Check out the new design

আল-কোৰআনুল কাৰীমৰ অৰ্থানুবাদ - কানাড়া অনুবাদ- বশীৰ মিছুৰী * - অনুবাদসমূহৰ সূচীপত্ৰ


অৰ্থানুবাদ ছুৰা: আল-মায়িদাহ   আয়াত:

ಅಲ್ -ಮಾಇದ

یٰۤاَیُّهَا الَّذِیْنَ اٰمَنُوْۤا اَوْفُوْا بِالْعُقُوْدِ ؕ۬— اُحِلَّتْ لَكُمْ بَهِیْمَةُ الْاَنْعَامِ اِلَّا مَا یُتْلٰی عَلَیْكُمْ غَیْرَ مُحِلِّی الصَّیْدِ وَاَنْتُمْ حُرُمٌ ؕ— اِنَّ اللّٰهَ یَحْكُمُ مَا یُرِیْدُ ۟
ಓ ಸತ್ಯವಿಶ್ವಾಸಿಗಳೇ, ನೀವು ಕರಾರುಗಳನ್ನು ಈಡೇರಿಸಿರಿ. ಪಶುಗಳನ್ನು ನಿಮಗಾಗಿ ಧರ್ಮಸಮ್ಮತಗೊಳಿಸಲಾಗಿದೆ. ಆದರೆ ಮುಂದೆ ನಿಮಗೆ ಓದಿ ಹೇಳಲಾಗುವ ಪ್ರಾಣಿಗಳ ಹೊರತು. ಆದರೆ ನೀವು ಇಹ್ರಾಮ್‌ನ ಸ್ಥಿತಿಯಲ್ಲಿ ಬೇಟೆಯಾಡಲು ನಿಮಗೆ ಅನುಮತಿಯಿಲ್ಲ. ಖಂಡಿತವಾಗಿಯು ಅಲ್ಲಾಹನು ತಾನಿಚ್ಛಿಸುವುದನ್ನು ವಿಧಿಸುತ್ತಾನೆ.
আৰবী তাফছীৰসমূহ:
یٰۤاَیُّهَا الَّذِیْنَ اٰمَنُوْا لَا تُحِلُّوْا شَعَآىِٕرَ اللّٰهِ وَلَا الشَّهْرَ الْحَرَامَ وَلَا الْهَدْیَ وَلَا الْقَلَآىِٕدَ وَلَاۤ آٰمِّیْنَ الْبَیْتَ الْحَرَامَ یَبْتَغُوْنَ فَضْلًا مِّنْ رَّبِّهِمْ وَرِضْوَانًا ؕ— وَاِذَا حَلَلْتُمْ فَاصْطَادُوْا ؕ— وَلَا یَجْرِمَنَّكُمْ شَنَاٰنُ قَوْمٍ اَنْ صَدُّوْكُمْ عَنِ الْمَسْجِدِ الْحَرَامِ اَنْ تَعْتَدُوْا ۘ— وَتَعَاوَنُوْا عَلَی الْبِرِّ وَالتَّقْوٰی ۪— وَلَا تَعَاوَنُوْا عَلَی الْاِثْمِ وَالْعُدْوَانِ ۪— وَاتَّقُوا اللّٰهَ ؕ— اِنَّ اللّٰهَ شَدِیْدُ الْعِقَابِ ۟
ಓ ಸತ್ಯವಿಶ್ವಾಸಿಗಳೇ, ಅಲ್ಲಾಹನ ಧರ್ಮ ಲಾಂಛನಗಳನ್ನು ಅಪಮಾನಿಸÀದಿರಿ. ಪವಿತ್ರವಾದ ತಿಂಗಳನ್ನು ಹರಮ್‌ನಲ್ಲಿ ಬಲಿಕೊಡಲು ಕೊಂಡೊಯ್ಯಲಾಗುವ ಮೃಗಗಳನ್ನು, ಹಾಗೂ ಬಲಿ ಸೂಚಕವಾಗಿ ಕೊರಳಪಟ್ಟಿಯಿರುವ ಮೃಗಗಳನ್ನು ಮತ್ತು ತಮ್ಮ ಪ್ರಭುವಿನ ಅನುಗ್ರಹ ಹಾಗೂ ಸಂತೃಪ್ತಿಯನ್ನು ಅರಸುತ್ತಾ ಪವಿತ್ರ ಭವನದೆಡೆಗೆ (ಹಜ್ಜ್ಗಾಗಿ) ಹೋಗುವವರನ್ನು ಅಪಮಾನಿಸÀದಿರಿ. ಆದರೆ ಇಹ್ರಾಮನ್ನು ಬಿಚ್ಚಿದ ಬಳಿಕ ನೀವು ಬೇಟೆಯಾಡಬಹುದಾಗಿದೆ. ಒಂದು ಜನತೆಯ ನಿಮ್ಮೊಂದಿಗಿನ ವೈರತ್ವವು ಅವರು ನಿಮ್ಮನ್ನು ಮಸ್ಜಿದುಲ್ ಹರಾಮ್‌ನಿಂದ ತಡೆದರು. ಎಂಬ ವಿಚಾರವು ಅವರೊಡನೆ ಅನ್ಯಾಯ ಮಾಡಲು ನಿಮ್ಮನ್ನು ಪ್ರೇರೇಪಿಸದಿರಲಿ. ಪುಣ್ಯ ಮತ್ತು ಧರ್ಮ ನಿಷ್ಠೆಯ ವಿಚಾರದಲ್ಲಿ ನೀವು ಪರಸ್ಪರ ಸಹಾಯ ಮಾಡುತ್ತಲಿರಿ. ಪಾಪ ಮತ್ತು ಅನ್ಯಾಯಗಳ ವಿಚಾರದಲ್ಲಿ ನೀವು ಪರಸ್ಪರ ಸಹಾಯ ಮಾಡಬೇಡಿರಿ. ನೀವು ಅಲ್ಲಾಹನನ್ನು ಭಯಪಡಿರಿ. ಖಂಡಿತವಾಗಿಯು ಅಲ್ಲಾಹನು ಕಠಿಣವಾಗಿ ಶಿಕ್ಷಿಸುವವನಾಗಿದ್ದಾನೆ.
আৰবী তাফছীৰসমূহ:
حُرِّمَتْ عَلَیْكُمُ الْمَیْتَةُ وَالدَّمُ وَلَحْمُ الْخِنْزِیْرِ وَمَاۤ اُهِلَّ لِغَیْرِ اللّٰهِ بِهٖ وَالْمُنْخَنِقَةُ وَالْمَوْقُوْذَةُ وَالْمُتَرَدِّیَةُ وَالنَّطِیْحَةُ وَمَاۤ اَكَلَ السَّبُعُ اِلَّا مَا ذَكَّیْتُمْ ۫— وَمَا ذُبِحَ عَلَی النُّصُبِ وَاَنْ تَسْتَقْسِمُوْا بِالْاَزْلَامِ ؕ— ذٰلِكُمْ فِسْقٌ ؕ— اَلْیَوْمَ یَىِٕسَ الَّذِیْنَ كَفَرُوْا مِنْ دِیْنِكُمْ فَلَا تَخْشَوْهُمْ وَاخْشَوْنِ ؕ— اَلْیَوْمَ اَكْمَلْتُ لَكُمْ دِیْنَكُمْ وَاَتْمَمْتُ عَلَیْكُمْ نِعْمَتِیْ وَرَضِیْتُ لَكُمُ الْاِسْلَامَ دِیْنًا ؕ— فَمَنِ اضْطُرَّ فِیْ مَخْمَصَةٍ غَیْرَ مُتَجَانِفٍ لِّاِثْمٍ ۙ— فَاِنَّ اللّٰهَ غَفُوْرٌ رَّحِیْمٌ ۟
ಶವ, ರಕ್ತ, ಹಂದಿ ಮಾಂಸ, ಅಲ್ಲಾಹೇತರರ ಹೆಸರಲ್ಲಿ ಕೊಯ್ಯಲ್ಪಟ್ಟದ್ದು, ಕೊರಳು ಬಿಗಿದು ಸತ್ತದ್ದು, ಏಟು ಬಿದ್ದು ಸತ್ತದ್ದು, ಎತ್ತರದಿಂದ ಬಿದ್ದು ಸತ್ತದ್ದು, ಯಾವುದಾದರೂ ಪ್ರಾಣಿಯ ಕೊಂಬು ಇರಿಯಲ್ಪಟ್ಟು ಸತ್ತದ್ದು, ವನ್ಯಮೃಗಗಳು ಹರಿದು ತಿಂದದ್ದು ನಿಮ್ಮ ಮೇಲೆ ನಿಷಿದ್ಧಗೊಳಿಸಲಾಗಿದೆ. ಆದರೆ ನೀವು ಅದು ಸಾಯುವುದಕ್ಕೆ ಮುಂಚೆ ಕೊಯ್ದು ಬಿಟ್ಟಿದ್ದರೆ ಬೇರೆ ವಿಚಾರ. ಮತ್ತು ಬಲಿಪೀಠಗಳಲ್ಲಿ ಕೊಯ್ಯಲಾದದ್ದು ಮತ್ತು ಬಾಣಗಳನ್ನು ಬಳಸಿ ಅದೃಷ್ಟ ಪರೀಕ್ಷಿಸುವುದನ್ನು ಸಹ ನಿಮ್ಮ ಮೇಲೆ ನಿಷಿದ್ಧಗೊಳಿಸಲಾಗಿದೆ. ಇವೆಲ್ಲವೂ ಅತಿ ನಿಕೃಷ್ಟ ಪಾಪಗಳಾಗಿವೆ. ಇಂದು ಸತ್ಯನಿಷೇಧಿಗಳು ನಿಮ್ಮ ಧÀರ್ಮದಿಂದ ನಿರಾಶರಾಗಿಬಿಟ್ಟಿದ್ದಾರೆ. ನೀವು ಅವರನ್ನು ಭಯಪಡಬೇಡಿರಿ. ನೀವು ನನ್ನನ್ನು ಭಯಪಡಿರಿ. ಇಂದು ನಾನು ನಿಮಗಾಗಿ ನಿಮ್ಮ ಧರ್ಮವನ್ನು ಪರಿಪೂರ್ಣಗೊಳಿಸಿದ್ದೇನೆ. ಮತ್ತು ನನ್ನ ಅನುಗ್ರಹವನ್ನು ನಿಮಗೆ ಸಂಪೂರ್ಣಗೊಳಿಸಿದ್ದೇನೆ. ಮತ್ತು ಇಸ್ಲಾಮ್ ಅನ್ನು ನಿಮ್ಮ ಧರ್ಮವನ್ನಾಗಿ ನಾನು ಅಂಗೀಕರಿಸಿದ್ದೇನೆ. ಇನ್ನು ಯಾವೊಬ್ಬ ವ್ಯಕ್ತಿಯು ಮನಃ ಪೂರ್ವಕವಾಗಿ ಪಾಪದೆಡೆಗೆ ವಾಲದೆ ಕಠಿಣ ಹಸಿವಿನ ನಿಮಿತ್ತ ನಿರ್ಭಂಧಿತನಾಗಿ ಅದನ್ನು ತಿಂದರೆ ಬೇರೆ ವಿಚಾರ. ಖಂಡಿತವಾಗಿಯು ಅಲ್ಲಾಹನು ಅತ್ಯಧಿಕ ಕ್ಷಮಿಸುವವನೂ ಕರುಣೆ ತೋರುವವನೂ ಆಗಿದ್ದಾನೆ.
আৰবী তাফছীৰসমূহ:
یَسْـَٔلُوْنَكَ مَاذَاۤ اُحِلَّ لَهُمْ ؕ— قُلْ اُحِلَّ لَكُمُ الطَّیِّبٰتُ ۙ— وَمَا عَلَّمْتُمْ مِّنَ الْجَوَارِحِ مُكَلِّبِیْنَ تُعَلِّمُوْنَهُنَّ مِمَّا عَلَّمَكُمُ اللّٰهُ ؗ— فَكُلُوْا مِمَّاۤ اَمْسَكْنَ عَلَیْكُمْ وَاذْكُرُوا اسْمَ اللّٰهِ عَلَیْهِ ۪— وَاتَّقُوا اللّٰهَ ؕ— اِنَّ اللّٰهَ سَرِیْعُ الْحِسَابِ ۟
ತಮಗೆ ಏನೆಲ್ಲಾ ಧರ್ಮಸಮ್ಮತಗೊಳಿಸಲಾಗಿದೆಯೆಂದು ಅವರು ನಿಮ್ಮೊಂದಿಗೆ ಕೇಳುತ್ತಾರೆ. ಹೇಳಿರಿ: ಎಲ್ಲಾ ಶುದ್ಧ ವಸ್ತುಗಳನ್ನು ನಿಮಗೆ ಧರ್ಮಸಮ್ಮತಗೊಳಿಸಲಾಗಿದೆ. ಮತ್ತು ಅಲ್ಲಾಹನು ನಿಮಗೆ ಕಲಿಸಿದ ಜ್ಞಾನದ ಆಧಾರದಲ್ಲಿ ನೀವು ತರಬೇತಿ ಕೊಟ್ಟು ಪಳಗಿಸಿದ ಪ್ರಾಣಿಯು ನಿಮಗೋಸ್ಕರ ಭೇಟೆಯಾಡಿ ತಂದದ್ದನ್ನು ನೀವು ತಿನ್ನಿರಿ ಆದರೆ ಅದರ ಮೇಲೆ ಅಲ್ಲಾಹನ ನಾಮವನ್ನು ಉಚ್ಛರಿಸಿರಿ. ಮತ್ತು ನೀವು ಅಲ್ಲಾಹನನ್ನು ಭಯಪಡಿರಿ. ಖಂಡಿತವಾಗಿಯು ಅಲ್ಲಾಹನು ಅತಿಶೀಘ್ರವಾಗಿ ವಿಚಾರಣೆ ನಡೆಸುವವನಾಗಿದ್ದಾನೆ.
আৰবী তাফছীৰসমূহ:
اَلْیَوْمَ اُحِلَّ لَكُمُ الطَّیِّبٰتُ ؕ— وَطَعَامُ الَّذِیْنَ اُوْتُوا الْكِتٰبَ حِلٌّ لَّكُمْ ۪— وَطَعَامُكُمْ حِلٌّ لَّهُمْ ؗ— وَالْمُحْصَنٰتُ مِنَ الْمُؤْمِنٰتِ وَالْمُحْصَنٰتُ مِنَ الَّذِیْنَ اُوْتُوا الْكِتٰبَ مِنْ قَبْلِكُمْ اِذَاۤ اٰتَیْتُمُوْهُنَّ اُجُوْرَهُنَّ مُحْصِنِیْنَ غَیْرَ مُسٰفِحِیْنَ وَلَا مُتَّخِذِیْۤ اَخْدَانٍ ؕ— وَمَنْ یَّكْفُرْ بِالْاِیْمَانِ فَقَدْ حَبِطَ عَمَلُهٗ ؗ— وَهُوَ فِی الْاٰخِرَةِ مِنَ الْخٰسِرِیْنَ ۟۠
ಇಂದು ನಿಮಗೆ ಸಕಲ ಶುದ್ಧ ವಸ್ತುಗಳನ್ನೂ ಧರ್ಮಸಮ್ಮತಗೊಳಿಸಲಾಗಿದೆ ಮತ್ತು ಗ್ರಂಥ ನೀಡಲ್ಪಟ್ಟವರು ಕೊಯ್ದ ಮಾಂಸಾಹಾರವು ನಿಮಗೆ ಧರ್ಮಸಮ್ಮತಗೊಳಿಸಲಾಗಿದೆ ನೀವು ಕೊಯ್ದ ಮಾಂಸಹಾರವು ಅವರಿಗೂ ಧರ್ಮಸಮ್ಮತವಾಗಿದೆ. ಸತ್ಯವಿಶ್ವಾಸಿನಿಗಳ ಪೈಕಿ ಸುಶೀಲೆಯರಾದ ಸ್ತಿçÃಯರು ಮತ್ತು ನಿಮಗಿಂತ ಮುಂಚೆ ಗ್ರಂಥವನ್ನು ನೀಡಲ್ಪಟ್ಟವರ ಪೈಕಿ ಸುಶೀಲೆಯರಾದ ಸ್ತಿçÃಯರು ನೀವು ಬಹಿರಂಗ ವೈಭಿಚಾರವಾಗಲೀ, ರಹಸ್ಯವಾಗಿ ಅನೈತಿಕ ಸಂಬAಧವಾಗಲೀ ಇಟ್ಟುಕೊಳ್ಳದೆ ಅವರನ್ನು ವಿವಾಹವಾಗಿ ಅವರಿಗೆ ವಧುಧನವನ್ನು ನೀಡುವುದಾದರೆ ನಿಮಗೆ ಧರ್ಮಸಮ್ಮತವಾಗಿದ್ದಾರೆ. ಇನ್ನು ಯಾರು ಸತ್ಯವಿಶ್ವಾಸವನ್ನು ನಿಷೇಧಿಸುತ್ತಾನೋ ಅವನ ಕರ್ಮಗಳು ನಿಷ್ಫಲವಾಗಿವೆ. ಪರಲೋಕದಲ್ಲಿ ಅವನು ನಷ್ಟ ಹೊಂದಿದವರೊAದಿಗೆ ಸೇರುವನು.
আৰবী তাফছীৰসমূহ:
یٰۤاَیُّهَا الَّذِیْنَ اٰمَنُوْۤا اِذَا قُمْتُمْ اِلَی الصَّلٰوةِ فَاغْسِلُوْا وُجُوْهَكُمْ وَاَیْدِیَكُمْ اِلَی الْمَرَافِقِ وَامْسَحُوْا بِرُءُوْسِكُمْ وَاَرْجُلَكُمْ اِلَی الْكَعْبَیْنِ ؕ— وَاِنْ كُنْتُمْ جُنُبًا فَاطَّهَّرُوْا ؕ— وَاِنْ كُنْتُمْ مَّرْضٰۤی اَوْ عَلٰی سَفَرٍ اَوْ جَآءَ اَحَدٌ مِّنْكُمْ مِّنَ الْغَآىِٕطِ اَوْ لٰمَسْتُمُ النِّسَآءَ فَلَمْ تَجِدُوْا مَآءً فَتَیَمَّمُوْا صَعِیْدًا طَیِّبًا فَامْسَحُوْا بِوُجُوْهِكُمْ وَاَیْدِیْكُمْ مِّنْهُ ؕ— مَا یُرِیْدُ اللّٰهُ لِیَجْعَلَ عَلَیْكُمْ مِّنْ حَرَجٍ وَّلٰكِنْ یُّرِیْدُ لِیُطَهِّرَكُمْ وَلِیُتِمَّ نِعْمَتَهٗ عَلَیْكُمْ لَعَلَّكُمْ تَشْكُرُوْنَ ۟
ಓ ಸತ್ಯವಿಶ್ವಾಸಿಗಳೇ, ನೀವು ನಮಾಝ್‌ಗಾಗಿ ಸಿದ್ಧರಾದರೆ ನಿಮ್ಮ ಮುಖಗಳನ್ನು ಮತ್ತು ಮೊಣಕೈಗಳವರೆಗೆ ಕೈಗಳನ್ನು ತೊಳೆಯಿರಿ. ನಿಮ್ಮ ತಲೆಗಳನ್ನು (ಕೈಗಳನ್ನು ವದ್ದೆ ಮಾಡಿ) ಸವರಿರಿ ಮತ್ತು ಕಾಲುಗಳನ್ನು ಮಣಿಗಂಟುಗಳವರೆಗೆ ತೊಳೆಯಿರಿ. ನೀವು ಜನಾಬತ್‌ನ ಸ್ಥಿತಿಯಲ್ಲಿದ್ದರೆ ಸ್ನಾನ ಮಾಡಿರಿ. ಮತ್ತು ನೀವು ರೋಗಿಗಳೋ, ಪ್ರಯಾಣಿಕರೋ ಆಗಿದ್ದು, ನಿಮ್ಮಲ್ಲೊಬ್ಬನು ಮಲಮೂತ್ರ ವಿಸರ್ಜನೆ ಮಾಡಿ ಬಂದರೆ ಅಥವಾ ನೀವು ಸ್ತಿçÃಯರೊಂದಿಗೆ ಸಂಭೋಗ ಮಾಡಿದರೆ ಮತ್ತು ನಿಮಗೆ ನೀರು ದೊರಕದಿದ್ದರೆ ಶುದ್ಧವಾದ ಮಣ್ಣಿನಿಂದ ತಯಮ್ಮುಮ್ ಮಾಡಿರಿ. (ಅಂದರೆ ನಿಮ್ಮ ಹಸ್ತಗಳನ್ನು ಮಣ್ಣಿನ ಮೇಲೆ ಬಡಿದು) ಅದನ್ನು ನಿಮ್ಮ ಮುಖ ಮತ್ತು ಕೈಗಳ ಮೇಲೆ ಸವರಿರಿ. ನಿಮ್ಮ ಮೇಲೆ ಯಾವುದೇ ರೀತಿಯ ಸಂಕಷ್ಟವನ್ನುAಟು ಮಾಡಲು ಅಲ್ಲಾಹನು ಇಚ್ಛಿಸುವುದಿಲ್ಲ. ಆದರೆ ಅವನು ನಿಮ್ಮನ್ನು ಶುದ್ಧೀಕರಿಸಲು ಮತ್ತು ತನ್ನ ಅನುಗ್ರಹವನ್ನು ನಿಮಗೆ ದಯಪಾಲಿಸಲು ಇಚ್ಛಿಸುತ್ತಾನೆ. ಇದು ನೀವು ಕೃತಜ್ಞತೆ ಸಲ್ಲಿಸಲೆಂದಾಗಿದೆ.
আৰবী তাফছীৰসমূহ:
وَاذْكُرُوْا نِعْمَةَ اللّٰهِ عَلَیْكُمْ وَمِیْثَاقَهُ الَّذِیْ وَاثَقَكُمْ بِهٖۤ ۙ— اِذْ قُلْتُمْ سَمِعْنَا وَاَطَعْنَا ؗ— وَاتَّقُوا اللّٰهَ ؕ— اِنَّ اللّٰهَ عَلِیْمٌۢ بِذَاتِ الصُّدُوْرِ ۟
ಅಲ್ಲಾಹನು ನಿಮ್ಮ ಮೇಲೆ ದಯಪಾಲಿಸಿದ ಅನುಗ್ರಹವನ್ನು ಸ್ಮರಿಸಿರಿ. 'ನಾವು ಆಲಿಸಿದೆವು ಮತ್ತು ಅನುಸರಿಸಿದೆವು' ಎಂದು ನೀವು ಹೇಳಿದ ಸಂದರ್ಭದಲ್ಲಿ ಅಲ್ಲಾಹನು ನಿಮ್ಮೊಂದಿಗೆ ಪಡೆದ ದೃಢವಾದ ಕರಾರನ್ನು ಸ್ಮರಿಸಿರಿ ಮತ್ತು ಅಲ್ಲಾಹನನ್ನು ಭಯಪಡಿರಿ. ಖಂಡಿತವಾಗಿಯು ಅಲ್ಲಾಹನು ಹೃದಯಗಳ ರಹಸ್ಯಗಳನ್ನು ಅರಿಯುವವನಾಗಿದ್ದಾನೆ.
আৰবী তাফছীৰসমূহ:
یٰۤاَیُّهَا الَّذِیْنَ اٰمَنُوْا كُوْنُوْا قَوّٰمِیْنَ لِلّٰهِ شُهَدَآءَ بِالْقِسْطِ ؗ— وَلَا یَجْرِمَنَّكُمْ شَنَاٰنُ قَوْمٍ عَلٰۤی اَلَّا تَعْدِلُوْا ؕ— اِعْدِلُوْا ۫— هُوَ اَقْرَبُ لِلتَّقْوٰی ؗ— وَاتَّقُوا اللّٰهَ ؕ— اِنَّ اللّٰهَ خَبِیْرٌ بِمَا تَعْمَلُوْنَ ۟
ಓ ಸತ್ಯವಿಶ್ವಾಸಿಗಳೇ, ನೀವು ಅಲ್ಲಾಹನಿಗೋಸ್ಕರ ಸತ್ಯದಲ್ಲಿ ನೆಲೆನಿಲ್ಲಿರಿ. ನ್ಯಾಯದೊಂದಿಗೆ ಸಾಕ್ಷಿವಹಿಸುವವರಾಗಿರಿ. ಯಾವುದೇ ಸಮುದಾಯದೊಂದಿಗಿನ ವೈರತ್ವವು ನಿಮ್ಮನ್ನು ಅನ್ಯಾಯಕ್ಕೆ ಪ್ರೇರೇಪಿಸದಿರಲಿ. ನೀವು ನ್ಯಾಯವನ್ನು ಪಾಲಿಸಿರಿ. ಇದೇ ಭಯಭಕ್ತಿಗೆ ಅತೀ ಸಮೀಪವಾಗಿದೆ,. ಖಂಡಿತವಾಗಿಯು ಅಲ್ಲಾಹನು ನಿಮ್ಮ ಕರ್ಮಗಳ ಕುರಿತು ಅರಿವುಳ್ಳವನಾಗಿದ್ದಾನೆ.
আৰবী তাফছীৰসমূহ:
وَعَدَ اللّٰهُ الَّذِیْنَ اٰمَنُوْا وَعَمِلُوا الصّٰلِحٰتِ ۙ— لَهُمْ مَّغْفِرَةٌ وَّاَجْرٌ عَظِیْمٌ ۟
ಸತ್ಯವಿಶ್ವಾಸವಿಟ್ಟು ಸತ್ಕರ್ಮ ಮಾಡಿದವರಿಗೆ ಪಾಪವಿಮೋಚನೆ ಹಾಗೂ ಮಹಾ ಪ್ರತಿಫಲವಿದೆಯೆಂದು ಅಲ್ಲಾಹನು ವಾಗ್ದಾನ ಮಾಡಿದ್ದಾನೆ.
আৰবী তাফছীৰসমূহ:
وَالَّذِیْنَ كَفَرُوْا وَكَذَّبُوْا بِاٰیٰتِنَاۤ اُولٰٓىِٕكَ اَصْحٰبُ الْجَحِیْمِ ۟
ಯಾರು ಸತ್ಯವನ್ನು ನಿರಾಕರಿಸಿ ಮತ್ತು ನಮ್ಮ ನಿಯಮಗಳನ್ನು ಸುಳ್ಳಾಗಿಸುತ್ತಾರೋ ಅವರೇ ನರಕವಾಸಿಗಳಾಗಿದ್ದಾರೆ.
আৰবী তাফছীৰসমূহ:
یٰۤاَیُّهَا الَّذِیْنَ اٰمَنُوا اذْكُرُوْا نِعْمَتَ اللّٰهِ عَلَیْكُمْ اِذْ هَمَّ قَوْمٌ اَنْ یَّبْسُطُوْۤا اِلَیْكُمْ اَیْدِیَهُمْ فَكَفَّ اَیْدِیَهُمْ عَنْكُمْ ۚ— وَاتَّقُوا اللّٰهَ ؕ— وَعَلَی اللّٰهِ فَلْیَتَوَكَّلِ الْمُؤْمِنُوْنَ ۟۠
ಓ ಸತ್ಯವಿಶ್ವಾಸಿಗಳೇ, ಒಂದು ಜನತೆ ನಿಮ್ಮ ಮೇಲೆ ಕೈ ಮಾಡಲು ಮುಂದಾದಾಗ ಅವರ ಕೈಗಳು ನಿಮ್ಮ ಮೇಲೆ ಎರಗದಂತೆ ತಡೆಯುವ ಮೂಲಕ ಅಲ್ಲಾಹನು ನಿಮ್ಮ ಮೇಲೆ ಮಾಡಿದ ಅನುಗ್ರಹವನ್ನು ಸ್ಮರಿಸಿರಿ. ನೀವು ಅಲ್ಲಾಹನನ್ನು ಭಯಪಡುತ್ತಿರಿ. ಸತ್ಯವಿಶ್ವಾಸಿಗಳು ಅಲ್ಲಾಹನ ಮೇಲೆ ಭರವಸೆಯನ್ನಿಡಲಿ.
আৰবী তাফছীৰসমূহ:
وَلَقَدْ اَخَذَ اللّٰهُ مِیْثَاقَ بَنِیْۤ اِسْرَآءِیْلَ ۚ— وَبَعَثْنَا مِنْهُمُ اثْنَیْ عَشَرَ نَقِیْبًا ؕ— وَقَالَ اللّٰهُ اِنِّیْ مَعَكُمْ ؕ— لَىِٕنْ اَقَمْتُمُ الصَّلٰوةَ وَاٰتَیْتُمُ الزَّكٰوةَ وَاٰمَنْتُمْ بِرُسُلِیْ وَعَزَّرْتُمُوْهُمْ وَاَقْرَضْتُمُ اللّٰهَ قَرْضًا حَسَنًا لَّاُكَفِّرَنَّ عَنْكُمْ سَیِّاٰتِكُمْ وَلَاُدْخِلَنَّكُمْ جَنّٰتٍ تَجْرِیْ مِنْ تَحْتِهَا الْاَنْهٰرُ ۚ— فَمَنْ كَفَرَ بَعْدَ ذٰلِكَ مِنْكُمْ فَقَدْ ضَلَّ سَوَآءَ السَّبِیْلِ ۟
ಮತ್ತು ಅಲ್ಲಾಹನು ಇಸ್ರಾಯೀಲ್ ಸಂತತಿಗಳೊAದಿಗೆ ದೃಢ ಕರಾರು ಪಡೆದನು ಮತ್ತು ಅವರಿಂದಲೇ ಹನ್ನೆರಡು ಜನರನ್ನು ನಾಯಕರನ್ನಾಗಿ ನಿಯೋಗಿಸಿದನು ಮತ್ತು ಅಲ್ಲಾಹನು ಹೇಳಿದನು: ಖಂಡಿತವಾಗಿಯು ನಾನು ನಿಮ್ಮೊಂದಿಗಿದ್ದೇನೆ. ನೀವು ನಮಾಝನ್ನು ಸಂಸ್ಥಾಪಿಸುತ್ತಿದ್ದರೆ, ಝಕಾತನ್ನು ನೀಡುತ್ತಿದ್ದರೆ, ನನ್ನ ಸಂದೇಶವಾಹಕರಲ್ಲಿ ವಿಶ್ವಾಸವಿಡುತ್ತಿದ್ದರೆ, ಅವರಿಗೆ ಸಹಕಾರ ನೀಡುತ್ತಿದ್ದರೆ ಮತ್ತು ಅಲ್ಲಾಹನಿಗೆ ಉತ್ತಮವಾದ ಸಾಲವನ್ನು ನೀಡುತ್ತಿದ್ದರೆ ಖಂಡಿತವಾಗಿಯು ನಾನು ನಿಮ್ಮ ಪಾಪಗಳನ್ನು ಅಳಿಸುವೆನು ಮತ್ತು ತಳಭಾಗದಲ್ಲಿ ಕಾಲುವೆಗಳು ಹರಿಯುವ ಸ್ವರ್ಗೋದ್ಯಾನಗಳೆಡೆಗೆ ನಿಮ್ಮನ್ನು ಕೊಂಡೊಯ್ಯುವೆನು. ಇನ್ನು ಈ ಕರಾರಿನ ನಂತರವೂ ನಿಮ್ಮ ಪೈಕಿ ಯಾರು ಧರ್ಮಧಿಕ್ಕಾರಿಯಾಗುತ್ತಾನೋ ಅವನು ನೇರ ಮಾರ್ಗದಿಂದ ವ್ಯತಿಚಲಿಸಿದವನಾಗಿದ್ದಾನೆ.
আৰবী তাফছীৰসমূহ:
فَبِمَا نَقْضِهِمْ مِّیْثَاقَهُمْ لَعَنّٰهُمْ وَجَعَلْنَا قُلُوْبَهُمْ قٰسِیَةً ۚ— یُحَرِّفُوْنَ الْكَلِمَ عَنْ مَّوَاضِعِهٖ ۙ— وَنَسُوْا حَظًّا مِّمَّا ذُكِّرُوْا بِهٖ ۚ— وَلَا تَزَالُ تَطَّلِعُ عَلٰی خَآىِٕنَةٍ مِّنْهُمْ اِلَّا قَلِیْلًا مِّنْهُمْ فَاعْفُ عَنْهُمْ وَاصْفَحْ ؕ— اِنَّ اللّٰهَ یُحِبُّ الْمُحْسِنِیْنَ ۟
ತರುವಾಯ ಅವರ ಕರಾರು ಉಲ್ಲಂಘನೆಯ ನಿಮಿತ್ತ ನಾವು ಅವರ ಮೇಲೆ ನಮ್ಮ ಶಾಪವನ್ನು ಎರಗಿಸಿದೆವು ಮತ್ತು ಅವರ ಹೃದಯಗಳನ್ನು ಕಠೋರಗೊಳಿಸಿದೆವು. ಅವರು ಗ್ರಂಥ ವಾಕ್ಯಗಳನ್ನು ಅವುಗಳ ಸ್ಥಾನದಿಂದ ಬದಲಾಯಿಸುತ್ತಾರೆ. ಮತ್ತು ಅವರು ತಮಗೆ ಉಪದೇಶ ನೀಡಲಾದುದರಲ್ಲಿ ದೊಡ್ಡ ಅಂಶವನ್ನು ಮರೆತುಬಿಟ್ಟರು. ಅವರ ಪೈಕಿ ಕೆಲವರ ಹೊರತು ಒಂದಲ್ಲ ಒಂದು ವಂಚನೆಯ ಸುದ್ದಿಯು ನಿಮಗೆ ಲಭಿಸುತ್ತಲೇ ಇರುತ್ತದೆ. ನೀವು ಅವರನ್ನು ಕ್ಷಮಿಸಿರಿ ಮತ್ತು ಅವರನ್ನು ಮನ್ನಿಸಿರಿ. ಖಂಡಿತವಾಗಿಯು ಅಲ್ಲಾಹನು ಸದಾಚಾರವೆಸಗುವವರನ್ನು ಮೆಚ್ಚುತ್ತಾನೆ.
আৰবী তাফছীৰসমূহ:
وَمِنَ الَّذِیْنَ قَالُوْۤا اِنَّا نَصٰرٰۤی اَخَذْنَا مِیْثَاقَهُمْ فَنَسُوْا حَظًّا مِّمَّا ذُكِّرُوْا بِهٖ ۪— فَاَغْرَیْنَا بَیْنَهُمُ الْعَدَاوَةَ وَالْبَغْضَآءَ اِلٰی یَوْمِ الْقِیٰمَةِ ؕ— وَسَوْفَ یُنَبِّئُهُمُ اللّٰهُ بِمَا كَانُوْا یَصْنَعُوْنَ ۟
ಮತ್ತು ಇದೇ ಪ್ರಕಾರ ತಮ್ಮನ್ನು ಕ್ರೆöÊಸ್ತರು ಎಂದು ಹೇಳಿಕೊಂಡವರಿAದಲೂ ನಾವು ಕರಾರನ್ನು ಪಡೆದೆವು. ಅವರೂ ಸಹ ತಮಗೆ ಉಪದೇಶ ನೀಡಲಾದುದರ ಅತಿದೊಡ್ಡ ಅಂಶವನ್ನು ಮರೆತು ಬಿಟ್ಟರು. ಆಗ ನಾವು ಸಹ ಅವರ ನಡುವೆ ಪುನರುತ್ಥಾನದ ದಿನದವರೆಗಿರುವಂತಹ ವಿದ್ವೇಷವನ್ನೂ, ವೈರತ್ವವನ್ನೂ ಹಾಕಿಬಿಟ್ಟೆವು ಮತ್ತು ಅವರು ಏನೆಲ್ಲವನ್ನು ಮಾಡುತ್ತಿದ್ದರೋ ಅದರ ಕುರಿತು ಅಲ್ಲಾಹನು ಸದ್ಯವೇ ಅವರಿಗೆ ತಿಳಿಸಿಕೊಡಲಿದ್ದಾನೆ.
আৰবী তাফছীৰসমূহ:
یٰۤاَهْلَ الْكِتٰبِ قَدْ جَآءَكُمْ رَسُوْلُنَا یُبَیِّنُ لَكُمْ كَثِیْرًا مِّمَّا كُنْتُمْ تُخْفُوْنَ مِنَ الْكِتٰبِ وَیَعْفُوْا عَنْ كَثِیْرٍ ؕ۬— قَدْ جَآءَكُمْ مِّنَ اللّٰهِ نُوْرٌ وَّكِتٰبٌ مُّبِیْنٌ ۟ۙ
ಓ ಗ್ರಂಥದವರೇ, ಗ್ರಂಥದಿAದ ನೀವು ಮರೆಮಾಚುತ್ತಿದ್ದ ಅನೇಕ ಸಂಗತಿಗಳನ್ನು ನಿಮಗೆ ಬಹಿರಂಗಗೊಳಿಸುವ ಮತ್ತು ಹಲವು ವಿಚಾರಗಳನ್ನು ಕಡೆಗಣಿಸುವ ನಮ್ಮ ಸಂದೇಶವಾಹಕರು ನಿಮ್ಮ ಬಳಿಗೆ ಬಂದಿರುವರು. ನಿಶ್ಚಯವಾಗಿಯು ನಿಮ್ಮೆಡೆಗೆ ಅಲ್ಲಾಹನ ವತಿಯಿಂದ ಒಂದು ಪ್ರಕಾಶವೂ, ಸ್ಪಷ್ಟವಾದ ಒಂದು ಗ್ರಂಥವೂ ಬಂದಿರುತ್ತದೆ.
আৰবী তাফছীৰসমূহ:
یَّهْدِیْ بِهِ اللّٰهُ مَنِ اتَّبَعَ رِضْوَانَهٗ سُبُلَ السَّلٰمِ وَیُخْرِجُهُمْ مِّنَ الظُّلُمٰتِ اِلَی النُّوْرِ بِاِذْنِهٖ وَیَهْدِیْهِمْ اِلٰی صِرَاطٍ مُّسْتَقِیْمٍ ۟
ಅದರ ಮೂಲಕ ತನ್ನ ಪ್ರಭುವಿನ ಸಂಪ್ರೀತಿಯನ್ನು ಬಯಸಿದವರಿಗೆ ಅಲ್ಲಾಹನು ರಕ್ಷಾ ಮಾರ್ಗಗಳಿಗೆ ಮುನ್ನಡೆಸುವನು. ಮತ್ತು ಅವನು ಅವರನ್ನು ತನ್ನ ಕೃಪೆಯಿಂದ ಅಂಧಕಾರಗಳಿAದ ಪ್ರಕಾಶದೆಡೆಗೆ ಕರೆತರುವನು ಮತ್ತು ಅವರನ್ನು ನೇರವಾದ ಮಾರ್ಗದೆಡೆಗೆ ಮಾರ್ಗದರ್ಶನ ಮಾಡುವನು.
আৰবী তাফছীৰসমূহ:
لَقَدْ كَفَرَ الَّذِیْنَ قَالُوْۤا اِنَّ اللّٰهَ هُوَ الْمَسِیْحُ ابْنُ مَرْیَمَ ؕ— قُلْ فَمَنْ یَّمْلِكُ مِنَ اللّٰهِ شَیْـًٔا اِنْ اَرَادَ اَنْ یُّهْلِكَ الْمَسِیْحَ ابْنَ مَرْیَمَ وَاُمَّهٗ وَمَنْ فِی الْاَرْضِ جَمِیْعًا ؕ— وَلِلّٰهِ مُلْكُ السَّمٰوٰتِ وَالْاَرْضِ وَمَا بَیْنَهُمَا ؕ— یَخْلُقُ مَا یَشَآءُ ؕ— وَاللّٰهُ عَلٰی كُلِّ شَیْءٍ قَدِیْرٌ ۟
ಅಲ್ಲಾಹನೇ ಮರ್ಯಮರ ಪುತ್ರ ಮಸೀಹನಾಗಿದ್ದಾನೆ ಎಂದು ಹೇಳಿದವರು ಖಂಡಿತವಾಗಿಯು ಸತ್ಯನಿಷೇಧಿಗಳಾಗಿರುವರು. ಹೇಳಿರಿ: ಅಲ್ಲಾಹನು ಮರ್ಯಮರ ಪುತ್ರ ಮಸೀಹರನ್ನೂ, ಅವರ ತಾಯಿಯನ್ನೂ, ಭೂಮಿಯಲ್ಲಿರುವ ಸರ್ವರನ್ನೂ ನಾಶಗೊಳಿಸಲು (ಮರಣ ಕೊಡಲು) ಬಯಸಿದರೆ ಅಲ್ಲಾಹನ ಮೇಲೆ ನಿಯಂತ್ರಣ ಹೊಂದಿದವರು ಯಾರಿದ್ದಾರೆ? ಆಕಾಶಗಳಲ್ಲಿ, ಭೂಮಿಯಲ್ಲಿ ಮತ್ತು ಅವೆರಡರ ಮಧ್ಯೆಯಿರುವ ಎಲ್ಲದರ ಅಧಿಪತ್ಯವು ಅಲ್ಲಾಹನದ್ದಾಗಿದೆ. ಅವನು ತಾನಿಚ್ಛಿಸಿದ್ದನ್ನು ಸೃಷ್ಟಿಸುತ್ತಾನೆ ಮತ್ತು ಅಲ್ಲಾಹನು ಸರ್ವ ಕಾರ್ಯಗಳ ಮೇಲೂ ಸಾಮರ್ಥ್ಯವುಳ್ಳವನಾಗಿದ್ದಾನೆ.
আৰবী তাফছীৰসমূহ:
وَقَالَتِ الْیَهُوْدُ وَالنَّصٰرٰی نَحْنُ اَبْنٰٓؤُا اللّٰهِ وَاَحِبَّآؤُهٗ ؕ— قُلْ فَلِمَ یُعَذِّبُكُمْ بِذُنُوْبِكُمْ ؕ— بَلْ اَنْتُمْ بَشَرٌ مِّمَّنْ خَلَقَ ؕ— یَغْفِرُ لِمَنْ یَّشَآءُ وَیُعَذِّبُ مَنْ یَّشَآءُ ؕ— وَلِلّٰهِ مُلْكُ السَّمٰوٰتِ وَالْاَرْضِ وَمَا بَیْنَهُمَا ؗ— وَاِلَیْهِ الْمَصِیْرُ ۟
ಯಹೂದರು ಮತ್ತು ಕ್ರೆöÊಸ್ತರು ಹೇಳುತ್ತಾರೆ: ನಾವು ಅಲ್ಲಾಹನ ಮಕ್ಕಳು ಮತ್ತು ಅವನ ಪ್ರೀತಿ ಪಾತ್ರರು. ಓ ಪೈಗಂಬರರೇ ಹೇಳಿರಿ: ಮತ್ತೇಕೆ ಅಲ್ಲಾಹನು ನಿಮ್ಮನ್ನು ನಿಮ್ಮ ಪಾಪಗಳನಿಮಿತ್ತ ಶಿಕ್ಷಿಸುತ್ತಾನೆ? ವಾಸ್ತವದಲ್ಲಿ ನೀವು ಅವನ ಸೃಷ್ಟಿಗಳಲ್ಲಿ ಸೇರಿದ ಮನುಷ್ಯರು ಮಾತ್ರವಾಗಿದ್ದೀರಿ. ಅವನು ತಾನಿಚ್ಛಿಸಿದವರಿಗೆ ಕ್ಷಮಿಸುತ್ತಾನೆ ಮತ್ತು ತಾನಿಚ್ಛಿಸಿದವರನ್ನು ಶಿಕ್ಷಿಸುತ್ತಾನೆ. ಆಕಾಶಗಳ, ಭೂಮಿಯ ಮತ್ತು ಅವೆರಡರ ಮಧ್ಯೆಯಿರುವ ಎಲ್ಲದರ ಅಧಿಪತ್ಯವು ಅಲ್ಲಾಹನದ್ದಾಗಿದೆ ಮತ್ತು ಮರಳುವಿಕೆಯು ಅವನ ಬಳಿಗೇ ಆಗಿರುತ್ತದೆ.
আৰবী তাফছীৰসমূহ:
یٰۤاَهْلَ الْكِتٰبِ قَدْ جَآءَكُمْ رَسُوْلُنَا یُبَیِّنُ لَكُمْ عَلٰی فَتْرَةٍ مِّنَ الرُّسُلِ اَنْ تَقُوْلُوْا مَا جَآءَنَا مِنْ بَشِیْرٍ وَّلَا نَذِیْرٍ ؗ— فَقَدْ جَآءَكُمْ بَشِیْرٌ وَّنَذِیْرٌ ؕ— وَاللّٰهُ عَلٰی كُلِّ شَیْءٍ قَدِیْرٌ ۟۠
ಓ ಗ್ರಂಥದವರೇ, ನಿಶ್ಚಯವಾಗಿಯು ಸಂದೇಶವಾಹಕರ ಆಗಮನವು ಸ್ಥಗಿತಗೊಂಡಿದ್ದ ಒಂದು ಕಾಲದ ಬಳಿಕ ನಮ್ಮ ಸಂದೇಶವಾಹಕರು ನಿಮ್ಮ ಬಳಿಗೆ ಬಂದಿರುವರು. ಅವರು ನಿಮಗಾಗಿ (ನಮ್ಮ ನಿಯಮಗಳನ್ನು) ಸ್ಪಷ್ಟವಾಗಿ ವಿವರಿಸಿಕೊಡುತ್ತಾರೆ. ಇದೇಕೆಂದರೆ ನೀವು ನಮ್ಮ ಬಳಿಗೆ ಒಬ್ಬ ಶುಭವಾರ್ತೆ ನೀಡುವವನಾಗಲೀ, ಮುನ್ನೆಚ್ಚರಿಕೆ ನೀಡುವವನಾಗಲೀ ಬಂದಿರಲಿಲ್ಲ ಎಂದು ಹೇಳಬಾರದೆಂದಾಗಿದೆ. ಇನ್ನು ಖಂಡಿತವಾಗಿಯು ಶುಭವಾರ್ತೆಯನ್ನು ತಿಳಿಸುವ ಮತ್ತು ಮುನ್ನೆಚ್ಚರಿಕೆ ನೀಡುವ ಪೈಗಂಬರರು ನಿಮ್ಮ ಬಳಿಗೆ ಬಂದಿರುವರು ಮತ್ತು ಅಲ್ಲಾಹನು ಸಕಲ ಸಂಗತಿಗಳ ಮೇಲೂ ಸಾಮರ್ಥ್ಯವುಳ್ಳವನಾಗಿದ್ದಾನೆ.
আৰবী তাফছীৰসমূহ:
وَاِذْ قَالَ مُوْسٰی لِقَوْمِهٖ یٰقَوْمِ اذْكُرُوْا نِعْمَةَ اللّٰهِ عَلَیْكُمْ اِذْ جَعَلَ فِیْكُمْ اَنْۢبِیَآءَ وَجَعَلَكُمْ مُّلُوْكًا ۗ— وَّاٰتٰىكُمْ مَّا لَمْ یُؤْتِ اَحَدًا مِّنَ الْعٰلَمِیْنَ ۟
ಮೂಸಾ ತನ್ನ ಜನತೆಯೊಂದಿಗೆ ಹೇಳಿದ ಸಂದರ್ಭವನ್ನು ಸ್ಮರಿಸಿರಿ: ಓ ನನ್ನ ಜನರೇ, ನಿಮ್ಮಿಂದಲೇ ಪೈಗಂಬರರÀನ್ನು ನಿಯೋಗಿಸಿ, ನಿಮ್ಮನ್ನು ಅರಸರನ್ನಾಗಿ ಮಾಡಿ ಮತ್ತು ಇಡೀ ಜಗತ್ತಿನ ಜನರ ಪೈಕಿ ಯಾರಿಗೂ ನೀಡದಂತಹದ್ದನ್ನು ನಿಮಗೆ ನೀಡಿ ಅಲ್ಲಾಹನು ನಿಮ್ಮ ಮೇಲೆ ಮಾಡಿರುವ ಉಪಕಾರವನ್ನು ಸ್ಮರಿಸಿರಿ.
আৰবী তাফছীৰসমূহ:
یٰقَوْمِ ادْخُلُوا الْاَرْضَ الْمُقَدَّسَةَ الَّتِیْ كَتَبَ اللّٰهُ لَكُمْ وَلَا تَرْتَدُّوْا عَلٰۤی اَدْبَارِكُمْ فَتَنْقَلِبُوْا خٰسِرِیْنَ ۟
ಓ ನನ್ನ ಜನರೇ, ಅಲ್ಲಾಹನು ನಿಮಗಾಗಿ ಬರೆದಿರುವ ಪವಿತ್ರ ಭೂಮಿಯನ್ನು (ಫೆಲಸ್ತೀನ್) ನೀವು ಪ್ರವೇಶಿಸಿರಿ. ಮತ್ತು ಬೆನ್ನು ತಿರುಗಿಸಿ ಹೋಗಬೇಡಿರಿ. ಅನ್ಯಥಾ ನೀವು ನಷ್ಟ ಹೊಂದಿದವರಾಗಿ ಮರಳುವಿರಿ.
আৰবী তাফছীৰসমূহ:
قَالُوْا یٰمُوْسٰۤی اِنَّ فِیْهَا قَوْمًا جَبَّارِیْنَ ۖۗ— وَاِنَّا لَنْ نَّدْخُلَهَا حَتّٰی یَخْرُجُوْا مِنْهَا ۚ— فَاِنْ یَّخْرُجُوْا مِنْهَا فَاِنَّا دٰخِلُوْنَ ۟
ಅವರು ಉತ್ತರಿಸಿದರು: ಓ ಮೂಸಾ, ಅಲ್ಲಿ ಪರಾಕ್ರಮಿಗಳಾದ ಜನಾಂಗವಿದೆ. ಅವರು ಅಲ್ಲಿಂದ ಹೊರಹೋಗುವವರೆಗೆ ನಾವು ಅಲ್ಲಿಗೆ ಹೋಗಲಾರೆವು. ಆದರೆ ಅವರು ಅಲ್ಲಿಂದ ನಿರ್ಗಮಿಸಿದ ಬಳಿಕ ಖಂಡಿತ ನಾವು ಪ್ರವೇಶಿಸುವೆವು.
আৰবী তাফছীৰসমূহ:
قَالَ رَجُلٰنِ مِنَ الَّذِیْنَ یَخَافُوْنَ اَنْعَمَ اللّٰهُ عَلَیْهِمَا ادْخُلُوْا عَلَیْهِمُ الْبَابَ ۚ— فَاِذَا دَخَلْتُمُوْهُ فَاِنَّكُمْ غٰلِبُوْنَ ۚ۬— وَعَلَی اللّٰهِ فَتَوَكَّلُوْۤا اِنْ كُنْتُمْ مُّؤْمِنِیْنَ ۟
ದೇವಭಯವಿರುವವರ ಪೈಕಿ ಅಲ್ಲಾಹನು ಅನುಗ್ರಹಿಸಿದ ಇಬ್ಬರು ಹೇಳಿದರು: ನೀವು ಅವರ ಬಳಿಗೆ ಹೆಬ್ಬಾಗಿಲಿನಿಂದ ದಾಳಿ ಮಾಡುತ್ತಾ ಹೊಕ್ಕಿಬಿಡಿ, ನೀವು ಹೆಬ್ಬಾಗಿಲನ್ನು ತಲುಪುತ್ತಿರುವಂತೆಯೇ ಖಂಡಿತ ಗೆಲುವು ಸಾಧಿಸುವಿರಿ. ಮತ್ತು ನೀವು ವಿಶ್ವಾಸಿಗಳಾಗಿದ್ದರೆ ಅಲ್ಲಾಹನ ಮೇಲೆಯೇ ಭರವಸೆಯನ್ನಿಡಿರಿ.
আৰবী তাফছীৰসমূহ:
قَالُوْا یٰمُوْسٰۤی اِنَّا لَنْ نَّدْخُلَهَاۤ اَبَدًا مَّا دَامُوْا فِیْهَا فَاذْهَبْ اَنْتَ وَرَبُّكَ فَقَاتِلَاۤ اِنَّا هٰهُنَا قٰعِدُوْنَ ۟
ಆಗ ಅವರು ಹೇಳಿದರು: ಓ ಮೂಸಾ, ಅವರು ಅಲ್ಲಿರುವವರೆಗೆ ನಾವು ಎಂದೂ ಅದನ್ನು ಪ್ರವೇಶಿಸುವುದಿಲ್ಲ. ಆದ್ದರಿಂದ ನೀವು ಮತ್ತು ನಿಮ್ಮ ಪ್ರಭು ಹೋಗಿ ಯುದ್ಧ ಮಾಡಿರಿ. ನಾವು ಇಲ್ಲೆ ಕುಳಿತುಕೊಂಡಿರುತ್ತೇವೆ.
আৰবী তাফছীৰসমূহ:
قَالَ رَبِّ اِنِّیْ لَاۤ اَمْلِكُ اِلَّا نَفْسِیْ وَاَخِیْ فَافْرُقْ بَیْنَنَا وَبَیْنَ الْقَوْمِ الْفٰسِقِیْنَ ۟
ಆಗ ಅವರು (ಮೂಸಾ) ಪ್ರಾರ್ಥಿಸಿದರು: ಓ ನನ್ನ ಪ್ರಭು, ನನ್ನ ಮತ್ತು ನನ್ನ ಸಹೋದರನ (ಹಾರೂನ್) ಹೊರತು ಇನ್ನಾರ ಮೇಲೂ ನನಗೆ ನಿಯಂತ್ರಣವಿಲ್ಲ. ಆದ್ದರಿಂದ ನಮ್ಮನ್ನು ಮತ್ತು ಈ ಧಿಕ್ಕಾರಿಗಳಾದ ಜನರನ್ನು ಪರಸ್ಪರ ಬೇರ್ಪಡಿಸು.
আৰবী তাফছীৰসমূহ:
قَالَ فَاِنَّهَا مُحَرَّمَةٌ عَلَیْهِمْ اَرْبَعِیْنَ سَنَةً ۚ— یَتِیْهُوْنَ فِی الْاَرْضِ ؕ— فَلَا تَاْسَ عَلَی الْقَوْمِ الْفٰسِقِیْنَ ۟۠
ಅಲ್ಲಾಹನು ಹೇಳಿದನು: ಹಾಗಾದರೆ ಆ ಭೂಮಿ ನಲ್ವತ್ತು ವರ್ಷಗಳ ಕಾಲ ಅವರಿಗೆ ನಿಷೇಧಿಸಲ್ಪಟ್ಟಿದೆ. ಅವರು ಭೂಮಿಯಲ್ಲಿ ಅತ್ತಿಂದಿತ್ತ ಅಲೆದಾಡುತ್ತಿರುವರು. ಆದ್ದರಿಂದ ಆ ಧಿಕ್ಕಾರಿಗಳಾದ ಜನರ ಕುರಿತು ನೀವು ದುಃಖಿಸಬೇಡಿರಿ.
আৰবী তাফছীৰসমূহ:
وَاتْلُ عَلَیْهِمْ نَبَاَ ابْنَیْ اٰدَمَ بِالْحَقِّ ۘ— اِذْ قَرَّبَا قُرْبَانًا فَتُقُبِّلَ مِنْ اَحَدِهِمَا وَلَمْ یُتَقَبَّلْ مِنَ الْاٰخَرِ ؕ— قَالَ لَاَقْتُلَنَّكَ ؕ— قَالَ اِنَّمَا یَتَقَبَّلُ اللّٰهُ مِنَ الْمُتَّقِیْنَ ۟
(ಓ ಪೈಗಂಬರರೇ) ನೀವು ಅವರಿಗೆ ಆದಮನ ಇಬ್ಬರು ಮಕ್ಕಳ (ಹಾಬಿಲ್, ಖಾಬಿಲ್) ವೃತ್ತಾಂತವನ್ನು ಸತ್ಯದೊಂದಿಗೆ ಓದಿ ತಿಳಿಸಿರಿ. ಅವರಿಬ್ಬರೂ ಒಂದೊAದು ಹರಕೆಯನ್ನು ಸಮರ್ಪಿಸಿದ ಸಂದರ್ಭ. ಒಬ್ಬನಿಂದ ಹರಕೆಯು ಸ್ವೀಕರಿಸಲ್ಪಟ್ಟಿತು, ಇನ್ನೊಬ್ಬನಿಂದ ಸ್ವೀಕರಿಸಲ್ಪಡಲಿಲ್ಲ. ಆಗ ಅವನು (ಖಾಬಿಲ್) ಹೇಳಿದನು: ನಾನು ನಿನ್ನನ್ನು ಕೊಂದು ಬಿಡುವೆನು. ಇನ್ನೊಬ್ಬನು (ಹಾಬಿಲ್) ಹೇಳಿದನು: ಭಯಭಕ್ತಿಯುಳ್ಳವರಿಂದ ಮಾತ್ರವೇ ಅಲ್ಲಾಹನು ಸ್ವೀಕರಿಸುವನು.
আৰবী তাফছীৰসমূহ:
لَىِٕنْۢ بَسَطْتَّ اِلَیَّ یَدَكَ لِتَقْتُلَنِیْ مَاۤ اَنَا بِبَاسِطٍ یَّدِیَ اِلَیْكَ لِاَقْتُلَكَ ۚ— اِنِّیْۤ اَخَافُ اللّٰهَ رَبَّ الْعٰلَمِیْنَ ۟
(ಹಾಬಿಲ್ ಹೇಳುವನು) ನನ್ನನ್ನು ಕೊಲ್ಲುವುದಕ್ಕಾಗಿ ನೀನು ನನ್ನೆಡಗೆ ಕೈಚಾಚಿದರೂ ನಿನ್ನನ್ನು ಕೊಲ್ಲುವುದಕ್ಕಾಗಿ ನಾನು ನಿನ್ನೆಡೆಗೆ ಕೈಚಾಚಲಾರೆನು ನಿಶ್ಚಯವಾಗಿಯೂ ನಾನು ಸರ್ವ ಲೋಕಗಳ ಪ್ರಭುವಾದ ಅಲ್ಲಾಹುನನ್ನು ಭಯಪಡುತ್ತೇನೆ.
আৰবী তাফছীৰসমূহ:
اِنِّیْۤ اُرِیْدُ اَنْ تَبُوَْاَ بِاِثْمِیْ وَاِثْمِكَ فَتَكُوْنَ مِنْ اَصْحٰبِ النَّارِ ۚ— وَذٰلِكَ جَزٰٓؤُا الظّٰلِمِیْنَ ۟ۚ
ನನ್ನ ಪಾಪವನ್ನು ನಿನ್ನ ಪಾಪವನ್ನು ನೀನೇ ಹೊಣೆಗಾರನಾಗಿ ಹೊತ್ತುಕೋ, ನೀನು ನರಕವಾಸಿಗಳಲ್ಲಿ ಸೇರಿಬಿಡು ಎಂದು ನಾನು ಬಯಸುತ್ತೇನೆ. ಅಕ್ರಮಿಗಳಿಗಿರುವ ಪ್ರತಿಫಲ ಅದುವೇ ಆಗಿದೆ.
আৰবী তাফছীৰসমূহ:
فَطَوَّعَتْ لَهٗ نَفْسُهٗ قَتْلَ اَخِیْهِ فَقَتَلَهٗ فَاَصْبَحَ مِنَ الْخٰسِرِیْنَ ۟
ಕೊನೆಗೆ (ಖಾಬಿಲನಿಗೆ) ತನ್ನ ಸಹೋದರನನ್ನು (ಹಾಬೀಲನನ್ನು) ಕೊಲ್ಲಲು ಆತನ ಮನಸ್ಸು ಪ್ರೇರೇಪಿಸಿತು ಮತ್ತು ಅವನು ಅವನನ್ನು ಕೊಂದು ನಷ್ಟ ಹೊಂದಿದವರಲ್ಲಿ ಸೇರಿದವನಾದನು.
আৰবী তাফছীৰসমূহ:
فَبَعَثَ اللّٰهُ غُرَابًا یَّبْحَثُ فِی الْاَرْضِ لِیُرِیَهٗ كَیْفَ یُوَارِیْ سَوْءَةَ اَخِیْهِ ؕ— قَالَ یٰوَیْلَتٰۤی اَعَجَزْتُ اَنْ اَكُوْنَ مِثْلَ هٰذَا الْغُرَابِ فَاُوَارِیَ سَوْءَةَ اَخِیْ ۚ— فَاَصْبَحَ مِنَ النّٰدِمِیْنَ ۟
ಅ ಬಳಿಕ ತನ್ನ ಸಹೋದರನ ಮೃತದೇಹವನ್ನು ಮರೆಮಾಚುವುದು ಹೇಗೆಂದು ಅವನಿಗೆ ತೋರಿಸಿಕೊಡುವುದಕ್ಕಾಗಿ ನೆಲವನ್ನು ಅಗೆಯುವ ಒಂದು ಕಾಗೆಯನ್ನು ಅಲ್ಲಾಹನು ಕಳುಹಿಸಿದನು. ಅವನು ಹೇಳಿದನು: ನನ್ನ ನಾಶವೇ, ನಾನು ನನ್ನ ಸಹೋದರನ ಮೃತದೇಹವನ್ನು ದಫನ ಮಾಡಲು ಅಸಮರ್ಥನಾಗಿ ಈ ಕಾಗೆಗಿಂಲೂ ಹೀನನಾಗಿ ಬಿಟ್ಟೇನಲ್ಲ! ಅನಂತರ ಅವನು (ತುಂಬಾ) ವಿಷಾಧಿಸುವವರಲ್ಲಾದನು.
আৰবী তাফছীৰসমূহ:
مِنْ اَجْلِ ذٰلِكَ ؔۛۚ— كَتَبْنَا عَلٰی بَنِیْۤ اِسْرَآءِیْلَ اَنَّهٗ مَنْ قَتَلَ نَفْسًا بِغَیْرِ نَفْسٍ اَوْ فَسَادٍ فِی الْاَرْضِ فَكَاَنَّمَا قَتَلَ النَّاسَ جَمِیْعًا ؕ— وَمَنْ اَحْیَاهَا فَكَاَنَّمَاۤ اَحْیَا النَّاسَ جَمِیْعًا ؕ— وَلَقَدْ جَآءَتْهُمْ رُسُلُنَا بِالْبَیِّنٰتِ ؗ— ثُمَّ اِنَّ كَثِیْرًا مِّنْهُمْ بَعْدَ ذٰلِكَ فِی الْاَرْضِ لَمُسْرِفُوْنَ ۟
ಇದೇ ಕಾರಣದಿಂದ ನಾವು ಇಸ್ರಾಯೀಲ್ ಸಂತತಿಗಳಿಗೆ (ತೌರಾತ್‌ನಲ್ಲಿ) ಹೀಗೆ ಆದೇಶಿಸಿದೆವು. ಯಾರಾದರೂ ಒಬ್ಬ ವ್ಯಕ್ತಿಯನ್ನು ಕೊಲೆ ಮಾಡಿರುವುದಕ್ಕಾಗಿ ಅಥವಾ ಭೂಮಿಯಲ್ಲಿ ಕ್ಷೆÆÃಭೆ ಹರಡಿರುವುದಕ್ಕಾಗಿಯೇ ಹೊರತು ಯಾರನ್ನಾದರು ಕೊಂದರೆ ಅವನು ಇಡೀ ಮನುಕುಲವನ್ನೇ ಕೊಂದAತೆ. ಮತ್ತು ಯಾರಾದರು ಒಂದು ಜೀವವನ್ನು ರಕ್ಷಿದರೆ ಅದು ಇಡೀ ಮನುಕುಲವನ್ನು ರಕ್ಷಿಸಿದಂತೆ. ನಮ್ಮ ಅನೇಕ ಸಂದೇಶವಾಹಕರು ಸ್ಪಷ್ಟವಾದ ಪುರಾವೆಗಳೊಂದಿಗೆ ಅವರ ಬಳಿಗೆ ಬಂದಿದ್ದರು. ಆದರೆ ಅದರ ನಂತರವೂ ಅವರ ಪೈಕಿ ಹೆಚ್ಚಿನ ಮಂದಿ ಭೂಮಿಯಲ್ಲಿ ಅನ್ಯಾಯವಾಗಿ ಅಕ್ರಮವೆಸಗುವವರಾಗಿದ್ದರು.
আৰবী তাফছীৰসমূহ:
اِنَّمَا جَزٰٓؤُا الَّذِیْنَ یُحَارِبُوْنَ اللّٰهَ وَرَسُوْلَهٗ وَیَسْعَوْنَ فِی الْاَرْضِ فَسَادًا اَنْ یُّقَتَّلُوْۤا اَوْ یُصَلَّبُوْۤا اَوْ تُقَطَّعَ اَیْدِیْهِمْ وَاَرْجُلُهُمْ مِّنْ خِلَافٍ اَوْ یُنْفَوْا مِنَ الْاَرْضِ ؕ— ذٰلِكَ لَهُمْ خِزْیٌ فِی الدُّنْیَا وَلَهُمْ فِی الْاٰخِرَةِ عَذَابٌ عَظِیْمٌ ۟ۙ
ಯಾರು ಅಲ್ಲಾಹನೊಂದಿಗೆ ಮತ್ತು ಅವನ ಸಂದೇಶವಾಹಕರೊAದಿಗೆ ಯುದ್ಧ ಮಾಡುತ್ತಾರೋ ಮತ್ತು ಭೂಮಿಯಲ್ಲಿ ಕ್ಷೆÆÃಭೆಯನ್ನುಂಟು ಮಾಡುತ್ತಾರೋ ಅವರ ಶಿಕ್ಷೆಯು ಅವರನ್ನು ವಧಿಸಲಾಗುವುದು, ಅಥವಾ ಶಿಲುಬೆಗೇರಿಸಲಾಗುವುದು, ಅಥವಾ ಅವರ ಕೈ ಕಾಲುಗಳನ್ನು ಪರಸ್ಪರ ವಿರುದ್ಧ ದಿಕ್ಕಿನಿಂದ ಕತ್ತರಿಸಲಾಗುವುದು ಅಥವಾ ಅವರನ್ನು ಗಡಿಪಾರುಗೊಳಿಸಲಾಗುವುದು. ಇದು ಅವರಿಗೆ ಇಹಲೋಕದಲ್ಲಿರುವ ಅಪಮಾನವಾಗಿದೆ. ಮತ್ತು ಪರಲೋಕದಲ್ಲಿ ಅವರಿಗೆ ಮಹಾ ಕಠಿಣವಾದ ಶಿಕ್ಷೆಯಿರುವುದು.
আৰবী তাফছীৰসমূহ:
اِلَّا الَّذِیْنَ تَابُوْا مِنْ قَبْلِ اَنْ تَقْدِرُوْا عَلَیْهِمْ ۚ— فَاعْلَمُوْۤا اَنَّ اللّٰهَ غَفُوْرٌ رَّحِیْمٌ ۟۠
ಆದರೆ, ಅವರ ವಿರುದ್ಧ ನಿಂಯತ್ರಣ ಸಾಧಿಸುವ ಮುನ್ನ ಅವರು ಪಶ್ಚಾತ್ತಾಪ ಪಟ್ಟು ಮರಳಿದರೆ ಖಂಡಿತವಾಗಿಯು ಅಲ್ಲಾಹನು ಅತ್ಯಧಿಕ ಕ್ಷಮಿಸುವವನೂ ಕರುಣಾನಿಧಿಯೂ ಆಗಿದ್ದಾನೆ ಎಂಬುದನ್ನು ನೀವು ಅರಿತುಕೊಳ್ಳಿರಿ.
আৰবী তাফছীৰসমূহ:
یٰۤاَیُّهَا الَّذِیْنَ اٰمَنُوا اتَّقُوا اللّٰهَ وَابْتَغُوْۤا اِلَیْهِ الْوَسِیْلَةَ وَجَاهِدُوْا فِیْ سَبِیْلِهٖ لَعَلَّكُمْ تُفْلِحُوْنَ ۟
ಓ ಸತ್ಯವಿಶ್ವಾಸಿಗಳೇ, ನೀವು ಅಲ್ಲಾಹನನ್ನು ಭಯಪಡಿರಿ ಮತ್ತು ಅವನೆಡೆÀಗೆ ಸಾಮಿಪ್ಯ ಮಾರ್ಗವನ್ನು ಹುಡುಕಿರಿ ಹಾಗೂ ಅವನ ಮಾರ್ಗದಲ್ಲಿ ಹೋರಾಡಿರಿ. ಇದು ನೀವು ಯಶಸ್ಸು ಸಾಧಿಸಲೆಂದಾಗಿದೆ.
আৰবী তাফছীৰসমূহ:
اِنَّ الَّذِیْنَ كَفَرُوْا لَوْ اَنَّ لَهُمْ مَّا فِی الْاَرْضِ جَمِیْعًا وَّمِثْلَهٗ مَعَهٗ لِیَفْتَدُوْا بِهٖ مِنْ عَذَابِ یَوْمِ الْقِیٰمَةِ مَا تُقُبِّلَ مِنْهُمْ ۚ— وَلَهُمْ عَذَابٌ اَلِیْمٌ ۟
ಖಂಡಿತವಾಗಿಯು ಪುನರುತ್ಥಾನ ದಿನದ ಶಿಕ್ಷೆಯಿಂದ ಪಾರಾಗಲಿಕ್ಕಾಗಿ ಸತ್ಯನಿಷೇಧಿಗಳ ವಶದಲ್ಲಿ ಭೂಮಿಯಲ್ಲಿರುವುದೆಲ್ಲವೂ ಅದರಷ್ಟೇ ಬೇರೆಯೂ ಇದ್ದೂ ಅವೆಲ್ಲವನ್ನೂ ಪರಿಹಾರ ಧನವನ್ನಾಗಿ ನೀಡಲು ಅವರು ಇಚ್ಛಿಸಿದರೂ ಅದನ್ನು ಅವರಿಂದ ಸ್ವೀಕರಿಸಲಾಗದು ಮತ್ತು ಅವರಿಗೆ ವೇದನಾಜನಕ ಶಿಕ್ಷೆಯಿದೆ.
আৰবী তাফছীৰসমূহ:
یُرِیْدُوْنَ اَنْ یَّخْرُجُوْا مِنَ النَّارِ وَمَا هُمْ بِخٰرِجِیْنَ مِنْهَا ؗ— وَلَهُمْ عَذَابٌ مُّقِیْمٌ ۟
ಅವರು ನರಕದಿಂದ ಹೊರಹೋಗಲು ಬಯಸುತ್ತಾರೆ. ಆದರೆ ಅದರಿಂದ ಎಂದೆAದಿಗೂ ಹೊರಹೋಗಲು ಅವರಿಗೆ ಸಾಧ್ಯವಾಗದು. ಮತ್ತು ಅವರಿಗೆ ನಿರಂತರವಾದ ಶಿಕ್ಷೆಯಿರುವುದು.
আৰবী তাফছীৰসমূহ:
وَالسَّارِقُ وَالسَّارِقَةُ فَاقْطَعُوْۤا اَیْدِیَهُمَا جَزَآءً بِمَا كَسَبَا نَكَالًا مِّنَ اللّٰهِ ؕ— وَاللّٰهُ عَزِیْزٌ حَكِیْمٌ ۟
ಕದಿಯುವವನ ಮತ್ತು ಕದಿಯುವವಳ ಕೈಗಳನ್ನು ಕತ್ತರಿಸಿರಿ. ಅದು ಅವರು ಗಳಿಸಿರುವುದರ ಪ್ರತಿಫಲ ಮತ್ತು ಅಲ್ಲಾಹನ ಕಡೆಯ ಶಿಕ್ಷೆಯಾಗಿದೆ ಮತ್ತು ಅಲ್ಲಾಹನು ಸಾಮರ್ಥ್ಯವುಳ್ಳವನೂ, ಯುಕ್ತಿಪೂರ್ಣನೂ ಆಗಿದ್ದಾನೆ.
আৰবী তাফছীৰসমূহ:
فَمَنْ تَابَ مِنْ بَعْدِ ظُلْمِهٖ وَاَصْلَحَ فَاِنَّ اللّٰهَ یَتُوْبُ عَلَیْهِ ؕ— اِنَّ اللّٰهَ غَفُوْرٌ رَّحِیْمٌ ۟
ಆದರೆ ಯಾರಾದರೂ ಅಕ್ರಮವೆಸಗಿದ ಬಳಿಕ ಪಶ್ಚಾತ್ತಾಪ ಪಟ್ಟರೆ ಮತ್ತು ಸುಧಾರಣೆ ಮಾಡಿಕೊಂಡರೆ ಅಲ್ಲಾಹನು ಅವರ ಪಶ್ಚಾತ್ತಾಪವನ್ನು ಸ್ವೀಕರಿಸುತ್ತಾನೆ ಖಂಡಿತವಾಗಿಯು ಅಲ್ಲಾಹನು ಅತ್ಯಧಿಕ ಕ್ಷಮಿಸುವವನೂ ಕರುಣೆ ತೋರುವವನಾಗಿದ್ದಾನೆ.
আৰবী তাফছীৰসমূহ:
اَلَمْ تَعْلَمْ اَنَّ اللّٰهَ لَهٗ مُلْكُ السَّمٰوٰتِ وَالْاَرْضِ ؕ— یُعَذِّبُ مَنْ یَّشَآءُ وَیَغْفِرُ لِمَنْ یَّشَآءُ ؕ— وَاللّٰهُ عَلٰی كُلِّ شَیْءٍ قَدِیْرٌ ۟
ಆಕಾಶಗಳ ಮತ್ತು ಭೂಮಿಯ ಅಧಿಪತ್ಯವು ಅಲ್ಲಾಹನಿಗೇ ಸೇರಿದ್ದೆಂದು ನಿಮಗೆ ತಿಳಿದಿಲ್ಲವೇ? ತಾನಿಚ್ಛಿಸುವವರನ್ನು ಅವನು ಶಿಕ್ಷಿಸುತ್ತಾನೆ ಮತ್ತು ತಾನಿಚ್ಛಿಸುವವರನ್ನು ಅವನು ಕ್ಷಮಿಸುತ್ತಾನೆ. ಅಲ್ಲಾಹನು ಸಕಲ ಸಂಗತಿಗಳ ಮೇಲೆ ಸಾಮರ್ಥ್ಯವುಳ್ಳವನಾಗಿದ್ದಾನೆ.
আৰবী তাফছীৰসমূহ:
یٰۤاَیُّهَا الرَّسُوْلُ لَا یَحْزُنْكَ الَّذِیْنَ یُسَارِعُوْنَ فِی الْكُفْرِ مِنَ الَّذِیْنَ قَالُوْۤا اٰمَنَّا بِاَفْوَاهِهِمْ وَلَمْ تُؤْمِنْ قُلُوْبُهُمْ ۛۚ— وَمِنَ الَّذِیْنَ هَادُوْا ۛۚ— سَمّٰعُوْنَ لِلْكَذِبِ سَمّٰعُوْنَ لِقَوْمٍ اٰخَرِیْنَ ۙ— لَمْ یَاْتُوْكَ ؕ— یُحَرِّفُوْنَ الْكَلِمَ مِنْ بَعْدِ مَوَاضِعِهٖ ۚ— یَقُوْلُوْنَ اِنْ اُوْتِیْتُمْ هٰذَا فَخُذُوْهُ وَاِنْ لَّمْ تُؤْتَوْهُ فَاحْذَرُوْا ؕ— وَمَنْ یُّرِدِ اللّٰهُ فِتْنَتَهٗ فَلَنْ تَمْلِكَ لَهٗ مِنَ اللّٰهِ شَیْـًٔا ؕ— اُولٰٓىِٕكَ الَّذِیْنَ لَمْ یُرِدِ اللّٰهُ اَنْ یُّطَهِّرَ قُلُوْبَهُمْ ؕ— لَهُمْ فِی الدُّنْیَا خِزْیٌ ۙ— وَّلَهُمْ فِی الْاٰخِرَةِ عَذَابٌ عَظِیْمٌ ۟
ಓ ಸಂದೇಶವಾಹಕರೇ, ನಾವು ಸತ್ಯವಿಶ್ವಾಸವಿಟ್ಟೆವು ಎಂದು ಬಾಯಿ ಮಾತಿನಲ್ಲಿ ಹೇಳುವ ಹಾಗೂ ಹೃದಯದಲ್ಲಿ ವಿಶ್ವಾಸವಿಲ್ಲದ ಕಪಟವಿಶ್ವಾಸಿಗಳ ಪೈಕಿ ಮತ್ತು ಯಹೂದರ ಪೈಕಿ ಸತ್ಯನಿಷೇಧದೆಡೆಗೆ ಧಾವಿಸುತ್ತಿರುವವರ ಅವಸ್ಥೆಯು ನಿಮ್ಮನ್ನು ದುಃಖಕ್ಕೀಡು ಮಾಡದಿರಲಿ. ಕೆಲವರು ಹೀಗಿರುತ್ತಾರೆ ಅವರು ಸುಳ್ಳು ವದಂತಿಗಳನ್ನು ಆಲಿಸುವವರೂ, ಮತ್ತು ನಿಮ್ಮ ಬಳಿಗೆ ಇದುವರೆಗೂ ಬರದಂತಹ ಜನರ ಗೂಢಾಚಾರರೂ ಆಗಿದ್ದಾರೆ. ಅವರು ಗ್ರಂಥ ವಾಕ್ಯಗಳನ್ನು ಅವುಗಳ ನೈಜ ಸ್ಥಾನದಿಂದ ಬದಲಿಸುತ್ತಾರೆ. ಮತ್ತು ಹೇಳುತ್ತಾರೆ (ಪೈಗಂಬರರ ಬಳಿ) ಇದೇ ವಿಧಿಯು ನಿಮಗೆ ನೀಡಲಾಗುವುದಾದರೆ ನೀವು ಅದನ್ನು ಸ್ವೀಕರಿಸಿರಿ. ಇದೇ ವಿಧಿಯು ನೀಡಲಾಗುವುದಿಲ್ಲವೆಂದಾದರೆ ನೀವು ಎಚ್ಚರ ವಹಿಸಿರಿ. ಅಲ್ಲಾಹನು ಯಾರನ್ನಾದರೂ ಗೊಂದಲಗೊಳಿಸಲು ಇಚ್ಚಿಸಿದರೆ ಅವನಿಗೆ ಅಲ್ಲಾಹನಿಂದ ಏನನ್ನೂ ತಡೆಯಲೂ ನಿಮಗೆ ಸಾಧ್ಯವಿಲ್ಲ. ಅಲ್ಲಾಹನು ಅವರ ಹೃದಯಗಳನ್ನು ಶುದ್ಧೀಕರಿಸಲು ಇಚ್ಛಿಸುವುದಿಲ್ಲ. ಅವರಿಗೆ ಇಹಲೋಕದಲ್ಲಿ ಅಪಮಾನವಿದೆ ಮತ್ತು ಪರಲೋಕದಲ್ಲೂ ಕಠಿಣ ಶಿಕ್ಷೆಯಿದೆ.
আৰবী তাফছীৰসমূহ:
سَمّٰعُوْنَ لِلْكَذِبِ اَكّٰلُوْنَ لِلسُّحْتِ ؕ— فَاِنْ جَآءُوْكَ فَاحْكُمْ بَیْنَهُمْ اَوْ اَعْرِضْ عَنْهُمْ ۚ— وَاِنْ تُعْرِضْ عَنْهُمْ فَلَنْ یَّضُرُّوْكَ شَیْـًٔا ؕ— وَاِنْ حَكَمْتَ فَاحْكُمْ بَیْنَهُمْ بِالْقِسْطِ ؕ— اِنَّ اللّٰهَ یُحِبُّ الْمُقْسِطِیْنَ ۟
ಅವರು ಸುಳ್ಳನ್ನು ಆಸಕ್ತಿಯಿಂದ ಆಲಿಸುವವರೂ ನಿಷಿದ್ಧವಾದ ಸಂಪಾದನೆಯನ್ನು ಧಾರಾಳವಾಗಿ ತಿನ್ನುವವರೂ ಆಗಿದ್ದಾರೆ. ಅವರು ನಿಮ್ಮ ಬಳಿಗೆ ಬರುವುದಾದರೆ ಅವರ ನಡುವೆ ನೀವು ತೀರ್ಪು ನೀಡಿರಿ. ಅಥವಾ ಅವರನ್ನು ಕಡೆಗಣಿಸಿರಿ. ನೀನು ಅವರನ್ನು ಕಡೆಗಣಿಸುವುದಾದರೆ ಅವರು ನಿಮಗೆ ಯಾವ ತೊಂದರೆಯನ್ನು ಉಂಟುಮಾಡಲಾರರು. ಆದರೆ ನೀವು ತೀರ್ಪು ನೀಡುವುದಾದರೆ ಅವರ ನಡುವೆ ನ್ಯಾಯಸಮ್ಮತವಾದ ತೀರ್ಪನ್ನು ನೀಡಿರಿ. ಖಂಡಿತವಾಗಿಯು ನ್ಯಾಯ ಪಾಲಿಸುವವರನ್ನು ಅಲ್ಲಾಹನು ಮೆಚ್ಚುತ್ತಾನೆ.
আৰবী তাফছীৰসমূহ:
وَكَیْفَ یُحَكِّمُوْنَكَ وَعِنْدَهُمُ التَّوْرٰىةُ فِیْهَا حُكْمُ اللّٰهِ ثُمَّ یَتَوَلَّوْنَ مِنْ بَعْدِ ذٰلِكَ ؕ— وَمَاۤ اُولٰٓىِٕكَ بِالْمُؤْمِنِیْنَ ۟۠
ಅವರ ಬಳಿ ಅಲ್ಲಾಹನ ವಿಧಿ ನಿಯಮಗಳಿರುವ ತೌರಾತ್ ಇದ್ದು ಆ ಬಳಿಕ ಅವರು ವಿಮುಖರಾಗುತ್ತಿರುವಾಗ ಅವರು ನಿಮ್ಮನ್ನು ತೀರ್ಪುಗಾರನನ್ನಾಗಿ ಮಾಡುವುದಾದರೂ ಹೇಗೆ? ವಾಸ್ತವದಲ್ಲಿ ಅವರು ಸತ್ಯವಿಶ್ವಾಸಿಗಳಲ್ಲ.
আৰবী তাফছীৰসমূহ:
اِنَّاۤ اَنْزَلْنَا التَّوْرٰىةَ فِیْهَا هُدًی وَّنُوْرٌ ۚ— یَحْكُمُ بِهَا النَّبِیُّوْنَ الَّذِیْنَ اَسْلَمُوْا لِلَّذِیْنَ هَادُوْا وَالرَّبّٰنِیُّوْنَ وَالْاَحْبَارُ بِمَا اسْتُحْفِظُوْا مِنْ كِتٰبِ اللّٰهِ وَكَانُوْا عَلَیْهِ شُهَدَآءَ ۚ— فَلَا تَخْشَوُا النَّاسَ وَاخْشَوْنِ وَلَا تَشْتَرُوْا بِاٰیٰتِیْ ثَمَنًا قَلِیْلًا ؕ— وَمَنْ لَّمْ یَحْكُمْ بِمَاۤ اَنْزَلَ اللّٰهُ فَاُولٰٓىِٕكَ هُمُ الْكٰفِرُوْنَ ۟
ನಾವು ತೌರಾತನ್ನು ಅವತೀರ್ಣಗೊಳಿಸಿದ್ದೇವೆ. ಅದರಲ್ಲಿ ಮಾರ್ಗದರ್ಶನ ಮತ್ತು ಪ್ರಕಾಶವಿದೆ. ಯಹೂದರ ನಡುವೆ ಅಲ್ಲಾಹನಿಗೆ ಶರಣಾಗತರಾದ ಪೈಗಂಬರರೂ, ಪುಣ್ಯಪುರುಷರೂ, ಧರ್ಮವಿದ್ವಾಂಸರೂ ತೌರಾತ್‌ಗನುಗುಣವಾಗಿ ತೀರ್ಪು ನೀಡುತ್ತಿದ್ದರು. ಏಕೆಂದರೆ ಅವರಿಗೆ ಅಲ್ಲಾಹನ ಆ ಗ್ರಂಥದ ಸಂರಕ್ಷಣೆಯನ್ನು ವಹಿಸಲಾಗಿತ್ತು. ಅವರು ಅದಕ್ಕೆ ಸಾಕ್ಷಿಗಳಾಗಿದ್ದರು. (ಯಹೂದಿ ಪುರೋಹಿತರೇ) ನೀವು ಜನರನ್ನು ಭಯಪಡಬೇಡರಿ. ನನ್ನನ್ನು ಮಾತ್ರ ಭಯಪಡಿರಿ. ನನ್ನ ಸೂಕ್ತಿಗಳನ್ನು ನೀವು ತುಚ್ಛ ಬೆಲೆಗೆ ಮಾರಬೇಡಿರಿ. ಯಾರು ಅಲ್ಲಾಹನು ಅವತೀರ್ಣಗೊಳಿಸಿರುವುದಕ್ಕೆ ಅನುಸಾರವಾಗಿ ತೀರ್ಪು ನೀಡುವುದಿಲ್ಲವೋ ಅವರೇ ನಿಷೇಧಿಗಳಾಗಿದ್ದಾರೆ.
আৰবী তাফছীৰসমূহ:
وَكَتَبْنَا عَلَیْهِمْ فِیْهَاۤ اَنَّ النَّفْسَ بِالنَّفْسِ ۙ— وَالْعَیْنَ بِالْعَیْنِ وَالْاَنْفَ بِالْاَنْفِ وَالْاُذُنَ بِالْاُذُنِ وَالسِّنَّ بِالسِّنِّ ۙ— وَالْجُرُوْحَ قِصَاصٌ ؕ— فَمَنْ تَصَدَّقَ بِهٖ فَهُوَ كَفَّارَةٌ لَّهٗ ؕ— وَمَنْ لَّمْ یَحْكُمْ بِمَاۤ اَنْزَلَ اللّٰهُ فَاُولٰٓىِٕكَ هُمُ الظّٰلِمُوْنَ ۟
ನಾವು ಯಹೂದರಿಗೆ ತೌರಾತ್‌ನಲ್ಲಿ ಹೀಗೆ ವಿಧಿಸಿದ್ದೆವು ಅಂದರೆ ಪ್ರಾಣದ ಬದಲಿಗೆ ಪ್ರಾಣ. ಕಣ್ಣಿನ ಬದಲಿಗೆ ಕಣ್ಣು, ಮೂಗಿನ ಬದಲಿಗೆ ಮೂಗು, ಕಿವಿಯ ಬದಲಿಗೆ ಕಿವಿ, ಹಲ್ಲಿನ ಬದಲಿಗೆ ಹಲ್ಲು ಮತ್ತು ಗಾಯಗಳಿಗೂ ತತ್ಸಮಾನ ಪ್ರತೀಕಾರವಿದೆ. ನಂತರ ಯಾರಾದರೂ ಆ ಮುಯ್ಯಿ (ಪರಿಹಾರ ಧನ) ಕ್ಷಮಿಸುವುದಾದರೆ ಅದು ಅವನ (ಪಾಪಗಳ) ಪ್ರಾಯಶ್ಚಿತವಾಗಿದೆ. ಅಲ್ಲಾಹನು ಅವತೀರ್ಣಗೊಳಿಸಿರುವುದಕ್ಕೆ ಅನುಸಾರವಾಗಿ ಯಾರು ತೀರ್ಪು ನೀಡುವುದಿಲ್ಲವೋ ಅವರೇ ಅಕ್ರಮಿಗಳಾಗಿದ್ದಾರೆ.
আৰবী তাফছীৰসমূহ:
وَقَفَّیْنَا عَلٰۤی اٰثَارِهِمْ بِعِیْسَی ابْنِ مَرْیَمَ مُصَدِّقًا لِّمَا بَیْنَ یَدَیْهِ مِنَ التَّوْرٰىةِ ۪— وَاٰتَیْنٰهُ الْاِنْجِیْلَ فِیْهِ هُدًی وَّنُوْرٌ ۙ— وَّمُصَدِّقًا لِّمَا بَیْنَ یَدَیْهِ مِنَ التَّوْرٰىةِ وَهُدًی وَّمَوْعِظَةً لِّلْمُتَّقِیْنَ ۟ؕ
ಮತ್ತು ನಾವು ಆ ಪೈಗಂಬರರ ನಂತರ ಮರ್ಯಮರ ಪುತ್ರರಾದ ಈಸಾರನ್ನು ತಮಗಿಂತ ಮುಂಚೆಯಿರುವ ತೌರಾತನ್ನು ಸತ್ಯವೆಂದು ದೃಢಿಕರಿಸುವವರಾಗಿ ನಿಯೋಗಿಸದೆವು. ಮತ್ತು ಸನ್ಮಾರ್ಗದರ್ಶನ ಮತ್ತು ಪ್ರಕಾಶವನ್ನು ಹೊಂದಿದ್ದ ಇಂಜೀಲನ್ನು ನಾವು ಅವರಿಗೆ ದಯಪಾಲಿಸಿದೆವು. ಅದು ತನ್ನ ಮುಂಚಿರುವ ತೌರಾತನ್ನು ಸತ್ಯವೆಂದು ದೃಢೀಕರಿಸುವಂತದ್ದೂ ಭಯಭಕ್ತಿ ಪಾಲಿಸುವವರಿಗೆ ಮಾರ್ಗದರ್ಶನ ಮತ್ತು ಸದುಪದೇಶವೂ ಆಗಿತ್ತು.
আৰবী তাফছীৰসমূহ:
وَلْیَحْكُمْ اَهْلُ الْاِنْجِیْلِ بِمَاۤ اَنْزَلَ اللّٰهُ فِیْهِ ؕ— وَمَنْ لَّمْ یَحْكُمْ بِمَاۤ اَنْزَلَ اللّٰهُ فَاُولٰٓىِٕكَ هُمُ الْفٰسِقُوْنَ ۟
ಮತ್ತು ಇಂಜೀಲಿನ ಅನುಯಾಯಿಗಳು ಅಲ್ಲಾಹನು ಇಂಜೀಲ್‌ನಲ್ಲಿ ಅವತೀರ್ಣಗೊಳಿಸಿರುವ ಪ್ರಕಾರ ತೀರ್ಪು ನೀಡಲಿ ಮತ್ತು ಅಲ್ಲಾಹನು ಅವತೀರ್ಣಗೊಳಿಸಿರುವುದಕ್ಕೆ ಅನುಸಾರವಾಗಿ ಯಾರು ತೀರ್ಪು ನೀಡುವುದಿಲ್ಲವೋ ಅವರೇ ಧಿಕ್ಕಾರಿಗಳಾಗಿದ್ದಾರೆ.
আৰবী তাফছীৰসমূহ:
وَاَنْزَلْنَاۤ اِلَیْكَ الْكِتٰبَ بِالْحَقِّ مُصَدِّقًا لِّمَا بَیْنَ یَدَیْهِ مِنَ الْكِتٰبِ وَمُهَیْمِنًا عَلَیْهِ فَاحْكُمْ بَیْنَهُمْ بِمَاۤ اَنْزَلَ اللّٰهُ وَلَا تَتَّبِعْ اَهْوَآءَهُمْ عَمَّا جَآءَكَ مِنَ الْحَقِّ ؕ— لِكُلٍّ جَعَلْنَا مِنْكُمْ شِرْعَةً وَّمِنْهَاجًا ؕ— وَلَوْ شَآءَ اللّٰهُ لَجَعَلَكُمْ اُمَّةً وَّاحِدَةً وَّلٰكِنْ لِّیَبْلُوَكُمْ فِیْ مَاۤ اٰتٰىكُمْ فَاسْتَبِقُوا الْخَیْرٰتِ ؕ— اِلَی اللّٰهِ مَرْجِعُكُمْ جَمِیْعًا فَیُنَبِّئُكُمْ بِمَا كُنْتُمْ فِیْهِ تَخْتَلِفُوْنَ ۟ۙ
ಓ ಪೈಗಂಬರರೇ, ನಾವು ನಿಮ್ಮ ಕಡೆಗೆ ಸತ್ಯದೊಂದಿಗೆ ಈ ಗ್ರಂಥವನ್ನು ಅವತೀರ್ಣಗೊಳಿಸಿದ್ದೇವೆ. ಇದು ತನಗಿಂತ ಮುಂಚಿನ ಗ್ರಂಥವನ್ನು ಸತ್ಯವೆಂದು ದೃಢೀಕರಿಸುತ್ತದೆ ಮತ್ತು ಅವುಗಳನ್ನು ಸಂರಕ್ಷಿಸುತ್ತದೆ ಆದ್ದರಿಂದ ನೀವು ಅವರ ನಡುವೆ ಅಲ್ಲಾಹನಿಂದ ಅವತೀರ್ಣಗೊಂಡಿರುವ ಗ್ರಂಥದ ಪ್ರಕಾರ ತೀರ್ಪು ನೀಡಿರಿ. ಈ ಸತ್ಯವನ್ನು ತೊರೆದು ನೀವು ಅವರ ಇಚ್ಛೆಗಳನ್ನು ಹಿಂಬಾಲಿಸಬಾರದು. ನಿಮ್ಮಲ್ಲಿನ ಪ್ರತಿಯೊಂದು ಸಮುದಾಯಕ್ಕೂ ಒಂದೊAದು ನಿಯಮ ಸಂಹಿತೆ ಮತ್ತು ಕರ್ಮ ಮಾರ್ಗವನ್ನು ನಾವು ನಿಶ್ಚಯಿಸಿದ್ದೇವೆ. ಅಲ್ಲಾಹನು ಇಚ್ಛಿಸುತ್ತಿದ್ದರೆ ನಿಮ್ಮೆಲ್ಲರನ್ನು ಒಂದೇ ಸಮುದಾಯವನ್ನಾಗಿಸುತ್ತಿದ್ದನು. ಆದರೆ ಅವನು ನಿಮಗೆ ದಯಪಾಲಿಸುವುದರಲ್ಲಿ ನಿಮ್ಮನ್ನು ಪರೀಕ್ಷಿಸಲು ಇಚ್ಛಿಸುತ್ತಾನೆ. ನೀವು ಸತ್ಕರ್ಮಗಳೆಡೆಗೆ ಸ್ಪರ್ಧಿಸಿರಿ. ನಿಮ್ಮೆಲ್ಲರ ಮರಳುವಿಕೆಯು ಅಲ್ಲಾಹನ ಕಡೆಗೇ ಆಗಿದೆ ಮತ್ತು ಅವನು ನೀವು ಭಿನ್ನತೆ ಹೊಂದಿರುವ ಸಕಲ ವಿಷಯಗಳ ಕುರಿತು ನಿಮಗೆ ತಿಳಿಸಿಕೊಡುವನು.
আৰবী তাফছীৰসমূহ:
وَاَنِ احْكُمْ بَیْنَهُمْ بِمَاۤ اَنْزَلَ اللّٰهُ وَلَا تَتَّبِعْ اَهْوَآءَهُمْ وَاحْذَرْهُمْ اَنْ یَّفْتِنُوْكَ عَنْ بَعْضِ مَاۤ اَنْزَلَ اللّٰهُ اِلَیْكَ ؕ— فَاِنْ تَوَلَّوْا فَاعْلَمْ اَنَّمَا یُرِیْدُ اللّٰهُ اَنْ یُّصِیْبَهُمْ بِبَعْضِ ذُنُوْبِهِمْ ؕ— وَاِنَّ كَثِیْرًا مِّنَ النَّاسِ لَفٰسِقُوْنَ ۟
ಅಲ್ಲಾಹನು ಅವತೀರ್ಣಗೊಳಿಸಿರುವ ನಿಯಮಕ್ಕನುಸಾರವಾಗಿಯೇ ನೀವು ಅವರ ನಡುವೆ ತೀರ್ಪು ನೀಡಿರಿ ಮತ್ತು ಅವರ ಇಚ್ಛೆಗಳನ್ನು ಹಿಂಬಾಲಿಸಬೇಡಿರಿ ಮತ್ತು ಅಲ್ಲಾಹನು ನಿಮ್ಮ ಮೇಲೆ ಅವತೀರ್ಣಗೊಳಿಸಿರುವ ಯಾವುದಾದರೂ ಆದೇಶದಿಂದ ಅವರು ನಿಮ್ಮನ್ನು ದಾರಿ ತಪ್ಪಿಸಿದಂತೆ ಎಚ್ಚರ ವಹಿಸಿರಿ. ಇನ್ನು ಅವರು ವಿಮುಖರಾಗುವುದಾದರೆ ಅಲ್ಲಾಹನು ಅವರ ಪಾಪಗಳ ನಿಮಿತ್ತ ಅವರಿಗೆ ಶಿಕ್ಷಿಸಲಿಚ್ಚಿಸುತ್ತಾನೆಂದು ತಿಳಿದುಕೊಳ್ಳಿರಿ. ಮತ್ತು ಹೆಚ್ಚಿನ ಜನರು ಧಿಕ್ಕಾರಿಗಳೇ ಆಗಿರುತ್ತಾರೆ.
আৰবী তাফছীৰসমূহ:
اَفَحُكْمَ الْجَاهِلِیَّةِ یَبْغُوْنَ ؕ— وَمَنْ اَحْسَنُ مِنَ اللّٰهِ حُكْمًا لِّقَوْمٍ یُّوْقِنُوْنَ ۟۠
ಅವರು ಅಜ್ಞಾನ ಕಾಲದ ತೀರ್ಪನ್ನು ಬಯಸುತ್ತಿದಾರೆಯೇ? ದೃಢವಿಶ್ವಾಸಿಗಳಾದ ಜನರಿಗೆ ಅಲ್ಲಾಹನಿಗಿಂತಲೂ ಉತ್ತಮನಾದ ತೀರ್ಪುಗಾರ ಇನ್ನಾರಿದ್ದಾನೆ?
আৰবী তাফছীৰসমূহ:
یٰۤاَیُّهَا الَّذِیْنَ اٰمَنُوْا لَا تَتَّخِذُوا الْیَهُوْدَ وَالنَّصٰرٰۤی اَوْلِیَآءَ ؔۘ— بَعْضُهُمْ اَوْلِیَآءُ بَعْضٍ ؕ— وَمَنْ یَّتَوَلَّهُمْ مِّنْكُمْ فَاِنَّهٗ مِنْهُمْ ؕ— اِنَّ اللّٰهَ لَا یَهْدِی الْقَوْمَ الظّٰلِمِیْنَ ۟
ಓ ಸತ್ಯವಿಶ್ವಾಸಿಗಳೇ, ಯಹೂದರನ್ನು ಮತ್ತು ಕ್ರೆöÊಸ್ತರನ್ನು ನೀವು ಆಪ್ತ ಮಿತ್ರನನ್ನಾಗಿ ಮಾಡಿಕೊಳ್ಳಬೇಡಿರಿ. ಅವರಂತು ಪರಸ್ಪರ ಮಿತ್ರರಾಗಿದ್ದಾರೆ. ನಿಮ್ಮ ಪೈಕಿ ಯಾರು ಅವರನ್ನು ಮಿತ್ರರನ್ನಾಗಿ ಮಾಡಿಕೊಳ್ಳುತ್ತಾನೋ ಖಂಡಿತವಾಗಿಯು ಅವನು ಅವರೊಂದಿಗೇ ಸೇರಿದವನಾಗಿದ್ದಾನೆ. ಖಂಡಿತವಾಗಿಯು ಅಕ್ರಮಿಗಳಿಗೆ ಅಲ್ಲಾಹನು ಸನ್ಮಾರ್ಗವನ್ನು ತೋರಿಸಿಕೊಡುವುದಿಲ್ಲ.
আৰবী তাফছীৰসমূহ:
فَتَرَی الَّذِیْنَ فِیْ قُلُوْبِهِمْ مَّرَضٌ یُّسَارِعُوْنَ فِیْهِمْ یَقُوْلُوْنَ نَخْشٰۤی اَنْ تُصِیْبَنَا دَآىِٕرَةٌ ؕ— فَعَسَی اللّٰهُ اَنْ یَّاْتِیَ بِالْفَتْحِ اَوْ اَمْرٍ مِّنْ عِنْدِهٖ فَیُصْبِحُوْا عَلٰی مَاۤ اَسَرُّوْا فِیْۤ اَنْفُسِهِمْ نٰدِمِیْنَ ۟ؕ
(ಓ ಪೈಗಂಬರರೇ) ಹೃದಯಗಳಲ್ಲಿ (ಕಾಪಟ್ಯದ) ರೋಗವಿದ್ದವರು ಆತುರದಿಂದ ಅವರ (ಯಹೂದಿಗಳ) ನಡುವೆ ನುಸುಳುವುದನ್ನು ನೀವು ಕಾಣಬಹುದು ಮತ್ತು (ಕಪಟಿಗಳು) ಹೇಳುತ್ತಾರೆ. ನಮ್ಮ ಮೇಲೆ ಯಾವುದಾದರೂ ಆಪತ್ತು ಎರಗಬಹುದೆಂದು ನಾವು ಭಯಪಡುತ್ತೇವೆ. ಅಲ್ಲಾಹನು ನಿಮಗೆ (ಪೈಗಂಬರರಿಗೆ) ವಿಜಯವನ್ನು ಕರುಣಿಸಬಹುದು. ಅಥವಾ ತನ್ನ ವತಿಯಿಂದ ಬೇರೇನಾದರೂ ಸಂಗತಿಯನ್ನುAಟು ಮಾಡಲೂಬಹುದು. ಅನಂತರ ಅವರು ತಮ್ಮ ಮನಸ್ಸುಗಳಲ್ಲಿ ಅಡಿಗಿಸಿಟ್ಟಿರುವ ವಿಚಾರಗಳಿಂದಾಗಿ ವಿಷಾಧಿಸುವವರಾಗಿ ಮಾರ್ಪಡುವರು.
আৰবী তাফছীৰসমূহ:
وَیَقُوْلُ الَّذِیْنَ اٰمَنُوْۤا اَهٰۤؤُلَآءِ الَّذِیْنَ اَقْسَمُوْا بِاللّٰهِ جَهْدَ اَیْمَانِهِمْ ۙ— اِنَّهُمْ لَمَعَكُمْ ؕ— حَبِطَتْ اَعْمَالُهُمْ فَاَصْبَحُوْا خٰسِرِیْنَ ۟
(ಅಂದು) ಸತ್ಯ ವಿಶ್ವಾಸಿಗಳು (ಪರಸ್ಪರ) ಹೇಳುವರು: 'ನಾವು ನಿಮ್ಮೊಂದಿಗೇ ಇದ್ದೇವೆ' ಎಂದು ಅಲ್ಲಾಹನ ಮೇಲೆ ಪ್ರಬಲ ಆಣೆಯಿಟ್ಟು ಹೇಳಿದವರು ಇವರೇ ಏನು? ಅವರ ಕರ್ಮಗಳು ನಿಷ್ಫಲಗೊಂಡವು. ಹಾಗೆಯೇ ಅವರು ಪರಾಜಿತರಾಗಿಬಿಟ್ಟರು.
আৰবী তাফছীৰসমূহ:
یٰۤاَیُّهَا الَّذِیْنَ اٰمَنُوْا مَنْ یَّرْتَدَّ مِنْكُمْ عَنْ دِیْنِهٖ فَسَوْفَ یَاْتِی اللّٰهُ بِقَوْمٍ یُّحِبُّهُمْ وَیُحِبُّوْنَهٗۤ ۙ— اَذِلَّةٍ عَلَی الْمُؤْمِنِیْنَ اَعِزَّةٍ عَلَی الْكٰفِرِیْنَ ؗ— یُجَاهِدُوْنَ فِیْ سَبِیْلِ اللّٰهِ وَلَا یَخَافُوْنَ لَوْمَةَ لَآىِٕمٍ ؕ— ذٰلِكَ فَضْلُ اللّٰهِ یُؤْتِیْهِ مَنْ یَّشَآءُ ؕ— وَاللّٰهُ وَاسِعٌ عَلِیْمٌ ۟
ಓ ಸತ್ಯವಿಶ್ವಾಸಿಗಳೇ, ನಿಮ್ಮಲ್ಲಿ ಯಾರು ತನ್ನ ಧರ್ಮದಿಂದ ವಿಮುಖನಾಗುತ್ತಾನೋ ಆಗ ಸದ್ಯವೇ ಅಲ್ಲಾಹನ ಪ್ರೀತಿಗೆ ಪಾತ್ರರಾದ ಮತ್ತು ಅಲ್ಲಾಹನು ಪ್ರೀತಿಸುವ ಇನ್ನೊಂದು ಸಮುದಾಯವನ್ನು ಅವನು ಉಂಟು ಮಾಡುವನು ಆ ಸತ್ಯವಿಶ್ವಾಸಿಗಳು ವಿಶ್ವಾಸಿಗಳೊಂದಿಗೆ ಮೃದುಹೃದಯಿಗಳಾಗಿ ರುವರು. ಮತ್ತು ಸತ್ಯನಿಷೇಧಿಗಳೊಂದಿಗೆ ಕಠೋರರೂ ಆಗಿರುತ್ತಾರೆ. ಅವರು ಅಲ್ಲಾಹನ ಮಾರ್ಗದಲ್ಲಿ ಹೋರಾಡುವರು ಮತ್ತು ಅಕ್ಷೇಪಿಸುವವನ ಯಾವ ಅಕ್ಷೇಪವನ್ನು ಗಣನೆಗೆ ತೆಗೆದುಕೊಳ್ಳಲಾರರು. ಇದು ಅಲ್ಲಾಹನ ಅನುಗ್ರಹವಾಗಿದೆ. ಅವನು ತಾನಿಚ್ಛಿಸುವವರಿಗೆ ಅದನ್ನು ನೀಡುವನು. ಅಲ್ಲಾಹನು ಆಗಾಧ ಸಾಮರ್ಥ್ಯವುಳ್ಳವನೂ, ಸರ್ವಜ್ಞನೂ ಆಗಿದ್ದಾನೆ.
আৰবী তাফছীৰসমূহ:
اِنَّمَا وَلِیُّكُمُ اللّٰهُ وَرَسُوْلُهٗ وَالَّذِیْنَ اٰمَنُوا الَّذِیْنَ یُقِیْمُوْنَ الصَّلٰوةَ وَیُؤْتُوْنَ الزَّكٰوةَ وَهُمْ رٰكِعُوْنَ ۟
ವಿಶ್ವಾಸಿಗಳೇ ನಿಮ್ಮ ಮಿತ್ರ ಸ್ವತಃ ಅಲ್ಲಾಹನಾಗಿದ್ದಾನೆ ಮತ್ತು ಅವನ ಸಂದೇಶವಾಹಕರಾಗಿದ್ದರೆ ನಮಾಝನ್ನು ಸಂಸ್ಥಾಪಿಸುವ ಝಕಾತ್ ನೀಡುವ ಮತ್ತು ಅಲ್ಲಾಹನಿಗೆ ವಿನಯದಿಂದ ಬಾಗುವ ಸತ್ಯವಿಶ್ವಾಸಿಗಳಾಗಿದ್ದಾರೆ.
আৰবী তাফছীৰসমূহ:
وَمَنْ یَّتَوَلَّ اللّٰهَ وَرَسُوْلَهٗ وَالَّذِیْنَ اٰمَنُوْا فَاِنَّ حِزْبَ اللّٰهِ هُمُ الْغٰلِبُوْنَ ۟۠
ಮತ್ತು ಯಾರು ಅಲ್ಲಾಹನನ್ನು, ಅವನ ಸಂದೇಶವಾಹಕರನ್ನು, ವಿಶ್ವಾಸಿಗಳನ್ನು ಆಪ್ತ ಮಿತ್ರರನ್ನಾಗಿ ಮಾಡಿಕೊಂಡರೆ ಖಂಡಿತವಾಗಿಯು ಅಲ್ಲಾಹನ ಪಕ್ಷದವರೇ ಜಯಸಾಧಿಸುವವರಾಗಿದ್ದಾರೆ.
আৰবী তাফছীৰসমূহ:
یٰۤاَیُّهَا الَّذِیْنَ اٰمَنُوْا لَا تَتَّخِذُوا الَّذِیْنَ اتَّخَذُوْا دِیْنَكُمْ هُزُوًا وَّلَعِبًا مِّنَ الَّذِیْنَ اُوْتُوا الْكِتٰبَ مِنْ قَبْلِكُمْ وَالْكُفَّارَ اَوْلِیَآءَ ۚ— وَاتَّقُوا اللّٰهَ اِنْ كُنْتُمْ مُّؤْمِنِیْنَ ۟
ಓ ಸತ್ಯವಿಶ್ವಾಸಿಗಳೇ ನಿಮಗಿಂತ ಮೊದಲು ಗ್ರಂಥ ನೀಡಲ್ಪಟ್ಟವರ ಪೈಕಿ ನಿಮ್ಮ ಧರ್ಮವನ್ನು ತಮಾಷೆ ಹಾಗೂ ವಿನೋದದ ವಸ್ತುವನ್ನಾಗಿ ಮಾಡಿದ ಜನರನ್ನು ಮತ್ತು ಸತ್ಯನಿಷೇಧಿಗಳಾದವರನ್ನು ನೀವು ಆಪ್ತಮಿತ್ರರನ್ನಾಗಿ ಮಾಡಿಕೊಳ್ಳಬೇಡಿರಿ. ನೀವು ಸತ್ಯವಿಶ್ವಾಸಿಗಳಾಗಿದ್ದರೆ ಅಲ್ಲಾಹನನ್ನು ಭಯಪಡಿರಿ.
আৰবী তাফছীৰসমূহ:
وَاِذَا نَادَیْتُمْ اِلَی الصَّلٰوةِ اتَّخَذُوْهَا هُزُوًا وَّلَعِبًا ؕ— ذٰلِكَ بِاَنَّهُمْ قَوْمٌ لَّا یَعْقِلُوْنَ ۟
ನೀವು ನಮಾಝ್‌ಗಾಗಿ ಕರೆ ನೀಡಿದರೆ ಅವರು ಅದನ್ನು ಒಂದು ತಮಾಷೆ ಮತ್ತು ವಿನೋದದ ವಸ್ತುವನ್ನಾಗಿ ಮಾಡಿಕೊಳ್ಳುತ್ತಾರೆ. ಇದು ಅವರು ಅವಿವೇಕಿಗಳಾಗಿರುವ ಕಾರಣದಿಂದಾಗಿದೆ.
আৰবী তাফছীৰসমূহ:
قُلْ یٰۤاَهْلَ الْكِتٰبِ هَلْ تَنْقِمُوْنَ مِنَّاۤ اِلَّاۤ اَنْ اٰمَنَّا بِاللّٰهِ وَمَاۤ اُنْزِلَ اِلَیْنَا وَمَاۤ اُنْزِلَ مِنْ قَبْلُ ۙ— وَاَنَّ اَكْثَرَكُمْ فٰسِقُوْنَ ۟
ನೀವು ಹೇಳಿರಿ: ಓ ಗ್ರಂಥದವರೇ ನಾವು ಅಲ್ಲಾಹನಲ್ಲೂ, ನಮ್ಮೆಡೆಗೆ ಅವತೀರ್ಣ ಗೊಳಿಸಲಾದ ಗ್ರಂಥದಲ್ಲೂ, ಇದಕ್ಕಿಂತ ಮುಂಚೆ ಅವತೀರ್ಣಗೊಳಿಸಲಾದ ಗ್ರಂಥದಲ್ಲೂ ವಿಶ್ವಾಸಿವಿರಿದ್ದೇವೆ ಎಂಬುದಕ್ಕಾಗಿ ಮತ್ತು ನಿಮ್ಮಲ್ಲಿ ಹೆಚ್ಚಿನವರೂ ಧರ್ಮ ಧಿಕ್ಕಾರಿಗಳಾಗಿರುವುದರಿಂದಲೇ ಹೊರತು ಇನ್ನಾವ ಕಾರಣಕ್ಕಾಗಿ ನೀವು ನಮ್ಮನ್ನು ಆಪಾದಿಸುತ್ತಿರುವಿರಿ.
আৰবী তাফছীৰসমূহ:
قُلْ هَلْ اُنَبِّئُكُمْ بِشَرٍّ مِّنْ ذٰلِكَ مَثُوْبَةً عِنْدَ اللّٰهِ ؕ— مَنْ لَّعَنَهُ اللّٰهُ وَغَضِبَ عَلَیْهِ وَجَعَلَ مِنْهُمُ الْقِرَدَةَ وَالْخَنَازِیْرَ وَعَبَدَ الطَّاغُوْتَ ؕ— اُولٰٓىِٕكَ شَرٌّ مَّكَانًا وَّاَضَلُّ عَنْ سَوَآءِ السَّبِیْلِ ۟
ಹೇಳಿರಿ: ಅಲ್ಲಾಹನ ಬಳಿ ಅದಕ್ಕಿಂತಲು ಹೆಚ್ಚು ನಿಕೃಷ್ಟ ಪ್ರತಿಫಲವಿರುವವರು ಯಾರೆಂದು ನಾನು ನಿಮಗೆ ತಿಳಿಸಿಕೊಡಲೇ? ಯಾರನ್ನು ಅಲ್ಲಾಹನು ಶಪಿಸಿರುವನೋ, ಯಾರ ಮೇಲೆ ಅವನು ಕುಪಿತನಾಗಿರುವನೋ, ಮತ್ತು ಅವರ ಪೈಕಿ ಅವನು ಕಪಿಗಳನ್ನಾಗಿಯೂ, ಹಂದಿಗಳನ್ನಾಗಿಯೂ ಮಾಡಿರುವನೋ, ಯಾವ ಜನರು ಮಿಥ್ಯಾರಾಧ್ಯರುಗಳನ್ನು ಆರಾಧಿಸಿದರೋ ಅವರೇ ಅತ್ಯಂತ ನಿಕೃಷ್ಟ ಸ್ಥಾನದಲ್ಲಿರುವವರು ಮತ್ತು ನೇರ ಮಾರ್ಗದಿಂದ ಅತ್ಯಧಿಕವಾಗಿ ವ್ಯತಿಚಲಿಸಿದವರಾಗಿದ್ದಾರೆ.
আৰবী তাফছীৰসমূহ:
وَاِذَا جَآءُوْكُمْ قَالُوْۤا اٰمَنَّا وَقَدْ دَّخَلُوْا بِالْكُفْرِ وَهُمْ قَدْ خَرَجُوْا بِهٖ ؕ— وَاللّٰهُ اَعْلَمُ بِمَا كَانُوْا یَكْتُمُوْنَ ۟
ಕಪಟಿಗಳು ನಿಮ್ಮ ಬಳಿಗೆ ಬರುವಾಗ ಅವರು ಹೇಳುವರು: ನಾವು ವಿಶ್ವಾಸವಿರಿಸಿದ್ದೇವೆ. ವಾಸ್ತವದಲ್ಲಿ ಅವರು ಸತ್ಯನಿಷೇಧದೊಂದಿಗೆ ಬಂದಿದ್ದರು. ಸತ್ಯನಿಷೇಧದೊಂದಿಗೇ ಹಿಂದಿರುಗಿದರು ಮತ್ತು ಅವರು ಮರೆಮಾಚುತ್ತಿರುವುದರ ಕುರಿತು ಅಲ್ಲಾಹನು ಚೆನ್ನಾಗಿ ಅರಿಯುವವನಾಗಿದ್ದಾನೆ.
আৰবী তাফছীৰসমূহ:
وَتَرٰی كَثِیْرًا مِّنْهُمْ یُسَارِعُوْنَ فِی الْاِثْمِ وَالْعُدْوَانِ وَاَكْلِهِمُ السُّحْتَ ؕ— لَبِئْسَ مَا كَانُوْا یَعْمَلُوْنَ ۟
ಅವರಲ್ಲಿ ಹೆಚ್ಚಿನವರು ಪಾಪ ಕೃತ್ಯಗಳ ಕಡೆಗೆ, ಅತಿಕ್ರಮಗಳ ಕಡೆಗೆ, ನಿಷಿದ್ಧ ಸಂಪಾದನೆಯನ್ನು ತಿನ್ನುವುದರ ಕಡೆಗೆ ಧಾವಿಸಿ ಹೋಗುತ್ತಿರುವುದಾಗಿ ನೀವು ಕಾಣುವಿರಿ. ಅವರು ಮಾಡುತ್ತಿರುವುದೆಲ್ಲವೂ ನೀಚ ಕೃತ್ಯಗಳಾಗಿವೆ.
আৰবী তাফছীৰসমূহ:
لَوْلَا یَنْهٰىهُمُ الرَّبّٰنِیُّوْنَ وَالْاَحْبَارُ عَنْ قَوْلِهِمُ الْاِثْمَ وَاَكْلِهِمُ السُّحْتَ ؕ— لَبِئْسَ مَا كَانُوْا یَصْنَعُوْنَ ۟
ಅವರು ಪಾಪಕರ ಮಾತುಗಳನ್ನು ಆಡುವುದರಿಂದಲೂ ಮತ್ತು ನಿಷಿದ್ದವಾದ ಸಂಪಾದನೆಯನ್ನು ತಿನ್ನುವುದರಿಂದಲೂ ಸಜ್ಜನರು ಮತ್ತು ವಿದ್ವಾಂಸರು ಅವರನ್ನು ತಡೆಯದಿದ್ದುದೇಕೆ? ನಿಸ್ಸಂಶಯವಾಗಿಯು ಅವರು ಮಾಡುತ್ತಿರುವುದು ಬಹಳ ಕೆಟ್ಟದ್ದಾಗಿದೆ.
আৰবী তাফছীৰসমূহ:
وَقَالَتِ الْیَهُوْدُ یَدُ اللّٰهِ مَغْلُوْلَةٌ ؕ— غُلَّتْ اَیْدِیْهِمْ وَلُعِنُوْا بِمَا قَالُوْا ۘ— بَلْ یَدٰهُ مَبْسُوْطَتٰنِ ۙ— یُنْفِقُ كَیْفَ یَشَآءُ ؕ— وَلَیَزِیْدَنَّ كَثِیْرًا مِّنْهُمْ مَّاۤ اُنْزِلَ اِلَیْكَ مِنْ رَّبِّكَ طُغْیَانًا وَّكُفْرًا ؕ— وَاَلْقَیْنَا بَیْنَهُمُ الْعَدَاوَةَ وَالْبَغْضَآءَ اِلٰی یَوْمِ الْقِیٰمَةِ ؕ— كُلَّمَاۤ اَوْقَدُوْا نَارًا لِّلْحَرْبِ اَطْفَاَهَا اللّٰهُ ۙ— وَیَسْعَوْنَ فِی الْاَرْضِ فَسَادًا ؕ— وَاللّٰهُ لَا یُحِبُّ الْمُفْسِدِیْنَ ۟
ಅಲ್ಲಾಹನ ಕೈಗಳು ಬಿಗಿಯಲ್ಪಟ್ಟಿವೆ ಎಂದು ಯಹೂದರು ಹೇಳುತ್ತಾರೆ ಅವರದೇ ಕೈಗಳು ಬಿಗಿಯಲ್ಪಟ್ಟಿವೆ (ಜಿಪುಣತನದಿಂದ) ಮತ್ತು ಅವರ ಈ ಮಾತಿನ ನಿಮಿತ್ತ ಅವರ ಮೇಲೆ ಶಾಪ ಎರಗಿದೆ. ಹಾಗಲ್ಲ, ಅಲ್ಲಾಹನ ಎರಡೂ ಕೈಗಳು ವಿಶಾಲವಾಗಿ ತೆರೆದುಕೊಂಡಿವೆ. ಅವನು ಇಚ್ಛಿಸುವುದನ್ನು ಖರ್ಚು ಮಾಡುತ್ತಾನೆ ಮತ್ತು (ಓ ಪೈಗಂಬರರೇ) ನಿಮ್ಮೆಡೆಗೆ ನಿಮ್ಮ ಪ್ರಭುವಿನ ವತಿಯಿಂದ ಅವತೀರ್ಣಗೊಳ್ಳುತ್ತಿರುವುದು (ಕುರ್‌ಆನ್) ಅವರ ಪೈಕಿ ಹೆಚ್ಚಿನವರ ಧಿಕ್ಕಾರ ಮತ್ತು ನಿಷೇಧವನ್ನು ಹೆಚ್ಚಿಸುತ್ತದೆ. ಮತ್ತು ನಾವು ಅವರ ನಡುವೆ ಪುನರುತ್ಥಾನದ ದಿನದವರೆಗೆ ಶತ್ರುತ್ವ ಮತ್ತು ವಿದ್ವೇಷವನ್ನು ಹಾಕಿಬಿಟ್ಟಿರುತ್ತೇವೆ. ಅವರು ಯುದ್ಧಾಗ್ನಿಯನ್ನು ಹೆಚ್ಚಿಸಲು ಇಚ್ಛಿಸುವಾಗಲೆಲ್ಲಾ ಅಲ್ಲಾಹನು ಅದನ್ನು ನಂದಿಸಿ ಬಿಡುತ್ತಾನೆ. ಅವರು ನಾಡಿನಲ್ಲಿ ಕ್ಷೆÆÃಭೆ ಹರಡುತ್ತಾರೆ ಮತ್ತು ಅಲ್ಲಾಹನು ಕ್ಷೆÆÃಭೆಗಾರರನ್ನು ಮೆಚ್ಚುವುದಿಲ್ಲ.
আৰবী তাফছীৰসমূহ:
وَلَوْ اَنَّ اَهْلَ الْكِتٰبِ اٰمَنُوْا وَاتَّقَوْا لَكَفَّرْنَا عَنْهُمْ سَیِّاٰتِهِمْ وَلَاَدْخَلْنٰهُمْ جَنّٰتِ النَّعِیْمِ ۟
ಗ್ರಂಥದವರು ವಿಶ್ವಾಸವಿಟ್ಟಿದ್ದರೆ ಮತ್ತು ಭಯಭಕ್ತಿ ಪಾಲಿಸಿದ್ದರೆ ನಾವು ಅವರ ಸಕಲ ಪಾಪಗಳನ್ನು ಮನ್ನಿಸಿ ಬಿಡುತ್ತಿದ್ದೆವು ಮತ್ತು ಅನುಗ್ರಹಪೂರ್ಣವಾದ ಸ್ವರ್ಗೋದ್ಯಾನಗಳಿಗೆ ಅವರನ್ನು ಕೊಂಡೊಯ್ಯುತ್ತಿದ್ದೆವು
আৰবী তাফছীৰসমূহ:
وَلَوْ اَنَّهُمْ اَقَامُوا التَّوْرٰىةَ وَالْاِنْجِیْلَ وَمَاۤ اُنْزِلَ اِلَیْهِمْ مِّنْ رَّبِّهِمْ لَاَكَلُوْا مِنْ فَوْقِهِمْ وَمِنْ تَحْتِ اَرْجُلِهِمْ ؕ— مِنْهُمْ اُمَّةٌ مُّقْتَصِدَةٌ ؕ— وَكَثِیْرٌ مِّنْهُمْ سَآءَ مَا یَعْمَلُوْنَ ۟۠
ಅವರು ತೌರಾತ್, ಇಂಜೀಲ್ ಮತ್ತು ಅವರ ಪ್ರಭುವಿನ ವತಿಯಿಂದ ಅವರೆಡೆಗೆ ಅವತೀರ್ಣಗೊಳಿಸಲಾದ ಕುರ್‌ಆನನ್ನು ಅನುಸರಿಸುತ್ತಿದ್ದರೆ ಅವರು ತಮ್ಮ ಮೇಲ್ಗಡೆಯಿಂದಲೂ, ಕಾಲಡಿಯಿಂದಲೂ ಅನ್ನಾಧಾರವನ್ನು ಪಡೆಯುತ್ತಿದ್ದರು ಮತ್ತು ತಿನ್ನುತ್ತಿದ್ದರು. ಅವರ ಪೈಕಿ ಒಂದು ಗುಂಪು ಮದ್ಯಮ ನಿಲುವಿನದ್ದಾಗಿದೆ ಮತ್ತು ಅವರ ಪೈಕಿಯ ಹೆಚ್ಚಿನವರು ದುಷ್ಕೃತ್ಯಗಳನ್ನೆಸಗುತ್ತಿದ್ದಾರೆ.
আৰবী তাফছীৰসমূহ:
یٰۤاَیُّهَا الرَّسُوْلُ بَلِّغْ مَاۤ اُنْزِلَ اِلَیْكَ مِنْ رَّبِّكَ ؕ— وَاِنْ لَّمْ تَفْعَلْ فَمَا بَلَّغْتَ رِسَالَتَهٗ ؕ— وَاللّٰهُ یَعْصِمُكَ مِنَ النَّاسِ ؕ— اِنَّ اللّٰهَ لَا یَهْدِی الْقَوْمَ الْكٰفِرِیْنَ ۟
ಓ ಸಂದೇಶವಾಹಕರೇ, ನಿಮ್ಮ ಪ್ರಭುವಿನ ಕಡೆಯಿಂದ ನಿಮ್ಮೆಡೆಗೆ ಅವತೀರ್ಣಗೊಳಿಸಲಾಗುತ್ತಿರುವುದನ್ನು ಜನರಿಗೆ ತಲುಪಿಸಿರಿ. ಇನ್ನು ನೀವು ಹಾಗೆ ಮಾಡದಿದ್ದರೆ ನೀವು ಅಲ್ಲಾಹನ ದೌತ್ಯವನ್ನು ಈಡೇರಿಸಿಲ್ಲ ಮತ್ತು ನಿಮ್ಮನ್ನು ಅಲ್ಲಾಹನು ಜನರ ಕುತಂತ್ರಗಳಿAದ ರಕ್ಷಿಸುವನು. ನಿಸ್ಸಂಶಯವಾಗಿಯು ಅಲ್ಲಾಹನು ಸತ್ಯನಿಷೇಧಿಗಳಾದ ಜನರಿಗೆ ಸನ್ಮಾರ್ಗವನ್ನು ನೀಡುವುದಿಲ್ಲ.
আৰবী তাফছীৰসমূহ:
قُلْ یٰۤاَهْلَ الْكِتٰبِ لَسْتُمْ عَلٰی شَیْءٍ حَتّٰی تُقِیْمُوا التَّوْرٰىةَ وَالْاِنْجِیْلَ وَمَاۤ اُنْزِلَ اِلَیْكُمْ مِّنْ رَّبِّكُمْ ؕ— وَلَیَزِیْدَنَّ كَثِیْرًا مِّنْهُمْ مَّاۤ اُنْزِلَ اِلَیْكَ مِنْ رَّبِّكَ طُغْیَانًا وَّكُفْرًا ۚ— فَلَا تَاْسَ عَلَی الْقَوْمِ الْكٰفِرِیْنَ ۟
ಹೇಳಿರಿ: ಓ ಗ್ರಂಥದವರೇ, ತೌರಾತ್, ಇಂಜೀಲ್ ಮತ್ತು ಈಗ ನಿಮ್ಮೆಡೆಗೆ ನಿಮ್ಮ ಪ್ರಭುವಿನ ವತಿಯಿಂದ ಅವತೀರ್ಣಗೊಳ್ಳುತ್ತಿರುವುದನ್ನು (ಕುರ್‌ಆನ್) ಸ್ಥಾಪಿಸುವವರೆಗೆ ನೀವು ಯಾವುದೇ ಆಧಾರದಲ್ಲಿಲ್ಲ ಮತ್ತು ನಿಮ್ಮೆಡೆಗೆ ನಿಮ್ಮ ಪ್ರಭುವಿನ ವತಿಯಿಂದ ಅವತೀರ್ಣಗೊಳ್ಳುತಿರುವುದು ಅವರ ಪೈಕಿ ಹೆಚ್ಚಿನವರ ಧಿಕ್ಕಾರ ಮತ್ತು ನಿಷೇಧವನ್ನು ಹೆಚ್ಚಿಸುತ್ತದೆ. ಅದ್ದರಿಂದ ಸತ್ಯನಿಷೇಧಿಗಳ ಮೇಲೆ ನೀವು ದುಃಖಿಸಬೇಡಿರಿ.
আৰবী তাফছীৰসমূহ:
اِنَّ الَّذِیْنَ اٰمَنُوْا وَالَّذِیْنَ هَادُوْا وَالصّٰبِـُٔوْنَ وَالنَّصٰرٰی مَنْ اٰمَنَ بِاللّٰهِ وَالْیَوْمِ الْاٰخِرِ وَعَمِلَ صَالِحًا فَلَا خَوْفٌ عَلَیْهِمْ وَلَا هُمْ یَحْزَنُوْنَ ۟
ಸತ್ಯವಿಶ್ವಾಸಿಗಳು, ಯಹೂದರು, ಸಾಬಿಗಳು (ನಕ್ಷತ್ರಾರಾಧಕರು), ಕ್ರೆöÊಸ್ತರು ಯಾರೆ ಆಗಿರಲಿ ಅಲ್ಲಾಹನಲ್ಲೂ, ಅಂತ್ಯ ದಿನದಲ್ಲೂ ವಿಶ್ವಾಸವಿಡುತ್ತಾರೋ ಮತ್ತು ಸತ್ಕರ್ಮಗಳನ್ನು ಮಾಡುತ್ತಾರೋ ಅವರಿಗೆ ಯಾವ ಭಯವಿಲ್ಲ. ಮತ್ತು ಅವರು ದುಃಖಿಸಬೇಕಾಗಿಯೂ ಇಲ್ಲ.
আৰবী তাফছীৰসমূহ:
لَقَدْ اَخَذْنَا مِیْثَاقَ بَنِیْۤ اِسْرَآءِیْلَ وَاَرْسَلْنَاۤ اِلَیْهِمْ رُسُلًا ؕ— كُلَّمَا جَآءَهُمْ رَسُوْلٌۢ بِمَا لَا تَهْوٰۤی اَنْفُسُهُمْ ۙ— فَرِیْقًا كَذَّبُوْا وَفَرِیْقًا یَّقْتُلُوْنَ ۟ۗ
ನಾವು ಇಸ್ರಾಯೀಲ್ ಸಂತತಿಗಳಿAದ ಕರಾರನ್ನು ಪಡೆದೆವು ಮತ್ತು ಅವರ ಕಡೆಗೆ ಸಂದೇಶವಾಹಕರನ್ನು ನಿಯೋಗಿಸಿದೆವು. ಸಂದೇಶವಾಹಕರು ಅವರ ಸ್ವೇಚ್ಛೆಗೆ ವಿರುದ್ಧವಾದ ನಿಯಮಗಳೊಂದಿಗೆ ಅವರ ಬಳಿಗೆ ಬಂದಾಗ ಅವರ ಪೈಕಿ ಕೆಲವರನ್ನು ನಿಷೇಧಿಸಿದರು ಮತ್ತು ಕೆಲವರನ್ನು ಕೊಲೆಗೈದರು.
আৰবী তাফছীৰসমূহ:
وَحَسِبُوْۤا اَلَّا تَكُوْنَ فِتْنَةٌ فَعَمُوْا وَصَمُّوْا ثُمَّ تَابَ اللّٰهُ عَلَیْهِمْ ثُمَّ عَمُوْا وَصَمُّوْا كَثِیْرٌ مِّنْهُمْ ؕ— وَاللّٰهُ بَصِیْرٌ بِمَا یَعْمَلُوْنَ ۟
ಮತ್ತು ಅವರು ಯಾವುದೇ ಪರೀಕ್ಷೆ ಉಂಟಾಗದೆAದು ಭಾವಿಸಿದರು. ಆದ್ದರಿಂದ ಅವರು ಅಂಧರೂ, ಕಿವುಡರೂ ಆದರು. ನಂತರ ಅಲ್ಲಾಹನು ಅವರ ಪಶ್ಚಾತ್ತಾಪವನ್ನು ಸ್ವೀಕರಿಸಿದನು. ಬಳಿಕವೂ ಅವರಪೈಕಿ ಹೆಚ್ಚಿನವರು ಅಂಧರೂ, ಕಿವುಡರೂ ಆದರು. ಅಲ್ಲಾಹನು ಅವರು ಮಾಡುತ್ತಿರುವುದನ್ನು ಚೆನ್ನಾಗಿ ವೀಕ್ಷಿಸುವವನಾಗಿದ್ದಾನೆ.
আৰবী তাফছীৰসমূহ:
لَقَدْ كَفَرَ الَّذِیْنَ قَالُوْۤا اِنَّ اللّٰهَ هُوَ الْمَسِیْحُ ابْنُ مَرْیَمَ ؕ— وَقَالَ الْمَسِیْحُ یٰبَنِیْۤ اِسْرَآءِیْلَ اعْبُدُوا اللّٰهَ رَبِّیْ وَرَبَّكُمْ ؕ— اِنَّهٗ مَنْ یُّشْرِكْ بِاللّٰهِ فَقَدْ حَرَّمَ اللّٰهُ عَلَیْهِ الْجَنَّةَ وَمَاْوٰىهُ النَّارُ ؕ— وَمَا لِلظّٰلِمِیْنَ مِنْ اَنْصَارٍ ۟
ಮರ್ಯಮರ ಮಗನಾದ ಮಸೀಹನೇ ಅಲ್ಲಾಹನಾಗಿದ್ದಾನೆ ಎಂದು ಹೇಳಿದವರು ನಿಸ್ಸಂಶಯವಾಗಿಯು ಸತ್ಯನಿಷೇಧಿಗಳಾಗಿದ್ದಾರೆ. ವಸ್ತುತಃ ಸ್ವತಃ ಮಸೀಹರೆ ಅವರೊಂದಿಗೆ ಹೇಳಿದ್ದರು: ಓ ಇಸ್ರಾಯೀಲ್ ಸಂತತಿಗಳೇ, ನನ್ನ ಮತ್ತು ನಿಮ್ಮೆಲ್ಲರ ಪ್ರಭುವಾದ ಅಲ್ಲಾಹನ ಆರಾಧನೆಯನ್ನು ಮಾಡಿರಿ. ಯಾರು ಅಲ್ಲಾಹನೊಂದಿಗೆ ಸಹಭಾಗಿಯನ್ನು ನಿಶ್ಚಯಿಸುತ್ತಾನೋ ಖಂಡಿತವಾಗಿಯು ಅಲ್ಲಾಹನು ಅವನಿಗೆ ಸ್ವರ್ಗವನ್ನು ನಿಷಿದ್ಧಗೊಳಿಸಿದ್ದಾನೆ. ಅವನ ನೆಲೆಯು ನರಕವಾಗಿರುತ್ತದೆ ಮತ್ತು ಪಾಪಿಗಳ ಸಹಾಯಕರಾಗಿ ಯಾರೂ ಇರಲಾರರು.
আৰবী তাফছীৰসমূহ:
لَقَدْ كَفَرَ الَّذِیْنَ قَالُوْۤا اِنَّ اللّٰهَ ثَالِثُ ثَلٰثَةٍ ۘ— وَمَا مِنْ اِلٰهٍ اِلَّاۤ اِلٰهٌ وَّاحِدٌ ؕ— وَاِنْ لَّمْ یَنْتَهُوْا عَمَّا یَقُوْلُوْنَ لَیَمَسَّنَّ الَّذِیْنَ كَفَرُوْا مِنْهُمْ عَذَابٌ اَلِیْمٌ ۟
ಅಲ್ಲಾಹನು ಮೂವರಲ್ಲಿ ಒಬ್ಬನಾಗಿದ್ದಾನೆ ಎಂದು ಹೇಳಿದವರು ಖಂಡಿತವಾಗಿಯು ನಿಷೇಧಿಗಳಾಗಿದ್ದಾರೆ. ವಾಸ್ತವದಲ್ಲಿ ಅಲ್ಲಾಹನ ಹೊರತು ಇನ್ನಾವ ಆರಾಧ್ಯನಿಲ್ಲ. ಅವರ ಪೈಕಿ ಸತ್ಯನಿಷೇಧಿಗಳಾಗಿರುವವರಿಗೆ ವೇದನಾಜನಕವಾದ ಶಿಕ್ಷೆಯು ಖಂಡಿತ ತಲುಪುವುದು.
আৰবী তাফছীৰসমূহ:
اَفَلَا یَتُوْبُوْنَ اِلَی اللّٰهِ وَیَسْتَغْفِرُوْنَهٗ ؕ— وَاللّٰهُ غَفُوْرٌ رَّحِیْمٌ ۟
ಅವರು ಅಲ್ಲಾಹನೆಡೆಗೆ ಮರಳಿ ಅವನೊಂದಿಗೆ ಪಾಪವಿಮೋಚನೆಯನ್ನು ಏಕೆ ಬೇಡುವುದಿಲ್ಲ? ಅಲ್ಲಾಹನು ಅತ್ಯಧಿಕ ಕ್ಷಮಿಸುವವನೂ, ಕರುಣಾನಿಧಿಯೂ ಆಗಿದ್ದಾನೆ.
আৰবী তাফছীৰসমূহ:
مَا الْمَسِیْحُ ابْنُ مَرْیَمَ اِلَّا رَسُوْلٌ ۚ— قَدْ خَلَتْ مِنْ قَبْلِهِ الرُّسُلُ ؕ— وَاُمُّهٗ صِدِّیْقَةٌ ؕ— كَانَا یَاْكُلٰنِ الطَّعَامَ ؕ— اُنْظُرْ كَیْفَ نُبَیِّنُ لَهُمُ الْاٰیٰتِ ثُمَّ انْظُرْ اَنّٰی یُؤْفَكُوْنَ ۟
ಮರ್ಯಮಳ ಮಗನಾದ ಮಸೀಹನು ಸಂದೇಶವಾಹಕನೇ ಹೊರತು ಬೇರೇನೂ ಅಲ್ಲ. ಅವರಿಗಿಂತ ಮುಂಚೆ ಅನೇಕ ಸಂದೇಶವಾಹಕರು ಗತಿಸಿ ಹೋಗಿದ್ದಾರೆ. ಅವರ ತಾಯಿಯು ಓರ್ವ ಸತ್ಯವಂತೆಯಾಗಿದ್ದರು. ಅವರಿಬ್ಬರೂ ಆಹಾರವನ್ನು ಸೇವಿಸುತ್ತಿದ್ದರು. ನಾವು ಅವರ ಮುಂದೆ ಯಾವ ರೀತಿಯಲ್ಲಿ ದೃಷ್ಟಾಂತಗಳನ್ನು ವಿವರಿಸುತ್ತಿದ್ದೇವೆಂದು ನೋಡಿರಿ ಅವರು ಯಾವ ರೀತಿ ಅಲೆದಾಡುತ್ತಿದ್ದಾರೆಂದು ನೋಡಿರಿ.
আৰবী তাফছীৰসমূহ:
قُلْ اَتَعْبُدُوْنَ مِنْ دُوْنِ اللّٰهِ مَا لَا یَمْلِكُ لَكُمْ ضَرًّا وَّلَا نَفْعًا ؕ— وَاللّٰهُ هُوَ السَّمِیْعُ الْعَلِیْمُ ۟
(ಪೈಗಂಬರರೇ ಹೇಳಿರಿ:) ನಿಮಗೆ ಯಾವುದೇ ಲಾಭ ಅಥವಾ ಹಾನಿಯನ್ನುಂಟು ಮಾಡುವ ಅಧಿಕಾರವಿಲ್ಲದವರನ್ನು ನೀವು ಅಲ್ಲಾಹನ ಹೊರತು ಅರಾಧಿಸುತ್ತಿರುವಿರಾ? ಅಲ್ಲಾಹನೇ ಸರ್ವವನ್ನು, ಆಲಿಸುವವನೂ, ಸಂಪೂರ್ಣವಾಗಿ ಅರಿಯುವವನೂ ಆಗಿದ್ದಾನೆ.
আৰবী তাফছীৰসমূহ:
قُلْ یٰۤاَهْلَ الْكِتٰبِ لَا تَغْلُوْا فِیْ دِیْنِكُمْ غَیْرَ الْحَقِّ وَلَا تَتَّبِعُوْۤا اَهْوَآءَ قَوْمٍ قَدْ ضَلُّوْا مِنْ قَبْلُ وَاَضَلُّوْا كَثِیْرًا وَّضَلُّوْا عَنْ سَوَآءِ السَّبِیْلِ ۟۠
ಹೇಳಿರಿ: ಗ್ರಂಥದವರೇ, ನೀವು ತಮ್ಮ ಧರ್ಮದ ವಿಚಾರದಲ್ಲಿ ಅನ್ಯಾಯವಾಗಿ ಹದ್ದುಮೀರದಿರಿ. ಮತ್ತು ಅತಿಕ್ರಮ ಮಾಡಬೇಡಿರಿ. ಮೊದಲಿನಿಂದಲೇ ದಾರಿಗೆಟ್ಟು, ಅನೇಕ ಜನರನ್ನು ದಾರಿಗೆಡಿಸಿ ಬಿಟ್ಟಂತಹ, ಮತ್ತು ರುಜು ಮಾರ್ಗದಿಂದ ಭ್ರಷ್ಟರಾದಂತಹ ಜನರ ಸ್ವೇಚ್ಛೆಗಳನ್ನು ನೀವು ಅನುಸರಿಸಬೇಡಿರಿ.
আৰবী তাফছীৰসমূহ:
لُعِنَ الَّذِیْنَ كَفَرُوْا مِنْ بَنِیْۤ اِسْرَآءِیْلَ عَلٰی لِسَانِ دَاوٗدَ وَعِیْسَی ابْنِ مَرْیَمَ ؕ— ذٰلِكَ بِمَا عَصَوْا وَّكَانُوْا یَعْتَدُوْنَ ۟
ಇಸ್ರಾಯೀಲ್ ಸಂತತಿಗಳಲ್ಲಿ ಸತ್ಯನಿಷೇಧಿಸಿದವರು. ದಾವೂದ್ ಮತ್ತು ಮರ್ಯಮರ ಮಗನಾದ ಈಸಾರ ನಾಲಗೆಯಿಂದ ಶಪಿಸಲ್ಪಟ್ಟರು. ಇದು ಅವರು ಧಿಕ್ಕಾರವನ್ನು ತೋರಿದ್ದರಿಂದಲು ಅತಿಕ್ರಮವನ್ನು ಕೈಗೊಂಡದ್ದರಿAದಲೂ ಆಗಿದೆ.
আৰবী তাফছীৰসমূহ:
كَانُوْا لَا یَتَنَاهَوْنَ عَنْ مُّنْكَرٍ فَعَلُوْهُ ؕ— لَبِئْسَ مَا كَانُوْا یَفْعَلُوْنَ ۟
ಅವರು ಮಾಡುತ್ತಿದ್ದ ದುಷ್ಕೃತ್ಯಗಳಿಂದ ಅವರು ಪರಸ್ಪರ ತಡೆಯುತ್ತಿರಲಿಲ್ಲ. ಅವರು ಮಾಡುತ್ತಿದ್ದುದ್ದೆಲ್ಲವೂ ಅತೀ ನಿಕೃಷ್ಟವಾಗಿತ್ತು.
আৰবী তাফছীৰসমূহ:
تَرٰی كَثِیْرًا مِّنْهُمْ یَتَوَلَّوْنَ الَّذِیْنَ كَفَرُوْا ؕ— لَبِئْسَ مَا قَدَّمَتْ لَهُمْ اَنْفُسُهُمْ اَنْ سَخِطَ اللّٰهُ عَلَیْهِمْ وَفِی الْعَذَابِ هُمْ خٰلِدُوْنَ ۟
ಅವರಲ್ಲಿ ಹೆಚ್ಚಿನವರು ಸತ್ಯನಿಷೇಧಿಗಳನ್ನು ಆಪ್ತಮಿತ್ರರನ್ನಾಗಿ ಮಾಡಿಕೊಳ್ಳುವುದನ್ನು ನೀವು ಕಾಣುವಿರಿ. ಅವರು ಸ್ವತಃ ತಮಗಾಗಿ ಮೊದಲೇ ಕಳುಹಿಸಿರುವಂತಹದು ಅತ್ಯಂತ ನಿಕೃಷ್ಟವಾಗಿದೆ. ಆದುದರಿಂದ ಅಲ್ಲಾಹನು ಅವರ ಮೇಲೆ ಕೋಪಗೊಂಡಿರುವನು. ಮತ್ತು ಶಿಕ್ಷೆಯಲ್ಲಿ ಅವರು ಶಾಶ್ವತವಾಗಿರುವರು.
আৰবী তাফছীৰসমূহ:
وَلَوْ كَانُوْا یُؤْمِنُوْنَ بِاللّٰهِ وَالنَّبِیِّ وَمَاۤ اُنْزِلَ اِلَیْهِ مَا اتَّخَذُوْهُمْ اَوْلِیَآءَ وَلٰكِنَّ كَثِیْرًا مِّنْهُمْ فٰسِقُوْنَ ۟
ಅವರು ಅಲ್ಲ್ಲಾಹನಲ್ಲೂ ಪೈಗಂಬರರಲ್ಲೂ, ಪೈಗಂಬರರ ಮೆಲೆ ಅವತೀರ್ಣಗೊಂಡಿರುವುದರಲ್ಲೂ ವಿಶ್ವಾಸವಿರಿಸುತ್ತಿದ್ದರೆ ಅವರು ಸತ್ಯನಿಷೇಧಿಗಳನ್ನು ಅಪ್ತ ಮಿತ್ರರನ್ನಾಗಿ ಮಾಡಿಕೊಳ್ಳುತ್ತಿರಲಿಲ್ಲ. ಆದರೆ ಅವರ ಪೈಕಿ ಹೆಚ್ಚಿನವರು ಧಿಕ್ಕಾರಿಗಳಾಗಿದ್ದಾರೆ.
আৰবী তাফছীৰসমূহ:
لَتَجِدَنَّ اَشَدَّ النَّاسِ عَدَاوَةً لِّلَّذِیْنَ اٰمَنُوا الْیَهُوْدَ وَالَّذِیْنَ اَشْرَكُوْا ۚ— وَلَتَجِدَنَّ اَقْرَبَهُمْ مَّوَدَّةً لِّلَّذِیْنَ اٰمَنُوا الَّذِیْنَ قَالُوْۤا اِنَّا نَصٰرٰی ؕ— ذٰلِكَ بِاَنَّ مِنْهُمْ قِسِّیْسِیْنَ وَرُهْبَانًا وَّاَنَّهُمْ لَا یَسْتَكْبِرُوْنَ ۟
ಖಂಡಿತವಾಗಿಯು ನೀವು ಸತ್ಯವಿಶ್ವಾಸಿಗಳ ಪರಮ ಶತ್ರುಗಳನ್ನಾಗಿ ಯಹೂದರನ್ನೂ, ಬಹುದೇವಾರಾಧಕರನ್ನೂ ಕಾಣುವಿರಿ. ಮತ್ತು ತಮ್ಮನ್ನು ಕ್ರೆöÊಸ್ತರೆಂದು ಹೇಳುವವರನ್ನು ಸತ್ಯವಿಶ್ವಾಸಿಗಳೊಂದಿಗೆ ಎಲ್ಲರಿಗಿಂತ ಹೆಚ್ಚು ಮಿತ್ರತ್ವಕ್ಕೆ ಹತ್ತಿರವಿರುವುದಾಗಿ ಕಾಣುವಿರಿ. ಇದು ಅವರಲ್ಲಿ ವಿದ್ವಾಂಸರು ಮತ್ತು ಸನ್ಯಾಸಿಗಳಿರುವರು ಹಾಗೂ ಅವರು ಅಹಂಭಾವ ತೋರುವುದಿಲ್ಲವೆಂಬುದೇ ಇದಕ್ಕೆ ಕಾರಣವಾಗಿದೆ.
আৰবী তাফছীৰসমূহ:
وَاِذَا سَمِعُوْا مَاۤ اُنْزِلَ اِلَی الرَّسُوْلِ تَرٰۤی اَعْیُنَهُمْ تَفِیْضُ مِنَ الدَّمْعِ مِمَّا عَرَفُوْا مِنَ الْحَقِّ ۚ— یَقُوْلُوْنَ رَبَّنَاۤ اٰمَنَّا فَاكْتُبْنَا مَعَ الشّٰهِدِیْنَ ۟
ಮತ್ತು ಅವರು (ಭಕ್ತಿಯುಳ್ಳ ಕ್ರೆöÊಸ್ತರು) ಸಂದೇಶವಾಹಕರಿಗೆ ಅವತೀರ್ಣಗೊಳಿಸಲಾದುದನ್ನು ಆಲಿಸಿಕೊಂಡರೆ ಸತ್ಯವನ್ನು ಗ್ರಹಿಸಿದುದರ ಕಾರಣ ಅವರು ಕಣ್ಣುಗಳಿಂದ ಕಣ್ಣೀರು ಹರಿಯುವುದನ್ನು ನೀವು ಕಾಣುವಿರಿ. ಅವರು ಹೇಳುವರು: ಓ ನಮ್ಮ ಪ್ರಭೂ, ನಾವು ವಿಶ್ವಾಸವಿಟ್ಟಿದ್ದೇವೆ. ಆದ್ದರಿಂದ ಸತ್ಯಕ್ಕೆ ಸಾಕ್ಷö್ಯ ನೀಡುವವರೊಂದಿಗೆ ನಮ್ಮನ್ನೂ ದಾಖಲಿಸು.
আৰবী তাফছীৰসমূহ:
وَمَا لَنَا لَا نُؤْمِنُ بِاللّٰهِ وَمَا جَآءَنَا مِنَ الْحَقِّ ۙ— وَنَطْمَعُ اَنْ یُّدْخِلَنَا رَبُّنَا مَعَ الْقَوْمِ الصّٰلِحِیْنَ ۟
ನಮ್ಮ ಪ್ರಭು ನಮ್ಮನ್ನು ಸಜ್ಜನರೊಂದಿಗೆ ಸೇರಿಸುವವನೆಂದು ನಿರೀಕ್ಷಿಸುತ್ತಿರುವಾಗ ನಾವು ಅಲ್ಲಾಹನಲ್ಲೂ, ನಮಗೆ ಬಂದು ತಲುಪಿದ ಸತ್ಯದಲ್ಲೂ ವಿಶ್ವಾಸವಿಡದಿರಲು ನಮಗೇನು ನೆಪವಿದೆ?
আৰবী তাফছীৰসমূহ:
فَاَثَابَهُمُ اللّٰهُ بِمَا قَالُوْا جَنّٰتٍ تَجْرِیْ مِنْ تَحْتِهَا الْاَنْهٰرُ خٰلِدِیْنَ فِیْهَا ؕ— وَذٰلِكَ جَزَآءُ الْمُحْسِنِیْنَ ۟
ಆದ್ದರಿಂದ ಅವರ ಈ ಮಾತಿನ ನಿಮಿತ್ತ ಅಲ್ಲಾಹನು ಅವರಿಗೆ ತಳಬಾಗದಲ್ಲಿ ಕಾಲುವೆಗಳು ಹರಿಯುತ್ತಿರುವ ಸ್ವರ್ಗೋದ್ಯಾನವನ್ನು ದಯಪಾಲಿಸಿದನು. ಅವರು ಅದರಲ್ಲಿ ಶಾಶ್ವತವಾಗಿರುವರು ಮತ್ತು ಸತ್ಕರ್ಮಿಗಳಿಗಿರುವ ಪ್ರತಿಫಲ ಇದುವೇ ಆಗಿದೆ.
আৰবী তাফছীৰসমূহ:
وَالَّذِیْنَ كَفَرُوْا وَكَذَّبُوْا بِاٰیٰتِنَاۤ اُولٰٓىِٕكَ اَصْحٰبُ الْجَحِیْمِ ۟۠
ಮತ್ತು ಯಾರು ಸತ್ಯವನ್ನು ನಿಷೇಧಿಸುತ್ತಾರೋ ಮತ್ತು ನಮ್ಮ ದೃಷ್ಟಾಂತಗಳನ್ನು ಸುಳ್ಳಾಗಿಸಿದರೋ ಅವರೇ ನರಕವಾಸಿಗಳಾಗಿದ್ದಾರೆ.
আৰবী তাফছীৰসমূহ:
یٰۤاَیُّهَا الَّذِیْنَ اٰمَنُوْا لَا تُحَرِّمُوْا طَیِّبٰتِ مَاۤ اَحَلَّ اللّٰهُ لَكُمْ وَلَا تَعْتَدُوْا ؕ— اِنَّ اللّٰهَ لَا یُحِبُّ الْمُعْتَدِیْنَ ۟
ಓ ಸತ್ಯವಿಶ್ವಾಸಿಗಳೆ, ಅಲ್ಲಾಹನು ನಿಮಗೆ ಧರ್ಮಸಮ್ಮತಗೊಳಿಸಿದ ಶುದ್ಧ ವಸ್ತುಗಳನ್ನು ನೀವು ನಿಷಿದ್ಧಗೊಳಿಸಬೇಡಿರಿ. ಮತ್ತು ಹದ್ದು ಮೀರಬೇಡಿರಿ. ನಿಸ್ಸಂಶಯವಾಗಿಯು ಅಲ್ಲಾಹನು ಹದ್ದು ಮೀರುವವರನ್ನು ಇಷ್ಟಪಡುವುದಿಲ್ಲ.
আৰবী তাফছীৰসমূহ:
وَكُلُوْا مِمَّا رَزَقَكُمُ اللّٰهُ حَلٰلًا طَیِّبًا ۪— وَّاتَّقُوا اللّٰهَ الَّذِیْۤ اَنْتُمْ بِهٖ مُؤْمِنُوْنَ ۟
ಅಲ್ಲಾಹನು ನಿಮಗೆ ನೀಡಿದವುಗಳಿಂದ ಧರ್ಮ ಸಮ್ಮತ ಮತ್ತು ಉತ್ತಮ ಆಹಾರಗಳನ್ನು ತಿನ್ನಿರಿ ಮತ್ತು ನೀವು ವಿಶ್ವಾಸವಿಟ್ಟ ಆ ಅಲ್ಲಾಹುನನ್ನು ಭಯಪಡಿರಿ.
আৰবী তাফছীৰসমূহ:
لَا یُؤَاخِذُكُمُ اللّٰهُ بِاللَّغْوِ فِیْۤ اَیْمَانِكُمْ وَلٰكِنْ یُّؤَاخِذُكُمْ بِمَا عَقَّدْتُّمُ الْاَیْمَانَ ۚ— فَكَفَّارَتُهٗۤ اِطْعَامُ عَشَرَةِ مَسٰكِیْنَ مِنْ اَوْسَطِ مَا تُطْعِمُوْنَ اَهْلِیْكُمْ اَوْ كِسْوَتُهُمْ اَوْ تَحْرِیْرُ رَقَبَةٍ ؕ— فَمَنْ لَّمْ یَجِدْ فَصِیَامُ ثَلٰثَةِ اَیَّامٍ ؕ— ذٰلِكَ كَفَّارَةُ اَیْمَانِكُمْ اِذَا حَلَفْتُمْ ؕ— وَاحْفَظُوْۤا اَیْمَانَكُمْ ؕ— كَذٰلِكَ یُبَیِّنُ اللّٰهُ لَكُمْ اٰیٰتِهٖ لَعَلَّكُمْ تَشْكُرُوْنَ ۟
ಉದ್ದೇಶಪೂರ್ವಕವಲ್ಲದ ನಿಮ್ಮ ಶಪಥಗಳ ನಿಮಿತ್ತ ಅಲ್ಲಾಹನು ನಿಮ್ಮನ್ನು ಹಿಡಿಯವುದಿಲ್ಲ. ಆದರೆ ನೀವು ಉದ್ದೇಶಪೂರ್ವಕವಾಗಿ ಮಾಡುವ ಶಪಥಗಳ ಕುರಿತು ಅವನು ಅಗತ್ಯವಾಗಿ ವಿಚಾರಣೆ ನಡೆಸುವನು. ಈ ಶಪಥಗಳನ್ನು ಮುರಿಯುವವರಿಗೆ ಪ್ರಾಯಶ್ಚಿತ್ತವೇನೆಂದರೆ ನೀವು ನಿಮ್ಮ ಮನೆಯವರಿಗೆ ನೀಡುವ ಮಧ್ಯಮ ದರ್ಜೆಯ ಆಹಾರದಿಂದ ಹತ್ತು ಮಂದಿ ಬಡವರಿಗೆ ಉಣಿಸುವುದು. ಅಥವಾ ಅವರಿಗೆ ಉಡುಪನ್ನು ನೀಡುವುದು. ಅಥವಾ ಓರ್ವ ಗುಲಾಮನನ್ನು ವಿಮೋಸಚನೆಗೊಳಿಸುವುದಾಗಿದೆ. ಮತ್ತು ಸಾಮರ್ಥ್ಯವಿಲ್ಲದವನು ಮೂರು ದಿನ ಉಪವಾಸ ಆಚರಿಸಬೇಕಾಗಿದೆ. ಇದು ನೀವು ಶಪಥಗಳ ಉಲ್ಲಂಘನೆ ಮಾಡಿರುವುದರ ಪ್ರಾಯಶ್ಚಿತ್ತವಾಗಿದೆ ಆದ್ದರಿಂದ ನೀವು ನಿಮ್ಮ ಶಪಥಗಳ ಬಗ್ಗೆ ಎಚ್ಚರವಹಿಸಿರಿ. ಇದೇ ಪ್ರಕಾರ ಅಲ್ಲಾಹನು ತನ್ನ ನಿಯಮಗಳನ್ನು ನಿಮಗೋಸ್ಕರ ವಿವರಿಸಿಕೊಡುತ್ತಿದ್ದಾನೆ. ಇದು ನೀವು ಕೃತಜ್ಞತೆ ತೋರಿಸಲೆಂದಾಗಿದೆ.
আৰবী তাফছীৰসমূহ:
یٰۤاَیُّهَا الَّذِیْنَ اٰمَنُوْۤا اِنَّمَا الْخَمْرُ وَالْمَیْسِرُ وَالْاَنْصَابُ وَالْاَزْلَامُ رِجْسٌ مِّنْ عَمَلِ الشَّیْطٰنِ فَاجْتَنِبُوْهُ لَعَلَّكُمْ تُفْلِحُوْنَ ۟
ಓ ಸತ್ಯವಿಶ್ವಾಸಿಗಳೇ, ಖಂಡಿತವಾಗಿಯು ಮದ್ಯ, ಜೂಜಟ, ಪ್ರತಿಷ್ಠಾಪಿಸಲಾದ ವಿಗ್ರಹಗಳು ಮತ್ತು ಅದೃಷ್ಟ ನಿರ್ಧರಿಸುವ ಬಾಣಗಳು ಅಶುದ್ಧ ಮತ್ತು ಪೈಶಾಚಿಕ ಕಾರ್ಯಗಳಲ್ಲಾಗಿವೆ. ಇವುಗಳಿಂದ ದೂರವಿರಿ. ನೀವು ಯಶಸ್ಸು ಪಡೆಯಬಹುದು.
আৰবী তাফছীৰসমূহ:
اِنَّمَا یُرِیْدُ الشَّیْطٰنُ اَنْ یُّوْقِعَ بَیْنَكُمُ الْعَدَاوَةَ وَالْبَغْضَآءَ فِی الْخَمْرِ وَالْمَیْسِرِ وَیَصُدَّكُمْ عَنْ ذِكْرِ اللّٰهِ وَعَنِ الصَّلٰوةِ ۚ— فَهَلْ اَنْتُمْ مُّنْتَهُوْنَ ۟
ಶೈತಾನನು ಮದ್ಯ ಮತ್ತು ಜೂಜಾಟದ ಮೂಲಕ ನಿಮ್ಮ ನಡುವೆ ಶತ್ರುತ್ವ ಹಾಗೂ ವಿದ್ವೇಷವನ್ನುಂಟು ಮಾಡಲು, ಅಲ್ಲಾಹನ ಸ್ಮರಣೆ ಹಾಗೂ ನಮಾಝ್‌ನಿಂದ ನಿಮ್ಮನ್ನು ದೂರವಿಡಲು ಬಯಸುತ್ತಾನೆ. ಆದ್ದರಿಂದ ನೀವು ಅವುಗಳಿಂದ ದೂರವಿರುವಿರಾ?
আৰবী তাফছীৰসমূহ:
وَاَطِیْعُوا اللّٰهَ وَاَطِیْعُوا الرَّسُوْلَ وَاحْذَرُوْا ۚ— فَاِنْ تَوَلَّیْتُمْ فَاعْلَمُوْۤا اَنَّمَا عَلٰی رَسُوْلِنَا الْبَلٰغُ الْمُبِیْنُ ۟
ನೀವು ಅಲ್ಲಾಹನ ಆಜ್ಞಾನುಸರಣೆಯನ್ನು ಮಾಡಿರಿ ಮತ್ತು ಸಂದೇಶವಾಹಕರ ಅನುಸರಣೆಯನ್ನು ಮಾಡಿರಿ ಮತ್ತು (ಪಾಪಕೃತ್ಯಗಳಿಂದ) ಎಚ್ಚರವಹಿಸಿರಿ. ಇನ್ನು ನೀವು ವಿಮುಖರಾಗುವುದಾದರೆ ನಮ್ಮ ಸಂದೇಶವಾಹಕರ ಕರ್ತವ್ಯವು ಸ್ಪಷ್ಟವಾಗಿ ಸಂದೇಶ ತಲುಪಿಸುವುದು ಮಾತ್ರವಾಗಿದೆಂಬುದನ್ನು ತಿಳಿದುಕೊಳ್ಳಿರಿ.
আৰবী তাফছীৰসমূহ:
لَیْسَ عَلَی الَّذِیْنَ اٰمَنُوْا وَعَمِلُوا الصّٰلِحٰتِ جُنَاحٌ فِیْمَا طَعِمُوْۤا اِذَا مَا اتَّقَوْا وَّاٰمَنُوْا وَعَمِلُوا الصّٰلِحٰتِ ثُمَّ اتَّقَوْا وَّاٰمَنُوْا ثُمَّ اتَّقَوْا وَّاَحْسَنُوْا ؕ— وَاللّٰهُ یُحِبُّ الْمُحْسِنِیْنَ ۟۠
ಸತ್ಯವಿಶ್ವಾಸವಿರಿಸಿ ಸತ್ಕರ್ಮಗೈದವರ ಮೇಲೆ ಅವರು ಈ ಹಿಂದೆ ಸೇವಿಸಿದುದರಲ್ಲಿ ಅವರ ಮೇಲೆ ಯಾವ ದೋಷವಿಲ್ಲ ಅವರು ಇನ್ನು ಮುಂದೆ ನಿಷಿದ್ಧ ವಸ್ತುಗಳನ್ನು ವರ್ಜಿಸಿದರೆ ನಂತರ ಅವರು ಭಯಭಕ್ತಿ ಪಾಲಿಸಿದರೆ ಮತ್ತು ಸತ್ಯ ವಿಶ್ವಾಸವಿರಿಸಿದರೆ ಆ ಬಳಿಕವೂ ಅವರು ಭಯಭಕ್ತಿ ಪಾಲಿಸಿದರೆ ಮತ್ತು ಸತ್ಕರ್ಮಗಳನ್ನೆಸಗಿದರೆ ಅಲ್ಲಾಹನು ಇಂತಹ ಸದಾಚಾರಿಗಳನ್ನು ಇಷ್ಟಪಡುತ್ತಾನೆ.
আৰবী তাফছীৰসমূহ:
یٰۤاَیُّهَا الَّذِیْنَ اٰمَنُوْا لَیَبْلُوَنَّكُمُ اللّٰهُ بِشَیْءٍ مِّنَ الصَّیْدِ تَنَالُهٗۤ اَیْدِیْكُمْ وَرِمَاحُكُمْ لِیَعْلَمَ اللّٰهُ مَنْ یَّخَافُهٗ بِالْغَیْبِ ۚ— فَمَنِ اعْتَدٰی بَعْدَ ذٰلِكَ فَلَهٗ عَذَابٌ اَلِیْمٌ ۟
ಓ ಸತ್ಯವಿಶ್ವಾಸಿಗಳೇ, ನಿಮ್ಮ ಕೈಗಳು ಹಾಗೂ ಭರ್ಚಿಗಳಿಂದ ಬೇಟೆಯಾಡುವ ಪ್ರಾಣಿಗಳ ಮೂಲಕ ಅಲ್ಲಾಹನು ನಿಮ್ಮನ್ನು ಖಂಡಿತ ಪರೀಕ್ಷಿಸುವನು. ಇದು ಅಲ್ಲಾಹನು ಯಾರು ತನ್ನನ್ನು ಅಗೋಚರವಾಗಿ ಭಯಪಡುತ್ತಾನೆಂದು ತಿಳಿಯಲೆಂದಾಗಿದೆ. ಆದ್ದರಿಂದ ಯಾರು ಇದರ ನಂತರ ಹದ್ದು ಮೀರುತ್ತಾನೋ ಅವನಿಗೆ ಯಾತನಾಮಯವಾದ ಶಿಕ್ಷೆಯಿದೆ.
আৰবী তাফছীৰসমূহ:
یٰۤاَیُّهَا الَّذِیْنَ اٰمَنُوْا لَا تَقْتُلُوا الصَّیْدَ وَاَنْتُمْ حُرُمٌ ؕ— وَمَنْ قَتَلَهٗ مِنْكُمْ مُّتَعَمِّدًا فَجَزَآءٌ مِّثْلُ مَا قَتَلَ مِنَ النَّعَمِ یَحْكُمُ بِهٖ ذَوَا عَدْلٍ مِّنْكُمْ هَدْیًا بٰلِغَ الْكَعْبَةِ اَوْ كَفَّارَةٌ طَعَامُ مَسٰكِیْنَ اَوْ عَدْلُ ذٰلِكَ صِیَامًا لِّیَذُوْقَ وَبَالَ اَمْرِهٖ ؕ— عَفَا اللّٰهُ عَمَّا سَلَفَ ؕ— وَمَنْ عَادَ فَیَنْتَقِمُ اللّٰهُ مِنْهُ ؕ— وَاللّٰهُ عَزِیْزٌ ذُو انْتِقَامٍ ۟
ಓ ಸತ್ಯವಿಶ್ವಾಸಿಗಳೇ, ನೀವು ಇಹ್ರಾಮ್‌ನಲ್ಲಿರುವಾಗ ಬೇಟೆ ಪ್ರಾಣಿಯನ್ನು ಕೊಲ್ಲಬೇಡಿರಿ. ನಿಮ್ಮ ಪೈಕಿ ಯಾರಾದರೂ ಉದ್ದೇಶಪೂರ್ವಕವಾಗಿ ಅದನ್ನು ಕೊಂದರೆ ಅವನು ಅದಕ್ಕೆ ಸಮಾನವಾದ ಪ್ರಾಣಿಯನ್ನು ಪ್ರಾಯಶ್ಚಿತ್ತವಾಗಿ ನೀಡುವುದು ಕಡ್ಡಾಯವಾಗಿದೆ. ನಿಮ್ಮ ಪೈಕಿ ಇಬ್ಬರು ನ್ಯಾಯಸಮ್ಮತ ವ್ಯಕ್ತಿಗಳು ಇದರ ತೀರ್ಮಾನ ಮಾಡಲಿ, ಪ್ರಾಯಶ್ಚಿತ್ತವು ಕಾಬಾಲಯಕ್ಕೆ ಹರಕೆಯ ರೂಪದಲ್ಲಿ ತಲುಪಿಸಬೇಕಾಗಿದೆ ಅಥವಾ ಪ್ರಾಯಶ್ಚಿತ್ತವನ್ನು ದರಿದ್ರರಿಗೆ ಆಹಾರವಾಗಿ ನೀಡಲಿ ಮತ್ತು ಅದಕ್ಕೆ ಸಮಾನವಾಗಿ ಉಪವಾಸ ಆಚರಿಸಲಿ. ಇದು ಅವನು ಮಾಡಿದ ಕೃತ್ಯದ ಪರಿಣಾಮವನ್ನು ಸ್ವತಃ ಅವನು ಅನುಭವಿಸಲೆಂದಾಗಿದೆ. ಈ ಮುಂಚೆ ಮಾಡಿರುವುದನ್ನು ಅಲ್ಲಾಹು ಕ್ಷಮಿಸಿರುತ್ತಾನೆ ಮತ್ತು ಯಾರು ಪುನಃ ಅಂತಹದೇ ಕೃತ್ಯವನ್ನು ಎಸಗುತ್ತಾನೋ ಅಲ್ಲಾಹನು ಪ್ರತೀಕಾರ ಶಿಕ್ಷಾಕ್ರಮವನ್ನು ಕೈಗೊಳ್ಳುವನು. ಅಲ್ಲಾಹನು ಪ್ರತಾಪಶಾಲಿಯೂ, ಶಿಕ್ಷಾಕ್ರಮ ಕೈಗೊಳ್ಳುವವನೂ ಆಗಿದ್ದಾನೆ.
আৰবী তাফছীৰসমূহ:
اُحِلَّ لَكُمْ صَیْدُ الْبَحْرِ وَطَعَامُهٗ مَتَاعًا لَّكُمْ وَلِلسَّیَّارَةِ ۚ— وَحُرِّمَ عَلَیْكُمْ صَیْدُ الْبَرِّ مَا دُمْتُمْ حُرُمًا ؕ— وَاتَّقُوا اللّٰهَ الَّذِیْۤ اِلَیْهِ تُحْشَرُوْنَ ۟
ನಿಮ್ಮ ಪ್ರಯೋಜನಕ್ಕಾಗಿ ಮತ್ತು ಪ್ರಯಾಣಿಕರ ಪ್ರಯೋಜನಕ್ಕಾಗಿ ಸಮುದ್ರದಲ್ಲಿ ಬೇಟೆಯಾಡುವುದನ್ನೂ ಮತ್ತು ಅದನ್ನು ತಿನ್ನುವುದನ್ನೂ ಧರ್ಮಸಮ್ಮತಗೊಳಿಸಲಾಗಿದೆ. ಮತ್ತು ನೀವು ಇಹ್ರಾಮ್‌ನ ಸ್ಥಿತಿಯಲ್ಲಿರುವಾಗ ನೆಲದ ಬೇಟೆಯನ್ನು ನಿಮಗೆ ನಿಷಿದ್ಧಗೊಳಿಸಲಾಗಿದೆ. ಯಾರೆಡೆಗೆ ನೀವು ಒಟ್ಟುಗೂಡಿಸಲ್ಪಡುವಿರೋ ಆ ಅಲ್ಲಾಹುನನ್ನು ಭಯಪಡಿರಿ.
আৰবী তাফছীৰসমূহ:
جَعَلَ اللّٰهُ الْكَعْبَةَ الْبَیْتَ الْحَرَامَ قِیٰمًا لِّلنَّاسِ وَالشَّهْرَ الْحَرَامَ وَالْهَدْیَ وَالْقَلَآىِٕدَ ؕ— ذٰلِكَ لِتَعْلَمُوْۤا اَنَّ اللّٰهَ یَعْلَمُ مَا فِی السَّمٰوٰتِ وَمَا فِی الْاَرْضِ وَاَنَّ اللّٰهَ بِكُلِّ شَیْءٍ عَلِیْمٌ ۟
ಆದರಣೀಯ ಗೃಹವಾದ ಕಾಬಾವನ್ನು, ಅಲ್ಲಾಹನು ಜನರ ಶಾಂತಿಯ ಕೇಂದ್ರವನ್ನಾಗಿ ಮಾಡಿದ್ದಾನೆ. ಮತ್ತು ಗೌರವಾನ್ವಿತ ತಿಂಗಳನ್ನು ಹರಮ್‌ನಲ್ಲಿ ಬಲಿನೀಡಲಾಗುವ ಪ್ರಾಣಿಯನ್ನೂ, ಕೊರಳಲ್ಲಿ ಪಟ್ಟಿ ಹಾಕಲಾದ (ಕಾಬಾದ ಕಡೆ ಒಯ್ಯುವ) ಪ್ರಾಣಿಗಳನ್ನೂ ಸಹ. ಇದು ನಿಸ್ಸಂಶಯವಾಗಿಯು ಅಲ್ಲಾಹನು ಆಕಾಶಗಳಲ್ಲಿ ಮತ್ತು ಭೂಮಿಯಲ್ಲಿರುವ ಸಕಲ ಜ್ಞಾನವನ್ನು ಹೊಂದಿದ್ದಾನೆAದೂ, ಮತ್ತು ಅವನು ಎಲ್ಲಾ ವಸ್ತುಗಳನ್ನು ಚೆನ್ನಾಗಿ ಅರಿತಿರುವನೆಂದೂ ನೀವು ತಿಳಿದುಕೊಳ್ಳಲೆಂದಾಗಿದೆ.
আৰবী তাফছীৰসমূহ:
اِعْلَمُوْۤا اَنَّ اللّٰهَ شَدِیْدُ الْعِقَابِ وَاَنَّ اللّٰهَ غَفُوْرٌ رَّحِیْمٌ ۟ؕ
ಅಲ್ಲಾಹನು ಕಠಿಣವಾಗಿ ಶಿಕ್ಷಿಸುವವನೆಂದೂ ಮತ್ತು ಅಲ್ಲಾಹನು ಕ್ಷಮಾಶೀಲನೂ ಹಾಗೂ ಕರುಣಾನಿಧಿಯೂ ಆಗಿದ್ದಾನೆಂದು ನೀವು ತಿಳಿದುಕೊಳ್ಳಿರಿ.
আৰবী তাফছীৰসমূহ:
مَا عَلَی الرَّسُوْلِ اِلَّا الْبَلٰغُ ؕ— وَاللّٰهُ یَعْلَمُ مَا تُبْدُوْنَ وَمَا تَكْتُمُوْنَ ۟
ಸಂದೇಶವಾಹಕರ ಮೇಲೆ ಸಂದೇಶವನ್ನು ತಲುಪಿಸುವ ಹೊಣೆ ಮಾತ್ರವಿದೆ. ನೀವು ಬಹಿರಂಗಗೊಳಿಸುವುದನ್ನೂ, ಬಚ್ಚಿಡುವುದನ್ನೂ ಅಲ್ಲಾಹನು ಅರಿಯುತ್ತಾನೆ.
আৰবী তাফছীৰসমূহ:
قُلْ لَّا یَسْتَوِی الْخَبِیْثُ وَالطَّیِّبُ وَلَوْ اَعْجَبَكَ كَثْرَةُ الْخَبِیْثِ ۚ— فَاتَّقُوا اللّٰهَ یٰۤاُولِی الْاَلْبَابِ لَعَلَّكُمْ تُفْلِحُوْنَ ۟۠
ಓ ಪೈಗಂಬರರೇ ಹೇಳಿರಿ: ಅಶುದ್ಧವಾದುದೂ, ಶುದ್ಧವಾದುದೂ ಸಮಾನವಲ್ಲ; ನಿಮಗೆ ಅಶುದ್ಧವಾದವುಗಳ ಹೆಚ್ಚಳವು ಆಕರ್ಷಕವಾಗಿ ಕಂಡರೂ ಸರಿಯೇ, ಓ ಬುದ್ಧಿವಂತರೇ, ನೀವು ಅಲ್ಲಾಹನನ್ನು ಭಯಪಡಿರಿ. ನೀವು ಯಶಸ್ಸು ಪಡೆಯಬಹುದು.
আৰবী তাফছীৰসমূহ:
یٰۤاَیُّهَا الَّذِیْنَ اٰمَنُوْا لَا تَسْـَٔلُوْا عَنْ اَشْیَآءَ اِنْ تُبْدَ لَكُمْ تَسُؤْكُمْ ۚ— وَاِنْ تَسْـَٔلُوْا عَنْهَا حِیْنَ یُنَزَّلُ الْقُرْاٰنُ تُبْدَ لَكُمْ ؕ— عَفَا اللّٰهُ عَنْهَا ؕ— وَاللّٰهُ غَفُوْرٌ حَلِیْمٌ ۟
ಓ ಸತ್ಯವಿಶ್ವಾಸಿಗಳೇ, ನಿಮಗೆ ಬಹಿರಂಗಗೊಳಿಸಲಾದರೆ ಸಹಿಸಲು ಸಾಧ್ಯವಾಗದಂತಹ ಸಂಗತಿಗಳನ್ನು ನೀವು ಕೇಳಬಾರದು ಮತ್ತು ಕುರ್‌ಅನ್ ಅವತೀರ್ಣಗೊಳ್ಳುವ ಸಂದರ್ಭದಲ್ಲಿ ನೀವು ಅವುಗಳ ಕುರಿತು ಪ್ರಶ್ನಿಸುವುದಾದರೆ ನಿಮಗೆ ಅವುಗಳನ್ನು ಬಹಿರಂಗಗೊಳಿಸಲಾಗುವುದು. ಗತ ಪ್ರಶ್ನೆಗಳನ್ನು ಅಲ್ಲಾಹನು ಮನ್ನಿಸಿರುವನು ಮತ್ತು ಅಲ್ಲಾಹನು ಕ್ಷಮಾಶೀಲನೂ, ಸಹನಾಶೀಲನೂ ಆಗಿರುವನು.
আৰবী তাফছীৰসমূহ:
قَدْ سَاَلَهَا قَوْمٌ مِّنْ قَبْلِكُمْ ثُمَّ اَصْبَحُوْا بِهَا كٰفِرِیْنَ ۟
ಇಂತಹ ಪ್ರಶ್ನೆಗಳನ್ನು ನಿಮಗಿಂತ ಮುಂಚಿನ ಜನರೂ ಕೇಳಿದ್ದರು. ಅವುಗಳ ಉತ್ತರ ಸಿಕ್ಕಿತು. ತರುವಾಯ ಅವರು ಆ ಮಾತುಗಳ ನಿಷೇಧಿಗಳಾಗಿಬಿಟ್ಟರು.
আৰবী তাফছীৰসমূহ:
مَا جَعَلَ اللّٰهُ مِنْ بَحِیْرَةٍ وَّلَا سَآىِٕبَةٍ وَّلَا وَصِیْلَةٍ وَّلَا حَامٍ ۙ— وَّلٰكِنَّ الَّذِیْنَ كَفَرُوْا یَفْتَرُوْنَ عَلَی اللّٰهِ الْكَذِبَ ؕ— وَاَكْثَرُهُمْ لَا یَعْقِلُوْنَ ۟
ಬಹೀರಃವನ್ನಾಗಲೀ, ಸಾಇಬಃವನ್ನಾಗಲೀ, ವಸೀಲವನ್ನಾಗಲೀ ಮತ್ತು ಹಾಮ್‌ಅನ್ನಾಗಲೀ (ಮಿಥ್ಯಾರಾಧ್ಯರಿಗೆ ಬಿಟ್ಟ ಪ್ರಾಣಿಗಳು) ಅಲ್ಲಾಹನು ನಿಶ್ಚಯಿಸಿರುವುದಿಲ್ಲ. ಆದರೆ ಸತ್ಯನಿಷೇಧಿಗಳು (ದೇವತೆಗಳಿಗೆ ಬಿಟ್ಟು) ಅಲ್ಲಾಹನ ಮೇಲೆ ಸುಳ್ಳು ಹೆಣೆಯುತ್ತಿದ್ದಾರೆ ಮತ್ತು ಅವರಲ್ಲಿ ಹೆಚ್ಚಿನವರು ವಿವೇಕವನ್ನು ಹೊಂದಿರುವುದಿಲ್ಲ.
আৰবী তাফছীৰসমূহ:
وَاِذَا قِیْلَ لَهُمْ تَعَالَوْا اِلٰی مَاۤ اَنْزَلَ اللّٰهُ وَاِلَی الرَّسُوْلِ قَالُوْا حَسْبُنَا مَا وَجَدْنَا عَلَیْهِ اٰبَآءَنَا ؕ— اَوَلَوْ كَانَ اٰبَآؤُهُمْ لَا یَعْلَمُوْنَ شَیْـًٔا وَّلَا یَهْتَدُوْنَ ۟
ಅಲ್ಲಾಹನು ಅವತೀರ್ಣಗೊಳಿಸಿದ ಗ್ರಂಥದೆಡೆಗೂ, ಸಂದೇಶವಾಹಕ ರೆಡೆಗೂ ಬನ್ನಿರಿ ಎಂದು ಅವರೊಡನೆ ಹೇಳಲಾದರೆ, 'ನಾವು ನಮ್ಮ ಪೂರ್ವಿಕರನ್ನು ಯಾವ ಮಾರ್ಗದಲ್ಲಿ ಕಂಡಿದ್ದೇವೋ ಅದೇ ನಮಗೆ ಸಾಕು' ಎಂದು ಅವರು ಹೇಳುವರು. ಏನು? ಅವರ ಪೂರ್ವಿಕರು ಏನನ್ನೂ ಅರಿಯದವರೂ, ಸನ್ಮಾರ್ಗ ಪಡೆಯದವರೂ ಆಗಿದ್ದರೂ (ಅವರನ್ನೆ ಅನುಸರಿಸವುದು) ಸರಿಯೇ?
আৰবী তাফছীৰসমূহ:
یٰۤاَیُّهَا الَّذِیْنَ اٰمَنُوْا عَلَیْكُمْ اَنْفُسَكُمْ ۚ— لَا یَضُرُّكُمْ مَّنْ ضَلَّ اِذَا اهْتَدَیْتُمْ ؕ— اِلَی اللّٰهِ مَرْجِعُكُمْ جَمِیْعًا فَیُنَبِّئُكُمْ بِمَا كُنْتُمْ تَعْمَلُوْنَ ۟
ಓ ಸತ್ಯವಿಶ್ವಾಸಿಗಳೇ, ನೀವು ತಮ್ಮ ಬಗ್ಗೆ ಚಿಂತಿಸಿರಿ. ನೀವು ಸನ್ಮಾರ್ಗದಲ್ಲಿ ಮುನ್ನಡೆಯುತ್ತಿದ್ದರೆ ಯಾವೊಬ್ಬ ದಾರಿಗೆಟ್ಟವನಿಂದ ನಿಮಗೇನೂ ನಷ್ಟವುಂಟಾಗದು. ನಿಮಗೆಲ್ಲರಿಗೂ ಅಲ್ಲಾಹನ ಕಡೆಗೇ ಮರಳಬೇಕಾಗಿದೆ. ಅನಂತರ ಅವನು ನೀವು ಮಾಡುತ್ತಿದ್ದುದರ ಕುರಿತು ನಿಮಗೆ ತಿಳಿಸಿಕೊಡುವನು.
আৰবী তাফছীৰসমূহ:
یٰۤاَیُّهَا الَّذِیْنَ اٰمَنُوْا شَهَادَةُ بَیْنِكُمْ اِذَا حَضَرَ اَحَدَكُمُ الْمَوْتُ حِیْنَ الْوَصِیَّةِ اثْنٰنِ ذَوَا عَدْلٍ مِّنْكُمْ اَوْ اٰخَرٰنِ مِنْ غَیْرِكُمْ اِنْ اَنْتُمْ ضَرَبْتُمْ فِی الْاَرْضِ فَاَصَابَتْكُمْ مُّصِیْبَةُ الْمَوْتِ ؕ— تَحْبِسُوْنَهُمَا مِنْ بَعْدِ الصَّلٰوةِ فَیُقْسِمٰنِ بِاللّٰهِ اِنِ ارْتَبْتُمْ لَا نَشْتَرِیْ بِهٖ ثَمَنًا وَّلَوْ كَانَ ذَا قُرْبٰی ۙ— وَلَا نَكْتُمُ شَهَادَةَ ۙ— اللّٰهِ اِنَّاۤ اِذًا لَّمِنَ الْاٰثِمِیْنَ ۟
ಓ ಸತ್ಯವಿಶ್ವಾಸಿಗಳೇ, ನಿಮ್ಮಲ್ಲೊಬ್ಬನು ಮರಣಸನ್ನಾದರೆ ಮತ್ತು ವಸಿಯ್ಯತ್ತಿನ (ಉಯಿಲು) ಮಾಡುವ ಸಂದರ್ಭ ಬಂದರೆ ನಿಮ್ಮ ಧರ್ಮದವರಾದ ಇಬ್ಬರು ನ್ಯಾಯವಂತರು ಸಾಕ್ಷಿ ವಹಿಸಲಿ. ಇನ್ನು ನೀವು ಪ್ರಯಾಣದಲ್ಲಿದ್ದರೆ ಮತ್ತು ನೀವು ಮರಣಾಸನ್ನರಾದರೆ ಅನ್ಯಧರ್ಮೀಯವರಾದರೂ ಇಬ್ಬರು ಸಾಕ್ಷಿವಹಿಸಲಿ. ನಿಮಗೆ ಸಂದೇಹವುAಟಾದರೆ ನಮಾಝ್ ನಿರ್ವಹಿಸಿದ ನಂತರ ಅವರಿಬ್ಬರನ್ನು ತಡೆದುಕೊಳ್ಳಿರಿ. ನಂತರ ಅವರಿಬ್ಬರೂ (ಜನರ ಮುಂದೆ) ಅಲ್ಲಾಹುವಿನ ಮೇಲೆ ಆಣೆಯಿಟ್ಟು ನಾವು ಈ ಆಣೆಗೆ ಪ್ರತಿಯಾಗಿ ಯಾವುದೇ ಲಾಭವನ್ನು ಪಡೆಯಲು ಇಚ್ಛಿಸುವುದಿಲ್ಲ. ಅದು ನಿಕಟ ಸಂಬAಧಿಕನಿಗೆ ಸಂಬAಧಿಸಿದ ವಿಷಯವಾದರೂ ಸರಿಯೇ ಮತ್ತು ನಾವು ಅಲ್ಲಾಹನ ಮಾತನ್ನು ಬಚ್ಚ್ಚಿಡಲಾರೆವು. ಹಾಗೇನಾದರು ಆದರೆ ನಾವು ಪಾಪವೆಸಗಿದವರಲ್ಲಾಗುವೆವು ಎಂದು ಹೇಳಬೇಕು.
আৰবী তাফছীৰসমূহ:
فَاِنْ عُثِرَ عَلٰۤی اَنَّهُمَا اسْتَحَقَّاۤ اِثْمًا فَاٰخَرٰنِ یَقُوْمٰنِ مَقَامَهُمَا مِنَ الَّذِیْنَ اسْتَحَقَّ عَلَیْهِمُ الْاَوْلَیٰنِ فَیُقْسِمٰنِ بِاللّٰهِ لَشَهَادَتُنَاۤ اَحَقُّ مِنْ شَهَادَتِهِمَا وَمَا اعْتَدَیْنَاۤ ۖؗ— اِنَّاۤ اِذًا لَّمِنَ الظّٰلِمِیْنَ ۟
ಇನ್ನು ಆ ಇಬ್ಬರು ಸಾಕ್ಷಿಗಳು (ಸುಳ್ಳು ಹೇಳಿ) ಯಾವುದಾದರೂ ಪಾಪವನ್ನು ಮಾಡಿದ್ದಾರೆಂದು ತಿಳಿದುಬಂದರೆ ಯಾರ ವಿರುದ್ಧ ಪಾಪ ಮಾಡಲಾಗಿದೆಯೋ ಅವರ ಪೈಕಿ ಮೃತನಿಗೆ ನಿಕಟವಾಗಿರುವ ಇಬ್ಬರು ಆ ಇಬ್ಬರ ಸ್ಥಾನದಲ್ಲಿ ನಿಲ್ಲಲಿ. ನಂತರ ಅವರಿಬ್ಬರೂ ಅಲ್ಲಾಹನ ಮೇಲೆ ಆಣೆಯಿಟ್ಟು 'ಖಂಡಿತವಾಗಿಯು ಅವರ ಸಾಕ್ಷö್ಯಕ್ಕಿಂತಲೂ ನಮ್ಮ ಸಾಕ್ಷö್ಯ ಸತ್ಯವಾಗಿದೆ ಮತ್ತು ನಾವು ಹದ್ದುಮೀರಿಲ್ಲ. ಹಾಗೇನಾದರೂ ಆದರೆ ನಾವು ಮಹಾ ಅಕ್ರಮಿಗಳಾಗಿ ಬಿಡುವೆವು'. ಎಂದು ಹೇಳಲಿ.
আৰবী তাফছীৰসমূহ:
ذٰلِكَ اَدْنٰۤی اَنْ یَّاْتُوْا بِالشَّهَادَةِ عَلٰی وَجْهِهَاۤ اَوْ یَخَافُوْۤا اَنْ تُرَدَّ اَیْمَانٌ بَعْدَ اَیْمَانِهِمْ ؕ— وَاتَّقُوا اللّٰهَ وَاسْمَعُوْا ؕ— وَاللّٰهُ لَا یَهْدِی الْقَوْمَ الْفٰسِقِیْنَ ۟۠
ಅವರು (ಸಾಕ್ಷಿಗಳು) ನ್ಯಾಯಬದ್ದವಾಗಿ ಆಣೆ ಹಾಕಲು (ಈ ವಿಧಾನ) ಹೆಚ್ಚು ಸೂಕ್ತವಾಗಿದೆ. ತಾವು ಆಣೆ ಹಾಕಿದ ನಂತರ (ವಾರಿಸುದಾರರಿಂದ) ಆಣೆ ಹಾಕಿಸಲಾಗುವ ಸಾಧ್ಯತೆಯಿದೆಯೆಂಬುದರ ಬಗ್ಗೆ ಅವರು ಭಯಪಡಲಿ ಮತ್ತು ನೀವು ಅಲ್ಲಾಹನನ್ನು ಭಯಪಡಿರಿ ಮತ್ತು (ಅವನ ಆದೇಶಗಳನ್ನು) ಆಲಿಸಿರಿ ಧಿಕ್ಕಾರಿಗಳಾಗಿರುವ ಜನರಿಗೆ ಅಲ್ಲಾಹನು ಸನ್ಮಾರ್ಗ ತೋರಿಸುವುದಿಲ್ಲ.
আৰবী তাফছীৰসমূহ:
یَوْمَ یَجْمَعُ اللّٰهُ الرُّسُلَ فَیَقُوْلُ مَاذَاۤ اُجِبْتُمْ ؕ— قَالُوْا لَا عِلْمَ لَنَا ؕ— اِنَّكَ اَنْتَ عَلَّامُ الْغُیُوْبِ ۟
ಅಲ್ಲಾಹನು ಸಕಲ ಸಂದೇಶವಾಹಕರನ್ನು ಒಟ್ಟುಗೂಡಿಸಿ (ನಿಮ್ಮ ಅನುಯಾಯಿಗಳಿಂದ) ನಿಮಗೆ (ಆಹ್ವಾನದ) ಯಾವ ಪ್ರತಿಕ್ರಿಯೆಯು ಲಭಿಸಿತ್ತು? ಎಂದು ಕೇಳುವ ದಿನ ನಮಗೆ (ಭಯಭಿತರಾಗಿ) ಯಾವ ಅರಿವೂ ಇಲ್ಲ. ಅಗೋಚರ ಮಾತುಗಳನ್ನು ಚೆನ್ನಾಗಿ ಅರಿಯುವವನು ನೀನೇ ಆಗಿರುವೆ ಎಂದು ಅವರು ಹೇಳುವರು.
আৰবী তাফছীৰসমূহ:
اِذْ قَالَ اللّٰهُ یٰعِیْسَی ابْنَ مَرْیَمَ اذْكُرْ نِعْمَتِیْ عَلَیْكَ وَعَلٰی وَالِدَتِكَ ۘ— اِذْ اَیَّدْتُّكَ بِرُوْحِ الْقُدُسِ ۫— تُكَلِّمُ النَّاسَ فِی الْمَهْدِ وَكَهْلًا ۚ— وَاِذْ عَلَّمْتُكَ الْكِتٰبَ وَالْحِكْمَةَ وَالتَّوْرٰىةَ وَالْاِنْجِیْلَ ۚ— وَاِذْ تَخْلُقُ مِنَ الطِّیْنِ كَهَیْـَٔةِ الطَّیْرِ بِاِذْنِیْ فَتَنْفُخُ فِیْهَا فَتَكُوْنُ طَیْرًا بِاِذْنِیْ وَتُبْرِئُ الْاَكْمَهَ وَالْاَبْرَصَ بِاِذْنِیْ ۚ— وَاِذْ تُخْرِجُ الْمَوْتٰی بِاِذْنِیْ ۚ— وَاِذْ كَفَفْتُ بَنِیْۤ اِسْرَآءِیْلَ عَنْكَ اِذْ جِئْتَهُمْ بِالْبَیِّنٰتِ فَقَالَ الَّذِیْنَ كَفَرُوْا مِنْهُمْ اِنْ هٰذَاۤ اِلَّا سِحْرٌ مُّبِیْنٌ ۟
ಅಲ್ಲಾಹನು (ಈಸಾರೊಂದಿಗೆ) ಹೇಳಿದ ಸಂದರ್ಭವನ್ನು ಸ್ಮರಿಸಿರಿ. ಓ ಮರ್ಯಮರ ಪುತ್ರನಾದ ಈಸಾ! ನಿಮ್ಮ ಮೇಲೂ, ನಿಮ್ಮ ತಾಯಿಯ ಮೇಲೂ ಮಾಡಲಾಗಿರುವ ನನ್ನ ಅನುಗ್ರಹಗಳನ್ನು ಸ್ಮರಿಸಿರಿ. ನಾನು ನಿಮಗೆ ಪವಿತ್ರಾತ್ಮನ ಮೂಲಕ ಬೆಂಬಲ ನೀಡಿದೆ. ನೀವು ತೊಟ್ಟಿಲಿನಲ್ಲಿರುವಾಗ ಮತ್ತು ಹಿರಿಯ ವಯಸ್ಕನಾಗಿರುವಾಗ ಜನರೊಂದಿಗೆ ಮಾತನಾಡುತ್ತಿದ್ದೀರಿ ಮತ್ತು ನಿಮಗೆ ನಾನು ಗ್ರಂಥ ಹಾಗೂ ಸುಜ್ಞಾನವನ್ನು, ತೌರಾತ್ ಮತ್ತು ಇಂಜೀಲ್‌ನ ಶಿಕ್ಷಣವನ್ನು ಕಲಿಸಿಕೊಟ್ಟಿದ್ದೆ. ಮತ್ತು ನೀವು ನನ್ನ ಅಪ್ಪಣೆಯಿಂದ ಮಣ್ಣಿನಿಂದ ಪಕ್ಷಿಯ ರೂಪವನ್ನು ಮಾಡಿ, ನಂತರ ನೀವು ಅದರಲ್ಲಿ ಊದುವಾಗ ಅದು ನನ್ನ ಅಪ್ಪಣೆಯಿಂದ ಪಕ್ಷಿಯಾಗಿ ಮಾರ್ಪಡುತ್ತಿತ್ತು. ಮತ್ತು ನೀವು ನನ್ನ ಅಪ್ಪಣೆಯಿಂದ ಹುಟ್ಟು ಕುರುಡನನ್ನೂ, ಕುಷ್ಠರೋಗಿಯನ್ನೂ ಗುಣಪಡಿಸುತ್ತಿದ್ದೀರಿ ಮತ್ತು ನೀವು ನನ್ನ ಅಪ್ಪಣೆಯಿಂದ ಮೃತಪಟ್ಟವರನ್ನು ಎಬ್ಬಿಸುತ್ತಿದ್ದೀರಿ ಮತ್ತು ನೀವು ಇಸ್ರಾಯೀಲ್ ಸಂತತಿಗಳೆಡೆಗೆ ಸುವ್ಯಕ್ತ ದುಷ್ಟಾಂತಗಳೊAದಿಗೆ ಬಂದಾಗ ಅವರ ಪೈಕಿಯ ಸತ್ಯನಿಷೇಧಿಗಳು 'ಇದು ಸ್ಪಷ್ಟ ಜಾದುವಿನ ಹೊರತು ಇನ್ನೇನೂ ಅಲ್ಲ ಎಂದು ಹೇಳಿದಾಗ ನಾವು ನಿಮ್ಮನ್ನು ಅವರ ಕೇಡಿನಿಂದ ರಕ್ಷಿಸಿದೆವು.'
আৰবী তাফছীৰসমূহ:
وَاِذْ اَوْحَیْتُ اِلَی الْحَوَارِیّٖنَ اَنْ اٰمِنُوْا بِیْ وَبِرَسُوْلِیْ ۚ— قَالُوْۤا اٰمَنَّا وَاشْهَدْ بِاَنَّنَا مُسْلِمُوْنَ ۟
ಮತ್ತು “ನೀವು ನನ್ನಲ್ಲೂ, ನನ್ನ ಸಂದೇಶವಾಹಕರಲ್ಲೂ (ಈಸಾ) ವಿಶ್ವಾಸವಿಡಿರಿ ಎಂದು ನಾವು ಹವಾರಿಗಳಿಗೆ ದಿವ್ಯ ಸಂದೇಶ ನೀಡಿದ ಸಂದರ್ಭವನ್ನು (ಸ್ಮರಿಸಿರಿ) ಆಗ ಅವರು ಹೇಳಿದರು: ನಾವು ವಿಶ್ವಾಸವಿಟ್ಟಿದ್ದೇವೆ ಮತ್ತು ನಾವು ವಿಧೇಯರೆಂಬುದಕ್ಕೆ ನೀನು ಸಾಕ್ಷö್ಯವಹಿಸು.
আৰবী তাফছীৰসমূহ:
اِذْ قَالَ الْحَوَارِیُّوْنَ یٰعِیْسَی ابْنَ مَرْیَمَ هَلْ یَسْتَطِیْعُ رَبُّكَ اَنْ یُّنَزِّلَ عَلَیْنَا مَآىِٕدَةً مِّنَ السَّمَآءِ ؕ— قَالَ اتَّقُوا اللّٰهَ اِنْ كُنْتُمْ مُّؤْمِنِیْنَ ۟
ಹವಾರಿಗಳು ಹೇಳಿದ ಸಂದರ್ಭವು ಗಮನಾರ್ಹವಾಗಿದೆ: ಓ ಮರ್ಯಮರ ಪುತ್ರನಾದ ಈಸಾ, ನಿಮ್ಮ ಪ್ರಭುವಿಗೆ ಆಕಾಶದಿಂದ ನಮ್ಮ ಮೇಲೆ ಒಂದು ಭಕ್ಷö್ಯ ಹರಿವಾಣವನ್ನು ಇಳಿಸಿಕೊಡಲು ಸಾಧ್ಯವಿದೆಯೇ? ಅವರು ಹೇಳಿದರು: ನೀವು ಸತ್ಯವಿಶ್ವಾಸಿಗಳಾಗಿದ್ದರೆ ಅಲ್ಲಾಹನನ್ನು ಭಯಪಡಿರಿ.
আৰবী তাফছীৰসমূহ:
قَالُوْا نُرِیْدُ اَنْ نَّاْكُلَ مِنْهَا وَتَطْمَىِٕنَّ قُلُوْبُنَا وَنَعْلَمَ اَنْ قَدْ صَدَقْتَنَا وَنَكُوْنَ عَلَیْهَا مِنَ الشّٰهِدِیْنَ ۟
ಅವರು ಹೇಳಿದರು: ನಾವು ಅದರಿಂದ ತಿನ್ನಲು ಮತ್ತು ನಮ್ಮ ಹೃದಯಗಳಿಗೆ ಸಮಾಧಾನ ಸಿಗಲು ಮತ್ತು ನೀವು ನಮ್ಮೊಂದಿಗೆ ಹೇಳಿದ್ದು ಸತ್ಯವಾಗಿತ್ತೆಂದು ನಮಗೆ ಮನವರಿಕೆಯಾಗಲು ಮತ್ತು ನಾವು ಸಾಕ್ಷö್ಯವಹಿಸುವವರೊಂದಿಗೆ ಸೇರಲು ಬಯಸುತ್ತೇವೆ.
আৰবী তাফছীৰসমূহ:
قَالَ عِیْسَی ابْنُ مَرْیَمَ اللّٰهُمَّ رَبَّنَاۤ اَنْزِلْ عَلَیْنَا مَآىِٕدَةً مِّنَ السَّمَآءِ تَكُوْنُ لَنَا عِیْدًا لِّاَوَّلِنَا وَاٰخِرِنَا وَاٰیَةً مِّنْكَ ۚ— وَارْزُقْنَا وَاَنْتَ خَیْرُ الرّٰزِقِیْنَ ۟
ಮರ್ಯಮರ ಪುತ್ರ ಈಸಾ ಪ್ರಾರ್ಥಿಸಿದರು: ಓ ಅಲ್ಲಾಹ್, ನಮ್ಮ ಪ್ರಭು, ನೀನು ಆಕಾಶದಿಂದ ನಮ್ಮ ಮೇಲೆ ಒಂದು ಭಕ್ಷö್ಯ ಹರಿವಾಣವನ್ನು ಇಳಿಸಿಕೊಡು ಅದು ನಮ್ಮ ಪೈಕಿ ಮೊದಲಿನವರಿಗೂ, ನಂತರದವರಿಗೂ ಹಬ್ಬವಾಗಲಿ ಮತ್ತು ನಿನ್ನ ಕಡೆಯಿಂದ ಒಂದು ದೃಷ್ಟಾಂತವು ಆಗಿರಲಿ ಮತ್ತು ನೀನು ನಮಗೆ ಜೀವನಾಧಾರವನ್ನು ಕರುಣಿಸು ಮತ್ತು ಅನ್ನಧಾರ ದಯಪಾಲಿಸುವವರ ಪೈಕಿ ನೀನು ಅತ್ಯುತ್ತಮನಾಗಿರುವೆ.
আৰবী তাফছীৰসমূহ:
قَالَ اللّٰهُ اِنِّیْ مُنَزِّلُهَا عَلَیْكُمْ ۚ— فَمَنْ یَّكْفُرْ بَعْدُ مِنْكُمْ فَاِنِّیْۤ اُعَذِّبُهٗ عَذَابًا لَّاۤ اُعَذِّبُهٗۤ اَحَدًا مِّنَ الْعٰلَمِیْنَ ۟۠
ಅಲ್ಲಾಹು ಹೇಳಿದನು: ಖಂಡಿತ ನಾನು ಅದನ್ನು ನಿಮ್ಮ ಮೇಲೆ ಇಳಿಸಿಕೊಡುವೆನು ಅನಂತರ ನಿಮ್ಮ ಪೈಕಿ ಯಾರಾದರೂ ಧಿಕ್ಕಾರ ತೋರಿದರೆ ನಾನು ಅವನಿಗೆ ಜಗತ್ತಿನವರಲ್ಲಿ ಯಾರಿಗೂ ನೀಡದಂತಹ ಶಿಕ್ಷೆಯನ್ನು ನೀಡುವೆನು.
আৰবী তাফছীৰসমূহ:
وَاِذْ قَالَ اللّٰهُ یٰعِیْسَی ابْنَ مَرْیَمَ ءَاَنْتَ قُلْتَ لِلنَّاسِ اتَّخِذُوْنِیْ وَاُمِّیَ اِلٰهَیْنِ مِنْ دُوْنِ اللّٰهِ ؕ— قَالَ سُبْحٰنَكَ مَا یَكُوْنُ لِیْۤ اَنْ اَقُوْلَ مَا لَیْسَ لِیْ ۗ— بِحَقٍّ ؔؕ— اِنْ كُنْتُ قُلْتُهٗ فَقَدْ عَلِمْتَهٗ ؕ— تَعْلَمُ مَا فِیْ نَفْسِیْ وَلَاۤ اَعْلَمُ مَا فِیْ نَفْسِكَ ؕ— اِنَّكَ اَنْتَ عَلَّامُ الْغُیُوْبِ ۟
ಮತ್ತು ಅಲ್ಲಾಹನು ಪುನರುತ್ಥಾನದ ದಿನ ಹೇಳುವ ಸಂದರ್ಭವನ್ನು ಗಮನಿಸಿರಿ. ಓ ಮರ್ಯಮರ ಪುತ್ರನಾದ ಈಸಾ, ನನ್ನನ್ನೂ ಮತ್ತು ನನ್ನ ತಾಯಿಯನ್ನೂ ಅಲ್ಲಾಹನ ಹೊರತು ಆರಾಧ್ಯರನ್ನಾಗಿ ಮಾಡಿಕೊಳ್ಳಿರಿ ಎಂದು ಜನರೊಡನೆ ಹೇಳಿರುವೆಯಾ? ಈಸಾ ಹೇಳುವರು: ನೀನು ಪರಮ ಪಾವನನು ನನಗೆ ಯಾವುದೇ ಹಕ್ಕಿಲ್ಲದ ಮಾತನ್ನು ಹೇಳುವುದು ನನಗೆ ಯುಕ್ತವಲ್ಲ. ನಾನದನ್ನು ಹೇಳಿರುತ್ತಿದ್ದರೆ ನೀನು ಅದನ್ನು ತಿಳಿದಿರುತ್ತಿದ್ದೆ. ನನ್ನ ಮನಸ್ಸಿನಲ್ಲಿರುವುದನ್ನು ನೀನು ಅರಿಯುವೆ ಮತ್ತು ನಿನ್ನ ಮನಸ್ಸಿನಲ್ಲಿರುವುದನ್ನು ನಾನು ಅರಿಯಲಾರೆ. ಸಕಲ ಅಗೋಚರಗಳನ್ನು ಅರಿಯುವವನು ನೀನೇ ಆಗಿರುವೆ.
আৰবী তাফছীৰসমূহ:
مَا قُلْتُ لَهُمْ اِلَّا مَاۤ اَمَرْتَنِیْ بِهٖۤ اَنِ اعْبُدُوا اللّٰهَ رَبِّیْ وَرَبَّكُمْ ۚ— وَكُنْتُ عَلَیْهِمْ شَهِیْدًا مَّا دُمْتُ فِیْهِمْ ۚ— فَلَمَّا تَوَفَّیْتَنِیْ كُنْتَ اَنْتَ الرَّقِیْبَ عَلَیْهِمْ ؕ— وَاَنْتَ عَلٰی كُلِّ شَیْءٍ شَهِیْدٌ ۟
ನೀನು ನನ್ನೊಂದಿಗೆ ಆದೇಶಿಸಿದಂತೆ ನನ್ನ ಪ್ರಭುವೂ, ನಿಮ್ಮ ಪ್ರಭುವೂ ಆದ ಅಲ್ಲಾಹನನ್ನು ಆರಾಧಿಸಿರಿ ಎಂಬುದರ ಹೊರತು ಇನ್ನೇನನ್ನೂ ಅವರಿಗೆ ಹೇಳಿರಲಿಲ್ಲ. ನಾನು ಅವರೊಂದಿಗೆ ಇದ್ದ ಕಾಲದವರೆಗೆ ಅವರ ಮೇಲೆ ಸಾಕ್ಷಿಯಾಗಿದ್ದೆ. ನಂತರ ನೀನು ನನ್ನನ್ನು ಆಕಾಶÀಕ್ಕೆತ್ತಿದ ಬಳಿಕ ನೀನೇ ಅವರ ವೀಕ್ಷಕನಾಗಿದ್ದೆ. ನೀನು ಸರ್ವ ಸಂಗತಿಗಳ ಕುರಿತು ಸಾಕ್ಷಿಯಾಗಿರುವೆ.
আৰবী তাফছীৰসমূহ:
اِنْ تُعَذِّبْهُمْ فَاِنَّهُمْ عِبَادُكَ ۚ— وَاِنْ تَغْفِرْ لَهُمْ فَاِنَّكَ اَنْتَ الْعَزِیْزُ الْحَكِیْمُ ۟
ನೀನು ಅವರನ್ನು ಶಿಕ್ಷಿಸುವುದಾದರೆ ನಿಸ್ಸಂಶಯವಾಗಿಯು ಅವರು ನಿನ್ನ ದಾಸರಾಗಿದ್ದಾರೆ ಮತ್ತು ನೀನು ಅವರನ್ನು ಕ್ಷಮಿಸುವುದರೆ ನೀನು ಪ್ರತಾಪಶಾಲಿಯೂ, ಯುಕ್ತಿಪೂರ್ಣನೂ ಆಗಿರುವೆ.
আৰবী তাফছীৰসমূহ:
قَالَ اللّٰهُ هٰذَا یَوْمُ یَنْفَعُ الصّٰدِقِیْنَ صِدْقُهُمْ ؕ— لَهُمْ جَنّٰتٌ تَجْرِیْ مِنْ تَحْتِهَا الْاَنْهٰرُ خٰلِدِیْنَ فِیْهَاۤ اَبَدًا ؕ— رَضِیَ اللّٰهُ عَنْهُمْ وَرَضُوْا عَنْهُ ؕ— ذٰلِكَ الْفَوْزُ الْعَظِیْمُ ۟
ಅಲ್ಲಾಹನು ಹೇಳುವನು: ಇಂದು ಸತ್ಯಸಂಧರಿಗೆ (ಏಕ ದೇವ ನಿಷ್ಠರಿಗೆ) ತಮ್ಮ ಸತ್ಯಸಂಧತೆಯ ಪ್ರಯೋಜನ ಸಿಗುವ ದಿನವಾಗಿದೆ. ಅವರಿಗೆ ತಳಭಾಗದಿಂದ ಕಾಲುವೆಗಳು ಹರಿಯುತ್ತಿರುವ ಸ್ವರ್ಗೋದ್ಯಾನಗಳಿರುವುವು. ಅವರು ಅದರಲ್ಲಿ ಶಾಶ್ವತವಾಗಿರುವರು. ಅವರ ಬಗ್ಗೆ ಅಲ್ಲ್ಲಾಹನು ಸಂತೃಪ್ತನಾಗಿರುವನು. ಮತ್ತು ಅವರು ಅವನ ಬಗ್ಗೆ ಸಂತೃಪ್ತರಾಗಿರುವರು. ಇದು ಮಹಾ ಯಶಸ್ಸಾಗಿದೆ.
আৰবী তাফছীৰসমূহ:
لِلّٰهِ مُلْكُ السَّمٰوٰتِ وَالْاَرْضِ وَمَا فِیْهِنَّ ؕ— وَهُوَ عَلٰی كُلِّ شَیْءٍ قَدِیْرٌ ۟۠
ಆಕಾಶಗಳಲ್ಲೂ, ಭೂಮಿಯಲ್ಲೂ ಮತ್ತು ಅವರೆಡರ ನಡುವೆಯೂ ಇರುವ ಸಕಲ ವಸ್ತುಗಳ ಆಧಿಪತ್ಯವು ಅಲ್ಲಾಹನದ್ದಾಗಿದೆ. ಅವನು ಸಕಲ ವಸ್ತುಗಳ ಮೇಲೆ ಸಾಮರ್ಥ್ಯವುಳ್ಳವನಾಗಿದ್ದಾನೆ.
আৰবী তাফছীৰসমূহ:
 
অৰ্থানুবাদ ছুৰা: আল-মায়িদাহ
ছুৰাৰ তালিকা পৃষ্ঠা নং
 
আল-কোৰআনুল কাৰীমৰ অৰ্থানুবাদ - কানাড়া অনুবাদ- বশীৰ মিছুৰী - অনুবাদসমূহৰ সূচীপত্ৰ

শ্বেইখ বশীৰ মাইছুৰীয়ে অনুবাদ কৰিছে। মৰ্কজ ৰুৱাদুত তাৰ্জামাৰ তত্ত্বাৱধানত ইয়াক উন্নীত কৰা হৈছে।

বন্ধ