আল-কোৰআনুল কাৰীমৰ অৰ্থানুবাদ - الترجمة الكنادية * - অনুবাদসমূহৰ সূচীপত্ৰ

XML CSV Excel API
Please review the Terms and Policies

অৰ্থানুবাদ ছুৰা: ছুৰা ত্বা-হা   আয়াত:

ಸೂರ ತ್ವಾಹಾ

طٰهٰ ۟
ತ್ವಾಹಾ
আৰবী তাফছীৰসমূহ:
مَاۤ اَنْزَلْنَا عَلَیْكَ الْقُرْاٰنَ لِتَشْقٰۤی ۟ۙ
(ಪ್ರವಾದಿಯವರೇ) ನಿಮಗೆ ಕಷ್ಟವಾಗಬೇಕೆಂದು ನಾವು ಈ ಕುರ್‌ಆನನ್ನು ನಿಮಗೆ ಅವತೀರ್ಣಗೊಳಿಸಿಲ್ಲ.
আৰবী তাফছীৰসমূহ:
اِلَّا تَذْكِرَةً لِّمَنْ یَّخْشٰی ۟ۙ
ದೇವಭಯವುಳ್ಳವರಿಗೆ ಒಂದು ಉಪದೇಶವಾಗಿ ಮಾತ್ರ (ಇದನ್ನು ಅವತೀರ್ಣಗೊಳಿಸಿದ್ದೇವೆ).
আৰবী তাফছীৰসমূহ:
تَنْزِیْلًا مِّمَّنْ خَلَقَ الْاَرْضَ وَالسَّمٰوٰتِ الْعُلٰی ۟ؕ
ಭೂಮಿ ಮತ್ತು ಅತ್ಯುನ್ನತ ಆಕಾಶಗಳನ್ನು ಸೃಷ್ಟಿಸಿದ (ಅಲ್ಲಾಹನ) ಕಡೆಯಿಂದ ಇದು ಅವತೀರ್ಣವಾಗಿದೆ.
আৰবী তাফছীৰসমূহ:
اَلرَّحْمٰنُ عَلَی الْعَرْشِ اسْتَوٰی ۟
ಪರಮ ದಯಾಮಯನು (ಅಲ್ಲಾಹು) ಸಿಂಹಾಸನದಲ್ಲಿ ಆರೂಢನಾಗಿದ್ದಾನೆ.
আৰবী তাফছীৰসমূহ:
لَهٗ مَا فِی السَّمٰوٰتِ وَمَا فِی الْاَرْضِ وَمَا بَیْنَهُمَا وَمَا تَحْتَ الثَّرٰی ۟
ಭೂಮ್ಯಾಕಾಶಗಳಲ್ಲಿ, ಅವುಗಳ ನಡುವೆ ಮತ್ತು ಭೂಮಿಯ ಅಡಿಯಲ್ಲಿರುವುದೆಲ್ಲವೂ ಅವನಿಗೆ ಸೇರಿದ್ದು.
আৰবী তাফছীৰসমূহ:
وَاِنْ تَجْهَرْ بِالْقَوْلِ فَاِنَّهٗ یَعْلَمُ السِّرَّ وَاَخْفٰی ۟
ನೀವು ಜೋರಾಗಿ ಮಾತನಾಡಿದರೂ—ನಿಶ್ಚಯವಾಗಿಯೂ ಅವನು ರಹಸ್ಯವಾಗಿರುವುದನ್ನು ಮತ್ತು ನಿಗೂಢವಾಗಿರುವುದನ್ನು ತಿಳಿಯುತ್ತಾನೆ.
আৰবী তাফছীৰসমূহ:
اَللّٰهُ لَاۤ اِلٰهَ اِلَّا هُوَ ؕ— لَهُ الْاَسْمَآءُ الْحُسْنٰی ۟
ಅವನೇ ಅಲ್ಲಾಹು, ಅವನ ಹೊರತು ಆರಾಧನೆಗೆ ಅರ್ಹರಾದ ಬೇರೆ ದೇವರಿಲ್ಲ. ಅವನಿಗೆ ಅತ್ಯುತ್ತಮವಾದ ಹೆಸರುಗಳಿವೆ.
আৰবী তাফছীৰসমূহ:
وَهَلْ اَتٰىكَ حَدِیْثُ مُوْسٰی ۟ۘ
ಮೂಸಾರ ಸಮಾಚಾರವು ನಿಮಗೆ ತಲುಪಿದೆಯೇ?
আৰবী তাফছীৰসমূহ:
اِذْ رَاٰ نَارًا فَقَالَ لِاَهْلِهِ امْكُثُوْۤا اِنِّیْۤ اٰنَسْتُ نَارًا لَّعَلِّیْۤ اٰتِیْكُمْ مِّنْهَا بِقَبَسٍ اَوْ اَجِدُ عَلَی النَّارِ هُدًی ۟
ಅವರು ಒಂದು ಬೆಂಕಿಯನ್ನು ಕಂಡ ಸಂದರ್ಭ. ಅವರು ತಮ್ಮ ಮನೆಯವರೊಡನೆ ಹೇಳಿದರು: “ನೀವಿಲ್ಲೇ ಇರಿ. ನನಗೆ (ದೂರದಲ್ಲಿ) ಬೆಂಕಿ ಕಾಣುತ್ತಿದೆ. ನಾನು ಅದರಿಂದ ಏನಾದರೂ ಉರಿಸಿಕೊಂಡು ಬರುತ್ತೇನೆ. ಅಥವಾ ಬೆಂಕಿಯ ಬಳಿ ಯಾವುದಾದರೂ ದಾರಿಯನ್ನು ನೋಡುತ್ತೇನೆ.”
আৰবী তাফছীৰসমূহ:
فَلَمَّاۤ اَتٰىهَا نُوْدِیَ یٰمُوْسٰی ۟ؕ
ಅವರು ಅಲ್ಲಿಗೆ ತಲುಪಿದಾಗ ಒಂದು ಧ್ವನಿಯುಂಟಾಯಿತು: “ಓ ಮೂಸಾ!
আৰবী তাফছীৰসমূহ:
اِنِّیْۤ اَنَا رَبُّكَ فَاخْلَعْ نَعْلَیْكَ ۚ— اِنَّكَ بِالْوَادِ الْمُقَدَّسِ طُوًی ۟ؕ
ನಾನೇ ನಿಮ್ಮ ಪರಿಪಾಲಕ. ನೀವು ನಿಮ್ಮ ಚಪ್ಪಲಿಯನ್ನು ಕಳಚಿಡಿ. ನೀವು ‘ತುವಾ’ ಎಂಬ ಪವಿತ್ರ ಕಣಿವೆಯಲ್ಲಿದ್ದೀರಿ.
আৰবী তাফছীৰসমূহ:
وَاَنَا اخْتَرْتُكَ فَاسْتَمِعْ لِمَا یُوْحٰی ۟
ನಾನು ನಿಮ್ಮನ್ನು ಆರಿಸಿದ್ದೇನೆ. ಆದ್ದರಿಂದ ನಿಮಗೆ ನೀಡಲಾಗುವ ದೇವವಾಣಿಯನ್ನು ಕಿವಿಗೊಟ್ಟು ಕೇಳಿ.
আৰবী তাফছীৰসমূহ:
اِنَّنِیْۤ اَنَا اللّٰهُ لَاۤ اِلٰهَ اِلَّاۤ اَنَا فَاعْبُدْنِیْ ۙ— وَاَقِمِ الصَّلٰوةَ لِذِكْرِیْ ۟
ನಿಶ್ಚಯವಾಗಿಯೂ ನಾನೇ ಅಲ್ಲಾಹು. ನನ್ನ ಹೊರತು ಆರಾಧನೆಗೆ ಅರ್ಹರಾದ ಬೇರೆ ದೇವರಿಲ್ಲ. ಆದ್ದರಿಂದ ನನ್ನನ್ನು ಮಾತ್ರ ಆರಾಧಿಸಿರಿ ಮತ್ತು ನನ್ನ ನೆನಪಿಗಾಗಿ ನಮಾಝನ್ನು ಸಂಸ್ಥಾಪಿಸಿರಿ.
আৰবী তাফছীৰসমূহ:
اِنَّ السَّاعَةَ اٰتِیَةٌ اَكَادُ اُخْفِیْهَا لِتُجْزٰی كُلُّ نَفْسٍ بِمَا تَسْعٰی ۟
ನಿಶ್ಚಯವಾಗಿಯೂ ಅಂತ್ಯಸಮಯವು ಸಂಭವಿಸಿಯೇ ತೀರುತ್ತದೆ. ಪ್ರತಿಯೊಬ್ಬರಿಗೂ ಅವರು ಮಾಡಿದ ಪರಿಶ್ರಮಗಳಿಗೆ ಪ್ರತಿಫಲವನ್ನು ನೀಡುವುದಕ್ಕೋಸ್ಕರ ನಾನು ಅದನ್ನು ಗೋಪ್ಯವಾಗಿಡಲು ಬಯಸುತ್ತೇನೆ.
আৰবী তাফছীৰসমূহ:
فَلَا یَصُدَّنَّكَ عَنْهَا مَنْ لَّا یُؤْمِنُ بِهَا وَاتَّبَعَ هَوٰىهُ فَتَرْدٰی ۟
ಆದ್ದರಿಂದ ಅದರಲ್ಲಿ ನಂಬಿಕೆಯಿಲ್ಲದವರು ಮತ್ತು ತಮ್ಮ ಸ್ವೇಚ್ಛೆಗಳನ್ನು ಹಿಂಬಾಲಿಸಿದವರು ಯಾರೋ ಅವರು ನಿಮ್ಮನ್ನು ಅದರಲ್ಲಿ ದೃಢವಿಶ್ವಾಸವಿಡದಂತೆ ತಡೆಯದಿರಲಿ. ಹಾಗೇನಾದರೂ ಆದರೆ ನೀವು ನಾಶವಾಗಿ ಬಿಡುವಿರಿ.
আৰবী তাফছীৰসমূহ:
وَمَا تِلْكَ بِیَمِیْنِكَ یٰمُوْسٰی ۟
ಓ ಮೂಸಾ! ನಿಮ್ಮ ಬಲಗೈಯಲ್ಲಿರುವುದೇನು?”
আৰবী তাফছীৰসমূহ:
قَالَ هِیَ عَصَایَ ۚ— اَتَوَكَّؤُا عَلَیْهَا وَاَهُشُّ بِهَا عَلٰی غَنَمِیْ وَلِیَ فِیْهَا مَاٰرِبُ اُخْرٰی ۟
ಮೂಸಾ ಹೇಳಿದರು: “ಇದು ನನ್ನ ಕೋಲು. ಇದನ್ನು ಆಧಾರವಾಗಿಟ್ಟು ನಾನು ನಿಲ್ಲುತ್ತೇನೆ. ಇದರಿಂದ ನಾನು ನನ್ನ ಕುರಿಗಳಿಗೆ ಎಲೆಗಳನ್ನು ಉದುರಿಸುತ್ತೇನೆ. ಇದರಲ್ಲಿ ನನಗೆ ಬೇರೆ ಪ್ರಯೋಜನಗಳೂ ಇವೆ.”
আৰবী তাফছীৰসমূহ:
قَالَ اَلْقِهَا یٰمُوْسٰی ۟
ಅಲ್ಲಾಹು ಹೇಳಿದನು: “ಓ ಮೂಸಾ! ಆ ಕೋಲನ್ನು ಕೆಳಗೆಸೆಯಿರಿ.”
আৰবী তাফছীৰসমূহ:
فَاَلْقٰىهَا فَاِذَا هِیَ حَیَّةٌ تَسْعٰی ۟
ಮೂಸಾ ಅದನ್ನು ಕೆಳಗೆಸೆದರು. ಆಗ ಅಗೋ! ಅದು ಸರ್ಪವಾಗಿ ಮಾರ್ಪಟ್ಟು ಓಡತೊಡಗಿತು.
আৰবী তাফছীৰসমূহ:
قَالَ خُذْهَا وَلَا تَخَفْ ۫— سَنُعِیْدُهَا سِیْرَتَهَا الْاُوْلٰی ۟
ಅಲ್ಲಾಹು ಹೇಳಿದನು: “ಅದನ್ನು ಹಿಡಿಯಿರಿ. ಭಯಪಡಬೇಡಿ. ನಾವು ಅದನ್ನು ಅದರ ಹಿಂದಿನ ರೂಪಕ್ಕೆ ಮರಳಿಸುತ್ತೇವೆ.
আৰবী তাফছীৰসমূহ:
وَاضْمُمْ یَدَكَ اِلٰی جَنَاحِكَ تَخْرُجْ بَیْضَآءَ مِنْ غَیْرِ سُوْٓءٍ اٰیَةً اُخْرٰی ۟ۙ
ನಿಮ್ಮ ಕೈಯನ್ನು ನಿಮ್ಮ ಕಂಕುಳದಲ್ಲಿಡಿ. ಅದು ಬೆಳ್ಳಗೆ ಹೊಳೆಯುತ್ತಾ ಹೊರಬರುತ್ತದೆ. ಅದರಲ್ಲಿ ಯಾವುದೇ ದೋಷವಿರುವುದಿಲ್ಲ. ಇದು ಇನ್ನೊಂದು ದೃಷ್ಟಾಂತವಾಗಿದೆ.
আৰবী তাফছীৰসমূহ:
لِنُرِیَكَ مِنْ اٰیٰتِنَا الْكُبْرٰی ۟ۚ
ನಿಮಗೆ ನಮ್ಮ ಮಹಾ ದೃಷ್ಟಾಂತಗಳಲ್ಲಿ ಸೇರಿದ ಕೆಲವನ್ನು ತೋರಿಸಿಕೊಡುವುದಕ್ಕಾಗಿ (ಹೀಗೆ ಮಾಡುತ್ತಿದ್ದೇವೆ).
আৰবী তাফছীৰসমূহ:
اِذْهَبْ اِلٰی فِرْعَوْنَ اِنَّهٗ طَغٰی ۟۠
ನೀವು ಫರೋಹನ ಬಳಿಗೆ ಹೋಗಿ. ಖಂಡಿತವಾಗಿಯೂ ಅವನು ಅತಿರೇಕಿಯಾಗಿದ್ದಾನೆ.”
আৰবী তাফছীৰসমূহ:
قَالَ رَبِّ اشْرَحْ لِیْ صَدْرِیْ ۟ۙ
ಮೂಸಾ ಹೇಳಿದರು: “ನನ್ನ ಪರಿಪಾಲಕನೇ! ನನಗೆ ನನ್ನ ಹೃದಯವನ್ನು ತೆರೆದುಕೊಡು.
আৰবী তাফছীৰসমূহ:
وَیَسِّرْ لِیْۤ اَمْرِیْ ۟ۙ
ನನಗೆ ನನ್ನ ಕೆಲಸವನ್ನು ಸುಲಭಗೊಳಿಸು.
আৰবী তাফছীৰসমূহ:
وَاحْلُلْ عُقْدَةً مِّنْ لِّسَانِیْ ۟ۙ
ನನ್ನ ನಾಲಗೆಯಯಿಂದ ಕಟ್ಟುಗಳನ್ನು ಬಿಚ್ಚಿ ಹಾಕು.[1]
[1] ಮೂಸಾ (ಅವರ ಮೇಲೆ ಶಾಂತಿಯಿರಲಿ) ತೊದಲುತ್ತಾ ಮಾತನಾಡುತ್ತಿದ್ದರು.
আৰবী তাফছীৰসমূহ:
یَفْقَهُوْا قَوْلِیْ ۪۟
ಜನರು ನನ್ನ ಮಾತನ್ನು ಅರ್ಥಮಾಡಿಕೊಳ್ಳುವುದಕ್ಕಾಗಿ.
আৰবী তাফছীৰসমূহ:
وَاجْعَلْ لِّیْ وَزِیْرًا مِّنْ اَهْلِیْ ۟ۙ
ನನಗೆ ನನ್ನ ಕುಟುಂಬದಿಂದಲೇ ಒಬ್ಬ ಸಹಾಯಕನನ್ನು ನಿಶ್ಚಯಿಸು.
আৰবী তাফছীৰসমূহ:
هٰرُوْنَ اَخِی ۟ۙ
ನನ್ನ ಸಹೋದರ ಹಾರೂನನನ್ನು.
আৰবী তাফছীৰসমূহ:
اشْدُدْ بِهٖۤ اَزْرِیْ ۟ۙ
ಅವನಿಂದ ನನ್ನ ಶಕ್ತಿಯನ್ನು ಬಲಪಡಿಸು.
আৰবী তাফছীৰসমূহ:
وَاَشْرِكْهُ فِیْۤ اَمْرِیْ ۟ۙ
ನನ್ನ ಕೆಲಸದಲ್ಲಿ ಅವನನ್ನು ಪಾಲುದಾರನಾಗಿ ಮಾಡು.
আৰবী তাফছীৰসমূহ:
كَیْ نُسَبِّحَكَ كَثِیْرًا ۟ۙ
ನಾವು ಹೇರಳವಾಗಿ ನಿನ್ನ ಪರಿಶುದ್ಧತೆಯನ್ನು ಕೊಂಡಾಡಲು.
আৰবী তাফছীৰসমূহ:
وَّنَذْكُرَكَ كَثِیْرًا ۟ؕ
ಮತ್ತು ನಿನ್ನನ್ನು ಹೇರಳವಾಗಿ ಸ್ಮರಿಸಲು.
আৰবী তাফছীৰসমূহ:
اِنَّكَ كُنْتَ بِنَا بَصِیْرًا ۟
ನಿಶ್ಚಯವಾಗಿಯೂ ನೀನು ನಮ್ಮ ಕ್ಷೇಮವನ್ನು ನೋಡಿಕೊಳ್ಳುವವನಾಗಿರುವೆ.”
আৰবী তাফছীৰসমূহ:
قَالَ قَدْ اُوْتِیْتَ سُؤْلَكَ یٰمُوْسٰی ۟
ಅಲ್ಲಾಹು ಹೇಳಿದನು: “ಓ ಮೂಸಾ! ನೀವು ಕೇಳಿದ್ದೆಲ್ಲವನ್ನೂ ನಿಮಗೆ ನೀಡಲಾಗಿದೆ.
আৰবী তাফছীৰসমূহ:
وَلَقَدْ مَنَنَّا عَلَیْكَ مَرَّةً اُخْرٰۤی ۟ۙ
ನಾವು ನಿಮಗೆ ಬೇರೊಂದು ಸಂದರ್ಭದಲ್ಲೂ ದೊಡ್ಡ ಉಪಕಾರ ಮಾಡಿದ್ದೆವು.
আৰবী তাফছীৰসমূহ:
اِذْ اَوْحَیْنَاۤ اِلٰۤی اُمِّكَ مَا یُوْحٰۤی ۟ۙ
ನಿಮಗೆ ಈಗ ತಿಳಿಸಲಾಗುವ (ಈ ಕೆಳಗಿನ) ವಿಷಯವನ್ನು ನಾವು ನಿಮ್ಮ ತಾಯಿಗೆ ತೋಚುವಂತೆ ಮಾಡಿದ ಸಂದರ್ಭ.
আৰবী তাফছীৰসমূহ:
اَنِ اقْذِفِیْهِ فِی التَّابُوْتِ فَاقْذِفِیْهِ فِی الْیَمِّ فَلْیُلْقِهِ الْیَمُّ بِالسَّاحِلِ یَاْخُذْهُ عَدُوٌّ لِّیْ وَعَدُوٌّ لَّهٗ ؕ— وَاَلْقَیْتُ عَلَیْكَ مَحَبَّةً مِّنِّیْ ۚ۬— وَلِتُصْنَعَ عَلٰی عَیْنِیْ ۟ۘ
ಆ ಮಗುವನ್ನು (ಮೂಸಾರನ್ನು) ಒಂದು ಪೆಟ್ಟಿಗೆಯಲ್ಲಿಟ್ಟು ಹೊಳೆಗೆ ಎಸೆಯಿರಿ. ಹೊಳೆಯು ಆ ಪೆಟ್ಟಿಗೆಯನ್ನು ದಡಕ್ಕೆ ಒಯ್ಯುತ್ತದೆ. ಆಗ ನನ್ನ ಮತ್ತು ಆ ಮಗುವಿನ ವೈರಿ ಆ ಮಗುವನ್ನು ಎತ್ತಿಕೊಳ್ಳುವನು. (ಓ ಮೂಸಾ) ನಾನು ನನ್ನ ಕಡೆಯ ವಿಶೇಷ ಪ್ರೀತಿಯನ್ನು ನಿಮ್ಮ ಮೇಲೆ ಇಟ್ಟಿದ್ದೆನು. ನೀವು ನನ್ನ ಕಣ್ಣುಗಳ ಮುಂದೆ ಬೆಳೆದು ದೊಡ್ಡವನಾಗುವುದಕ್ಕಾಗಿ.
আৰবী তাফছীৰসমূহ:
اِذْ تَمْشِیْۤ اُخْتُكَ فَتَقُوْلُ هَلْ اَدُلُّكُمْ عَلٰی مَنْ یَّكْفُلُهٗ ؕ— فَرَجَعْنٰكَ اِلٰۤی اُمِّكَ كَیْ تَقَرَّ عَیْنُهَا وَلَا تَحْزَنَ ؕ۬— وَقَتَلْتَ نَفْسًا فَنَجَّیْنٰكَ مِنَ الْغَمِّ وَفَتَنّٰكَ فُتُوْنًا ۫۬— فَلَبِثْتَ سِنِیْنَ فِیْۤ اَهْلِ مَدْیَنَ ۙ۬— ثُمَّ جِئْتَ عَلٰی قَدَرٍ یّٰمُوْسٰی ۟
ನಿಮ್ಮ ಸಹೋದರಿ ನಡೆಯುತ್ತಾ ಬಂದ ಸಂದರ್ಭ. ಅವಳು ಹೇಳಿದಳು: “ಈ ಮಗುವಿನ ಲಾಲನೆ-ಪಾಲನೆ ಮಾಡುವ ಒಬ್ಬರನ್ನು ನಾನು ನಿಮಗೆ ತೋರಿಸಿಕೊಡಲೇ?” ಹೀಗೆ ನಾವು ನಿಮ್ಮನ್ನು ನಿಮ್ಮ ತಾಯಿಗೆ ಹಿಂದಿರುಗಿಸಿದೆವು. ಆಕೆಯ ಕಣ್ಮನ ತಣಿಯುವುದಕ್ಕಾಗಿ ಮತ್ತು ಆಕೆ ದುಃಖಪಡದಿರುವುದಕ್ಕಾಗಿ. ನೀವು ಒಬ್ಬ ವ್ಯಕ್ತಿಯನ್ನು ಕೊಂದಿರಿ. ಆಗ ನಾವು ನಿಮ್ಮನ್ನು ಆ ಸಂಕಟದಿಂದ ಪಾರು ಮಾಡಿದೆವು. ನಾವು ನಿಮ್ಮನ್ನು ಅನೇಕ ವಿಧಗಳಿಂದ ಪರೀಕ್ಷಿಸಿದೆವು. ನಂತರ ನೀವು ಮದ್ಯನ್ ಗೋತ್ರದವರೊಡನೆ ಹಲವಾರು ವರ್ಷ ವಾಸಿಸಿದಿರಿ. ಓ ಮೂಸಾ! ನಂತರ ನನ್ನ ನಿರ್ಣಯದಂತೆ ನೀವು ಇಲ್ಲಿಗೆ ಬಂದಿದ್ದೀರಿ.
আৰবী তাফছীৰসমূহ:
وَاصْطَنَعْتُكَ لِنَفْسِیْ ۟ۚ
ನಾನು ನಿಮ್ಮನ್ನು ಸ್ವತಃ ನನಗಾಗಿ ಆಯ್ಕೆ ಮಾಡಿದ್ದೇನೆ.
আৰবী তাফছীৰসমূহ:
اِذْهَبْ اَنْتَ وَاَخُوْكَ بِاٰیٰتِیْ وَلَا تَنِیَا فِیْ ذِكْرِیْ ۟ۚ
ನೀವು ನಿಮ್ಮ ಸಹೋದರನನ್ನು ಕರೆದುಕೊಂಡು ನನ್ನ ದೃಷ್ಟಾಂತಗಳೊಂದಿಗೆ ಹೊರಡಿರಿ. ನನ್ನನ್ನು ಸ್ಮರಿಸುವ ವಿಷಯದಲ್ಲಿ ಉದಾಸೀನರಾಗಬೇಡಿ.
আৰবী তাফছীৰসমূহ:
اِذْهَبَاۤ اِلٰی فِرْعَوْنَ اِنَّهٗ طَغٰی ۟ۚۖ
ನೀವಿಬ್ಬರೂ ಫರೋಹನ ಬಳಿಗೆ ಹೋಗಿರಿ. ಖಂಡಿತವಾಗಿಯೂ ಅವನು ಅತಿರೇಕಿಯಾಗಿದ್ದಾನೆ.
আৰবী তাফছীৰসমূহ:
فَقُوْلَا لَهٗ قَوْلًا لَّیِّنًا لَّعَلَّهٗ یَتَذَكَّرُ اَوْ یَخْشٰی ۟
ಅವನೊಡನೆ ಮೃದುವಾಗಿ ಮಾತನಾಡಿರಿ. ಅವನು ಉಪದೇಶ ಸ್ವೀಕರಿಸಬಹುದು ಅಥವಾ ಭಯಪಡಬಹುದು.”
আৰবী তাফছীৰসমূহ:
قَالَا رَبَّنَاۤ اِنَّنَا نَخَافُ اَنْ یَّفْرُطَ عَلَیْنَاۤ اَوْ اَنْ یَّطْغٰی ۟
ಅವರಿಬ್ಬರು ಹೇಳಿದರು: “ನಮ್ಮ ಪರಿಪಾಲಕನೇ! ಅವನು ನಮ್ಮ ಮೇಲೆ ದಬ್ಬಾಳಿಕೆ ಮಾಡಬಹುದು ಅಥವಾ ಅತಿರೇಕವೆಸಬಹುದೆಂದು ನಮಗೆ ಭಯವಾಗುತ್ತಿದೆ.”
আৰবী তাফছীৰসমূহ:
قَالَ لَا تَخَافَاۤ اِنَّنِیْ مَعَكُمَاۤ اَسْمَعُ وَاَرٰی ۟
ಅಲ್ಲಾಹು ಹೇಳಿದನು: “ಹೆದರಬೇಡಿ. ನಾನು ಖಂಡಿತ ನಿಮ್ಮ ಜೊತೆಗಿದ್ದೇನೆ. ನಾನು ಕೇಳುತ್ತಲೂ, ನೋಡುತ್ತಲೂ ಇದ್ದೇನೆ.
আৰবী তাফছীৰসমূহ:
فَاْتِیٰهُ فَقُوْلَاۤ اِنَّا رَسُوْلَا رَبِّكَ فَاَرْسِلْ مَعَنَا بَنِیْۤ اِسْرَآءِیْلَ ۙ۬— وَلَا تُعَذِّبْهُمْ ؕ— قَدْ جِئْنٰكَ بِاٰیَةٍ مِّنْ رَّبِّكَ ؕ— وَالسَّلٰمُ عَلٰی مَنِ اتَّبَعَ الْهُدٰی ۟
ನೀವಿಬ್ಬರೂ ಅವನ ಬಳಿಗೆ ಹೋಗಿ, ಅವನೊಡನೆ ಹೇಳಿರಿ: “ನಿಶ್ಚಯವಾಗಿಯೂ ನಾವು ನಿಮ್ಮ ಪರಿಪಾಲಕನ (ಅಲ್ಲಾಹನ) ಸಂದೇಶವಾಹಕರಾಗಿದ್ದೇವೆ. ಆದ್ದರಿಂದ ಇಸ್ರಾಯೇಲ್ ಮಕ್ಕಳನ್ನು ನಮ್ಮ ಜೊತೆಗೆ ಕಳುಹಿಸಿಕೊಡಿ. ಅವರನ್ನು ಹಿಂಸೆ ನೀಡಬೇಡಿ. ನಾವು ನಿಮ್ಮ ಪರಿಪಾಲಕನ (ಅಲ್ಲಾಹನ) ಕಡೆಯಿಂದ ಒಂದು ದೃಷ್ಟಾಂತದೊಂದಿಗೆ ನಿಮ್ಮ ಬಳಿಗೆ ಬಂದಿದ್ದೇವೆ. ಸನ್ಮಾರ್ಗವನ್ನು ಅನುಸರಿಸುವವರ ಮೇಲೆ (ಅಲ್ಲಾಹನ) ಸಂರಕ್ಷಣೆಯಿದೆ.
আৰবী তাফছীৰসমূহ:
اِنَّا قَدْ اُوْحِیَ اِلَیْنَاۤ اَنَّ الْعَذَابَ عَلٰی مَنْ كَذَّبَ وَتَوَلّٰی ۟
ಸತ್ಯವನ್ನು ನಿಷೇಧಿಸಿದವರಿಗೆ ಮತ್ತು (ಅದರಿಂದ) ವಿಮುಖರಾದವರಿಗೆ ಶಿಕ್ಷೆಯಿದೆಯೆಂದು ನಿಶ್ಚಯವಾಗಿಯೂ ನಮಗೆ ದೇವವಾಣಿ ನೀಡಲಾಗಿದೆ.”
আৰবী তাফছীৰসমূহ:
قَالَ فَمَنْ رَّبُّكُمَا یٰمُوْسٰی ۟
ಫರೋಹ ಕೇಳಿದನು: “ಓ ಮೂಸಾ! ನಿಮ್ಮಿಬ್ಬರ ಪರಿಪಾಲಕ ಯಾರು?”
আৰবী তাফছীৰসমূহ:
قَالَ رَبُّنَا الَّذِیْۤ اَعْطٰی كُلَّ شَیْءٍ خَلْقَهٗ ثُمَّ هَدٰی ۟
ಮೂಸಾ ಹೇಳಿದರು: “ಪ್ರತಿಯೊಂದು ವಸ್ತುವಿಗೂ ಅದರ ವಿಶಿಷ್ಟ ರೂಪ ಮತ್ತು ಆಕೃತಿಯನ್ನು ನೀಡಿ ನಂತರ ಅದಕ್ಕೆ ಮಾರ್ಗದರ್ಶನ ಮಾಡಿದವನೇ ನಮ್ಮ ಪರಿಪಾಲಕ.”
আৰবী তাফছীৰসমূহ:
قَالَ فَمَا بَالُ الْقُرُوْنِ الْاُوْلٰی ۟
ಫರೋಹ ಕೇಳಿದನು: “ಸರಿ. ಹಾಗಾದರೆ ಹಿಂದಿನ ತಲೆಮಾರುಗಳ ಅವಸ್ಥೆಯೇನು?”
আৰবী তাফছীৰসমূহ:
قَالَ عِلْمُهَا عِنْدَ رَبِّیْ فِیْ كِتٰبٍ ۚ— لَا یَضِلُّ رَبِّیْ وَلَا یَنْسَی ۟ؗ
ಮೂಸಾ ಹೇಳಿದರು: “ಅವರ ಕುರಿತಾದ ಜ್ಞಾನವು ನನ್ನ ಪರಿಪಾಲಕನ (ಅಲ್ಲಾಹನ) ಬಳಿ ಒಂದು ಗ್ರಂಥದಲ್ಲಿದೆ. ನನ್ನ ಪರಿಪಾಲಕನು (ಅಲ್ಲಾಹು) ಯಾವುದೇ ಪ್ರಮಾದವೆಸಗುವುದಿಲ್ಲ; ಅವನು ಮರೆಯುವುದೂ ಇಲ್ಲ.”
আৰবী তাফছীৰসমূহ:
الَّذِیْ جَعَلَ لَكُمُ الْاَرْضَ مَهْدًا وَّسَلَكَ لَكُمْ فِیْهَا سُبُلًا وَّاَنْزَلَ مِنَ السَّمَآءِ مَآءً ؕ— فَاَخْرَجْنَا بِهٖۤ اَزْوَاجًا مِّنْ نَّبَاتٍ شَتّٰی ۟
ಅವನು ಯಾರೆಂದರೆ, ನಿಮಗೆ ಭೂಮಿಯನ್ನು ಹಾಸಿನಂತೆ ಮಾಡಿಕೊಟ್ಟವನು, ಅದರಲ್ಲಿ ನಿಮಗೆ ನಡೆಯಲು ದಾರಿಗಳನ್ನು ತೆರೆದುಕೊಟ್ಟವನು ಮತ್ತು ಆಕಾಶದಿಂದ ಮಳೆಯನ್ನು ಇಳಿಸಿಕೊಟ್ಟವನು. ನಂತರ ಆ ನೀರಿನಿಂದ ನಾವು ವಿವಿಧ ತರಹದ ಸಸ್ಯಗಳು ಬೆಳೆಯುವಂತೆ ಮಾಡುತ್ತೇವೆ.
আৰবী তাফছীৰসমূহ:
كُلُوْا وَارْعَوْا اَنْعَامَكُمْ ؕ— اِنَّ فِیْ ذٰلِكَ لَاٰیٰتٍ لِّاُولِی النُّهٰی ۟۠
ನೀವು ತಿನ್ನಿರಿ ಮತ್ತು ನಿಮ್ಮ ಜಾನುವಾರುಗಳನ್ನೂ ಮೇಯಿಸಿರಿ. ನಿಶ್ಚಯವಾಗಿಯೂ ಬುದ್ಧಿವಂತರಿಗೆ ಅದರಲ್ಲಿ ಅನೇಕ ದೃಷ್ಟಾಂತಗಳಿವೆ.
আৰবী তাফছীৰসমূহ:
مِنْهَا خَلَقْنٰكُمْ وَفِیْهَا نُعِیْدُكُمْ وَمِنْهَا نُخْرِجُكُمْ تَارَةً اُخْرٰی ۟
ನಾವು ನಿಮ್ಮನ್ನು ಅದರಿಂದ (ಭೂಮಿಯಿಂದ) ಸೃಷ್ಟಿಸಿದೆವು, ನಿಮ್ಮನ್ನು ಅದಕ್ಕೇ ಮರಳಿಸುವೆವು ಮತ್ತು ಅದರಿಂದಲೇ ನಿಮ್ಮನ್ನು ಪುನಃ ಹೊರತರುವೆವು.
আৰবী তাফছীৰসমূহ:
وَلَقَدْ اَرَیْنٰهُ اٰیٰتِنَا كُلَّهَا فَكَذَّبَ وَاَبٰی ۟
ನಾವು ಅವನಿಗೆ (ಫರೋಹನಿಗೆ) ನಮ್ಮ ಎಲ್ಲಾ ದೃಷ್ಟಾಂತಗಳನ್ನು ತೋರಿಸಿಕೊಟ್ಟೆವು. ಆದರೆ ಅವನು ನಿಷೇಧಿಸಿದನು ಮತ್ತು ನಿರಾಕರಿಸಿದನು.
আৰবী তাফছীৰসমূহ:
قَالَ اَجِئْتَنَا لِتُخْرِجَنَا مِنْ اَرْضِنَا بِسِحْرِكَ یٰمُوْسٰی ۟
ಅವನು ಕೇಳಿದನು: “ಓ ಮೂಸಾ! ನೀನು ನಿನ್ನ ಮಾಟಗಾರಿಕೆಯನ್ನು ಬಳಸಿ ನಮ್ಮನ್ನು ನಮ್ಮ ದೇಶದಿಂದ ಓಡಿಸಲು ಇಲ್ಲಿಗೆ ಬಂದಿದ್ದೀಯಾ?
আৰবী তাফছীৰসমূহ:
فَلَنَاْتِیَنَّكَ بِسِحْرٍ مِّثْلِهٖ فَاجْعَلْ بَیْنَنَا وَبَیْنَكَ مَوْعِدًا لَّا نُخْلِفُهٗ نَحْنُ وَلَاۤ اَنْتَ مَكَانًا سُوًی ۟
ನಾವು ಕೂಡ ಅದಕ್ಕೆ ಸಮಾನವಾದ ಮಾಟಗಾರಿಕೆಯನ್ನು ತರುವೆವು. ಆದ್ದರಿಂದ ನಮ್ಮಿಬ್ಬರ ನಡುವೆ ಒಂದು ಸಮಯವನ್ನು ನಿಶ್ಚಯಿಸು. ಅದನ್ನು ನಮ್ಮಿಬ್ಬರಲ್ಲಿ ಯಾರೂ ಉಲ್ಲಂಘಿಸಬಾರದು. ಖಾಲಿ ಮೈದಾನದಲ್ಲಿ ಸ್ಪರ್ಧೆ ನಡೆಯಲಿ.”
আৰবী তাফছীৰসমূহ:
قَالَ مَوْعِدُكُمْ یَوْمُ الزِّیْنَةِ وَاَنْ یُّحْشَرَ النَّاسُ ضُحًی ۟
ಮೂಸಾ ಹೇಳಿದರು: “ಉತ್ಸವದ ದಿನವೇ ನಿಮಗಿರುವ ನಿಗದಿತ ಸಮಯವಾಗಿದೆ. ಪೂರ್ವಾಹ್ನದಲ್ಲೇ ಜನರು ಒಟ್ಟುಗೂಡಲಿ.”
আৰবী তাফছীৰসমূহ:
فَتَوَلّٰی فِرْعَوْنُ فَجَمَعَ كَیْدَهٗ ثُمَّ اَتٰی ۟
ಫರೋಹ ಅಲ್ಲಿಂದ ನಿರ್ಗಮಿಸಿ ತನ್ನ ವ್ಯೂಹವನ್ನು ನಿರ್ಧರಿಸಿದನು. ನಂತರ ನಿಗದಿತ ಸಮಯಕ್ಕೆ ಬಂದನು.
আৰবী তাফছীৰসমূহ:
قَالَ لَهُمْ مُّوْسٰی وَیْلَكُمْ لَا تَفْتَرُوْا عَلَی اللّٰهِ كَذِبًا فَیُسْحِتَكُمْ بِعَذَابٍ ۚ— وَقَدْ خَابَ مَنِ افْتَرٰی ۟
ಮೂಸಾ ಮಾಟಗಾರರೊಡನೆ ಹೇಳಿದರು: “ನಿಮಗೆ ದುರದೃಷ್ಟ ಕಾದಿದೆ! ಅಲ್ಲಾಹನ ಮೇಲೆ ಸುಳ್ಳನ್ನು ಆರೋಪಿಸಬೇಡಿ. ಹಾಗೇನಾದರೂ ಮಾಡಿದರೆ ಅವನು ನಿಮ್ಮನ್ನು ಶಿಕ್ಷೆಯ ಮೂಲಕ ಸರ್ವನಾಶ ಮಾಡುವನು. ಸುಳ್ಳನ್ನು ಆರೋಪಿಸುವವನು ಖಂಡಿತ ಪರಾಜಿತನಾಗುತ್ತಾನೆ.”
আৰবী তাফছীৰসমূহ:
فَتَنَازَعُوْۤا اَمْرَهُمْ بَیْنَهُمْ وَاَسَرُّوا النَّجْوٰی ۟
ಜನರು ಪರಸ್ಪರ ತಮ್ಮ ತಮ್ಮಲ್ಲಿ ಭಿನ್ನ ಅಭಿಪ್ರಾಯಗಳನ್ನು ತಳೆದರು. ಅವರು ರಹಸ್ಯವಾಗಿ ಮಾತನಾಡತೊಡಗಿದರು.
আৰবী তাফছীৰসমূহ:
قَالُوْۤا اِنْ هٰذٰنِ لَسٰحِرٰنِ یُرِیْدٰنِ اَنْ یُّخْرِجٰكُمْ مِّنْ اَرْضِكُمْ بِسِحْرِهِمَا وَیَذْهَبَا بِطَرِیْقَتِكُمُ الْمُثْلٰی ۟
ಅವರು ಹೇಳಿದರು: “ನಿಶ್ಚಯವಾಗಿಯೂ ಇವರಿಬ್ಬರು ಮಾಟಗಾರರಾಗಿದ್ದಾರೆ. ಇವರು ಇವರ ಮಾಟಗಾರಿಕೆಯಿಂದ ನಿಮ್ಮನ್ನು ಈ ದೇಶದಿಂದ ಓಡಿಸಲು ಮತ್ತು ನಿಮ್ಮ ಮಾದರಿಯೋಗ್ಯ ಸಂಪ್ರದಾಯವನ್ನು ನಾಶ ಮಾಡಲು ಬಯಸುತ್ತಾರೆ.
আৰবী তাফছীৰসমূহ:
فَاَجْمِعُوْا كَیْدَكُمْ ثُمَّ ائْتُوْا صَفًّا ۚ— وَقَدْ اَفْلَحَ الْیَوْمَ مَنِ اسْتَعْلٰی ۟
ಆದ್ದರಿಂದ ನೀವು ನಿಮ್ಮ ತಂತ್ರದ ಬಗ್ಗೆ ದೃಢನಿರ್ಧಾರ ಮಾಡಿರಿ. ನಂತರ ಒಂದೇ ಸಾಲಿನಲ್ಲಿ ಬನ್ನಿರಿ. ಮೇಲುಗೈ ಸಾಧಿಸುವವರೇ ಇಂದು ಯಶಸ್ವಿಯಾಗುವರು.”
আৰবী তাফছীৰসমূহ:
قَالُوْا یٰمُوْسٰۤی اِمَّاۤ اَنْ تُلْقِیَ وَاِمَّاۤ اَنْ نَّكُوْنَ اَوَّلَ مَنْ اَلْقٰی ۟
ಮಾಟಗಾರರು ಹೇಳಿದರು: “ಓ ಮೂಸಾ! ಒಂದೋ ನೀವು ಎಸೆಯಿರಿ ಅಥವಾ ನಾವೇ ಮೊದಲು ಎಸೆಯುವೆವು.”
আৰবী তাফছীৰসমূহ:
قَالَ بَلْ اَلْقُوْا ۚ— فَاِذَا حِبَالُهُمْ وَعِصِیُّهُمْ یُخَیَّلُ اِلَیْهِ مِنْ سِحْرِهِمْ اَنَّهَا تَسْعٰی ۟
ಮೂಸಾ ಹೇಳಿದರು: “ಬೇಡ, ನೀವೇ ಎಸೆಯಿರಿ.” ಆಗ ಅಗೋ! ಅವರ ಮಾಟಗಾರಿಕೆಯಿಂದ ಅವರ ಹಗ್ಗಗಳು ಮತ್ತು ಕೋಲುಗಳು ಚಲಿಸುತ್ತಿರುವಂತೆ ಕಾಣತೊಡಗಿದವು.
আৰবী তাফছীৰসমূহ:
فَاَوْجَسَ فِیْ نَفْسِهٖ خِیْفَةً مُّوْسٰی ۟
ಮೂಸಾರಿಗೆ ಮನಸ್ಸಿನಲ್ಲಿ ಭಯವಾಯಿತು.
আৰবী তাফছীৰসমূহ:
قُلْنَا لَا تَخَفْ اِنَّكَ اَنْتَ الْاَعْلٰی ۟
ನಾವು ಹೇಳಿದೆವು: “ಭಯಪಡಬೇಡಿ. ನಿಶ್ಚಯವಾಗಿಯೂ ನೀವೇ ಮೇಲುಗೈ ಸಾಧಿಸುವಿರಿ.
আৰবী তাফছীৰসমূহ:
وَاَلْقِ مَا فِیْ یَمِیْنِكَ تَلْقَفْ مَا صَنَعُوْا ؕ— اِنَّمَا صَنَعُوْا كَیْدُ سٰحِرٍ ؕ— وَلَا یُفْلِحُ السَّاحِرُ حَیْثُ اَتٰی ۟
ನಿಮ್ಮ ಬಲಗೈಯ್ಯಲ್ಲಿರುವುದನ್ನು (ಕೋಲನ್ನು) ಎಸೆಯಿರಿ. ಅವರು ನಿರ್ಮಿಸಿದ ಎಲ್ಲವನ್ನೂ ಅದು ನುಂಗಿ ಬಿಡುವುದು. ಅವರು ಮಾಡಿರುವುದು ಮಾಟಗಾರರು ಮಾಡುವ ಕಣ್ಕಟ್ಟು ವಿದ್ಯೆಯಾಗಿದೆ. ಮಾಟಗಾರರು ಎಲ್ಲೇ ಹೋದರೂ ಯಶಸ್ವಿಯಾಗುವುದಿಲ್ಲ.”
আৰবী তাফছীৰসমূহ:
فَاُلْقِیَ السَّحَرَةُ سُجَّدًا قَالُوْۤا اٰمَنَّا بِرَبِّ هٰرُوْنَ وَمُوْسٰی ۟
ಆಗ ಮಾಟಗಾರರು ಸಾಷ್ಟಾಂಗವೆರಗುತ್ತಾ ಬಿದ್ದರು. ಅವರು ಹೇಳಿದರು: “ನಾವು ಹಾರೂನ್ ಮತ್ತು ಮೂಸಾರ ಪರಿಪಾಲಕನಲ್ಲಿ (ಅಲ್ಲಾಹನಲ್ಲಿ) ವಿಶ್ವಾಸವಿಟ್ಟಿದ್ದೇವೆ.”
আৰবী তাফছীৰসমূহ:
قَالَ اٰمَنْتُمْ لَهٗ قَبْلَ اَنْ اٰذَنَ لَكُمْ ؕ— اِنَّهٗ لَكَبِیْرُكُمُ الَّذِیْ عَلَّمَكُمُ السِّحْرَ ۚ— فَلَاُقَطِّعَنَّ اَیْدِیَكُمْ وَاَرْجُلَكُمْ مِّنْ خِلَافٍ وَّلَاُوصَلِّبَنَّكُمْ فِیْ جُذُوْعِ النَّخْلِ ؗ— وَلَتَعْلَمُنَّ اَیُّنَاۤ اَشَدُّ عَذَابًا وَّاَبْقٰی ۟
ಫರೋಹ ಹೇಳಿದನು: “ನಾನು ನಿಮಗೆ ಅಪ್ಪಣೆ ಕೊಡುವ ಮೊದಲೇ ನೀವು ಅವನಲ್ಲಿ ವಿಶ್ವಾಸವಿಟ್ಟಿರಾ? ನಿಶ್ಚಯವಾಗಿಯೂ ಅವನು ನಿಮಗೆ ಮಾಟಗಾರಿಕೆಯನ್ನು ಕಲಿಸಿಕೊಟ್ಟ ನಿಮ್ಮ ಮುಖಂಡನಾಗಿದ್ದಾನೆ. ಆದ್ದರಿಂದ ಖಂಡಿತವಾಗಿಯೂ ನಾನು ನಿಮ್ಮ ಕೈ-ಕಾಲುಗಳನ್ನು ವಿರುದ್ಧ ದಿಕ್ಕಿನಿಂದ ಕತ್ತರಿಸಿ, ನಂತರ ನಿಮ್ಮೆಲ್ಲರನ್ನೂ ಖರ್ಜೂರ ಮರದ ಕಾಂಡದಲ್ಲಿ ಶಿಲುಬೆಗೆ ಹಾಕುವೆನು. ನಮ್ಮಿಬ್ಬರಲ್ಲಿ (ನಾನು ಮತ್ತು ಮೂಸಾರ ದೇವನು) ಅತಿಕಠೋರವಾಗಿ ಮತ್ತು ಶಾಶ್ವತವಾಗಿ ಉಳಿಯುವ ಶಿಕ್ಷೆಯನ್ನು ನೀಡುವುದು ಯಾರೆಂದು ನೀವು ಖಂಡಿತ ತಿಳಿಯುವಿರಿ.”
আৰবী তাফছীৰসমূহ:
قَالُوْا لَنْ نُّؤْثِرَكَ عَلٰی مَا جَآءَنَا مِنَ الْبَیِّنٰتِ وَالَّذِیْ فَطَرَنَا فَاقْضِ مَاۤ اَنْتَ قَاضٍ ؕ— اِنَّمَا تَقْضِیْ هٰذِهِ الْحَیٰوةَ الدُّنْیَا ۟ؕ
ಮಾಟಗಾರರು ಹೇಳಿದರು: “ನಮ್ಮ ಬಳಿಗೆ ಬಂದ ಈ ಸ್ಪಷ್ಟ ಸಾಕ್ಷ್ಯಾಧಾರಗಳಿಗಿಂತ ಮತ್ತು ನಮ್ಮನ್ನು ಸೃಷ್ಟಿಸಿದ ಅಲ್ಲಾಹನಿಗಿಂತ ನಾವು ನಿಮ್ಮ ಮಾತಿಗೆ ಹೆಚ್ಚು ಪ್ರಾಶಸ್ತ್ಯ ನೀಡುವುದಿಲ್ಲ. ಆದ್ದರಿಂದ ನಿಮಗೆ ಏನು ತೀರ್ಪು ನೀಡಲಿದೆಯೋ ನೀಡಿ. ನಿಮಗೆ ತೀರ್ಪು ನೀಡಲು ಸಾಧ್ಯವಾಗುವುದು ಇಹಲೋಕದಲ್ಲಿ ಮಾತ್ರ.
আৰবী তাফছীৰসমূহ:
اِنَّاۤ اٰمَنَّا بِرَبِّنَا لِیَغْفِرَ لَنَا خَطٰیٰنَا وَمَاۤ اَكْرَهْتَنَا عَلَیْهِ مِنَ السِّحْرِ ؕ— وَاللّٰهُ خَیْرٌ وَّاَبْقٰی ۟
ನಾವು ನಮ್ಮ ಪರಿಪಾಲಕನಲ್ಲಿ (ಅಲ್ಲಾಹನಲ್ಲಿ) ವಿಶ್ವಾಸವಿಟ್ಟಿದ್ದೇವೆ. ನಾವು ಮಾಡಿದ ಪಾಪಗಳನ್ನು ಮತ್ತು ನೀವು ನಮ್ಮಿಂದ ಬಲವಂತವಾಗಿ ಮಾಡಿಸಿದ ಮಾಟಗಾರಿಕೆಯನ್ನು ಅವನು ನಮಗೆ ಕ್ಷಮಿಸುವನೆಂಬ ಭರವಸೆಯಿದೆ. ಅಲ್ಲಾಹು ಅತಿಶ್ರೇಷ್ಠನು ಮತ್ತು ಚಿರಂತನನಾಗಿದ್ದಾನೆ.”
আৰবী তাফছীৰসমূহ:
اِنَّهٗ مَنْ یَّاْتِ رَبَّهٗ مُجْرِمًا فَاِنَّ لَهٗ جَهَنَّمَ ؕ— لَا یَمُوْتُ فِیْهَا وَلَا یَحْیٰی ۟
ಯಾರು ತನ್ನ ಪರಿಪಾಲಕನ (ಅಲ್ಲಾಹನ) ಬಳಿಗೆ ಅಪರಾಧಿಯಾಗಿ ಬರುತ್ತಾನೋ—ಅವನಿಗೆ ನರಕಾಗ್ನಿಯಾಗಿದೆ. ಅವನು ಅದರಲ್ಲಿ ಸಾಯುವುದೂ ಇಲ್ಲ, ಬದುಕುವುದೂ ಇಲ್ಲ.
আৰবী তাফছীৰসমূহ:
وَمَنْ یَّاْتِهٖ مُؤْمِنًا قَدْ عَمِلَ الصّٰلِحٰتِ فَاُولٰٓىِٕكَ لَهُمُ الدَّرَجٰتُ الْعُلٰی ۟ۙ
ಯಾರು ಅವನ ಬಳಿಗೆ ಸತ್ಯವಿಶ್ವಾಸಿಯಾಗಿ ಮತ್ತು ಸತ್ಕರ್ಮಿಯಾಗಿ ಬರುತ್ತಾನೋ ಅವರಿಗೆ ಉನ್ನತೋನ್ನತ ಪದವಿಗಳಿವೆ.
আৰবী তাফছীৰসমূহ:
جَنّٰتُ عَدْنٍ تَجْرِیْ مِنْ تَحْتِهَا الْاَنْهٰرُ خٰلِدِیْنَ فِیْهَا ؕ— وَذٰلِكَ جَزٰٓؤُا مَنْ تَزَكّٰی ۟۠
ತಳಭಾಗದಿಂದ ನದಿಗಳು ಹರಿಯುವ ಶಾಶ್ವತ ವಾಸದ ಸ್ವರ್ಗೋದ್ಯಾನಗಳು. ಅವರು ಅದರಲ್ಲಿ ಶಾಶ್ವತವಾಗಿ ವಾಸಿಸುವರು. ಅದು ಪರಿಶುದ್ಧರಾದವರಿಗೆ ನೀಡಲಾಗುವ ಪ್ರತಿಫಲವಾಗಿದೆ.
আৰবী তাফছীৰসমূহ:
وَلَقَدْ اَوْحَیْنَاۤ اِلٰی مُوْسٰۤی ۙ۬— اَنْ اَسْرِ بِعِبَادِیْ فَاضْرِبْ لَهُمْ طَرِیْقًا فِی الْبَحْرِ یَبَسًا ۙ— لَّا تَخٰفُ دَرَكًا وَّلَا تَخْشٰی ۟
ನಾವು ಮೂಸಾರಿಗೆ ದೇವವಾಣಿಯನ್ನು ನೀಡಿದೆವು: “ನೀವು ರಾತ್ರೋರಾತ್ರಿ ನನ್ನ ದಾಸರೊಡನೆ ಹೊರಡಿ. ಅವರಿಗೆ ಸಮುದ್ರದಲ್ಲಿ ಒಂದು ಒಣ ರಸ್ತೆಯನ್ನು ಮಾಡಿಕೊಡಿ. ನಂತರ ನಿಮಗೆ (ಶತ್ರುಗಳು) ಹಿಂಬಾಲಿಸಿ ಹಿಡಿಯುವರೆಂಬ ಆತಂಕ ಮತ್ತು ಭಯವಿರಲಾರದು.”
আৰবী তাফছীৰসমূহ:
فَاَتْبَعَهُمْ فِرْعَوْنُ بِجُنُوْدِهٖ فَغَشِیَهُمْ مِّنَ الْیَمِّ مَا غَشِیَهُمْ ۟ؕ
ಫರೋಹ ತನ್ನ ಸೈನ್ಯದೊಂದಿಗೆ ಅವರನ್ನು ಹಿಂಬಾಲಿಸಿದನು. ಆಗ ಸಮುದ್ರವು ಹೇಗೆ ಆವರಿಸಿಕೊಳ್ಳಬೇಕೋ ಹಾಗೆಯೇ ಅವರನ್ನು ಆವರಿಸಿಕೊಂಡಿತು.
আৰবী তাফছীৰসমূহ:
وَاَضَلَّ فِرْعَوْنُ قَوْمَهٗ وَمَا هَدٰی ۟
ಫರೋಹ ತನ್ನ ಜನರನ್ನು ತಪ್ಪುದಾರಿಗೆಳೆದನು. ಅವನು ಅವರಿಗೆ ಸರಿಯಾದ ಮಾರ್ಗವನ್ನು ತೋರಿಸಲಿಲ್ಲ.
আৰবী তাফছীৰসমূহ:
یٰبَنِیْۤ اِسْرَآءِیْلَ قَدْ اَنْجَیْنٰكُمْ مِّنْ عَدُوِّكُمْ وَوٰعَدْنٰكُمْ جَانِبَ الطُّوْرِ الْاَیْمَنَ وَنَزَّلْنَا عَلَیْكُمُ الْمَنَّ وَالسَّلْوٰی ۟
ಓ ಇಸ್ರಾಯೇಲ್ ಮಕ್ಕಳೇ! ನಾವು ನಿಮ್ಮನ್ನು ನಿಮ್ಮ ವೈರಿಯಿಂದ ರಕ್ಷಿಸಿದೆವು. ತೂರ್ ಪರ್ವತದ ಬಲಭಾಗವನ್ನು ನಾವು ನಿಮಗೆ ವಾಗ್ದಾನ ಮಾಡಿದೆವು. ಮನ್ನ ಮತ್ತು ಸಲ್ವಾವನ್ನು ನಿಮಗೆ ಇಳಿಸಿಕೊಟ್ಟೆವು.
আৰবী তাফছীৰসমূহ:
كُلُوْا مِنْ طَیِّبٰتِ مَا رَزَقْنٰكُمْ وَلَا تَطْغَوْا فِیْهِ فَیَحِلَّ عَلَیْكُمْ غَضَبِیْ ۚ— وَمَنْ یَّحْلِلْ عَلَیْهِ غَضَبِیْ فَقَدْ هَوٰی ۟
ನಾವು ನಿಮಗೆ ಒದಗಿಸಿದ ಶುದ್ಧ ವಸ್ತುಗಳನ್ನು ತಿನ್ನಿರಿ. ಅದರಲ್ಲಿ ಮಿತಿಮೀರಬೇಡಿ. ಹಾಗೇನಾದರೂ ಆದರೆ ನನ್ನ ಕೋಪವು ನಿಮ್ಮ ಮೇಲೆರಗುವುದು. ಯಾರ ಮೇಲೆ ನನ್ನ ಕೋಪವು ಎರಗುತ್ತದೋ ಅವನು ಸಂಪೂರ್ಣ ನಾಶವಾದನು.
আৰবী তাফছীৰসমূহ:
وَاِنِّیْ لَغَفَّارٌ لِّمَنْ تَابَ وَاٰمَنَ وَعَمِلَ صَالِحًا ثُمَّ اهْتَدٰی ۟
ಪಶ್ಚಾತ್ತಾಪಪಡುವವರು, ವಿಶ್ವಾಸವಿಡುವವರು ಮತ್ತು ಸತ್ಕರ್ಮವೆಸಗುವವರು ಹಾಗೂ ಅನಂತರ ಸನ್ಮಾರ್ಗದಲ್ಲಿ ಸ್ಥಿರವಾಗಿ ನಿಲ್ಲುವವರಿಗೆ ನಿಶ್ಚಯವಾಗಿಯೂ ನಾನು ಕ್ಷಮಿಸುವೆನು.
আৰবী তাফছীৰসমূহ:
وَمَاۤ اَعْجَلَكَ عَنْ قَوْمِكَ یٰمُوْسٰی ۟
“ಓ ಮೂಸಾ! ನೀವು ನಿಮ್ಮ ಜನರನ್ನು ಬಿಟ್ಟು ತರಾತುರಿಯಿಂದ ಬರಲು ಕಾರಣವೇನು?”
আৰবী তাফছীৰসমূহ:
قَالَ هُمْ اُولَآءِ عَلٰۤی اَثَرِیْ وَعَجِلْتُ اِلَیْكَ رَبِّ لِتَرْضٰی ۟
ಮೂಸಾ ಹೇಳಿದರು: “ಅವರು ನನ್ನ ಹಿಂದೆಯೇ ಇದ್ದಾರೆ. ನನ್ನ ಪರಿಪಾಲಕನೇ! ನೀನು ಪ್ರೀತಿಗೆ ಪಾತ್ರನಾಗಲು ನಾನು ತರಾತುರಿಯಿಂದ ನಿನ್ನ ಬಳಿಗೆ ಬಂದಿದ್ದೇನೆ.”[1]
[1] ಮೂಸಾ (ಅವರ ಮೇಲೆ ಶಾಂತಿಯಿರಲಿ) ಇಸ್ರಾಯೇಲ್ ಮಕ್ಕಳನ್ನು ಸಮುದ್ರ ದಾಟಿಸಿ ತೂರ್ ಪರ್ವತದ ಕಡೆಗೆ ಕರೆದೊಯ್ದರು. ಅವರು ಅಲ್ಲಾಹನನ್ನು ಭೇಟಿಯಾಗಿ ಅವನ ಪ್ರೀತಿ ಪಡೆಯಬೇಕೆಂಬ ಅತೀವ ಹಂಬಲದಿಂದ ಅನುಯಾಯಿಗಳನ್ನು ಹಿಂದೆ ಬಿಟ್ಟು ತರಾತುರಿಯಿಂದ ಪರ್ವತದ ಕಡೆಗೆ ಹೋದರು. ಅಲ್ಲಾಹು ಅದರ ಬಗ್ಗೆ ಕೇಳಿದಾಗ ಅವರು ನೀಡಿದ ಉತ್ತರವೇನೆಂದರೆ, “ನನಗೆ ನಿನ್ನ ಪ್ರೀತಿ ಪಡೆಯಬೇಕೆಂಬ ಅತೀವ ಹಂಬಲವಿದೆ, ಆದ್ದರಿಂದ ನಾನು ಬೇಗನೇ ಬಂದೆ. ನನ್ನ ಅನುಯಾಯಿಗಳು ನನ್ನ ಹಿಂದೆಯೇ ಬರುತ್ತಿದ್ದಾರೆ.” ಕೆಲವು ವ್ಯಾಖ್ಯಾನಕಾರರು ಹೇಳುವಂತೆ, ಅವರು ಅನುಯಾಯಿಗಳನ್ನು ಪರ್ವತದ ತಪ್ಪಲಿನಲ್ಲಿ ಬಿಟ್ಟು ಬಂದಿದ್ದರು. ಅವರು ನೀಡಿದ ಉತ್ತರ ಹೀಗಿತ್ತು: “ನನ್ನ ಅನುಯಾಯಿಗಳು ನನ್ನ ಹಿಂದೆ ಪರ್ವತದ ತಪ್ಪಲಿನಲ್ಲಿದ್ದಾರೆ. ಅವರು ನಾನು ಹಿಂದಿರುಗಿ ಬರುವುದನ್ನು ನಿರೀಕ್ಷಿಸುತ್ತಾ ಕಾಯುತ್ತಿದ್ದಾರೆ.”
আৰবী তাফছীৰসমূহ:
قَالَ فَاِنَّا قَدْ فَتَنَّا قَوْمَكَ مِنْ بَعْدِكَ وَاَضَلَّهُمُ السَّامِرِیُّ ۟
ಅಲ್ಲಾಹು ಹೇಳಿದನು: “ನೀವು ನಿಮ್ಮ ಜನರನ್ನು ಬಿಟ್ಟು ಬಂದ ಬಳಿಕ ನಾವು ಅವರನ್ನು ಪರೀಕ್ಷಿಸಿದೆವು. ಸಾಮಿರಿ ಅವರನ್ನು ದಾರಿತಪ್ಪಿಸಿದನು.”[1]
[1] ಮೂಸಾ (ಅವರ ಮೇಲೆ ಶಾಂತಿಯಿರಲಿ) ಹೋದ ಬಳಿಕ ಸಾಮಿರಿ ಎಂಬ ಹೆಸರಿನ ವ್ಯಕ್ತಿ ಇಸ್ರಾಯೇಲ್ ಮಕ್ಕಳಿಗೆ ಒಂದು ಕರುವಿನ ರೂಪವನ್ನು ಮಾಡಿಕೊಟ್ಟು ಅದನ್ನು ಪೂಜಿಸುವಂತೆ ಹೇಳಿದನು. ಅವರು ಅದನ್ನು ಪೂಜಿಸಿದರು. ಈ ವಿಷಯವನ್ನು ಅಲ್ಲಾಹು ಮೂಸಾರಿಗೆ (ಅವರ ಮೇಲೆ ಶಾಂತಿಯಿರಲಿ) ತಿಳಿಸಿದನು.
আৰবী তাফছীৰসমূহ:
فَرَجَعَ مُوْسٰۤی اِلٰی قَوْمِهٖ غَضْبَانَ اَسِفًا ۚ۬— قَالَ یٰقَوْمِ اَلَمْ یَعِدْكُمْ رَبُّكُمْ وَعْدًا حَسَنًا ؕ۬— اَفَطَالَ عَلَیْكُمُ الْعَهْدُ اَمْ اَرَدْتُّمْ اَنْ یَّحِلَّ عَلَیْكُمْ غَضَبٌ مِّنْ رَّبِّكُمْ فَاَخْلَفْتُمْ مَّوْعِدِیْ ۟
ಆಗ ಮೂಸಾ ತಮ್ಮ ಜನರ ಬಳಿಗೆ ಕೋಪ ಮತ್ತು ಬೇಸರದಿಂದ ಹಿಂದಿರುಗಿದರು. ಅವರು ಹೇಳಿದರು: “ಓ ನನ್ನ ಜನರೇ! ನಿಮ್ಮ ಪರಿಪಾಲಕನು (ಅಲ್ಲಾಹು) ನಿಮಗೆ ಅತ್ಯುತ್ತಮವಾದ ಆಶ್ವಾಸನೆಯನ್ನು ನೀಡಿಲ್ಲವೇ? ಅದು ಈಡೇರುವ ಸಮಯವು ನಿಮಗೆ ದೀರ್ಘವಾಗಿ ಕಂಡಿತೇ? ಅಥವಾ ನಿಮ್ಮ ಪರಿಪಾಲಕನ (ಅಲ್ಲಾಹನ) ಕೋಪವು ನಿಮ್ಮ ಮೇಲೆ ಇಳಿಯಬೇಕೆಂದು ನೀವು ಬಯಸಿದಿರೋ? ಅದಕ್ಕಾಗಿ ನೀವು ನನ್ನ ಕರಾರನ್ನು ಮುರಿದಿರೋ?”
আৰবী তাফছীৰসমূহ:
قَالُوْا مَاۤ اَخْلَفْنَا مَوْعِدَكَ بِمَلْكِنَا وَلٰكِنَّا حُمِّلْنَاۤ اَوْزَارًا مِّنْ زِیْنَةِ الْقَوْمِ فَقَذَفْنٰهَا فَكَذٰلِكَ اَلْقَی السَّامِرِیُّ ۟ۙ
ಅವರು ಹೇಳಿದರು: “ನಾವು ನಮ್ಮ ಇಚ್ಛೆಯಂತೆ ನಿಮ್ಮ ಕರಾರನ್ನು ಮುರಿದಿಲ್ಲ. ಬದಲಿಗೆ, ನಮ್ಮ ಮೇಲೆ ಆ ಜನರ (ಫರೋಹನ ಜನರ) ಆಭರಣಗಳ ಹೊರೆಗಳನ್ನು ಹೊರಿಸಲಾಗಿತ್ತು. ನಾವು ಅದನ್ನು ಕೆಳಗೆ ಎಸೆದೆವು. ಸಾಮಿರಿ ಕೂಡ ಅದೇ ರೀತಿ ಎಸೆದನು.
আৰবী তাফছীৰসমূহ:
فَاَخْرَجَ لَهُمْ عِجْلًا جَسَدًا لَّهٗ خُوَارٌ فَقَالُوْا هٰذَاۤ اِلٰهُكُمْ وَاِلٰهُ مُوْسٰی ۚۙ۬— فَنَسِیَ ۟ؕ
ನಂತರ ಅವನು ಧ್ವನಿ ಹೊರಡಿಸುವ ಒಂದು ಕರುವಿನ ರೂಪವನ್ನು ಅದರಿಂದ ಹೊರತಂದನು. ಅವರು ಹೇಳಿದರು: “ಇದೇ ನಿಮ್ಮ ಮತ್ತು ಮೂಸಾರ ದೇವರು. ಮೂಸಾರಿಗೆ ಅದು ಮರೆತುಹೋಗಿದೆ.”[1]
[1] ಇಸ್ರಾಯೇಲ್ ಮಕ್ಕಳು ಈಜಿಪ್ಟಿನಿಂದ ಬರುವಾಗ ಈಜಿಪ್ಟಿನ ಜನರಿಂದ ಅವರು ಸಾಲವಾಗಿ ಪಡೆದ ಆಭರಣಗಳನ್ನು ಕೂಡ ತಂದಿದ್ದರು. ಆದರೆ ಆ ಆಭರಣಗಳನ್ನು ಉಪಯೋಗಿಸುವುದು ನಿಷಿದ್ಧವಾಗಿದ್ದರಿಂದ ಅವರು ಅದನ್ನು ಬೆಂಕಿಗೆಸೆದರು. ಸಾಮಿರಿ ಕೂಡ ತನ್ನಲ್ಲಿರುವ ಆಭರಣಗಳನ್ನು ಎಸೆದನು. ನಂತರ ಅವನು ಅದರಿಂದ ಒಂದು ಕರುವಿನ ಮೂರ್ತಿಯನ್ನು ಮಾಡಿದನು. ಆ ಮೂರ್ತಿ ಹೇಗಿತ್ತೆಂದರೆ ಗಾಳಿ ಅದರೊಳಗೆ ಹೊಕ್ಕಾಗ ಅದರಿಂದ ಒಂದು ರೀತಿಯ ಧ್ವನಿ ಬರುತ್ತಿತ್ತು. ಸಾಮಿರಿ ಆ ಮೂರ್ತಿಯನ್ನು ಜನರಿಗೆ ತೋರಿಸಿ, “ಮೂಸಾ ಅಲ್ಲಾಹನನ್ನು ಭೇಟಿಯಾಗಲು ತೂರ್ ಪರ್ವತಕ್ಕೆ ಹೋಗಿದ್ದಾರೆ. ಆದರೆ ಅವರಿಗೆ ಮರೆತುಹೋಗಿದೆ. ವಾಸ್ತವವಾಗಿ ಅವರು ದೇವರು ಇಲ್ಲೇ ಇದ್ದಾನೆ” ಎನ್ನುತ್ತಾ ಅವರನ್ನು ದಾರಿತಪ್ಪಿಸಿದನು.
আৰবী তাফছীৰসমূহ:
اَفَلَا یَرَوْنَ اَلَّا یَرْجِعُ اِلَیْهِمْ قَوْلًا ۙ۬— وَّلَا یَمْلِكُ لَهُمْ ضَرًّا وَّلَا نَفْعًا ۟۠
ಆದರೆ ಅವರ ಮಾತಿಗೆ ಉತ್ತರ ನೀಡಲು ಮತ್ತು ಅವರಿಗೆ ಯಾವುದೇ ತೊಂದರೆ ಅಥವಾ ಉಪಕಾರ ಮಾಡಲು ಅದಕ್ಕೆ (ಆ ಕರುವಿನ ಮೂರ್ತಿಗೆ) ಸಾಧ್ಯವಿಲ್ಲವೆಂದು ಅವರು ಕಾಣುವುದಿಲ್ಲವೇ?
আৰবী তাফছীৰসমূহ:
وَلَقَدْ قَالَ لَهُمْ هٰرُوْنُ مِنْ قَبْلُ یٰقَوْمِ اِنَّمَا فُتِنْتُمْ بِهٖ ۚ— وَاِنَّ رَبَّكُمُ الرَّحْمٰنُ فَاتَّبِعُوْنِیْ وَاَطِیْعُوْۤا اَمْرِیْ ۟
ಇದಕ್ಕಿಂತ ಮೊದಲು ಹಾರೂನ್ ಅವರೊಡನೆ ಹೇಳಿದ್ದರು: “ಓ ನನ್ನ ಜನರೇ! ಈ ಕರುವಿನ ಮೂಲಕ ನಿಮ್ಮನ್ನು ಪರೀಕ್ಷಿಸಲಾಗುತ್ತಿದೆ. ನಿಶ್ಚಯವಾಗಿಯೂ ಪರಮ ದಯಾಮಯನೇ (ಅಲ್ಲಾಹನೇ) ನಿಮ್ಮ ಪರಿಪಾಲಕ. ನೀವು ನನ್ನನ್ನು ಅನುಸರಿಸಿರಿ. ನನ್ನ ಮಾತನ್ನು ಕೇಳಿರಿ.”
আৰবী তাফছীৰসমূহ:
قَالُوْا لَنْ نَّبْرَحَ عَلَیْهِ عٰكِفِیْنَ حَتّٰی یَرْجِعَ اِلَیْنَا مُوْسٰی ۟
ಅವರು ಉತ್ತರಿಸಿದರು: “ಮೂಸಾ ನಮ್ಮ ಬಳಿಗೆ ಮರಳುವ ತನಕ ನಾವು ಇದರ ಮುಂದೆ ಧ್ಯಾನ ಮಾಡುತ್ತಲೇ ಇರುತ್ತೇವೆ.”
আৰবী তাফছীৰসমূহ:
قَالَ یٰهٰرُوْنُ مَا مَنَعَكَ اِذْ رَاَیْتَهُمْ ضَلُّوْۤا ۟ۙ
ಮೂಸಾ ಕೇಳಿದರು: “ಓ ಹಾರೂನ್! ಇವರು ದಾರಿತಪ್ಪುವುದನ್ನು ಕಂಡಾಗ ನಿಮ್ಮನ್ನು ತಡೆದದ್ದು ಏನು?
আৰবী তাফছীৰসমূহ:
اَلَّا تَتَّبِعَنِ ؕ— اَفَعَصَیْتَ اَمْرِیْ ۟
ನನ್ನನ್ನು ಅನುಸರಿಸದಂತೆ. ನೀನು ನನ್ನ ಆದೇಶವನ್ನು ಉಲ್ಲಂಘಿಸಿದೆಯಾ?”[1]
[1] ಅಂದರೆ ಅವರು ದಾರಿತಪ್ಪಿದ್ದನ್ನು ಕಂಡಾಗ ನೀನು ಅವರಿಗೆ ಬುದ್ಧಿವಾದ ಹೇಳಿದೆ. ಆದರೆ ಅವರು ಅದನ್ನು ಸ್ವೀಕರಿಸದೆ ಇದ್ದಾಗ ನೀನು ನೇರವಾಗಿ ನನ್ನ ಬಳಿಗೆ ತೂರ್ ಪರ್ವತಕ್ಕೆ ಬಂದು ನನಗೆ ವಿಷಯ ತಿಳಿಸಬೇಕಾಗಿತ್ತು. ನೀನು ಕೂಡ ನನ್ನ ಆದೇಶವನ್ನು ಉಲ್ಲಂಘಿಸಿರುವೆ. (ಅಂದರೆ ನೀನು ಸರಿಯಾದ ರೀತಿಯಲ್ಲಿ ನನ್ನ ಪ್ರತಿನಿಧಿಯಾಗಿರಲಿಲ್ಲ).
আৰবী তাফছীৰসমূহ:
قَالَ یَبْنَؤُمَّ لَا تَاْخُذْ بِلِحْیَتِیْ وَلَا بِرَاْسِیْ ۚ— اِنِّیْ خَشِیْتُ اَنْ تَقُوْلَ فَرَّقْتَ بَیْنَ بَنِیْۤ اِسْرَآءِیْلَ وَلَمْ تَرْقُبْ قَوْلِیْ ۟
ಹಾರೂನ್ ಹೇಳಿದರು: “ನನ್ನ ತಾಯಿಯ ಮಗನೇ! ನನ್ನ ಗಡ್ಡವನ್ನು ಅಥವಾ ನನ್ನ ತಲೆಯನ್ನು ಹಿಡಿಯಬೇಡ. ನೀನು ಇಸ್ರಾಯೇಲ್ ಮಕ್ಕಳ ನಡುವೆ ಭಿನ್ನಮತ ಎಬ್ಬಿಸಿರುವೆ. ನನ್ನ ಆಜ್ಞೆಯನ್ನು ಕೂಡ ನೀನು ಕಾಯಲಿಲ್ಲ ಎಂದು ನೀನು ಹೇಳಬಹುದೆಂದು ನನಗೆ ಭಯವಾಯಿತು.”[1]
[1] ವಾಸ್ತವವಾಗಿ ಹಾರೂನ್ (ಅವರ ಮೇಲೆ ಶಾಂತಿಯಿರಲಿ) ತಮ್ಮ ಕರ್ತವ್ಯವನ್ನು ಸರಿಯಾದ ರೀತಿಯಲ್ಲಿ ನಿರ್ವಹಿಸಿದ್ದರು. ಅವರು ವಿಗ್ರಹಾರಾಧನೆಯನ್ನು ಸ್ಪಷ್ಟವಾಗಿ ವಿರೋಧಿಸಿದ್ದರು. ಆದರೆ ಎಷ್ಟೇ ತಿಳಿಹೇಳಿದರೂ ಜನರು ಅವರ ಮಾತನ್ನು ಕೇಳುತ್ತಿರಲಿಲ್ಲ. ನಂತರ ಪರಿಸ್ಥಿತಿ ಎಷ್ಟು ಗಂಭೀರವಾಯಿತೆಂದರೆ ಇಸ್ರಾಯೇಲ್ ಮಕ್ಕಳಲ್ಲಿ ಎರಡು ಗುಂಪುಗಳಾದವು. ಒಂದು ಗುಂಪು ಸಮರ್ಥಿಸಿದರೆ ಇನ್ನೊಂದು ಗುಂಪು ವಿರೋಧಿಸಿತು. ಈ ಎರಡು ಗುಂಪುಗಳು ಪರಸ್ಪರ ಹೊಡೆದಾಡುವ ಸ್ಥಿತಿಗೆ ತಲುಪಿತು.
আৰবী তাফছীৰসমূহ:
قَالَ فَمَا خَطْبُكَ یٰسَامِرِیُّ ۟
ಮೂಸಾ ಕೇಳಿದರು: “ಓ ಸಾಮಿರಿ! ನಿನ್ನ ಸಮಾಚಾರವೇನು?”
আৰবী তাফছীৰসমূহ:
قَالَ بَصُرْتُ بِمَا لَمْ یَبْصُرُوْا بِهٖ فَقَبَضْتُ قَبْضَةً مِّنْ اَثَرِ الرَّسُوْلِ فَنَبَذْتُهَا وَكَذٰلِكَ سَوَّلَتْ لِیْ نَفْسِیْ ۟
ಅವನು ಹೇಳಿದನು: “ಜನರಿಗೆ ಕಾಣಲು ಸಾಧ್ಯವಾಗದ ಒಂದನ್ನು ನಾನು ನೋಡಿದೆ. ನಾನು ಆ ದೇವದೂತನ ಹೆಜ್ಜೆ ಗುರುತಿನಿಂದ ಒಂದು ಹಿಡಿ ಮಣ್ಣು ತೆಗೆದು ಅದಕ್ಕೆ ಹಾಕಿದೆ. ಹೀಗೆ ಮಾಡಲು ನನ್ನ ಮನಸ್ಸು ನನ್ನನ್ನು ಪ್ರೇರೇಪಿಸಿತು.”[1]
[1] ಇಲ್ಲಿ ದೇವದೂತರು ಎಂದರೆ ಜಿಬ್ರೀಲ್ (ಅವರ ಮೇಲೆ ಶಾಂತಿಯಿರಲಿ). ಜಿಬ್ರೀಲರ ಕುದುರೆ ಹಾದುಹೋಗುವುದು ಕಂಡಾಗ ಸಾಮಿರಿ ಅದರ ಕಾಲುಗಳ ಅಡಿಯಿಂದ ಮಣ್ಣನ್ನು ತೆಗೆದು ಜೋಪಾನವಾಗಿಟ್ಟಿದ್ದನು. ಆ ಮಣ್ಣನ್ನು ಅವನು ಆಭರಣಗಳಿಂದ ನಿರ್ಮಿಸಿದ ಕರುವಿನ ಮೂರ್ತಿಗೆ ಹಾಕಿದಾಗ ಅದರಿಂದ ಒಂದು ಶಬ್ದ ಹೊರಬರಲು ಶುರುವಾಯಿತು.
আৰবী তাফছীৰসমূহ:
قَالَ فَاذْهَبْ فَاِنَّ لَكَ فِی الْحَیٰوةِ اَنْ تَقُوْلَ لَا مِسَاسَ ۪— وَاِنَّ لَكَ مَوْعِدًا لَّنْ تُخْلَفَهٗ ۚ— وَانْظُرْ اِلٰۤی اِلٰهِكَ الَّذِیْ ظَلْتَ عَلَیْهِ عَاكِفًا ؕ— لَنُحَرِّقَنَّهٗ ثُمَّ لَنَنْسِفَنَّهٗ فِی الْیَمِّ نَسْفًا ۟
ಮೂಸಾ ಹೇಳಿದರು: “ಹೊರಟು ಹೋಗು! ನೀನು ನಿರಂತರ “ನನ್ನನ್ನು ಮುಟ್ಟಬೇಡಿ” ಎಂದು ಹೇಳುತ್ತಿರುವುದೇ ಇಹಲೋಕದಲ್ಲಿ ನಿನಗಿರುವ ಶಿಕ್ಷೆ.[1] ನಿನಗೆ ಒಂದು ನಿಶ್ಚಿತ ಅವಧಿಯಿದೆ. ಅದನ್ನು ಉಲ್ಲಂಘಿಸಲು ನಿನಗೆ ಸಾಧ್ಯವಿಲ್ಲ. ನೀನು ಧ್ಯಾನ ಮಾಡುತ್ತಿದ್ದ ನಿನ್ನ ದೇವರನ್ನು (ಕರುವನ್ನು) ನೋಡು. ನಾವು ಅದನ್ನು ಖಂಡಿತ ಸುಟ್ಟು ಬಿಡುವೆವು. ನಂತರ ಅದನ್ನು ನುಚ್ಚುನೂರು ಮಾಡಿ ಕಡಲಿಗೆ ಎಸೆಯುವೆವು.
[1] ಇದರ ನಂತರ ಅವನು ಜೀವನವಿಡೀ ಜನರನ್ನು ಕಂಡೊಡನೆ ನನ್ನನ್ನು ಮುಟ್ಟಬೇಡಿ, ನನ್ನಿಂದ ದೂರವಿರಿ ಎಂದು ಹೇಳುತ್ತಲೇ ಇದ್ದ. ಏಕೆಂದರೆ ಅವನನ್ನು ಯಾರಾದರೂ ಮುಟ್ಟಿದರೆ, ಅವನಿಗೂ ಮುಟ್ಟಿದವನಿಗೂ ಜ್ವರ ಬರುತ್ತಿತ್ತು. ನಂತರ ಅವನು ಜನವಾಸದಿಂದ ೂದೂರವಾಗಿ ಅಡವಿಗೆ ಹೋಗಿ ಮೃಗಗಳೊಡನೆ ವಾಸಿಸತೊಡಗಿದನು.
আৰবী তাফছীৰসমূহ:
اِنَّمَاۤ اِلٰهُكُمُ اللّٰهُ الَّذِیْ لَاۤ اِلٰهَ اِلَّا هُوَ ؕ— وَسِعَ كُلَّ شَیْءٍ عِلْمًا ۟
ಯಾರ ಹೊರತು ಆರಾಧಿಸಲು ಅರ್ಹರಾದ ಬೇರೆ ದೇವರಿಲ್ಲವೋ ಆ ಅಲ್ಲಾಹನೇ ನಿಮ್ಮ ದೇವನು. ಅವನ ಜ್ಞಾನವು ಎಲ್ಲಾ ವಸ್ತುಗಳನ್ನೂ ಆವರಿಸಿಕೊಂಡಿದೆ.
আৰবী তাফছীৰসমূহ:
كَذٰلِكَ نَقُصُّ عَلَیْكَ مِنْ اَنْۢبَآءِ مَا قَدْ سَبَقَ ۚ— وَقَدْ اٰتَیْنٰكَ مِنْ لَّدُنَّا ذِكْرًا ۟ۖۚ
ಈ ರೀತಿ ಈಗಾಗಲೇ ನಡೆದು ಹೋದ ಅನೇಕ ಸಮಾಚಾರಗಳನ್ನು ನಾವು ನಿಮಗೆ ವಿವರಿಸಿಕೊಡುತ್ತೇವೆ. ನಿಶ್ಚಯವಾಗಿಯೂ ನಾವು ನಿಮಗೆ ನಮ್ಮ ಕಡೆಯ ಉಪದೇಶವನ್ನು ನೀಡಿದ್ದೇವೆ.
আৰবী তাফছীৰসমূহ:
مَنْ اَعْرَضَ عَنْهُ فَاِنَّهٗ یَحْمِلُ یَوْمَ الْقِیٰمَةِ وِزْرًا ۟ۙ
ಯಾರು ಅದರಿಂದ ವಿಮುಖನಾಗುತ್ತಾನೋ ಅವನು ಪುನರುತ್ಥಾನ ದಿನದಂದು (ಪಾಪದ) ಹೊರೆಯನ್ನು ಖಂಡಿತ ಹೊರುವನು.
আৰবী তাফছীৰসমূহ:
خٰلِدِیْنَ فِیْهِ ؕ— وَسَآءَ لَهُمْ یَوْمَ الْقِیٰمَةِ حِمْلًا ۟ۙ
ಅವರು ಅದರಲ್ಲಿ ಶಾಶ್ವತವಾಗಿ ವಾಸಿಸುವರು. ಪುನರುತ್ಥಾನ ದಿನದಂದು ಅವರು ಹೊರುವ ಹೊರೆಯು ಬಹಳ ನಿಕೃಷ್ಟವಾಗಿದೆ.
আৰবী তাফছীৰসমূহ:
یَّوْمَ یُنْفَخُ فِی الصُّوْرِ وَنَحْشُرُ الْمُجْرِمِیْنَ یَوْمَىِٕذٍ زُرْقًا ۟
ಕಹಳೆಯಲ್ಲಿ ಊದಲಾಗುವ ದಿನ! ಅಂದು ನಾವು ಅಪರಾಧಿಗಳನ್ನು ನೀಲಿಕಣ್ಣಿನವರಾಗಿ ಒಟ್ಟು ಸೇರಿಸುವೆವು.
আৰবী তাফছীৰসমূহ:
یَّتَخَافَتُوْنَ بَیْنَهُمْ اِنْ لَّبِثْتُمْ اِلَّا عَشْرًا ۟
ಅವರು ಪರಸ್ಪರ ಪಿಸುಗುಡುತ್ತಾ ಹೇಳುವರು: “ನೀವು (ಭೂಮಿಯಲ್ಲಿ) ಕೇವಲ ಹತ್ತು ದಿನಗಳ ಕಾಲ ವಾಸವಾಗಿದ್ದಿರಿ.”
আৰবী তাফছীৰসমূহ:
نَحْنُ اَعْلَمُ بِمَا یَقُوْلُوْنَ اِذْ یَقُوْلُ اَمْثَلُهُمْ طَرِیْقَةً اِنْ لَّبِثْتُمْ اِلَّا یَوْمًا ۟۠
ಅವರು ಏನು ಹೇಳುತ್ತಿದ್ದಾರೋ ಅದರ ನಿಜಸ್ಥಿತಿಯ ಬಗ್ಗೆ ನಾವು ಸ್ಪಷ್ಟವಾಗಿ ತಿಳಿದಿದ್ದೇವೆ. ಅವರಲ್ಲಿ ಅತ್ಯುತ್ತಮ ಮಾರ್ಗದಲ್ಲಿರುವವನು ಹೇಳುವನು: “ನೀವು ಕೇವಲ ಒಂದು ದಿನ ಮಾತ್ರ ವಾಸವಾಗಿದ್ದಿರಿ.”[1]
[1] ಪರಲೋಕಕ್ಕೆ ಹೋಲಿಸಿದಾಗ ಇಹಲೋಕವು ಅವರಿಗೆ ಬಹಳ ಕಡಿಮೆ ಅವಧಿಯದ್ದಾಗಿ ಭಾಸವಾಗುವುದು.
আৰবী তাফছীৰসমূহ:
وَیَسْـَٔلُوْنَكَ عَنِ الْجِبَالِ فَقُلْ یَنْسِفُهَا رَبِّیْ نَسْفًا ۟ۙ
ಅವರು ನಿಮ್ಮಲ್ಲಿ ಪರ್ವತಗಳ ಬಗ್ಗೆ ಕೇಳುತ್ತಾರೆ. ಹೇಳಿರಿ: “ನನ್ನ ಪರಿಪಾಲಕ (ಅಲ್ಲಾಹು) ಅವುಗಳನ್ನು ಪುಡಿಪುಡಿ ಮಾಡಿ ಹಾರಿಸಿ ಬಿಡುವನು.
আৰবী তাফছীৰসমূহ:
فَیَذَرُهَا قَاعًا صَفْصَفًا ۟ۙ
ಅವನು ಭೂಮಿಯನ್ನು ಸಮತಟ್ಟಾದ ಮೈದಾನದಂತೆ ಮಾಡುವನು.
আৰবী তাফছীৰসমূহ:
لَّا تَرٰی فِیْهَا عِوَجًا وَّلَاۤ اَمْتًا ۟ؕ
ನೀವು ಅದರಲ್ಲಿ ಉಬ್ಬು-ತಗ್ಗುಗಳನ್ನು ಕಾಣಲಾರಿರಿ.
আৰবী তাফছীৰসমূহ:
یَوْمَىِٕذٍ یَّتَّبِعُوْنَ الدَّاعِیَ لَا عِوَجَ لَهٗ ۚ— وَخَشَعَتِ الْاَصْوَاتُ لِلرَّحْمٰنِ فَلَا تَسْمَعُ اِلَّا هَمْسًا ۟
ಅಂದು ಜನರು ಕರೆ ನೀಡುವವನನ್ನು ಹಿಂಬಾಲಿಸುವರು. ಅವನ ಕರೆಗೆ ಯಾವುದೇ ವಕ್ರತೆಯಿರುವುದಿಲ್ಲ. ಪರಮ ದಯಾಮಯನ (ಅಲ್ಲಾಹನ) ಮುಂದೆ ಧ್ವನಿಗಳೆಲ್ಲವೂ ಶರಣಾಗುವುವು. ನಿಮಗೆ ಪಿಸುಮಾತುಗಳಲ್ಲದೆ ಬೇರೇನೂ ಕೇಳಿಸದು.[1]
[1] ಭೂಮಿಯಲ್ಲಿರುವ ಪರ್ವತಗಳು, ನದಿಗಳು, ಸಮುದ್ರಗಳೆಲ್ಲವೂ ನಾಶವಾಗಿ ಭೂಮಿ ಯಾವುದೇ ಉಬ್ಬುತಗ್ಗುಗಳಿಲ್ಲದೆ ಸಮತಟ್ಟು ಮೈದಾನವಾಗಿ ಮಾರ್ಪಡುತ್ತದೆ. ನಂತರ ಒಂದು ಧ್ವನಿ ಕೇಳುತ್ತದೆ. ಜನರೆಲ್ಲರೂ ಆ ಧ್ವನಿಯನ್ನು ಹಿಂಬಾಲಿಸುತ್ತಾ ಹೋಗುತ್ತಾರೆ. ಆ ಧ್ವನಿ ಕರೆಯುವ ಕಡೆಗಲ್ಲದೆ ಅವರು ಒಂದು ಚೂರು ಕೂಡ ಅತ್ತಿತ್ತ ಚಲಿಸುವುದಿಲ್ಲ. ಅಲ್ಲಿನ ವಾತಾವರಣ ಸಂಪೂರ್ಣ ನಿಶ್ಶಬ್ದವಾಗಿರುತ್ತದೆ. ಪಿಸುಮಾತುಗಳಲ್ಲದೆ ಬೇರೇನೂ ಕೇಳುವುದಿಲ್ಲ.
আৰবী তাফছীৰসমূহ:
یَوْمَىِٕذٍ لَّا تَنْفَعُ الشَّفَاعَةُ اِلَّا مَنْ اَذِنَ لَهُ الرَّحْمٰنُ وَرَضِیَ لَهٗ قَوْلًا ۟
ಅಂದು ಯಾರಿಗೂ ಶಿಫಾರಸು ಪ್ರಯೋಜನಪಡುವುದಿಲ್ಲ. ಪರಮ ದಯಾಮಯನು (ಅಲ್ಲಾಹು) ಯಾರಿಗೆ (ಶಿಫಾರಸು ಮಾಡಲು) ಅನುಮತಿ ನೀಡುತ್ತಾನೋ ಮತ್ತು ಯಾರ ಮಾತನ್ನು ಅವನು ಇಷ್ಟಪಡುತ್ತಾನೋ ಅವರ ಹೊರತು.
আৰবী তাফছীৰসমূহ:
یَعْلَمُ مَا بَیْنَ اَیْدِیْهِمْ وَمَا خَلْفَهُمْ وَلَا یُحِیْطُوْنَ بِهٖ عِلْمًا ۟
ಅವರ ಮುಂಭಾಗದಲ್ಲಿ ಮತ್ತು ಹಿಂಭಾಗದಲ್ಲಿರುವುದನ್ನು ಅವನು ತಿಳಿಯುತ್ತಾನೆ. ಜ್ಞಾನದ ಮೂಲಕ ಅವನನ್ನು ಸಂಪೂರ್ಣವಾಗಿ ಆವರಿಸಿಕೊಳ್ಳಲು ಅವರಿಗೆ ಸಾಧ್ಯವಿಲ್ಲ.
আৰবী তাফছীৰসমূহ:
وَعَنَتِ الْوُجُوْهُ لِلْحَیِّ الْقَیُّوْمِ ؕ— وَقَدْ خَابَ مَنْ حَمَلَ ظُلْمًا ۟
ನಿರಂತರ ಬದುಕಿರುವವನು ಮತ್ತು ಎಲ್ಲವನ್ನೂ ನಿಯಂತ್ರಿಸುವ ಅಲ್ಲಾಹನ ಮುಂದೆ ಮುಖಗಳೆಲ್ಲವೂ ಶರಣಾಗುವುವು. ಅನ್ಯಾಯದ ಹೊರೆ ಹೊತ್ತವನು ಪರಾಜಿತನಾದನು.
আৰবী তাফছীৰসমূহ:
وَمَنْ یَّعْمَلْ مِنَ الصّٰلِحٰتِ وَهُوَ مُؤْمِنٌ فَلَا یَخٰفُ ظُلْمًا وَّلَا هَضْمًا ۟
ಯಾರು ಸತ್ಯವಿಶ್ವಾಸಿಯಾಗಿರುತ್ತಾ, ಸತ್ಕರ್ಮಗಳನ್ನು ಮಾಡುತ್ತಾನೋ ಅವನು ಅನ್ಯಾಯವನ್ನು ಅಥವಾ ನಾಶ-ನಷ್ಟವನ್ನು ಭಯಪಡಬೇಕಾಗಿಲ್ಲ.
আৰবী তাফছীৰসমূহ:
وَكَذٰلِكَ اَنْزَلْنٰهُ قُرْاٰنًا عَرَبِیًّا وَّصَرَّفْنَا فِیْهِ مِنَ الْوَعِیْدِ لَعَلَّهُمْ یَتَّقُوْنَ اَوْ یُحْدِثُ لَهُمْ ذِكْرًا ۟
ಈ ರೀತಿ ನಾವು ಇದನ್ನು ಅರಬ್ಬಿ ಭಾಷೆಯ ಗ್ರಂಥವಾಗಿ ಅವತೀರ್ಣಗೊಳಿಸಿದೆವು. ನಾವು ಅದರಲ್ಲಿ ಎಚ್ಚರಿಕೆಗಳನ್ನು ಅನೇಕ ವಿಧಗಳಲ್ಲಿ ವಿವರಿಸಿದ್ದೇವೆ. ಅವರು ದೇವಭಯವುಳ್ಳವರಾಗಲಿ ಅಥವಾ ಅವರ ಮನಸ್ಸುಗಳಲ್ಲಿ ಚಿಂತನೆ ಮೂಡಲಿ ಎಂದು.
আৰবী তাফছীৰসমূহ:
فَتَعٰلَی اللّٰهُ الْمَلِكُ الْحَقُّ ۚ— وَلَا تَعْجَلْ بِالْقُرْاٰنِ مِنْ قَبْلِ اَنْ یُّقْضٰۤی اِلَیْكَ وَحْیُهٗ ؗ— وَقُلْ رَّبِّ زِدْنِیْ عِلْمًا ۟
ಅಲ್ಲಾಹು ಅತ್ಯುನ್ನತನು ಮತ್ತು ನಿಜವಾದ ಸಾರ್ವಭೌಮನಾಗಿದ್ದಾನೆ. ಕುರ್‌ಆನಿನ ದೇವವಾಣಿಯನ್ನು ನಿಮಗೆ ಓದಿಕೊಟ್ಟು ಮುಗಿಸುವುದಕ್ಕೆ ಮುನ್ನ ನೀವು ಅದನ್ನು ಪಠಿಸಲು ಆತುರಪಡಬೇಡಿ. “ನನ್ನ ಪರಿಪಾಲಕನೇ! ನನಗೆ ಜ್ಞಾನವನ್ನು ಹೆಚ್ಚಿಸು” ಎಂದು ಪ್ರಾರ್ಥಿಸಿರಿ.
আৰবী তাফছীৰসমূহ:
وَلَقَدْ عَهِدْنَاۤ اِلٰۤی اٰدَمَ مِنْ قَبْلُ فَنَسِیَ وَلَمْ نَجِدْ لَهٗ عَزْمًا ۟۠
ನಾವು ಆದಮರಿಗೆ ಮೊದಲೇ ದೃಢ ಆಜ್ಞೆಯನ್ನು ನೀಡಿದ್ದೆವು. ಆದರೆ ಅವರು ಅದನ್ನು ಮರೆತರು. ನಾವು ಅವರಲ್ಲಿ ಯಾವುದೇ ದೃಢನಿರ್ಧಾರವನ್ನು ಕಂಡಿಲ್ಲ.
আৰবী তাফছীৰসমূহ:
وَاِذْ قُلْنَا لِلْمَلٰٓىِٕكَةِ اسْجُدُوْا لِاٰدَمَ فَسَجَدُوْۤا اِلَّاۤ اِبْلِیْسَ ؕ— اَبٰی ۟
“ನೀವು ಆದಮರಿಗೆ ಸಾಷ್ಟಾಂಗ ಮಾಡಿರಿ” ಎಂದು ನಾವು ದೇವದೂತರಿಗೆ ಆಜ್ಞಾಪಿಸಿದ ಸಂದರ್ಭ. ಅವರು ಸಾಷ್ಟಾಂಗ ಮಾಡಿದರು; ಆದರೆ ಇಬ್ಲೀಸನ ಹೊರತು. ಅವನು ನಿರಾಕರಿಸಿದನು.
আৰবী তাফছীৰসমূহ:
فَقُلْنَا یٰۤاٰدَمُ اِنَّ هٰذَا عَدُوٌّ لَّكَ وَلِزَوْجِكَ فَلَا یُخْرِجَنَّكُمَا مِنَ الْجَنَّةِ فَتَشْقٰی ۟
ಆಗ ನಾವು ಹೇಳಿದೆವು: “ಓ ಆದಮ್! ಈತ ನಿಮ್ಮ ಮತ್ತು ನಿಮ್ಮ ಪತ್ನಿಯ ವೈರಿಯಾಗಿದ್ದಾನೆ. ಈತ ನಿಮ್ಮನ್ನು ಸ್ವರ್ಗದಿಂದ ಹೊರಹೋಗುವಂತೆ ಮಾಡುವ ಪ್ರಸಂಗ ಬರದಿರಲಿ. ಹಾಗೇನಾದರೂ ಆದರೆ ನೀವು ಕಷ್ಟ ಅನುಭವಿಸುವಿರಿ.
আৰবী তাফছীৰসমূহ:
اِنَّ لَكَ اَلَّا تَجُوْعَ فِیْهَا وَلَا تَعْرٰی ۟ۙ
ಇಲ್ಲಿ ನಿಮಗೆ ಖಂಡಿತ ಹಸಿವೆಯೋ ನಗ್ನತೆಯೋ ಇಲ್ಲ.
আৰবী তাফছীৰসমূহ:
وَاَنَّكَ لَا تَظْمَؤُا فِیْهَا وَلَا تَضْحٰی ۟
ಇಲ್ಲಿ ನಿಮಗೆ ದಾಹವೋ ಬಿಸಿಲಿನ ತಾಪವೋ ಇಲ್ಲ.
আৰবী তাফছীৰসমূহ:
فَوَسْوَسَ اِلَیْهِ الشَّیْطٰنُ قَالَ یٰۤاٰدَمُ هَلْ اَدُلُّكَ عَلٰی شَجَرَةِ الْخُلْدِ وَمُلْكٍ لَّا یَبْلٰی ۟
ಆದರೆ ಶೈತಾನನು ಅವರಿಗೆ ದುಷ್ಪ್ರೇರಣೆ ಮಾಡಿದನು: “ಓ ಆದಮ್! ನಾನು ನಿಮಗೆ ಶಾಶ್ವತ ಬದುಕನ್ನು ನೀಡುವ ಒಂದು ಮರದ ಕುರಿತು ಮತ್ತು ಎಂದೂ ಹಳೆಯದಾಗದ ಸಾಮ್ರಾಜ್ಯದ ಕುರಿತು ತಿಳಿಸಿಕೊಡಲೇ?”
আৰবী তাফছীৰসমূহ:
فَاَكَلَا مِنْهَا فَبَدَتْ لَهُمَا سَوْاٰتُهُمَا وَطَفِقَا یَخْصِفٰنِ عَلَیْهِمَا مِنْ وَّرَقِ الْجَنَّةِ ؗ— وَعَصٰۤی اٰدَمُ رَبَّهٗ فَغَوٰی ۪۟ۖ
ನಂತರ ಅವರಿಬ್ಬರು (ಆದಮ್ ಮತ್ತು ಹವ್ವಾ) ಆ ಮರದ ಹಣ್ಣನ್ನು ತಿಂದರು. ಆಗ ಅವರಿಗೆ ಅವರ ಗುಹ್ಯಭಾಗಗಳು ಪ್ರಕಟವಾದವು. ಅವರು ಸ್ವರ್ಗದ ಎಲೆಗಳನ್ನು ಜೋಡಿಸಿ ತಮ್ಮ ದೇಹಗಳನ್ನು ಮುಚ್ಚತೊಡಗಿದರು. ಆದಮ್ ತನ್ನ ಪರಿಪಾಲಕನ (ಅಲ್ಲಾಹನ) ಆಜ್ಞೋಲ್ಲಂಘನೆ ಮಾಡಿದರು. ಆದ್ದರಿಂದ ಅವರು ತಪ್ಪಿ ನಡೆದರು.
আৰবী তাফছীৰসমূহ:
ثُمَّ اجْتَبٰهُ رَبُّهٗ فَتَابَ عَلَیْهِ وَهَدٰی ۟
ನಂತರ ಅವರ ಪರಿಪಾಲಕನು (ಅಲ್ಲಾಹು) ಅವರನ್ನು ಆರಿಸಿದನು. ಅವರ ಪಶ್ಚಾತ್ತಾಪವನ್ನು ಸ್ವೀಕರಿಸಿ ಅವರಿಗೆ ಮಾರ್ಗದರ್ಶನ ಮಾಡಿದನು.
আৰবী তাফছীৰসমূহ:
قَالَ اهْبِطَا مِنْهَا جَمِیْعًا بَعْضُكُمْ لِبَعْضٍ عَدُوٌّ ۚ— فَاِمَّا یَاْتِیَنَّكُمْ مِّنِّیْ هُدًی ۙ۬— فَمَنِ اتَّبَعَ هُدَایَ فَلَا یَضِلُّ وَلَا یَشْقٰی ۟
ಅಲ್ಲಾಹು ಹೇಳಿದನು: “ನೀವಿಬ್ಬರೂ ಒಟ್ಟಿಗೆ ಇಲ್ಲಿಂದ ಇಳಿಯಿರಿ. ನೀವು ಪರಸ್ಪರ ವೈರಿಗಳಾಗಿದ್ದೀರಿ. ನನ್ನ ಕಡೆಯಿಂದ ನಿಮಗೆ ಮಾರ್ಗದರ್ಶನವು ಬರುವಾಗ, ಯಾರು ನನ್ನ ಮಾರ್ಗದರ್ಶನವನ್ನು ಅನುಸರಿಸುತ್ತಾನೋ ಅವನು ದಾರಿತಪ್ಪುವುದಿಲ್ಲ ಮತ್ತು ಕಷ್ಟ ಅನುಭವಿಸುವುದಿಲ್ಲ.
আৰবী তাফছীৰসমূহ:
وَمَنْ اَعْرَضَ عَنْ ذِكْرِیْ فَاِنَّ لَهٗ مَعِیْشَةً ضَنْكًا وَّنَحْشُرُهٗ یَوْمَ الْقِیٰمَةِ اَعْمٰی ۟
ಆದರೆ ಯಾರು ನನ್ನ ಸ್ಮರಣೆಯನ್ನು ಕಡೆಗಣಿಸಿ ವಿಮುಖನಾಗುತ್ತಾನೋ—ನಿಶ್ಚಯವಾಗಿಯೂ ಅವನಿಗೆ ಇಕ್ಕಟ್ಟಾದ ಜೀವನವಿರುವುದು. ಪುನರುತ್ಥಾನ ದಿನದಂದು ನಾವು ಅವನನ್ನು ಕುರುಡನಾಗಿ ಎಬ್ಬಿಸುವೆವು.”
আৰবী তাফছীৰসমূহ:
قَالَ رَبِّ لِمَ حَشَرْتَنِیْۤ اَعْمٰی وَقَدْ كُنْتُ بَصِیْرًا ۟
ಅವನು ಕೇಳುವನು: “ನನ್ನ ಪರಿಪಾಲಕನೇ! ನೀನು ನನ್ನನ್ನು ಕುರುಡನಾಗಿ ಏಕೆ ಎಬ್ಬಿಸಿದೆ? ನನಗೆ ಕಣ್ಣು ಕಾಣುತ್ತಿತ್ತಲ್ಲವೇ?”
আৰবী তাফছীৰসমূহ:
قَالَ كَذٰلِكَ اَتَتْكَ اٰیٰتُنَا فَنَسِیْتَهَا ۚ— وَكَذٰلِكَ الْیَوْمَ تُنْسٰی ۟
ಅಲ್ಲಾಹು ಹೇಳುವನು: “ಈ ರೀತಿಯೇ ಆಗಿದೆ. ನಮ್ಮ ವಚನಗಳು ನಿನ್ನ ಬಳಿಗೆ ಬಂದಾಗ ನೀನು ಅದನ್ನು ಮರೆತುಬಿಟ್ಟೆ. ಅದೇ ರೀತಿ ಇಂದು ನೀನು ಕೂಡ ಮರೆಯಲಾಗಿರುವೆ.”
আৰবী তাফছীৰসমূহ:
وَكَذٰلِكَ نَجْزِیْ مَنْ اَسْرَفَ وَلَمْ یُؤْمِنْ بِاٰیٰتِ رَبِّهٖ ؕ— وَلَعَذَابُ الْاٰخِرَةِ اَشَدُّ وَاَبْقٰی ۟
ಹದ್ದು ಮೀರುವವರಿಗೆ ಮತ್ತು ತಮ್ಮ ಪರಿಪಾಲಕನ (ಅಲ್ಲಾಹನ) ವಚನಗಳಲ್ಲಿ ವಿಶ್ವಾಸವಿಡದವರಿಗೆ ನಾವು ಈ ರೀತಿ ಪ್ರತಿಫಲವನ್ನು ನೀಡುವೆವು. ಪರಲೋಕದ ಶಿಕ್ಷೆಯಂತೂ ಅತಿಕಠೋರ ಮತ್ತು ಶಾಶ್ವತವಾಗಿದೆ.
আৰবী তাফছীৰসমূহ:
اَفَلَمْ یَهْدِ لَهُمْ كَمْ اَهْلَكْنَا قَبْلَهُمْ مِّنَ الْقُرُوْنِ یَمْشُوْنَ فِیْ مَسٰكِنِهِمْ ؕ— اِنَّ فِیْ ذٰلِكَ لَاٰیٰتٍ لِّاُولِی النُّهٰی ۟۠
ಅವರಿಗಿಂತ ಮೊದಲು ನಾವು ಎಷ್ಟೋ ತಲೆಮಾರುಗಳನ್ನು ನಾಶ ಮಾಡಿದ್ದೇವೆ ಎಂಬ ಸಂಗತಿಯು ಅವರನ್ನು ಸನ್ಮಾರ್ಗಕ್ಕೆ ಒಯ್ಯುವುದಿಲ್ಲವೇ? ವಾಸ್ತವವಾಗಿ, ಅವರ ವಾಸಸ್ಥಳಗಳಲ್ಲಿ ಇವರು ನಡೆದಾಡುತ್ತಿದ್ದಾರೆ. ನಿಶ್ಚಯವಾಗಿಯೂ ಬುದ್ಧಿವಂತರಿಗೆ ಇದರಲ್ಲಿ ಅನೇಕ ದೃಷ್ಟಾಂತಗಳಿವೆ.
আৰবী তাফছীৰসমূহ:
وَلَوْلَا كَلِمَةٌ سَبَقَتْ مِنْ رَّبِّكَ لَكَانَ لِزَامًا وَّاَجَلٌ مُّسَمًّی ۟ؕ
ನಿಮ್ಮ ಪರಿಪಾಲಕನ (ಅಲ್ಲಾಹನ) ಕಡೆಯ ಒಂದು ಮಾತು ಮೊದಲೇ ಇಲ್ಲದಿರುತ್ತಿದ್ದರೆ, ಮತ್ತು ಒಂದು ನಿಶ್ಚಿತ ಅವಧಿಯನ್ನು ಮೊದಲೇ ತೀರ್ಮಾನಿಸಲಾಗದಿರುತ್ತಿದ್ದರೆ, ಶಿಕ್ಷೆಯು ಇವರಿಗೆ ಅನಿವಾರ್ಯವಾಗಿ ಬಿಡುತ್ತಿತ್ತು.
আৰবী তাফছীৰসমূহ:
فَاصْبِرْ عَلٰی مَا یَقُوْلُوْنَ وَسَبِّحْ بِحَمْدِ رَبِّكَ قَبْلَ طُلُوْعِ الشَّمْسِ وَقَبْلَ غُرُوْبِهَا ۚ— وَمِنْ اٰنَآئِ الَّیْلِ فَسَبِّحْ وَاَطْرَافَ النَّهَارِ لَعَلَّكَ تَرْضٰی ۟
ಆದ್ದರಿಂದ ಅವರು ಹೇಳುತ್ತಿರುವ ಮಾತುಗಳ ಬಗ್ಗೆ ತಾಳ್ಮೆಯಿಂದಿರಿ. ಸೂರ್ಯೋದಯಕ್ಕೆ ಮೊದಲು ಮತ್ತು ಸೂರ್ಯಾಸ್ತಕ್ಕೆ ಮೊದಲು ನಿಮ್ಮ ಪರಿಪಾಲಕನನ್ನು (ಅಲ್ಲಾಹನನ್ನು) ಸ್ತುತಿಸುತ್ತಾ ಅವನ ಪರಿಶುದ್ಧತೆಯನ್ನು ಕೊಂಡಾಡಿರಿ. ರಾತ್ರಿಯ ಕೆಲವು ತಾಸುಗಳಲ್ಲೂ, ಹಗಲಿನ ಕೆಲವು ಭಾಗಗಳಲ್ಲೂ ಅವನ ಪರಿಶುದ್ಧತೆಯನ್ನು ಕೊಂಡಾಡಿರಿ. ನೀವು ಸಂತೃಪ್ತರಾಗುವುದಕ್ಕಾಗಿ.
আৰবী তাফছীৰসমূহ:
وَلَا تَمُدَّنَّ عَیْنَیْكَ اِلٰی مَا مَتَّعْنَا بِهٖۤ اَزْوَاجًا مِّنْهُمْ زَهْرَةَ الْحَیٰوةِ الدُّنْیَا ۙ۬— لِنَفْتِنَهُمْ فِیْهِ ؕ— وَرِزْقُ رَبِّكَ خَیْرٌ وَّاَبْقٰی ۟
ಅವರಲ್ಲಿರುವ ಪಂಗಡಗಳಿಗೆ ನಾವು ಏನೇನು ಸವಲತ್ತುಗಳನ್ನು ಒದಗಿಸಿದ್ದೇವೆಯೋ ಅದರ ಕಡೆಗೆ ನೀವು ನಿಮ್ಮ ದೃಷ್ಟಿಯನ್ನು ಹರಿಸಬೇಡಿ. ಅವೆಲ್ಲವೂ ಇಹಲೋಕದ ಸೊಬಗುಗಳಾಗಿವೆ. ಅದರ ಮೂಲಕ ನಾವು ಅವರನ್ನು ಪರೀಕ್ಷಿಸುತ್ತೇವೆ. ನಿಮ್ಮ ಪರಿಪಾಲಕನು (ಅಲ್ಲಾಹು) ಒದಗಿಸುವ ಉಪಜೀವನವು ಅತ್ಯುತ್ತಮ ಮತ್ತು ಶಾಶ್ವತವಾಗಿದೆ.
আৰবী তাফছীৰসমূহ:
وَاْمُرْ اَهْلَكَ بِالصَّلٰوةِ وَاصْطَبِرْ عَلَیْهَا ؕ— لَا نَسْـَٔلُكَ رِزْقًا ؕ— نَحْنُ نَرْزُقُكَ ؕ— وَالْعَاقِبَةُ لِلتَّقْوٰی ۟
ನಿಮ್ಮ ಕುಟುಂಬದವರಿಗೆ ನಮಾಝ್ ನಿರ್ವಹಿಸಲು ಆದೇಶಿಸಿರಿ. ಅದರಲ್ಲಿ (ನಮಾಝ್‍ನಲ್ಲಿ) ಸ್ಥೈರ್ಯದಿಂದಿರಿ. ನಾವು ನಿಮ್ಮಿಂದ ಆಹಾರವನ್ನು ಬೇಡುವುದಿಲ್ಲ. ನಾವೇ ನಿಮಗೆ ಆಹಾರ ಒದಗಿಸುತ್ತೇವೆ. ಅಂತಿಮ ಫಲಿತಾಂಶವಿರುವುದು ದೇವಭಯಕ್ಕಾಗಿದೆ.
আৰবী তাফছীৰসমূহ:
وَقَالُوْا لَوْلَا یَاْتِیْنَا بِاٰیَةٍ مِّنْ رَّبِّهٖ ؕ— اَوَلَمْ تَاْتِهِمْ بَیِّنَةُ مَا فِی الصُّحُفِ الْاُوْلٰی ۟
ಅವರು ಹೇಳಿದರು: “ಅವರು (ಪ್ರವಾದಿ) ತಮ್ಮ ಪರಿಪಾಲಕನಿಂದ (ಅಲ್ಲಾಹನಿಂದ) ನಮ್ಮ ಬಳಿಗೆ ಒಂದು ದೃಷ್ಟಾಂತವನ್ನೇಕೆ ತರುವುದಿಲ್ಲ?” ಹಿಂದಿನ ಗ್ರಂಥಗಳಲ್ಲಿರುವ ಸ್ಪಷ್ಟ ಸಾಕ್ಷ್ಯವು ಅವರ ಬಳಿಗೆ ಬಂದಿಲ್ಲವೇ?
আৰবী তাফছীৰসমূহ:
وَلَوْ اَنَّاۤ اَهْلَكْنٰهُمْ بِعَذَابٍ مِّنْ قَبْلِهٖ لَقَالُوْا رَبَّنَا لَوْلَاۤ اَرْسَلْتَ اِلَیْنَا رَسُوْلًا فَنَتَّبِعَ اٰیٰتِكَ مِنْ قَبْلِ اَنْ نَّذِلَّ وَنَخْزٰی ۟
ಇವರಿಗಿಂತ (ಪ್ರವಾದಿಗಿಂತ) ಮೊದಲೇ ನಾವು ಅವರನ್ನು ಯಾವುದಾದರೂ ಶಿಕ್ಷೆಯ ಮೂಲಕ ನಾಶ ಮಾಡುತ್ತಿದ್ದರೆ, ಅವರು ಹೇಳುತ್ತಿದ್ದರು: “ನಮ್ಮ ಪರಿಪಾಲಕನೇ! ನೀನು ನಮ್ಮ ಬಳಿಗೆ ಒಬ್ಬ ಸಂದೇಶವಾಹಕನನ್ನು ಏಕೆ ಕಳುಹಿಸಲಿಲ್ಲ? ಹಾಗೇನಾದರೂ ಕಳುಹಿಸುತ್ತಿದ್ದರೆ ಈ ಅವಮಾನ ಮತ್ತು ನಾಚಿಗೆಗೇಡನ್ನು ಅನುಭವಿಸುವುದಕ್ಕೆ ಮೊದಲೇ ನಾವು ನಿನ್ನ ವಚನಗಳನ್ನು ಅನುಸರಿಸುತ್ತಿದ್ದೆವು.”
আৰবী তাফছীৰসমূহ:
قُلْ كُلٌّ مُّتَرَبِّصٌ فَتَرَبَّصُوْا ۚ— فَسَتَعْلَمُوْنَ مَنْ اَصْحٰبُ الصِّرَاطِ السَّوِیِّ وَمَنِ اهْتَدٰی ۟۠
ಹೇಳಿರಿ: “ಎಲ್ಲರೂ (ತಮ್ಮ ಫಲಿತಾಂಶವನ್ನು) ಕಾಯುತ್ತಿದ್ದಾರೆ. ನೀವು ಕೂಡ ಕಾಯಿರಿ. ಸರಿಯಾದ ಮಾರ್ಗದಲ್ಲಿರುವವರು ಯಾರು ಮತ್ತು ಸನ್ಮಾರ್ಗವನ್ನು ಪಡೆದವರು ಯಾರೆಂದು ನೀವು ಸದ್ಯವೇ ತಿಳಿಯುವಿರಿ.
আৰবী তাফছীৰসমূহ:
 
অৰ্থানুবাদ ছুৰা: ছুৰা ত্বা-হা
ছুৰাৰ তালিকা পৃষ্ঠা নং
 
আল-কোৰআনুল কাৰীমৰ অৰ্থানুবাদ - الترجمة الكنادية - অনুবাদসমূহৰ সূচীপত্ৰ

ترجمة معاني القرآن الكريم إلى اللغة الكنادية ترجمها محمد حمزة بتور.

বন্ধ