسىرلەر:
فَمَنْ خَافَ مِنْ مُّوْصٍ جَنَفًا اَوْ اِثْمًا فَاَصْلَحَ بَیْنَهُمْ فَلَاۤ اِثْمَ عَلَیْهِ ؕ— اِنَّ اللّٰهَ غَفُوْرٌ رَّحِیْمٌ ۟۠
ಇನ್ನು ಉಯಿಲುಗಾರನಿಂದ ಪಕ್ಷಪಾತ ಅಥವಾ ಪಾಪದ ನಿಮಿತ್ತ ಭಯಪಟ್ಟು ಯಾರಾದರೂ ಅವರ ನಡುವೆ ಸುಧಾರಣೆ ಮಾಡಿದರೆ ಅವನ ಮೇಲೆ ಯಾವುದೇ ದೋಷವಿರುವುದಿಲ್ಲ. ನಿಜವಾಗಿಯೂ ಅಲ್ಲಾಹನು ಕ್ಷಮಾಶೀಲನೂ ಕರುಣಾನಿಧಿಯೂ ಆಗಿದ್ದಾನೆ.
ئەرەپچە تەپسىرلەر:
یٰۤاَیُّهَا الَّذِیْنَ اٰمَنُوْا كُتِبَ عَلَیْكُمُ الصِّیَامُ كَمَا كُتِبَ عَلَی الَّذِیْنَ مِنْ قَبْلِكُمْ لَعَلَّكُمْ تَتَّقُوْنَ ۟ۙ
ಓ ಸತ್ಯವಿಶ್ವಾಸಿಗಳೇ, ಉಪವಾಸ ವ್ರತವನ್ನು ನಿಮ್ಮ ಹಿಂದಿನವರ ಮೇಲೆ ಕಡ್ಡಾಯಗೊಳಿಸಲಾದಂತೆ ನಿಮ್ಮ ಮೇಲೂ ಕಡ್ಡಾಯಗೊಳಿಸಲಾಗಿದೆ. ನೀವು ಭಯಭಕ್ತಿ ಹೊಂದಲೆAದು.
ئەرەپچە تەپسىرلەر:
اَیَّامًا مَّعْدُوْدٰتٍ ؕ— فَمَنْ كَانَ مِنْكُمْ مَّرِیْضًا اَوْ عَلٰی سَفَرٍ فَعِدَّةٌ مِّنْ اَیَّامٍ اُخَرَ ؕ— وَعَلَی الَّذِیْنَ یُطِیْقُوْنَهٗ فِدْیَةٌ طَعَامُ مِسْكِیْنٍ ؕ— فَمَنْ تَطَوَّعَ خَیْرًا فَهُوَ خَیْرٌ لَّهٗ ؕ— وَاَنْ تَصُوْمُوْا خَیْرٌ لَّكُمْ اِنْ كُنْتُمْ تَعْلَمُوْنَ ۟
ಬೆರಳೆಣಿಕೆಯ ಕೆಲವು ದಿನಗಳು ಮಾತ್ರವಾಗಿದೆ. ಇನ್ನು ನಿಮ್ಮಲ್ಲಿ ಯಾರಾದರೂ ರೋಗಿಯಾಗಿದ್ದರೆ ಅಥವಾ ಪ್ರಯಾಣದಲ್ಲಿದ್ದರೆ ಅವನು ಇತರ ದಿನಗಳಲ್ಲಿ ಆ ಸಂಖ್ಯೆಯನ್ನು ಪೂರ್ತಿಗೊಳಿಸಲಿ ಮತ್ತು ಸಾಮರ್ಥ್ಯವಿಲ್ಲದೆ ಉಪವಾಸವಿರದವರೂ ಪ್ರಾಯಶ್ಚಿತವಾಗಿ ಒಬ್ಬ ನಿರ್ಗತಿಕನಿಗೆ ಆಹಾರವನ್ನು ನೀಡಲಿ. ಇನ್ನು ಯಾರು ಸ್ವಇಚ್ಛೆಯಿಂದ ಒಳಿತಿನಲ್ಲಿ ಮುಂದೆ ಸಾಗುತ್ತಾನೋ ಅದು ಅವನ ಪಾಲಿಗೆ ಉತ್ತಮವಾಗಿರುವುದು. ನೀವು ಪ್ರಯಾಸಪಟ್ಟಾದರೂ- ಉಪವಾಸ ಆಚರಿಸುವುದೇ ನಿಮಗೆ ಅತ್ಯುತ್ತಮವಾಗಿರುತ್ತದೆ. ನೀವು ಅರಿಯುಳ್ಳವರಾಗಿದ್ದರೆ.
ئەرەپچە تەپسىرلەر:
شَهْرُ رَمَضَانَ الَّذِیْۤ اُنْزِلَ فِیْهِ الْقُرْاٰنُ هُدًی لِّلنَّاسِ وَبَیِّنٰتٍ مِّنَ الْهُدٰی وَالْفُرْقَانِ ۚ— فَمَنْ شَهِدَ مِنْكُمُ الشَّهْرَ فَلْیَصُمْهُ ؕ— وَمَنْ كَانَ مَرِیْضًا اَوْ عَلٰی سَفَرٍ فَعِدَّةٌ مِّنْ اَیَّامٍ اُخَرَ ؕ— یُرِیْدُ اللّٰهُ بِكُمُ الْیُسْرَ وَلَا یُرِیْدُ بِكُمُ الْعُسْرَ ؗ— وَلِتُكْمِلُوا الْعِدَّةَ وَلِتُكَبِّرُوا اللّٰهَ عَلٰی مَا هَدٰىكُمْ وَلَعَلَّكُمْ تَشْكُرُوْنَ ۟
ರಮe಼Áನ್ ತಿಂಗಳಲ್ಲೇ ಕುರ್‌ಆನ್ ಅವತೀರ್ಣಗೊಳಿಸಲಾಗಿದೆ. ಅದು ಸಕಲ ಜನರಿಗೆ ಮಾರ್ಗದರ್ಶನವಾಗಿಯೂ ಸನ್ಮಾರ್ಗ ಹಾಗೂ ಸತ್ಯಾಸತ್ಯತೆಗಳನ್ನು ಬೇರ್ಪಡಿಸುವ ಸುಸ್ಪಷ್ಟ ಆಧಾರ ಪ್ರಮಾಣದ ಮಾನದಂಡವಾಗಿದೆ. ಇನ್ನು ನಿಮ್ಮ ಪೈಕಿ ಯಾರು ಈ ತಿಂಗಳನ್ನು ಪಡೆಯುತ್ತಾನೋ ಅವನು ಉಪವಾಸ ಆಚರಿಸಲಿ. ಇನ್ನು ಯಾರಾದರೂ ರೋಗಿಯಾಗಿದ್ದರೆ ಇಲ್ಲವೇ ಪ್ರಯಾಣದಲ್ಲಿದ್ದರೇ ಅವನು ಬೇರೆ ದಿನಗಳಲ್ಲಿ ಉಪವಾಸದ ಸಂಖ್ಯೆಯನ್ನು ಪೂರ್ತಿಗೊಳಿಸಲಿ. ಅಲ್ಲಾಹನು ನಿಮಗೆ ಅನುಕೂಲತೆಯನ್ನು ಬಯಸುತ್ತಾನೆ ಹೊರತು ಕ್ಲಿಷ್ಟತೆಯನ್ನಲ್ಲ ಮತ್ತು ನೀವು ಸಂಖ್ಯೆಯನ್ನು ಪೂರ್ತಿಗೊಳಿಸಲ್ಲಿಕ್ಕಾಗಿ ಅಲ್ಲಾಹನು ನಿಮಗೆ ಸನ್ಮಾರ್ಗವನ್ನು ತೋರಿಸಿಕೊಟ್ಟ ಸಲುವಾಗಿ ನೀವು ಅವನ ಘನತೆಯನ್ನು ಘೋಷಿಸಲಿಕ್ಕಾಗಿ ಮತ್ತು ಕೃತಜ್ಞತೆ ಸಲ್ಲಿಸಲಿಕ್ಕಾಗಿ (ನಿಮಗೆ ಆದೇಶಿಸಲಾಗಿದೆ.) ಅವನು ಬಯಸುತ್ತಾನೆ.
ئەرەپچە تەپسىرلەر:
وَاِذَا سَاَلَكَ عِبَادِیْ عَنِّیْ فَاِنِّیْ قَرِیْبٌ ؕ— اُجِیْبُ دَعْوَةَ الدَّاعِ اِذَا دَعَانِ فَلْیَسْتَجِیْبُوْا لِیْ وَلْیُؤْمِنُوْا بِیْ لَعَلَّهُمْ یَرْشُدُوْنَ ۟
ಓ ಪೈಗಂಬರರೇ ನನ್ನ ಬಗ್ಗೆ ನನ್ನ ದಾಸನು ನಿಮ್ಮೊಡನೆ ಕೇಳಿದರೆ ಹೇಳಿರಿ; ನಿಸ್ಸಂಶಯವಾಗಿಯೂ ನಾನು ಸಮೀಪದಲ್ಲಿದ್ದೇನೆ. ನನ್ನನ್ನು ಪ್ರಾರ್ಥಿಸುವಾಗ ಪ್ರಾರ್ಥಿಸುವವನ ಪ್ರಾರ್ಥನೆಗೆ ನಾನು ಓಗೊಡುತ್ತೇನೆ. ಆದ್ದರಿಂದ ಅವರು ನನ್ನ ಆದೇಶಗಳಿಗೆ ಓಗೂಡಲಿ ಹಾಗೂ ನನ್ನಲ್ಲಿ ವಿಶ್ವಾಸವಿರಿಸಲಿ. ಪ್ರಾಯಶಃ ಅವರು ಸನ್ಮಾರ್ಗ ಪಡೆಯಬಹುದು.
ئەرەپچە تەپسىرلەر:
اُحِلَّ لَكُمْ لَیْلَةَ الصِّیَامِ الرَّفَثُ اِلٰی نِسَآىِٕكُمْ ؕ— هُنَّ لِبَاسٌ لَّكُمْ وَاَنْتُمْ لِبَاسٌ لَّهُنَّ ؕ— عَلِمَ اللّٰهُ اَنَّكُمْ كُنْتُمْ تَخْتَانُوْنَ اَنْفُسَكُمْ فَتَابَ عَلَیْكُمْ وَعَفَا عَنْكُمْ ۚ— فَالْـٰٔنَ بَاشِرُوْهُنَّ وَابْتَغُوْا مَا كَتَبَ اللّٰهُ لَكُمْ ۪— وَكُلُوْا وَاشْرَبُوْا حَتّٰی یَتَبَیَّنَ لَكُمُ الْخَیْطُ الْاَبْیَضُ مِنَ الْخَیْطِ الْاَسْوَدِ مِنَ الْفَجْرِ ۪— ثُمَّ اَتِمُّوا الصِّیَامَ اِلَی الَّیْلِ ۚ— وَلَا تُبَاشِرُوْهُنَّ وَاَنْتُمْ عٰكِفُوْنَ فِی الْمَسٰجِدِ ؕ— تِلْكَ حُدُوْدُ اللّٰهِ فَلَا تَقْرَبُوْهَا ؕ— كَذٰلِكَ یُبَیِّنُ اللّٰهُ اٰیٰتِهٖ لِلنَّاسِ لَعَلَّهُمْ یَتَّقُوْنَ ۟
ಉಪವಾಸದ ರಾತ್ರಿಯಲ್ಲಿ ನಿಮಗೆ ಸತಿ ಸಂಪರ್ಕ ಧರ್ಮ ಸಮ್ಮತಗೊಳಿಸಲಾಗಿದೆ. ಅವರು ನಿಮ್ಮ ಉಡುಪಾಗಿದ್ದಾರೆ ಹಾಗೂ ನೀವು ಅವರ ಉಡುಪಾಗಿದ್ದೀರಿ. ನಿಮ್ಮ ರಹಸ್ಯವಾದ ವಂಚನೆಗಳನ್ನು ಅಲ್ಲಾಹನು ಅರಿತಿದ್ದಾನೆ ಅವನು ನಿಮ್ಮ ಪಶ್ಚಾತ್ತಾಪವನ್ನು ಸ್ವೀಕರಿಸಿ ನಿಮ್ಮನ್ನು ಮನ್ನಿಸಿಬಿಟ್ಟಿರುವನು. ಇನ್ನು ನೀವು ಅವರನ್ನು ಸಂಭೋಗಿಸಲು ಹಾಗೂ ಅಲ್ಲಾಹನು ನಿಮ್ಮ ಪಾಲಿಗೆ ನಿಶ್ಚಯಿಸಿರುವುದನ್ನು ಅರಸಿರಿ ಮತ್ತು ನಿಮಗೆ ಪ್ರಭಾತದ ಬಿಳಿ ನೂಲು ಕಪ್ಪು ನೂಲಿನಿಂದ ಸ್ಪಷ್ಟವಾಗುವವರೆಗೆ ತಿನ್ನಿರಿ ಹಾಗೂ ಕುಡಿಯಿರಿ. ನಂತರ ಇರುಳಿನವರಗೆ ನೀವು ಉಪವಾಸವನ್ನು ಪೂರ್ತಿಗೊಳಿಸಿರಿ ಮತ್ತು ನೀವು ಮಸೀದಿಗಳಲ್ಲಿ `ಈತಿಕಾಫ್' (ಧ್ಯಾನಸಕ್ತರಾಗಿ) ನಲ್ಲಿರುವಾಗ ಪತ್ನಿಯರನ್ನು ಸಂಭೋಗಿಸಬೇಡಿರಿ ಇವು ಅಲ್ಲಾಹನ ಮೇರೆಗಳಾಗಿವೆ. ನೀವು ಇವುಗಳನ್ನು ಹತ್ತಿರಕ್ಕೂ ಸುಳಿಯಬೇಡಿರಿ ಇದೇ ಪ್ರಕಾರ ಅಲ್ಲಾಹನು ಜನರಿಗೆ ತನ್ನ ಸೂಕ್ತಿಗಳನ್ನು ಅವರು ಭಯಭಕ್ತಿ ಪಾಲಿಸಲೆಂದು ವಿವರಿಸಿಕೊಡುತ್ತಾನೆ.
ئەرەپچە تەپسىرلەر:
وَلَا تَاْكُلُوْۤا اَمْوَالَكُمْ بَیْنَكُمْ بِالْبَاطِلِ وَتُدْلُوْا بِهَاۤ اِلَی الْحُكَّامِ لِتَاْكُلُوْا فَرِیْقًا مِّنْ اَمْوَالِ النَّاسِ بِالْاِثْمِ وَاَنْتُمْ تَعْلَمُوْنَ ۟۠
ನೀವು ಪರಸ್ಪರರ ಸಂಪತ್ತುಗಳನ್ನು ಧರ್ಮಬಾಹಿರವಾಗಿ ತಿನ್ನಬೇಡಿರಿ ಹಾಗೂ ತಿಳಿದೂ ತಿಳಿದೂ ಜನರ ಸಂಪತ್ತುಗಳಿAದ ಒಂದAಶವನ್ನು ತಿನ್ನಲು (ಅದರ ವ್ಯಾಜ್ಯವನ್ನು) ಅಧಿಕಾರಿಗಳ ಬಳಿಗೆ ಒಯ್ಯಬೇಡಿ.
ئەرەپچە تەپسىرلەر:
یَسْـَٔلُوْنَكَ عَنِ الْاَهِلَّةِ ؕ— قُلْ هِیَ مَوَاقِیْتُ لِلنَّاسِ وَالْحَجِّ ؕ— وَلَیْسَ الْبِرُّ بِاَنْ تَاْتُوا الْبُیُوْتَ مِنْ ظُهُوْرِهَا وَلٰكِنَّ الْبِرَّ مَنِ اتَّقٰی ۚ— وَاْتُوا الْبُیُوْتَ مِنْ اَبْوَابِهَا ۪— وَاتَّقُوا اللّٰهَ لَعَلَّكُمْ تُفْلِحُوْنَ ۟
ಓ ಪೈಗಂಬರರೇ ಜನರು ಚಂದ್ರ (ವೃದ್ಧಿಷಯಗಳ) ಒಂದರ ಕುರಿತು ವಿಚಾರಿಸುತ್ತಾರೆ, ಹೇಳಿರಿ; ಅದು ಜನರ ವೇಳೆಗಳ ನಿರ್ಣಯ ಮತ್ತು ಹಜ್ಜ್ನ ಕಾಲದ ಸೂಚಕವಾಗಿದೆ. ಮತ್ತು ನೀವು ಇಹ್ರಾಮ್ ಸ್ಥಿತಿಯಲ್ಲಿ ಮನೆಗಳಿಗೆ ಹಿಂಭಾಗದಿAದ ಬರುವುದು ಪುಣ್ಯವೇನಲ್ಲ. ಆದರೆ ಪುಣ್ಯವಂತನೆAದರೆ ಭಯಭಕ್ತಿ ಹೊಂದಿರುವವನಾಗಿದ್ದಾನೆ. ಮತ್ತು ನೀವು ಮನೆಗಳಿಗೆ ಅವುಗಳ ಬಾಗಿಲುಗಳಿಂದಲೇ ಬನ್ನಿರಿ ಮತ್ತು ಅಲ್ಲಾಹನನ್ನು ಭಯಪಡಿರಿ ಪ್ರಾಯಶಃ ನೀವು ಯಶಸ್ಸು ಹೊಂದಬಹುದು.
ئەرەپچە تەپسىرلەر:
وَقَاتِلُوْا فِیْ سَبِیْلِ اللّٰهِ الَّذِیْنَ یُقَاتِلُوْنَكُمْ وَلَا تَعْتَدُوْا ؕ— اِنَّ اللّٰهَ لَا یُحِبُّ الْمُعْتَدِیْنَ ۟
ಮತ್ತು ನಿಮ್ಮೊಡನೆ ಯುದ್ಧ ಮಾಡುವವರೊಂದಿಗೆ ನೀವು ಅಲ್ಲಾಹನ ಮಾರ್ಗದಲ್ಲಿ ಯುದ್ಧ ಮಾಡಿರಿ ಮತ್ತು ಹದ್ದು ಮೀರಬೇಡಿರಿ ಖಂಡಿತವಾಗಿಯು ಅಲ್ಲಾಹನು ಹದ್ದು ಮೀರುವವರನ್ನು ಇಷ್ಟಪಡುವುದಿಲ್ಲ.
ئەرەپچە تەپسىرلەر:
وَاقْتُلُوْهُمْ حَیْثُ ثَقِفْتُمُوْهُمْ وَاَخْرِجُوْهُمْ مِّنْ حَیْثُ اَخْرَجُوْكُمْ وَالْفِتْنَةُ اَشَدُّ مِنَ الْقَتْلِ ۚ— وَلَا تُقٰتِلُوْهُمْ عِنْدَ الْمَسْجِدِ الْحَرَامِ حَتّٰی یُقٰتِلُوْكُمْ فِیْهِ ۚ— فَاِنْ قٰتَلُوْكُمْ فَاقْتُلُوْهُمْ ؕ— كَذٰلِكَ جَزَآءُ الْكٰفِرِیْنَ ۟
ಮತ್ತು ನೀವು ಅವರನ್ನು ಕಂಡಲ್ಲಿ ವಧಿಸಿರಿ ಮತ್ತು ಅವರು ನಿಮ್ಮನ್ನು ಹೊರಗಟ್ಟಿದ್ದಲ್ಲಿಂದಲೇ ನೀವು ಅವರನ್ನು ಹೊರಗಟ್ಟಿರಿ ಮತ್ತು ಕ್ಷೆÆÃಭೆಯು ಕೊಲೆಗಿಂತಲೂ ಹೆಚ್ಚು ಉಗ್ರವಾಗಿದೆ. ಮತ್ತು ನೀವು ಮಸ್ಜಿದುಲ್ ಹರಾಮ್ ಪರಿಸರದಲ್ಲಿ ಸ್ವತಃ ಅವರು ನಿಮ್ಮೊಂದಿಗೆ ಯುದ್ಧ ಆರಂಭಿಸುವ ತನಕ ನೀವು ಅವರೊಂದಿಗೆ ಯುದ್ಧ ಮಾಡಬೇಡಿರಿ. ಇನ್ನು ಅವರು ನಿಮ್ಮೊಂದಿಗೆ ಯುದ್ದ ಮಾಡಿದರೆ ನೀವು ಅವರನ್ನು ವಧಿಸಿರಿ. ಸತ್ಯನಿಷೇಧಿಗಳ ಪ್ರತಿಫಲವು ಇದೇ ಆಗಿದೆ.
ئەرەپچە تەپسىرلەر:
فَاِنِ انْتَهَوْا فَاِنَّ اللّٰهَ غَفُوْرٌ رَّحِیْمٌ ۟
ಇನ್ನು ಅವರು (ಪಶ್ಚಾತ್ತಾಪ ಪಟ್ಟು) ಯುದ್ಧ ವಿರಾಮಗೊಳಿಸಿದರೆ ಅಲ್ಲಾಹನು ಕ್ಷಮಾಶೀಲನು, ಕರುಣಾನಿಧಿಯು ಆಗಿದ್ದಾನೆ.
ئەرەپچە تەپسىرلەر:
وَقٰتِلُوْهُمْ حَتّٰی لَا تَكُوْنَ فِتْنَةٌ وَّیَكُوْنَ الدِّیْنُ لِلّٰهِ ؕ— فَاِنِ انْتَهَوْا فَلَا عُدْوَانَ اِلَّا عَلَی الظّٰلِمِیْنَ ۟
ಕ್ಷೆÆÃಭೆಯು ಕೊನೆಗೊಂಡು ಅಲ್ಲಾಹನ ಧರ್ಮಕ್ಕೆ ವಿಜಯ ಪ್ರಾಪ್ತಿಯಾಗುವ ತನಕ ಅವರೊಂದಿಗೆ ಯುದ್ಧ ಮಾಡಿರಿ. ಇನ್ನು ಅವರು ಯುದ್ಧ ವಿರಾಮಗೊಳಿಸಿದರೆ ನಂತರ ಅಕ್ರಮಿಗಳ ಹೊರತು ಇನ್ನಾರೊಂದಿಗೂ ಅಕ್ರಮಣ ಸಲ್ಲದು.
ئەرەپچە تەپسىرلەر:
اَلشَّهْرُ الْحَرَامُ بِالشَّهْرِ الْحَرَامِ وَالْحُرُمٰتُ قِصَاصٌ ؕ— فَمَنِ اعْتَدٰی عَلَیْكُمْ فَاعْتَدُوْا عَلَیْهِ بِمِثْلِ مَا اعْتَدٰی عَلَیْكُمْ ۪— وَاتَّقُوا اللّٰهَ وَاعْلَمُوْۤا اَنَّ اللّٰهَ مَعَ الْمُتَّقِیْنَ ۟
ಆದರಣಿಯ ತಿಂಗಳುಗಳ ಪ್ರತಿಯಾಗಿ ಆದರಣಿಯ ತಿಂಗಳುಗಳಿವೆ. ನಿಷಿದ್ಧ ಸಂಗತಿಗಳಿಗೂ ತತ್ಸಮಾನ ಕ್ರಮವಿರುವುದು. ಯಾರು ನಿಮ್ಮ ವಿರುದ್ಧ ಅತಿಕ್ರಮ ತೋರುತ್ತಾನೋ ಅವನು ನಿಮ್ಮ ವಿರುದ್ದ ಅತಿಕ್ರಮ ತೋರಿದಷ್ಟೆ ನೀವು ಸಹ ಅವನ ವಿರುದ್ಧ ಅತಿಕ್ರಮ ತೋರಿರಿ ಹಾಗೂ ಅಲ್ಲಾಹನನ್ನು ಭಯಪಡಿರಿ ನಿಶ್ಚಯವಾಗಿಯು ಅಲ್ಲಾಹನು ಭಯ ಭಕ್ತಿಯುಳ್ಳವರೊಂದಿಗೆ ಇದ್ದಾನೆಂಬುವುದನ್ನು ತಿಳಿದುಕೊಳ್ಳಿರಿ.
ئەرەپچە تەپسىرلەر:
وَاَنْفِقُوْا فِیْ سَبِیْلِ اللّٰهِ وَلَا تُلْقُوْا بِاَیْدِیْكُمْ اِلَی التَّهْلُكَةِ ۛۚ— وَاَحْسِنُوْا ۛۚ— اِنَّ اللّٰهَ یُحِبُّ الْمُحْسِنِیْنَ ۟
ಮತ್ತು ನೀವು ಅಲ್ಲಾಹನ ಮಾರ್ಗದಲ್ಲಿ ಖರ್ಚು ಮಾಡಿರಿ ಮತ್ತು ಸ್ವತಃ ನಿಮ್ಮ ಕೈಗಳ ಮೂಲಕ ನಾಶಕೂಪದಲ್ಲಿ ಬೀಳಬೇಡಿರಿ ಮತ್ತು ನೀವು ಒಳಿತನ್ನು ಪಾಲಿಸಿರಿ. ಅಲ್ಲಾಹನು ಒಳಿತಿನ ಪಾಲಕರನ್ನು ಇಷ್ಟಪಡುತ್ತಾನೆ.
ئەرەپچە تەپسىرلەر:
وَاَتِمُّوا الْحَجَّ وَالْعُمْرَةَ لِلّٰهِ ؕ— فَاِنْ اُحْصِرْتُمْ فَمَا اسْتَیْسَرَ مِنَ الْهَدْیِ ۚ— وَلَا تَحْلِقُوْا رُءُوْسَكُمْ حَتّٰی یَبْلُغَ الْهَدْیُ مَحِلَّهٗ ؕ— فَمَنْ كَانَ مِنْكُمْ مَّرِیْضًا اَوْ بِهٖۤ اَذًی مِّنْ رَّاْسِهٖ فَفِدْیَةٌ مِّنْ صِیَامٍ اَوْ صَدَقَةٍ اَوْ نُسُكٍ ۚ— فَاِذَاۤ اَمِنْتُمْ ۥ— فَمَنْ تَمَتَّعَ بِالْعُمْرَةِ اِلَی الْحَجِّ فَمَا اسْتَیْسَرَ مِنَ الْهَدْیِ ۚ— فَمَنْ لَّمْ یَجِدْ فَصِیَامُ ثَلٰثَةِ اَیَّامٍ فِی الْحَجِّ وَسَبْعَةٍ اِذَا رَجَعْتُمْ ؕ— تِلْكَ عَشَرَةٌ كَامِلَةٌ ؕ— ذٰلِكَ لِمَنْ لَّمْ یَكُنْ اَهْلُهٗ حَاضِرِی الْمَسْجِدِ الْحَرَامِ ؕ— وَاتَّقُوا اللّٰهَ وَاعْلَمُوْۤا اَنَّ اللّٰهَ شَدِیْدُ الْعِقَابِ ۟۠
ನೀವು ಅಲ್ಲಾಹನಿಗಾಗಿ ಹಜ್ಜ್ ಹಾಗೂ ಉಮ್ರಾವನ್ನು ನೆರವೇರಿಸಿರಿ. ಇನ್ನು ನೀವು ತಡೆಯಲ್ಪಟ್ಟರೆ ಬಲಿಮೃಗಗಳಲ್ಲಿ ಸಾಧ್ಯವಾಗುವುದನ್ನು ಬಲಿ ಅರ್ಪಿಸಿರಿ. ನೀವು ನಿಮ್ಮ ತಲೆಗಳನ್ನು ಬಲಿಮೃಗವು ಅದರ ಬಲಿದಾಣವನ್ನು ತಲುಪುವವರೆಗೆ ಕೇಶ ಮುಂಡನೆ ಮಾಡಬೇಡಿರಿ. ಆದರೆ ನಿಮ್ಮ ಪೈಕಿ ಯಾರಾದರೂ ರೋಗಿಯಾಗಿದ್ದರೆ ಅಥವಾ ಅವನ ತಲೆಯಲ್ಲಿ ಏನಾದರೂ ತೊಂದರೆಯಿದ್ದರೆ (ಅವನು ಕೇಶಮುಂಡನ ಮಾಡಿಕೊಂಡರೆ) ಉಪವಾಸಗಳಿಂದ ಇಲ್ಲವೇ ದಾನಧರ್ಮಗಳಿಂದ ಇಲ್ಲವೇ ಬಲಿದಾನಗಳಿಂದ ಪ್ರಾಯಶ್ಚಿತ್ತ ನೀಡಬೇಕಾಗಿದೆ. ಇನ್ನು ನೀವು ನಿರ್ಭಯ ಸ್ಥಿತಿಯಲ್ಲಿದ್ದರೆ ಯಾರಾದರೂ ಹಜ್ಜ್-ಎ-ತಮತ್ತೂ ಮಾಡುತ್ತಾನೋ ಅವನು ಸಾಧ್ಯವಾಗುವ ಬಲಿ ಮೃಗವನ್ನು ಬಲಿ ನೀಡಲಿ ಇನ್ನೂ ಸಾಮರ್ಥ್ಯವಿಲ್ಲದವನು ಮೂರು ದಿನ ಹಜ್ಜ್ನ ವೇಳೆಯಲ್ಲೂ, ಏಳುದಿನ ಮರಳಿ ಹೋದಾಗಲೂ ಉಪವಾಸ ಆಚರಿಸಬೇಕು. ಇವು ಒಟ್ಟು ಹತ್ತು ದಿನಗಳಾದವು. ಈ ನಿಯಮವು ಯಾರ ಕುಟುಂಬವು ಮಸ್ಜಿದುಲ್ ಹರಾಮ್‌ನ ಪರಿಸರದಲ್ಲಿ ಇಲ್ಲವೋ ಅವರಿಗೆ ಅನ್ವಯವಾಗಿರುವುದು. ಓ ಜನರೇ, ನೀವು ಅಲ್ಲಾಹನನ್ನು ಭಯಪಡಿರಿ ಮತ್ತು ಅಲ್ಲಾಹನು ಅತ್ಯುಗ್ರವಾಗಿ ಶಿಕ್ಷಿಸುವವನಾಗಿದ್ದಾನೆಂದು ನೀವು ತಿಳಿದುಕೊಳ್ಳಿರಿ.
ئەرەپچە تەپسىرلەر:
اَلْحَجُّ اَشْهُرٌ مَّعْلُوْمٰتٌ ۚ— فَمَنْ فَرَضَ فِیْهِنَّ الْحَجَّ فَلَا رَفَثَ وَلَا فُسُوْقَ وَلَا جِدَالَ فِی الْحَجِّ ؕ— وَمَا تَفْعَلُوْا مِنْ خَیْرٍ یَّعْلَمْهُ اللّٰهُ ؔؕ— وَتَزَوَّدُوْا فَاِنَّ خَیْرَ الزَّادِ التَّقْوٰی ؗ— وَاتَّقُوْنِ یٰۤاُولِی الْاَلْبَابِ ۟
ಹಜ್ಜಿನ ಮಾಸಗಳು ನಿಶ್ಚಿತವಾಗಿವೆ. ಆದ್ದರಿಂದ ಯಾರು ಆ ಮಾಸಗಳಲ್ಲಿ ಹಜ್ಜನ್ನು ಅನಿವಾರ್ಯವಾಗಿಸುತ್ತಾನೋ ಅವನು ಹಜ್ಜಿನ ಅವಧಿಯಲ್ಲಿ ತನ್ನ ಪತ್ನಿಯೊಂದಿಗೆ ಸರಸಸಲ್ಲಾಪವಾಗಲಿ, ಪಾಪವಾಗಲಿ, ಜಗಳವಾಗಲಿ ಮಾಡುವುದರಿಂದ ದೂರವಿರಬೇಕು ಮತ್ತು ನೀವು ಮಾಡುವ ಯಾವುದೇ ಒಳಿತಾಗಲೀ ಅದನ್ನು ಅಲ್ಲಾಹನು ಅರಿಯುತ್ತಾನೆ ಮತ್ತು ನೀವು ಯಾತ್ರಾ ಸಾಮಗ್ರಿಗಳ ಸಿದ್ಧತೆ ಮಾಡಿರಿ. ಎಲ್ಲಕ್ಕಿಂತ ಅತ್ಯತ್ತಮ ಯಾತ್ರಾ ಸಾಮಗ್ರಿಯು ಅಲ್ಲಾಹನ ಭಯಭಕ್ತಿಯಾಗಿದೆ. ಮತ್ತು ಓ ಬುದ್ಧಿ ಜೀವಿಗಳೇ, ನನ್ನನ್ನೇ ಭಯಪಡಿರಿ.
ئەرەپچە تەپسىرلەر:
لَیْسَ عَلَیْكُمْ جُنَاحٌ اَنْ تَبْتَغُوْا فَضْلًا مِّنْ رَّبِّكُمْ ؕ— فَاِذَاۤ اَفَضْتُمْ مِّنْ عَرَفٰتٍ فَاذْكُرُوا اللّٰهَ عِنْدَ الْمَشْعَرِ الْحَرَامِ ۪— وَاذْكُرُوْهُ كَمَا هَدٰىكُمْ ۚ— وَاِنْ كُنْتُمْ مِّنْ قَبْلِهٖ لَمِنَ الضَّآلِّیْنَ ۟
ನೀವು ನಿಮ್ಮ ಪ್ರಭುವಿನ ಅನುಗ್ರಹವನ್ನು (ವ್ಯಾಪಾರ ವ್ಯವಹಾರಗಳಿಂದ) ಅರಸುವುದರಿಂದ ನಿಮ್ಮ ಮೇಲೆ ಯಾವುದೇ ದೋಷವಿಲ್ಲ. ಇನ್ನು ನೀವು ಅರಫಾತ್‌ನಿಂದ ಮರಳಿದಾಗ ಮಶ್‌ಅರುಲ್ ಹರಾಮ್‌ನಲ್ಲಿ (ಮುಜ್‌ದಲಿಫಾ ಮೈದಾನದಲ್ಲಿ) ಅಲ್ಲಾಹನನ್ನು ಸ್ಮರಿಸಿರಿ ಮತ್ತು ಅವನು ನಿಮಗೆ ಮಾರ್ಗದರ್ಶನ ನೀಡಿದ ಪ್ರಕಾರವೇ ನೀವು ಅವನನ್ನು ಸ್ಮರಿಸಿರಿ. ವಸ್ತುತಃ ನೀವು ಇದಕ್ಕೆ ಮೊದಲು ಮಾರ್ಗ ಭ್ರಷ್ಟರಾಗಿದ್ದೀರಿ.
ئەرەپچە تەپسىرلەر:
ثُمَّ اَفِیْضُوْا مِنْ حَیْثُ اَفَاضَ النَّاسُ وَاسْتَغْفِرُوا اللّٰهَ ؕ— اِنَّ اللّٰهَ غَفُوْرٌ رَّحِیْمٌ ۟
ತರುವಾಯ ನೀವು (ಖುರೈಷರೇ) ಜನರು ಎಲ್ಲಿಂದ ಮರುಳುತ್ತಾರೋ ಅಲ್ಲಿಂದಲೇ ಮರಳಿರಿ ಹಾಗೂ ಅಲ್ಲಾಹನಲ್ಲಿ ಕ್ಷಮೆಯಾಚಿಸಿರಿ.
ئەرەپچە تەپسىرلەر:
فَاِذَا قَضَیْتُمْ مَّنَاسِكَكُمْ فَاذْكُرُوا اللّٰهَ كَذِكْرِكُمْ اٰبَآءَكُمْ اَوْ اَشَدَّ ذِكْرًا ؕ— فَمِنَ النَّاسِ مَنْ یَّقُوْلُ رَبَّنَاۤ اٰتِنَا فِی الدُّنْیَا وَمَا لَهٗ فِی الْاٰخِرَةِ مِنْ خَلَاقٍ ۟
ನೀವು ಹಜ್ಜಿನ ವಿಧಿ ವಿಧಾನಗಳನ್ನು ಪೂರೈಸಿದ ಬಳಿಕ ನೀವು ನಿಮ್ಮ ಪೂರ್ವಜರನ್ನು ಸ್ಮರಿಸುವಂತೆ ಅಥವಾ ಅದಕ್ಕಿಂತಲೂ ಹೆಚ್ಚಾಗಿ ಅಲ್ಲಾಹನನ್ನು ಸ್ಮರಿಸಿರಿ. ಆದರೆ ಜನರ ಪೈಕಿ ಕೆಲವರು; ನಮ್ಮ ಪ್ರಭುವೇ ನಮಗೆ ಈ ಇಹಲೋಕದಲ್ಲೇ (ಅನುಗ್ರಹವನ್ನು) ದಯಪಾಲಿಸು ಎಂದು ಹೇಳುವವರಿದ್ದಾರೆ. ಅಂಥವರಿಗೆ ಪರಲೋಕದಲ್ಲಿ ಯಾವುದೇ ಪಾಲು ಇರುವುದಿಲ್ಲ.
ئەرەپچە تەپسىرلەر:
وَمِنْهُمْ مَّنْ یَّقُوْلُ رَبَّنَاۤ اٰتِنَا فِی الدُّنْیَا حَسَنَةً وَّفِی الْاٰخِرَةِ حَسَنَةً وَّقِنَا عَذَابَ النَّارِ ۟
ಇನ್ನು ಅವರ ಪೈಕಿ ಕೆಲವರು ಓ ನಮ್ಮ ಪ್ರಭುವೇ, ನಮಗೆ ಇಹಲೋಕದಲ್ಲಿ ಒಳಿತನ್ನು ನೀಡು ಮತ್ತು ಪರಲೋಕದಲ್ಲೂ ಒಳಿತನ್ನು ದಯಪಾಲಿಸು ಮತ್ತು ನಮ್ಮನ್ನು ನರಕಾಗ್ನಿಯ ಯಾತನೆಯಿಂದ ರಕ್ಷಿಸು ಎಂದು ಬೇಡುವವರಿದ್ದಾರೆ.
ئەرەپچە تەپسىرلەر:
اُولٰٓىِٕكَ لَهُمْ نَصِیْبٌ مِّمَّا كَسَبُوْا ؕ— وَاللّٰهُ سَرِیْعُ الْحِسَابِ ۟
ಇಂತಹವರಿಗೆ (ಇಹಪರಗಳಲ್ಲಿ) ಅವರು ಸಂಪಾದಿಸಿರುವುದರಲ್ಲಿ ಒಂದು ಪಾಲು (ಪುಣ್ಯದ ರೂಪದಲ್ಲಿ) ಇರುವುದು ಮತ್ತು ಅಲ್ಲಾಹನು ಲೆಕ್ಕವಿಚಾರಣೆಯಲ್ಲಿ ಶೀಘ್ರನಾಗಿದ್ದಾನೆ.
ئەرەپچە تەپسىرلەر:
وَاذْكُرُوا اللّٰهَ فِیْۤ اَیَّامٍ مَّعْدُوْدٰتٍ ؕ— فَمَنْ تَعَجَّلَ فِیْ یَوْمَیْنِ فَلَاۤ اِثْمَ عَلَیْهِ ۚ— وَمَنْ تَاَخَّرَ فَلَاۤ اِثْمَ عَلَیْهِ ۙ— لِمَنِ اتَّقٰی ؕ— وَاتَّقُوا اللّٰهَ وَاعْلَمُوْۤا اَنَّكُمْ اِلَیْهِ تُحْشَرُوْنَ ۟
ಮಿನಾದ ನಿರ್ದಿಷ್ಟ ದಿನಗಳಲ್ಲಿ ಅಲ್ಲಾಹನನ್ನು ಸ್ಮರಿಸಿರಿ. ಇನ್ನು ಎರಡು ದಿನಗಳಲ್ಲೇ ಮಿನಾದಿಂದ ಹೊರಡುವವನ ಮೇಲೆ ಯಾವ ದೋಷವಿಲ್ಲ, ಮತ್ತು ಒಂದು ದಿನ ತಡ ಮಾಡುವವನ ಮೇಲೂ ದೋಷವಿರುವುದಿಲ್ಲ. ಇದು ಭಯಭಕ್ತಿ ಹೊಂದಿದವನಿಗೆ ಮತ್ತು ನೀವು ಅಲ್ಲಾಹÀನನ್ನು ಭಯಪಡಿರಿ. ನಿಸ್ಸಂದೇಹವಾಗಿಯು ನೀವು ಅವನೆಡೆಗೇ ಒಟ್ಟುಗೂಡಿಸಲಾಗುವಿರೆಂಬುದನ್ನು ಅರಿತುಕೊಳ್ಳಿರಿ.
ئەرەپچە تەپسىرلەر:
وَمِنَ النَّاسِ مَنْ یُّعْجِبُكَ قَوْلُهٗ فِی الْحَیٰوةِ الدُّنْیَا وَیُشْهِدُ اللّٰهَ عَلٰی مَا فِیْ قَلْبِهٖ ۙ— وَهُوَ اَلَدُّ الْخِصَامِ ۟
ಇಹಲೋಕ ಜೀವನದಲ್ಲಿ ಜನರ ಪೈಕಿ ಒಬ್ಬನ ಮಾತು ನಿಮ್ಮನ್ನು ಆಕರ್ಶಿಸುತ್ತದೆ ಮತ್ತು ಅವನು ತನ್ನ ಮನಸ್ಸಿನಲ್ಲಿರುವುದರ ಬಗ್ಗೆ ತಾನು ಪ್ರಾಮಾಣಿಕನೆಂದು ಅಲ್ಲಾಹನನ್ನು ಸಾಕ್ಷಿಯಾಗಿಸುತ್ತಾನೆ. ವಸ್ತುತಃ ಅವನು ಭಯಂಕರ ಜಗಳಗಂಟನಾಗಿದ್ದಾನೆ.
ئەرەپچە تەپسىرلەر:
وَاِذَا تَوَلّٰی سَعٰی فِی الْاَرْضِ لِیُفْسِدَ فِیْهَا وَیُهْلِكَ الْحَرْثَ وَالنَّسْلَ ؕ— وَاللّٰهُ لَا یُحِبُّ الْفَسَادَ ۟
ಅವನು ಮರಳಿ ಹೋಗುವಾಗ ಭೊಮಿಯಲ್ಲಿ ಕ್ಷೆÆÃಭೆಯನ್ನುಂಟು ಮಾಡಲು ಬೆಳೆ ನಾಶಪಡಿಸಲು ಮತ್ತು ಪ್ರಾಣಹಾನಿಗೈಯ್ಯಲು ಶ್ರಮಿಸುವನು ಮತ್ತು ಅಲ್ಲಾಹನು ಕ್ಷೆÆÃಭೆಯನ್ನು ಇಷ್ಟಪಡುವುದಿಲ್ಲ.
ئەرەپچە تەپسىرلەر:
وَاِذَا قِیْلَ لَهُ اتَّقِ اللّٰهَ اَخَذَتْهُ الْعِزَّةُ بِالْاِثْمِ فَحَسْبُهٗ جَهَنَّمُ ؕ— وَلَبِئْسَ الْمِهَادُ ۟
ಮತ್ತು ನೀನು ಅಲ್ಲಾಹನನ್ನು ಭಯಪಡು ಎಂದು ಅವನೊಡನೆ ಹೇಳಲಾದರೆ ಅವನ ದುರಭಿಮಾನವು ಅವನನ್ನು ಪಾಪಕೃತ್ಯಕ್ಕೆ ಪ್ರಚೋಧಿಸುತ್ತದೆ. ಅವನಿಗೆ ನರಕವೇ ಸಾಕು ಖಂಡಿತವಾಗಿಯು ಅದು ಅತ್ಯಂತ ನಿಕೃಷ್ಟ ನೆಲೆಯಾಗಿದೆ.
ئەرەپچە تەپسىرلەر:
وَمِنَ النَّاسِ مَنْ یَّشْرِیْ نَفْسَهُ ابْتِغَآءَ مَرْضَاتِ اللّٰهِ ؕ— وَاللّٰهُ رَءُوْفٌۢ بِالْعِبَادِ ۟
(ಇನ್ನು) ಜನರ ಪೈಕಿ ಕೆಲವರು ಅಲ್ಲಾಹನ ಸಂತೃಪ್ತಿಯನ್ನು ಹಂಬಲಿಸಿ ಪ್ರಾಣಾರ್ಪಣೆ ಮಾಡುವವರೂ ಇದ್ದಾರೆ ಮತ್ತು ಅಲ್ಲಾಹನು ದಾಸರ ಕುರಿತು ಕೃಪಾಳುವಾಗಿದ್ದಾನೆ.
ئەرەپچە تەپسىرلەر:
یٰۤاَیُّهَا الَّذِیْنَ اٰمَنُوا ادْخُلُوْا فِی السِّلْمِ كَآفَّةً ۪— وَلَا تَتَّبِعُوْا خُطُوٰتِ الشَّیْطٰنِ ؕ— اِنَّهٗ لَكُمْ عَدُوٌّ مُّبِیْنٌ ۟
ಓ ಸತ್ಯವಿಶ್ವಾಸಿಗಳೇ, ನೀವು ಸಂಪೂರ್ಣವಾಗಿ ಇಸ್ಲಾಮಿನೊಳಗೆ ಪ್ರವೇಶಿಸಿರಿ ಮತ್ತು ಶೈತಾನನ ಹೆಜ್ಜೆಗಳನ್ನು ಅನುಸರಿಸಬೇಡಿರಿ. ಅವನು ನಿಮ್ಮ ಪ್ರತ್ಯಕ್ಷ ಶತ್ರುವಾಗಿದ್ದಾನೆ.
ئەرەپچە تەپسىرلەر:
فَاِنْ زَلَلْتُمْ مِّنْ بَعْدِ مَا جَآءَتْكُمُ الْبَیِّنٰتُ فَاعْلَمُوْۤا اَنَّ اللّٰهَ عَزِیْزٌ حَكِیْمٌ ۟
ಇನ್ನು ಸುಸ್ಪಷ್ಟ ಪುರಾವೆಗಳು ನಿಮ್ಮ ಬಳಿಗೆ ಬಂದ ಬಳಿಕವೂ ನೀವು ಮಾರ್ಗಭ್ರಷ್ಟರಾದರೆ ಅಲ್ಲಾಹನು ಪ್ರಬಲನೂ, ಯುಕ್ತಿಪೂರ್ಣನೂ ಆಗಿದ್ದಾನೆಂಬುದನ್ನು ತಿಳಿದುಕೊಳ್ಳಿರಿ.
ئەرەپچە تەپسىرلەر:
هَلْ یَنْظُرُوْنَ اِلَّاۤ اَنْ یَّاْتِیَهُمُ اللّٰهُ فِیْ ظُلَلٍ مِّنَ الْغَمَامِ وَالْمَلٰٓىِٕكَةُ وَقُضِیَ الْاَمْرُ ؕ— وَاِلَی اللّٰهِ تُرْجَعُ الْاُمُوْرُ ۟۠
(ಉಪದೇಶದ ಬಳಿಕ) ಅವರು ತಮ್ಮಲ್ಲಿಗೆ ಸಾಕ್ಷಾತ್ ಅಲ್ಲಾಹನು ದೇವದೂತರೊಂದಿಗೆ ಮೋಡಗಳ ನೆರಳುಗಳಲ್ಲಿ ಬಂದು. ಅವರ ಅಂತಿಮ ತೀರ್ಮಾನವನ್ನೇ ಮಾಡಿಬಿಡಬೇಕೆಂದು ನಿರೀಕ್ಷಿಸುತ್ತಿರುವರೇ? ಕೊನೆಗಂತು ಸಕಲ ಸಂಗತಿಗಳೂ ಅಲ್ಲಾಹನೆಡೆಗೇ ಮರಳಿ ಹೋಗುವುವು.
ئەرەپچە تەپسىرلەر:
سَلْ بَنِیْۤ اِسْرَآءِیْلَ كَمْ اٰتَیْنٰهُمْ مِّنْ اٰیَةٍ بَیِّنَةٍ ؕ— وَمَنْ یُّبَدِّلْ نِعْمَةَ اللّٰهِ مِنْ بَعْدِ مَا جَآءَتْهُ فَاِنَّ اللّٰهَ شَدِیْدُ الْعِقَابِ ۟
ಇಸ್ರಾಯೀಲ್ ಸಂತತಿಗಳಲ್ಲಿ ವಿಚಾರಿಸಿರಿ, ನಾವು ಎಷ್ಟೆಲ್ಲಾ ಸುಸ್ಪಷ್ಟ ದೃಷ್ಟಾಂತಗಳನ್ನು ದಯಪಾಲಿಸಿದ್ದೇವೆ. ಮತ್ತು ಯಾರು ಅಲ್ಲಾಹನ ಅನುಗ್ರಹಗಳನ್ನು ತನ್ನ ಬಳಿಗೆ ಬಂದ ಬಳಿಕವು ಬದಲಾಯಿಸುತ್ತಾನೋ (ತಿಳಿದುಕೊಳ್ಳಲಿ) ಖಂಡಿತವಾಗಿಯು ಅಲ್ಲಾಹನು ಅತ್ಯುಗ್ರ ಶಿಕ್ಷೆಗಳನ್ನು ನೀಡುವವನಾಗಿದ್ದಾನೆ.
ئەرەپچە تەپسىرلەر:
زُیِّنَ لِلَّذِیْنَ كَفَرُوا الْحَیٰوةُ الدُّنْیَا وَیَسْخَرُوْنَ مِنَ الَّذِیْنَ اٰمَنُوْا ۘ— وَالَّذِیْنَ اتَّقَوْا فَوْقَهُمْ یَوْمَ الْقِیٰمَةِ ؕ— وَاللّٰهُ یَرْزُقُ مَنْ یَّشَآءُ بِغَیْرِ حِسَابٍ ۟
ಸತ್ಯನಿಷೇಧಿಗಳಿಗೆ ಇಹಲೋಕ ಜೀವನವನ್ನು ಅಲಂಕೃತಗೊಳಿಸಲಾಗಿದೆ. ಅವರು ಸತ್ಯವಿಶ್ವಾಸಿಗಳನ್ನು ಅಪಹಾಸ್ಯ ಮಾಡುತ್ತಾರೆ. ವಸ್ತುತಃ ಭಯಭಕ್ತಿ ಹೊಂದಿದವರು ಪುನರುತ್ಥಾನ ದಿನದಂದು ಅತ್ಯುನ್ನತ ಸ್ಥಾನದಲ್ಲಿರುವರು. ಅಲ್ಲಾಹನು ತಾನಿಚ್ಛಿಸಿದವರಿಗೆ ಲೆಕ್ಕಾತೀತವಾಗಿ ಜೀವನಾಧಾರ ನೀಡುತ್ತಾನೆ.
ئەرەپچە تەپسىرلەر:
كَانَ النَّاسُ اُمَّةً وَّاحِدَةً ۫— فَبَعَثَ اللّٰهُ النَّبِیّٖنَ مُبَشِّرِیْنَ وَمُنْذِرِیْنَ ۪— وَاَنْزَلَ مَعَهُمُ الْكِتٰبَ بِالْحَقِّ لِیَحْكُمَ بَیْنَ النَّاسِ فِیْمَا اخْتَلَفُوْا فِیْهِ ؕ— وَمَا اخْتَلَفَ فِیْهِ اِلَّا الَّذِیْنَ اُوْتُوْهُ مِنْ بَعْدِ مَا جَآءَتْهُمُ الْبَیِّنٰتُ بَغْیًا بَیْنَهُمْ ۚ— فَهَدَی اللّٰهُ الَّذِیْنَ اٰمَنُوْا لِمَا اخْتَلَفُوْا فِیْهِ مِنَ الْحَقِّ بِاِذْنِهٖ ؕ— وَاللّٰهُ یَهْدِیْ مَنْ یَّشَآءُ اِلٰی صِرَاطٍ مُّسْتَقِیْمٍ ۟
ಮನುಷ್ಯರು ಒಂದೇ ಸಮುದಾಯವಾಗಿದ್ದರು(ಕಾಲಕ್ರಮೇಣ ಅವರಲ್ಲಿ ಭಿನ್ನಭಿಪ್ರಾಯ ಉಂಟಾದಾಗ) ಅಲ್ಲಾಹನು ಸುವಾರ್ತೆ ನೀಡುವವರನ್ನಾಗಿಯು ಎಚ್ಚರಿಕೆ ಕೊಡುವವರನ್ನಾಗಿಯು ಪೈಗಂಬರರÀನ್ನು ನಿಯೋಗಿಸಿದನು ಮತ್ತು ಜನರು ನಡುವಿನ ಭಿನ್ನತೆಯ ವಿಷಯಗಳಲ್ಲಿ ತೀರ್ಪುನೀಡಲೆಂದು ಅವರ ಜೊತೆ ಸತ್ಯದೊಂದಿಗೆ ಗ್ರಂಥಗಳನ್ನು ಅವತೀರ್ಣಗೊಳಿಸಿದನು. ಆದರೆ ಗ್ರಂಥ ನೀಡಲಾದವರು ತಮ್ಮಲ್ಲಿಗೆ ಸುಸ್ಪಷ್ಟ ಪುರಾವೆಗಳು ಬಂದ ಬಳಿಕವೂ ಪರಸ್ಪರ ಹಟ ಹಾಗು ಹಗೆತನದ ಕಾರಣದಿಂದ ಅದರಲ್ಲಿ ಭಿನ್ನತೆಯನ್ನುಂಟು ಮಾಡಿದ್ದರು. ಆದ್ದರಿಂದ ಅಲ್ಲಾಹನು ಅವರು ಯಾವ ಸತ್ಯದಲ್ಲಿ ಭಿನ್ನತೆ ಹೊಂದಿದ್ದರೋ ಆ ಸತ್ಯದೆಡೆಗೆ ತನ್ನ ಇಚ್ಛೆ ಪ್ರಕಾರ ಸತ್ಯವಿಶ್ವಾಸಿಗಳಿಗೆ ಮಾರ್ಗದರ್ಶನ ಮಾಡಿದನು ಮತ್ತು ಅಲ್ಲಾಹನು ತಾನಿಚ್ಛಿಸಿದವರನ್ನು ಋಜುವಾದ ಮಾರ್ಗದೆಡೆಗೆ ಮುನ್ನಡೆಸುತ್ತಾನೆ.
ئەرەپچە تەپسىرلەر:
اَمْ حَسِبْتُمْ اَنْ تَدْخُلُوا الْجَنَّةَ وَلَمَّا یَاْتِكُمْ مَّثَلُ الَّذِیْنَ خَلَوْا مِنْ قَبْلِكُمْ ؕ— مَسَّتْهُمُ الْبَاْسَآءُ وَالضَّرَّآءُ وَزُلْزِلُوْا حَتّٰی یَقُوْلَ الرَّسُوْلُ وَالَّذِیْنَ اٰمَنُوْا مَعَهٗ مَتٰی نَصْرُ اللّٰهِ ؕ— اَلَاۤ اِنَّ نَصْرَ اللّٰهِ قَرِیْبٌ ۟
(ಓ ಸತ್ಯವಿಶ್ವಾಸಿಗಳೇ) ನಿಮ್ಮ ಪೂರ್ವಿಕರಿಗೆ ಬಂದAತಹಾ ಸ್ಥಿತಿಯು (ಪರೀಕ್ಷೆ) ನಿಮಗೂ ಬರದೆ ಸ್ವರ್ಗವನ್ನು ಪ್ರವೇಶಿಸಬಿಡಬಹುದೆಂದು ನೀವು ಭಾವಿಸಿಕೊಂಡಿದ್ದೀರಾ? ವಸ್ತುತಃ ಅವರನ್ನು, ದಟ್ಟ ದಾರಿದ್ರö್ಯವೂ, ರೋಗರುಜಿನವೂ ಬಾಧಿಸಿಬಿಟ್ಟಿದ್ದವು. ಮತ್ತು ಸಂದೇಶವಾಹಕರು ಹಾಗೂ ಅವರ ಜೊತೆಯಿದ್ದಂತಹ ಸತ್ಯವಿಶ್ವಾಸಿಗಳು ಅಲ್ಲಾಹನ ಸಹಾಯವು ಯಾವಾಗ ಬರುತ್ತದೆ? ಎಂದು ಹೇಳುವಷ್ಟರ ಮಟ್ಟಿಗೆ ಅವರು ಕಂಪಿಸಲ್ಪಟ್ಟರು. ತಿಳಿದುಕೊಳ್ಳಿರಿ! ನಿಶ್ಚಯವಾಗಿಯು ಅಲ್ಲಾಹನ ಸಹಾಯವು ಸಮೀಪದಲ್ಲೇ ಇದೆ.
ئەرەپچە تەپسىرلەر:
یَسْـَٔلُوْنَكَ مَاذَا یُنْفِقُوْنَ ؕ— قُلْ مَاۤ اَنْفَقْتُمْ مِّنْ خَیْرٍ فَلِلْوَالِدَیْنِ وَالْاَقْرَبِیْنَ وَالْیَتٰمٰی وَالْمَسٰكِیْنِ وَابْنِ السَّبِیْلِ ؕ— وَمَا تَفْعَلُوْا مِنْ خَیْرٍ فَاِنَّ اللّٰهَ بِهٖ عَلِیْمٌ ۟
ಓ ಪೈಗಂಬರರೇ, ಏನನ್ನು ಖರ್ಚು ಮಾಡಬೇಕೆಂದು ಜನರು ನಿಮ್ಮೊಡನೆ ಕೇಳುತ್ತಾರೆ. ಹೇಳಿರಿ; ನೀವು ಖರ್ಚು ಮಾಡಿದಂತಹ ಸಂಪತ್ತು (ದಾನಧರ್ಮ) ಮಾತಾಪಿತರಿಗೂ, ಆಪ್ತಸಂಬAಧಿಕರಿಗೂ, ಅನಾಥರಿಗೂ, ನಿರ್ಗತಿಕರಿಗೂ, ವಿಪ್ಪತ್ತಿಗೀಡಾದ ಪ್ರಯಾಣಿಕರಿಗೂ, ತಲುಪಲಿ ಮತ್ತು ನೀವು ಯಾವುದೇ ಒಳಿತನ್ನು ಮಾಡಿರಲಿ, ಖಂಡಿತವಾಗಿಯು ಅಲ್ಲಾಹನು ಅದರ ಕುರಿತು ಅರಿಯುಳ್ಳವನಾಗಿದ್ದಾನೆ.
ئەرەپچە تەپسىرلەر:
كُتِبَ عَلَیْكُمُ الْقِتَالُ وَهُوَ كُرْهٌ لَّكُمْ ۚ— وَعَسٰۤی اَنْ تَكْرَهُوْا شَیْـًٔا وَّهُوَ خَیْرٌ لَّكُمْ ۚ— وَعَسٰۤی اَنْ تُحِبُّوْا شَیْـًٔا وَّهُوَ شَرٌّ لَّكُمْ ؕ— وَاللّٰهُ یَعْلَمُ وَاَنْتُمْ لَا تَعْلَمُوْنَ ۟۠
ಧರ್ಮ ಯುದ್ಧವು ನಿಮಗೆ ಅನಿಷ್ಟಕರವಾಗಿದ್ದರೂ, ನಿಮಗದನ್ನು ಶಾಸನಗೊಳಿಸಲಾಗಿದೆ. ನೀವು ಒಂದು ವಸ್ತುವನ್ನು ಅಸಹ್ಯ ಪಡುತ್ತೀರಾ ಆದರೆ ಅದು ನಿಮ್ಮ ಪಾಲಿಗೆ ಒಳಿತಾಗಿರಬಹುದು. ಮತ್ತು ನೀವು ಒಂದು ವಸ್ತುವನ್ನು ಇಷ್ಟಪಡುತ್ತೀರಾದರೆ ಅದು ನಿಮ್ಮ ಪಾಲಿಗೆ ಹಾನಿಕರವಾಗಿರಬಹುದು. ಅಲ್ಲಾಹನು ಅರಿಯುತ್ತಾನೆ. ಮತ್ತು ನೀವು ಅರಿಯದವರಾಗಿದ್ದೀರಿ.
ئەرەپچە تەپسىرلەر:
یَسْـَٔلُوْنَكَ عَنِ الشَّهْرِ الْحَرَامِ قِتَالٍ فِیْهِ ؕ— قُلْ قِتَالٌ فِیْهِ كَبِیْرٌ ؕ— وَصَدٌّ عَنْ سَبِیْلِ اللّٰهِ وَكُفْرٌ بِهٖ وَالْمَسْجِدِ الْحَرَامِ ۗ— وَاِخْرَاجُ اَهْلِهٖ مِنْهُ اَكْبَرُ عِنْدَ اللّٰهِ ۚ— وَالْفِتْنَةُ اَكْبَرُ مِنَ الْقَتْلِ ؕ— وَلَا یَزَالُوْنَ یُقَاتِلُوْنَكُمْ حَتّٰی یَرُدُّوْكُمْ عَنْ دِیْنِكُمْ اِنِ اسْتَطَاعُوْا ؕ— وَمَنْ یَّرْتَدِدْ مِنْكُمْ عَنْ دِیْنِهٖ فَیَمُتْ وَهُوَ كَافِرٌ فَاُولٰٓىِٕكَ حَبِطَتْ اَعْمَالُهُمْ فِی الدُّنْیَا وَالْاٰخِرَةِ ۚ— وَاُولٰٓىِٕكَ اَصْحٰبُ النَّارِ ۚ— هُمْ فِیْهَا خٰلِدُوْنَ ۟
ಆದರಣೀಯ ತಿಂಗಳಲ್ಲಿ ಯುದ್ಧ ಮಾಡುವುದರ ಕುರಿತು ಅವರು ನಿಮ್ಮೊಡನೆ ಕೇಳುತ್ತಾರೆ? ಹೇಳಿರಿ! ಅವುಗಳಲ್ಲಿ ಯುದ್ಧ ಮಾಡುವುದು ಮಹಾ ಅಪರಾಧವಾಗಿರುತ್ತದೆ. ಆದರೆ ಜನರನ್ನು ಅಲ್ಲಾಹನ ಮಾರ್ಗದಿಂದ ತಡೆಯುವುದು ಹಾಗೂ ಅವನಲ್ಲಿ ಅವಿಶ್ವಾಸ ತಾಳುವುದು ಮತ್ತು ಮಸ್ಜಿದುಲ್ ಹರಾಮ್‌ನಿಂದ ತಡೆಯುವುದು ಮತ್ತು ಅಲ್ಲಿನ (ಮಕ್ಕಾ) ನಿವಾಸಿಗಳನ್ನು ಅಲ್ಲಿಂದ ಹೊರ ಹಾಕುವುದು ಅಲ್ಲಾಹನ ಬಳಿ ಅದಕ್ಕಿಂತಲೂ ಗಂಭೀರ ಅಪರಾಧವಾಗಿರುತ್ತದೆ ಮತ್ತು ಕ್ಷೆÆÃಭೆ ಕೊಲೆಗಿಂತಲೂ ಗಂಭೀರ ಅಪರಾಧವಾಗಿರುತ್ತದೆ. ತಿಳಿದಿರಲೀ ! ಎಲ್ಲಿಯವರೆಗೆ ಅಂದರೆ ಅವರಿಗೆ ಸಾಧ್ಯವಾಗುವುದಾದರೆ ನಿಮ್ಮನ್ನು ನಿಮ್ಮ ಧರ್ಮದಿಂದ ವಿಮುಖಗೊಳಿಸುವವರೆಗೂ ಅವರು ನಿಮ್ಮೊಂದಿಗೆ ಯುದ್ಧ ಮಾಡುತ್ತಲೇ ಇರುವರು. ಮತ್ತು ನಿಮ್ಮ ಪೈಕಿ ಯಾರು ತನ್ನ ಧರ್ಮದಿಂದ ವಿಮುಖನಾಗಿ ಸತ್ಯನಿಷೇಧಿಯಾಗಿರುವ ಸ್ಥಿತಿಯಲ್ಲಿ ಮರಣ ಹೊಂದುತ್ತಾರೋ ಅಂತಹವರ ಕರ್ಮಗಳು ಇಹಲೋಕದಲ್ಲೂ, ಪರಲೋಕದಲ್ಲೂ ವ್ಯರ್ಥವಾಗಿಬಿಡುವುವು ಮತ್ತು ಅವರು ನರಕಾಗ್ನಿಯವರಾಗಿರುವರು ಮತ್ತು ನರಕದಲ್ಲೇ ಶಾಶ್ವತರಾಗಿರುವರು.
ئەرەپچە تەپسىرلەر:
اِنَّ الَّذِیْنَ اٰمَنُوْا وَالَّذِیْنَ هَاجَرُوْا وَجٰهَدُوْا فِیْ سَبِیْلِ اللّٰهِ ۙ— اُولٰٓىِٕكَ یَرْجُوْنَ رَحْمَتَ اللّٰهِ ؕ— وَاللّٰهُ غَفُوْرٌ رَّحِیْمٌ ۟
ನಿಶ್ಚಯವಾಗಿಯು ಸತ್ಯವಿಶ್ವಾಸವಿರಿಸಿದವರು, (ಮನೆಮಾರು ಬಿಟ್ಟು) ವಲಸೆ ಹೋದವರು, ಅಲ್ಲಾಹನ ಮಾರ್ಗದಲ್ಲಿ ಹೋರಾಟ ಮಾಡಿದವರೇ ಅಲ್ಲಾಹನ ಕಾರುಣ್ಯದ ನಿರೀಕ್ಷೆಯಲ್ಲಿರುವವರು, ಅಲ್ಲಾಹನು ಕ್ಷಮಾಶೀಲನೂ, ಕರುಣಾನಿಧಿಯು ಆಗಿದ್ದಾನೆ.
ئەرەپچە تەپسىرلەر:
یَسْـَٔلُوْنَكَ عَنِ الْخَمْرِ وَالْمَیْسِرِ ؕ— قُلْ فِیْهِمَاۤ اِثْمٌ كَبِیْرٌ وَّمَنَافِعُ لِلنَّاسِ ؗ— وَاِثْمُهُمَاۤ اَكْبَرُ مِنْ نَّفْعِهِمَا ؕ— وَیَسْـَٔلُوْنَكَ مَاذَا یُنْفِقُوْنَ ؕ۬— قُلِ الْعَفْوَؕ— كَذٰلِكَ یُبَیِّنُ اللّٰهُ لَكُمُ الْاٰیٰتِ لَعَلَّكُمْ تَتَفَكَّرُوْنَ ۟ۙ
ಅವರು ನಿಮ್ಮೊಡನೆ ಮದ್ಯ, ಜೂಜಾಟಗಳ ಕುರಿತು ಕೇಳುತ್ತಾರೆ. ಹೇಳಿರಿ; ಅವೆರಡರಲ್ಲಿ ಮಹಾಪಾಪವಿದೆ ಮತ್ತು ಜನರಿಗೆ ಅದರಲ್ಲಿ ಭೌತಿಕ ಪ್ರಯೋಜನಗಳೂ ಇವೆ ಮತ್ತು ಅವೆರಡರ ಪಾಪವು ಅವುಗಳ ಪ್ರಯೋಜಕ್ಕಿಂತಲೂ ಅತ್ಯಂತ ದೊಡ್ಡದಾಗಿರುತ್ತದೆ. ಅವರು ಏನನ್ನು ಖರ್ಚು ಮಾಡಬೇಕೆಂದು ಕೇಳುತ್ತಾರೆ ಹೇಳಿರಿ; ಅಗತ್ಯಕ್ಕಿಂತ ಅಧಿಕವಾಗಿರುವುದನ್ನು (ಅಲ್ಲಾಹನ ಮಾರ್ಗದಲ್ಲಿ ಖರ್ಚು ಮಾಡಿರಿ) ಇದೇ ಪ್ರಕಾರ ಅಲ್ಲಾಹನು ತನ್ನ ಸೂಕ್ತಿಗಳನ್ನು ನೀವು ಚಿಂತಿಸುವ ಸಲುವಾಗಿ ವಿವರಿಸಿಕೊಡುತ್ತಾನೆ.
ئەرەپچە تەپسىرلەر:
فِی الدُّنْیَا وَالْاٰخِرَةِ ؕ— وَیَسْـَٔلُوْنَكَ عَنِ الْیَتٰمٰی ؕ— قُلْ اِصْلَاحٌ لَّهُمْ خَیْرٌ ؕ— وَاِنْ تُخَالِطُوْهُمْ فَاِخْوَانُكُمْ ؕ— وَاللّٰهُ یَعْلَمُ الْمُفْسِدَ مِنَ الْمُصْلِحِ ؕ— وَلَوْ شَآءَ اللّٰهُ لَاَعْنَتَكُمْ ؕ— اِنَّ اللّٰهَ عَزِیْزٌ حَكِیْمٌ ۟
ಇಹಲೋಕ ಹಾಗೂ ಪರಲೋಕದ ಕುರಿತು ಮತ್ತು ಅನಾಥರ ಕುರಿತು ಅವರು ನಿಮ್ಮೊಡನೆ ಕೇಳುತ್ತಾರೆ. ಹೇಳಿರಿ; ಅವರಿಗೆ ಹಿತವನ್ನು ಬಯಸುವುದು ಉತ್ತಮವಾಗಿದೆ ಮತ್ತು ನೀವು ಅವರನ್ನು (ಖರ್ಚುವೆಚ್ಚ ವ್ಯವಹಾರದಲ್ಲಿ) ತಮ್ಮೊಂದಿಗೆ ಸೇರಿಸಿಕೊಂಡರೆ ಅವರು ನಿಮ್ಮ ಸಹೋದರರಾಗಿರುತ್ತಾರೆ ಮತ್ತು ಕೆಟ್ಟ ಉದ್ದೇಶವಿರುವ ಮತ್ತು ಒಳಿತಿನ ಉದ್ದೇಶವಿರುವ ಎಲ್ಲರನ್ನೂ ಅಲ್ಲಾಹನು ಅರಿಯುತ್ತಾನೆ ಮತ್ತು ಅಲ್ಲಾಹನು ಉದ್ದೇಶಿಸಿರುತ್ತಿದ್ದರೆ ನಿಮ್ಮನ್ನು ಸಂಕಷ್ಟಕ್ಕೆ ಸಿಲುಕಿಸುತ್ತಿದ್ದನು. ವಾಸ್ತವದಲ್ಲಿ ಅಲ್ಲಾಹನು ಪ್ರತಾಪಶಾಲಿಯು, ಯುಕ್ತಿಪೂರ್ಣನೂ ಆಗಿದ್ದಾನೆ.-
ئەرەپچە تەپسىرلەر:
وَلَا تَنْكِحُوا الْمُشْرِكٰتِ حَتّٰی یُؤْمِنَّ ؕ— وَلَاَمَةٌ مُّؤْمِنَةٌ خَیْرٌ مِّنْ مُّشْرِكَةٍ وَّلَوْ اَعْجَبَتْكُمْ ۚ— وَلَا تُنْكِحُوا الْمُشْرِكِیْنَ حَتّٰی یُؤْمِنُوْا ؕ— وَلَعَبْدٌ مُّؤْمِنٌ خَیْرٌ مِّنْ مُّشْرِكٍ وَّلَوْ اَعْجَبَكُمْ ؕ— اُولٰٓىِٕكَ یَدْعُوْنَ اِلَی النَّارِ ۖۚ— وَاللّٰهُ یَدْعُوْۤا اِلَی الْجَنَّةِ وَالْمَغْفِرَةِ بِاِذْنِهٖ ۚ— وَیُبَیِّنُ اٰیٰتِهٖ لِلنَّاسِ لَعَلَّهُمْ یَتَذَكَّرُوْنَ ۟۠
ಓ ಸತ್ಯವಿಶ್ವಾಸಿಗಳೇ, ನೀವು ಬಹುದೇವಾರಾಧಕಿಯರನ್ನು ಅವರು ವಿಶ್ವಾಸಕೈಗೊಳ್ಳುವ ತನಕ ವಿವಾಹವಾಗದಿರಿ.-ಮತ್ತು ಸತ್ಯವಿಶ್ವಾಸಿಯಾದ-ದಾಸಿಯು ಬಹುದೇವಾರಾಧಕಿಗಿಂಲೂ ಉತ್ತಮಳಾಗಿದ್ದಾಳೆ. ಆಕೆ ನಿಮಗೆ ಹೆಚ್ಚು ಆಕರ್ಷಕಳಾಗಿ ಕಂಡರೂ ಸರಿಯೇ ಮತ್ತು ನೀವು ನಿಮ್ಮ ಸತ್ಯವಿಶ್ವಾಸಿ ಸ್ತಿçÃಯರನ್ನು ಬಹುದೇವಾರಾಧಕರಿಗೆ ಅವರು ವಿಶ್ವಾಸ ಕೈಗೊಳ್ಳುವ ತನಕ ವಿವಾಹ ಮಾಡಿಕೊಡಬೇಡಿರಿ ಮತ್ತು ಸತ್ಯವಿಶ್ವಾಸಿಯಾದ ಒಬ್ಬ ಗುಲಾಮನು ಒಬ್ಬ ಬಹುದೇವಾರಾಧಕನಿಗಿಂತಲೂ ಉತ್ತಮನು ಮತ್ತು ಅವನು ನಿಮಗೆ ಹೆಚ್ಚು ಆಕರ್ಷಕನಾಗಿ ಕಂಡರೂ ಸರಿಯೇ ಅವರು ನರಕದೆಡೆಗೆ ಕರೆಯುತ್ತಿದ್ದಾರೆ ಮತ್ತು ಅಲ್ಲಾಹನು ತನ್ನ ಆದೇಶದಿಂದ ಸ್ವರ್ಗ ಮತ್ತು ಕ್ಷಮೆಯೆಡೆಗೆ ಕರೆಯುತ್ತಿದ್ದಾನೆ. ಮತ್ತು ಜನರು ವಿವೇಚಿಸಿಕೊಳ್ಳಲೆಂದು ಅವನು ತನ್ನ ದೃಷ್ಟಾಂತಗಳನ್ನು ಅವರಿಗೆ ವಿವರಿಸಿಕೊಡುತ್ತಾನೆ.
ئەرەپچە تەپسىرلەر:
وَیَسْـَٔلُوْنَكَ عَنِ الْمَحِیْضِ ؕ— قُلْ هُوَ اَذًی ۙ— فَاعْتَزِلُوا النِّسَآءَ فِی الْمَحِیْضِ ۙ— وَلَا تَقْرَبُوْهُنَّ حَتّٰی یَطْهُرْنَ ۚ— فَاِذَا تَطَهَّرْنَ فَاْتُوْهُنَّ مِنْ حَیْثُ اَمَرَكُمُ اللّٰهُ ؕ— اِنَّ اللّٰهَ یُحِبُّ التَّوَّابِیْنَ وَیُحِبُّ الْمُتَطَهِّرِیْنَ ۟
(ಓ ಪೈಗಂಬರರೇ) ಜನರು ಆರ್ತವದ (ಋತುಸ್ರಾವದ) ಕುರಿತು ನಿಮ್ಮೊಡನೆ ಕೇಳುತ್ತಾರೆ. ಹೇಳಿರಿ ಅದೊಂದು ಮಾಲಿನ್ಯತೆಯಾಗಿದೆ. ಆದ್ದರಿಂದ ಆರ್ತವಕಾಲದಲ್ಲಿ ಸ್ರೀಯರಿಂದ ದೂರವಿರಿ ಮತ್ತು ಅವರು ಶುದ್ಧರಾಗುವವರೆಗೂ ಅವರನ್ನು ಸಮೀಪಿಸಬೇಡಿರಿ. ಇನ್ನು ಅವರು ಶುದ್ಧರಾದರೆ ಅಲ್ಲಾಹು ನಿಮಗೆ ಅನುಮತಿಸಿದ ಕಡೆಯಿಂದ ಅವರ ಬಳಿಗೆ ಹೋಗಿರಿ. ಅಲ್ಲಾಹು ಪಶ್ಚಾತ್ತಾಪ ಹೊಂದುವವರನ್ನೂ, ಶುದ್ಧರಾಗಿರುವವರನ್ನೂ ಇಷ್ಟ ಪಡುತ್ತಾನೆ.
ئەرەپچە تەپسىرلەر:
نِسَآؤُكُمْ حَرْثٌ لَّكُمْ ۪— فَاْتُوْا حَرْثَكُمْ اَنّٰی شِئْتُمْ ؗ— وَقَدِّمُوْا لِاَنْفُسِكُمْ ؕ— وَاتَّقُوا اللّٰهَ وَاعْلَمُوْۤا اَنَّكُمْ مُّلٰقُوْهُ ؕ— وَبَشِّرِ الْمُؤْمِنِیْنَ ۟
ನಿಮ್ಮ ಪತ್ನಿಯರುನಿಮಗೆ ಕೃಷಿಯಾಗಿದ್ದಾರೆ. ಆದ್ದರಿಂದ ನಿಮ್ಮ ಕೃಷಿಗೆ ನೀವು ಇಚ್ಛಿಸುವಂತೆ ಹೋಗಿರಿ ಮತ್ತು ನೀವು ಸ್ವತಃ ನಿಮಗಾಗಿ (ಸತ್ಕರ್ಮವನ್ನು) ಮುಂಗಡವಾಗಿ ಕಳುಹಿಸಿರಿ ಮತ್ತು ಅಲ್ಲಾಹನನ್ನು ಭಯಪಡುತ್ತಿರಿ ಹಾಗೂ ನೀವು ಅವನನ್ನು ಭೇಟಿಯಾಗಲಿರುವಿರೆಂದು ಅರಿತುಕೊಳ್ಳಿರಿ ಮತ್ತು ಓ ಪೈಗಂಬರÀರೇ ನೀವು ಸತ್ಯವಿಶ್ವಾಸಿಗಳಿಗೆ ಸುವಾರ್ತೆ ನೀಡಿರಿ.
ئەرەپچە تەپسىرلەر:
وَلَا تَجْعَلُوا اللّٰهَ عُرْضَةً لِّاَیْمَانِكُمْ اَنْ تَبَرُّوْا وَتَتَّقُوْا وَتُصْلِحُوْا بَیْنَ النَّاسِ ؕ— وَاللّٰهُ سَمِیْعٌ عَلِیْمٌ ۟
ಪುಣ್ಯಕಾರ್ಯ ಮಾಡುವುದು, ಭಯ ಭಕ್ತಿ ಹೊಂದುವುದು ಹಾಗೂ ಜನರ ನಡುವೆ ಸುಧಾರಣೆ ಮಾಡುವುದನ್ನು ತೊರೆಯಲಿಕ್ಕಾಗಿ ನೀವು ಮಾಡುವ ಶಪಥಗಳಿಗೆ ಅಲ್ಲಾಹನ ನಾಮವನ್ನು ಉಪಯೋಗಿಸಬೇಡಿರಿ. ಅಲ್ಲಾಹನು ಸರ್ವವನ್ನಾಲಿಸುವವನೂ, ಸರ್ವಜ್ಞಾನಿಯೂ ಆಗಿದ್ದಾನೆ.
ئەرەپچە تەپسىرلەر:
لَا یُؤَاخِذُكُمُ اللّٰهُ بِاللَّغْوِ فِیْۤ اَیْمَانِكُمْ وَلٰكِنْ یُّؤَاخِذُكُمْ بِمَا كَسَبَتْ قُلُوْبُكُمْ ؕ— وَاللّٰهُ غَفُوْرٌ حَلِیْمٌ ۟
ಅನೈಚ್ಛಿಕ (ಅರ್ಥಶೂನ್ಯ) ಶಪಥಗಳ ನಿಮಿತ್ತ ಅಲ್ಲಾಹನು ನಿಮ್ಮನ್ನು ವಿಚಾರಿಸುವುದಿಲ್ಲ. ಆದರೆ ಅವನು ಉದ್ದೇಶಪೂರ್ವಕ ಶಪಥಗಳ ನಿಮಿತ್ತ ನಿಮ್ಮ ವಿಚಾರಣೆ ನಡೆಸುವನು ಮತ್ತು ಅಲ್ಲಾಹನು ಕ್ಷಮಾಶೀಲನೂ, ವಿವೇಕಪೂರ್ಣನೂ ಆಗಿರುವನು.
ئەرەپچە تەپسىرلەر:
لِلَّذِیْنَ یُؤْلُوْنَ مِنْ نِّسَآىِٕهِمْ تَرَبُّصُ اَرْبَعَةِ اَشْهُرٍ ۚ— فَاِنْ فَآءُوْ فَاِنَّ اللّٰهَ غَفُوْرٌ رَّحِیْمٌ ۟
ತಮ್ಮ ಪತ್ನಿಯರೊಂದಿಗೆ (ಸಂಭೋಗ ಮಾಡುವುದಿಲ್ಲವೆಂಬ) ಪ್ರತಿಜ್ಞೆ ಮಾಡುವವರ ಪಾಲಿಗೆ ನಾಲ್ಕು ತಿಂಗಳ ಕಾಲಾವಧಿಯಿರುವುದು. ಇನ್ನು ಅವರು ಮರಳಿ ಬಂದರೆ ಅಲ್ಲಾಹನು ಕ್ಷಮಾಶೀಲನೂ, ಕರುಣಾನಿಧಿಯೂ ಆಗಿರುವನು.
ئەرەپچە تەپسىرلەر:
وَاِنْ عَزَمُوا الطَّلَاقَ فَاِنَّ اللّٰهَ سَمِیْعٌ عَلِیْمٌ ۟
ಮತ್ತು ಅವರು ವಿವಾಹ ವಿಚ್ಛೇದನೆಯ ನಿರ್ಧಾರ ಮಾಡಿದ್ದರೆ ಅಲ್ಲಾಹನು ಸರ್ವವನ್ನಾಲಿಸುವವನೂ, ಸರ್ವಜ್ಞಾನಿಯೂ ಆಗಿರುವನು.
ئەرەپچە تەپسىرلەر:
وَالْمُطَلَّقٰتُ یَتَرَبَّصْنَ بِاَنْفُسِهِنَّ ثَلٰثَةَ قُرُوْٓءٍ ؕ— وَلَا یَحِلُّ لَهُنَّ اَنْ یَّكْتُمْنَ مَا خَلَقَ اللّٰهُ فِیْۤ اَرْحَامِهِنَّ اِنْ كُنَّ یُؤْمِنَّ بِاللّٰهِ وَالْیَوْمِ الْاٰخِرِ ؕ— وَبُعُوْلَتُهُنَّ اَحَقُّ بِرَدِّهِنَّ فِیْ ذٰلِكَ اِنْ اَرَادُوْۤا اِصْلَاحًا ؕ— وَلَهُنَّ مِثْلُ الَّذِیْ عَلَیْهِنَّ بِالْمَعْرُوْفِ ۪— وَلِلرِّجَالِ عَلَیْهِنَّ دَرَجَةٌ ؕ— وَاللّٰهُ عَزِیْزٌ حَكِیْمٌ ۟۠
ಮತ್ತು ವಿಚ್ಛೇದಿತ ಸ್ತಿçÃಯರು ತಮ್ಮನ್ನು ಮೂರು ಆರ್ತವಗಳವರೆಗೆ ತಡೆದಿರಿಸಿಕೊಳ್ಳಲಿ ಮತ್ತು ಅವರು ಅಲ್ಲಾಹನಲ್ಲೂ, ಅಂತ್ಯದಿನದಲ್ಲೂ ವಿಶ್ವಾಸವಿರಿಸುವವರಾದರೆ ತಮ್ಮ ಗರ್ಭಾಶಯಗಳಲ್ಲಿ ಅಲ್ಲಾಹನು ಸೃಷ್ಟಿಸಿರುವುದನ್ನು ಮುಚ್ಚಿಡುವುದು ಅವರ ಪಾಲಿಗೆ ಧರ್ಮಸಮ್ಮತವಲ್ಲ. ಮತ್ತು ಅವರ ಪತಿಯರು ಹೊಂದಾಣಿಕೆಯನ್ನು ಬಯಸುವುದಾದರೆ ಆ ಅವಧಿಯೊಳಗೆ ಅವರನ್ನು ಮರಳಿ ಸ್ವೀಕರಿಸಲು ಹೆಚ್ಚು ಹಕ್ಕುಳ್ಳವರಾಗಿದ್ದಾರೆ. ಮತ್ತು ಸ್ತಿçÃಯರ ಮೇಲೆ ತಮ್ಮ ಪತಿಯರ ಹಕ್ಕುಗಳಿರುವ ಹಾಗೆ ಪತಿಯರ ಮೇಲೂ ನ್ಯಾಯೋಚಿತವಾಗಿ ಸ್ತಿçÃಯರ ಹಕ್ಕುಗಳಿವೆ. ಆದರೆ ಪುರುಷರಿಗೆ ಸ್ತಿçÃಯರಿಗಿಂತ ಒಂದು ದರ್ಜೆ ಹೆಚ್ಚಿದೆ. ಅಲ್ಲಾಹನು ಪ್ರಬಲನೂ, ಯುಕ್ತಿಪೂರ್ಣನೂ ಆಗಿದ್ದಾನೆ.
ئەرەپچە تەپسىرلەر:
اَلطَّلَاقُ مَرَّتٰنِ ۪— فَاِمْسَاكٌ بِمَعْرُوْفٍ اَوْ تَسْرِیْحٌ بِاِحْسَانٍ ؕ— وَلَا یَحِلُّ لَكُمْ اَنْ تَاْخُذُوْا مِمَّاۤ اٰتَیْتُمُوْهُنَّ شَیْـًٔا اِلَّاۤ اَنْ یَّخَافَاۤ اَلَّا یُقِیْمَا حُدُوْدَ اللّٰهِ ؕ— فَاِنْ خِفْتُمْ اَلَّا یُقِیْمَا حُدُوْدَ اللّٰهِ ۙ— فَلَا جُنَاحَ عَلَیْهِمَا فِیْمَا افْتَدَتْ بِهٖ ؕ— تِلْكَ حُدُوْدُ اللّٰهِ فَلَا تَعْتَدُوْهَا ۚ— وَمَنْ یَّتَعَدَّ حُدُوْدَ اللّٰهِ فَاُولٰٓىِٕكَ هُمُ الظّٰلِمُوْنَ ۟
(ಮರಳಿ ಪಡೆಯಲು ಅನುಮತಿಯಿರುವ) ವಿಚ್ಛೇದನೆ (ಅಧಿಕವೆಂದರೆ) ಎರಡು ಬಾರಿಯಾಗಿರುತ್ತದೆ. ಅನಂತರ (ಪತಿಗೆ ಎರಡೇ ಮಾರ್ಗಗಳಿವೆ) ಒಂದು ಸದಾಚಾರದೊಂದಿಗೆ ತಡೆದಿರಿಸಿಕೊಳ್ಳಿರಿ ಇಲ್ಲವೇ ಒಳಿತಿನೊಂದಿಗೆ ವಿದಾಯ ಹೇಳಿರಿ. ನೀವು ಅವರಿಗೆ ನೀಡಿರುವ ವಧು ಧನದಿಂದ ಏನನ್ನಾದರೂ ಮರಳಿಪಡೆಯುವುÀದು ನಿಮಗೆ ಧರ್ಮ ಸಮ್ಮತವಲ್ಲ. ಆದರೆ (ವಿವಾಹ ಸಂಬAಧÀವನ್ನು ಬಾಕಿ ಉಳಿಸಿದರೆ) ಅಲ್ಲಾಹನು ಮೇರೆಗಳನ್ನು ದಂಪತಿಗಳು ನೆಲೆ ನಿಲ್ಲಿಸಲಾರೆವು ಎಂದು ಭಯಪಟ್ಟರೆ ಬೇರೆ ವಿಚಾರ. ಆದ್ದರಿಂದ ಅವರು ಅಲ್ಲಾಹನ ಮೇರೆಗಳನ್ನು ನೆಲೆ ನಿಲ್ಲಿಸಲಾರರೆÉಂದು ನೀವು ಭಯಪಟ್ಟರೆ ಪತ್ನಿಯು ಬಿಡುಗಡೆ ಪಡೆಯಲ್ಲಿಕ್ಕಾಗಿ ಮಹರ್ (ವಧು) ಧನವನ್ನು ಮರಳಿಸಿದರೆ ಈ ವಿಚಾರದಲ್ಲಿ ಅವರಿಬ್ಬರ ಮೇಲೆ ದೋಷವಿರುವುದಿಲ್ಲ. ಇವು ಅಲ್ಲಾಹನ ಮೇರೆಗಳು. ಜಾಗೃತೆ! ಇವುಗಳನ್ನು ಮೀರಬೇಡಿರಿ ಮತ್ತು ಯಾರು ಅಲ್ಲಾಹನ ಮೇರೆಗಳನ್ನು ಉಲ್ಲಂಘಿಸುತ್ತಾರೋ ಅವರು ಅಕ್ರಮಿಗಳಾಗಿರುತ್ತಾರೆ.
ئەرەپچە تەپسىرلەر:
فَاِنْ طَلَّقَهَا فَلَا تَحِلُّ لَهٗ مِنْ بَعْدُ حَتّٰی تَنْكِحَ زَوْجًا غَیْرَهٗ ؕ— فَاِنْ طَلَّقَهَا فَلَا جُنَاحَ عَلَیْهِمَاۤ اَنْ یَّتَرَاجَعَاۤ اِنْ ظَنَّاۤ اَنْ یُّقِیْمَا حُدُوْدَ اللّٰهِ ؕ— وَتِلْكَ حُدُوْدُ اللّٰهِ یُبَیِّنُهَا لِقَوْمٍ یَّعْلَمُوْنَ ۟
ಇನ್ನು (ಮೂರನೆ ಸಲ) ಅವನು ಅವಳನ್ನು ವಿಚ್ಛೇದಿಸಿದರೆ ಇನ್ನು ಅವಳು ಬೇರೊಬ್ಬ ಪತಿಯನ್ನು ವಿವಾಹ ಮಾಡಿಕೊಳ್ಳುವವರೆಗೆ ಅವÀಳು ಅವನಿಗೆ ಧರ್ಮ ಸಮ್ಮತವಾಗುವುದಿಲ್ಲ. ಒಂದೊಮ್ಮೆ ಅವನು (ಎರಡನೇ ಪತಿ ಸಂಭೋಗದ ನಂತರ) ಸಹ ಅವಳನ್ನು ವಿಚ್ಛೇದಿಸಿದರೆ (ಮೊದಲನೇ ಪತಿಯೊಡನೆ) ಅವರಿಬ್ಬರೂ ಪರಸ್ಪರ ಹೊಂದಿಕೊಳ್ಳುವುದರಿAದ ಯಾವ ದೋಷವೂ ಇರುವುದಿಲ್ಲ. (ಆದರೆ) ಅವರು ಅಲ್ಲಾಹನ ಮೇರೆಗಳನ್ನು ನೆಲೆನಿಲ್ಲಿಸಬಲ್ಲೆವೆಂದು ದೃಢವಾಗಿ ಅರಿತಿರಬೇಕು ಮತ್ತು ಇವುಗಳು ಅಲ್ಲಾಹನ ಮೇರೆಗಳಾಗಿವೆ. ಅವನು ಇವುಗಳನ್ನು ತಿಳುವಳಿಕೆಯುಳ್ಳ ಜನರಿಗೆ ವಿವರಿಸಿ ಕೊಡುತ್ತಾನೆ.
ئەرەپچە تەپسىرلەر:
وَاِذَا طَلَّقْتُمُ النِّسَآءَ فَبَلَغْنَ اَجَلَهُنَّ فَاَمْسِكُوْهُنَّ بِمَعْرُوْفٍ اَوْ سَرِّحُوْهُنَّ بِمَعْرُوْفٍ ۪— وَلَا تُمْسِكُوْهُنَّ ضِرَارًا لِّتَعْتَدُوْا ۚ— وَمَنْ یَّفْعَلْ ذٰلِكَ فَقَدْ ظَلَمَ نَفْسَهٗ ؕ— وَلَا تَتَّخِذُوْۤا اٰیٰتِ اللّٰهِ هُزُوًا ؗ— وَّاذْكُرُوْا نِعْمَتَ اللّٰهِ عَلَیْكُمْ وَمَاۤ اَنْزَلَ عَلَیْكُمْ مِّنَ الْكِتٰبِ وَالْحِكْمَةِ یَعِظُكُمْ بِهٖ ؕ— وَاتَّقُوا اللّٰهَ وَاعْلَمُوْۤا اَنَّ اللّٰهَ بِكُلِّ شَیْءٍ عَلِیْمٌ ۟۠
ಮತ್ತು ನೀವು ಪತ್ನಿಯರಿಗೆ ವಿಚ್ಛೇದನೆ ನೀಡಿ ಅವರು ತಮ್ಮ ಅವಧಿಯನ್ನು ತಲುಪಿದರೆ ಒಂದೋ ಅವರನ್ನು ಸದಾಚಾರದೊಂದಿಗೆ (ದಾಂಪತ್ಯದಲ್ಲಿ) ತಡೆÀದಿರಿಸಿಕೊಳ್ಳಿರಿ, ಇಲ್ಲವೇ, ಅವರಿಗೆ ಸದಾಚಾರದೊಂದಿಗೆ ವಿದಾಯ ಹೇಳಿರಿ ಮತ್ತು ಅವರನ್ನು ಪೀಡಿಸುವ ಉದ್ದೇಶದಿಂದ ತಡೆದಿರಿಸಿಕೊಳ್ಳಬೇಡಿರಿ ಮತ್ತು ಯಾರು ಹೀಗೆ ಮಾಡುತ್ತಾನೋ ಅವನು ತನ್ನ ಮೇಲೆಯೇ ಅಕ್ರಮವೆಸಗುತ್ತಾನೆ. ಮತ್ತು ನೀವು ಅಲ್ಲಾಹನ ನಿಯಮಗಳನ್ನು ಅಪಹಾಸ್ಯದ ವಸ್ತುವನ್ನಾಗಿ ಮಾಡಿಕೊಳ್ಳಬೇಡಿರಿ ಮತ್ತು ನಿಮ್ಮ ಮೇಲಿರುವ ಅಲ್ಲಾಹನ ಉಪಕಾರವನ್ನು ಸ್ಮರಿಸಿರಿ ಮತ್ತು ಅವನು ನಿಮ್ಮ ಮೇಲೆ ಅವತೀರ್ಣಗೊಳಿಸಿದ ಗ್ರಂಥ ಹಾಗೂ ಸುಜ್ಞಾನವನ್ನು ಸ್ಮರಿಸಿರಿ. ಅದರ ಮೂಲಕ ಅವನು ನಿಮಗೆ ಉಪದೇಶ ನೀಡುತ್ತಿದ್ದಾನೆ. ಮತ್ತು ಅಲ್ಲಾಹನನ್ನು ಭಯಪಡುತ್ತಿರಿ ಹಾಗೂ ನಿಜವಾಗಿಯು ಅಲ್ಲಾಹನು ಸಕಲ ಸಂಗತಿಗಳ ಕುರಿತು ಸರ್ವಜ್ಞಾನಿಯಾಗಿರುವನು ಎಂಬುದನ್ನು ನೀವು ಅರಿತುಕೊಳ್ಳಿರಿ.
ئەرەپچە تەپسىرلەر:
وَاِذَا طَلَّقْتُمُ النِّسَآءَ فَبَلَغْنَ اَجَلَهُنَّ فَلَا تَعْضُلُوْهُنَّ اَنْ یَّنْكِحْنَ اَزْوَاجَهُنَّ اِذَا تَرَاضَوْا بَیْنَهُمْ بِالْمَعْرُوْفِ ؕ— ذٰلِكَ یُوْعَظُ بِهٖ مَنْ كَانَ مِنْكُمْ یُؤْمِنُ بِاللّٰهِ وَالْیَوْمِ الْاٰخِرِ ؕ— ذٰلِكُمْ اَزْكٰی لَكُمْ وَاَطْهَرُ ؕ— وَاللّٰهُ یَعْلَمُ وَاَنْتُمْ لَا تَعْلَمُوْنَ ۟
ಮತ್ತು ನೀವು ಪತ್ನಿಯರಿಗೆ ವಿಚ್ಛೇದನೆ ಕೊಟ್ಟು ಅವರು ತಮ್ಮ ಅವಧಿಯನ್ನು ಪೂರ್ತಿಗೊಳಿಸದರೆ (ದಾಂಪತ್ಯದಲ್ಲಿ) ಅವರು ಸದಾಚಾರ ಪ್ರಕಾರ ಪರಸ್ಪರರ ನಡುವೆ ಸಂತೃಪ್ತರಾಗಿ ತಮ್ಮ ಹಿಂದಿನ ಪತಿಯರನ್ನು ವಿವಾಹ ಮಾಡಿಕೊಳ್ಳುವುದರಿಂದ ನೀವು ಅವರನ್ನು ತಡೆಯಬೇಡಿರಿ. ಇದು ಅಲ್ಲಾಹನಲ್ಲೂ ಅಂತ್ಯದಿನದಲ್ಲೂ ವಿಶ್ವಾಸವಿರಿಸುವವನಿಗೆ ನೀಡಲಾಗುವ ಉಪದೇಶವಾಗಿದೆ. ಇದು ನಿಮ್ಮ ಪಾಲಿಗೆ ಅತ್ಯಂತ ಶುದ್ಧವೂ, ಅತ್ಯಂತ ಸ್ವಚ್ಛವೂ ಆಗಿದೆ ಮತ್ತು ಅಲ್ಲಾಹನು ಅರಿಯುತ್ತಾನೆ, ನೀವು ಅರಿಯುವುದಿಲ್ಲ.
ئەرەپچە تەپسىرلەر:
وَالْوَالِدٰتُ یُرْضِعْنَ اَوْلَادَهُنَّ حَوْلَیْنِ كَامِلَیْنِ لِمَنْ اَرَادَ اَنْ یُّتِمَّ الرَّضَاعَةَ ؕ— وَعَلَی الْمَوْلُوْدِ لَهٗ رِزْقُهُنَّ وَكِسْوَتُهُنَّ بِالْمَعْرُوْفِ ؕ— لَا تُكَلَّفُ نَفْسٌ اِلَّا وُسْعَهَا ۚ— لَا تُضَآرَّ وَالِدَةٌ بِوَلَدِهَا وَلَا مَوْلُوْدٌ لَّهٗ بِوَلَدِهٖ ۗ— وَعَلَی الْوَارِثِ مِثْلُ ذٰلِكَ ۚ— فَاِنْ اَرَادَا فِصَالًا عَنْ تَرَاضٍ مِّنْهُمَا وَتَشَاوُرٍ فَلَا جُنَاحَ عَلَیْهِمَا ؕ— وَاِنْ اَرَدْتُّمْ اَنْ تَسْتَرْضِعُوْۤا اَوْلَادَكُمْ فَلَا جُنَاحَ عَلَیْكُمْ اِذَا سَلَّمْتُمْ مَّاۤ اٰتَیْتُمْ بِالْمَعْرُوْفِ ؕ— وَاتَّقُوا اللّٰهَ وَاعْلَمُوْۤا اَنَّ اللّٰهَ بِمَا تَعْمَلُوْنَ بَصِیْرٌ ۟
ಹಾಲುಣಿಸುವ ಅವಧಿಯನ್ನು ಪೂರ್ಣಗೊಳಿಸಲು ಉದ್ದೇಶಿಸುವ ವಿಚ್ಛೇದಿತ ತಾಯಂದಿರು ತಮ್ಮ ಮಕ್ಕಳಿಗೆ ಪೂರ್ಣ ಎರಡು ವರ್ಷಗಳ ಕಾಲ ಹಾಲುಣಿಸಲಿ ಮತ್ತು ತಂದೆಯ ಮೇಲೆ ಸದಾಚಾರದೊಂದಿಗೆ ಅವರ ಆಹಾರ ಹಾಗೂ ವಸ್ತçದ ಹೊಣೆಯು ಇರುತ್ತದೆ. ಪ್ರತಿಯೊಬ್ಬ ವ್ಯಕ್ತಿಯು ತನ್ನ ಸಾಮರ್ಥ್ಯಕ್ಕನುಗುಣವಾಗಿಯೇ ಹೊಣೆಗಾರಾನಾಗುತ್ತಾನೆ. ತಾಯಿಯನ್ನು ತನ್ನ ಮಗುವಿನ ನಿಮತ್ತ ತೊಂದರೆಗೊಳಪಡಿಸಬಾರದು ತಂದೆಯನ್ನು ತನ್ನ ಮಗುವಿನ ನಿಮಿತ್ತ ತೊಂದರೆಗೊಳಪಡಿಸಬಾರದು. (ಅನಾಥಮಗುವಿನ) ವಾರೀಸುದಾರನ ಮೇಲೂ ಅದೇ ರೀತಿಯ ಹೊಣೆಗಾರಿಕೆಯಿದೆ. ಇನ್ನು ಅವರಿಬ್ಬರೂ (ತಂದೆ ತಾಯಿಯು) ಪರಸ್ಪರ ಸಮಾಲೋಚನೆಯಿಂದ ಹಾಲುಣಿಸುದನ್ನು ಉದ್ದೇಶಿಸಿದರೆ ಆಗ ಅವರಿಬ್ಬರ ಮೇಲೆ ಯಾವ ದೋಷವಿರುದಿಲ್ಲ ಮತ್ತು ನೀವು ನಿಮ್ಮ ಮಕ್ಕಳಿಗೆ ಬೇರೆ ಸ್ತಿçÃಯರಿಂದ ಸ್ತನಪಾನ ಮಾಡಿಸಲು ಇಚ್ಛಿಸಿದರು ನೀವು ಸದಾಚಾರದೊಂದಿಗೆ, ನೀಡಲು ನಿಶ್ಚಯಿಸಿರುವುದನ್ನು ನೀಡಿದರೆ ನಿಮ್ಮ ಮೇಲೆ ಯಾವ ದೋಷವೂ ಇರುವುದಿಲ್ಲ ಮತ್ತು ಅಲ್ಲಾಹನನ್ನು ಭಯಪಡುತ್ತಿರಿ ನಿಸ್ಸಂಶಯವಾಗಿಯು ಅಲ್ಲಾಹನು ನೀವು ಮಾಡುತ್ತಿರುವುದರ ಕುರಿತು ಮೇಲ್ವಿಚಾರಣೆ ಮಾಡುತ್ತಿದ್ದಾನೆ ಎಂಬುದನ್ನು ಅರಿತುಕೊಳ್ಳಿರಿ.
ئەرەپچە تەپسىرلەر:
وَالَّذِیْنَ یُتَوَفَّوْنَ مِنْكُمْ وَیَذَرُوْنَ اَزْوَاجًا یَّتَرَبَّصْنَ بِاَنْفُسِهِنَّ اَرْبَعَةَ اَشْهُرٍ وَّعَشْرًا ۚ— فَاِذَا بَلَغْنَ اَجَلَهُنَّ فَلَا جُنَاحَ عَلَیْكُمْ فِیْمَا فَعَلْنَ فِیْۤ اَنْفُسِهِنَّ بِالْمَعْرُوْفِ ؕ— وَاللّٰهُ بِمَا تَعْمَلُوْنَ خَبِیْرٌ ۟
ಮತ್ತು ನಿಮ್ಮ ಪೈಕಿ ಯಾರಾದರೂ ತಮ್ಮ ಪತ್ನಿಯರನ್ನು ಬಿಟ್ಟು ಮರಣ ಹೊಂದಿದರೆ ಅವರ ಪತ್ನಿಯರು ಸ್ವತಃ ತಮ್ಮನ್ನೇ ನಾಲ್ಕು ತಿಂಗಳು ಹತ್ತು ದಿನಗಳ ಕಾಲ (ಇದ್ದಃ) ಅವಧಿಯನ್ನು ಅನುಸರಿಸಲಿ. ಇನ್ನು ಅವರು ತಮ್ಮ ಅವಧಿಯನ್ನು ತಲುಪಿದರೆ ಸದಾಚಾರದೊಂದಿಗೆ ತಮ್ಮ ಮರು ವಿವಾಹದ ವಿಚಾರದಲ್ಲಿ ಯಾವುದಾದರು ನಿರ್ಧಾರ ಕೈಗೊಂಡರೆ ನಿಮ್ಮ (ಪೋಷಕರ) ಮೇಲೆ ಯಾವ ದೋಷವಿರುವುದಿಲ್ಲ ಮತ್ತು ಅಲ್ಲಾಹನು ನೀವು ಮಾಡುತ್ತಿರುವುದರ ಕುರಿತು ಅರಿವುಳ್ಳವನಾಗಿರುವನು.
ئەرەپچە تەپسىرلەر:
وَلَا جُنَاحَ عَلَیْكُمْ فِیْمَا عَرَّضْتُمْ بِهٖ مِنْ خِطْبَةِ النِّسَآءِ اَوْ اَكْنَنْتُمْ فِیْۤ اَنْفُسِكُمْ ؕ— عَلِمَ اللّٰهُ اَنَّكُمْ سَتَذْكُرُوْنَهُنَّ وَلٰكِنْ لَّا تُوَاعِدُوْهُنَّ سِرًّا اِلَّاۤ اَنْ تَقُوْلُوْا قَوْلًا مَّعْرُوْفًا ؕ۬— وَلَا تَعْزِمُوْا عُقْدَةَ النِّكَاحِ حَتّٰی یَبْلُغَ الْكِتٰبُ اَجَلَهٗ ؕ— وَاعْلَمُوْۤا اَنَّ اللّٰهَ یَعْلَمُ مَا فِیْۤ اَنْفُسِكُمْ فَاحْذَرُوْهُ ۚ— وَاعْلَمُوْۤا اَنَّ اللّٰهَ غَفُوْرٌ حَلِیْمٌ ۟۠
(ಇದ್ದಃ ಅವಧಿಯಲ್ಲಿ) ಇಂತಹ ಸ್ತಿçÃಯರನ್ನು ವಿವಾಹವಾಗುವುದರ ಬಗ್ಗೆ ನೀವು ಸೂಚಕವಾಗಿ ಹೇಳುವುದರಲ್ಲಿ ಅಥವ ನಿಮ್ಮಲ್ಲೇ ಮುಚ್ಚಿಡುವುದರಲ್ಲಿ ನಿಮ್ಮ ಮೇಲೆ ಯಾವ ದೋಷವೂ ಇಲ್ಲ. ಮುಂದೆ ನೀವು ಅವರನ್ನು ಸ್ಮರಿಸುವಿರೆಂದು ಅಲ್ಲಾಹನು ಅರಿತಿದ್ದಾನೆ. ಆದರೆ ಅವರೊಂದಿಗೆ ರಹಸ್ಯವಾಗಿ ವಾಗ್ದಾನವನ್ನು ಮಾಡಬೇಡಿರಿ. ಇನ್ನು ನೀವು ಸದಾಚಾರದ ಮಾತುಗಳನ್ನಾಡುವುದಾದರೆ ಬೇರೆ ವಿಚಾರ. ಇದ್ದ ಅವಧಿಯು ಕೊನೆಗೊಳ್ಳುವವರೆಗೆ ವಿವಾಹ ಒಪ್ಪಂದವನ್ನು ಮಾಡಬೇಡಿರಿ ಮತ್ತು ನಿಮ್ಮ ನಿಮ್ಮ ಮನಸ್ಸಿನಲ್ಲಿರುವುದನ್ನು ಅಲ್ಲಾಹನು ಅರಿಯುತ್ತಾನೆಂಬುದನ್ನು ನೀವು ತಿಳಿದುಕೊಳ್ಳಿರಿ ಹಾಗೂ ಅವನ ಬಗ್ಗೆ ಭಯವಿರಿಸಿಕೊಳ್ಳಿರಿ. ಮತ್ತು ಅಲ್ಲಾಹನು ಕ್ಷಮಾಶೀಲನೂ, ವಿವೇಕಪೂರ್ಣನೂ ಆಗಿರುವನೆಂಬುದನ್ನು ಅರಿತುಕೊಳ್ಳಿರಿ.
ئەرەپچە تەپسىرلەر:
لَا جُنَاحَ عَلَیْكُمْ اِنْ طَلَّقْتُمُ النِّسَآءَ مَا لَمْ تَمَسُّوْهُنَّ اَوْ تَفْرِضُوْا لَهُنَّ فَرِیْضَةً ۖۚ— وَّمَتِّعُوْهُنَّ ۚ— عَلَی الْمُوْسِعِ قَدَرُهٗ وَعَلَی الْمُقْتِرِ قَدَرُهٗ ۚ— مَتَاعًا بِالْمَعْرُوْفِ ۚ— حَقًّا عَلَی الْمُحْسِنِیْنَ ۟
ನೀವು ಪತ್ನಿಯರನ್ನು ಸ್ಪರ್ಶಿಸದೆ ಅಥವಾ ವಿವಾಹ ಧನವನ್ನು ನಿಶ್ಚಯಿಸದೆÀ ಇರುವ ಪತ್ನಿಯರಿಗೆ ವಿಚ್ಛೇದನೆ ಕೊಟ್ಟರೆ (ಮಹ್ರ್ ನೀಡದಿರುವುದಕ್ಕಾಗಿ) ನಿಮ್ಮ ಮೇಲೆ ಯಾವ ದೋಷವಿರುವುದಿಲ್ಲ. ಹಾಗೆಯೇ ಅವರಿಗೆ ಏನಾದರೂ ಜೀವನಾಂಶವನ್ನು ಕೊಟ್ಟು ಬಿಡಿರಿ. ಸಾಮರ್ಥ್ಯವುಳ್ಳವನು ತನ್ನ ಸಾಮರ್ಥ್ಯಕ್ಕನುಸಾರವಾಗಿ ಮತ್ತು ದುಸ್ಥಿಯಲ್ಲಿರುವವನು ತನಗೆ ಅನುಕೂಲವಿರುವಷ್ಟು ಸದಾಚಾರದೊಂದಿಗೆ ನೀಡಲಿ. ಇದು ಸತ್ಕರ್ಮಿಗಳ ಮೇಲಿರುವ ಬಾಧ್ಯತೆಯಾಗಿರುತ್ತದೆ.
ئەرەپچە تەپسىرلەر:
وَاِنْ طَلَّقْتُمُوْهُنَّ مِنْ قَبْلِ اَنْ تَمَسُّوْهُنَّ وَقَدْ فَرَضْتُمْ لَهُنَّ فَرِیْضَةً فَنِصْفُ مَا فَرَضْتُمْ اِلَّاۤ اَنْ یَّعْفُوْنَ اَوْ یَعْفُوَا الَّذِیْ بِیَدِهٖ عُقْدَةُ النِّكَاحِ ؕ— وَاَنْ تَعْفُوْۤا اَقْرَبُ لِلتَّقْوٰی ؕ— وَلَا تَنْسَوُا الْفَضْلَ بَیْنَكُمْ ؕ— اِنَّ اللّٰهَ بِمَا تَعْمَلُوْنَ بَصِیْرٌ ۟
ಮತ್ತು ನೀವು ಅವರನ್ನು ಸ್ಪರ್ಶಿಸುವುದಕ್ಕೆ ಮುನ್ನ ವಿಚ್ಛೇದಿಸಿದ್ಧರೆ ಮತ್ತು ವಿವಾಹ ಧನವನ್ನು ನಿಶ್ಚಯಿಸಲಾಗಿದ್ದರೆ ನಿಶ್ಚಿಯಿಸಿರುವುದರ ಅರ್ಥವನ್ನು ಕೊಟ್ಟುಬಿಡಿರಿ. ಆದರೆ ಸ್ವತಃ (ಸ್ತಿçÃಯರು) ಅವರೇ ಮನ್ನಿಸುವುದಾದರೆ ಬೇರೆ ವಿಚಾರ ಅಥವಾ ಯಾರ ಕೈಯಲ್ಲಿ ವಿವಾಹ ಒಪ್ಪಂದವಿದೇಯೋ ಅವನು (ಪೂರ್ಣ ಮಹ್ರ್ ಪಾವತಿಸಿ) ವಿಶಾಲ ಮನಸ್ಸು ತೋರಬೇಕು ನೀವು ವಿಶಾಲ ಮನಸ್ಸು ತೋರಿ (ಸಂಪೂರ್ಣ ಮಹ್ರ್ ನೀಡುವುದು) ಭಯಭಕ್ತಿಗೆ ಹೆಚ್ಚು ಸಮೀಪವುಳ್ಳದ್ದಾಗಿದೆ ಮತ್ತು ನೀವು ಪರಸ್ಪರ ಔದಾರ್ಯವನ್ನು ಮರೆಯಬಾರದು. ನಿಶ್ಚಯವಾಗಿಯು ಅಲ್ಲಾಹನು ನೀವು ಮಾಡುತ್ತಿರುವ ಕರ್ಮಗಳನ್ನು ನೋಡುತ್ತಿದ್ದಾನೆ.
ئەرەپچە تەپسىرلەر:
حٰفِظُوْا عَلَی الصَّلَوٰتِ وَالصَّلٰوةِ الْوُسْطٰی ۗ— وَقُوْمُوْا لِلّٰهِ قٰنِتِیْنَ ۟
ನೀವು ನಮಾಝ್‌ಗಳನ್ನು (ಎಚ್ಚರಿಕೆಯಿಂದ ಪಾಲಿಸಿರಿ) ವಿಶೇಷತಃ ಮಧ್ಯದ (ಅಸರ್) ನಮಾಝನ್ನು ಸಂರಕ್ಷಿಸಿರಿ. ಮತ್ತು ಅಲ್ಲಾಹನಿಗಾಗಿ ನಿಷ್ಠಾವಂತರಾಗಿ ನಿಲ್ಲಿರಿ.
ئەرەپچە تەپسىرلەر:
فَاِنْ خِفْتُمْ فَرِجَالًا اَوْ رُكْبَانًا ۚ— فَاِذَاۤ اَمِنْتُمْ فَاذْكُرُوا اللّٰهَ كَمَا عَلَّمَكُمْ مَّا لَمْ تَكُوْنُوْا تَعْلَمُوْنَ ۟
ಇನ್ನು ನಿಮಗೆ (ರಣಭೂಮಿಯಲ್ಲಿ) ಶತ್ರುಗಳ ದಾಳಿಯ ಭಯವಿದ್ದರೆ ನಡೆಯುತ್ತಾ ಅಥವಾ ವಾಹನದಲ್ಲಿ (ಯಾವ ಸ್ಥಿತಿಯಲ್ಲಿದ್ದರೂ ನಮಾಝ್ ಸಂಸ್ಥಾಪಿಸಿರಿ) ಇನ್ನು ನೀವು ನಿರ್ಭಯರಾಗಿದ್ದರೆ ಮುಂಚೆ ನೀವು ತಿಳಿಯದ್ದನ್ನು ಅವನು ನಿಮಗೆ ಕಲಿಸಿರುವ ಹಾಗೆ ಅವನನ್ನು ಸ್ಮರಿಸಿರಿ.
ئەرەپچە تەپسىرلەر:
وَالَّذِیْنَ یُتَوَفَّوْنَ مِنْكُمْ وَیَذَرُوْنَ اَزْوَاجًا ۖۚ— وَّصِیَّةً لِّاَزْوَاجِهِمْ مَّتَاعًا اِلَی الْحَوْلِ غَیْرَ اِخْرَاجٍ ۚ— فَاِنْ خَرَجْنَ فَلَا جُنَاحَ عَلَیْكُمْ فِیْ مَا فَعَلْنَ فِیْۤ اَنْفُسِهِنَّ مِنْ مَّعْرُوْفٍ ؕ— وَاللّٰهُ عَزِیْزٌ حَكِیْمٌ ۟
ನಿಮ್ಮ ಪೈಕಿ ಪತ್ನಿಯರನ್ನು ಬಿಟ್ಟು ಮರಣಹೊಂದುವವರು ತಮ್ಮ ಪತ್ನಿಯರಿಗೆ ಮನೆಯಿಂದ ಹೊರಹಾಕದೆ ಒಂದು ವರ್ಷದವರೆಗೆ ಜೀವನಾಂಶವನ್ನು ನೀಡಲು ಉಯಿಲು ಮಾಡಲಿ. ಆದರೆ ಅವರು ತಮ್ಮ (ವಿವಾಹದ) ವಿಚಾರದಲ್ಲಿ ಸದಾಚಾರದೊಂದಿಗೆ ಸ್ವತಃ ಅವರೇ ಹೊರಟು ಹೋದರೆ ನಿಮ್ಮ ಮೇಲೆ ಯಾವ ದೋಷವೂ ಇರುವುದಿಲ್ಲ ಮತ್ತು ಅಲ್ಲಾಹನು ಪ್ರಬಲನೂ ಯುಕ್ತಿಪೂರ್ಣನೂ ಆಗಿದ್ದಾನೆ.
ئەرەپچە تەپسىرلەر:
وَلِلْمُطَلَّقٰتِ مَتَاعٌ بِالْمَعْرُوْفِ ؕ— حَقًّا عَلَی الْمُتَّقِیْنَ ۟
ಮತ್ತು ವಿಚ್ಛೇಧಿತ ಸ್ತಿçÃಯರಿಗೆ ಸದಾಚಾರದೊಂದಿಗೆ ಜೀವನಾಂಶ ನೀಡುವುದು ಭಯಭಕ್ತಿಯುಳ್ಳವರ ಮೇಲಿನ ಬಾಧ್ಯತೆಯಾಗಿರುತ್ತದೆ.
ئەرەپچە تەپسىرلەر:
كَذٰلِكَ یُبَیِّنُ اللّٰهُ لَكُمْ اٰیٰتِهٖ لَعَلَّكُمْ تَعْقِلُوْنَ ۟۠
ಇದೇ ಪ್ರಕಾರ ಅಲ್ಲಾಹನು ನಿಮಗೆ ತನ್ನ ದೃಷ್ಟಾಂತಗಳನ್ನು ನೀವು ಚಿಂತಿಸಲೆAದು ವಿವರಿಸಿಕೊಡುತ್ತಾನೆ.
ئەرەپچە تەپسىرلەر:
اَلَمْ تَرَ اِلَی الَّذِیْنَ خَرَجُوْا مِنْ دِیَارِهِمْ وَهُمْ اُلُوْفٌ حَذَرَ الْمَوْتِ ۪— فَقَالَ لَهُمُ اللّٰهُ مُوْتُوْا ۫— ثُمَّ اَحْیَاهُمْ ؕ— اِنَّ اللّٰهَ لَذُوْ فَضْلٍ عَلَی النَّاسِ وَلٰكِنَّ اَكْثَرَ النَّاسِ لَا یَشْكُرُوْنَ ۟
ಸಾವಿರಾರು ಸಂಖ್ಯೆಯಲ್ಲಿದ್ದು ಮೃತ್ಯುಭಯದಿಂದ ತಮ್ಮ ಮನೆಗಳಿಂದ ಹೊರಟು ಹೋದವರನ್ನು ನೀವು ನೋಡಲಿಲ್ಲವೇ? ಅಲ್ಲಾಹನು ಅವರಿಗೆ ನೀವು ಮರಣ ಹೊಂದಿರಿ ಎಂದು ಹೇಳಿದನು. ಬಳಿಕ ಅವನು ಅವರನ್ನು ಜೀವಂತಗೊಳಿಸಿದನು. ನಿಸ್ಸಂಶಯವಾಗಿಯೂ ಅಲ್ಲಾಹನು ಜನರ ಮೇಲೆ ಮಹಾ ಅನುಗ್ರಹದಾತನಾಗಿದ್ದಾನೆ. ಆದರೆ ಹೆಚ್ಚಿನ ಜನರು ಕೃತಜ್ಞತೆ ತೋರುವುದಿಲ್ಲ.
ئەرەپچە تەپسىرلەر:
وَقَاتِلُوْا فِیْ سَبِیْلِ اللّٰهِ وَاعْلَمُوْۤا اَنَّ اللّٰهَ سَمِیْعٌ عَلِیْمٌ ۟
ನೀವು ಅಲ್ಲಾಹನ ಮಾರ್ಗದಲ್ಲಿ (ದೌರ್ಜನ್ಯವೆಸಗುವವರ ಮೇಲೆ) ಯುದ್ಧ ಮಾಡಿರಿ ಮತ್ತು ವಾಸ್ತವದಲ್ಲಿ ಅಲ್ಲಾಹನು ಸರ್ವವನ್ನಾಲಿಸುವವನೂ, ಸರ್ವಜ್ಞಾನಿಯೂ ಆಗಿದ್ದಾನೆ.
ئەرەپچە تەپسىرلەر:
مَنْ ذَا الَّذِیْ یُقْرِضُ اللّٰهَ قَرْضًا حَسَنًا فَیُضٰعِفَهٗ لَهٗۤ اَضْعَافًا كَثِیْرَةً ؕ— وَاللّٰهُ یَقْبِضُ وَیَبْصُۜطُ ۪— وَاِلَیْهِ تُرْجَعُوْنَ ۟
ಅಲ್ಲಾಹನಿಗೆ ಉತ್ತಮ ಸಾಲವನ್ನು ನೀಡುವವನಾರಿದ್ದಾನೆ? ಹಾಗೆಯೇ ಮಾಡುವುದಾದರೆ ಅಲ್ಲಾಹನು ಅವನಿಗೆ ಅನೇಕ ಪಟ್ಟು ಹೆಚ್ಚಿಸಿ ಕೊಡುವವನಾಗಿದ್ದಾನೆ. ಮತ್ತು ಸಂಕುಚಿತಗೊಳಿಸುವವನು ಹಾಗೂ ವೃದ್ಧಿಸುವವನು ಅಲ್ಲಾಹನೇ ಆಗಿದ್ದಾನೆ ಮತ್ತು ಅವನೆಡೆಗೇ ನೀವು ಮರಳಿಸಲಾಗುವಿರಿ.
ئەرەپچە تەپسىرلەر:
اَلَمْ تَرَ اِلَی الْمَلَاِ مِنْ بَنِیْۤ اِسْرَآءِیْلَ مِنْ بَعْدِ مُوْسٰی ۘ— اِذْ قَالُوْا لِنَبِیٍّ لَّهُمُ ابْعَثْ لَنَا مَلِكًا نُّقَاتِلْ فِیْ سَبِیْلِ اللّٰهِ ؕ— قَالَ هَلْ عَسَیْتُمْ اِنْ كُتِبَ عَلَیْكُمُ الْقِتَالُ اَلَّا تُقَاتِلُوْا ؕ— قَالُوْا وَمَا لَنَاۤ اَلَّا نُقَاتِلَ فِیْ سَبِیْلِ اللّٰهِ وَقَدْ اُخْرِجْنَا مِنْ دِیَارِنَا وَاَبْنَآىِٕنَا ؕ— فَلَمَّا كُتِبَ عَلَیْهِمُ الْقِتَالُ تَوَلَّوْا اِلَّا قَلِیْلًا مِّنْهُمْ ؕ— وَاللّٰهُ عَلِیْمٌۢ بِالظّٰلِمِیْنَ ۟
ಮೂಸಾರ ನಂತರ ಇಸ್ರಾಯೀಲ್ ಸಂತತಿಗಳ ಒಂದು ಸಮೂಹದೆಡೆಗೆ ನೀವು ನೋಡಿಲ್ಲವೇ? ಅವರು ತಮ್ಮ ಸಂದೇಶವಾಹಕರಿಗೆ ಹೇಳಿದರು ನಾವು ಅಲ್ಲಾಹನ ಮಾರ್ಗದಲ್ಲಿ ಯುದ್ಧ ಮಾಡಲಿಕ್ಕಾಗಿ ನೀವು ನಮಗಾಗಿ ಒಬ್ಬ ರಾಜನನ್ನು ನಿಯೋಗಿಸಿರಿ ಎಂದು ಹೇಳಿದ ಸಂದರ್ಭ. ಸಂದೇಶವಾಹಕರು ಹೇಳಿದರು; ನಿಮ್ಮ ಮೇಲೆ ಯುದ್ಧವು ಕಡ್ಡಾಯಗೊಳಿಸಿದಾಗ ನೀವು ಯುದ್ಧ ಮಾಡದಿರಲೂ ಸಾಧ್ಯತೆಯಿದೆ ಅವರು ಹೇಳಿದರು. ನಮ್ಮನ್ನು ನಮ್ಮ ಮನೆಗಳಿಂದ ಹಾಗೂ ನಮ್ಮ ಮಕ್ಕಳಿಂದ ದೂರ ಮಾಡಲಾಗಿರುವಾಗ ಅಲ್ಲಾಹನ ಮಾರ್ಗದಲ್ಲಿ ಯುದ್ಧ ಮಾಡದಿರಲು ನಮಗೇನಾಗಿದೆ. ಹಾಗೆಯೇ ಅವರ ಮೇಲೆ ಯುದ್ಧವು ಕಡ್ಡಾಯಗೊಳಿಸಿದಾಗ ಅವರಲ್ಲಿ ಅತ್ಯಲ್ಪ ಮಂದಿಯನ್ನು ಬಿಟ್ಟು ಉಳಿದವರೆಲ್ಲಾ ವಿಮುಖರಾಗಿಬಿಟ್ಟರು ಮತ್ತು ಅಲ್ಲಾಹನು ಅಕ್ರಮಿಗಳನ್ನು ಚೆನ್ನಾಗಿ ಅರಿಯುವವನಾಗಿದ್ದಾನೆ.
ئەرەپچە تەپسىرلەر:
وَقَالَ لَهُمْ نَبِیُّهُمْ اِنَّ اللّٰهَ قَدْ بَعَثَ لَكُمْ طَالُوْتَ مَلِكًا ؕ— قَالُوْۤا اَنّٰی یَكُوْنُ لَهُ الْمُلْكُ عَلَیْنَا وَنَحْنُ اَحَقُّ بِالْمُلْكِ مِنْهُ وَلَمْ یُؤْتَ سَعَةً مِّنَ الْمَالِ ؕ— قَالَ اِنَّ اللّٰهَ اصْطَفٰىهُ عَلَیْكُمْ وَزَادَهٗ بَسْطَةً فِی الْعِلْمِ وَالْجِسْمِ ؕ— وَاللّٰهُ یُؤْتِیْ مُلْكَهٗ مَنْ یَّشَآءُ ؕ— وَاللّٰهُ وَاسِعٌ عَلِیْمٌ ۟
ಅವರೊಂದಿಗೆ ಅವರ ಪೈಗಂಬರರು ಹೇಳಿದರು; ಅಲ್ಲಾಹನು ತಾಲೂತರನ್ನು ನಿಮ್ಮ ರಾಜನಾಗಿ ನೇಮಿಸಿರುವನು. ಅವರು ಹೇಳಿದರು; ನಮ್ಮ ಮೇಲೆ ಅವನಿಗೆ ಆಡಳಿತ ಸಿಗುವುದಾದರೂ ಹೇಗೆ? ಆಡಳಿತಕ್ಕೆ ಅವನಿಗಿಂತ ಹೆಚ್ಚು ಯೋಗ್ಯರು ನಾವಾಗಿದ್ದೇವೆ ಮತ್ತು ಅವನ ಬಳಿ ಸಂಪತ್ತೂ ಇಲ್ಲ. ಪೈಗಂಬರರು ಹೇಳಿದರು; ಕೇಳಿರಿ, ಅಲ್ಲಾಹನು ಅವನನ್ನೇ ನಿಮ್ಮ ಮೇಲೆ ಆಯ್ಕೆ ಮಾಡಿರುವನು ಮತ್ತು ಅವನಿಗೆ ಅಪಾರ ಜ್ಞಾನ, ದೇಹದಾರ್ಢ್ಯವನ್ನು ನೀಡಲಾಗಿದೆ. ಮತ್ತು ಅಲ್ಲಾಹನು ತನ್ನ ಅಧಿಪತ್ಯವನ್ನು ತಾನಿಚ್ಛಿಸಿದವರಿಗೆ ದಯಪಾಲಿಸುತ್ತಾನೆ. ಅಲ್ಲಾಹನು ಅತಿ ವಿಶಾಲನೂ ಸರ್ವಜ್ಞಾನಿಯೂ ಆಗಿದ್ದಾನೆ.
ئەرەپچە تەپسىرلەر:
وَقَالَ لَهُمْ نَبِیُّهُمْ اِنَّ اٰیَةَ مُلْكِهٖۤ اَنْ یَّاْتِیَكُمُ التَّابُوْتُ فِیْهِ سَكِیْنَةٌ مِّنْ رَّبِّكُمْ وَبَقِیَّةٌ مِّمَّا تَرَكَ اٰلُ مُوْسٰی وَاٰلُ هٰرُوْنَ تَحْمِلُهُ الْمَلٰٓىِٕكَةُ ؕ— اِنَّ فِیْ ذٰلِكَ لَاٰیَةً لَّكُمْ اِنْ كُنْتُمْ مُّؤْمِنِیْنَ ۟۠
ಅನಂತರ ಅವರ ಪೈಗಂಬರರು ಅವರಿಗೆ ಹೇಳಿದರು; ಅವನ ಅಧಿಪತ್ಯದ ಸಂಕೇತವಾಗಿ ನಿಮ್ಮಲ್ಲಿಗೆ ದೂತರು ಒಂದು ಪೆಟ್ಟಿಗೆಯನ್ನು ಹೊತ್ತು ತರುವರು. ಅದರಲ್ಲಿ ನಿಮ್ಮ ಪ್ರಭುವಿನ ಕಡೆಯ ಮನಶಾಂತಿಯಿರುತ್ತದೆ. ಮತ್ತು ಮೂಸಾ ಹಾಗು ಹಾರೂನರ ಪರಿವಾರವು ಬಿಟ್ಟ ಅವಶೇಷಗಳೂ ಇವೆ. ನಿಸ್ಸಂಶಯವಾಗಿಯು ನೀವು ಸತ್ಯವಿಶ್ವಾಸಿಗಳಾಗಿದ್ದರೆ ಇದು ನಿಮಗೆ ಸ್ಪಷ್ಟ ನಿದರ್ಶನವಾಗಿದೆ.
ئەرەپچە تەپسىرلەر:
فَلَمَّا فَصَلَ طَالُوْتُ بِالْجُنُوْدِ ۙ— قَالَ اِنَّ اللّٰهَ مُبْتَلِیْكُمْ بِنَهَرٍ ۚ— فَمَنْ شَرِبَ مِنْهُ فَلَیْسَ مِنِّیْ ۚ— وَمَنْ لَّمْ یَطْعَمْهُ فَاِنَّهٗ مِنِّیْۤ اِلَّا مَنِ اغْتَرَفَ غُرْفَةً بِیَدِهٖ ۚ— فَشَرِبُوْا مِنْهُ اِلَّا قَلِیْلًا مِّنْهُمْ ؕ— فَلَمَّا جَاوَزَهٗ هُوَ وَالَّذِیْنَ اٰمَنُوْا مَعَهٗ ۙ— قَالُوْا لَا طَاقَةَ لَنَا الْیَوْمَ بِجَالُوْتَ وَجُنُوْدِهٖ ؕ— قَالَ الَّذِیْنَ یَظُنُّوْنَ اَنَّهُمْ مُّلٰقُوا اللّٰهِ ۙ— كَمْ مِّنْ فِئَةٍ قَلِیْلَةٍ غَلَبَتْ فِئَةً كَثِیْرَةً بِاِذْنِ اللّٰهِ ؕ— وَاللّٰهُ مَعَ الصّٰبِرِیْنَ ۟
ಹಾಗೆಯೇ ತಾಲೂತ್ ಸೈನ್ಯದೊಂದಿಗೆ ಹೊರಟಾಗ ಹೇಳಿದರು; ಖಂಡಿತವಾಗಿಯೂ ಅಲ್ಲಾಹನು ಒಂದು ನದಿಯ ಮೂಲಕ ನಿಮ್ಮನ್ನು ಪರೀಕ್ಷಿಸುವವನಿದ್ದಾನೆ. ಯಾರು ಅದರಿಂದ ನೀರು ಕುಡಿಯುತ್ತಾನೋ ಅವನು ನನ್ನವನಲ್ಲ ಮತ್ತು ಯಾರು ಅದರ ರುಚಿಯನ್ನು ನೋಡುವುದಿಲ್ಲವೋ ನಿಜವಾಗಿಯು ಅವನು ನನ್ನವನು. ಆದರೆ ಯಾರು ತನ್ನ ಕೈಯಿಂದ ಒಂದು ಬೊಗಸೆಯಷ್ಟು ನೀರು ತೆಗೆಯುತ್ತಾನೋ ಅವನ ಹೊರತು. ಆದರೆ ಅವರ ಪೈಕಿ ಅತ್ಯಲ್ಪ ಮಂದಿಯನ್ನು ಬಿಟ್ಟು ಇತರರೆಲ್ಲರೂ ಅದರಿಂದ ಕುಡಿದರು. ಹಾಗೆಯೇ ಅವರು ಮತ್ತು ಅವರ ಜೊತೆ ವಿಶ್ವಾಸವಿರಿಸಿದವರೂ ಆ ನದಿಯನ್ನು ದಾಟಿದಾಗ ಅವರು ಹೇಳಿದರುÀ; ಇಂದು ನಮಗೆ ಜಾಲೂತ್ ಮತ್ತು ಅವನ ಸೈನ್ಯದೊಂದಿಗೆ ಹೋರಾಡುವ ಯಾವ ಶಕ್ತಿಯೂ ಇಲ್ಲ. ಆದರೆ ಅಲ್ಲಾಹನನ್ನು ಖಂಡಿತವಾಗಿಯು ಭೇಟಿಯಾಗಲಿರುವೆವೆಂದು ದೃಢವಾಗಿ ನಂಬಿದವರು ಹೇಳಿದರು; ಅದೆಷ್ಟೋ ಚಿಕ್ಕ ಚಿಕ್ಕ ಸೈನ್ಯಗಳು ದೊಡ್ಡ ದೊಡ್ಡ ಸೈನ್ಯಗಳನ್ನು ಅಲ್ಲಾಹನ ಅನುಮತಿಯೊಂದಿಗೆ ಸೋಲಿಸಿವೆ ಮತ್ತು ಅಲ್ಲಾಹನು ಸಹನೆ ವಹಿಸುವವರೊಂದಿಗಿದ್ದಾನೆ.
ئەرەپچە تەپسىرلەر:
وَلَمَّا بَرَزُوْا لِجَالُوْتَ وَجُنُوْدِهٖ قَالُوْا رَبَّنَاۤ اَفْرِغْ عَلَیْنَا صَبْرًا وَّثَبِّتْ اَقْدَامَنَا وَانْصُرْنَا عَلَی الْقَوْمِ الْكٰفِرِیْنَ ۟ؕ
ಅವರು ಜಾಲೂತ್ ಮತ್ತು ಅವನ ಸೈನ್ಯವನ್ನು ಎದುರಿಸಲು ಹೊರಟಾಗ ಹೇಳಿದರು; ನಮ್ಮ ಪ್ರಭುವೇ ನಮಗೆ ಸ್ಥೆöÊರ್ಯವನ್ನು ಕರುಣಿಸು ಮತ್ತು ನಮ್ಮ ಪಾದಗಳನ್ನು ಸ್ಥಿರಗೊಳಿಸು ಹಾಗು ಅವಿಶ್ವಾಸಿಗಳ ವಿರುದ್ಧ ನಮಗೆ ಸಹಾಯ ಮಾಡು.
ئەرەپچە تەپسىرلەر:
فَهَزَمُوْهُمْ بِاِذْنِ اللّٰهِ ۙ۫— وَقَتَلَ دَاوٗدُ جَالُوْتَ وَاٰتٰىهُ اللّٰهُ الْمُلْكَ وَالْحِكْمَةَ وَعَلَّمَهٗ مِمَّا یَشَآءُ ؕ— وَلَوْلَا دَفْعُ اللّٰهِ النَّاسَ بَعْضَهُمْ بِبَعْضٍ لَّفَسَدَتِ الْاَرْضُ وَلٰكِنَّ اللّٰهَ ذُوْ فَضْلٍ عَلَی الْعٰلَمِیْنَ ۟
ಹಾಗೆಯೇ ಅವರು ಅಲ್ಲಾಹನ ಅಪ್ಪಣೆಯಿಂದ ಅವರನ್ನು (ಜಾಲೂತ್ ಸೈನ್ಯವನ್ನು ಬೆನ್ನಟ್ಟಿ) ಸೋಲಿಸಿದರು ಹಾಗೂ ದಾವೂದರು ಜಾಲೂತನನ್ನು ಕೊಂದು ಹಾಕಿದರು. ಮತ್ತು ಅಲ್ಲಾಹನು ಅವರಿಗೆ ಅಧಿಪತ್ಯವನ್ನೂ, ಸುಜ್ಞಾನವನ್ನೂ ದಯಪಾಲಿಸಿದನು ಮತ್ತು ತಾನಿಚ್ಛಿಸಿದ್ದನ್ನು ಕಲಿಸಿದನು. ಮತ್ತು ಅಲ್ಲಾಹನು ಜನರ ಪೈಕಿ ಕೆಲವರನ್ನು ಇನ್ನು ಕೆಲವರ ಮೂಲಕ ತಡೆಯದಿರುತ್ತಿದ್ದರೆ ಖಂಡಿತವಾಗಿಯು ಭೂಮಿಯು ಕ್ಷೆÆÃಭೆಗೊಳಗಾಗುತ್ತಿತ್ತು. ಆದರೆ ಅಲ್ಲಾಹನು ಸರ್ವಲೋಕದವರ ಮೇಲೆ ಮಹಾ ಅನುಗ್ರಹ ದಾತನಾಗಿದ್ದಾನೆ.
ئەرەپچە تەپسىرلەر:
تِلْكَ اٰیٰتُ اللّٰهِ نَتْلُوْهَا عَلَیْكَ بِالْحَقِّ ؕ— وَاِنَّكَ لَمِنَ الْمُرْسَلِیْنَ ۟
ಇವು ಅಲ್ಲಾಹನ ಪಾಠವಾಗಿದೆ. ಸತ್ಯದೊಂದಿಗೆ ಇವುಗಳನ್ನು ನಾವು ನಿಮ್ಮ ಮುಂದೆ ಓದಿ ಹೇಳುತ್ತೇವೆ ನಿಸ್ಸಂದೇಹವಾಗಿಯು ನೀವು ಸಂದೇಶವಾಹಕರಲ್ಲಿ ಒಬ್ಬರಾಗಿರುವಿರಿ.
ئەرەپچە تەپسىرلەر:
تِلْكَ الرُّسُلُ فَضَّلْنَا بَعْضَهُمْ عَلٰی بَعْضٍ ۘ— مِنْهُمْ مَّنْ كَلَّمَ اللّٰهُ وَرَفَعَ بَعْضَهُمْ دَرَجٰتٍ ؕ— وَاٰتَیْنَا عِیْسَی ابْنَ مَرْیَمَ الْبَیِّنٰتِ وَاَیَّدْنٰهُ بِرُوْحِ الْقُدُسِ ؕ— وَلَوْ شَآءَ اللّٰهُ مَا اقْتَتَلَ الَّذِیْنَ مِنْ بَعْدِهِمْ مِّنْ بَعْدِ مَا جَآءَتْهُمُ الْبَیِّنٰتُ وَلٰكِنِ اخْتَلَفُوْا فَمِنْهُمْ مَّنْ اٰمَنَ وَمِنْهُمْ مَّنْ كَفَرَ ؕ— وَلَوْ شَآءَ اللّٰهُ مَا اقْتَتَلُوْا ۫— وَلٰكِنَّ اللّٰهَ یَفْعَلُ مَا یُرِیْدُ ۟۠
ನಾವು ಆ ಸಂದೇಶವಾಹಕರಲ್ಲಿ ಕೆಲವರಿಗೆ ಇನ್ನು ಕೆಲವರಿಗಿಂತ ಶ್ರೇಷ್ಠತೆಯನ್ನು ದಯಪಾಲಿಸಿದೆವು. ಅವರ ಪೈಕಿ ಅಲ್ಲಾಹನು ಸಂಭಾಷಣೆ ನಡೆಸಿದವರು ಇದ್ದಾರೆ ಮತ್ತು ಅವನು ಅವರಲ್ಲಿ ಕೆಲವರಿಗೆ ಪದವಿಗಳನ್ನು ನೀಡಿ ಉನ್ನತಗೊಳಿಸಿದನು ಮತ್ತು ಮರ್ಯಮರ ಪುತ್ರ ಈಸಾರಿಗೆ ನಾವು ಸುಸ್ಪಷ್ಟ ಪುರಾವೆಗಳನ್ನು ದಯಪಾಲಿಸಿದೆವು ಹಾಗೂ ಅವರನ್ನು ಪವಿತ್ರಾತ್ಮನ ಮೂಲಕ ಬಲಪಡಿಸಿದೆವು ಮತ್ತು ಅಲ್ಲಾಹನು ಇಚ್ಛಿಸಿರುತ್ತಿದ್ದರೆ ತಮ್ಮಲ್ಲಿಗೆ ಸುಸ್ಪಷ್ಟ ಪುರಾವೆಗಳು ಬಂದ ಬಳಿಕವೂ ಅವರ ನಂತರದವರು ಪರಸ್ಪರ ಕಾದಾಡುತ್ತಿರಲಿಲ್ಲ. ಆದರೆ ಅವರು ಭಿನ್ನತೆ ತೋರಿದರು. ಹೀಗೆ ಅವರಲ್ಲಿ ಕೆಲವರು ಸತ್ಯ ವಿಶ್ವಾಸವಿರಿಸಿದರು ಇನ್ನು ಕೆಲವರು ಸತ್ಯನಿಷೇಧ ಕೈಗೊಂಡರು ಮತ್ತು ಅಲ್ಲಾಹನು ಇಚ್ಛಿಸಿರುತ್ತಿದ್ದರೆ ಅವರು ಪರಸ್ಪರ ಕಾದಾಡುತ್ತಿರಲಿಲ್ಲ. ಆದರೆ ಅಲ್ಲಾಹನು ತಾನಿಚ್ಛಿಸಿದ್ದನ್ನು ಮಾಡುತ್ತಾನೆ.
ئەرەپچە تەپسىرلەر:
یٰۤاَیُّهَا الَّذِیْنَ اٰمَنُوْۤا اَنْفِقُوْا مِمَّا رَزَقْنٰكُمْ مِّنْ قَبْلِ اَنْ یَّاْتِیَ یَوْمٌ لَّا بَیْعٌ فِیْهِ وَلَا خُلَّةٌ وَّلَا شَفَاعَةٌ ؕ— وَالْكٰفِرُوْنَ هُمُ الظّٰلِمُوْنَ ۟
ಓ ಸತ್ಯವಿಶ್ವಾಸಿಗಳೇ! ಕ್ರಯ ವಿಕ್ರಯವಾಗಲೀ, ಸ್ನೇಹ ಬಾಂಧವ್ಯವಾಗಲೀ ಮತ್ತು ಯಾವ ಶಿಫಾರಸ್ಸಾಗಲೀ ನಡೆಯದ ದಿನ ಬರುವುದಕ್ಕೆ ಮುನ್ನ ನಾವು ನಿಮಗೆ ದಯಪಾಲಿಸಿದ ಜೀವನಾಧಾರದಿಂದ ಖರ್ಚು ಮಾಡಿರಿ ಮತ್ತು ಸತ್ಯ ನಿಷೇಧಿಸಿದವರೇ ಅಕ್ರಮಿಗಳಾಗಿರುವರು.
ئەرەپچە تەپسىرلەر:
اَللّٰهُ لَاۤ اِلٰهَ اِلَّا هُوَ ۚ— اَلْحَیُّ الْقَیُّوْمُ ۚ۬— لَا تَاْخُذُهٗ سِنَةٌ وَّلَا نَوْمٌ ؕ— لَهٗ مَا فِی السَّمٰوٰتِ وَمَا فِی الْاَرْضِ ؕ— مَنْ ذَا الَّذِیْ یَشْفَعُ عِنْدَهٗۤ اِلَّا بِاِذْنِهٖ ؕ— یَعْلَمُ مَا بَیْنَ اَیْدِیْهِمْ وَمَا خَلْفَهُمْ ۚ— وَلَا یُحِیْطُوْنَ بِشَیْءٍ مِّنْ عِلْمِهٖۤ اِلَّا بِمَا شَآءَ ۚ— وَسِعَ كُرْسِیُّهُ السَّمٰوٰتِ وَالْاَرْضَ ۚ— وَلَا یَـُٔوْدُهٗ حِفْظُهُمَا ۚ— وَهُوَ الْعَلِیُّ الْعَظِیْمُ ۟
ಅಲ್ಲಾಹ್ ಅವನ ಹೊರತು ಅನ್ಯ ನೈಜ ಆರಾಧ್ಯನಿಲ್ಲ. ಅವನು ಚಿರಂತನನು, ಸರ್ವ ನಿಯಂತ್ರಕನು. ಅವನಿಗೆ ತೂಕಡಿಕೆಯಾಗಲೀ, ನಿದ್ರೆಯಾಗಲೀ ಬಾಧಿಸದು. ಭೂಮಿ ಆಕಾಶಗಳಲ್ಲಿರುವುದೆಲ್ಲವೂ ಅವನ ಒಡೆತನದಲ್ಲ್ಲಿವೆ. ಅವನ ಅಪ್ಪಣೆಯಿಲ್ಲದೆ ಅವನ ಸನ್ನಿಧಿಯಲ್ಲಿ ಶಿಫಾರಸ್ಸು ಮಾಡುವವನಾರಿದ್ದಾನೆ? ಅವರ (ಮನುಷ್ಯರ) ಮುಂದಿರುವುದನ್ನೂ, ಅವರ ಹಿಂದಿರುವುದನ್ನೂ ಅವನು ಅರಿಯುತ್ತಾನೆ. ಅವನು ಇಚ್ಛಿಸಿರುವುದರ ಹೊರತು ಅವನ ಜ್ಞಾನದಿಂದ ಯಾವುದನ್ನೂ ಅವರು ಪಡೆಯಲಾರರು; ಅವನ 'ಕುರ್ಸಿ'ಯು ಭೂಮಿ ಆಕಾಶಗಳನ್ನು ಆವರಿಸಿದೆ ಅವೆರಡರ ಸಂರಕ್ಷಣೆಯಿAದ ಅವನು ದಣಿಯುವುದಿಲ್ಲ, ಮತ್ತು ಅವನು ಅತ್ಯುನ್ನತನೂ, ಮಹಾನನೂ ಆಗಿರುತ್ತಾನೆ.
ئەرەپچە تەپسىرلەر:
لَاۤ اِكْرَاهَ فِی الدِّیْنِ ۚ— قَدْ تَّبَیَّنَ الرُّشْدُ مِنَ الْغَیِّ ۚ— فَمَنْ یَّكْفُرْ بِالطَّاغُوْتِ وَیُؤْمِنْ بِاللّٰهِ فَقَدِ اسْتَمْسَكَ بِالْعُرْوَةِ الْوُثْقٰی ۗ— لَا انْفِصَامَ لَهَا ؕ— وَاللّٰهُ سَمِیْعٌ عَلِیْمٌ ۟
ಧರ್ಮ ಸ್ವೀಕಾರದ ವಿಷಯದಲ್ಲಿ ಯಾವುದೇ ಬಲವಂತವಿಲ್ಲ. ಸನ್ಮಾರ್ಗವೂ ದುರ್ಮಾರ್ಗದಿಂದ ಪೂರ್ಣ ಬೇರ್ಪಟ್ಟು ಪ್ರತ್ಯೇಕವಾಗಿದೆ. ಆದ್ದರಿಂದ ಯಾರು ಮಿಥ್ಯಾರಾಧ್ಯರನ್ನು ತಿರಸ್ಕರಿಸಿ ಅಲ್ಲಾಹನಲ್ಲಿ ವಿಶ್ವಾಸವಿಡುತ್ತಾನೋ ಅವನು ಎಂದಿಗೂ ಮುರಿಯದ ಸದೃಢ ಆಶ್ರಯವನ್ನು ಅವಲಂಬಿಸಿದನು. ಅಲ್ಲಾಹನು ಸರ್ವವನ್ನಾಲಿಸುವವನೂ, ಸರ್ವಜ್ಞಾನಿಯೂ ಆಗಿದ್ದಾನೆ.
ئەرەپچە تەپسىرلەر:
اَللّٰهُ وَلِیُّ الَّذِیْنَ اٰمَنُوْا یُخْرِجُهُمْ مِّنَ الظُّلُمٰتِ اِلَی النُّوْرِ ؕ۬— وَالَّذِیْنَ كَفَرُوْۤا اَوْلِیٰٓـُٔهُمُ الطَّاغُوْتُ یُخْرِجُوْنَهُمْ مِّنَ النُّوْرِ اِلَی الظُّلُمٰتِ ؕ— اُولٰٓىِٕكَ اَصْحٰبُ النَّارِ ۚ— هُمْ فِیْهَا خٰلِدُوْنَ ۟۠
ಸತ್ಯವಿಶ್ವಾಸಿಗಳ ರಕ್ಷಕ ಮಿತ್ರನು ಅಲ್ಲಾಹನಾಗಿದ್ದಾನೆ. ಅವನು ಅವರನ್ನು ಅಂಧಕಾರಗಳಿAದ ಪ್ರಕಾಶದೆಡೆಗೆ ಹೊರತರುತ್ತಾನೆ. ಮತ್ತು ಸತ್ಯ ನಿಷೇಧಿಗಳ ಮಿತ್ರರು ಮಿಥ್ಯಾರಾಧ್ಯರಾಗಿದ್ದಾರೆ. ಅವರು ಅವರನ್ನು ಪ್ರಕಾಶದಿಂದ ಅಂಧಕಾರಗಳೆಡೆಗೆ ಕೊಂಡೊಯ್ಯುತ್ತಾರೆ. ಅವರು ನರಕವಾಸಿಗಳು. ಅವರು ಅದರಲ್ಲಿ ಶಾಶ್ವತರಾಗಿರುವರು.
ئەرەپچە تەپسىرلەر:
اَلَمْ تَرَ اِلَی الَّذِیْ حَآجَّ اِبْرٰهٖمَ فِیْ رَبِّهٖۤ اَنْ اٰتٰىهُ اللّٰهُ الْمُلْكَ ۘ— اِذْ قَالَ اِبْرٰهٖمُ رَبِّیَ الَّذِیْ یُحْیٖ وَیُمِیْتُ ۙ— قَالَ اَنَا اُحْیٖ وَاُمِیْتُ ؕ— قَالَ اِبْرٰهٖمُ فَاِنَّ اللّٰهَ یَاْتِیْ بِالشَّمْسِ مِنَ الْمَشْرِقِ فَاْتِ بِهَا مِنَ الْمَغْرِبِ فَبُهِتَ الَّذِیْ كَفَرَ ؕ— وَاللّٰهُ لَا یَهْدِی الْقَوْمَ الظّٰلِمِیْنَ ۟ۚ
ಅಲ್ಲಾಹನು ಅಧಿಪತ್ಯ ನೀಡಿದ ಕಾರಣದಿಂದ (ಪೈಗಂಬರ್) ಇಬ್ರಾಹೀಮ ರೊಂದಿಗೆ ಅವರ ಪ್ರಭುವಿನ ವಿಚಾರದಲ್ಲಿ ವಾಗ್ವಾದ ನಡೆಸಿದವನ ಕಡೆಗೆ ನೀವು ನೋಡಲಿಲ್ಲವೇ? ನನ್ನ ಪ್ರಭು ಜೀವ ಮತ್ತು ಮರಣ ನೀಡುವವನಾಗಿರುವನು ಎಂದು ಇಬ್ರಾಹೀಮ್(ಅ) ಹೇಳಿದಾಗ ನಾನೂ ಜೀವ ಮತ್ತು ಮರಣವನ್ನು ಕೊಡುತ್ತೇನೆ ಎಂದು ಅವನು ಹೇಳಿದನು. ಆಗ (ಪೈಗಂಬರ್) ಇಬ್ರಾಹೀಮ್ ಹೇಳಿದರು; ಅಲ್ಲಾಹನು ಪೂರ್ವದಿಂದ ಸೂರ್ಯನನ್ನು ತರುತ್ತಾನೆ. ನೀನದನ್ನು ಪಶ್ಚಿಮದಿಂದ ತಾ. ಆಗ ಆ ಸತ್ಯನಿಷೇಧಿ ದಿಗ್ಭçಮೆಗೊಂಡನು ಮತ್ತು ಅಲ್ಲ್ಲಾಹನು ಅಕ್ರಮಿ ಜನರಿಗೆ ಸನ್ಮಾರ್ಗವನ್ನು ಕರುಣಿಸುವುದಿಲ್ಲ.
ئەرەپچە تەپسىرلەر:
اَوْ كَالَّذِیْ مَرَّ عَلٰی قَرْیَةٍ وَّهِیَ خَاوِیَةٌ عَلٰی عُرُوْشِهَا ۚ— قَالَ اَنّٰی یُحْیٖ هٰذِهِ اللّٰهُ بَعْدَ مَوْتِهَا ۚ— فَاَمَاتَهُ اللّٰهُ مِائَةَ عَامٍ ثُمَّ بَعَثَهٗ ؕ— قَالَ كَمْ لَبِثْتَ ؕ— قَالَ لَبِثْتُ یَوْمًا اَوْ بَعْضَ یَوْمٍ ؕ— قَالَ بَلْ لَّبِثْتَ مِائَةَ عَامٍ فَانْظُرْ اِلٰی طَعَامِكَ وَشَرَابِكَ لَمْ یَتَسَنَّهْ ۚ— وَانْظُرْ اِلٰی حِمَارِكَ۫— وَلِنَجْعَلَكَ اٰیَةً لِّلنَّاسِ وَانْظُرْ اِلَی الْعِظَامِ كَیْفَ نُنْشِزُهَا ثُمَّ نَكْسُوْهَا لَحْمًا ؕ— فَلَمَّا تَبَیَّنَ لَهٗ ۙ— قَالَ اَعْلَمُ اَنَّ اللّٰهَ عَلٰی كُلِّ شَیْءٍ قَدِیْرٌ ۟
ಅಥವಾ ಛಾವಣಿಗಳೊಂದಿಗೆ ಕುಸಿದು ಬಿದ್ದಿದ್ದಂತಹ ನಾಡೊಂದನ್ನು ಹಾದು ಹೋಗುತ್ತಿದ್ದ ವ್ಯಕ್ತಿಯ ದೃಷ್ಟಾಂತವನ್ನು ನೀವು ನೋಡಲಿಲ್ಲವೇ? ಅವನು ಹೇಳಿದನು. ಇದರ ನಿರ್ಜೀವಾವಸ್ಥೆಯ ಬಳಿಕ ಅಲ್ಲಾಹನು ಇದನ್ನು ಹೇಗೆ ಜೀವಂತಗೊಳಿಸುವನು? ಆಗ ಅವನನ್ನು ಅಲ್ಲಾಹನು ನೂರು ವರ್ಷಗಳವರೆಗೆ ಮರಣಗೊಳಿಸಿದನು. ಅನಂತರ ಅವನನ್ನು ಎಬ್ಬಿಸಿ ಕೇಳಿದನು; ನಿನ್ನ ಮೇಲೆ ಎಷ್ಟು ಕಾಲ ಸರಿದಿದೆ? ಒಂದು ದಿನ ಅಥವಾ ದಿನದ ಸ್ವಲ್ಪ ಸಮಯ ಎಂದನು. ಅಲ್ಲಾಹನು ಹೇಳಿದನು; ಹಾಗಲ್ಲ! ವಸ್ತುತಃ ನೀನು ನೂರು ವರ್ಷಗಳ ಕಾಲ ಈ ಸ್ಥಿತಿಯಲಿದ್ದೆ ಇನ್ನು ನೀನು ನಿನ್ನ ಆಹಾರ ಪಾನೀಯದೆಡೆಗೆ ನೋಡು. ಒಂದಿಷ್ಟೂ ಹಾಳಾಗಿರುವುದಿಲ್ಲ. ಮತ್ತು ನಿನ್ನ ಕತ್ತೆಯೆಡೆಗೂ ನೋಡು(ಅದರ ಅಸ್ಥಿಪಂಜರವೂ ಶಿಥಿಲವಾಗಿ ಹೋಗಿದೆ). ನಾವು ನಿನ್ನನ್ನು ಜನರಿಗೆ ಒಂದು ನಿದರ್ಶನವನ್ನಾಗಿ ಮಾಡುತ್ತೇವೆ. ನೀನು ಎಲುಬುಗಳೆಡೆಗೆ ನೋಡು ನಾವು ಅವುಗಳನ್ನು ಹೇಗೆ ಸೃಷ್ಟಿಸುತ್ತೇವೆ ಅನಂತರ ಅವುಗಳಿಗೆ ಮಾಂಸವನ್ನು ಹೊದಿಸುತ್ತೇವೆಂದು. ಹಾಗೇಯೇ, ಅವನಿಗೆ ಎಲ್ಲವೂ ಸ್ಪಷ್ಟವಾದಾಗ ನಿಸ್ಸಂಶಯವಾಗಿಯು ಅಲ್ಲಾಹನು ಸಕಲ ಸಂಗತಿಗಳ ಮೇಲೆ ಸಾಮರ್ಥ್ಯವುಳ್ಳವನೆಂದು ನಾನು ಖಂಡಿತವಾಗಿ ಅರಿತಿದ್ದೇನೆ ಎಂದು ಹೇಳಿದನು.
ئەرەپچە تەپسىرلەر:
وَاِذْ قَالَ اِبْرٰهٖمُ رَبِّ اَرِنِیْ كَیْفَ تُحْیِ الْمَوْتٰی ؕ— قَالَ اَوَلَمْ تُؤْمِنْ ؕ— قَالَ بَلٰی وَلٰكِنْ لِّیَطْمَىِٕنَّ قَلْبِیْ ؕ— قَالَ فَخُذْ اَرْبَعَةً مِّنَ الطَّیْرِ فَصُرْهُنَّ اِلَیْكَ ثُمَّ اجْعَلْ عَلٰی كُلِّ جَبَلٍ مِّنْهُنَّ جُزْءًا ثُمَّ ادْعُهُنَّ یَاْتِیْنَكَ سَعْیًا ؕ— وَاعْلَمْ اَنَّ اللّٰهَ عَزِیْزٌ حَكِیْمٌ ۟۠
(ಇಬ್ರಾಹೀಮ್(ಅ)) ಓ ನನ್ನ ಪ್ರಭು ನೀನು ಮೃತರನ್ನು ಹೇಗೆ ಜೀವಂತಗೊಳಿಸುವೆAಬುದನ್ನು ನನಗೆ ತೋರಿಸಿಕೊಡು ಎಂದು ನಿವೇದಿಸಿದರು. ಅವನು (ಅಲ್ಲಾಹ್)ಹೇಳಿದನು; ನಿನಗೆ ನಂಬಿಕೆಯಿಲ್ಲವೇ? ಅವರು ಹೇಳಿದರು; ಏಕಿಲ್ಲ ಆದರೆ ಇದು ನನ್ನ ಮನಸ್ಸಿಗೆ ಸಮಾಧಾನವಾಗಲೆಂದಾಗಿದೆ. ಅವನು (ಅಲ್ಲಾಹ್) ಹೇಳಿದನು; ನೀನು ನಾಲ್ಕು ಪಕ್ಷಿಗಳನ್ನು ಹಿಡಿದು ಅವುಗಳನ್ನು ಪಳಗಿಸಿ ನಂತರ ತುಂಡರಿಸಿ ಒಂದೊAದು ಭಾಗವನ್ನು ಪ್ರತಿಯೊಂದು ಬೆಟ್ಟದ ಮೇಲಿಡು. ಅನಂತರ ನೀನು ಅವುಗಳನ್ನು ಕೂಗಿ ಕರೆ. ಅವು ಧಾವಿಸುತ್ತಾ ನಿನ್ನೆಡೆಗೆ ಬರುವುವು ಮತ್ತು ನಿಶ್ಚಯವಾಗಿಯು ಅಲ್ಲಾಹನು ಪ್ರಬಲನೂ, ಯುಕ್ತಿಪೂರ್ಣನೂ ಆಗಿದ್ದಾನೆಂಬುದನ್ನು ತಿಳಿದುಕೊಳ್ಳಿರಿ.
ئەرەپچە تەپسىرلەر:
مَثَلُ الَّذِیْنَ یُنْفِقُوْنَ اَمْوَالَهُمْ فِیْ سَبِیْلِ اللّٰهِ كَمَثَلِ حَبَّةٍ اَنْۢبَتَتْ سَبْعَ سَنَابِلَ فِیْ كُلِّ سُنْۢبُلَةٍ مِّائَةُ حَبَّةٍ ؕ— وَاللّٰهُ یُضٰعِفُ لِمَنْ یَّشَآءُ ؕ— وَاللّٰهُ وَاسِعٌ عَلِیْمٌ ۟
ಅಲ್ಲಾಹನ ಮಾರ್ಗದಲ್ಲಿ ತಮ್ಮ ಸಂಪತ್ತುಗಳನ್ನು ಖರ್ಚುಮಾಡುವವರ ಉಪಮೆಯು ಒಂದು ಕಾಳಿನಂತೆ ಅದನ್ನು ಬಿತ್ತಿ ಅದು ಮೊಳಕೆಯೊಡೆದು ಏಳುತೆನೆಗಳನ್ನು ಬೆಳೆಸಿತು ಪ್ರತಿಯೊಂದು ತೆನೆಯಲ್ಲೂ ನೂರು ಕಾಳುಗಳಿವೆ ಮತ್ತು ಅಲ್ಲಾಹನು ತಾನಿಚ್ಛಿಸಿದವರಿಗೆ ಪ್ರತಿಫಲವನ್ನು ಇನ್ನೂ ಹೆಚ್ಚಿಸುವನು ಮತ್ತು ಅಲ್ಲಾಹನು ಅತಿವಿಶಾಲನೂ, ಸರ್ವಜ್ಞಾನಿಯೂ ಆಗಿರುವನು.
ئەرەپچە تەپسىرلەر:
اَلَّذِیْنَ یُنْفِقُوْنَ اَمْوَالَهُمْ فِیْ سَبِیْلِ اللّٰهِ ثُمَّ لَا یُتْبِعُوْنَ مَاۤ اَنْفَقُوْا مَنًّا وَّلَاۤ اَذًی ۙ— لَّهُمْ اَجْرُهُمْ عِنْدَ رَبِّهِمْ ۚ— وَلَا خَوْفٌ عَلَیْهِمْ وَلَا هُمْ یَحْزَنُوْنَ ۟
ಯಾರು ಅಲ್ಲಾಹನ ಮಾರ್ಗದಲ್ಲಿ ತಮ್ಮ ಸಂಪತ್ತುಗಳನ್ನು ಖರ್ಚು ಮಾಡುತ್ತಾರೋ ಬಳಿಕ ತಾವು ಖರ್ಚು ಮಾಡಿದ್ದನ್ನು ಔದಾರ್ಯವಾಗಿ ಹೇಳಿಕೊಳ್ಳುವುದನ್ನಾಗಲೀ ಅಥವಾ ತೊಂದರೆ ಕೊಡುವುದನ್ನಾಗಲೀ ಮಾಡುವುದಿಲ್ಲವೋ ಅವರ ಪ್ರತಿಫಲವು ಅವರ ಪ್ರಭುವಿನ ಬಳಿಯಿದೆ ಮತ್ತು ಅವರ ಮೇಲೆ ಯಾವುದೇ ಭಯವಾಗಲೀ, ವ್ಯಥೆಯಾಗಲೀ ಬಾಧಿಸದು.
ئەرەپچە تەپسىرلەر:
قَوْلٌ مَّعْرُوْفٌ وَّمَغْفِرَةٌ خَیْرٌ مِّنْ صَدَقَةٍ یَّتْبَعُهَاۤ اَذًی ؕ— وَاللّٰهُ غَنِیٌّ حَلِیْمٌ ۟
ಮನ ನೋಯಿಸುವ ದಾನ ಧರ್ಮಕ್ಕಿಂತಲೂ ಸಭ್ಯವಾದ ಮಾತು ಮತ್ತು ಕ್ಷಮೆಯು ಉತ್ತಮವಾಗಿದೆ ಮತ್ತು ಅಲ್ಲಾಹನು ನಿರಪೇಕ್ಷನೂ, ಸಹನಶೀಲನೂ ಆಗಿರುವನು.
ئەرەپچە تەپسىرلەر:
یٰۤاَیُّهَا الَّذِیْنَ اٰمَنُوْا لَا تُبْطِلُوْا صَدَقٰتِكُمْ بِالْمَنِّ وَالْاَذٰی ۙ— كَالَّذِیْ یُنْفِقُ مَالَهٗ رِئَآءَ النَّاسِ وَلَا یُؤْمِنُ بِاللّٰهِ وَالْیَوْمِ الْاٰخِرِ ؕ— فَمَثَلُهٗ كَمَثَلِ صَفْوَانٍ عَلَیْهِ تُرَابٌ فَاَصَابَهٗ وَابِلٌ فَتَرَكَهٗ صَلْدًا ؕ— لَا یَقْدِرُوْنَ عَلٰی شَیْءٍ مِّمَّا كَسَبُوْا ؕ— وَاللّٰهُ لَا یَهْدِی الْقَوْمَ الْكٰفِرِیْنَ ۟
ಓ ಸತ್ಯವಿಶ್ವಾಸಿಗಳೇ, ಔದಾರ್ಯವಾಗಿ ಹೇಳಿಕೊಂಡಾಗಲಿ ಮನ ನೋಯಿಸಿಯಾಗಲಿ ನೀವು ನಿಮ್ಮ ದಾನ ಧರ್ಮಗಳನ್ನು ನಿಷ್ಫಲಗೊಳಿಸಬೇಡಿರಿ. ಅಲ್ಲಾಹನಲ್ಲೂ, ಅಂತ್ಯದಿನದಲ್ಲೂ ವಿಶ್ವಾಸವಿಡದೆÀ ಜನರಿಗೆ ತೋರಿಸಲು ಖರ್ಚು ಮಾಡುವ ಒಬ್ಬನ ಹಾಗೆ ನಿಮ್ಮ ದಾನ ಧರ್ಮಗಳನ್ನು ನಿಷ್ಫಲಗೊಳಿಸಬೇಡಿರಿ. ಅವನ ಉಪಮೆಯು ಒಂದು ನುಣುಪಾದ ಬಂಡೆಯ ಮೇಲಿನ ಮಣ್ಣಿನಂತಿದೆ ಅವನು ಆ ಮಣ್ಣಿನಲ್ಲಿ ಬಿತ್ತಿ ಫಸಲನ್ನು ನಿರೀಕ್ಷಿಸುತ್ತಾನೆ. ಆದರೆ ಅದರ ಮೇಲೆ ಧಾರಾಕಾರವಾದ ಮಳೆ ಸುರಿದರೆ ಮಣ್ಣು ಕೊಚ್ಚಿ ಹೋಗಿ ಬಂಡೆ ಬರಿದಾಗಿ ಬಿಡುತ್ತದೆ. ಈ ರೀತಿ (ತೋರಿಕೆಗೆ) ಖರ್ಚು ಮಾಡುವರು ತಮ್ಮ ಪುಣ್ಯ ಕಾರ್ಯಗಳ ಸ್ವಲ್ಪ ಪ್ರತಿಫಲವನ್ನು ಪಡೆಯಲಾರರು. ಮತ್ತು ಅಲ್ಲಾಹನು ಸತ್ಯನಿಷೇಧಿ ಜನರಿಗೆ ಸನ್ಮಾರ್ಗವನ್ನು ನೀಡುವುದಿಲ್ಲ.
ئەرەپچە تەپسىرلەر:
وَمَثَلُ الَّذِیْنَ یُنْفِقُوْنَ اَمْوَالَهُمُ ابْتِغَآءَ مَرْضَاتِ اللّٰهِ وَتَثْبِیْتًا مِّنْ اَنْفُسِهِمْ كَمَثَلِ جَنَّةٍ بِرَبْوَةٍ اَصَابَهَا وَابِلٌ فَاٰتَتْ اُكُلَهَا ضِعْفَیْنِ ۚ— فَاِنْ لَّمْ یُصِبْهَا وَابِلٌ فَطَلٌّ ؕ— وَاللّٰهُ بِمَا تَعْمَلُوْنَ بَصِیْرٌ ۟
ಅಲ್ಲಾಹನ ಸಂಪ್ರೀತಿಯನ್ನರಸಿ ಹಾಗೂ ಸದೃಢತೆಯೊಂದಿಗೆ ಸಂಪತ್ತನ್ನು ಖರ್ಚು ಮಾಡುವವರ ಉಪಮೆಯು ಎತ್ತರ ಪ್ರದೇಶದಲ್ಲಿರುವ ಒಂದು ತೋಟದಂತಿದೆ. ಅದರ ಮೇಲೆ ಧಾರಾಕಾರವಾದ ಮಳೆಯು ಸುರಿದಾಗ ಅದು ತನ್ನ ಫಲವನ್ನು ಇಮ್ಮಡಿಗೊಳಿಸಿತು. ಇನ್ನು ಅದರ ಮೇಲೆ ಧಾರಾಕಾರವಾದ ಮಳೆ ಸುರಿಯದೆ ತುಂತುರು ಮಳೆ ಸುರಿದರೂ ಅದಕ್ಕೆ ಸಾಕಾಗುವುದು. ಅಲ್ಲಾಹನು ನಿಮ್ಮ ಕರ್ಮವನ್ನು ವೀಕ್ಷಿಸುತ್ತಿದ್ದಾನೆ.
ئەرەپچە تەپسىرلەر:
اَیَوَدُّ اَحَدُكُمْ اَنْ تَكُوْنَ لَهٗ جَنَّةٌ مِّنْ نَّخِیْلٍ وَّاَعْنَابٍ تَجْرِیْ مِنْ تَحْتِهَا الْاَنْهٰرُ ۙ— لَهٗ فِیْهَا مِنْ كُلِّ الثَّمَرٰتِ ۙ— وَاَصَابَهُ الْكِبَرُ وَلَهٗ ذُرِّیَّةٌ ضُعَفَآءُ ۖۚ— فَاَصَابَهَاۤ اِعْصَارٌ فِیْهِ نَارٌ فَاحْتَرَقَتْ ؕ— كَذٰلِكَ یُبَیِّنُ اللّٰهُ لَكُمُ الْاٰیٰتِ لَعَلَّكُمْ تَتَفَكَّرُوْنَ ۟۠
ನಿಮ್ಮಲ್ಲೊಬ್ಬನಿಗೆ ಖರ್ಜೂರದ ಮರಗಳು ಮತ್ತು ದ್ರಾಕ್ಷಿ ಬಳ್ಳಿಗಳಿರುವ ಒಂದು ತೋಟವಿದ್ದು, ಅದರ ತಳಭಾಗದಲ್ಲಿ ಕಾಲುವೆಗಳು ಹರಿಯುತ್ತಿವೆ, ಅದರಲ್ಲಿ ಅವನಿಗೆ ಎಲ್ಲಾ ವಿಧದ ಫಲಗಳಿವೆ, ಅವನಿಗೆ ವೃದ್ಧಾಪ್ಯವು ಬಾಧಿಸಿದೆ, ಅವನ ಚಿಕ್ಕ ಚಿಕ್ಕ ಮಕ್ಕಳೂ ಇದ್ದಾರೆ. ಆಗ ಅಗ್ನಿ ಮಾರುತವೊಂದು ಅದಕ್ಕೆ ತಗುಲಿ ಅದು ಸುಟ್ಟು ಹೋಗುವುದನ್ನು ನಿಮ್ಮಲ್ಲಿ ಯಾರಾದರೂ ಆಶಿಸುವರೇ? ನೀವು ಚಿಂತಿಸಿ ಗ್ರಹಿಸುವುದಕ್ಕಾಗಿ ಅಲ್ಲಾಹನು ನಿಮಗೆ ಈ ರೀತಿ ದೃಷ್ಟಾಂತಗಳನ್ನು ವಿವರಿಸಿ ಕೊಡುತ್ತಾನೆ(ಇದೇ ಪ್ರಕಾರ ಯಾವೊಬ್ಬನು ತನ್ನ ಪುಣ್ಯಗಳು ವ್ಯರ್ಥವಾಗುವುದನ್ನು ಬಯಸುತ್ತಾನೆಯೇ).
ئەرەپچە تەپسىرلەر:
یٰۤاَیُّهَا الَّذِیْنَ اٰمَنُوْۤا اَنْفِقُوْا مِنْ طَیِّبٰتِ مَا كَسَبْتُمْ وَمِمَّاۤ اَخْرَجْنَا لَكُمْ مِّنَ الْاَرْضِ ۪— وَلَا تَیَمَّمُوا الْخَبِیْثَ مِنْهُ تُنْفِقُوْنَ وَلَسْتُمْ بِاٰخِذِیْهِ اِلَّاۤ اَنْ تُغْمِضُوْا فِیْهِ ؕ— وَاعْلَمُوْۤا اَنَّ اللّٰهَ غَنِیٌّ حَمِیْدٌ ۟
ಓ ಸತ್ಯವಿಶ್ವಾಸಿಗಳೇ, ನೀವು ಸಂಪಾದಿಸಿದ ಉತ್ತಮ ವಸ್ತುಗಳನ್ನು ಮತ್ತು ಭೂಮಿಯಿಂದ ನಾವು ನಿಮಗೆ ಉತ್ಪಾದಿಸಿ ಕೊಟ್ಟಿರುವ ವಸ್ತುಗಳಿಂದ ಖರ್ಚು ಮಾಡಿರಿ. ಅವುಗಳಿಂದ ಕೆಟ್ಟ ವಸ್ತುಗಳನ್ನು ಖರ್ಚು ಮಾಡಲು ನೀವು ಉದ್ದೇಶಿಸಬಾರದು (ಅವುಗಳನ್ನು ನಿಮಗೆ ನೀಡಲಾದರೆ) ಅವುಗಳನ್ನು ಸ್ವತಃ (ಮೋಸ ಅಥÀವಾ ಅಲಕ್ಷö್ಯದಿಂದ) ಕಣ್ಣು ಮುಚ್ಚಿಕೊಂಡÀಲ್ಲದೇ ಸ್ವೀಕರಿಸಲಾರಿರಿ. ಅಲ್ಲಾಹನು ನಿರಪೇಕ್ಷನೂ, ಸ್ತುತ್ಯರ್ಹನೂ ಆಗಿದ್ದಾನೆಂದು ನೀವು ತಿಳಿದುಕೊಳ್ಳಿರಿ.
ئەرەپچە تەپسىرلەر:
اَلشَّیْطٰنُ یَعِدُكُمُ الْفَقْرَ وَیَاْمُرُكُمْ بِالْفَحْشَآءِ ۚ— وَاللّٰهُ یَعِدُكُمْ مَّغْفِرَةً مِّنْهُ وَفَضْلًا ؕ— وَاللّٰهُ وَاسِعٌ عَلِیْمٌ ۟
ಶೈತಾನನು ನಿಮಗೆ ದಾರಿದ್ರö್ಯದ ಭೀತಿ ಹುಟ್ಟಿಸಿ ಅಶ್ಲೀಲತೆಯ (ಜಿಪುಣತೆಯ) ಆದೇಶ ನೀಡುತ್ತಾನೆ. ಮತ್ತು ಅಲ್ಲಾಹನು ನಿಮಗೆ ತನ್ನ ವತಿಯಿಂದ ಪಾಪವಿಮೋಚನೆ ಹಾಗೂ ಅನುಗ್ರಹದ (ಸಂಮೃದ್ಧಿಯ) ವಾಗ್ದಾನ ಮಾಡುತ್ತಾನೆ. ಅಲ್ಲಾಹನು ವಿಶಾಲನೂ, ಜ್ಞಾನವುಳ್ಳವನೂ ಆಗಿದ್ದಾನೆ.
ئەرەپچە تەپسىرلەر:
یُّؤْتِی الْحِكْمَةَ مَنْ یَّشَآءُ ۚ— وَمَنْ یُّؤْتَ الْحِكْمَةَ فَقَدْ اُوْتِیَ خَیْرًا كَثِیْرًا ؕ— وَمَا یَذَّكَّرُ اِلَّاۤ اُولُوا الْاَلْبَابِ ۟
ತಾನಿಚ್ಛಿಸುವವರಿಗೆ ಅವನು ಸುಜ್ಞಾನವನ್ನು ನೀಡುತ್ತಾನೆ. ಯಾರಿಗೆ ಸುಜ್ಞಾನವನ್ನು ನೀಡಲಾಗುತ್ತದೋ ಅವನಿಗೆ ಬಹಳಷ್ಟು ಒಳಿತುಗಳನ್ನು ನೀಡಲಾಯಿತು. ಬುದ್ಧಿವಂತರು ಮಾತ್ರ ಉಪದೇಶ ಸ್ವೀಕರಿಸುತ್ತಾರೆ.
ئەرەپچە تەپسىرلەر:
وَمَاۤ اَنْفَقْتُمْ مِّنْ نَّفَقَةٍ اَوْ نَذَرْتُمْ مِّنْ نَّذْرٍ فَاِنَّ اللّٰهَ یَعْلَمُهٗ ؕ— وَمَا لِلظّٰلِمِیْنَ مِنْ اَنْصَارٍ ۟
ನೀವೇನನ್ನು ಖರ್ಚು ಮಾಡಿದರೂ ಮತ್ತು ಏನನ್ನು ಹರಕೆ ಹೊತ್ತರೂ ಖಂಡಿತವಾಗಿಯು ಅಲ್ಲಾಹನು ಅದನ್ನು ಚೆನ್ನಾಗಿ ಅರಿಯುತ್ತಾನೆ. ಮತ್ತು ಅಕ್ರಮಿಗಳಿಗೆ ಯಾವ ಸಹಾಯಕನೂ ಇರಲಾರನು.
ئەرەپچە تەپسىرلەر:
اِنْ تُبْدُوا الصَّدَقٰتِ فَنِعِمَّا هِیَ ۚ— وَاِنْ تُخْفُوْهَا وَتُؤْتُوْهَا الْفُقَرَآءَ فَهُوَ خَیْرٌ لَّكُمْ ؕ— وَیُكَفِّرُ عَنْكُمْ مِّنْ سَیِّاٰتِكُمْ ؕ— وَاللّٰهُ بِمَا تَعْمَلُوْنَ خَبِیْرٌ ۟
ನೀವು ದಾನ ಧರ್ಮಗಳನ್ನು ಬಹಿರಂಗವಾಗಿ ಕೊಟ್ಟರೂ ಒಳ್ಳೆಯದೇ ಆಗಿದೆ. ಆದರೆ ಅದನ್ನು ನೀವು ಬಡವರಿಗೆ ರಹಸ್ಯವಾಗಿ ಕೊಡುವುದಾದರೆ ಅದು ನಿಮ್ಮ ಪಾಲಿಗೆ ಉತ್ತಮವಾಗಿದೆ. (ಹೀಗೆ ಮಾಡಿದರೆ) ಅಲ್ಲಾಹನು ನಿಮ್ಮ ಕೆಡುಕುಗಳನ್ನು ಅಳಿಸಿಹಾಕುವನು ಮತ್ತು ಅಲ್ಲಾಹನು ನೀವು ಮಾಡುತ್ತಿರುವುದನ್ನು ಬಲ್ಲನು.
ئەرەپچە تەپسىرلەر:
لَیْسَ عَلَیْكَ هُدٰىهُمْ وَلٰكِنَّ اللّٰهَ یَهْدِیْ مَنْ یَّشَآءُ ؕ— وَمَا تُنْفِقُوْا مِنْ خَیْرٍ فَلِاَنْفُسِكُمْ ؕ— وَمَا تُنْفِقُوْنَ اِلَّا ابْتِغَآءَ وَجْهِ اللّٰهِ ؕ— وَمَا تُنْفِقُوْا مِنْ خَیْرٍ یُّوَفَّ اِلَیْكُمْ وَاَنْتُمْ لَا تُظْلَمُوْنَ ۟
ಅವರನ್ನು ಸನ್ಮಾರ್ಗಕ್ಕೆ ತರುವ ಹೊಣೆಗಾರಿಕೆ ನಿಮ್ಮ ಮೇಲಿಲ್ಲ. ಆದರೆ ಅಲ್ಲಾಹನು ತಾನಿಚ್ಛಿಸುವವರಿಗೆ ಸನ್ಮಾರ್ಗವನ್ನು ನೀಡುತ್ತಾನೆ. ನೀವು ಉತ್ತಮವಾದುದ್ದನ್ನೂ ಅಲ್ಲಾಹನ ಮಾರ್ಗದಲ್ಲಿ ಖರ್ಚು ಮಾಡಿದರೆ ಅದರ ಪ್ರಯೋಜನ ನಿಮಗೆ ಸಿಗುವುದು. ನೀವು ಅಲ್ಲಾಹನ ಸಂಪ್ರೀತಿಯನ್ನು ಅರಸುತ್ತಲೇ ಖರ್ಚು ಮಾಡಿರಿ. ನೀವು ಯಾವ ಸಂಪತ್ತನ್ನು ಖರ್ಚು ಮಾಡಿದರೂ ಅದರ ಸಂಪೂರ್ಣ ಪ್ರತಿಫಲವನ್ನು ನಿಮಗೆ ನೀಡಲಾಗುವುದು. ಮತ್ತು ನಿಮ್ಮ ಮೇಲೆ ಅನ್ಯಾಯವೆಸಗಲಾಗದು.
ئەرەپچە تەپسىرلەر:
لِلْفُقَرَآءِ الَّذِیْنَ اُحْصِرُوْا فِیْ سَبِیْلِ اللّٰهِ لَا یَسْتَطِیْعُوْنَ ضَرْبًا فِی الْاَرْضِ ؗ— یَحْسَبُهُمُ الْجَاهِلُ اَغْنِیَآءَ مِنَ التَّعَفُّفِ ۚ— تَعْرِفُهُمْ بِسِیْمٰىهُمْ ۚ— لَا یَسْـَٔلُوْنَ النَّاسَ اِلْحَافًا ؕ— وَمَا تُنْفِقُوْا مِنْ خَیْرٍ فَاِنَّ اللّٰهَ بِهٖ عَلِیْمٌ ۟۠
ದಾನ ಧರ್ಮಗಳು ಭೂಮಿಯಲ್ಲಿ ಸಂಚರಿಸಿ ಸಂಪಾದಿಸಲು ಸಾಧ್ಯವಾಗದಂತೆ ಅಲ್ಲಾಹನ ಮಾರ್ಗದಲ್ಲಿ ಕಾರ್ಯವೆಸಗುವ ಬಡವರಿಗೆ ಮಾತ್ರವಾಗಿದೆ. ಅವರ ಸ್ವಾಭಿಮಾನದ ನಿಮಿತ್ತ ಅರಿವಿಲ್ಲದವರು ಅವರನ್ನು ಧನಿಕರೆಂದು ಭಾವಿಸುತ್ತಾರೆ. ಆದರೆ ನೀವು ಅವರ ಮುಖ ಲಕ್ಷಣಗಳ ಮೂಲಕವೇ ಅವರನ್ನು ಗುರುತಿಸುವಿರಿ. ಅವರು ಜನರನ್ನು ಕಾಡಿ ಬೇಡುವುದಿಲ್ಲ. ನೀವು ಯಾವ ಉತ್ತಮ ಸಂಪತ್ತನ್ನು ಖರ್ಚು ಮಾಡಿದರೂ ಆ ಕುರಿತು ಅಲ್ಲಾಹನು ಚೆನ್ನಾಗಿ ಬಲ್ಲನು
ئەرەپچە تەپسىرلەر:
اَلَّذِیْنَ یُنْفِقُوْنَ اَمْوَالَهُمْ بِالَّیْلِ وَالنَّهَارِ سِرًّا وَّعَلَانِیَةً فَلَهُمْ اَجْرُهُمْ عِنْدَ رَبِّهِمْ ۚ— وَلَا خَوْفٌ عَلَیْهِمْ وَلَا هُمْ یَحْزَنُوْنَ ۟ؔ
ಯಾರು ಹಗಲು, ರಾತ್ರಿ ರಹಸ್ಯವಾಗಿಯು, ಬಹಿರಂಗವಾಗಿಯು ತಮ್ಮ ಸಂಪತ್ತನ್ನು ಖರ್ಚು ಮಾಡುತ್ತಾರೋ ಅವರಿಗೆ ಅವರ ಪ್ರಭುವಿನ ಬಳಿ ಪ್ರತಿಫಲವಿದೆ. (ಪುನರುತ್ಥಾನದ ದಿನ) ಅವರು ಭಯಪಡಬೇಕಾಗಿಲ್ಲ ಮತ್ತು (ಇಹಲೋಕದ ಬಗ್ಗೆ) ದುಖ್ಖಿಃಸಬೇಕಾಗಿಯೂ ಇಲ್ಲ.
ئەرەپچە تەپسىرلەر:
اَلَّذِیْنَ یَاْكُلُوْنَ الرِّبٰوا لَا یَقُوْمُوْنَ اِلَّا كَمَا یَقُوْمُ الَّذِیْ یَتَخَبَّطُهُ الشَّیْطٰنُ مِنَ الْمَسِّ ؕ— ذٰلِكَ بِاَنَّهُمْ قَالُوْۤا اِنَّمَا الْبَیْعُ مِثْلُ الرِّبٰوا ۘ— وَاَحَلَّ اللّٰهُ الْبَیْعَ وَحَرَّمَ الرِّبٰوا ؕ— فَمَنْ جَآءَهٗ مَوْعِظَةٌ مِّنْ رَّبِّهٖ فَانْتَهٰی فَلَهٗ مَا سَلَفَ ؕ— وَاَمْرُهٗۤ اِلَی اللّٰهِ ؕ— وَمَنْ عَادَ فَاُولٰٓىِٕكَ اَصْحٰبُ النَّارِ ۚ— هُمْ فِیْهَا خٰلِدُوْنَ ۟
ಬಡ್ಡಿ ತಿನ್ನುವವರು ಶೈತಾನನು ಬಾಧಿಸಿ ಗರಬಡಿದು ಎದ್ದೇಳುವವನ ಹಾಗೆಯೇ (ಪುನರುತ್ಥಾನದ ದಿನ) ಎದ್ದೇಳುವರು. ಇದು (ಇದರ ಕಾರಣ ಅವರು) ವ್ಯಾಪಾರವು ಸಹ ಬಡ್ಡಿಯಂತೆಯೇ ಎಂದು ಹೇಳಿದುದರಿಂದಾಗಿದೆ. ವಸ್ತುತಃ ಅಲ್ಲಾಹನು ವ್ಯಾಪಾರವನ್ನು ಧರ್ಮ ಸಮ್ಮತಗೊಳಿಸಿದ್ದಾನೆ ಮತ್ತು ಬಡ್ಡಿಯನ್ನು ನಿಷಿದ್ಧಗೊಳಿಸಿದ್ದಾನೆ. ಆದ್ದರಿಂದ ಯಾರು ತನ್ನ ಬಳಿಗೆ ಬಂದಿರುವ ಅಲ್ಲಾಹನ ಉಪದೇಶವನ್ನು ಕೇಳಿ (ಬಡ್ಡಿಯನ್ನು) ಸ್ಥಗಿತಗೊಳಿಸಿದರೆ ಅವನು ಮುಂಚೆ ಪಡೆದುದು ಅವನಿಗಿದೆ. ಅವನ ವಿಷಯವು ಅಲ್ಲಾಹನ ಕಡೆಯಿರುತ್ತದೆ. ಮತ್ತು ಯಾರು (ಬಡ್ಡಿಯೆಡೆಗೆ) ಮರಳುತ್ತಾನೋ ಅವನು ನರಕವಾಸಿಯಾಗಿದ್ದಾನೆ. ಅಂತಹವರು ಅದರಲ್ಲಿ ಶಾಶ್ವತವಾಗಿರುವವರು.
ئەرەپچە تەپسىرلەر:
یَمْحَقُ اللّٰهُ الرِّبٰوا وَیُرْبِی الصَّدَقٰتِ ؕ— وَاللّٰهُ لَا یُحِبُّ كُلَّ كَفَّارٍ اَثِیْمٍ ۟
ಅಲ್ಲಾಹನು ಬಡ್ಡಿಯನ್ನು ಅಳಿಸುತ್ತಾನೆ ಮತ್ತು ದಾನ ಧರ್ಮವನ್ನು ಬೆಳೆಸುತ್ತಾನೆ ಮತ್ತು ಅಲ್ಲಾಹನು ಯಾವೊಬ್ಬ ಕೃತಘ್ನನನ್ನೂ, ಪಾಪಿಯನ್ನೂ ಮೆಚ್ಚುವುದಿಲ್ಲ.
ئەرەپچە تەپسىرلەر:
اِنَّ الَّذِیْنَ اٰمَنُوْا وَعَمِلُوا الصّٰلِحٰتِ وَاَقَامُوا الصَّلٰوةَ وَاٰتَوُا الزَّكٰوةَ لَهُمْ اَجْرُهُمْ عِنْدَ رَبِّهِمْ ۚ— وَلَا خَوْفٌ عَلَیْهِمْ وَلَا هُمْ یَحْزَنُوْنَ ۟
ನಿಸ್ಸಂದೇಹವಾಗಿಯು ಯಾರು ಸತ್ಯವಿಶ್ವಾಸ ಹೊಂದಿ (ಪ್ರವಾದಿಚರ್ಯೆಯ ಪ್ರಕಾರ) ಸತ್ಕರ್ಮಗಳನ್ನು ಮಾಡುತ್ತಾರೋ, ನಮಾಝ್ ಸಂಸ್ಥಾಪಿಸುತ್ತಾರೋ ಮತ್ತು ಝಕಾತ್ ನೀಡುತ್ತಾರೋ ಅವರ ಪ್ರತಿಫಲವು ಅವರ ಪ್ರಭುವಿನ ಬಳಿ ಸುರಕ್ಷಿತವಾಗಿದೆ. ಅವರಿಗೆ ಯಾವುದೇ ಯಾತನೆಯ ಭಯವಿರುವುದಿಲ್ಲ. ಮತ್ತು ಇಹಲೋಕದಲ್ಲಿ ಸಿಗದಿರುವುದರ ಬಗ್ಗೆ ದುಖಿಃಸಬೇಕಾಗಿಯೂ ಇಲ್ಲ.
ئەرەپچە تەپسىرلەر:
یٰۤاَیُّهَا الَّذِیْنَ اٰمَنُوا اتَّقُوا اللّٰهَ وَذَرُوْا مَا بَقِیَ مِنَ الرِّبٰۤوا اِنْ كُنْتُمْ مُّؤْمِنِیْنَ ۟
ಓ ಸತ್ಯವಿಶ್ವಸಿಗಳೇ, ನೀವು ಅಲ್ಲಾಹನನ್ನು ಭಯಪಡಿರಿ ಮತ್ತು ಬಾಕಿಯಿರುವ ಬಡ್ಡಿಯನ್ನು ಬಿಟ್ಟು ಬಿಡಿರಿ. ನೀವು ಸತ್ಯವಿಶ್ವಾಸಿಗಳಾಗಿದ್ದರೆ.
ئەرەپچە تەپسىرلەر:
فَاِنْ لَّمْ تَفْعَلُوْا فَاْذَنُوْا بِحَرْبٍ مِّنَ اللّٰهِ وَرَسُوْلِهٖ ۚ— وَاِنْ تُبْتُمْ فَلَكُمْ رُءُوْسُ اَمْوَالِكُمْ ۚ— لَا تَظْلِمُوْنَ وَلَا تُظْلَمُوْنَ ۟
ಮತ್ತು ನೀವು ಹಾಗೆ ಮಾಡುವುದಿಲ್ಲವೆಂದರೆ ಅಲ್ಲಾಹ್ ಮತ್ತು ಅವನ ಸಂದೇಶವಾಹಕರೊAದಿಗೆ ಸಮರಕ್ಕಾಗಿ ಸಿದ್ಧರಾಗಿರಿ. ಇನ್ನು ನೀವು ಪಶ್ಚಾತ್ತಾಪ ಪಟ್ಟು ಮರಳುವುದಾದರೆ ನಿಮ್ಮ ಮೂಲಧನವು ನಿಮ್ಮದೇ ಆಗಿದೆ. ನೀವು ಅನ್ಯಾಯವೆಸಗಬಾರದು ಮತ್ತು ನಿಮ್ಮ ಮೇಲೂ ಅನ್ಯಾಯವಾಗದಿರಲಿ.
ئەرەپچە تەپسىرلەر:
وَاِنْ كَانَ ذُوْ عُسْرَةٍ فَنَظِرَةٌ اِلٰی مَیْسَرَةٍ ؕ— وَاَنْ تَصَدَّقُوْا خَیْرٌ لَّكُمْ اِنْ كُنْتُمْ تَعْلَمُوْنَ ۟
ಇನ್ನು (ಸಾಲಗಾರರ ಪೈಕಿ) ಯಾರಾದರೂ ಇಕ್ಕಟ್ಟಿನಲ್ಲಿದ್ದರೆ ಅವನಿಗೆ ಅನುಕೂಲವಾಗುವವರೆಗೆ ಸಮಯಾವಕಾಶ ನೀಡಬೇಕಾಗಿದೆ (ಪೀಡಿಸಬಾರದು). ನೀವು ದಾನವಾಗಿ ಬಿಟ್ಟುಬಿಡುವುದು ನಿಮಗೆ ಹೆಚ್ಚು ಉತ್ತಮವಾಗಿದೆ. ನೀವು ಅರಿಯುವವರಾಗಿದ್ದರೆ.
ئەرەپچە تەپسىرلەر:
وَاتَّقُوْا یَوْمًا تُرْجَعُوْنَ فِیْهِ اِلَی اللّٰهِ ۫— ثُمَّ تُوَفّٰی كُلُّ نَفْسٍ مَّا كَسَبَتْ وَهُمْ لَا یُظْلَمُوْنَ ۟۠
ಮತ್ತು ನಿಮ್ಮನ್ನು ಅಲ್ಲಾಹನೆಡೆಗೆ ಮರಳಿಸಲಾಗುವ ಒಂದು ದಿನವನ್ನು ಭಯಪಟ್ಟುಕೊಳ್ಳಿರಿ. ತರುವಾಯ ಪ್ರತಿಯೊಬ್ಬನಿಗೂ ಅವನ ಕರ್ಮಗಳ ಪ್ರತಿಫಲವನ್ನು ಪರಿಪೂರ್ಣವಾಗಿ ನೀಡಲಾಗುವುದು ಮತ್ತು ಅವರಿಗೆ ಅನ್ಯಾಯವಾಗದು.
ئەرەپچە تەپسىرلەر:
یٰۤاَیُّهَا الَّذِیْنَ اٰمَنُوْۤا اِذَا تَدَایَنْتُمْ بِدَیْنٍ اِلٰۤی اَجَلٍ مُّسَمًّی فَاكْتُبُوْهُ ؕ— وَلْیَكْتُبْ بَّیْنَكُمْ كَاتِبٌ بِالْعَدْلِ ۪— وَلَا یَاْبَ كَاتِبٌ اَنْ یَّكْتُبَ كَمَا عَلَّمَهُ اللّٰهُ فَلْیَكْتُبْ ۚ— وَلْیُمْلِلِ الَّذِیْ عَلَیْهِ الْحَقُّ وَلْیَتَّقِ اللّٰهَ رَبَّهٗ وَلَا یَبْخَسْ مِنْهُ شَیْـًٔا ؕ— فَاِنْ كَانَ الَّذِیْ عَلَیْهِ الْحَقُّ سَفِیْهًا اَوْ ضَعِیْفًا اَوْ لَا یَسْتَطِیْعُ اَنْ یُّمِلَّ هُوَ فَلْیُمْلِلْ وَلِیُّهٗ بِالْعَدْلِ ؕ— وَاسْتَشْهِدُوْا شَهِیْدَیْنِ مِنْ رِّجَالِكُمْ ۚ— فَاِنْ لَّمْ یَكُوْنَا رَجُلَیْنِ فَرَجُلٌ وَّامْرَاَتٰنِ مِمَّنْ تَرْضَوْنَ مِنَ الشُّهَدَآءِ اَنْ تَضِلَّ اِحْدٰىهُمَا فَتُذَكِّرَ اِحْدٰىهُمَا الْاُخْرٰی ؕ— وَلَا یَاْبَ الشُّهَدَآءُ اِذَا مَا دُعُوْا ؕ— وَلَا تَسْـَٔمُوْۤا اَنْ تَكْتُبُوْهُ صَغِیْرًا اَوْ كَبِیْرًا اِلٰۤی اَجَلِهٖ ؕ— ذٰلِكُمْ اَقْسَطُ عِنْدَ اللّٰهِ وَاَقْوَمُ لِلشَّهَادَةِ وَاَدْنٰۤی اَلَّا تَرْتَابُوْۤا اِلَّاۤ اَنْ تَكُوْنَ تِجَارَةً حَاضِرَةً تُدِیْرُوْنَهَا بَیْنَكُمْ فَلَیْسَ عَلَیْكُمْ جُنَاحٌ اَلَّا تَكْتُبُوْهَا ؕ— وَاَشْهِدُوْۤا اِذَا تَبَایَعْتُمْ ۪— وَلَا یُضَآرَّ كَاتِبٌ وَّلَا شَهِیْدٌ ؕ۬— وَاِنْ تَفْعَلُوْا فَاِنَّهٗ فُسُوْقٌ بِكُمْ ؕ— وَاتَّقُوا اللّٰهَ ؕ— وَیُعَلِّمُكُمُ اللّٰهُ ؕ— وَاللّٰهُ بِكُلِّ شَیْءٍ عَلِیْمٌ ۟
ಓ ಸತ್ಯವಿಶ್ವಾಸಿಗಳೇ, ನೀವು ನಿಶ್ಚಿತಾವಧಿಗೆ ಪರಸ್ಪರ ಸಾಲದ ವ್ಯವಹಾರವನ್ನು ನಡೆಸುವುದಾದರೆ ಅದನ್ನು ನೀವು ಬರೆದಿಟ್ಟುಕೊಳ್ಳಿರಿ ಮತ್ತು ಒಬ್ಬ ಬರಹಗಾರನು ನಿಮ್ಮ ನಡುವಿನ ವ್ಯವಹಾರವನ್ನು ನ್ಯಾಯಪೂರ್ವಕವಾಗಿ ಬರೆದಿಡಲಿ. ಯಾವೊಬ್ಬ ಬರಹಗಾರನು ತನಗೆ ಅಲ್ಲಾಹನು ಕಲಿಸಿಕೊಟ್ಟಿರುವ ಪ್ರಕಾರ ಬರೆಯಲು ನಿರಾಕರಿಸದಿರಲಿ. ಆದುದರಿಂದ ಬರೆದಿಡಲಿ ಮತ್ತು ಸಾಲಗಾರನು ಹೇಳಿಕೊಟ್ಟು ಬರೆಯಿಸಲಿ. ಮತ್ತು ತನ್ನ ಪ್ರಭುವಾದ ಅಲ್ಲಾಹನನ್ನು ಭಯಪಡಲಿ ಮತ್ತು ಬಾಧ್ಯತೆಯಿಂದ ಏನನ್ನೂ ಕಡಿತಗೊಳಿಸದಿರಲಿ. ಇನ್ನು ಸಾಲಗಾರನು ಮುಗ್ಧನಾಗಿದ್ದರೆ ಅಥವಾ ದುರ್ಬಲನಾಗಿದ್ದರೆ ಅಥವಾ ಹೇಳಿಕೊಟ್ಟು ಬರೆಯಿಸಲು ಅಸಮರ್ಥನಾಗಿದ್ದರೆ, ಅವನ ಪರವಾಗಿ ಅವರ ಪೋಷಕರು ನ್ಯಾಯಪೂರ್ವಕವಾಗಿ ಬರೆಯಿಸಲಿ. ನಿಮ್ಮ ಪೈಕಿ ಇಬ್ಬರು ಪುರುಷರನ್ನು ನೀವು ಸಾಕ್ಷಿಗಳನ್ನಾಗಿಸಿರಿ. ಇನ್ನು ಇಬ್ಬರು ಪುರುಷರು ಇಲ್ಲದಿದ್ದರೆ ನೀವು ಇಷ್ಟಪಡುವ ಸಾಕ್ಷಿಗಳ ಪೈಕಿ ಒಬ್ಬ ಪುರುಷ ಮತ್ತು ಇಬ್ಬರು ಸ್ತಿçÃಯರು ಸಾಕು. ಅವರಲ್ಲಿ ಒಬ್ಬಳು ಪ್ರಮಾದವೆಸಗಿದರೆ ಇನ್ನೊಬ್ಬಳು ನೆನಪಿಸಲೆಂದಾಗಿದೆ. ಸಾಕ್ಷಿಗಳನ್ನು ಸಾಕ್ಷö್ಯ ನೀಡಲಿಕ್ಕಾಗಿ ಕರೆಯಲಾದರೆ ನಿರಾಕರಿಸಬಾರದು. ಅವಧಿ ನಿಶ್ಚಯಿಸಲಾದ ವ್ಯವಹಾರವನ್ನು ಅದು ಚಿಕ್ಕದಿರಲಿ ಅಥವಾ ದೊಡ್ಡದಿರಲಿ ಬರೆದಿಡಲು ನೀವು ಆಲಸ್ಯ ತೋರಿಸದಿರಿ. ಅಲ್ಲಾಹನ ಬಳಿ ಈ ಸಂಗತಿಯು ಹೆಚ್ಚು ನ್ಯಾಯಪೂರ್ಣವೂ, ಸಾಕ್ಷö್ಯವನ್ನು ಬಲಪಡಿಸುವಂತದ್ದೂ ಮತ್ತು ಸಂದೇಹಗಳಿAದ ಹೆಚ್ಚು ರಕ್ಷಿಸುವಂತದ್ದೂ ಆಗಿದೆ. ಆದರೆ ಪರಸ್ಪರ ನಡೆಸುವ ನಗದು ವ್ಯವಹಾರಗಳು ಇದರ ಹೊರತಾಗಿವೆ. ಅದನ್ನು ಬರೆಯದಿರುವುದರಿಂದ ನಿಮ್ಮ ಮೇಲೆ ಯಾವ ದೋಷವೂ ಇಲ್ಲ. ನೀವು ಪರಸ್ಪರ ಕ್ರಯ-ವಿಕ್ರಯ ನಡೆಸುವಾಗಲೂ ಸಾಕ್ಷಿಯನ್ನು ನಿಶ್ಚಯಿಸಿರಿ ಮತ್ತು ಬರಹಗಾರನನ್ನಾಗಲೀ, ಸಾಕ್ಷಿದಾರನನ್ನಾಗಲೀ ಪೀಡಿಸಬಾರದು ನೀವು ಹಾಗೆ ಮಾಡುವುದಾದರೆ ಅದು ನಿಮ್ಮ ಸ್ಪಷ್ಟ ಧಿಕ್ಕಾರವಾಗಿರುತ್ತದೆ. ನೀವು ಅಲ್ಲಾಹನನ್ನು ಭಯಪಡಿರಿ. ಅಲ್ಲಾಹು ನಿಮಗೆ ಕಲಿಸಿ ಕೊಡುತ್ತಿದ್ದಾನೆ ಮತ್ತು ಅಲ್ಲಾಹು ಸಕಲ ವಿಷಯಗಳನ್ನು ಚೆನ್ನಾಗಿ ಅರಿಯುವವನಾಗಿದ್ದಾನೆ.
ئەرەپچە تەپسىرلەر:
وَاِنْ كُنْتُمْ عَلٰی سَفَرٍ وَّلَمْ تَجِدُوْا كَاتِبًا فَرِهٰنٌ مَّقْبُوْضَةٌ ؕ— فَاِنْ اَمِنَ بَعْضُكُمْ بَعْضًا فَلْیُؤَدِّ الَّذِی اؤْتُمِنَ اَمَانَتَهٗ وَلْیَتَّقِ اللّٰهَ رَبَّهٗ ؕ— وَلَا تَكْتُمُوا الشَّهَادَةَ ؕ— وَمَنْ یَّكْتُمْهَا فَاِنَّهٗۤ اٰثِمٌ قَلْبُهٗ ؕ— وَاللّٰهُ بِمَا تَعْمَلُوْنَ عَلِیْمٌ ۟۠
ನೀವು ಪ್ರಯಾಣದಲ್ಲಿದ್ದು ಬರಹಗಾರನು ನಿಮಗೆ ಸಿಗದಿದ್ದರೆ, ಏನಾದರೂ ಒತ್ತೆಯಿಟ್ಟುಕೊಳ್ಳಿರಿ. ಇನ್ನು ನಿಮ್ಮ ಪೈಕಿ ಒಬ್ಬನು ಇನ್ನೊಬ್ಬನ ಮೇಲೆ ನಂಬಿಕೆಯಿಟ್ಟು ವ್ಯವಹಾರ ಮಾಡಿದರೆ ಬೇರೆ ವಿಚಾರ. ಆದರೆ ಸಾಲಗಾರನು ಸಾಲವನ್ನು ಸಕಾಲಕ್ಕೆ ಮರಳಿಸಬೇಕಾಗಿದೆ. ಮತ್ತು ಅವನು ತನ್ನ ಪ್ರಭುವಾದ ಅಲ್ಲಾಹನನ್ನು ಭಯಪಡಲಿ ಮತ್ತು ಸಾಕ್ಷö್ಯವನ್ನು ಬಚ್ಚಿಡದಿರಲಿ. ಯಾರು ಅದನ್ನು ಬಚ್ಚಿಡುತ್ತಾನೋ ಅವನ ಹೃದಯವು ಪಾಪಗ್ರಸ್ತವಾಗುತ್ತದೆ. ಮತ್ತು ಅವನು ಮಾಡುತ್ತಿರುವುದೆಲ್ಲವನ್ನೂ ಅಲ್ಲಾಹನು ಚೆನ್ನಾಗಿ ಬಲ್ಲನು.
ئەرەپچە تەپسىرلەر:
لِلّٰهِ مَا فِی السَّمٰوٰتِ وَمَا فِی الْاَرْضِ ؕ— وَاِنْ تُبْدُوْا مَا فِیْۤ اَنْفُسِكُمْ اَوْ تُخْفُوْهُ یُحَاسِبْكُمْ بِهِ اللّٰهُ ؕ— فَیَغْفِرُ لِمَنْ یَّشَآءُ وَیُعَذِّبُ مَنْ یَّشَآءُ ؕ— وَاللّٰهُ عَلٰی كُلِّ شَیْءٍ قَدِیْرٌ ۟
ಆಕಾಶಗಳಲ್ಲೂ, ಭೂಮಿಯಲ್ಲೂ ಇರುವ ಸಕಲ ವಸ್ತುಗಳು ಅಲ್ಲಾಹನ ಒಡೆತನದಲ್ಲಿವೆ. ನಿಮ್ಮ ಮನಸ್ಸಿನಲ್ಲಿರುವುದನ್ನು ನೀವು ಬಹಿರಂಗಗೊಳಿಸಿದರೂ ಅಥವಾ ಬಚ್ಚಿಟ್ಟರೂ ಅಲ್ಲಾಹನು ಅದರ ಬಗ್ಗೆ ನಿಮ್ಮ ವಿಚಾರಣೆ ನಡೆಸುವನು. ಅನಂತರ ತಾನಿಚ್ಛಿಸುವವರನ್ನು ಅವನು ಕ್ಷಮಿಸುವನು ಮತ್ತು ತಾನಿಚ್ಛಿಸುವವರನ್ನು ಶಿಕ್ಷಿಸುವನು. ಅಲ್ಲಾಹನು ಸಕಲ ವಸ್ತುಗಳ ಮೇಲೆ ಸಾಮರ್ಥ್ಯವುಳ್ಳವನಾಗಿದ್ದಾನೆ.
ئەرەپچە تەپسىرلەر:
اٰمَنَ الرَّسُوْلُ بِمَاۤ اُنْزِلَ اِلَیْهِ مِنْ رَّبِّهٖ وَالْمُؤْمِنُوْنَ ؕ— كُلٌّ اٰمَنَ بِاللّٰهِ وَمَلٰٓىِٕكَتِهٖ وَكُتُبِهٖ وَرُسُلِهٖ ۫— لَا نُفَرِّقُ بَیْنَ اَحَدٍ مِّنْ رُّسُلِهٖ ۫— وَقَالُوْا سَمِعْنَا وَاَطَعْنَا غُفْرَانَكَ رَبَّنَا وَاِلَیْكَ الْمَصِیْرُ ۟
ಸಂದೇಶವಾಹಕರು ಅಲ್ಲಾಹನ ಕಡೆಯಿಂದ ತಮ್ಮೆಡೆಗೆ ಅವತೀರ್ಣಗೊಂಡಿರುವುದರಲ್ಲಿ ವಿಶ್ವಾಸವಿಟ್ಟಿರುವರು; ಮತ್ತು ಸತ್ಯವಿಶ್ವಾಸಿಗಳು ಸಹ ಅಲ್ಲಾಹನಲ್ಲೂ, ಅವನ ದೂತರಲ್ಲೂ, ಅವನ ಗ್ರಂಥಗಳಲ್ಲೂ, ಅವನ ಸಂದೇಶವಾಹಕರಲ್ಲೂ ವಿಶ್ವಾಸವಿಟ್ಟಿರುವರು. ಅವನ ಸಂದೇಶವಾಹಕರಲ್ಲಿ ಯಾರ ನಡುವೆಯು ತಾರತಮ್ಯ ತೋರುವುದಿಲ್ಲ; ನಾವು ಆಲಿಸಿದೆವು ಮತ್ತು ಅನುಸರಿಸಿದೆವು, ನಮ್ಮ ಪ್ರಭೂ, ನಾವು ನಿನ್ನಿಂದ ಪಾಪವಿಮೋಚನೆಯನ್ನು ಬೇಡುತ್ತೇವೆ ಮತ್ತು ನಮಗೆ ನಿನ್ನೆಡೆಗೇ ಮರಳಲಿಕ್ಕಿರುವುದು ಎಂದು ಅವರು ಹೇಳುತ್ತಾರೆ.
ئەرەپچە تەپسىرلەر:
لَا یُكَلِّفُ اللّٰهُ نَفْسًا اِلَّا وُسْعَهَا ؕ— لَهَا مَا كَسَبَتْ وَعَلَیْهَا مَا اكْتَسَبَتْ ؕ— رَبَّنَا لَا تُؤَاخِذْنَاۤ اِنْ نَّسِیْنَاۤ اَوْ اَخْطَاْنَا ۚ— رَبَّنَا وَلَا تَحْمِلْ عَلَیْنَاۤ اِصْرًا كَمَا حَمَلْتَهٗ عَلَی الَّذِیْنَ مِنْ قَبْلِنَا ۚ— رَبَّنَا وَلَا تُحَمِّلْنَا مَا لَا طَاقَةَ لَنَا بِهٖ ۚ— وَاعْفُ عَنَّا ۥ— وَاغْفِرْ لَنَا ۥ— وَارْحَمْنَا ۥ— اَنْتَ مَوْلٰىنَا فَانْصُرْنَا عَلَی الْقَوْمِ الْكٰفِرِیْنَ ۟۠
ಅಲ್ಲಾಹನು ಯಾವ ವ್ಯಕ್ತಿಗೂ ಅವನ ಶಕ್ತಿಗೆ ಮೀರಿದ ಹೊಣೆಗಾರಿಕೆಯನ್ನು ಹೊರಿಸುವುದಿಲ್ಲ. ಸತ್ಕರ್ಮ ಮಾಡಿದವನ ಪ್ರತಿಫಲವು ಸ್ವತಃ ಅವನಿಗಿದೆ. ಕೆಡುಕನ್ನು ಮಾಡಿದವನ ದುಷ್ಫಲವು ಸ್ವತಃ ಅವನಿಗೇ ಇರುವುದು. ನಮ್ಮ ಪ್ರಭೂ, ನಾವು ಮರೆತಿದ್ದರೆ ಅಥವಾ ಪ್ರಮಾದವೆಸಗಿದ್ದರೆ ನಮ್ಮನ್ನು ಶಿಕ್ಷಿಸಬೇಡ. ನಮ್ಮ ಪ್ರಭೂ ನಮಗಿಂತ ಮುಂಚಿನವರ ಮೇಲೆ ನೀನು ಹೊರಿಸಿದಂತಹ ಭಾರವನ್ನು ನಮ್ಮ ಮೇಲೆ ಹೊರಿಸಬೇಡ. ನಮ್ಮ ಪ್ರಭು, ನಮಗೆ ಸಾಮರ್ಥ್ಯವಿಲ್ಲದಂತಹ ಭಾರವನ್ನು ನಮ್ಮ ಮೇಲೆ ಹೊರಿಸಬೇಡ ಮತ್ತು ನಮ್ಮನ್ನು ಮನ್ನಿಸು ನಮಗೆ ಕ್ಷಮೆ ನೀಡು, ಹಾಗೂ ನಮಗೆ ಕರುಣೆ ತೋರು. ನೀನೆ ನಮ್ಮ ಒಡೆಯನಾಗಿರುವೆ. ಆದ್ದರಿಂದ ಸತ್ಯನಿಷೇಧಿಗಳ ವಿರುದ್ದ ನೀನು ನಮಗೆ ವಿಜಯವನ್ನು ದಯಪಾಲಿಸು.
ئەرەپچە تەپسىرلەر:
 
مەنالار تەرجىمىسى سۈرە: بەقەرە
سۈرە مۇندەرىجىسى بەت نومۇرى
 
قۇرئان كەرىم مەنىلىرىنىڭ تەرجىمىسى - كاناداچە تەرجىمىسى- بەشىير مىيسۇرى - تەرجىمىلەر مۇندەرىجىسى

بۇ تەرجىمىنى شەيخ بەشىر مەيسۇرى تەرجىمە قىلغان. رۇۋاد تەرجىمە مەركىزىنىڭ رىياسەتچىلىكىدە تەرەققىي قىلدۇرۇلغان.

تاقاش