ಅವರು (ಸತ್ಯ ನಿಷÉÃಧಿಗಳು) ನಿಮ್ಮಲ್ಲಿ ಒಳಿತಿಗಿಂತ ಮೊದಲೇ ಕೇಡಿಗಾಗಿ ಆತುರಪಟ್ಟುಕೊಳ್ಳುತ್ತಿದ್ದಾರೆ. ನಿಜವಾಗಿಯೂ ಅವರಿಗಿಂತ ಮುಂಚೆ ಇಂತಹವರಿಗೆ ಪಾಠ ಕಲಿಸುವ ಶಿಕ್ಷೆಗಳು ಗತಿಸಿಹೋಗಿವೆ, ನಿಸ್ಸಂಶಯವಾಗಿಯೂ ನಿಮ್ಮ ಪ್ರಭು ಜನರು ಅತಿಕ್ರಮವೆಸಗಿದಾಗಲೂ ಕ್ಷಮೆಯನ್ನು ನೀಡುವವನಾಗಿದ್ದಾನೆ. ನಿಶ್ಚಯವಾಗಿಯೂ ನಿಮ್ಮ ಪ್ರಭು ಅತ್ಯುಗ್ರ ಯಾತನೆಯನ್ನು ಕೊಡುವವನಾಗಿದ್ದಾನೆ.