وه‌رگێڕانی ماناكانی قورئانی پیرۆز - وەرگێڕاوی کەنادی * - پێڕستی وه‌رگێڕاوه‌كان

XML CSV Excel API
Please review the Terms and Policies

وه‌رگێڕانی ماناكان سوره‌تی: سورەتی التوبة   ئایه‌تی:

ಸೂರ ಅತ್ತೌಬ

بَرَآءَةٌ مِّنَ اللّٰهِ وَرَسُوْلِهٖۤ اِلَی الَّذِیْنَ عٰهَدْتُّمْ مِّنَ الْمُشْرِكِیْنَ ۟ؕ
ಇದು ಬಹುದೇವವಿಶ್ವಾಸಿಗಳಲ್ಲಿ ನೀವು ಯಾರೊಡನೆ ಕರಾರು ಮಾಡಿಕೊಂಡಿದ್ದೀರೋ ಅವರಿಗೆ ಅಲ್ಲಾಹು ಮತ್ತು ಅವನ ಸಂದೇಶವಾಹಕರ ಕಡೆಯ ಹೊಣೆಮುಕ್ತಿಯ ಘೋಷಣೆಯಾಗಿದೆ.[1]
[1] ಮುಸಲ್ಮಾನರೊಡನೆ ತಾತ್ಕಾಲಿಕವಾಗಿ, ಅಥವಾ 4 ತಿಂಗಳಿಗಿಂತ ಕಡಿಮೆ, ಅಥವಾ 4 ತಿಂಗಳಿಗಿಂತ ಹೆಚ್ಚು ಅವಧಿಯ ತನಕ ಕರಾರು ಮಾಡಿಕೊಂಡಿದ್ದು ತಮ್ಮ ಕರಾರನ್ನು ಪಾಲಿಸದೆ ವಿಶ್ವಾಸದ್ರೋಹವೆಸಗಿದ ಬಹುದೇವವಿಶ್ವಾಸಿಗಳೊಡನೆ ಈ ಹೊಣೆಮುಕ್ತಿಯ ಘೋಷಣೆಯನ್ನು ಮಾಡಲಾಗಿದೆ.
تەفسیرە عەرەبیەکان:
فَسِیْحُوْا فِی الْاَرْضِ اَرْبَعَةَ اَشْهُرٍ وَّاعْلَمُوْۤا اَنَّكُمْ غَیْرُ مُعْجِزِی اللّٰهِ ۙ— وَاَنَّ اللّٰهَ مُخْزِی الْكٰفِرِیْنَ ۟
ಆದ್ದರಿಂದ ನೀವು (ಬಹುದೇವವಿಶ್ವಾಸಿಗಳು) ನಾಲ್ಕು ತಿಂಗಳವರೆಗೆ ಭೂಮಿಯಲ್ಲಿ ಸ್ವಚ್ಛಂದವಾಗಿ ಸಂಚರಿಸಿರಿ.[1] ತಿಳಿಯಿರಿ! ಅಲ್ಲಾಹನನ್ನು ಸೋಲಿಸಲು ನಿಮಗೆ ಸಾಧ್ಯವಿಲ್ಲ. ನಿಶ್ಚಯವಾಗಿಯೂ ಅಲ್ಲಾಹು ಸತ್ಯನಿಷೇಧಿಗಳನ್ನು ಅಪಮಾನಿತರನ್ನಾಗಿ ಮಾಡುವನು.
[1] ಅವರಿಗೆ ನಾಲ್ಕು ತಿಂಗಳ ಕಾಲಾವಕಾಶ ನೀಡಲಾಗುತ್ತದೆ. ಈ ಅವಧಿಯಲ್ಲಿ ಅವರ ಮೇಲೆ ಯಾವುದೇ ದಾಳಿ ಮಾಡಲಾಗುವುದಿಲ್ಲ.
تەفسیرە عەرەبیەکان:
وَاَذَانٌ مِّنَ اللّٰهِ وَرَسُوْلِهٖۤ اِلَی النَّاسِ یَوْمَ الْحَجِّ الْاَكْبَرِ اَنَّ اللّٰهَ بَرِیْٓءٌ مِّنَ الْمُشْرِكِیْنَ ۙ۬— وَرَسُوْلُهٗ ؕ— فَاِنْ تُبْتُمْ فَهُوَ خَیْرٌ لَّكُمْ ۚ— وَاِنْ تَوَلَّیْتُمْ فَاعْلَمُوْۤا اَنَّكُمْ غَیْرُ مُعْجِزِی اللّٰهِ ؕ— وَبَشِّرِ الَّذِیْنَ كَفَرُوْا بِعَذَابٍ اَلِیْمٍ ۟ۙ
ಇದು ಜನರಿಗೆ ಮಹಾ ಹಜ್ಜ್‌ನ ದಿನದಂದು ಅಲ್ಲಾಹು ಮತ್ತು ಅವನ ಸಂದೇಶವಾಹಕರ ಕಡೆಯ ಘೋಷಣೆಯಾಗಿದೆ—ಏನೆಂದರೆ ಅಲ್ಲಾಹು ಮತ್ತು ಅವರ ಸಂದೇಶವಾಹಕರು ಬಹುದೇವವಿಶ್ವಾಸಿಗಳಿಂದ ಸಂಪೂರ್ಣ ಮುಕ್ತರಾಗಿದ್ದಾರೆ. ನೀವು (ಬಹುದೇವವಿಶ್ವಾಸಿಗಳು) ಪಶ್ಚಾತ್ತಾಪಪಟ್ಟರೆ ಅದು ನಿಮಗೆ ಒಳಿತಾಗಿದೆ. ನೀವು ಲೆಕ್ಕಿಸದೆ ತಿರುಗಿ ನಡೆದರೆ ತಿಳಿಯಿರಿ! ನಿಶ್ಚಯವಾಗಿಯೂ ಅಲ್ಲಾಹನನ್ನು ಸೋಲಿಸಲು ನಿಮ್ಮಿಂದ ಸಾಧ್ಯವಿಲ್ಲ. ಸತ್ಯನಿಷೇಧಿಗಳಿಗೆ ಯಾತನಾಮಯ ಶಿಕ್ಷೆಯ ಬಗ್ಗೆ ಸುವಾರ್ತೆ ನೀಡಿರಿ.
تەفسیرە عەرەبیەکان:
اِلَّا الَّذِیْنَ عٰهَدْتُّمْ مِّنَ الْمُشْرِكِیْنَ ثُمَّ لَمْ یَنْقُصُوْكُمْ شَیْـًٔا وَّلَمْ یُظَاهِرُوْا عَلَیْكُمْ اَحَدًا فَاَتِمُّوْۤا اِلَیْهِمْ عَهْدَهُمْ اِلٰی مُدَّتِهِمْ ؕ— اِنَّ اللّٰهَ یُحِبُّ الْمُتَّقِیْنَ ۟
ಆದರೆ ಬಹುದೇವವಿಶ್ವಾಸಿಗಳಲ್ಲಿ ನೀವು ಯಾರೊಡನೆ ಕರಾರು ಮಾಡಿಕೊಂಡಿದ್ದೀರೋ ಅವರು ಕರಾರು ಉಲ್ಲಂಘಿಸದಿದ್ದರೆ ಮತ್ತು ನಿಮಗೆ ವಿರುದ್ಧವಾಗಿ ನಿಮ್ಮ ಶತ್ರುಗಳಿಗೆ ಸಹಾಯ ಮಾಡದಿದ್ದರೆ ಅವರು ಇದರಿಂದ ಹೊರತಾಗಿದ್ದಾರೆ. ನೀವು ಅವರೊಡನೆ ಮಾಡಿದ ಕರಾರನ್ನು ಅವರ ಅವಧಿ ಮುಗಿಯುವವರೆಗೆ ಮುಂದುವರಿಸಿರಿ. ನಿಶ್ಚಯವಾಗಿಯೂ ಅಲ್ಲಾಹು ದೇವಭಯವುಳ್ಳವರನ್ನು ಪ್ರೀತಿಸುತ್ತಾನೆ.
تەفسیرە عەرەبیەکان:
فَاِذَا انْسَلَخَ الْاَشْهُرُ الْحُرُمُ فَاقْتُلُوا الْمُشْرِكِیْنَ حَیْثُ وَجَدْتُّمُوْهُمْ وَخُذُوْهُمْ وَاحْصُرُوْهُمْ وَاقْعُدُوْا لَهُمْ كُلَّ مَرْصَدٍ ۚ— فَاِنْ تَابُوْا وَاَقَامُوا الصَّلٰوةَ وَاٰتَوُا الزَّكٰوةَ فَخَلُّوْا سَبِیْلَهُمْ ؕ— اِنَّ اللّٰهَ غَفُوْرٌ رَّحِیْمٌ ۟
ಪವಿತ್ರ ತಿಂಗಳುಗಳು ಕಳೆದರೆ,[1] ಆ ಬಹುದೇವವಿಶ್ವಾಸಿಗಳನ್ನು ಕಂಡಲ್ಲಿ ಕೊಲ್ಲಿರಿ. ಅವರನ್ನು ಹಿಡಿಯಿರಿ, ಸುತ್ತುವರಿಯಿರಿ ಮತ್ತು ಎಲ್ಲಾ ಆಯಕಟ್ಟಿನ ಸ್ಥಳಗಳಲ್ಲಿ ಅವರಿಗಾಗಿ ಹೊಂಚುಹಾಕಿರಿ. ಅವರು ಪಶ್ಚಾತ್ತಾಪಪಟ್ಟು ನಮಾಝ್ ಸಂಸ್ಥಾಪಿಸಿದರೆ ಮತ್ತು ಝಕಾತ್ ನೀಡಿದರೆ ಅವರನ್ನು ಅವರ ದಾರಿಯಲ್ಲಿ ಬಿಟ್ಟುಬಿಡಿ. ನಿಶ್ಚಯವಾಗಿಯೂ ಅಲ್ಲಾಹು ಕ್ಷಮಿಸುವವನು ಮತ್ತು ದಯೆ ತೋರುವವನಾಗಿದ್ದಾನೆ.
[1] ಅಂದರೆ ಮೇಲೆ ಸೂಚಿಸಲಾದ ನಾಲ್ಕು ತಿಂಗಳುಗಳು.
تەفسیرە عەرەبیەکان:
وَاِنْ اَحَدٌ مِّنَ الْمُشْرِكِیْنَ اسْتَجَارَكَ فَاَجِرْهُ حَتّٰی یَسْمَعَ كَلٰمَ اللّٰهِ ثُمَّ اَبْلِغْهُ مَاْمَنَهٗ ؕ— ذٰلِكَ بِاَنَّهُمْ قَوْمٌ لَّا یَعْلَمُوْنَ ۟۠
ಬಹುದೇವವಿಶ್ವಾಸಿಗಳಲ್ಲಿ ಯಾರಾದರೂ ನಿಮ್ಮೊಡನೆ ಆಶ್ರಯ ಬೇಡಿದರೆ, ಅವನಿಗೆ ಆಶ್ರಯ ನೀಡಿರಿ—ಅವನು ಅಲ್ಲಾಹನ ವಚನಗಳನ್ನು ಕೇಳುವ ತನಕ. ನಂತರ ಅವನನ್ನು ಅವನ ಸುರಕ್ಷಿತ ಸ್ಥಳಕ್ಕೆ ತಲುಪಿಸಿರಿ. ಅದೇಕೆಂದರೆ ಅವರು ತಿಳುವಳಿಕೆಯಿಲ್ಲದ ಜನರಾಗಿದ್ದಾರೆ.
تەفسیرە عەرەبیەکان:
كَیْفَ یَكُوْنُ لِلْمُشْرِكِیْنَ عَهْدٌ عِنْدَ اللّٰهِ وَعِنْدَ رَسُوْلِهٖۤ اِلَّا الَّذِیْنَ عٰهَدْتُّمْ عِنْدَ الْمَسْجِدِ الْحَرَامِ ۚ— فَمَا اسْتَقَامُوْا لَكُمْ فَاسْتَقِیْمُوْا لَهُمْ ؕ— اِنَّ اللّٰهَ یُحِبُّ الْمُتَّقِیْنَ ۟
ಬಹುದೇವವಿಶ್ವಾಸಿಗಳಿಗೆ ಅಲ್ಲಾಹು ಮತ್ತು ಅವನ ಸಂದೇಶವಾಹಕರೊಡನೆ ಕರಾರು ಇರುವುದು ಹೇಗೆ? ಪವಿತ್ರ ಮಸೀದಿಯ ಬಳಿ ನೀವು ಕರಾರು ಮಾಡಿಕೊಂಡವರ ಹೊರತು. ಅವರು ತಮ್ಮ ಕರಾರಿನಲ್ಲಿ ನೇರವಾಗಿ ನಿಲ್ಲುವ ತನಕ ನೀವು ನಿಮ್ಮ ಕರಾರಿನಲ್ಲಿ ನೇರವಾಗಿ ನಿಲ್ಲಿರಿ. ನಿಶ್ಚಯವಾಗಿಯೂ ಅಲ್ಲಾಹು ದೇವಭಯವುಳ್ಳವರನ್ನು ಪ್ರೀತಿಸುತ್ತಾನೆ.
تەفسیرە عەرەبیەکان:
كَیْفَ وَاِنْ یَّظْهَرُوْا عَلَیْكُمْ لَا یَرْقُبُوْا فِیْكُمْ اِلًّا وَّلَا ذِمَّةً ؕ— یُرْضُوْنَكُمْ بِاَفْوَاهِهِمْ وَتَاْبٰی قُلُوْبُهُمْ ۚ— وَاَكْثَرُهُمْ فٰسِقُوْنَ ۟ۚ
ಅವರಿಗೆ ಕರಾರು ಇರುವುದು ಹೇಗೆ? ಅವರಿಗೆ ನಿಮ್ಮ ಮೇಲೆ ಪ್ರಾಬಲ್ಯ ದೊರೆತರೆ, ನಿಮ್ಮ ವಿಷಯದಲ್ಲಿ ಅವರು ಕುಟುಂಬ ಸಂಬಂಧವನ್ನು ಅಥವಾ ಕರಾರನ್ನು ಪರಿಗಣಿಸುವುದಿಲ್ಲ. ಅವರು ಮಾತಿನ ಮೂಲಕ ನಿಮ್ಮ ಬಗ್ಗೆ ಸಂತೃಪ್ತಿ ಸೂಚಿಸುತ್ತಾರೆ. ಆದರೆ ಅವರ ಹೃದಯಗಳು ಅದನ್ನು ಒಪ್ಪಿಕೊಳ್ಳುವುದಿಲ್ಲ. ಅವರಲ್ಲಿ ಹೆಚ್ಚಿನವರೂ ದುಷ್ಕರ್ಮಿಗಳಾಗಿದ್ದಾರೆ.
تەفسیرە عەرەبیەکان:
اِشْتَرَوْا بِاٰیٰتِ اللّٰهِ ثَمَنًا قَلِیْلًا فَصَدُّوْا عَنْ سَبِیْلِهٖ ؕ— اِنَّهُمْ سَآءَ مَا كَانُوْا یَعْمَلُوْنَ ۟
ಅವರು ಅಲ್ಲಾಹನ ವಚನಗಳನ್ನು ಅಲ್ಪ ಬೆಲೆಗೆ ಮಾರಿದರು ಮತ್ತು ಅವನ ಮಾರ್ಗದಿಂದ ಜನರನ್ನು ತಡೆದರು. ನಿಶ್ಚಯವಾಗಿಯೂ ಅವರು ಮಾಡುವ ಕರ್ಮಗಳು ಬಹಳ ನೀಚವಾಗಿವೆ.
تەفسیرە عەرەبیەکان:
لَا یَرْقُبُوْنَ فِیْ مُؤْمِنٍ اِلًّا وَّلَا ذِمَّةً ؕ— وَاُولٰٓىِٕكَ هُمُ الْمُعْتَدُوْنَ ۟
ಅವರು ಸತ್ಯವಿಶ್ವಾಸಿಯ ವಿಷಯದಲ್ಲಿ ಕುಟುಂಬ ಸಂಬಂಧವನ್ನು ಅಥವಾ ಕರಾರನ್ನು ಪರಿಗಣಿಸುವುದಿಲ್ಲ. ಅವರೇ ಅತಿರೇಕಿಗಳು.
تەفسیرە عەرەبیەکان:
فَاِنْ تَابُوْا وَاَقَامُوا الصَّلٰوةَ وَاٰتَوُا الزَّكٰوةَ فَاِخْوَانُكُمْ فِی الدِّیْنِ ؕ— وَنُفَصِّلُ الْاٰیٰتِ لِقَوْمٍ یَّعْلَمُوْنَ ۟
ಆದರೆ ಅವರು ಪಶ್ಚಾತ್ತಾಪಪಟ್ಟು, ನಮಾಝನ್ನು ಸಂಸ್ಥಾಪಿಸಿದರೆ ಮತ್ತು ಝಕಾತ್ ನೀಡಿದರೆ, ಅವರು ನಿಮ್ಮ ಧಾರ್ಮಿಕ ಸಹೋದರರಾಗಿದ್ದಾರೆ. ತಿಳುವಳಿಕೆಯಿರುವ ಜನರಿಗಾಗಿ ನಾವು ವಚನಗಳನ್ನು ವಿವರಿಸಿಕೊಡುತ್ತೇವೆ.
تەفسیرە عەرەبیەکان:
وَاِنْ نَّكَثُوْۤا اَیْمَانَهُمْ مِّنْ بَعْدِ عَهْدِهِمْ وَطَعَنُوْا فِیْ دِیْنِكُمْ فَقَاتِلُوْۤا اَىِٕمَّةَ الْكُفْرِ ۙ— اِنَّهُمْ لَاۤ اَیْمَانَ لَهُمْ لَعَلَّهُمْ یَنْتَهُوْنَ ۟
ಅವರು ಕರಾರು ಮಾಡಿದ ನಂತರ ತಮ್ಮ ಪ್ರತಿಜ್ಞೆಗಳನ್ನು ಉಲ್ಲಂಘಿಸಿದರೆ ಮತ್ತು ನಿಮ್ಮ ಧರ್ಮವನ್ನು ಅವಹೇಳನ ಮಾಡಿದರೆ, ಆ ಸತ್ಯನಿಷೇಧದ ಮುಖಂಡರ ವಿರುದ್ಧ ಯುದ್ಧ ಮಾಡಿರಿ. ನಿಶ್ಚಯವಾಗಿಯೂ ಅವರ ಪ್ರತಿಜ್ಞೆಗಳಿಗೆ ಯಾವುದೇ ಬೆಲೆಯಿಲ್ಲ. ಅವರು (ವೈರವನ್ನು) ಮುಕ್ತಾಯಗೊಳಿಸಲೂಬಹುದು.
تەفسیرە عەرەبیەکان:
اَلَا تُقَاتِلُوْنَ قَوْمًا نَّكَثُوْۤا اَیْمَانَهُمْ وَهَمُّوْا بِاِخْرَاجِ الرَّسُوْلِ وَهُمْ بَدَءُوْكُمْ اَوَّلَ مَرَّةٍ ؕ— اَتَخْشَوْنَهُمْ ۚ— فَاللّٰهُ اَحَقُّ اَنْ تَخْشَوْهُ اِنْ كُنْتُمْ مُّؤْمِنِیْنَ ۟
ತಮ್ಮ ಪ್ರತಿಜ್ಞೆಗಳನ್ನು ಉಲ್ಲಂಘಿಸಿದ ಮತ್ತು ಸಂದೇಶವಾಹಕರನ್ನು ಹೊರದಬ್ಬಲು ಯತ್ನಿಸಿದ ಜನರ ವಿರುದ್ಧ ನೀವೇಕೆ ಯುದ್ಧ ಮಾಡುವುದಿಲ್ಲ? ಮೊದಲು ಯುದ್ಧ ಆರಂಭಿಸಿದವರು ಅವರೇ. ನೀವು ಅವರಿಗೆ ಹೆದರುತ್ತೀರಾ? ನೀವು ಹೆದರಲು ಹೆಚ್ಚು ಅರ್ಹನಾಗಿರುವುದು ಅಲ್ಲಾಹನಾಗಿದ್ದಾನೆ. ನೀವು ಸತ್ಯವಿಶ್ವಾಸಿಗಳಾಗಿದ್ದರೆ.
تەفسیرە عەرەبیەکان:
قَاتِلُوْهُمْ یُعَذِّبْهُمُ اللّٰهُ بِاَیْدِیْكُمْ وَیُخْزِهِمْ وَیَنْصُرْكُمْ عَلَیْهِمْ وَیَشْفِ صُدُوْرَ قَوْمٍ مُّؤْمِنِیْنَ ۟ۙ
ಅವರ ವಿರುದ್ಧ ಯುದ್ಧ ಮಾಡಿರಿ. ನಿಮ್ಮ ಕೈಗಳ ಮೂಲಕ ಅಲ್ಲಾಹು ಅವರನ್ನು ಶಿಕ್ಷಿಸುವನು, ಅವರನ್ನು ಅಪಮಾನಿತರನ್ನಾಗಿ ಮಾಡುವನು, ಅವರಿಗೆ ವಿರುದ್ಧವಾಗಿ ನಿಮಗೆ ಸಹಾಯ ಮಾಡುವನು ಮತ್ತು ಸತ್ಯವಿಶ್ವಾಸಿಗಳ ಹೃದಯಗಳಿಗೆ ಸಂತೃಪ್ತಿಯನ್ನು ನೀಡುವನು.
تەفسیرە عەرەبیەکان:
وَیُذْهِبْ غَیْظَ قُلُوْبِهِمْ ؕ— وَیَتُوْبُ اللّٰهُ عَلٰی مَنْ یَّشَآءُ ؕ— وَاللّٰهُ عَلِیْمٌ حَكِیْمٌ ۟
ಅವರ ಹೃದಯಗಳಿಂದ ಆಕ್ರೋಶವನ್ನು ನಿವಾರಿಸುವನು. ಅಲ್ಲಾಹು ಅವನು ಇಚ್ಛಿಸುವವರ ಪಶ್ಚಾತ್ತಾಪವನ್ನು ಸ್ವೀಕರಿಸುತ್ತಾನೆ. ಅಲ್ಲಾಹು ಸರ್ವಜ್ಞನು ಮತ್ತು ವಿವೇಕಪೂರ್ಣನಾಗಿದ್ದಾನೆ.
تەفسیرە عەرەبیەکان:
اَمْ حَسِبْتُمْ اَنْ تُتْرَكُوْا وَلَمَّا یَعْلَمِ اللّٰهُ الَّذِیْنَ جٰهَدُوْا مِنْكُمْ وَلَمْ یَتَّخِذُوْا مِنْ دُوْنِ اللّٰهِ وَلَا رَسُوْلِهٖ وَلَا الْمُؤْمِنِیْنَ وَلِیْجَةً ؕ— وَاللّٰهُ خَبِیْرٌ بِمَا تَعْمَلُوْنَ ۟۠
ನಿಮ್ಮಲ್ಲಿ (ನಿಷ್ಠೆಯಿಂದ) ಯುದ್ಧ ಮಾಡಿದವರು ಯಾರು ಮತ್ತು ಅಲ್ಲಾಹು, ಅವನ ಸಂದೇಶವಾಹಕರು ಹಾಗೂ ಸತ್ಯವಿಶ್ವಾಸಿಗಳನ್ನು ಬಿಟ್ಟು ಇತತರೊಂದಿಗೆ ರಹಸ್ಯವಾಗಿ ಗೆಳೆತನ ಮಾಡಿಕೊಂಡವರು ಯಾರು ಎಂದು ಸ್ಪಷ್ಟವಾಗಿ ತಿಳಿಯದೆ ಅಲ್ಲಾಹು ನಿಮ್ಮನ್ನು ಈ ಸ್ಥಿತಿಯಲ್ಲಿ ಬಿಟ್ಟುಬಿಡುವನೆಂದು ನೀವು ಭಾವಿಸಿದ್ದೀರಾ? ನೀವು ಮಾಡುವ ಕೆಲಸಗಳನ್ನು ಅವನು ಸೂಕ್ಷ್ಮವಾಗಿ ತಿಳಿಯುತ್ತಿದ್ದಾನೆ.
تەفسیرە عەرەبیەکان:
مَا كَانَ لِلْمُشْرِكِیْنَ اَنْ یَّعْمُرُوْا مَسٰجِدَ اللّٰهِ شٰهِدِیْنَ عَلٰۤی اَنْفُسِهِمْ بِالْكُفْرِ ؕ— اُولٰٓىِٕكَ حَبِطَتْ اَعْمَالُهُمْ ۖۚ— وَفِی النَّارِ هُمْ خٰلِدُوْنَ ۟
ಸತ್ಯನಿಷೇಧಕ್ಕೆ ಸ್ವಯಂ ಸಾಕ್ಷಿಗಳಾಗಿರುತ್ತಾ ಅಲ್ಲಾಹನ ಮಸೀದಿಗಳ ನಿರ್ವಹಣೆ ಮಾಡುವುದು ಬಹುದೇವಾರಾಧಕರಿಗೆ ಸರಿಹೊಂದುವುದಿಲ್ಲ. ಅವರ ಕರ್ಮಗಳು ನಿಷ್ಫಲವಾಗಿವೆ. ಅವರು ನರಕದಲ್ಲಿ ಶಾಶ್ವತವಾಗಿ ವಾಸಿಸುತ್ತಾರೆ.
تەفسیرە عەرەبیەکان:
اِنَّمَا یَعْمُرُ مَسٰجِدَ اللّٰهِ مَنْ اٰمَنَ بِاللّٰهِ وَالْیَوْمِ الْاٰخِرِ وَاَقَامَ الصَّلٰوةَ وَاٰتَی الزَّكٰوةَ وَلَمْ یَخْشَ اِلَّا اللّٰهَ ۫— فَعَسٰۤی اُولٰٓىِٕكَ اَنْ یَّكُوْنُوْا مِنَ الْمُهْتَدِیْنَ ۟
ಅಲ್ಲಾಹನಲ್ಲಿ ಮತ್ತು ಅಂತ್ಯದಿನದಲ್ಲಿ ವಿಶ್ವಾಸವಿರುವವರು, ನಮಾಝ್ ಸಂಸ್ಥಾಪಿಸುವವರು, ಝಕಾತ್ ನೀಡುವವರು ಮತ್ತು ಅಲ್ಲಾಹನನ್ನು ಬಿಟ್ಟು ಬೇರೆ ಯಾರನ್ನೂ ಭಯಪಡದವರು—ಇವರೇ ಅಲ್ಲಾಹನ ಮಸೀದಿಗಳ ನಿರ್ವಹಣೆ ಮಾಡಬೇಕಾದವರು. ಇವರು ಸನ್ಮಾರ್ಗಿಗಳಲ್ಲಿ ಸೇರುವ ನಿರೀಕ್ಷೆಯಿದೆ.
تەفسیرە عەرەبیەکان:
اَجَعَلْتُمْ سِقَایَةَ الْحَآجِّ وَعِمَارَةَ الْمَسْجِدِ الْحَرَامِ كَمَنْ اٰمَنَ بِاللّٰهِ وَالْیَوْمِ الْاٰخِرِ وَجٰهَدَ فِیْ سَبِیْلِ اللّٰهِ ؕ— لَا یَسْتَوٗنَ عِنْدَ اللّٰهِ ؕ— وَاللّٰهُ لَا یَهْدِی الْقَوْمَ الظّٰلِمِیْنَ ۟ۘ
ಹಜ್ಜ್ ಯಾತ್ರಿಗಳಿಗೆ ಪಾನೀಯ ಸರಬರಾಜು ಮಾಡುವುದನ್ನು ಮತ್ತು ಪವಿತ್ರ ಮಸೀದಿಯ ನಿರ್ವಹಣೆ ಮಾಡುವುದನ್ನು ಅಲ್ಲಾಹನಲ್ಲಿ ಮತ್ತು ಅಂತ್ಯದಿನದಲ್ಲಿ ವಿಶ್ವಾಸವಿಡುವುದಕ್ಕೆ ಹಾಗೂ ಅಲ್ಲಾಹನ ಮಾರ್ಗದಲ್ಲಿ ಯುದ್ಧ ಮಾಡುವುದಕ್ಕೆ ಸಮಾನವೆಂದು ಪರಿಗಣಿಸುತ್ತೀರಾ? ಅಲ್ಲಾಹನ ದೃಷ್ಟಿಯಲ್ಲಿ ಅವು ಸಮಾನವಲ್ಲ. ಅಕ್ರಮವೆಸಗುವ ಜನರಿಗೆ ಅಲ್ಲಾಹು ಸನ್ಮಾರ್ಗವನ್ನು ತೋರಿಸುವುದಿಲ್ಲ.
تەفسیرە عەرەبیەکان:
اَلَّذِیْنَ اٰمَنُوْا وَهَاجَرُوْا وَجٰهَدُوْا فِیْ سَبِیْلِ اللّٰهِ بِاَمْوَالِهِمْ وَاَنْفُسِهِمْ ۙ— اَعْظَمُ دَرَجَةً عِنْدَ اللّٰهِ ؕ— وَاُولٰٓىِٕكَ هُمُ الْفَآىِٕزُوْنَ ۟
ಸತ್ಯವಿಶ್ವಾಸ ಸ್ವೀಕರಿಸಿದವರು, ವಲಸೆ (ಹಿಜ್ರ) ಮಾಡಿದವರು ಮತ್ತು ತಮ್ಮ ಧನ-ತನುಗಳಿಂದ ಅಲ್ಲಾಹನ ಮಾರ್ಗದಲ್ಲಿ ಯುದ್ಧ ಮಾಡಿದವರು ಯಾರೋ—ಅವರಿಗೆ ಅಲ್ಲಾಹನ ಬಳಿ ಉನ್ನತ ಸ್ಥಾನಮಾನಗಳಿವೆ. ಅವರೇ ಯಶಸ್ವಿಯಾದವರು.
تەفسیرە عەرەبیەکان:
یُبَشِّرُهُمْ رَبُّهُمْ بِرَحْمَةٍ مِّنْهُ وَرِضْوَانٍ وَّجَنّٰتٍ لَّهُمْ فِیْهَا نَعِیْمٌ مُّقِیْمٌ ۟ۙ
ಅವರ ಪರಿಪಾಲಕನು (ಅಲ್ಲಾಹು) ಅವರಿಗೆ ತನ್ನ ದಯೆ, ಸಂಪ್ರೀತಿ ಮತ್ತು ಸ್ವರ್ಗೋದ್ಯಾನಗಳ ಸುವಾರ್ತೆಯನ್ನು ನೀಡುತ್ತಾನೆ. ಅಲ್ಲಿ ಅವರಿಗೆ ಶಾಶ್ವತ ಸಂತೋಷಗಳಿವೆ.
تەفسیرە عەرەبیەکان:
خٰلِدِیْنَ فِیْهَاۤ اَبَدًا ؕ— اِنَّ اللّٰهَ عِنْدَهٗۤ اَجْرٌ عَظِیْمٌ ۟
ಅವರು ಅದರಲ್ಲಿ ಶಾಶ್ವತವಾಗಿ ವಾಸಿಸುವರು. ನಿಶ್ಚಯವಾಗಿಯೂ ಅಲ್ಲಾಹನ ಬಳಿ ಅತಿದೊಡ್ಡ ಪ್ರತಿಫಲವಿದೆ.
تەفسیرە عەرەبیەکان:
یٰۤاَیُّهَا الَّذِیْنَ اٰمَنُوْا لَا تَتَّخِذُوْۤا اٰبَآءَكُمْ وَاِخْوَانَكُمْ اَوْلِیَآءَ اِنِ اسْتَحَبُّوا الْكُفْرَ عَلَی الْاِیْمَانِ ؕ— وَمَنْ یَّتَوَلَّهُمْ مِّنْكُمْ فَاُولٰٓىِٕكَ هُمُ الظّٰلِمُوْنَ ۟
ಓ ಸತ್ಯವಿಶ್ವಾಸಿಗಳೇ! ನಿಮ್ಮ ತಂದೆಯರನ್ನು ಮತ್ತು ನಿಮ್ಮ ಸಹೋದರರನ್ನು ನಿಮ್ಮ ಮಿತ್ರರನ್ನಾಗಿ ಸ್ವೀಕರಿಸಬೇಡಿ—ಅವರು ಸತ್ಯವಿಶ್ವಾಸಕ್ಕಿಂತ ಹೆಚ್ಚು ಸತ್ಯನಿಷೇಧವನ್ನು ಪ್ರೀತಿಸುವುದಾದರೆ. ನಿಮ್ಮಲ್ಲಿ ಯಾರು ಅವರನ್ನು ಮಿತ್ರರನ್ನಾಗಿ ಸ್ವೀಕರಿಸುತ್ತಾರೋ ಅವರೇ ಅಕ್ರಮಿಗಳು.
تەفسیرە عەرەبیەکان:
قُلْ اِنْ كَانَ اٰبَآؤُكُمْ وَاَبْنَآؤُكُمْ وَاِخْوَانُكُمْ وَاَزْوَاجُكُمْ وَعَشِیْرَتُكُمْ وَاَمْوَالُ ١قْتَرَفْتُمُوْهَا وَتِجَارَةٌ تَخْشَوْنَ كَسَادَهَا وَمَسٰكِنُ تَرْضَوْنَهَاۤ اَحَبَّ اِلَیْكُمْ مِّنَ اللّٰهِ وَرَسُوْلِهٖ وَجِهَادٍ فِیْ سَبِیْلِهٖ فَتَرَبَّصُوْا حَتّٰی یَاْتِیَ اللّٰهُ بِاَمْرِهٖ ؕ— وَاللّٰهُ لَا یَهْدِی الْقَوْمَ الْفٰسِقِیْنَ ۟۠
ಹೇಳಿರಿ: “ನಿಮ್ಮ ತಂದೆಯರು, ನಿಮ್ಮ ಮಕ್ಕಳು, ನಿಮ್ಮ ಸಹೋದರರು, ನಿಮ್ಮ ಪತ್ನಿಯರು, ನಿಮ್ಮ ಸಂಬಂಧಿಕರು, ನೀವು ಸಂಪಾದಿಸಿದ ಆಸ್ತಿಗಳು, ನಷ್ಟವಾಗಬಹುದೆಂದು ನೀವು ಹೆದರುವ ವ್ಯಾಪಾರಗಳು, ನೀವು ಪ್ರೀತಿಸುವ ನಿಮ್ಮ ಮನೆಗಳು—ಇವೆಲ್ಲವೂ ನಿಮಗೆ ಅಲ್ಲಾಹನಿಗಿಂತ, ಅವನ ಸಂದೇಶವಾಹಕರಿಗಿಂತ ಮತ್ತು ಅವನ ಮಾರ್ಗದಲ್ಲಿ ಮಾಡುವ ಹೋರಾಟಕ್ಕಿಂತ ಹೆಚ್ಚು ಪ್ರೀತಿಯುಳ್ಳದ್ದಾಗಿದ್ದರೆ, ಅಲ್ಲಾಹು ಅವನ ಆಜ್ಞೆಯನ್ನು ತರುವ ತನಕ ಕಾಯಿರಿ. ಅವಿಧೇಯತೆ ತೋರುವ ಜನರಿಗೆ ಅಲ್ಲಾಹು ಸನ್ಮಾರ್ಗವನ್ನು ತೋರಿಸುವುದಿಲ್ಲ.”
تەفسیرە عەرەبیەکان:
لَقَدْ نَصَرَكُمُ اللّٰهُ فِیْ مَوَاطِنَ كَثِیْرَةٍ ۙ— وَّیَوْمَ حُنَیْنٍ ۙ— اِذْ اَعْجَبَتْكُمْ كَثْرَتُكُمْ فَلَمْ تُغْنِ عَنْكُمْ شَیْـًٔا وَّضَاقَتْ عَلَیْكُمُ الْاَرْضُ بِمَا رَحُبَتْ ثُمَّ وَلَّیْتُمْ مُّدْبِرِیْنَ ۟ۚ
ನಿಶ್ಚಯವಾಗಿಯೂ ಅನೇಕ ಸ್ಥಳಗಳಲ್ಲಿ ಅಲ್ಲಾಹು ನಿಮಗೆ ಸಹಾಯ ಮಾಡಿದ್ದಾನೆ. ಹುನೈನ್ ಯುದ್ಧ ನಡೆದ ದಿನದಲ್ಲಿ ಕೂಡ (ಅವನು ನಿಮಗೆ ಸಹಾಯ ಮಾಡಿದ್ದಾನೆ). ಅಂದು ನಿಮ್ಮ ಸಂಖ್ಯಾಬಲವನ್ನು ನೋಡಿ ನೀವು ಪುಳಕಿತರಾದ ಸಂದರ್ಭ. ಆದರೆ ಅದು ನಿಮಗೆ ಯಾವುದೇ ಉಪಕಾರ ಮಾಡಲಿಲ್ಲ. ಭೂಮಿಯು ವಿಶಾಲವಾಗಿದ್ದೂ ಸಹ ನಿಮಗೆ ಸಂಕುಚಿತವಾದಂತೆ ತೋರಿತು. ನಂತರ ನೀವು ದಿಕ್ಕೆಟ್ಟು ಪಲಾಯನ ಮಾಡಿದಿರಿ.[1]
[1] ಹಿಜ್ರ 8ನೇ ವರ್ಷದಲ್ಲಿ ಹುನೈನ್ ಯುದ್ಧ ನಡೆಯಿತು. ಮುಸ್ಲಿಮರು ಮಕ್ಕಾ ವಶಪಡಿಸಿದ್ದನ್ನು ಕಂಡು ರೋಷದಿಂದ ಕೆಲವು ಸತ್ಯನಿಷೇಧಿ ಗೋತ್ರಗಳು ಮುಸ್ಲಿಮರ ವಿರುದ್ಧ ಯುದ್ಧ ಸಾರಿದರು. ಈ ಯುದ್ಧದಲ್ಲಿ ಮುಸ್ಲಿಮರು ಗಣನೀಯ ಸಂಖ್ಯೆಯಲ್ಲಿದ್ದೂ ಸಹ ಆರಂಭದಲ್ಲಿ ಸೋಲನ್ನು ಕಂಡರು. ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಕೆಲವು ಆಪ್ತ ಸಂಗಡಿಗರ ಹೊರತು ಉಳಿದವರು ಯುದ್ಧರಂಗದಿಂದ ಪಲಾಯನ ಮಾಡಿದರು. ಆದರೆ ಕೆಲವೇ ಕ್ಷಣಗಳಲ್ಲಿ ಅವರು ಮರಳಿ ಬಂದು ವೀರಾವೇಶದಿಂದ ಹೋರಾಡಿ ಯುದ್ಧವನ್ನು ಗೆದ್ದರು.
تەفسیرە عەرەبیەکان:
ثُمَّ اَنْزَلَ اللّٰهُ سَكِیْنَتَهٗ عَلٰی رَسُوْلِهٖ وَعَلَی الْمُؤْمِنِیْنَ وَاَنْزَلَ جُنُوْدًا لَّمْ تَرَوْهَا ۚ— وَعَذَّبَ الَّذِیْنَ كَفَرُوْا ؕ— وَذٰلِكَ جَزَآءُ الْكٰفِرِیْنَ ۟
ನಂತರ ಅಲ್ಲಾಹು ಅವನ ಸಂದೇಶವಾಹಕರ ಮೇಲೆ ಮತ್ತು ಸತ್ಯವಿಶ್ವಾಸಿಗಳ ಮೇಲೆ ಅವನ ಕಡೆಯ ಶಾಂತಿಯನ್ನು ಇಳಿಸಿಕೊಟ್ಟನು. ನಿಮಗೆ ಕಾಣದಂತಹ ಸೈನ್ಯಗಳನ್ನು ಕಳುಹಿಸಿ ಸತ್ಯನಿಷೇಧಿಗಳನ್ನು ಶಿಕ್ಷಿಸಿದನು. ಅದು ಸತ್ಯನಿಷೇಧಿಗಳಿಗೆ ಪ್ರತಿಫಲವಾಗಿದೆ.
تەفسیرە عەرەبیەکان:
ثُمَّ یَتُوْبُ اللّٰهُ مِنْ بَعْدِ ذٰلِكَ عَلٰی مَنْ یَّشَآءُ ؕ— وَاللّٰهُ غَفُوْرٌ رَّحِیْمٌ ۟
ನಂತರ ಅದರ ಬಳಿಕವೂ ಅಲ್ಲಾಹು ಅವನು ಇಚ್ಛಿಸಿದವರ ಪಶ್ಚಾತ್ತಾಪವನ್ನು ಸ್ವೀಕರಿಸುವನು. ಅಲ್ಲಾಹು ಕ್ಷಮಿಸುವವನು ಮತ್ತು ದಯೆ ತೋರುವವನಾಗಿದ್ದಾನೆ.
تەفسیرە عەرەبیەکان:
یٰۤاَیُّهَا الَّذِیْنَ اٰمَنُوْۤا اِنَّمَا الْمُشْرِكُوْنَ نَجَسٌ فَلَا یَقْرَبُوا الْمَسْجِدَ الْحَرَامَ بَعْدَ عَامِهِمْ هٰذَا ۚ— وَاِنْ خِفْتُمْ عَیْلَةً فَسَوْفَ یُغْنِیْكُمُ اللّٰهُ مِنْ فَضْلِهٖۤ اِنْ شَآءَ ؕ— اِنَّ اللّٰهَ عَلِیْمٌ حَكِیْمٌ ۟
ಓ ಸತ್ಯವಿಶ್ವಾಸಿಗಳೇ! ನಿಶ್ಚಯವಾಗಿಯೂ ಬಹುದೇವವಿಶ್ವಾಸಿಗಳು ಅಶುದ್ಧರಾಗಿದ್ದಾರೆ.[1] ಆದ್ದರಿಂದ ಈ ವರ್ಷದ ಬಳಿಕ ಅವರು ಪವಿತ್ರ ಮಸೀದಿಯ ಸಮೀಪಕ್ಕೂ ಬರದಿರಲಿ. ನಿಮಗೆ ಬಡತನದ ಬಗ್ಗೆ ಆತಂಕವಿದ್ದರೆ, ಅಲ್ಲಾಹು ಇಚ್ಛಿಸಿದರೆ ಸದ್ಯವೇ ಅವನು ತನ್ನ ಔದಾರ್ಯದಿಂದ ನಿಮ್ಮನ್ನು ಧನಿಕರನ್ನಾಗಿ ಮಾಡುವನು.[2] ನಿಶ್ಚಯವಾಗಿಯೂ ಅಲ್ಲಾಹು ಸರ್ವಜ್ಞನು ಮತ್ತು ವಿವೇಕಪೂರ್ಣನಾಗಿದ್ದಾನೆ.
[1] ಅಶುದ್ಧರು ಎಂದರೆ ದೈಹಿಕವಾಗಿ ಅಶುದ್ಧರು ಎಂದಲ್ಲ. ಬದಲಿಗೆ, ಅವರ ನಂಬಿಕೆಗಳು ಮತ್ತು ಕರ್ಮಗಳು ಅಶುದ್ಧವಾಗಿವೆ ಎಂದರ್ಥ.
[2] ಬಹುದೇವವಿಶ್ವಾಸಿಗಳು ಹಜ್ಜ್ ನಿರ್ವಹಿಸಲು ಮಕ್ಕಾಗೆ ಬರದಿದ್ದರೆ ತಮ್ಮ ವ್ಯಾಪಾರಕ್ಕೆ ಕುಂದುಂಟಾಗಬಹುದೆಂದು ಕೆಲವು ಮುಸ್ಲಿಮರು ಆತಂಕಗೊಂಡಿದ್ದರು.
تەفسیرە عەرەبیەکان:
قَاتِلُوا الَّذِیْنَ لَا یُؤْمِنُوْنَ بِاللّٰهِ وَلَا بِالْیَوْمِ الْاٰخِرِ وَلَا یُحَرِّمُوْنَ مَا حَرَّمَ اللّٰهُ وَرَسُوْلُهٗ وَلَا یَدِیْنُوْنَ دِیْنَ الْحَقِّ مِنَ الَّذِیْنَ اُوْتُوا الْكِتٰبَ حَتّٰی یُعْطُوا الْجِزْیَةَ عَنْ یَّدٍ وَّهُمْ صٰغِرُوْنَ ۟۠
ಗ್ರಂಥ ನೀಡಲಾದವರಲ್ಲಿ ಯಾರು ಅಲ್ಲಾಹನಲ್ಲಿ ಮತ್ತು ಅಂತ್ಯದಿನದಲ್ಲಿ ವಿಶ್ವಾಸವಿಡುವುದಿಲ್ಲವೋ, ಅಲ್ಲಾಹು ಮತ್ತು ಅವನ ಸಂದೇಶವಾಹಕರು ನಿಷೇಧಿಸಿದ್ದನ್ನು ನಿಷಿದ್ಧವೆಂದು ಪರಿಗಣಿಸುವುದಿಲ್ಲವೋ ಮತ್ತು ಸತ್ಯಧರ್ಮವನ್ನು ತಮ್ಮ ಧರ್ಮವಾಗಿ ಸ್ವೀಕರಿಸುವುದಿಲ್ಲವೋ ಅವರ ವಿರುದ್ಧ ಯುದ್ಧ ಮಾಡಿರಿ—ಅವರು ದೈನ್ಯತೆಯಿಂದ ಜಿಝ್ಯ ನೀಡುವ ತನಕ.
تەفسیرە عەرەبیەکان:
وَقَالَتِ الْیَهُوْدُ عُزَیْرُ ١بْنُ اللّٰهِ وَقَالَتِ النَّصٰرَی الْمَسِیْحُ ابْنُ اللّٰهِ ؕ— ذٰلِكَ قَوْلُهُمْ بِاَفْوَاهِهِمْ ۚ— یُضَاهِـُٔوْنَ قَوْلَ الَّذِیْنَ كَفَرُوْا مِنْ قَبْلُ ؕ— قَاتَلَهُمُ اللّٰهُ ۚ— اَنّٰی یُؤْفَكُوْنَ ۟
ಉಝೈರ್ (ಎಜ್ರಾ) ಅಲ್ಲಾಹನ ಮಗನೆಂದು ಯಹೂದಿಗಳು ಹೇಳಿದರು. ಮಸೀಹ್ (ಯೇಸು) ಅಲ್ಲಾಹನ ಮಗನೆಂದು ಕ್ರೈಸ್ತರು ಹೇಳಿದರು. ಇವು ಅವರು ಅವರ ಬಾಯಿಂದ ಹೇಳುವ ಮಾತುಗಳಾಗಿವೆ. ಅವರಿಗಿಂತ ಮೊದಲು ಸತ್ಯವನ್ನು ನಿಷೇಧಿಸಿದವರ ಮಾತುಗಳನ್ನು ಅವರು ಅನುಕರಿಸುತ್ತಿದ್ದಾರೆ. ಅಲ್ಲಾಹು ಅವರನ್ನು ನಾಶ ಮಾಡಲಿ. ಅವರನ್ನು ಹೇಗೆ ದಾರಿತಪ್ಪಿಸಲಾಗುತ್ತಿದೆಯೆಂದು ನೋಡಿ.
تەفسیرە عەرەبیەکان:
اِتَّخَذُوْۤا اَحْبَارَهُمْ وَرُهْبَانَهُمْ اَرْبَابًا مِّنْ دُوْنِ اللّٰهِ وَالْمَسِیْحَ ابْنَ مَرْیَمَ ۚ— وَمَاۤ اُمِرُوْۤا اِلَّا لِیَعْبُدُوْۤا اِلٰهًا وَّاحِدًا ۚ— لَاۤ اِلٰهَ اِلَّا هُوَ ؕ— سُبْحٰنَهٗ عَمَّا یُشْرِكُوْنَ ۟
ಅವರು ಅಲ್ಲಾಹನನ್ನು ಬಿಟ್ಟು ತಮ್ಮ ವಿದ್ವಾಂಸರನ್ನೂ ಮತ್ತು ಸಂತರನ್ನು, ಹಾಗೂ ಮರ್ಯಮರ ಮಗ ಮಸೀಹ ಈಸಾರನ್ನು ಪರಿಪಾಲಕರನ್ನಾಗಿ (ದೇವರುಗಳನ್ನಾಗಿ) ಸ್ವೀಕರಿಸಿದರು. ಏಕೈಕ ದೇವನನ್ನು ಮಾತ್ರ ಆರಾಧಿಸಬೇಕೆಂದು ಅವರಿಗೆ ಆದೇಶಿಸಲಾಗಿತ್ತು. ಅವನ ಹೊರತು ಆರಾಧನೆಗೆ ಅರ್ಹರಾದ ಅನ್ಯ ದೇವರಿಲ್ಲ. ಅವರು ಮಾಡುವ ಸಹಭಾಗಿತ್ವ (ಶಿರ್ಕ್) ದಿಂದ ಅವನು ಎಷ್ಟೋ ಪರಿಶುದ್ಧನಾಗಿದ್ದಾನೆ.
تەفسیرە عەرەبیەکان:
یُرِیْدُوْنَ اَنْ یُّطْفِـُٔوْا نُوْرَ اللّٰهِ بِاَفْوَاهِهِمْ وَیَاْبَی اللّٰهُ اِلَّاۤ اَنْ یُّتِمَّ نُوْرَهٗ وَلَوْ كَرِهَ الْكٰفِرُوْنَ ۟
ಅವರು ತಮ್ಮ ಬಾಯಿಗಳಿಂದ ಅಲ್ಲಾಹನ ಬೆಳಕನ್ನು ನಂದಿಸಲು ಬಯಸುತ್ತಾರೆ. ಆದರೆ ಅಲ್ಲಾಹು ತನ್ನ ಬೆಳಕನ್ನು ಪೂರ್ಣಗೊಳಿಸದೆ ಬಿಡಲು ಅಸಮ್ಮತಿ ಸೂಚಿಸಿದ್ದಾನೆ. ಸತ್ಯನಿಷೇಧಿಗಳು ಎಷ್ಟು ದ್ವೇಷಿಸಿದರೂ ಸಹ.
تەفسیرە عەرەبیەکان:
هُوَ الَّذِیْۤ اَرْسَلَ رَسُوْلَهٗ بِالْهُدٰی وَدِیْنِ الْحَقِّ لِیُظْهِرَهٗ عَلَی الدِّیْنِ كُلِّهٖ ۙ— وَلَوْ كَرِهَ الْمُشْرِكُوْنَ ۟
ಸನ್ಮಾರ್ಗ ಮತ್ತು ಸತ್ಯಧರ್ಮದೊಂದಿಗೆ ತನ್ನ ಸಂದೇಶವಾಹಕರನ್ನು ಕಳುಹಿಸಿದ್ದು ಅವನೇ. ಎಲ್ಲಾ ಧರ್ಮಗಳ ಮೇಲೆ ಅದು ಜಯಗಳಿಸುವಂತೆ ಮಾಡುವುದಕ್ಕಾಗಿ. ಬಹುದೇವವಿಶ್ವಾಸಿಗಳು ಎಷ್ಟು ದ್ವೇಷಿಸಿದರೂ ಸಹ.
تەفسیرە عەرەبیەکان:
یٰۤاَیُّهَا الَّذِیْنَ اٰمَنُوْۤا اِنَّ كَثِیْرًا مِّنَ الْاَحْبَارِ وَالرُّهْبَانِ لَیَاْكُلُوْنَ اَمْوَالَ النَّاسِ بِالْبَاطِلِ وَیَصُدُّوْنَ عَنْ سَبِیْلِ اللّٰهِ ؕ— وَالَّذِیْنَ یَكْنِزُوْنَ الذَّهَبَ وَالْفِضَّةَ وَلَا یُنْفِقُوْنَهَا فِیْ سَبِیْلِ اللّٰهِ ۙ— فَبَشِّرْهُمْ بِعَذَابٍ اَلِیْمٍ ۟ۙ
ಓ ಸತ್ಯವಿಶ್ವಾಸಿಗಳೇ! ನಿಶ್ಚಯವಾಗಿಯೂ ವಿದ್ವಾಂಸರು ಮತ್ತು ಸಂತರಲ್ಲಿ ಹೆಚ್ಚಿನವರು ಅನ್ಯಾಯವಾಗಿ ಜನರ ಧನವನ್ನು ತಿನ್ನುತ್ತಾರೆ ಮತ್ತು ಅಲ್ಲಾಹನ ಮಾರ್ಗದಿಂದ ಜನರನ್ನು ತಡೆಯುತ್ತಾರೆ. ಯಾರು ಚಿನ್ನ ಮತ್ತು ಬೆಳ್ಳಿಯನ್ನು ದಾಸ್ತಾನು ಮಾಡುತ್ತಾರೋ ಮತ್ತು ಅದನ್ನು ಅಲ್ಲಾಹನ ಮಾರ್ಗದಲ್ಲಿ ಖರ್ಚು ಮಾಡುವುದಿಲ್ಲವೋ ಅವರಿಗೆ ಯಾತನಾಮಯ ಶಿಕ್ಷೆಯ ಬಗ್ಗೆ ಸುವಾರ್ತೆಯನ್ನು ನೀಡಿರಿ.
تەفسیرە عەرەبیەکان:
یَّوْمَ یُحْمٰی عَلَیْهَا فِیْ نَارِ جَهَنَّمَ فَتُكْوٰی بِهَا جِبَاهُهُمْ وَجُنُوْبُهُمْ وَظُهُوْرُهُمْ ؕ— هٰذَا مَا كَنَزْتُمْ لِاَنْفُسِكُمْ فَذُوْقُوْا مَا كُنْتُمْ تَكْنِزُوْنَ ۟
ನರಕಾಗ್ನಿಯಲ್ಲಿ ಅವುಗಳನ್ನು ಕಾಯಿಸಿ, ನಂತರ ಅದರಿಂದ ಅವರ ಹಣೆ, ಪಾರ್ಶ್ವ ಮತ್ತು ಬೆನ್ನುಗಳಿಗೆ ಬರೆ ಹಾಕುವ ದಿನ. (ಅವರೊಡನೆ ಹೇಳಲಾಗುವುದು): “ಇದು ನೀವು ನಿಮಗಾಗಿ ದಾಸ್ತಾನು ಮಾಡಿಟ್ಟ ಆಸ್ತಿಯಾಗಿದೆ. ನೀವು ದಾಸ್ತಾನು ಮಾಡಿದ ಆಸ್ತಿಯ ರುಚಿಯನ್ನು ನೋಡಿರಿ.”
تەفسیرە عەرەبیەکان:
اِنَّ عِدَّةَ الشُّهُوْرِ عِنْدَ اللّٰهِ اثْنَا عَشَرَ شَهْرًا فِیْ كِتٰبِ اللّٰهِ یَوْمَ خَلَقَ السَّمٰوٰتِ وَالْاَرْضَ مِنْهَاۤ اَرْبَعَةٌ حُرُمٌ ؕ— ذٰلِكَ الدِّیْنُ الْقَیِّمُ ۙ۬— فَلَا تَظْلِمُوْا فِیْهِنَّ اَنْفُسَكُمْ ۫— وَقَاتِلُوا الْمُشْرِكِیْنَ كَآفَّةً كَمَا یُقَاتِلُوْنَكُمْ كَآفَّةً ؕ— وَاعْلَمُوْۤا اَنَّ اللّٰهَ مَعَ الْمُتَّقِیْنَ ۟
ನಿಶ್ಚಯವಾಗಿಯೂ ಅಲ್ಲಾಹನ ಬಳಿ ತಿಂಗಳುಗಳ ಸಂಖ್ಯೆ ಹನ್ನೆರಡು. ಭೂಮ್ಯಾಕಾಶಗಳನ್ನು ಸೃಷ್ಟಿಸಿದ ದಿನದಂದಲೇ ಇದು ಅಲ್ಲಾಹನ ಗ್ರಂಥದಲ್ಲಿದೆ. ಅವುಗಳಲ್ಲಿ ನಾಲ್ಕು ಪವಿತ್ರ ತಿಂಗಳುಗಳು.[1] ಅದೇ ನೇರವಾದ ಧರ್ಮ. ಆದ್ದರಿಂದ ಆ ತಿಂಗಳುಗಳಲ್ಲಿ ನೀವು ನಿಮ್ಮ ಮೇಲೆಯೇ ಅಕ್ರಮವೆಸಗಬೇಡಿ. ಬಹುದೇವವಿಶ್ವಾಸಿಗಳು ಒಟ್ಟಾಗಿ ನಿಮ್ಮ ವಿರುದ್ಧ ಯುದ್ಧ ಮಾಡುವಂತೆ ನೀವೂ ಕೂಡ ಒಟ್ಟಾಗಿ ಅವರ ವಿರುದ್ಧ ಯುದ್ಧ ಮಾಡಿರಿ. ತಿಳಿಯಿರಿ! ನಿಶ್ಚಯವಾಗಿಯೂ ಅಲ್ಲಾಹು ದೇವಭಯವುಳ್ಳವರೊಡನೆ ಇದ್ದಾನೆ.
[1] ಅಂದರೆ ಮುಹರ್‍ರಂ, ರಜಬ್, ದುಲ್‌ಕಅದ ಮತ್ತು ದುಲ್‌ಹಿಜ್ಜ ತಿಂಗಳುಗಳು.
تەفسیرە عەرەبیەکان:
اِنَّمَا النَّسِیْٓءُ زِیَادَةٌ فِی الْكُفْرِ یُضَلُّ بِهِ الَّذِیْنَ كَفَرُوْا یُحِلُّوْنَهٗ عَامًا وَّیُحَرِّمُوْنَهٗ عَامًا لِّیُوَاطِـُٔوْا عِدَّةَ مَا حَرَّمَ اللّٰهُ فَیُحِلُّوْا مَا حَرَّمَ اللّٰهُ ؕ— زُیِّنَ لَهُمْ سُوْٓءُ اَعْمَالِهِمْ ؕ— وَاللّٰهُ لَا یَهْدِی الْقَوْمَ الْكٰفِرِیْنَ ۟۠
ನಿಶ್ಚಯವಾಗಿಯೂ ನಸೀ (ಪವಿತ್ರ ತಿಂಗಳುಗಳನ್ನು ಹಿಂದೆ-ಮುಂದೆ ಮಾಡುವುದು) ಸತ್ಯನಿಷೇಧದಲ್ಲಿರುವ ಹೆಚ್ಚಳವಾಗಿದೆ. ಇದರಿಂದ ಸತ್ಯನಿಷೇಧಿಗಳನ್ನು ಇನ್ನೂ ಹೆಚ್ಚು ದಾರಿತಪ್ಪಿಸಲಾಗುತ್ತಿದೆ. ಒಂದು ವರ್ಷ ಅವರು ಅದನ್ನು (ಪವಿತ್ರ ತಿಂಗಳನ್ನು) ಪವಿತ್ರವಲ್ಲ ಎನ್ನುತ್ತಾರೆ ಮತ್ತು ಇನ್ನೊಂದು ವರ್ಷ ಪವಿತ್ರ ಎನ್ನುತ್ತಾರೆ. ಹೀಗೆ ಅವರು ಅಲ್ಲಾಹು ಪವಿತ್ರಗೊಳಿಸಿದ ತಿಂಗಳುಗಳ ಸಂಖ್ಯೆಯನ್ನು ಸರಿಹೊಂದಿಸಿ ಅಲ್ಲಾಹು ನಿಷೇಧಿಸಿದ್ದನ್ನು ಅನುಮತಿಸುತ್ತಾರೆ.[1] ಅವರ ದುಷ್ಕರ್ಮಗಳನ್ನು ಅವರಿಗೆ ಅಲಂಕರಿಸಿಕೊಡಲಾಗಿದೆ. ಸತ್ಯನಿಷೇಧಿಗಳಾದ ಜನರಿಗೆ ಅಲ್ಲಾಹು ಸನ್ಮಾರ್ಗವನ್ನು ತೋರಿಸುವುದಿಲ್ಲ.
[1] ಇಸ್ಲಾಮೀ ಪೂರ್ವಕಾಲದಲ್ಲಿ ಅರಬ್ಬರು ವರ್ಷದಲ್ಲಿ ನಾಲ್ಕು ತಿಂಗಳುಗಳನ್ನು ಪವಿತ್ರವೆಂದು ಪರಿಗಣಿಸುತ್ತಿದ್ದರು. ಆ ತಿಂಗಳುಗಳಲ್ಲಿ ಅವರು ಯುದ್ಧ ಮಾಡುತ್ತಿರಲಿಲ್ಲ. ಆದರೆ ಪ್ರತಿ ವರ್ಷವೂ ಅವರು ಅದೇ ತಿಂಗಳುಗಳನ್ನು ಪವಿತ್ರವೆಂದು ಪರಿಗಣಿಸುತ್ತಿರಲಿಲ್ಲ. ಬದಲಿಗೆ, ತಮಗೆ ಹೊಂದಿಕೆಯಾಗುವಂತೆ ಅವುಗಳನ್ನು ಹಿಂದೆ ಮುಂದೆ ಮಾಡುತ್ತಿದ್ದರು. ಒಂದು ವರ್ಷ ಅವರು ಮುಹರ್‍ರಂ ತಿಂಗಳನ್ನು ಪವಿತ್ರವೆಂದು ಪರಿಗಣಿಸಿದರೆ ಇನ್ನೊಂದು ವರ್ಷ ಅದು ಅವರಿಗೆ ಹೊಂದಿಕೆಯಾಗದಿದ್ದರೆ ಅದನ್ನು ಪವಿತ್ರವೆಂದು ಪರಿಗಣಿಸುತ್ತಿರಲಿಲ್ಲ.
تەفسیرە عەرەبیەکان:
یٰۤاَیُّهَا الَّذِیْنَ اٰمَنُوْا مَا لَكُمْ اِذَا قِیْلَ لَكُمُ انْفِرُوْا فِیْ سَبِیْلِ اللّٰهِ اثَّاقَلْتُمْ اِلَی الْاَرْضِ ؕ— اَرَضِیْتُمْ بِالْحَیٰوةِ الدُّنْیَا مِنَ الْاٰخِرَةِ ۚ— فَمَا مَتَاعُ الْحَیٰوةِ الدُّنْیَا فِی الْاٰخِرَةِ اِلَّا قَلِیْلٌ ۟
ಓ ಸತ್ಯವಿಶ್ವಾಸಿಗಳೇ! ನಿಮಗೇನಾಗಿದೆ? ಅಲ್ಲಾಹನ ಮಾರ್ಗದಲ್ಲಿ ಯುದ್ಧಕ್ಕೆ ಹೊರಡಿ ಎಂದು ನಿಮ್ಮೊಡನೆ ಹೇಳಲಾದಾಗ ನೀವು ಭೂಮಿಗೆ ಅಂಟಿಕೊಳ್ಳುತ್ತೀರಿ! ನೀವು ಪರಲೋಕದ ಬದಲು ಇಹಲೋಕವನ್ನೇ ನೆಚ್ಚಿಕೊಂಡಿದ್ದೀರಾ? ಆದರೆ ಪರಲೋಕಕ್ಕೆ ಹೋಲಿಸಿದರೆ ಇಹಲೋಕದ ಆನಂದಗಳು ಕ್ಷಣಿಕವಾಗಿವೆ.
تەفسیرە عەرەبیەکان:
اِلَّا تَنْفِرُوْا یُعَذِّبْكُمْ عَذَابًا اَلِیْمًا ۙ۬— وَّیَسْتَبْدِلْ قَوْمًا غَیْرَكُمْ وَلَا تَضُرُّوْهُ شَیْـًٔا ؕ— وَاللّٰهُ عَلٰی كُلِّ شَیْءٍ قَدِیْرٌ ۟
ನೀವು ಯುದ್ಧಕ್ಕೆ ಹೊರಡದಿದ್ದರೆ ಅಲ್ಲಾಹು ನಿಮಗೆ ಯಾತನಾಮಯ ಶಿಕ್ಷೆಯನ್ನು ನೀಡುವನು ಮತ್ತು ನಿಮ್ಮ ಬದಲಿಗೆ ನೀವಲ್ಲದ ಬೇರೆ ಜನತೆಯನ್ನು ತರುವನು. ಅಲ್ಲಾಹನಿಗೆ ಯಾವುದೇ ತೊಂದರೆ ಮಾಡಲು ನಿಮ್ಮಿಂದ ಸಾಧ್ಯವಿಲ್ಲ. ಅಲ್ಲಾಹು ಎಲ್ಲಾ ವಿಷಯಗಳಲ್ಲೂ ಸಾಮರ್ಥ್ಯವುಳ್ಳವನಾಗಿದ್ದಾನೆ.
تەفسیرە عەرەبیەکان:
اِلَّا تَنْصُرُوْهُ فَقَدْ نَصَرَهُ اللّٰهُ اِذْ اَخْرَجَهُ الَّذِیْنَ كَفَرُوْا ثَانِیَ اثْنَیْنِ اِذْ هُمَا فِی الْغَارِ اِذْ یَقُوْلُ لِصَاحِبِهٖ لَا تَحْزَنْ اِنَّ اللّٰهَ مَعَنَا ۚ— فَاَنْزَلَ اللّٰهُ سَكِیْنَتَهٗ عَلَیْهِ وَاَیَّدَهٗ بِجُنُوْدٍ لَّمْ تَرَوْهَا وَجَعَلَ كَلِمَةَ الَّذِیْنَ كَفَرُوا السُّفْلٰی ؕ— وَكَلِمَةُ اللّٰهِ هِیَ الْعُلْیَا ؕ— وَاللّٰهُ عَزِیْزٌ حَكِیْمٌ ۟
ನೀವು ಅವರಿಗೆ (ಪ್ರವಾದಿಗೆ) ಸಹಾಯ ಮಾಡುವುದಿಲ್ಲವೆಂದಾದರೆ, ಅಲ್ಲಾಹು ಅವರಿಗೆ ಖಂಡಿತ ಸಹಾಯ ಮಾಡಿದ್ದಾನೆ. ಅವರು ಇಬ್ಬರಲ್ಲಿ ಒಬ್ಬರಾಗಿದ್ದು, ಸತ್ಯನಿಷೇಧಿಗಳು ಅವರನ್ನು (ಮಕ್ಕಾದಿಂದ) ಹೊರದಬ್ಬಿ, ಅವರಿಬ್ಬರು[1] ಗುಹೆಯಲ್ಲಿ ಆಶ್ರಯ ಪಡೆದಾಗ ಮತ್ತು ಅವರು ತಮ್ಮ ಸಹಚರನೊಡನೆ, “ಸಂಕಟಪಡಬೇಡ, ನಿಶ್ಚಯವಾಗಿಯೂ ಅಲ್ಲಾಹು ನಮ್ಮ ಜೊತೆಗಿದ್ದಾನೆ” ಎಂದು ಹೇಳಿದ ಸಂದರ್ಭ. ಆಗ ಅಲ್ಲಾಹು ಅವರ ಮೇಲೆ ತನ್ನ ಕಡೆಯ ಶಾಂತಿಯನ್ನು ಇಳಿಸಿದನು, ನೀವು ನೋಡದೇ ಇರುವಂತಹ ಸೈನ್ಯಗಳ ಮೂಲಕ ಅವರಿಗೆ ಶಕ್ತಿಯನ್ನು ನೀಡಿದನು ಮತ್ತು ಸತ್ಯನಿಷೇಧಿಗಳ ವಚನವನ್ನು ಕೆಳಮಟ್ಟಕ್ಕಿಳಿಸಿದನು. ಅಲ್ಲಾಹನ ವಚನವು ಅತ್ಯುನ್ನತವಾಗಿದೆ. ಅಲ್ಲಾಹು ಪ್ರಬಲನು ಮತ್ತು ವಿವೇಕಪೂರ್ಣನಾಗಿದ್ದಾನೆ.
[1] ಅಂದರೆ ಪ್ರವಾದಿ ಮುಹಮ್ಮದ್ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಮತ್ತು ಅವರ ಆಪ್ತ ಸಂಗಡಿಗರಾದ ಅಬೂಬಕರ್ (ಅವರ ಮೇಲೆ ಅಲ್ಲಾಹನ ಸಂತೃಪ್ತಿಯಿರಲಿ). ಈ ಘಟನೆ ನಡೆದದ್ದು ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಮತ್ತು ಅಬೂಬಕರ್ (ಅವರ ಮೇಲೆ ಅಲ್ಲಾಹನ ಸಂತೃಪ್ತಿಯಿರಲಿ) ಮಕ್ಕಾದಿಂದ ಪಲಾಯನ ಮಾಡಿ ಹತ್ತಿರದ ಸೌರ್ ಗುಹೆಯಲ್ಲಿ ಆಶ್ರಯಪಡೆದಾಗ.
تەفسیرە عەرەبیەکان:
اِنْفِرُوْا خِفَافًا وَّثِقَالًا وَّجَاهِدُوْا بِاَمْوَالِكُمْ وَاَنْفُسِكُمْ فِیْ سَبِیْلِ اللّٰهِ ؕ— ذٰلِكُمْ خَیْرٌ لَّكُمْ اِنْ كُنْتُمْ تَعْلَمُوْنَ ۟
ನೀವು ಹಗುರವಾಗಿರುವಾಗಲೂ ಭಾರವಾಗಿರುವಾಗಲೂ ಯುದ್ಧಕ್ಕೆ ಹೊರಡಿರಿ.[1] ಅಲ್ಲಾಹನ ಮಾರ್ಗದಲ್ಲಿ ನಿಮ್ಮ ತನು-ಧನಗಳಿಂದ ಯುದ್ಧ ಮಾಡಿರಿ. ನೀವು ತಿಳಿದವರಾಗಿದ್ದರೆ ಅದೇ ನಿಮಗೆ ಶ್ರೇಷ್ಠವಾಗಿದೆ.
[1] ಅಂದರೆ ನೀವು ಯುವಕರಾಗಿದ್ದರೂ, ವೃದ್ಧರಾಗಿದ್ದರೂ, ಸಂತೋಷದಲ್ಲಿದ್ದರೂ, ಕಷ್ಟದಲ್ಲಿದ್ದರೂ, ವಾಹನವಿದ್ದರೂ, ಇಲ್ಲದಿದ್ದರೂ ಎಲ್ಲಾ ಸಂದರ್ಭಗಳಲ್ಲೂ ಯುದ್ಧಕ್ಕೆ ಹೊರಡಿರಿ.
تەفسیرە عەرەبیەکان:
لَوْ كَانَ عَرَضًا قَرِیْبًا وَّسَفَرًا قَاصِدًا لَّاتَّبَعُوْكَ وَلٰكِنْ بَعُدَتْ عَلَیْهِمُ الشُّقَّةُ ؕ— وَسَیَحْلِفُوْنَ بِاللّٰهِ لَوِ اسْتَطَعْنَا لَخَرَجْنَا مَعَكُمْ ۚ— یُهْلِكُوْنَ اَنْفُسَهُمْ ۚ— وَاللّٰهُ یَعْلَمُ اِنَّهُمْ لَكٰذِبُوْنَ ۟۠
ಅದು ಸಮೀಪದ (ಸುಲಭದ) ಲಾಭವಾಗಿದ್ದರೆ ಮತ್ತು ನಿರಾಯಾಸ ಪ್ರಯಾಣವಾಗಿದ್ದರೆ ಅವರು (ಕಪಟವಿಶ್ವಾಸಿಗಳು) ನಿಮ್ಮನ್ನು ಹಿಂಬಾಲಿಸುತ್ತಿದ್ದರು. ಆದರೆ ಅವರಿಗೆ ಅದು ವಿದೂರ ಮತ್ತು ಆಯಾಸಕರವಾಗಿದೆ. “ನಮಗೆ ಸಾಮರ್ಥ್ಯವಿರುತ್ತಿದ್ದರೆ ನಾವು ನಿಮ್ಮೊಂದಿಗೆ ಹೊರಡುತ್ತಿದ್ದೆವು” ಎಂದು ಅವರು ಅಲ್ಲಾಹನ ಮೇಲೆ ಆಣೆ ಮಾಡಿ ಹೇಳುತ್ತಾರೆ. ಅವರು ಅವರನ್ನೇ ನಾಶ ಮಾಡುತ್ತಿದ್ದಾರೆ. ನಿಶ್ಚಯವಾಗಿಯೂ ಅವರು ಸುಳ್ಳು ಹೇಳುತ್ತಿದ್ದಾರೆಂದು ಅಲ್ಲಾಹನಿಗೆ ತಿಳಿದಿದೆ.[1]
[1] ಯುದ್ಧಕ್ಕೆ ಹೋಗದಿರಲು ವಿನಾಯಿತಿಯಿರುವವರ ಹೊರತು ಉಳಿದವರೆಲ್ಲರೂ ತಬೂಕ್ ಯುದ್ಧಕ್ಕೆ ಹೊರಡಬೇಕೆಂದು ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಆದೇಶ ಹೊರಡಿಸಿದಾಗ, ಕಪಟವಿಶ್ವಾಸಿಗಳು ಸುಳ್ಳು ನೆಪಗಳನ್ನು ಹೇಳಿ ಯುದ್ಧದಿಂದ ತಪ್ಪಿಸಿಕೊಂಡರು. ಇಲ್ಲಿಂದ ಮುಂದಕ್ಕೆ ಆ ಕಪಟವಿಶ್ವಾಸಿಗಳ ಬಗ್ಗೆ ವಿವರಿಸಲಾಗಿದೆ.
تەفسیرە عەرەبیەکان:
عَفَا اللّٰهُ عَنْكَ ۚ— لِمَ اَذِنْتَ لَهُمْ حَتّٰی یَتَبَیَّنَ لَكَ الَّذِیْنَ صَدَقُوْا وَتَعْلَمَ الْكٰذِبِیْنَ ۟
(ಪ್ರವಾದಿಯವರೇ) ಅಲ್ಲಾಹು ನಿಮ್ಮನ್ನು ಕ್ಷಮಿಸಲಿ. ನೀವೇಕೆ ಅವರಿಗೆ ಅನುಮತಿ ನೀಡಿದಿರಿ? ಸತ್ಯ ಹೇಳುವವರು ಯಾರು ಮತ್ತು ಸುಳ್ಳು ಹೇಳುವವರು ಯಾರೆಂದು ಸ್ಪಷ್ಟವಾಗಿ ತಿಳಿಯುವವರೆಗೆ (ನೀವು ಅನುಮತಿ ನೀಡಬಾರದಿತ್ತು).
تەفسیرە عەرەبیەکان:
لَا یَسْتَاْذِنُكَ الَّذِیْنَ یُؤْمِنُوْنَ بِاللّٰهِ وَالْیَوْمِ الْاٰخِرِ اَنْ یُّجَاهِدُوْا بِاَمْوَالِهِمْ وَاَنْفُسِهِمْ ؕ— وَاللّٰهُ عَلِیْمٌۢ بِالْمُتَّقِیْنَ ۟
ಅಲ್ಲಾಹನಲ್ಲಿ ಮತ್ತು ಅಂತ್ಯದಿನದಲ್ಲಿ ವಿಶ್ವಾಸವಿಡುವವರು ತಮ್ಮ ತನು-ಧನಗಳಿಂದ (ಅಲ್ಲಾಹನ ಮಾರ್ಗದಲ್ಲಿ) ಯುದ್ಧ ಮಾಡದಿರಲು ನಿಮ್ಮೊಡನೆ ಅನುಮತಿ ಕೇಳುವುದಿಲ್ಲ. ದೇವಭಯವುಳ್ಳವರ ಬಗ್ಗೆ ಅಲ್ಲಾಹನಿಗೆ ಬಹಳ ಚೆನ್ನಾಗಿ ತಿಳಿದಿದೆ.
تەفسیرە عەرەبیەکان:
اِنَّمَا یَسْتَاْذِنُكَ الَّذِیْنَ لَا یُؤْمِنُوْنَ بِاللّٰهِ وَالْیَوْمِ الْاٰخِرِ وَارْتَابَتْ قُلُوْبُهُمْ فَهُمْ فِیْ رَیْبِهِمْ یَتَرَدَّدُوْنَ ۟
ಅಲ್ಲಾಹನಲ್ಲಿ ಮತ್ತು ಅಂತ್ಯದಿನದಲ್ಲಿ ವಿಶ್ವಾಸವಿಡದವರು ಹಾಗೂ ಹೃದಯದಲ್ಲಿ ಸಂಶಯವಿರುವವರು ಮಾತ್ರ ನಿಮ್ಮೊಡನೆ ಅನುಮತಿ ಕೇಳುತ್ತಾರೆ. ಅವರು ಅವರ ಸಂಶಯದಲ್ಲಿಯೇ ಅಲೆದಾಡುತ್ತಿದ್ದಾರೆ.
تەفسیرە عەرەبیەکان:
وَلَوْ اَرَادُوا الْخُرُوْجَ لَاَعَدُّوْا لَهٗ عُدَّةً وَّلٰكِنْ كَرِهَ اللّٰهُ انْۢبِعَاثَهُمْ فَثَبَّطَهُمْ وَقِیْلَ اقْعُدُوْا مَعَ الْقٰعِدِیْنَ ۟
ಅವರಿಗೆ (ಯುದ್ಧಕ್ಕೆ) ಹೊರಡುವ ಇಚ್ಛೆಯಿದ್ದರೆ ಅವರು ಅದಕ್ಕೆ ಬೇಕಾದ ತಯಾರಿಯನ್ನು ಮಾಡುತ್ತಿದ್ದರು. ಆದರೆ ಅವರು ಅದಕ್ಕಾಗಿ ಎದ್ದೇಳುವುದನ್ನು ಅಲ್ಲಾಹು ಇಷ್ಟಪಡಲಿಲ್ಲ. ಆದ್ದರಿಂದ ಅವನು ಅವರನ್ನು ತಡೆದನು. ಕುಳಿತುಕೊಳ್ಳುವವರೊಡನೆ ನೀವೂ ಕುಳಿತುಕೊಳ್ಳಿರಿ ಎಂದು ಅವರೊಡನೆ ಹೇಳಲಾಯಿತು.
تەفسیرە عەرەبیەکان:
لَوْ خَرَجُوْا فِیْكُمْ مَّا زَادُوْكُمْ اِلَّا خَبَالًا وَّلَاۡاَوْضَعُوْا خِلٰلَكُمْ یَبْغُوْنَكُمُ الْفِتْنَةَ ۚ— وَفِیْكُمْ سَمّٰعُوْنَ لَهُمْ ؕ— وَاللّٰهُ عَلِیْمٌۢ بِالظّٰلِمِیْنَ ۟
ಅವರು ನಿಮ್ಮ ಜೊತೆಗೆ ಹೊರಡುತ್ತಿದ್ದರೆ ನಿಮಗೆ ಗೊಂದಲವಲ್ಲದೆ ಇನ್ನೇನೂ ಹೆಚ್ಚುವಂತೆ ಮಾಡುತ್ತಿರಲಿಲ್ಲ. ಅವರು ನಿಮ್ಮ ನಡುವೆ ಒಡಕು ಮೂಡಿಸಲು ಸಕ್ರಿಯವಾಗಿ ಓಡಾಡುತ್ತಿದ್ದರು. ಅವರ ಮಾತುಗಳನ್ನು ಕಿವಿಗೊಟ್ಟು ಕೇಳುವವರೂ ನಿಮ್ಮಲ್ಲಿದ್ದಾರೆ. ಅಕ್ರಮಿಗಳ ಬಗ್ಗೆ ಅಲ್ಲಾಹು ಬಹಳ ಚೆನ್ನಾಗಿ ತಿಳಿದಿದ್ದಾನೆ.
تەفسیرە عەرەبیەکان:
لَقَدِ ابْتَغَوُا الْفِتْنَةَ مِنْ قَبْلُ وَقَلَّبُوْا لَكَ الْاُمُوْرَ حَتّٰی جَآءَ الْحَقُّ وَظَهَرَ اَمْرُ اللّٰهِ وَهُمْ كٰرِهُوْنَ ۟
ಅವರು ಇದಕ್ಕೆ ಮೊದಲು ಕೂಡ ಒಡಕು ಮೂಡಿಸಲು ಹವಣಿಸಿದ್ದರು ಮತ್ತು ನಿಮ್ಮ ಮುಂದೆ ಕಾರ್ಯಗಳನ್ನು ತಲೆಕೆಳಗೆ ಮಾಡಿದ್ದರು. ಎಲ್ಲಿಯವರೆಗೆಂದರೆ, ಸತ್ಯವು ಬಂದು ಅಲ್ಲಾಹನ ಆಜ್ಞೆಯು ಪ್ರಕಟವಾಗುವ ತನಕ. ಅದು ಅವರಿಗೆ ಎಷ್ಟು ಅಪ್ರಿಯವಾಗಿದ್ದರೂ ಸಹ.
تەفسیرە عەرەبیەکان:
وَمِنْهُمْ مَّنْ یَّقُوْلُ ائْذَنْ لِّیْ وَلَا تَفْتِنِّیْ ؕ— اَلَا فِی الْفِتْنَةِ سَقَطُوْا ؕ— وَاِنَّ جَهَنَّمَ لَمُحِیْطَةٌ بِالْكٰفِرِیْنَ ۟
ಅವರಲ್ಲಿ, “ನನಗೆ (ಮನೆಯಲ್ಲಿರಲು) ಅನುಮತಿ ನೀಡಿರಿ. ನನ್ನನ್ನು ಪರೀಕ್ಷೆಗೆ ಸಿಲುಕಿಸಬೇಡಿ” ಎಂದು ಹೇಳುವವರಿದ್ದಾರೆ. ತಿಳಿಯಿರಿ! ಅವರು ಪರೀಕ್ಷೆಯಲ್ಲೇ ಬಿದ್ದಿದ್ದಾರೆ. ನಿಶ್ಚಯವಾಗಿಯೂ ನರಕಾಗ್ನಿಯು ಸತ್ಯನಿಷೇಧಿಗಳನ್ನು ಆವರಿಸಿಕೊಂಡಿದೆ.
تەفسیرە عەرەبیەکان:
اِنْ تُصِبْكَ حَسَنَةٌ تَسُؤْهُمْ ۚ— وَاِنْ تُصِبْكَ مُصِیْبَةٌ یَّقُوْلُوْا قَدْ اَخَذْنَاۤ اَمْرَنَا مِنْ قَبْلُ وَیَتَوَلَّوْا وَّهُمْ فَرِحُوْنَ ۟
ನಿಮಗೆ ಒಳಿತಾದರೆ ಅವರಿಗೆ ಸಂಕಟವಾಗುತ್ತದೆ. ನಿಮಗೆ ಕೆಡುಕು ಸಂಭವಿಸಿದರೆ ಅವರು ಹೇಳುತ್ತಾರೆ: “ನಾವು ಮೊದಲೇ ನಮ್ಮ ವಿಷಯದಲ್ಲಿ ಜಾಗರೂಕರಾಗಿದ್ದೆವು.” ನಂತರ ಅವರು ಸಂತೋಷಪಡುತ್ತಾ ಮರಳಿ ಹೋಗುತ್ತಾರೆ.
تەفسیرە عەرەبیەکان:
قُلْ لَّنْ یُّصِیْبَنَاۤ اِلَّا مَا كَتَبَ اللّٰهُ لَنَا ۚ— هُوَ مَوْلٰىنَا ۚ— وَعَلَی اللّٰهِ فَلْیَتَوَكَّلِ الْمُؤْمِنُوْنَ ۟
ಹೇಳಿರಿ: “ಅಲ್ಲಾಹು ನಮಗೆ ವಿಧಿಸಿದ್ದಲ್ಲದೆ ಬೇರೇನೂ ನಮಗೆ ಸಂಭವಿಸುವುದಿಲ್ಲ. ಅವನೇ ನಮ್ಮ ರಕ್ಷಕ.” ಸತ್ಯವಿಶ್ವಾಸಿಗಳು ಅಲ್ಲಾಹನಲ್ಲಿಯೇ ಭರವಸೆಯಿಡಲಿ.
تەفسیرە عەرەبیەکان:
قُلْ هَلْ تَرَبَّصُوْنَ بِنَاۤ اِلَّاۤ اِحْدَی الْحُسْنَیَیْنِ ؕ— وَنَحْنُ نَتَرَبَّصُ بِكُمْ اَنْ یُّصِیْبَكُمُ اللّٰهُ بِعَذَابٍ مِّنْ عِنْدِهٖۤ اَوْ بِاَیْدِیْنَا ۖؗۗ— فَتَرَبَّصُوْۤا اِنَّا مَعَكُمْ مُّتَرَبِّصُوْنَ ۟
ಹೇಳಿರಿ: “ನೀವು ನಮ್ಮ ವಿಷಯದಲ್ಲಿ ಇವೆರಡರಲ್ಲಿ (ಹುತಾತ್ಮರಾಗುವುದು ಅಥವಾ ವಿಜಯ ಪತಾಕೆಯೊಂದಿಗೆ ಮರಳುವುದು) ಒಂದರ ಹೊರತು ಬೇರೇನು ಕಾಯುತ್ತೀರಿ? ಆದರೆ ಅಲ್ಲಾಹು ನಿಮಗೆ ಅವನ ಕಡೆಯಿಂದ ಅಥವಾ ನಮ್ಮ ಕೈಗಳಿಂದ ಶಿಕ್ಷೆ ನೀಡಬೇಕೆಂದು ನಾವು ಕಾಯುತ್ತೇವೆ. ಆದ್ದರಿಂದ ನೀವು ಕಾಯಿರಿ. ನಿಶ್ಚಯವಾಗಿಯೂ ನಾವೂ ನಿಮ್ಮೊಂದಿಗೆ ಕಾಯುತ್ತೇವೆ.”
تەفسیرە عەرەبیەکان:
قُلْ اَنْفِقُوْا طَوْعًا اَوْ كَرْهًا لَّنْ یُّتَقَبَّلَ مِنْكُمْ ؕ— اِنَّكُمْ كُنْتُمْ قَوْمًا فٰسِقِیْنَ ۟
ಹೇಳಿರಿ: “ನೀವು (ಅಲ್ಲಾಹನ ಮಾರ್ಗದಲ್ಲಿ) ನಿಮ್ಮ ಇಚ್ಛೆಯಿಂದ ಅಥವಾ ನಿಮ್ಮ ಇಚ್ಛೆಗೆ ವಿರುದ್ಧವಾಗಿ ಖರ್ಚು ಮಾಡಿರಿ. (ನೀವು ಯಾವ ರೀತಿಯಲ್ಲಿ ಖರ್ಚು ಮಾಡಿದರೂ) ಅದು ನಿಮ್ಮಿಂದ ಸ್ವೀಕಾರವಾಗುವುದಿಲ್ಲ. ನಿಶ್ಚಯವಾಗಿಯೂ ನೀವು ದುಷ್ಕರ್ಮಿಗಳಾದ ಜನರಾಗಿದ್ದಿರಿ.”
تەفسیرە عەرەبیەکان:
وَمَا مَنَعَهُمْ اَنْ تُقْبَلَ مِنْهُمْ نَفَقٰتُهُمْ اِلَّاۤ اَنَّهُمْ كَفَرُوْا بِاللّٰهِ وَبِرَسُوْلِهٖ وَلَا یَاْتُوْنَ الصَّلٰوةَ اِلَّا وَهُمْ كُسَالٰی وَلَا یُنْفِقُوْنَ اِلَّا وَهُمْ كٰرِهُوْنَ ۟
(ಅಲ್ಲಾಹನ ಮಾರ್ಗದಲ್ಲಿ) ಅವರು ಮಾಡುವ ಖರ್ಚುಗಳು ಅವರಿಂದ ಸ್ವೀಕಾರವಾಗದಂತೆ ತಡೆಯಾಗಿರುವುದು ಅವರು ಅಲ್ಲಾಹು ಮತ್ತು ಅವನ ಸಂದೇಶವಾಹಕರನ್ನು ನಿಷೇಧಿಸಿರುವುದು, ಉದಾಸೀನವಾಗಿಯೇ ನಮಾಝ್ ಮಾಡಲು ಬರುವುದು ಮತ್ತು ಒಲ್ಲದ ಮನಸ್ಸಿನಿಂದ ಖರ್ಚು ಮಾಡುವುದು ಮುಂತಾದವುಗಳಲ್ಲದೆ ಇನ್ನೇನೂ ಅಲ್ಲ.
تەفسیرە عەرەبیەکان:
فَلَا تُعْجِبْكَ اَمْوَالُهُمْ وَلَاۤ اَوْلَادُهُمْ ؕ— اِنَّمَا یُرِیْدُ اللّٰهُ لِیُعَذِّبَهُمْ بِهَا فِی الْحَیٰوةِ الدُّنْیَا وَتَزْهَقَ اَنْفُسُهُمْ وَهُمْ كٰفِرُوْنَ ۟
ಅವರ ಆಸ್ತಿ ಮತ್ತು ಮಕ್ಕಳನ್ನು ನೋಡಿ ಬೆರಗಾಗಬೇಡಿ. ಅಲ್ಲಾಹು ಅವುಗಳ ಮೂಲಕ ಅವರನ್ನು ಇಹಲೋಕದಲ್ಲೇ ಶಿಕ್ಷಿಸಲು ಮತ್ತು ಸತ್ಯನಿಷೇಧಿಗಳಾಗಿಯೇ ಅವರು ಪ್ರಾಣ ಬಿಡುವಂತಾಗಲು ಬಯಸುತ್ತಾನೆ.
تەفسیرە عەرەبیەکان:
وَیَحْلِفُوْنَ بِاللّٰهِ اِنَّهُمْ لَمِنْكُمْ ؕ— وَمَا هُمْ مِّنْكُمْ وَلٰكِنَّهُمْ قَوْمٌ یَّفْرَقُوْنَ ۟
ಅವರು ನಿಮ್ಮಲ್ಲಿ ಸೇರಿದವರು ಎಂದು (ಸಾಬೀತುಪಡಿಸಲು) ಅವರು ಅಲ್ಲಾಹನ ಹೆಸರಲ್ಲಿ ಆಣೆ ಮಾಡುತ್ತಾರೆ. ಆದರೆ ಅವರು ನಿಮ್ಮಲ್ಲಿ ಸೇರಿದವರಲ್ಲ. ಬದಲಿಗೆ ಅವರು ಅಂಜುಬುರುಕ ಜನರಾಗಿದ್ದಾರೆ.
تەفسیرە عەرەبیەکان:
لَوْ یَجِدُوْنَ مَلْجَاً اَوْ مَغٰرٰتٍ اَوْ مُدَّخَلًا لَّوَلَّوْا اِلَیْهِ وَهُمْ یَجْمَحُوْنَ ۟
ಅವರು (ಅಡಗಿಕೊಳ್ಳಲು) ಒಂದು ರಕ್ಷಣಾತಾಣವನ್ನು, ಗುಹೆಯನ್ನು ಅಥವಾ ನುಸುಳಿಕೊಳ್ಳಲು ಯಾವುದಾದರೂ ದ್ವಾರವನ್ನು ಕಂಡರೆ ಅದರ ಕಡೆಗೆ ದೌಡಾಯಿಸುತ್ತಾ ಓಡುತ್ತಾರೆ.
تەفسیرە عەرەبیەکان:
وَمِنْهُمْ مَّنْ یَّلْمِزُكَ فِی الصَّدَقٰتِ ۚ— فَاِنْ اُعْطُوْا مِنْهَا رَضُوْا وَاِنْ لَّمْ یُعْطَوْا مِنْهَاۤ اِذَا هُمْ یَسْخَطُوْنَ ۟
ದಾನಧರ್ಮಗಳನ್ನು ಹಂಚುವ ವಿಷಯದಲ್ಲಿ ನಿಮ್ಮನ್ನು ಟೀಕಿಸುವವರೂ ಅವರಲ್ಲಿದ್ದಾರೆ. ಅವರಿಗೆ ಅದರಿಂದ ಏನಾದರೂ ಕೊಟ್ಟುಬಿಟ್ಟರೆ ಸಂತೋಷವಾಗುತ್ತದೆ. ಅವರಿಗೆ ಏನೂ ಕೊಡದಿದ್ದರೆ ಅವರು ಸಿಟ್ಟಾಗುತ್ತಾರೆ.
تەفسیرە عەرەبیەکان:
وَلَوْ اَنَّهُمْ رَضُوْا مَاۤ اٰتٰىهُمُ اللّٰهُ وَرَسُوْلُهٗ ۙ— وَقَالُوْا حَسْبُنَا اللّٰهُ سَیُؤْتِیْنَا اللّٰهُ مِنْ فَضْلِهٖ وَرَسُوْلُهٗۤ ۙ— اِنَّاۤ اِلَی اللّٰهِ رٰغِبُوْنَ ۟۠
ಅಲ್ಲಾಹು ಮತ್ತು ಅವನ ಸಂದೇಶವಾಹಕರು ಏನು ಕೊಟ್ಟರೋ ಅದರಲ್ಲಿ ಸಂತೃಪ್ತರಾಗಿ, “ನಮಗೆ ಅಲ್ಲಾಹು ಸಾಕು; ಅಲ್ಲಾಹು ಅವನ ಔದಾರ್ಯದಿಂದ ನಮಗೆ ಕೊಡುವನು ಮತ್ತು ಅವನ ಸಂದೇಶವಾಹಕರು ಕೂಡ ಕೊಡುವರು; ನಿಶ್ಚಯವಾಗಿಯೂ ನಾವು ಅಲ್ಲಾಹನಲ್ಲಿ ಮಾತ್ರ ನಿರೀಕ್ಷೆಯಿಡುತ್ತೇವೆ” ಎಂದು ಅವರು ಹೇಳುತ್ತಿದ್ದರೆ (ಎಷ್ಟು ಚೆನ್ನಾಗಿತ್ತು)!
تەفسیرە عەرەبیەکان:
اِنَّمَا الصَّدَقٰتُ لِلْفُقَرَآءِ وَالْمَسٰكِیْنِ وَالْعٰمِلِیْنَ عَلَیْهَا وَالْمُؤَلَّفَةِ قُلُوْبُهُمْ وَفِی الرِّقَابِ وَالْغٰرِمِیْنَ وَفِیْ سَبِیْلِ اللّٰهِ وَابْنِ السَّبِیْلِ ؕ— فَرِیْضَةً مِّنَ اللّٰهِ ؕ— وَاللّٰهُ عَلِیْمٌ حَكِیْمٌ ۟
ದಾನಧರ್ಮವನ್ನು (ಝಕಾತ್) ಬಡವರಿಗೆ, ನಿರ್ಗತಿಕರಿಗೆ, ಅದರ ಸಂಗ್ರಹಕರಿಗೆ, ಹೃದಯದಲ್ಲಿ (ಇಸ್ಲಾಮ್ ಧರ್ಮದ ಬಗ್ಗೆ) ಒಲವುಳ್ಳವರಿಗೆ, ಗುಲಾಮ ವಿಮೋಚನೆಗೆ, ಸಾಲದಲ್ಲಿರುವವರಿಗೆ, ಅಲ್ಲಾಹನ ಮಾರ್ಗದಲ್ಲಿ ಹೋರಾಡುವುದಕ್ಕೆ ಮತ್ತು ಪ್ರಯಾಣಿಕರಿಗೆ ಮಾತ್ರ ನೀಡಬೇಕಾಗಿದೆ. ಇದು ಅಲ್ಲಾಹು ವಿಧಿಸಿದ ಕಡ್ಡಾಯ ಬಾಧ್ಯತೆಯಾಗಿದೆ. ಅಲ್ಲಾಹು ಸರ್ವಜ್ಞನು ಮತ್ತು ವಿವೇಕಪೂರ್ಣನಾಗಿದ್ದಾನೆ.
تەفسیرە عەرەبیەکان:
وَمِنْهُمُ الَّذِیْنَ یُؤْذُوْنَ النَّبِیَّ وَیَقُوْلُوْنَ هُوَ اُذُنٌ ؕ— قُلْ اُذُنُ خَیْرٍ لَّكُمْ یُؤْمِنُ بِاللّٰهِ وَیُؤْمِنُ لِلْمُؤْمِنِیْنَ وَرَحْمَةٌ لِّلَّذِیْنَ اٰمَنُوْا مِنْكُمْ ؕ— وَالَّذِیْنَ یُؤْذُوْنَ رَسُوْلَ اللّٰهِ لَهُمْ عَذَابٌ اَلِیْمٌ ۟
ಪ್ರವಾದಿಗೆ ತೊಂದರೆ ಕೊಡುವವರು ಮತ್ತು ಅವರು (ಎಲ್ಲರ ಮಾತುಗಳನ್ನೂ ಕೇಳುವ) ಕಿವಿಯಾಗಿದ್ದಾರೆ ಎಂದು ಹೇಳುವವರು ಅವರಲ್ಲಿದ್ದಾರೆ. ಹೇಳಿರಿ: “ಅವರು ನಿಮಗೆ ಒಳಿತನ್ನೇ ಬಯಸುವ ಕಿವಿಯಾಗಿದ್ದಾರೆ. ಅವರು ಅಲ್ಲಾಹನಲ್ಲಿ ವಿಶ್ವಾಸವಿಡುತ್ತಾರೆ ಮತ್ತು ಸತ್ಯವಿಶ್ವಾಸಿಗಳ ಮಾತನ್ನು ನಂಬುತ್ತಾರೆ. ಅವರು ನಿಮ್ಮಲ್ಲಿರುವ ಸತ್ಯವಿಶ್ವಾಸಿಗಳಿಗೆ ದಯೆಯಾಗಿದ್ದಾರೆ.” ಅಲ್ಲಾಹನ ಸಂದೇಶವಾಹಕರಿಗೆ ತೊಂದರೆ ಕೊಡುವವರು ಯಾರೋ ಅವರಿಗೆ ಯಾತನಾಮಯ ಶಿಕ್ಷೆಯಿದೆ.
تەفسیرە عەرەبیەکان:
یَحْلِفُوْنَ بِاللّٰهِ لَكُمْ لِیُرْضُوْكُمْ ۚ— وَاللّٰهُ وَرَسُوْلُهٗۤ اَحَقُّ اَنْ یُّرْضُوْهُ اِنْ كَانُوْا مُؤْمِنِیْنَ ۟
ನಿಮ್ಮ ಸಂಪ್ರೀತಿಯನ್ನು ಪಡೆಯಲು ಅವರು ಅಲ್ಲಾಹನ ಮೇಲೆ ಆಣೆ ಮಾಡುತ್ತಾರೆ. ಆದರೆ ಅವರು ಸತ್ಯವಿಶ್ವಾಸಿಗಳಾಗಿದ್ದರೆ ಅಲ್ಲಾಹು ಮತ್ತು ಅವನ ಸಂದೇಶವಾಹಕರ ಸಂಪ್ರೀತಿಯನ್ನು ಪಡೆಯುವುದೇ ಅವರಿಗೆ ಹೆಚ್ಚು ಅರ್ಹವಾಗಿದೆ.
تەفسیرە عەرەبیەکان:
اَلَمْ یَعْلَمُوْۤا اَنَّهٗ مَنْ یُّحَادِدِ اللّٰهَ وَرَسُوْلَهٗ فَاَنَّ لَهٗ نَارَ جَهَنَّمَ خَالِدًا فِیْهَا ؕ— ذٰلِكَ الْخِزْیُ الْعَظِیْمُ ۟
ಯಾರು ಅಲ್ಲಾಹನಿಗೆ ಮತ್ತು ಅವನ ಸಂದೇಶವಾಹಕರಿಗೆ ವಿರುದ್ಧವಾಗಿ ಸಾಗುತ್ತಾನೋ ಅವನಿಗೆ ನರಕವೇ ಗತಿ ಮತ್ತು ಅವನು ಅದರಲ್ಲಿ ಶಾಶ್ವತವಾಗಿ ವಾಸಿಸುತ್ತಾನೆಂದು ಅವರಿಗೆ ತಿಳಿದಿಲ್ಲವೇ? ಅದೇ ಅತಿದೊಡ್ಡ ಅಪಮಾನ.
تەفسیرە عەرەبیەکان:
یَحْذَرُ الْمُنٰفِقُوْنَ اَنْ تُنَزَّلَ عَلَیْهِمْ سُوْرَةٌ تُنَبِّئُهُمْ بِمَا فِیْ قُلُوْبِهِمْ ؕ— قُلِ اسْتَهْزِءُوْا ۚ— اِنَّ اللّٰهَ مُخْرِجٌ مَّا تَحْذَرُوْنَ ۟
ಅವರ ಹೃದಯದಲ್ಲಿರುವ ದುರ್ವಿಚಾರಗಳನ್ನು ಬಹಿರಂಗಪಡಿಸುವ ಅಧ್ಯಾಯವು ಅವತೀರ್ಣವಾಗಬಹುದೋ ಎಂದು ಕಪಟವಿಶ್ವಾಸಿಗಳು ಹೆದರುತ್ತಾರೆ. ಹೇಳಿರಿ: “ನೀವು ತಮಾಷೆ ಮಾಡುತ್ತಿರಿ. ನಿಶ್ಚಯವಾಗಿಯೂ ನೀವು ಹೆದರುವುದನ್ನು ಅಲ್ಲಾಹು ಬಹಿರಂಗಪಡಿಸುವನು.”
تەفسیرە عەرەبیەکان:
وَلَىِٕنْ سَاَلْتَهُمْ لَیَقُوْلُنَّ اِنَّمَا كُنَّا نَخُوْضُ وَنَلْعَبُ ؕ— قُلْ اَبِاللّٰهِ وَاٰیٰتِهٖ وَرَسُوْلِهٖ كُنْتُمْ تَسْتَهْزِءُوْنَ ۟
ನೀವು ಅವರೊಂದಿಗೆ ಕೇಳಿದರೆ ಅವರು ಹೇಳುತ್ತಾರೆ: “ನಾವು ಕೇವಲ ಹರಟೆ ಹೊಡೆಯುತ್ತಾ ಆಟವಾಡುತ್ತಿದ್ದೆವು.” ಕೇಳಿರಿ: “ಅಲ್ಲಾಹು, ಅವನ ವಚನಗಳು ಮತ್ತು ಅವನ ಸಂದೇಶವಾಹಕರನ್ನು ನೀವು ತಮಾಷೆ ಮಾಡುತ್ತಿದ್ದಿರಾ?
تەفسیرە عەرەبیەکان:
لَا تَعْتَذِرُوْا قَدْ كَفَرْتُمْ بَعْدَ اِیْمَانِكُمْ ؕ— اِنْ نَّعْفُ عَنْ طَآىِٕفَةٍ مِّنْكُمْ نُعَذِّبْ طَآىِٕفَةًۢ بِاَنَّهُمْ كَانُوْا مُجْرِمِیْنَ ۟۠
ನೆಪಗಳನ್ನು ಹೇಳಬೇಡಿ. ಸತ್ಯವಿಶ್ವಾಸಿಗಳಾದ ಬಳಿಕ ನೀವು ಸತ್ಯನಿಷೇಧಿಗಳಾಗಿದ್ದೀರಿ. ನಿಮ್ಮಲ್ಲಿ ಒಂದು ಗುಂಪನ್ನು ನಾವು ಕ್ಷಮಿಸಿದರೆ ಇನ್ನೊಂದು ಗುಂಪನ್ನು ಖಂಡಿತ ಶಿಕ್ಷಿಸುವೆವು. ಅದೇಕೆಂದರೆ ಅವರು ಅಪರಾಧಿಗಳಾಗಿದ್ದಾರೆ.”[1]
[1] ಕಪಟವಿಶ್ವಾಸಿಗಳು ಅಲ್ಲಾಹನನ್ನು, ಅವನ ವಚನಗಳನ್ನು ಮತ್ತು ಸಂದೇಶವಾಹಕರನ್ನು ತಮಾಷೆ ಮಾಡುತ್ತಿದ್ದರು. ಇದು ಸತ್ಯವಿಶ್ವಾಸಿಗಳ ಕಿವಿಗೆ ಬಿದ್ದು ನಂತರ ಪ್ರವಾದಿಯವರಿಗೆ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ತಿಳಿದಾಗ ಅವರು ಕಪಟವಿಶ್ವಾಸಿಗಳನ್ನು ಕರೆದು ವಿಚಾರಿಸುತ್ತಿದ್ದರು. ಆಗ ಅವರು ಮೊದಮೊದಲು ನಿರಾಕರಿಸಿದರೂ, ಸಾಕ್ಷ್ಯವನ್ನು ತೋರಿಸಿದಾಗ ಅದನ್ನು ಒಪ್ಪಿಕೊಂಡು, “ನಾವು ಕೇವಲ ಕಾಲಹರಣ ಮಾಡಲು ತಮಾಷೆ ಹೇಳುತ್ತಿದ್ದೆವು” ಎಂದು ನೆಪ ಹೇಳಿ ನುಣುಚಿಕೊಳ್ಳುತ್ತಿದ್ದರು. ಅಲ್ಲಾಹು, ಕುರ್‌ಆನ್ ಮತ್ತು ಪ್ರವಾದಿಯವರನ್ನು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಅವಹೇಳನ ಮಾಡುವುದು, ಅವರ ಬಗ್ಗೆ ತಿರಸ್ಕಾರದಿಂದ ಮಾತನಾಡುವುದು ಸತ್ಯನಿಷೇಧವೆಂದು ಈ ವಚನದಲ್ಲಿ ತಿಳಿಸಲಾಗಿದೆ.
تەفسیرە عەرەبیەکان:
اَلْمُنٰفِقُوْنَ وَالْمُنٰفِقٰتُ بَعْضُهُمْ مِّنْ بَعْضٍ ۘ— یَاْمُرُوْنَ بِالْمُنْكَرِ وَیَنْهَوْنَ عَنِ الْمَعْرُوْفِ وَیَقْبِضُوْنَ اَیْدِیَهُمْ ؕ— نَسُوا اللّٰهَ فَنَسِیَهُمْ ؕ— اِنَّ الْمُنٰفِقِیْنَ هُمُ الْفٰسِقُوْنَ ۟
ಕಪಟವಿಶ್ವಾಸಿ ಪುರುಷರು ಮತ್ತು ಕಪಟವಿಶ್ವಾಸಿ ಮಹಿಳೆಯರು ಒಂದೇ ವರ್ಗಕ್ಕೆ ಸೇರಿದವರು. ಅವರು ಕೆಡುಕನ್ನು ಆದೇಶಿಸುತ್ತಾರೆ ಮತ್ತು ಒಳಿತನ್ನು ವಿರೋಧಿಸುತ್ತಾರೆ, ಹಾಗೂ ತಮ್ಮ ಕೈಗಳನ್ನು ಮಡಚಿಕೊಳ್ಳುತ್ತಾರೆ.[1] ಅವರು ಅಲ್ಲಾಹನನ್ನು ಮರೆತಿದ್ದಾರೆ. ಆದ್ದರಿಂದ ಅಲ್ಲಾಹು ಕೂಡ ಅವರನ್ನು ಮರೆತಿದ್ದಾನೆ. ನಿಶ್ಚಯವಾಗಿಯೂ ಕಪಟವಿಶ್ವಾಸಿಗಳೇ ದುಷ್ಕರ್ಮಿಗಳು.
[1] ಅಂದರೆ ಅಲ್ಲಾಹನ ಮಾರ್ಗದಲ್ಲಿ ಖರ್ಚು ಮಾಡಲು ಹಿಂಜರಿಯುತ್ತಾರೆ.
تەفسیرە عەرەبیەکان:
وَعَدَ اللّٰهُ الْمُنٰفِقِیْنَ وَالْمُنٰفِقٰتِ وَالْكُفَّارَ نَارَ جَهَنَّمَ خٰلِدِیْنَ فِیْهَا ؕ— هِیَ حَسْبُهُمْ ۚ— وَلَعَنَهُمُ اللّٰهُ ۚ— وَلَهُمْ عَذَابٌ مُّقِیْمٌ ۟ۙ
ಕಪಟವಿಶ್ವಾಸಿ ಪುರುಷರು ಮತ್ತು ಕಪಟವಿಶ್ವಾಸಿ ಮಹಿಳೆಯರಿಗೆ ಹಾಗೂ ಸತ್ಯನಿಷೇಧಿಗಳಿಗೆ ಅಲ್ಲಾಹು ನರಕಾಗ್ನಿಯ ಭರವಸೆ ನೀಡಿದ್ದಾನೆ. ಅವರು ಅದರಲ್ಲಿ ಶಾಶ್ವತವಾಗಿ ವಾಸಿಸುತ್ತಾರೆ. ಅವರಿಗೆ ಅದೇ ಸಾಕು. ಅವರು ಅಲ್ಲಾಹನ ಶಾಪಕ್ಕೆ ಗುರಿಯಾಗಿದ್ದಾರೆ. ಅವರಿಗೆ ಶಾಶ್ವತ ಶಿಕ್ಷೆಯಿದೆ.
تەفسیرە عەرەبیەکان:
كَالَّذِیْنَ مِنْ قَبْلِكُمْ كَانُوْۤا اَشَدَّ مِنْكُمْ قُوَّةً وَّاَكْثَرَ اَمْوَالًا وَّاَوْلَادًا ؕ— فَاسْتَمْتَعُوْا بِخَلَاقِهِمْ فَاسْتَمْتَعْتُمْ بِخَلَاقِكُمْ كَمَا اسْتَمْتَعَ الَّذِیْنَ مِنْ قَبْلِكُمْ بِخَلَاقِهِمْ وَخُضْتُمْ كَالَّذِیْ خَاضُوْا ؕ— اُولٰٓىِٕكَ حَبِطَتْ اَعْمَالُهُمْ فِی الدُّنْیَا وَالْاٰخِرَةِ ۚ— وَاُولٰٓىِٕكَ هُمُ الْخٰسِرُوْنَ ۟
(ನಿಮ್ಮ ಸ್ಥಿತಿಯು) ನಿಮಗಿಂತ ಮೊದಲಿನ ಸತ್ಯನಿಷೇಧಿಗಳಂತೆ. ಅವರು ನಿಮಗಿಂತಲೂ ಹೆಚ್ಚು ಬಲಿಷ್ಠರಾಗಿದ್ದರು ಮತ್ತು ನಿಮಗಿಂತಲೂ ಹೆಚ್ಚು ಆಸ್ತಿ ಹಾಗೂ ಮಕ್ಕಳನ್ನು ಹೊಂದಿದ್ದರು. ಅವರು ಅವರ ಪಾಲನ್ನು ಪಡೆದು ಆನಂದಿಸಿದರು. ನಿಮಗಿಂತ ಮೊದಲಿನವರು ಅವರ ಪಾಲನ್ನು ಪಡೆದು ಆನಂದಿಸಿದಂತೆ ನೀವೂ ಸಹ ನಿಮ್ಮ ಪಾಲನ್ನು ಪಡೆದು ಆನಂದಿಸುತ್ತೀರಿ. ಅವರು ತಮಾಷೆಗಳಲ್ಲಿ ಕಾಲಹರಣ ಮಾಡಿದಂತೆ ನೀವು ಕೂಡ ತಮಾಷೆಗಳಲ್ಲಿ ಕಾಲಹರಣ ಮಾಡಿದ್ದೀರಿ. ಅಂತಹವರ ಕರ್ಮಗಳು ಇಹಲೋಕದಲ್ಲೂ, ಪರಲೋಕದಲ್ಲೂ ವ್ಯರ್ಥವಾಗಿವೆ. ಅವರೇ ನಷ್ಟಹೊಂದಿದವರು.
تەفسیرە عەرەبیەکان:
اَلَمْ یَاْتِهِمْ نَبَاُ الَّذِیْنَ مِنْ قَبْلِهِمْ قَوْمِ نُوْحٍ وَّعَادٍ وَّثَمُوْدَ ۙ۬— وَقَوْمِ اِبْرٰهِیْمَ وَاَصْحٰبِ مَدْیَنَ وَالْمُؤْتَفِكٰتِ ؕ— اَتَتْهُمْ رُسُلُهُمْ بِالْبَیِّنٰتِ ۚ— فَمَا كَانَ اللّٰهُ لِیَظْلِمَهُمْ وَلٰكِنْ كَانُوْۤا اَنْفُسَهُمْ یَظْلِمُوْنَ ۟
ಅವರಿಗಿಂತ ಮೊದಲಿನವರ—ನೂಹರ ಜನರು, ಆದ್ ಗೋತ್ರ, ಸಮೂದ್ ಗೋತ್ರ, ಇಬ್ರಾಹೀಮರ ಜನರು, ಮದ್ಯನ್ ದೇಶದ ಜನರು, ಬುಡಮೇಲಾದ ದೇಶದ ಜನರು—ಮುಂತಾದವರ ಸಮಾಚಾರಗಳು ಇವರಿಗೆ ತಲುಪಿಲ್ಲವೇ? ಅವರೆಲ್ಲರ ಬಳಿಗೆ ಅವರ ಪ್ರವಾದಿಗಳು ಸ್ಪಷ್ಟ ಸಾಕ್ಷ್ಯಾಧಾರಗಳೊಂದಿಗೆ ಬಂದಿದ್ದರು. ಅಲ್ಲಾಹು ಅವರಿಗೆ ಯಾವುದೇ ಅನ್ಯಾಯ ಮಾಡಿಲ್ಲ. ಆದರೆ ಅವರೇ ಅವರಿಗೆ ಅನ್ಯಾಯ ಮಾಡಿದರು.
تەفسیرە عەرەبیەکان:
وَالْمُؤْمِنُوْنَ وَالْمُؤْمِنٰتُ بَعْضُهُمْ اَوْلِیَآءُ بَعْضٍ ۘ— یَاْمُرُوْنَ بِالْمَعْرُوْفِ وَیَنْهَوْنَ عَنِ الْمُنْكَرِ وَیُقِیْمُوْنَ الصَّلٰوةَ وَیُؤْتُوْنَ الزَّكٰوةَ وَیُطِیْعُوْنَ اللّٰهَ وَرَسُوْلَهٗ ؕ— اُولٰٓىِٕكَ سَیَرْحَمُهُمُ اللّٰهُ ؕ— اِنَّ اللّٰهَ عَزِیْزٌ حَكِیْمٌ ۟
ಸತ್ಯವಿಶ್ವಾಸಿ ಪುರುಷರು ಮತ್ತು ಸತ್ಯವಿಶ್ವಾಸಿ ಮಹಿಳೆಯರು ಪರಸ್ಪರ ಆಪ್ತಮಿತ್ರರು. ಅವರು ಒಳಿತನ್ನು ಆದೇಶಿಸುತ್ತಾರೆ ಮತ್ತು ಕೆಡುಕನ್ನು ವಿರೋಧಿಸುತ್ತಾರೆ, ನಮಾಝ್ ಸಂಸ್ಥಾಪಿಸುತ್ತಾರೆ, ಝಕಾತ್ ನೀಡುತ್ತಾರೆ ಮತ್ತು ಅಲ್ಲಾಹು ಹಾಗೂ ಅವನ ಸಂದೇಶವಾಹಕರ ಆಜ್ಞಾಪಾಲನೆ ಮಾಡುತ್ತಾರೆ. ಅಲ್ಲಾಹು ಅವರಿಗೆ ಖಂಡಿತ ದಯೆ ತೋರುವನು. ನಿಶ್ಚಯವಾಗಿಯೂ ಅಲ್ಲಾಹು ಪ್ರಬಲನು ಮತ್ತು ವಿವೇಕಪೂರ್ಣನಾಗಿದ್ದಾನೆ.
تەفسیرە عەرەبیەکان:
وَعَدَ اللّٰهُ الْمُؤْمِنِیْنَ وَالْمُؤْمِنٰتِ جَنّٰتٍ تَجْرِیْ مِنْ تَحْتِهَا الْاَنْهٰرُ خٰلِدِیْنَ فِیْهَا وَمَسٰكِنَ طَیِّبَةً فِیْ جَنّٰتِ عَدْنٍ ؕ— وَرِضْوَانٌ مِّنَ اللّٰهِ اَكْبَرُ ؕ— ذٰلِكَ هُوَ الْفَوْزُ الْعَظِیْمُ ۟۠
ಅಲ್ಲಾಹು ಸತ್ಯವಿಶ್ವಾಸಿ ಪುರುಷರು ಮತ್ತು ಸತ್ಯವಿಶ್ವಾಸಿ ಮಹಿಳೆಯರಿಗೆ ತಳಭಾಗದಿಂದ ನದಿಗಳು ಹರಿಯುವ ಸ್ವರ್ಗೋದ್ಯಾನಗಳ ಭರವಸೆ ನೀಡಿದ್ದಾನೆ. ಅವರು ಅದರಲ್ಲಿ ಶಾಶ್ವತವಾಗಿ ವಾಸಿಸುತ್ತಾರೆ. ಚಿರಸ್ಥಾಯಿಯಾದ ಉದ್ಯಾನಗಳಲ್ಲಿರುವ ಮನಮೋಹಕ ವಸತಿಗಳ ಭರವಸೆಯನ್ನೂ ನೀಡಿದ್ದಾನೆ. ಆದರೆ ಅಲ್ಲಾಹನ ಸಂಪ್ರೀತಿಯೇ ಎಲ್ಲಕ್ಕಿಂತಲೂ ದೊಡ್ಡದು. ಅದೇ ಅತಿದೊಡ್ಡ ಯಶಸ್ಸು.
تەفسیرە عەرەبیەکان:
یٰۤاَیُّهَا النَّبِیُّ جَاهِدِ الْكُفَّارَ وَالْمُنٰفِقِیْنَ وَاغْلُظْ عَلَیْهِمْ ؕ— وَمَاْوٰىهُمْ جَهَنَّمُ ؕ— وَبِئْسَ الْمَصِیْرُ ۟
ಓ ಪ್ರವಾದಿಯವರೇ! ಸತ್ಯನಿಷೇಧಿಗಳ ಮತ್ತು ಕಪಟವಿಶ್ವಾಸಿಗಳ ವಿರುದ್ಧ ಹೋರಾಡಿರಿ. ಅವರ ವಿಷಯದಲ್ಲಿ ಕಟುವಾಗಿ ವರ್ತಿಸಿರಿ. ಅವರ ವಾಸಸ್ಥಳವು ನರಕವಾಗಿದೆ. ಆ ಗಮ್ಯಸ್ಥಾನವು ಬಹಳ ನಿಕೃಷ್ಟವಾಗಿದೆ.
تەفسیرە عەرەبیەکان:
یَحْلِفُوْنَ بِاللّٰهِ مَا قَالُوْا ؕ— وَلَقَدْ قَالُوْا كَلِمَةَ الْكُفْرِ وَكَفَرُوْا بَعْدَ اِسْلَامِهِمْ وَهَمُّوْا بِمَا لَمْ یَنَالُوْا ۚ— وَمَا نَقَمُوْۤا اِلَّاۤ اَنْ اَغْنٰىهُمُ اللّٰهُ وَرَسُوْلُهٗ مِنْ فَضْلِهٖ ۚ— فَاِنْ یَّتُوْبُوْا یَكُ خَیْرًا لَّهُمْ ۚ— وَاِنْ یَّتَوَلَّوْا یُعَذِّبْهُمُ اللّٰهُ عَذَابًا اَلِیْمًا فِی الدُّنْیَا وَالْاٰخِرَةِ ۚ— وَمَا لَهُمْ فِی الْاَرْضِ مِنْ وَّلِیٍّ وَّلَا نَصِیْرٍ ۟
ನಾವು (ಪ್ರವಾದಿಯ ವಿರುದ್ಧ ಏನೂ) ಹೇಳಿಲ್ಲವೆಂದು ಅವರು (ಕಪಟವಿಶ್ವಾಸಿಗಳು) ಅಲ್ಲಾಹನ ಮೇಲೆ ಆಣೆ ಮಾಡಿ ಹೇಳುತ್ತಾರೆ. ಆದರೆ (ವಾಸ್ತವದಲ್ಲಿ) ಅವರು ಸತ್ಯನಿಷೇಧದ ಮಾತನ್ನೇ ಹೇಳಿದ್ದಾರೆ. ಇಸ್ಲಾಮ್ ಸ್ವೀಕರಿಸಿದ ಬಳಿಕ ಅವರು ಸತ್ಯನಿಷೇಧಿಗಳಾಗಿ ಮಾರ್ಪಟ್ಟಿದ್ದಾರೆ. ಅವರಿಗೆ ಮಾಡಲು ಸಾಧ್ಯವಾಗದ ಸಂಗತಿಗಾಗಿ (ಪ್ರವಾದಿಯ ಹತ್ಯೆಗಾಗಿ) ಅವರು ಹವಣಿಸಿದ್ದರು. ಅಲ್ಲಾಹು ಅವನ ಔದಾರ್ಯದಿಂದ ಅವರನ್ನು ಶ್ರೀಮಂತಗೊಳಿಸಿದನು ಮತ್ತು ಅವನ ಸಂದೇಶವಾಹಕರು ಕೂಡ (ಅವರನ್ನು ಶ್ರೀಮಂತಗೊಳಿಸಿದರು) ಎಂಬುದಲ್ಲದೆ ಅವರ ಪ್ರತೀಕಾರಕ್ಕೆ ಬೇರೇನು ಕಾರಣವಿದೆ? ಅವರು ಪಶ್ಚಾತ್ತಾಪಪಟ್ಟು ಮರಳಿದರೆ ಅದು ಅವರಿಗೇ ಒಳ್ಳೆಯದು. ಅವರು ಬೆನ್ನು ತೋರಿಸಿ ನಡೆದರೆ, ಅಲ್ಲಾಹು ಅವರಿಗೆ ಇಹಲೋಕದಲ್ಲೂ, ಪರಲೋಕದಲ್ಲೂ ಯಾತನಾಮಯ ಶಿಕ್ಷೆಯನ್ನು ನೀಡುವನು. ಭೂಮಿಯಲ್ಲಿ ಅವರಿಗೆ ಯಾವುದೇ ರಕ್ಷಕರು ಅಥವಾ ಸಹಾಯಕರು ಇರಲಾರರು.
تەفسیرە عەرەبیەکان:
وَمِنْهُمْ مَّنْ عٰهَدَ اللّٰهَ لَىِٕنْ اٰتٰىنَا مِنْ فَضْلِهٖ لَنَصَّدَّقَنَّ وَلَنَكُوْنَنَّ مِنَ الصّٰلِحِیْنَ ۟
“ಅಲ್ಲಾಹು ಅವನ ಔದಾರ್ಯದಿಂದ ನಮಗೆ ದೌಲತ್ತು ನೀಡಿದರೆ ನಿಶ್ಚಯವಾಗಿಯೂ ನಾವು ದಾನಧರ್ಮ ಮಾಡುತ್ತೇವೆ ಮತ್ತು ನೀತಿವಂತರಲ್ಲಿ ಸೇರಿಕೊಳ್ಳುತ್ತೇವೆ” ಎಂದು ಅಲ್ಲಾಹನೊಡನೆ ಕರಾರು ಮಾಡಿದವರು ಅವರಲ್ಲಿದ್ದಾರೆ.
تەفسیرە عەرەبیەکان:
فَلَمَّاۤ اٰتٰىهُمْ مِّنْ فَضْلِهٖ بَخِلُوْا بِهٖ وَتَوَلَّوْا وَّهُمْ مُّعْرِضُوْنَ ۟
ಆದರೆ ಅವನು ಅವರಿಗೆ ಅವನ ಔದಾರ್ಯದಿಂದ ದೌಲತ್ತು ನೀಡಿದಾಗ ಅವರು ಜಿಪುಣತನ ತೋರಿದರು ಮತ್ತು ಕಡೆಗಣಿಸುತ್ತಾ ತಿರುಗಿ ನಡೆದರು.
تەفسیرە عەرەبیەکان:
فَاَعْقَبَهُمْ نِفَاقًا فِیْ قُلُوْبِهِمْ اِلٰی یَوْمِ یَلْقَوْنَهٗ بِمَاۤ اَخْلَفُوا اللّٰهَ مَا وَعَدُوْهُ وَبِمَا كَانُوْا یَكْذِبُوْنَ ۟
ಆದ್ದರಿಂದ ಅವರಿಗೆ ಶಿಕ್ಷೆಯಾಗಿ ಅಲ್ಲಾಹು ಅವರ ಹೃದಯಗಳಲ್ಲಿ ಕಪಟತೆಯನ್ನು ಹಾಕಿದನು. ಅವರು ಅವನನ್ನು ಭೇಟಿಯಾಗುವ ದಿನದ ತನಕ (ಅದು ಅವರ ಹೃದಯಗಳಲ್ಲಿರುವುದು). ಅದೇಕೆಂದರೆ, ಅವರು ಅಲ್ಲಾಹನಿಗೆ ನೀಡಿದ ಭರವಸೆಯನ್ನು ಮುರಿದರು. ಅದೇಕೆಂದರೆ, ಅವರು ಸುಳ್ಳು ಹೇಳುವವರಾಗಿದ್ದರು.
تەفسیرە عەرەبیەکان:
اَلَمْ یَعْلَمُوْۤا اَنَّ اللّٰهَ یَعْلَمُ سِرَّهُمْ وَنَجْوٰىهُمْ وَاَنَّ اللّٰهَ عَلَّامُ الْغُیُوْبِ ۟ۚ
ಅವರ ರಹಸ್ಯಗಳನ್ನು ಮತ್ತು ಅವರ ಗೂಢ ಸಂಭಾಷಣೆಗಳನ್ನು ಅಲ್ಲಾಹು ತಿಳಿಯುತ್ತಾನೆಂದು, ಮತ್ತು ಅಲ್ಲಾಹು ಅಗೋಚರ ಸಂಗತಿಗಳನ್ನು ಬಹಳ ಚೆನ್ನಾಗಿ ತಿಳಿಯುತ್ತಾನೆಂದು ಅವರಿಗೆ ಗೊತ್ತಿಲ್ಲವೇ?
تەفسیرە عەرەبیەکان:
اَلَّذِیْنَ یَلْمِزُوْنَ الْمُطَّوِّعِیْنَ مِنَ الْمُؤْمِنِیْنَ فِی الصَّدَقٰتِ وَالَّذِیْنَ لَا یَجِدُوْنَ اِلَّا جُهْدَهُمْ فَیَسْخَرُوْنَ مِنْهُمْ ؕ— سَخِرَ اللّٰهُ مِنْهُمْ ؗ— وَلَهُمْ عَذَابٌ اَلِیْمٌ ۟
ಸ್ವಯಂಪ್ರೇರಣೆಯಿಂದ ದಾನ ಮಾಡುವ ಸತ್ಯವಿಶ್ವಾಸಿಗಳನ್ನು ಮತ್ತು ದಾನ ಮಾಡಲು ತಮ್ಮ ದಿನಗೂಲಿಯ ಹೊರತು ಬೇರೇನೂ ಇಲ್ಲದವರನ್ನು ಅವರು ಟೀಕಿಸುತ್ತಾರೆ. ಅವರು ಅವರನ್ನು ತಮಾಷೆ ಮಾಡುತ್ತಾರೆ. ಅಲ್ಲಾಹು ಕೂಡ ಅವರನ್ನು (ಕಪಟವಿಶ್ವಾಸಿಗಳನ್ನು) ತಮಾಷೆ ಮಾಡುವನು. ಅವರಿಗೆ ಯಾತನಾಮಯ ಶಿಕ್ಷೆಯಿದೆ.
تەفسیرە عەرەبیەکان:
اِسْتَغْفِرْ لَهُمْ اَوْ لَا تَسْتَغْفِرْ لَهُمْ ؕ— اِنْ تَسْتَغْفِرْ لَهُمْ سَبْعِیْنَ مَرَّةً فَلَنْ یَّغْفِرَ اللّٰهُ لَهُمْ ؕ— ذٰلِكَ بِاَنَّهُمْ كَفَرُوْا بِاللّٰهِ وَرَسُوْلِهٖ ؕ— وَاللّٰهُ لَا یَهْدِی الْقَوْمَ الْفٰسِقِیْنَ ۟۠
ನೀವು ಅವರಿಗೋಸ್ಕರ (ಅಲ್ಲಾಹನಲ್ಲಿ) ಕ್ಷಮೆಯಾಚನೆ ಮಾಡಿದರೂ ಅಥವಾ ಕ್ಷಮೆಯಾಚನೆ ಮಾಡದಿದ್ದರೂ, ನೀವು ಅವರಿಗೋಸ್ಕರ ಎಪ್ಪತ್ತು ಸಲ ಕ್ಷಮೆಯಾಚನೆ ಮಾಡಿದರೂ ಅಲ್ಲಾಹು ಅವರನ್ನು ಕ್ಷಮಿಸುವುದಿಲ್ಲ. ಅದೇಕೆಂದರೆ ಅವರು ಅಲ್ಲಾಹನನ್ನು ಮತ್ತು ಅವನ ಸಂದೇಶವಾಹಕರನ್ನು ನಿಷೇಧಿಸಿದ್ದಾರೆ. ವಿಧೇಯತೆಯಿಲ್ಲದ ಜನರಿಗೆ ಅಲ್ಲಾಹು ಸನ್ಮಾರ್ಗವನ್ನು ತೋರಿಸುವುದಿಲ್ಲ.
تەفسیرە عەرەبیەکان:
فَرِحَ الْمُخَلَّفُوْنَ بِمَقْعَدِهِمْ خِلٰفَ رَسُوْلِ اللّٰهِ وَكَرِهُوْۤا اَنْ یُّجَاهِدُوْا بِاَمْوَالِهِمْ وَاَنْفُسِهِمْ فِیْ سَبِیْلِ اللّٰهِ وَقَالُوْا لَا تَنْفِرُوْا فِی الْحَرِّ ؕ— قُلْ نَارُ جَهَنَّمَ اَشَدُّ حَرًّا ؕ— لَوْ كَانُوْا یَفْقَهُوْنَ ۟
(ಯುದ್ಧದಿಂದ ತಪ್ಪಿಸಿ) ಹಿಂದೆ ಉಳಿದವರು ಅಲ್ಲಾಹನ ಸಂದೇಶವಾಹಕರು ಯುದ್ಧಕ್ಕೆ ಹೊರಟ ನಂತರ ತಾವು ಹಿಂದೆ ಉಳಿದುದರ ಬಗ್ಗೆ ಸಂತೃಪ್ತರಾಗಿದ್ದಾರೆ. ಅವರು ತಮ್ಮ ತನು-ಧನಗಳಿಂದ ಅಲ್ಲಾಹನ ಮಾರ್ಗದಲ್ಲಿ ಯುದ್ಧ ಮಾಡಲು ಇಷ್ಟಪಡಲಿಲ್ಲ. ಅವರು ಹೇಳಿದರು: “ಈ ಉರಿಬಿಸಿಲಿನಲ್ಲಿ ಯುದ್ಧಕ್ಕೆ ಹೋಗಬೇಡಿ.” ಹೇಳಿರಿ: “ನರಕದ ಬೆಂಕಿ ಅದಕ್ಕಿಂತಲೂ ತೀಕ್ಷ್ಣ ಉರಿಯನ್ನು ಹೊಂದಿದೆ.” ಅವರು ಅದನ್ನು ಅರ್ಥಮಾಡಿಕೊಳ್ಳುತ್ತಿದ್ದರೆ!
تەفسیرە عەرەبیەکان:
فَلْیَضْحَكُوْا قَلِیْلًا وَّلْیَبْكُوْا كَثِیْرًا ۚ— جَزَآءً بِمَا كَانُوْا یَكْسِبُوْنَ ۟
ಆದ್ದರಿಂದ ಅವರು ಮಾಡಿಟ್ಟ ದುಷ್ಕರ್ಮಗಳ ಫಲವಾಗಿ ಅವರು ಕನಿಷ್ಠ ನಗುತ್ತಿರಲಿ ಮತ್ತು ಗರಿಷ್ಠ ಅಳುತ್ತಿರಲಿ.
تەفسیرە عەرەبیەکان:
فَاِنْ رَّجَعَكَ اللّٰهُ اِلٰی طَآىِٕفَةٍ مِّنْهُمْ فَاسْتَاْذَنُوْكَ لِلْخُرُوْجِ فَقُلْ لَّنْ تَخْرُجُوْا مَعِیَ اَبَدًا وَّلَنْ تُقَاتِلُوْا مَعِیَ عَدُوًّا ؕ— اِنَّكُمْ رَضِیْتُمْ بِالْقُعُوْدِ اَوَّلَ مَرَّةٍ فَاقْعُدُوْا مَعَ الْخٰلِفِیْنَ ۟
(ಯುದ್ಧಾನಂತರ) ಅಲ್ಲಾಹು ನಿಮ್ಮನ್ನು (ಸುರಕ್ಷಿತವಾಗಿ) ಅವರಲ್ಲಿನ ಒಂದು ಗುಂಪಿನ ಬಳಿಗೆ ಹಿಂದಿರುಗಿಸಿದರೆ, ಇನ್ನೊಂದು ಯುದ್ಧಕ್ಕೆ ಬರುತ್ತೇವೆಂದು ಅವರು ನಿಮ್ಮಲ್ಲಿ ಅನುಮತಿ ಕೇಳುತ್ತಾರೆ. ಹೇಳಿರಿ: “ನೀವು ಯಾವತ್ತೂ ನನ್ನ ಜೊತೆಗೆ ಬರುವಂತಿಲ್ಲ. ನೀವು ಯಾವತ್ತೂ ನನ್ನ ಜೊತೆಗೂಡಿ ವೈರಿಗಳೊಡನೆ ಯುದ್ಧ ಮಾಡುವಂತಿಲ್ಲ. ನಿಶ್ಚಯವಾಗಿಯೂ ಮೊದಲ ಸಂದರ್ಭದಲ್ಲಿ ನೀವು (ಯುದ್ಧಕ್ಕೆ ಹೋಗದೆ) ಹಿಂದೆ ಉಳಿಯಲು ಇಷ್ಟಪಟ್ಟಿರಿ. ಆದ್ದರಿಂದ ನೀವು ಹಿಂದೆ ಉಳಿದವರೊಂದಿಗೇ ಇದ್ದುಕೊಳ್ಳಿ.”
تەفسیرە عەرەبیەکان:
وَلَا تُصَلِّ عَلٰۤی اَحَدٍ مِّنْهُمْ مَّاتَ اَبَدًا وَّلَا تَقُمْ عَلٰی قَبْرِهٖ ؕ— اِنَّهُمْ كَفَرُوْا بِاللّٰهِ وَرَسُوْلِهٖ وَمَاتُوْا وَهُمْ فٰسِقُوْنَ ۟
ಅವರಲ್ಲಿ ಯಾರಾದರೂ ಇಹಲೋಕ ತ್ಯಜಿಸಿದರೆ ಅವನಿಗೆ ಅಂತ್ಯಕ್ರಿಯೆಯ ನಮಾಝ್ ಮಾಡಬೇಡಿ. ಅವನ ಸಮಾಧಿಯ ಬಳಿ ನಿಲ್ಲಬೇಡಿ. ನಿಶ್ಚಯವಾಗಿಯೂ ಅವರು ಅಲ್ಲಾಹನನ್ನು ಮತ್ತು ಅವನ ಸಂದೇಶವಾಹಕರನ್ನು ನಿಷೇಧಿಸಿದ್ದಾರೆ ಮತ್ತು ಅವಿಧೇಯರಾಗಿಯೇ ಪ್ರಾಣಬಿಟ್ಟಿದ್ದಾರೆ.
تەفسیرە عەرەبیەکان:
وَلَا تُعْجِبْكَ اَمْوَالُهُمْ وَاَوْلَادُهُمْ ؕ— اِنَّمَا یُرِیْدُ اللّٰهُ اَنْ یُّعَذِّبَهُمْ بِهَا فِی الدُّنْیَا وَتَزْهَقَ اَنْفُسُهُمْ وَهُمْ كٰفِرُوْنَ ۟
ಅವರ ಆಸ್ತಿ ಮತ್ತು ಮಕ್ಕಳನ್ನು ನೋಡಿ ಬೆರಗಾಗಬೇಡಿ. ಅಲ್ಲಾಹು ಅವುಗಳ ಮೂಲಕ ಅವರನ್ನು ಇಹಲೋಕದಲ್ಲೇ ಶಿಕ್ಷಿಸಲು ಮತ್ತು ಸತ್ಯನಿಷೇಧಿಗಳಾಗಿಯೇ ಅವರು ಪ್ರಾಣಬಿಡುವಂತಾಗಲು ಬಯಸುತ್ತಾನೆ.
تەفسیرە عەرەبیەکان:
وَاِذَاۤ اُنْزِلَتْ سُوْرَةٌ اَنْ اٰمِنُوْا بِاللّٰهِ وَجَاهِدُوْا مَعَ رَسُوْلِهِ اسْتَاْذَنَكَ اُولُوا الطَّوْلِ مِنْهُمْ وَقَالُوْا ذَرْنَا نَكُنْ مَّعَ الْقٰعِدِیْنَ ۟
“ಅಲ್ಲಾಹನಲ್ಲಿ ವಿಶ್ವಾಸವಿಡಿ ಮತ್ತು ಅವನ ಸಂದೇಶವಾಹಕರ ಜೊತೆಗೂಡಿ ಯುದ್ಧ ಮಾಡಿ” ಎಂಬ ಆಜ್ಞೆಯಿರುವ ಒಂದು ಅಧ್ಯಾಯವು ಅವತೀರ್ಣವಾದರೆ, ಅವರಲ್ಲಿನ ಧನಿಕರ ಒಂದು ಗುಂಪು ನಿಮ್ಮ ಬಳಿಗೆ ಬಂದು, “ದಯವಿಟ್ಟು ನಮ್ಮನ್ನು ಬಿಟ್ಟುಬಿಡಿ; ನಾವು (ನಮ್ಮ ಮನೆಯಲ್ಲೇ) ಉಳಿಯುತ್ತೇವೆ” ಎಂದು ಹೇಳುತ್ತಾ ನಿಮ್ಮಲ್ಲಿ (ಯುದ್ಧದಿಂದ ತಪ್ಪಿಸಿಕೊಳ್ಳಲು) ಅನುಮತಿ ಕೇಳಿದರು.
تەفسیرە عەرەبیەکان:
رَضُوْا بِاَنْ یَّكُوْنُوْا مَعَ الْخَوَالِفِ وَطُبِعَ عَلٰی قُلُوْبِهِمْ فَهُمْ لَا یَفْقَهُوْنَ ۟
(ಯುದ್ಧದಿಂದ ವಿನಾಯಿತಿ ನೀಡಲಾದ) ಮಹಿಳೆಯರೊಡನೆ ಉಳಿದುಕೊಳ್ಳಲು ಅವರು ಇಷ್ಟಪಟ್ಟರು. ಅವರ ಹೃದಯಗಳಿಗೆ ಮೊಹರು ಹಾಕಲಾಗಿದೆ. ಆದ್ದರಿಂದ ಅವರು ಅರ್ಥಮಾಡಿಕೊಳ್ಳುವುದಿಲ್ಲ.
تەفسیرە عەرەبیەکان:
لٰكِنِ الرَّسُوْلُ وَالَّذِیْنَ اٰمَنُوْا مَعَهٗ جٰهَدُوْا بِاَمْوَالِهِمْ وَاَنْفُسِهِمْ ؕ— وَاُولٰٓىِٕكَ لَهُمُ الْخَیْرٰتُ ؗ— وَاُولٰٓىِٕكَ هُمُ الْمُفْلِحُوْنَ ۟
ಆದರೆ ಸಂದೇಶವಾಹಕರು ಮತ್ತು ಅವರ ಜೊತೆಯಲ್ಲಿದ್ದ ಸತ್ಯವಿಶ್ವಾಸಿಗಳು ತಮ್ಮ ತನು-ಧನಗಳಿಂದ ಯುದ್ಧ ಮಾಡಿದರು. ಅವರೇ ಒಳಿತನ್ನು ಹೊಂದಿರುವವರು. ಅವರೇ ಯಶಸ್ವಿಯಾದವರು.
تەفسیرە عەرەبیەکان:
اَعَدَّ اللّٰهُ لَهُمْ جَنّٰتٍ تَجْرِیْ مِنْ تَحْتِهَا الْاَنْهٰرُ خٰلِدِیْنَ فِیْهَا ؕ— ذٰلِكَ الْفَوْزُ الْعَظِیْمُ ۟۠
ಅಲ್ಲಾಹು ಅವರಿಗೆ ತಳಭಾಗದಿಂದ ನದಿಗಳು ಹರಿಯುವ ಸ್ವರ್ಗೋದ್ಯಾನಗಳನ್ನು ಸಿದ್ಧಗೊಳಿಸಿದ್ದಾನೆ. ಅವರು ಅದರಲ್ಲಿ ಶಾಶ್ವತವಾಗಿ ವಾಸಿಸುತ್ತಾರೆ. ಅದೇ ಅತಿದೊಡ್ಡ ವಿಜಯ.
تەفسیرە عەرەبیەکان:
وَجَآءَ الْمُعَذِّرُوْنَ مِنَ الْاَعْرَابِ لِیُؤْذَنَ لَهُمْ وَقَعَدَ الَّذِیْنَ كَذَبُوا اللّٰهَ وَرَسُوْلَهٗ ؕ— سَیُصِیْبُ الَّذِیْنَ كَفَرُوْا مِنْهُمْ عَذَابٌ اَلِیْمٌ ۟
ಮರುಭೂಮಿ ನಿವಾಸಿಗಳಾದ ಅರಬ್ಬಿಗಳಲ್ಲಿ (ಯುದ್ಧಕ್ಕೆ ತೆರಳದಿರಲು) ವಿನಾಯಿತಿ ಹೊಂದಿರುವವರು ಅವರಿಗೆ ಅನುಮತಿ ಸಿಗುವುದಕ್ಕಾಗಿ ನಿಮ್ಮ ಬಳಿಗೆ ಬಂದರು. ಆದರೆ ಅಲ್ಲಾಹು ಮತ್ತು ಅವನ ಸಂದೇಶವಾಹಕರೊಡನೆ ಸುಳ್ಳು ಹೇಳಿದವರು (ಮನೆಯಲ್ಲೇ) ಕುಳಿತರು. ಅವರಲ್ಲಿರುವ ಸತ್ಯನಿಷೇಧಿಗಳಿಗೆ ಯಾತನಾಮಯ ಶಿಕ್ಷೆಯು ಕಾದಿದೆ.
تەفسیرە عەرەبیەکان:
لَیْسَ عَلَی الضُّعَفَآءِ وَلَا عَلَی الْمَرْضٰی وَلَا عَلَی الَّذِیْنَ لَا یَجِدُوْنَ مَا یُنْفِقُوْنَ حَرَجٌ اِذَا نَصَحُوْا لِلّٰهِ وَرَسُوْلِهٖ ؕ— مَا عَلَی الْمُحْسِنِیْنَ مِنْ سَبِیْلٍ ؕ— وَاللّٰهُ غَفُوْرٌ رَّحِیْمٌ ۟ۙ
(ಯುದ್ಧದಲ್ಲಿ ಪಾಲ್ಗೊಳ್ಳದ) ದುರ್ಬಲರ ಮೇಲೆ, ರೋಗಿಗಳ ಮೇಲೆ ಮತ್ತು ಖರ್ಚು ಮಾಡಲು ಏನೂ ಇಲ್ಲದವರ ಮೇಲೆ ದೋಷವಿಲ್ಲ—ಅವರು ಅಲ್ಲಾಹು ಮತ್ತು ಅವನ ಸಂದೇಶವಾಹಕರ ಹಿತಚಿಂತಕರಾಗಿದ್ದರೆ. ಇಂತಹ ಸಜ್ಜನರ ಮೇಲೆ ಆರೋಪ ಹೊರಿಸಲು ಯಾವುದೇ ಅವಕಾಶವಿಲ್ಲ. ಅಲ್ಲಾಹು ಕ್ಷಮಿಸುವವನು ಮತ್ತು ದಯೆ ತೋರುವವನಾಗಿದ್ದಾನೆ.
تەفسیرە عەرەبیەکان:
وَّلَا عَلَی الَّذِیْنَ اِذَا مَاۤ اَتَوْكَ لِتَحْمِلَهُمْ قُلْتَ لَاۤ اَجِدُ مَاۤ اَحْمِلُكُمْ عَلَیْهِ ۪— تَوَلَّوْا وَّاَعْیُنُهُمْ تَفِیْضُ مِنَ الدَّمْعِ حَزَنًا اَلَّا یَجِدُوْا مَا یُنْفِقُوْنَ ۟ؕ
ಅವರು ನಿಮ್ಮ ಬಳಿಗೆ ಬಂದು, ಅವರನ್ನು ಕೂಡ ಯುದ್ಧಕ್ಕೆ ಒಯ್ಯಬೇಕೆಂದು ವಿನಂತಿಸಿದಾಗ, “ನಿಮ್ಮನ್ನು ಒಯ್ಯುವಂತಹ ಯಾವುದೇ ಸವಾರಿ ನನ್ನ ಬಳಿಯಿಲ್ಲ” ಎಂದು ನೀವು ಉತ್ತರಿಸಿದಿರಿ; ಆಗ (ಅಲ್ಲಾಹನ ಮಾರ್ಗದಲ್ಲಿ) ಖರ್ಚು ಮಾಡಲು ಚಿಕ್ಕಾಸು ಕೂಡ ಇಲ್ಲದೆ ಬೇಸರದಿಂದ ಕಣ್ಣೀರು ಸುರಿಸುತ್ತಾ ಹಿಂದಿರುಗಿ ಹೋದವರ ಮೇಲೂ ದೋಷವಿಲ್ಲ.
تەفسیرە عەرەبیەکان:
اِنَّمَا السَّبِیْلُ عَلَی الَّذِیْنَ یَسْتَاْذِنُوْنَكَ وَهُمْ اَغْنِیَآءُ ۚ— رَضُوْا بِاَنْ یَّكُوْنُوْا مَعَ الْخَوَالِفِ ۙ— وَطَبَعَ اللّٰهُ عَلٰی قُلُوْبِهِمْ فَهُمْ لَا یَعْلَمُوْنَ ۟
ಆರೋಪ ಹೊರಿಸಲು ಅವಕಾಶವಿರುವುದು ಧನಿಕರಾಗಿದ್ದೂ ಸಹ (ಯುದ್ಧದಿಂದ ವಿನಾಯಿತಿ ಪಡೆಯಲು) ನಿಮ್ಮಲ್ಲಿ ಅನುಮತಿ ಕೇಳುವವರ ಮೇಲೆ ಮಾತ್ರ. ಅವರು (ಯುದ್ಧದಿಂದ ವಿನಾಯಿತಿ ನೀಡಲಾದ) ಮಹಿಳೆಯರೊಡನೆ ಕುಳಿತುಕೊಳ್ಳಲು ಇಷ್ಟಪಟ್ಟರು. ಅಲ್ಲಾಹು ಅವರ ಹೃದಯಗಳಿಗೆ ಮೊಹರು ಹಾಕಿದ್ದಾನೆ. ಆದ್ದರಿಂದ ಅವರು ತಿಳಿಯುವುದಿಲ್ಲ.
تەفسیرە عەرەبیەکان:
یَعْتَذِرُوْنَ اِلَیْكُمْ اِذَا رَجَعْتُمْ اِلَیْهِمْ ؕ— قُلْ لَّا تَعْتَذِرُوْا لَنْ نُّؤْمِنَ لَكُمْ قَدْ نَبَّاَنَا اللّٰهُ مِنْ اَخْبَارِكُمْ ؕ— وَسَیَرَی اللّٰهُ عَمَلَكُمْ وَرَسُوْلُهٗ ثُمَّ تُرَدُّوْنَ اِلٰی عٰلِمِ الْغَیْبِ وَالشَّهَادَةِ فَیُنَبِّئُكُمْ بِمَا كُنْتُمْ تَعْمَلُوْنَ ۟
ನೀವು (ಯುದ್ಧದಿಂದ) ಮರಳಿ ಅವರ ಬಳಿಗೆ ಹೋದಾಗ, ಅವರು ನಿಮ್ಮ ಮುಂದೆ ನೆಪಗಳನ್ನು ಹೇಳುತ್ತಾರೆ. ಹೇಳಿರಿ: “ನೀವು ನೆಪಗಳನ್ನು ಹೇಳಬೇಡಿ. ನಾವು ನಿಮ್ಮನ್ನು ಎಂದಿಗೂ ನಂಬುವುದಿಲ್ಲ. ನಿಮ್ಮ ಕೆಲವು ಸಮಾಚಾರಗಳನ್ನು ಅಲ್ಲಾಹು ನಮಗೆ ತಿಳಿಸಿದ್ದಾನೆ. ಅಲ್ಲಾಹು ಮತ್ತು ಅವನ ಸಂದೇಶವಾಹಕರು ನೀವು ಮಾಡುವ ಕೆಲಸವನ್ನು ನೋಡುತ್ತಾರೆ. ನಂತರ ನಿಮ್ಮನ್ನು ದೃಶ್ಯ-ಅದೃಶ್ಯಗಳನ್ನು ತಿಳಿದವನ (ಅಲ್ಲಾಹನ) ಬಳಿಗೆ ಮರಳಿಸಲಾಗುವುದು. ಆಗ ನೀವು ಮಾಡುತ್ತಿದ್ದ ಕರ್ಮಗಳ ಬಗ್ಗೆ ಅವನು ನಿಮಗೆ ವಿವರಿಸಿಕೊಡುವನು.”
تەفسیرە عەرەبیەکان:
سَیَحْلِفُوْنَ بِاللّٰهِ لَكُمْ اِذَا انْقَلَبْتُمْ اِلَیْهِمْ لِتُعْرِضُوْا عَنْهُمْ ؕ— فَاَعْرِضُوْا عَنْهُمْ ؕ— اِنَّهُمْ رِجْسٌ ؗ— وَّمَاْوٰىهُمْ جَهَنَّمُ ۚ— جَزَآءً بِمَا كَانُوْا یَكْسِبُوْنَ ۟
ನೀವು ಅವರ ಬಳಿಗೆ ಮರಳಿದಾಗ, ಅವರನ್ನು ಅವರ ಪಾಡಿಗೆ ಬಿಟ್ಟುಬಿಡುವುದಕ್ಕಾಗಿ ಅವರು ನಿಮ್ಮ ಮುಂದೆ ಅಲ್ಲಾಹನ ಹೆಸರಲ್ಲಿ ಆಣೆ ಮಾಡುತ್ತಾರೆ. ನೀವು ಅವರನ್ನು ಅವರ ಪಾಡಿಗೆ ಬಿಟ್ಟುಬಿಡಿ. ನಿಜವಾಗಿಯೂ ಅವರು ಹೊಲಸು ಜನರು. ಅವರ ವಾಸಸ್ಥಳ ನರಕವಾಗಿದೆ. ಅದು ಅವರು ಮಾಡಿದ ದುಷ್ಕರ್ಮಗಳ ಫಲವಾಗಿದೆ.
تەفسیرە عەرەبیەکان:
یَحْلِفُوْنَ لَكُمْ لِتَرْضَوْا عَنْهُمْ ۚ— فَاِنْ تَرْضَوْا عَنْهُمْ فَاِنَّ اللّٰهَ لَا یَرْضٰی عَنِ الْقَوْمِ الْفٰسِقِیْنَ ۟
ನಿಮ್ಮ ಸಂಪ್ರೀತಿಯನ್ನು ಪಡೆಯಲು ಅವರು ಅಲ್ಲಾಹನ ಮೇಲೆ ಆಣೆ ಮಾಡುತ್ತಾರೆ. ನೀವು ಅವರ ಬಗ್ಗೆ ಸಂಪ್ರೀತರಾದರೂ, ಅಲ್ಲಾಹು ಆ ದುಷ್ಕರ್ಮಿಗಳ ಬಗ್ಗೆ ಖಂಡಿತ ಸಂಪ್ರೀತನಾಗುವುದಿಲ್ಲ.
تەفسیرە عەرەبیەکان:
اَلْاَعْرَابُ اَشَدُّ كُفْرًا وَّنِفَاقًا وَّاَجْدَرُ اَلَّا یَعْلَمُوْا حُدُوْدَ مَاۤ اَنْزَلَ اللّٰهُ عَلٰی رَسُوْلِهٖ ؕ— وَاللّٰهُ عَلِیْمٌ حَكِیْمٌ ۟
ಮರುಭೂಮಿ ನಿವಾಸಿಗಳಾದ ಅರಬ್ಬಿಗಳು ಕಡು ನಿಷೇಧ ಮತ್ತು ಕಪಟತೆಯಿರುವ ಜನರಾಗಿದ್ದಾರೆ. ಅಲ್ಲಾಹು ಅವನ ಸಂದೇಶವಾಹಕರಿಗೆ ಅವತೀರ್ಣಗೊಳಿಸಿದ ನಿಯಮಗಳ ಬಗ್ಗೆ ಅಜ್ಞರಾಗಿರಲು ಅವರು ಹೆಚ್ಚು ಅರ್ಹರಾಗಿದ್ದಾರೆ. ಅಲ್ಲಾಹು ಸರ್ವಜ್ಞನು ಮತ್ತು ವಿವೇಕಪೂರ್ಣನಾಗಿದ್ದಾನೆ.
تەفسیرە عەرەبیەکان:
وَمِنَ الْاَعْرَابِ مَنْ یَّتَّخِذُ مَا یُنْفِقُ مَغْرَمًا وَّیَتَرَبَّصُ بِكُمُ الدَّوَآىِٕرَ ؕ— عَلَیْهِمْ دَآىِٕرَةُ السَّوْءِ ؕ— وَاللّٰهُ سَمِیْعٌ عَلِیْمٌ ۟
(ಅಲ್ಲಾಹನ ಮಾರ್ಗದಲ್ಲಿ) ಖರ್ಚು ಮಾಡಿದ್ದನ್ನು ದಂಡವೆಂದು ಪರಿಗಣಿಸುವವರು ಮತ್ತು ನಿಮಗೆ ಕೆಟ್ಟ ಕಾಲಚಕ್ರಗಳು ಬರುವುದನ್ನು ಕಾಯುವವರು ಮರುಭೂಮಿ ನಿವಾಸಿಗಳಾದ ಅರಬ್ಬಿಗಳಲ್ಲಿದ್ದಾರೆ. ಕೆಟ್ಟ ಕಾಲಚಕ್ರಗಳು ಅವರಿಗೇ ಬರಲಿ! ಅಲ್ಲಾಹು ಎಲ್ಲವನ್ನು ಕೇಳುವವನು ಮತ್ತು ತಿಳಿದವನಾಗಿದ್ದಾನೆ.
تەفسیرە عەرەبیەکان:
وَمِنَ الْاَعْرَابِ مَنْ یُّؤْمِنُ بِاللّٰهِ وَالْیَوْمِ الْاٰخِرِ وَیَتَّخِذُ مَا یُنْفِقُ قُرُبٰتٍ عِنْدَ اللّٰهِ وَصَلَوٰتِ الرَّسُوْلِ ؕ— اَلَاۤ اِنَّهَا قُرْبَةٌ لَّهُمْ ؕ— سَیُدْخِلُهُمُ اللّٰهُ فِیْ رَحْمَتِهٖ ؕ— اِنَّ اللّٰهَ غَفُوْرٌ رَّحِیْمٌ ۟۠
ಅಲ್ಲಾಹನಲ್ಲಿ ಮತ್ತು ಅಂತ್ಯದಿನದಲ್ಲಿ ವಿಶ್ವಾಸವಿಡುವವರು ಮತ್ತು (ಅಲ್ಲಾಹನ ಮಾರ್ಗದಲ್ಲಿ) ಖರ್ಚು ಮಾಡಿದ್ದನ್ನು ಅಲ್ಲಾಹನ ಸಾಮೀಪ್ಯ ಪಡೆಯುವ ಮತ್ತು ಸಂದೇಶವಾಹಕರ ಪ್ರಾರ್ಥನೆಗಳಲ್ಲಿ ಒಳಪಡುವ ಮಾರ್ಗವೆಂದು ಪರಿಗಣಿಸುವವರೂ ಕೂಡ ಆ ಮರುಭೂಮಿ ನಿವಾಸಿಗಳಾದ ಅರಬ್ಬಿಗಳಲ್ಲಿದ್ದಾರೆ. ತಿಳಿಯಿರಿ! ನಿಶ್ಚಯವಾಗಿಯೂ ಅದು ಅವರಿಗೆ ಸಾಮೀಪ್ಯ ಪಡೆಯುವ ಮಾರ್ಗವಾಗಿದೆ. ಅಲ್ಲಾಹು ಅವರನ್ನು ತನ್ನ ಕರುಣೆಯಲ್ಲಿ ಸೇರಿಸುವನು. ನಿಶ್ಚಯವಾಗಿಯೂ ಅಲ್ಲಾಹು ಕ್ಷಮಿಸುವವನು ಮತ್ತು ದಯೆ ತೋರುವವನಾಗಿದ್ದಾನೆ.
تەفسیرە عەرەبیەکان:
وَالسّٰبِقُوْنَ الْاَوَّلُوْنَ مِنَ الْمُهٰجِرِیْنَ وَالْاَنْصَارِ وَالَّذِیْنَ اتَّبَعُوْهُمْ بِاِحْسَانٍ ۙ— رَّضِیَ اللّٰهُ عَنْهُمْ وَرَضُوْا عَنْهُ وَاَعَدَّ لَهُمْ جَنّٰتٍ تَجْرِیْ تَحْتَهَا الْاَنْهٰرُ خٰلِدِیْنَ فِیْهَاۤ اَبَدًا ؕ— ذٰلِكَ الْفَوْزُ الْعَظِیْمُ ۟
ಮುಹಾಜಿರ್ ಮತ್ತು ಅನ್ಸಾರ್‌ಗಳಲ್ಲಿ ಮೊತ್ತಮೊದಲು ಸತ್ಯವಿಶ್ವಾಸ ಸ್ವೀಕರಿಸಿ ಮುಂಚೂಣಿಯಲ್ಲಿರುವವರ ಬಗ್ಗೆ ಮತ್ತು ಒಳಿತಿನ ಮೂಲಕ ಅವರನ್ನು ಹಿಂಬಾಲಿಸಿದವರ ಬಗ್ಗೆ ಅಲ್ಲಾಹು ಸಂಪ್ರೀತನಾಗಿದ್ದಾನೆ. ಅವನ ಬಗ್ಗೆ ಅವರೂ ಸಂಪ್ರೀತರಾಗಿದ್ದಾರೆ. ತಳಭಾಗದಿಂದ ನದಿಗಳು ಹರಿಯುವ ಸ್ವರ್ಗೋದ್ಯಾನಗಳನ್ನು ಅವನು ಅವರಿಗಾಗಿ ಸಿದ್ಧಗೊಳಿಸಿದ್ದಾನೆ. ಅವರು ಅದರಲ್ಲಿ ಸದಾಕಾಲ ಶಾಶ್ವತವಾಗಿ ವಾಸಿಸುವರು. ಅದೇ ಅತಿದೊಡ್ಡ ವಿಜಯ.
تەفسیرە عەرەبیەکان:
وَمِمَّنْ حَوْلَكُمْ مِّنَ الْاَعْرَابِ مُنٰفِقُوْنَ ۛؕ— وَمِنْ اَهْلِ الْمَدِیْنَةِ ؔۛ۫— مَرَدُوْا عَلَی النِّفَاقِ ۫— لَا تَعْلَمُهُمْ ؕ— نَحْنُ نَعْلَمُهُمْ ؕ— سَنُعَذِّبُهُمْ مَّرَّتَیْنِ ثُمَّ یُرَدُّوْنَ اِلٰی عَذَابٍ عَظِیْمٍ ۟ۚ
ನಿಮ್ಮ ಸುತ್ತಮುತ್ತಲಲ್ಲಿರುವ ಅಲೆಮಾರಿ ಅರಬ್ಬಿಗಳಲ್ಲಿ ಕಪಟವಿಶ್ವಾಸಿಗಳಿದ್ದಾರೆ. ಮದೀನಾ ನಿವಾಸಿಗಳಲ್ಲೂ ಇದ್ದಾರೆ. ಅವರು ಕಪಟತೆಯಲ್ಲಿ ಮಿತಿಮೀರಿದ್ದಾರೆ. ನಿಮಗೆ ಅವರ ಬಗ್ಗೆ ತಿಳಿದಿಲ್ಲ. ಆದರೆ ನಮಗೆ ಅವರ ಬಗ್ಗೆ ತಿಳಿದಿದೆ. ನಾವು ಸದ್ಯವೇ ಅವರನ್ನು ಎರಡು ಬಾರಿ ಶಿಕ್ಷಿಸುವೆವು. ನಂತರ ಅವರನ್ನು ಘೋರ ಶಿಕ್ಷೆಗೆ ತಳ್ಳಲಾಗುವುದು.
تەفسیرە عەرەبیەکان:
وَاٰخَرُوْنَ اعْتَرَفُوْا بِذُنُوْبِهِمْ خَلَطُوْا عَمَلًا صَالِحًا وَّاٰخَرَ سَیِّئًا ؕ— عَسَی اللّٰهُ اَنْ یَّتُوْبَ عَلَیْهِمْ ؕ— اِنَّ اللّٰهَ غَفُوْرٌ رَّحِیْمٌ ۟
ತಮ್ಮ ತಪ್ಪುಗಳನ್ನು ಒಪ್ಪಿಕೊಂಡ ಬೇರೆ ಕೆಲವರಿದ್ದಾರೆ.[1] ಅವರು ಒಳ್ಳೆಯ ಮತ್ತು ಕೆಟ್ಟ ಕರ್ಮಗಳನ್ನು ಮಿಶ್ರಗೊಳಿಸಿದ್ದಾರೆ. ಅಲ್ಲಾಹು ಅವರ ಪಶ್ಚಾತ್ತಾಪವನ್ನು ಸ್ವೀಕರಿಸಲೂಬಹುದು. ನಿಶ್ಚಯವಾಗಿಯೂ ಅಲ್ಲಾಹು ಕ್ಷಮಿಸುವವನು ಮತ್ತು ದಯೆ ತೋರುವವನಾಗಿದ್ದಾನೆ.
[1] ಇವರು ಸತ್ಯವಿಶ್ವಾಸಿಗಳು. ಆದರೆ ಇವರು ತಬೂಕ್ ಯುದ್ಧಕ್ಕೆ ಹೋಗಿರಲಿಲ್ಲ. ಆದರೆ ನಂತರ ಇವರಿಗೆ ತಮ್ಮ ತಪ್ಪಿನ ಅರಿವಾಗಿ ಪಶ್ಚಾತ್ತಾಪಪಟ್ಟರು.
تەفسیرە عەرەبیەکان:
خُذْ مِنْ اَمْوَالِهِمْ صَدَقَةً تُطَهِّرُهُمْ وَتُزَكِّیْهِمْ بِهَا وَصَلِّ عَلَیْهِمْ ؕ— اِنَّ صَلٰوتَكَ سَكَنٌ لَّهُمْ ؕ— وَاللّٰهُ سَمِیْعٌ عَلِیْمٌ ۟
ನೀವು ಅವರ ಸಂಪತ್ತುಗಳಿಂದ ದಾನವನ್ನು ಪಡೆಯಿರಿ. ಅದರ ಮೂಲಕ ನೀವು ಅವರನ್ನು ಶುದ್ಧೀಕರಿಸುತ್ತೀರಿ. ಅವರಿಗೋಸ್ಕರ ಪ್ರಾರ್ಥಿಸಿರಿ. ನಿಶ್ಚಯವಾಗಿಯೂ ನಿಮ್ಮ ಪ್ರಾರ್ಥನೆಯು ಅವರ ಪಾಲಿಗೆ ಸಮಾಧಾನವಾಗಿದೆ. ಅಲ್ಲಾಹು ಎಲ್ಲವನ್ನು ಕೇಳುವವನು ಮತ್ತು ತಿಳಿದವನಾಗಿದ್ದಾನೆ.
تەفسیرە عەرەبیەکان:
اَلَمْ یَعْلَمُوْۤا اَنَّ اللّٰهَ هُوَ یَقْبَلُ التَّوْبَةَ عَنْ عِبَادِهٖ وَیَاْخُذُ الصَّدَقٰتِ وَاَنَّ اللّٰهَ هُوَ التَّوَّابُ الرَّحِیْمُ ۟
ನಿಶ್ಚಯವಾಗಿಯೂ ಅಲ್ಲಾಹನೇ ತನ್ನ ದಾಸರ ಪಶ್ಚಾತ್ತಾಪವನ್ನು ಸ್ವೀಕರಿಸುತ್ತಾನೆ ಮತ್ತು ಅವರಿಂದ ದಾನಧರ್ಮಗಳನ್ನು ತೆಗೆದುಕೊಳ್ಳುತ್ತಾನೆ; ಅವನು ಪಶ್ಚಾತ್ತಾಪ ಸ್ವೀಕರಿಸುವವನು ಮತ್ತು ಕರುಣೆ ತೋರುವವನಾಗಿದ್ದಾನೆೆಂದು ಅವರಿಗೆ ತಿಳಿದಿಲ್ಲವೇ?
تەفسیرە عەرەبیەکان:
وَقُلِ اعْمَلُوْا فَسَیَرَی اللّٰهُ عَمَلَكُمْ وَرَسُوْلُهٗ وَالْمُؤْمِنُوْنَ ؕ— وَسَتُرَدُّوْنَ اِلٰی عٰلِمِ الْغَیْبِ وَالشَّهَادَةِ فَیُنَبِّئُكُمْ بِمَا كُنْتُمْ تَعْمَلُوْنَ ۟ۚ
ಹೇಳಿರಿ: “ನೀವು ಕರ್ಮವೆಸಗಿರಿ. ಅಲ್ಲಾಹು, ಅವನ ಸಂದೇಶವಾಹಕರು ಮತ್ತು ಸತ್ಯವಿಶ್ವಾಸಿಗಳು ನಿಮ್ಮ ಕರ್ಮಗಳನ್ನು ನೋಡುವರು. ನಂತರ ನಿಮ್ಮನ್ನು ದೃಶ್ಯ-ಅದೃಶ್ಯಗಳನ್ನು ತಿಳಿದವನ (ಅಲ್ಲಾಹನ) ಬಳಿಗೆ ಮರಳಿಸಲಾಗುವುದು. ಆಗ ನೀವೇನು ಮಾಡುತ್ತಿದ್ದಿರಿ ಎಂದು ಅವನು ನಿಮಗೆ ತಿಳಿಸಿಕೊಡುವನು.”
تەفسیرە عەرەبیەکان:
وَاٰخَرُوْنَ مُرْجَوْنَ لِاَمْرِ اللّٰهِ اِمَّا یُعَذِّبُهُمْ وَاِمَّا یَتُوْبُ عَلَیْهِمْ ؕ— وَاللّٰهُ عَلِیْمٌ حَكِیْمٌ ۟
ಅಲ್ಲಾಹನ ಆಜ್ಞೆ ಬರುವ ತನಕ ತೀರ್ಪನ್ನು ಕಾದಿರಿಸಲಾದ ಕೆಲವರಿದ್ದಾರೆ. ಅಲ್ಲಾಹು ಅವರನ್ನು ಶಿಕ್ಷಿಸಬಹುದು ಅಥವಾ ಅವರ ಪಶ್ಚಾತ್ತಾಪವನ್ನು ಸ್ವೀಕರಿಸಬಹುದು. ಅಲ್ಲಾಹು ಸರ್ವಜ್ಞನು ಮತ್ತು ವಿವೇಕಪೂರ್ಣನಾಗಿದ್ದಾನೆ.[1]
[1] ತಬೂಕ್ ಯುದ್ಧಕ್ಕೆ ಹೋಗದೆ ಹಿಂದೆ ಉಳಿದವರಲ್ಲಿ ಒಂದು ಗುಂಪು ಕಪಟವಿಶ್ವಾಸಿಗಳದ್ದು. ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಮತ್ತು ಸತ್ಯವಿಶ್ವಾಸಿಗಳು ಯುದ್ಧದಿಂದ ಹಿಂದಿರುಗಿ ಬಂದಾಗ ಇವರು ಸುಳ್ಳು ನೆಪಗಳನ್ನು ಹೇಳಿ ತಪ್ಪಿಸಿಕೊಂಡರು. ಆದರೆ ಯುದ್ಧಕ್ಕೆ ಹೋಗದ ಸತ್ಯವಿಶ್ವಾಸಿಗಳು ಸುಳ್ಳು ನೆಪಗಳನ್ನು ಹೇಳಲಿಲ್ಲ. ಬದಲಿಗೆ, ನಿಜವನ್ನೇ ಹೇಳಿದರು. ಆದ್ದರಿಂದ ಅವರ ತೀರ್ಪನ್ನು ಅಲ್ಲಾಹನ ಆಜ್ಞೆ ಬರುವ ತನಕ ಕಾದಿರಿಸಲಾಯಿತು.
تەفسیرە عەرەبیەکان:
وَالَّذِیْنَ اتَّخَذُوْا مَسْجِدًا ضِرَارًا وَّكُفْرًا وَّتَفْرِیْقًا بَیْنَ الْمُؤْمِنِیْنَ وَاِرْصَادًا لِّمَنْ حَارَبَ اللّٰهَ وَرَسُوْلَهٗ مِنْ قَبْلُ ؕ— وَلَیَحْلِفُنَّ اِنْ اَرَدْنَاۤ اِلَّا الْحُسْنٰی ؕ— وَاللّٰهُ یَشْهَدُ اِنَّهُمْ لَكٰذِبُوْنَ ۟
ಹಾನಿ ಮಾಡಲು, ಅಲ್ಲಾಹನನ್ನು ನಿಷೇಧಿಸಲು, ಸತ್ಯವಿಶ್ವಾಸಿಗಳ ನಡುವೆ ಒಡಕು ಮೂಡಿಸಲು ಮತ್ತು ಈಗಾಗಲೇ ಅಲ್ಲಾಹು ಮತ್ತು ಅವನ ಸಂದೇಶವಾಹಕರ ವಿರುದ್ಧ ಯುದ್ಧ ಮಾಡಿದವರಿಗೆ ಹೊಂಚುದಾಣವನ್ನು ನಿರ್ಮಿಸಿಕೊಡಲು ಒಂದು ಮಸೀದಿಯನ್ನು[1] ನಿರ್ಮಿಸಿದವರು ಯಾರೋ—ಅವರು, “ನಾವು ಒಳಿತನ್ನು ಮಾತ್ರ ಉದ್ದೇಶಿಸುತ್ತೇವೆ” ಎಂದು ಆಣೆ ಮಾಡಿ ಹೇಳುತ್ತಾರೆ. ಆದರೆ ಅವರು ಸುಳ್ಳು ಹೇಳುತ್ತಿದ್ದಾರೆ ಎಂಬುದಕ್ಕೆ ಅಲ್ಲಾಹು ಸಾಕ್ಷಿಯಾಗಿದ್ದಾನೆ.
[1] ಇಲ್ಲಿ ಸೂಚಿಸಿರುವುದು ಕಪಟವಿಶ್ವಾಸಿಗಳು ಮದೀನದ ಕುಬಾ ಮಸೀದಿಯ ಸಮೀಪ ನಿರ್ಮಿಸಿದ ಇನ್ನೊಂದು ಮಸೀದಿ. ಇದನ್ನು ಮಸ್ಜಿದ್ ದಿರಾರ್ (ಹಾನಿಕರ ಮಸೀದಿ) ಎಂದು ಕುರ್‌ಆನ್ ಕರೆದಿದೆ.
تەفسیرە عەرەبیەکان:
لَا تَقُمْ فِیْهِ اَبَدًا ؕ— لَمَسْجِدٌ اُسِّسَ عَلَی التَّقْوٰی مِنْ اَوَّلِ یَوْمٍ اَحَقُّ اَنْ تَقُوْمَ فِیْهِ ؕ— فِیْهِ رِجَالٌ یُّحِبُّوْنَ اَنْ یَّتَطَهَّرُوْا ؕ— وَاللّٰهُ یُحِبُّ الْمُطَّهِّرِیْنَ ۟
ನೀವು ಯಾವತ್ತೂ ಅಲ್ಲಿ (ನಮಾಝ್ ಮಾಡಲು) ನಿಲ್ಲಬೇಡಿ. ನಿಮಗೆ ನಿಲ್ಲಲು (ನಮಾಝ್ ಮಾಡಲು) ಹೆಚ್ಚು ಅರ್ಹವಾಗಿರುವುದು ಮೊದಲ ದಿನದಿಂದಲೇ ದೇವಭಯದ ಆಧಾರದಲ್ಲಿ ನಿರ್ಮಿಸಲಾದ ಮಸೀದಿಯಾಗಿದೆ. ಅಲ್ಲಿ (ಆ ಮಸೀದಿಯಲ್ಲಿ) ಶುದ್ಧಿಯಾಗಲು ಇಷ್ಟಪಡುವ ಜನರಿದ್ದಾರೆ. ಅಲ್ಲಾಹು ಶುದ್ಧಿಯಾಗಿರುವವರನ್ನು ಇಷ್ಟಪಡುತ್ತಾನೆ.
تەفسیرە عەرەبیەکان:
اَفَمَنْ اَسَّسَ بُنْیَانَهٗ عَلٰی تَقْوٰی مِنَ اللّٰهِ وَرِضْوَانٍ خَیْرٌ اَمْ مَّنْ اَسَّسَ بُنْیَانَهٗ عَلٰی شَفَا جُرُفٍ هَارٍ فَانْهَارَ بِهٖ فِیْ نَارِ جَهَنَّمَ ؕ— وَاللّٰهُ لَا یَهْدِی الْقَوْمَ الظّٰلِمِیْنَ ۟
ಅಲ್ಲಾಹನ ಭಯ ಮತ್ತು ಸಂಪ್ರೀತಿಯ ತಳಹದಿಯ ಮೇಲೆ ತನ್ನ ಕಟ್ಟಡವನ್ನು ನಿರ್ಮಿಸಿದವನು ಉತ್ತಮನೋ ಅಥವಾ ಕುಸಿಯುವ ಹಂತದಲ್ಲಿರುವ ಪ್ರಪಾತದ ಅಂಚಿನಲ್ಲಿ ತನ್ನ ಕಟ್ಟಡವನ್ನು ನಿರ್ಮಿಸಿ ಅದರೊಂದಿಗೆ ನರಕಾಗ್ನಿಗೆ ಕುಸಿದು ಬಿದ್ದವನೋ? ಅಕ್ರಮಿಗಳಾದ ಜನರಿಗೆ ಅಲ್ಲಾಹು ಸನ್ಮಾರ್ಗವನ್ನು ತೋರಿಸುವುದಿಲ್ಲ.
تەفسیرە عەرەبیەکان:
لَا یَزَالُ بُنْیَانُهُمُ الَّذِیْ بَنَوْا رِیْبَةً فِیْ قُلُوْبِهِمْ اِلَّاۤ اَنْ تَقَطَّعَ قُلُوْبُهُمْ ؕ— وَاللّٰهُ عَلِیْمٌ حَكِیْمٌ ۟۠
ಅವರು ನಿರ್ಮಿಸಿದ ಅವರ ಕಟ್ಟಡವು ಅವರ ಹೃದಯಗಳಲ್ಲಿ ಸಂಶಯ ಪಿಶಾಚಿಯಂತೆ ಅವರನ್ನು ಸತತವಾಗಿ ಚುಚ್ಚುತ್ತಲೇ ಇರುವುದು. ಅಲ್ಲಾಹು ಸರ್ವಜ್ಞನು ಮತ್ತು ವಿವೇಕಪೂರ್ಣನಾಗಿದ್ದಾನೆ.
تەفسیرە عەرەبیەکان:
اِنَّ اللّٰهَ اشْتَرٰی مِنَ الْمُؤْمِنِیْنَ اَنْفُسَهُمْ وَاَمْوَالَهُمْ بِاَنَّ لَهُمُ الْجَنَّةَ ؕ— یُقَاتِلُوْنَ فِیْ سَبِیْلِ اللّٰهِ فَیَقْتُلُوْنَ وَیُقْتَلُوْنَ ۫— وَعْدًا عَلَیْهِ حَقًّا فِی التَّوْرٰىةِ وَالْاِنْجِیْلِ وَالْقُرْاٰنِ ؕ— وَمَنْ اَوْفٰی بِعَهْدِهٖ مِنَ اللّٰهِ فَاسْتَبْشِرُوْا بِبَیْعِكُمُ الَّذِیْ بَایَعْتُمْ بِهٖ ؕ— وَذٰلِكَ هُوَ الْفَوْزُ الْعَظِیْمُ ۟
ನಿಶ್ಚಯವಾಗಿಯೂ ಅಲ್ಲಾಹು ಸತ್ಯವಿಶ್ವಾಸಿಗಳಿಂದ, ಅವರಿಗೆ ಸ್ವರ್ಗವನ್ನು ನೀಡುವೆನು ಎಂಬುದಕ್ಕೆ ಬದಲಿಯಾಗಿ, ಅವರ ತನು-ಧನಗಳನ್ನು ಖರೀದಿಸಿದ್ದಾನೆ. ಅವರು ಅಲ್ಲಾಹನ ಮಾರ್ಗದಲ್ಲಿ ಯುದ್ಧ ಮಾಡುತ್ತಾ (ವೈರಿಗಳನ್ನು) ಕೊಲ್ಲುತ್ತಾರೆ ಮತ್ತು (ವೈರಿಗಳಿಂದ) ಕೊಲೆಗೀಡಾಗುತ್ತಾರೆ. ಇದು ತೌರಾತ್‍ನಲ್ಲಿ, ಇಂಜೀಲ್‍ನಲ್ಲಿ ಮತ್ತು ಕುರ್‌ಆನ್‍ನಲ್ಲಿ ಅಲ್ಲಾಹು ನೀಡಿದ ಸತ್ಯ ವಾಗ್ದಾನವಾಗಿದೆ. ಅಲ್ಲಾಹನಿಗಿಂತಲೂ ಹೆಚ್ಚು ತನ್ನ ಕರಾರನ್ನು ಪೂರ್ತಿ ಮಾಡುವವನು ಯಾರು? ಆದ್ದರಿಂದ ನೀವು ಮಾಡಿರುವ ಈ ವ್ಯವಹಾರದಲ್ಲಿ ಸಂತೋಷಪಡಿರಿ. ಅದೇ ಅತಿದೊಡ್ಡ ಯಶಸ್ಸು.
تەفسیرە عەرەبیەکان:
اَلتَّآىِٕبُوْنَ الْعٰبِدُوْنَ الْحٰمِدُوْنَ السَّآىِٕحُوْنَ الرّٰكِعُوْنَ السّٰجِدُوْنَ الْاٰمِرُوْنَ بِالْمَعْرُوْفِ وَالنَّاهُوْنَ عَنِ الْمُنْكَرِ وَالْحٰفِظُوْنَ لِحُدُوْدِ اللّٰهِ ؕ— وَبَشِّرِ الْمُؤْمِنِیْنَ ۟
ಪಶ್ಚಾತ್ತಾಪಪಡುವವರು, ಆರಾಧನೆ ಮಾಡುವವರು, ಸ್ತುತಿಕೀರ್ತನೆ ಮಾಡುವವರು, ಉಪವಾಸ ಆಚರಿಸುವವರು, ತಲೆಬಾಗುವವರು, ಸಾಷ್ಟಾಂಗ ಮಾಡುವವರು, ಒಳಿತನ್ನು ಆದೇಶಿಸುವವರು, ಕೆಡುಕನ್ನು ವಿರೋಧಿಸುವವರು ಮತ್ತು ಅಲ್ಲಾಹನ ಎಲ್ಲೆಗಳನ್ನು ಸಂರಕ್ಷಿಸುವವರು (ಇವರೇ ಸತ್ಯವಿಶ್ವಾಸಿಗಳು). ಆ ಸತ್ಯವಿಶ್ವಾಸಿಗಳಿಗೆ ಶುಭವಾರ್ತೆಯನ್ನು ತಿಳಿಸಿರಿ.
تەفسیرە عەرەبیەکان:
مَا كَانَ لِلنَّبِیِّ وَالَّذِیْنَ اٰمَنُوْۤا اَنْ یَّسْتَغْفِرُوْا لِلْمُشْرِكِیْنَ وَلَوْ كَانُوْۤا اُولِیْ قُرْبٰی مِنْ بَعْدِ مَا تَبَیَّنَ لَهُمْ اَنَّهُمْ اَصْحٰبُ الْجَحِیْمِ ۟
ಬಹುದೇವವಿಶ್ವಾಸಿಗಳು ನರಕವಾಸಿಗಳೆಂದು ಸ್ಪಷ್ಟವಾದ ಬಳಿಕ ಅವರಿಗೋಸ್ಕರ (ಅಲ್ಲಾಹನಲ್ಲಿ) ಕ್ಷಮೆಯಾಚನೆ ಮಾಡಲು ಪ್ರವಾದಿಗೆ ಮತ್ತು ಸತ್ಯವಿಶ್ವಾಸಿಗಳಿಗೆ ಅನುಮತಿಯಿಲ್ಲ. ಅವರು ಆಪ್ತ ಸಂಬಂಧಿಕರಾಗಿದ್ದರೂ ಸಹ.
تەفسیرە عەرەبیەکان:
وَمَا كَانَ اسْتِغْفَارُ اِبْرٰهِیْمَ لِاَبِیْهِ اِلَّا عَنْ مَّوْعِدَةٍ وَّعَدَهَاۤ اِیَّاهُ ۚ— فَلَمَّا تَبَیَّنَ لَهٗۤ اَنَّهٗ عَدُوٌّ لِّلّٰهِ تَبَرَّاَ مِنْهُ ؕ— اِنَّ اِبْرٰهِیْمَ لَاَوَّاهٌ حَلِیْمٌ ۟
ಇಬ್ರಾಹೀಮರು ತಮ್ಮ ತಂದೆಗೋಸ್ಕರ (ಅಲ್ಲಾಹನಲ್ಲಿ) ಕ್ಷಮೆಯಾಚನೆ ಮಾಡಿರುವುದು ಅವರು ತಂದೆಗೆ ಕೊಟ್ಟ ಮಾತನ್ನು ಪಾಲಿಸುವುದಕ್ಕಾಗಿತ್ತು. ಆದರೆ ತಂದೆ ಅಲ್ಲಾಹನ ವೈರಿಯೆಂದು ಸ್ಪಷ್ಟವಾದಾಗ ಅವರು ತಂದೆಯಿಂದ ದೂರವಾದರು. ನಿಶ್ಚಯವಾಗಿಯೂ ಇಬ್ರಾಹೀಮರು ಅತ್ಯಂತ ಮೃದು ಹೃದಯದವರು ಮತ್ತು ಸಹಿಷ್ಣುವಾಗಿದ್ದರು.
تەفسیرە عەرەبیەکان:
وَمَا كَانَ اللّٰهُ لِیُضِلَّ قَوْمًا بَعْدَ اِذْ هَدٰىهُمْ حَتّٰی یُبَیِّنَ لَهُمْ مَّا یَتَّقُوْنَ ؕ— اِنَّ اللّٰهَ بِكُلِّ شَیْءٍ عَلِیْمٌ ۟
ಅಲ್ಲಾಹು ಜನರಿಗೆ ಸನ್ಮಾರ್ಗವನ್ನು ತೋರಿಸಿದ ಬಳಿಕ ಅವರನ್ನು ದಾರಿತಪ್ಪಿಸುವುದಿಲ್ಲ—ಅವರು ಯಾವುದರಿಂದ ತಮ್ಮನ್ನು ರಕ್ಷಿಸಿಕೊಳ್ಳಬೇಕೆಂದು ಅವರಿಗೆ ಸ್ಪಷ್ಟವಾಗಿ ವಿವರಿಸಿಕೊಡುವ ತನಕ. ನಿಶ್ಚಯವಾಗಿಯೂ ಅಲ್ಲಾಹು ಎಲ್ಲಾ ವಿಷಯಗಳನ್ನು ತಿಳಿದವನಾಗಿದ್ದಾನೆ.
تەفسیرە عەرەبیەکان:
اِنَّ اللّٰهَ لَهٗ مُلْكُ السَّمٰوٰتِ وَالْاَرْضِ ؕ— یُحْیٖ وَیُمِیْتُ ؕ— وَمَا لَكُمْ مِّنْ دُوْنِ اللّٰهِ مِنْ وَّلِیٍّ وَّلَا نَصِیْرٍ ۟
ನಿಶ್ಚಯವಾಗಿಯೂ ಭೂಮ್ಯಾಕಾಶಗಳ ಸಾರ್ವಭೌಮತ್ವವು ಅಲ್ಲಾಹನಿಗೆ ಸೇರಿದ್ದು. ಅವನು ಜೀವ ಮತ್ತು ಮರಣವನ್ನು ನೀಡುತ್ತಾನೆ. ಅಲ್ಲಾಹನ ಹೊರತು ನಿಮಗೆ ಬೇರೆ ರಕ್ಷಕರು ಅಥವಾ ಸಹಾಯಕರಿಲ್ಲ.
تەفسیرە عەرەبیەکان:
لَقَدْ تَّابَ اللّٰهُ عَلَی النَّبِیِّ وَالْمُهٰجِرِیْنَ وَالْاَنْصَارِ الَّذِیْنَ اتَّبَعُوْهُ فِیْ سَاعَةِ الْعُسْرَةِ مِنْ بَعْدِ مَا كَادَ یَزِیْغُ قُلُوْبُ فَرِیْقٍ مِّنْهُمْ ثُمَّ تَابَ عَلَیْهِمْ ؕ— اِنَّهٗ بِهِمْ رَءُوْفٌ رَّحِیْمٌ ۟ۙ
ನಿಶ್ಚಯವಾಗಿಯೂ ಅಲ್ಲಾಹು ಪ್ರವಾದಿಯನ್ನು ಮತ್ತು ಸಂದಿಗ್ಧ ಸ್ಥಿತಿಯಲ್ಲಿ ಅವರನ್ನು ಹಿಂಬಾಲಿಸಿದ ಮುಹಾಜಿರ್ ಮತ್ತು ಅನ್ಸಾರರನ್ನು ಕ್ಷಮಿಸಿದ್ದಾನೆ. ನಂತರ ಅಲ್ಲಾಹು ಅವರ ಪಶ್ಚಾತ್ತಾಪವನ್ನು ಸ್ವೀಕರಿಸಿದನು. ನಿಶ್ಚಯವಾಗಿಯೂ ಅವನು ಅವರೊಡನೆ ಕೃಪೆ ಮತ್ತು ದಯೆಯುಳ್ಳವನಾಗಿದ್ದಾನೆ.
تەفسیرە عەرەبیەکان:
وَّعَلَی الثَّلٰثَةِ الَّذِیْنَ خُلِّفُوْا ؕ— حَتّٰۤی اِذَا ضَاقَتْ عَلَیْهِمُ الْاَرْضُ بِمَا رَحُبَتْ وَضَاقَتْ عَلَیْهِمْ اَنْفُسُهُمْ وَظَنُّوْۤا اَنْ لَّا مَلْجَاَ مِنَ اللّٰهِ اِلَّاۤ اِلَیْهِ ؕ— ثُمَّ تَابَ عَلَیْهِمْ لِیَتُوْبُوْا ؕ— اِنَّ اللّٰهَ هُوَ التَّوَّابُ الرَّحِیْمُ ۟۠
ತೀರ್ಪು ಕಾದಿರಿಸಲಾದ ಆ ಮೂವರನ್ನೂ (ಅಲ್ಲಾಹು ಕ್ಷಮಿಸಿದ್ದಾನೆ).[1] ಎಲ್ಲಿಯವರೆಗೆಂದರೆ, ಭೂಮಿಯು ವಿಶಾಲವಾಗಿದ್ದೂ ಸಹ ಅವರಿಗೆ ಅದು ಇಕ್ಕಟ್ಟಾದಂತೆ ತೋರಿತು, ಅವರ ಹೃದಯಗಳು ಅವರಿಗೆ ಇಕ್ಕಟ್ಟಾಗಿ ಪರಿಣಮಿಸಿತು ಮತ್ತು ಅಲ್ಲಾಹನಿಗೆ ವಿರುದ್ಧವಾಗಿ ಅವನ ಬಳಿಯೇ ಹೊರತು ಬೇರೆ ಆಶ್ರಯವಿಲ್ಲವೆಂದು ಅವರಿಗೆ ಖಾತ್ರಿಯಾಯಿತು. ಆದ್ದರಿಂದ ಅವರು ಪಶ್ಚಾತ್ತಾಪಪಟ್ಟು ಮರಳುವುದಕ್ಕಾಗಿ ಅಲ್ಲಾಹು ಅವರನ್ನು ಕ್ಷಮಿಸಿದನು. ನಿಶ್ಚಯವಾಗಿಯೂ ಅಲ್ಲಾಹು ಪಶ್ಚಾತ್ತಾಪ ಸ್ವೀಕರಿಸುವವನು ಮತ್ತು ದಯೆ ತೋರುವವನಾಗಿದ್ದಾನೆ.
[1] ತೀರ್ಪು ಕಾದಿರಿಸಲಾದವರು ಎಂದು 106ನೇ ವಚನದಲ್ಲಿ ಹೇಳಿದ್ದು ಈ ಮೂವರ ಬಗ್ಗೆ. ಅವರು ಕಅ‌ಬ್ ಬಿನ್ ಮಾಲಿಕ್, ಹಿಲಾಲ್ ಬಿನ್ ಉಮಯ್ಯಃ ಮತ್ತು ಮುರಾರ ಬಿನ್ ರಬೀಅ್. ಇವರು ತಬೂಕ್ ಯುದ್ಧಕ್ಕೆ ಹೋಗದಿರಲು ಸೂಕ್ತ ಕಾರಣಗಳೇನೂ ಇಲ್ಲದಿದ್ದರೂ ಸಹ ಹೋಗಿರಲಿಲ್ಲ.
تەفسیرە عەرەبیەکان:
یٰۤاَیُّهَا الَّذِیْنَ اٰمَنُوا اتَّقُوا اللّٰهَ وَكُوْنُوْا مَعَ الصّٰدِقِیْنَ ۟
ಓ ಸತ್ಯವಿಶ್ವಾಸಿಗಳೇ! ಅಲ್ಲಾಹನನ್ನು ಭಯಪಡಿರಿ ಮತ್ತು ಸತ್ಯವಂತರಲ್ಲಿ ಸೇರಿಕೊಳ್ಳಿ.
تەفسیرە عەرەبیەکان:
مَا كَانَ لِاَهْلِ الْمَدِیْنَةِ وَمَنْ حَوْلَهُمْ مِّنَ الْاَعْرَابِ اَنْ یَّتَخَلَّفُوْا عَنْ رَّسُوْلِ اللّٰهِ وَلَا یَرْغَبُوْا بِاَنْفُسِهِمْ عَنْ نَّفْسِهٖ ؕ— ذٰلِكَ بِاَنَّهُمْ لَا یُصِیْبُهُمْ ظَمَاٌ وَّلَا نَصَبٌ وَّلَا مَخْمَصَةٌ فِیْ سَبِیْلِ اللّٰهِ وَلَا یَطَـُٔوْنَ مَوْطِئًا یَّغِیْظُ الْكُفَّارَ وَلَا یَنَالُوْنَ مِنْ عَدُوٍّ نَّیْلًا اِلَّا كُتِبَ لَهُمْ بِهٖ عَمَلٌ صَالِحٌ ؕ— اِنَّ اللّٰهَ لَا یُضِیْعُ اَجْرَ الْمُحْسِنِیْنَ ۟ۙ
ಪ್ರವಾದಿಯವರನ್ನು ಬಿಟ್ಟು ಹಿಂದೆ ಉಳಿಯುವುದು (ಯುದ್ಧಕ್ಕೆ ಹೋಗದೆ ಮನೆಯಲ್ಲೇ ಕುಳಿತುಕೊಳ್ಳುವುದು) ಮತ್ತು ಅವರಿಗಿಂತಲೂ ಹೆಚ್ಚು ತಮ್ಮ ಕೆಲಸ-ಕಾರ್ಯಗಳಿಗೆ ಪ್ರಾಶಸ್ತ್ಯ ನೀಡುವುದು ಮದೀನಾ ನಿವಾಸಿಗಳಿಗೆ ಮತ್ತು ಅದರ ಸುತ್ತಲಿರುವ ಮರುಭೂಮಿ ನಿವಾಸಿಗಳಾದ ಅರಬ್ಬಿಗಳಿಗೆ ಭೂಷಣವಲ್ಲ. ಅದೇಕೆಂದರೆ, ಅಲ್ಲಾಹನ ಮಾರ್ಗದಲ್ಲಿ ಅವರಿಗೆ ಯಾವುದೇ ದಾಹ, ಆಯಾಸ ಅಥವಾ ಹಸಿವು ಸಂಭವಿಸಿದರೂ, ಸತ್ಯನಿಷೇಧಿಗಳನ್ನು ಕೆರಳಿಸುವ ಯಾವುದೇ ಪ್ರದೇಶದಲ್ಲಿ ಅವರು ಕಾಲೂರಿದರೂ, ಅಥವಾ ವೈರಿಗಳಿಗೆ ಅವರು ಯಾವುದೇ ನಾಶ-ನಷ್ಟ ತಂದಿಟ್ಟರೂ, ಅವುಗಳಿಗೆ ಬದಲಿಯಾಗಿ ಅವರಿಗೆ ಒಂದು ಸತ್ಕರ್ಮವನ್ನು ದಾಖಲಿಸಲಾಗುವುದು. ಒಳಿತು ಮಾಡುವವರ ಕರ್ಮಗಳನ್ನು ಅಲ್ಲಾಹು ವ್ಯರ್ಥಗೊಳಿಸುವುದಿಲ್ಲ.
تەفسیرە عەرەبیەکان:
وَلَا یُنْفِقُوْنَ نَفَقَةً صَغِیْرَةً وَّلَا كَبِیْرَةً وَّلَا یَقْطَعُوْنَ وَادِیًا اِلَّا كُتِبَ لَهُمْ لِیَجْزِیَهُمُ اللّٰهُ اَحْسَنَ مَا كَانُوْا یَعْمَلُوْنَ ۟
ಅವರು ಸಣ್ಣ ಮೊತ್ತದಲ್ಲಿ ಅಥವಾ ದೊಡ್ಡ ಮೊತ್ತದಲ್ಲಿ ಖರ್ಚು ಮಾಡಿದರೂ, ಅಥವಾ ಯಾವುದೇ ಕಣಿವೆಯನ್ನು ದಾಟಿದರೂ—ಅವರು ಮಾಡಿದ ಕರ್ಮಗಳಿಗೆ ಅತ್ಯುತ್ತಮ ಪ್ರತಿಫಲ ನೀಡುವುದಕ್ಕಾಗಿ ಇವೆಲ್ಲವನ್ನೂ ದಾಖಲಿಸಿಡಲಾಗುವುದು.
تەفسیرە عەرەبیەکان:
وَمَا كَانَ الْمُؤْمِنُوْنَ لِیَنْفِرُوْا كَآفَّةً ؕ— فَلَوْلَا نَفَرَ مِنْ كُلِّ فِرْقَةٍ مِّنْهُمْ طَآىِٕفَةٌ لِّیَتَفَقَّهُوْا فِی الدِّیْنِ وَلِیُنْذِرُوْا قَوْمَهُمْ اِذَا رَجَعُوْۤا اِلَیْهِمْ لَعَلَّهُمْ یَحْذَرُوْنَ ۟۠
ಸತ್ಯವಿಶ್ವಾಸಿಗಳೆಲ್ಲರೂ ಒಟ್ಟಿಗೆ ಯುದ್ಧಕ್ಕೆ ಹೊರಡುವುದು ಸರಿಯಲ್ಲ. ಬದಲಿಗೆ, ಅವರಲ್ಲಿರುವ ಒಂದೊಂದು ವಿಭಾಗದಿಂದ ಒಂದೊಂದು ಗುಂಪು ಜನರು ಯುದ್ಧಕ್ಕೆ ಹೊರಟು, ಉಳಿದವರು ಧರ್ಮದ ಬಗ್ಗೆ ತಿಳುವಳಿಕೆಯನ್ನು ಪಡೆದು, ನಂತರ ಆ ಜನರು ತಮ್ಮ ಬಳಿಗೆ ಮರಳಿ ಬಂದಾಗ, ಅವರು (ಅಲ್ಲಾಹನನ್ನು) ಭಯಪಟ್ಟು ಜೀವಿಸುವುದಕ್ಕಾಗಿ ಅವರಿಗೆ (ಧಾರ್ಮಿಕ ನಿಯಮಗಳ ಬಗ್ಗೆ) ತಿಳುವಳಿಕೆ ನೀಡಬಾರದೇಕೆ?
تەفسیرە عەرەبیەکان:
یٰۤاَیُّهَا الَّذِیْنَ اٰمَنُوْا قَاتِلُوا الَّذِیْنَ یَلُوْنَكُمْ مِّنَ الْكُفَّارِ وَلْیَجِدُوْا فِیْكُمْ غِلْظَةً ؕ— وَاعْلَمُوْۤا اَنَّ اللّٰهَ مَعَ الْمُتَّقِیْنَ ۟
ಓ ಸತ್ಯವಿಶ್ವಾಸಿಗಳೇ! ನಿಮ್ಮ ಆಸುಪಾಸಿನಲ್ಲಿರುವ ಸತ್ಯನಿಷೇಧಿಗಳ ವಿರುದ್ಧ ಯುದ್ಧ ಮಾಡಿರಿ. ಅವರು ನಿಮ್ಮಲ್ಲಿ ಕಠೋರತೆಯನ್ನು ಕಾಣಲಿ. ತಿಳಿಯಿರಿ! ನಿಶ್ಚಯವಾಗಿಯೂ ಅಲ್ಲಾಹು ದೇವಭಯವುಳ್ಳವರೊಡನೆ ಇದ್ದಾನೆ.
تەفسیرە عەرەبیەکان:
وَاِذَا مَاۤ اُنْزِلَتْ سُوْرَةٌ فَمِنْهُمْ مَّنْ یَّقُوْلُ اَیُّكُمْ زَادَتْهُ هٰذِهٖۤ اِیْمَانًا ۚ— فَاَمَّا الَّذِیْنَ اٰمَنُوْا فَزَادَتْهُمْ اِیْمَانًا وَّهُمْ یَسْتَبْشِرُوْنَ ۟
ಒಂದು ಅಧ್ಯಾಯವು ಅವತೀರ್ಣವಾದಾಗ ಅವರಲ್ಲಿ ಕೆಲವರು ಕೇಳುತ್ತಾರೆ: “ಇದು ನಿಮ್ಮಲ್ಲಿ ಯಾರಿಗೆ ವಿಶ್ವಾಸವನ್ನು ಹೆಚ್ಚಿಸಿದೆ?” ಸತ್ಯವಿಶ್ವಾಸಿಗಳು ಯಾರೋ—ಅವರಿಗೆ ಅದು ವಿಶ್ವಾಸವನ್ನು ಹೆಚ್ಚಿಸಿದೆ. ಅವರು ಅದರಲ್ಲಿ ಸಂತೋಷಪಡುತ್ತಾರೆ.
تەفسیرە عەرەبیەکان:
وَاَمَّا الَّذِیْنَ فِیْ قُلُوْبِهِمْ مَّرَضٌ فَزَادَتْهُمْ رِجْسًا اِلٰی رِجْسِهِمْ وَمَاتُوْا وَهُمْ كٰفِرُوْنَ ۟
ಆದರೆ ಯಾರ ಹೃದಯಗಳಲ್ಲಿ ರೋಗವಿದೆಯೋ, ಅವರಿಗೆ ಅದು ಹೊಲಸಿನ ಮೇಲೆ ಹೊಲಸನ್ನು ಹೆಚ್ಚಿಸಿದೆ. ಅವರು ಸತ್ಯನಿಷೇಧಿಗಳಾಗಿಯೇ ಸಾಯುತ್ತಾರೆ.
تەفسیرە عەرەبیەکان:
اَوَلَا یَرَوْنَ اَنَّهُمْ یُفْتَنُوْنَ فِیْ كُلِّ عَامٍ مَّرَّةً اَوْ مَرَّتَیْنِ ثُمَّ لَا یَتُوْبُوْنَ وَلَا هُمْ یَذَّكَّرُوْنَ ۟
ಪ್ರತಿವರ್ಷವೂ ಅವರು ಒಂದು ಅಥವಾ ಎರಡು ಬಾರಿ ಪರೀಕ್ಷೆಗೆ ಗುರಿಯಾಗುವುದನ್ನು ಅವರು ನೋಡುವುದಿಲ್ಲವೇ? ಆದರೂ ಅವರು ಪಶ್ಚಾತ್ತಾಪಪಡುವುದಿಲ್ಲ. ಅವರು ಉಪದೇಶ ಸ್ವೀಕರಿಸುವುದೂ ಇಲ್ಲ.
تەفسیرە عەرەبیەکان:
وَاِذَا مَاۤ اُنْزِلَتْ سُوْرَةٌ نَّظَرَ بَعْضُهُمْ اِلٰی بَعْضٍ ؕ— هَلْ یَرٰىكُمْ مِّنْ اَحَدٍ ثُمَّ انْصَرَفُوْا ؕ— صَرَفَ اللّٰهُ قُلُوْبَهُمْ بِاَنَّهُمْ قَوْمٌ لَّا یَفْقَهُوْنَ ۟
ಯಾವುದೇ ಒಂದು ಅಧ್ಯಾಯವು ಅವತೀರ್ಣವಾದಾಗ ಅವರಲ್ಲಿ ಕೆಲವರು “ನಿಮ್ಮನ್ನು ಯಾರೂ ಗಮನಿಸುತ್ತಿಲ್ಲ ತಾನೇ?” ಎಂಬರ್ಥದಲ್ಲಿ ಇತರರನ್ನು ನೋಡುತ್ತಾರೆ. ನಂತರ ಅವರು ಅಲ್ಲಿಂದ ತೆರಳುತ್ತಾರೆ. ಅಲ್ಲಾಹು ಅವರ ಹೃದಯಗಳನ್ನು ತಿರುಗಿಸಿದ್ದಾನೆ. ಅವರು ಅರ್ಥಮಾಡಿಕೊಳ್ಳದ ಜನರಾಗಿರುವುದೇ ಅದಕ್ಕೆ ಕಾರಣ.
تەفسیرە عەرەبیەکان:
لَقَدْ جَآءَكُمْ رَسُوْلٌ مِّنْ اَنْفُسِكُمْ عَزِیْزٌ عَلَیْهِ مَا عَنِتُّمْ حَرِیْصٌ عَلَیْكُمْ بِالْمُؤْمِنِیْنَ رَءُوْفٌ رَّحِیْمٌ ۟
ನಿಮ್ಮ ಬಳಿಗೆ ನಿಮ್ಮಿಂದಲೇ ಇರುವ ಒಬ್ಬ ಸಂದೇಶವಾಹಕರು ಬಂದಿದ್ದಾರೆ. ನೀವು ಕಷ್ಟ ಅನುಭವಿಸುವುದು ಅವರಿಗೆ ಸಂಕಟದಾಯಕವಾಗಿದೆ. ಅವರಿಗೆ ನಿಮ್ಮ ಬಗ್ಗೆ ಕಳಕಳಿಯಿದೆ. ಅವರು ಸತ್ಯವಿಶ್ವಾಸಿಗಳೊಡನೆ ಕೃಪೆ ಮತ್ತು ದಯೆಯುಳ್ಳವರಾಗಿದ್ದಾರೆ.
تەفسیرە عەرەبیەکان:
فَاِنْ تَوَلَّوْا فَقُلْ حَسْبِیَ اللّٰهُ ۖؗ— لَاۤ اِلٰهَ اِلَّا هُوَ ؕ— عَلَیْهِ تَوَكَّلْتُ وَهُوَ رَبُّ الْعَرْشِ الْعَظِیْمِ ۟۠
ಅವರೇನಾದರೂ ತಿರುಗಿ ನಡೆದರೆ, ಹೇಳಿರಿ: “ನನಗೆ ಅಲ್ಲಾಹು ಸಾಕು. ಅವನ ಹೊರತು ಆರಾಧನೆಗೆ ಅರ್ಹರಾದ ಅನ್ಯ ದೇವರಿಲ್ಲ. ನಾನು ಅವನಲ್ಲಿ ಭರವಸೆಯಿಟ್ಟಿದ್ದೇನೆ. ಅವನು ಮಹಾ ಸಿಂಹಾಸನದ ಒಡೆಯನಾಗಿದ್ದಾನೆ.”
تەفسیرە عەرەبیەکان:
 
وه‌رگێڕانی ماناكان سوره‌تی: سورەتی التوبة
پێڕستی سوره‌ته‌كان ژمارەی پەڕە
 
وه‌رگێڕانی ماناكانی قورئانی پیرۆز - وەرگێڕاوی کەنادی - پێڕستی وه‌رگێڕاوه‌كان

وەرگێڕاوی ماناکانی قورئانی پیرۆز بۆ زمانی کەنادی، وەرگێڕان: موحەمەد حەمزە بتور.

داخستن