ಅಲ್ಲಾಹನು ಅತ್ಯುತ್ತಮ ವಚನವನ್ನು ಅವತೀರ್ಣಗೊಳಿಸಿದ್ದಾನೆ. ಅದು ಪರಸ್ಪರ ಸಾದೃಶ್ಯವಿರುವಂತಹ ಮತ್ತು ಪುನರಾವರ್ತಿಸಿ ಓದಲಾಗುವಂತಹ ಗ್ರಂಥವಾಗಿದೆ. ಅದರಿಂದಾಗಿ ತಮ್ಮ ಪ್ರಭುವನ್ನು ಭಯಪಟ್ಟುಕೊಳ್ಳುವವರ ರೋಮಗಳು ಸಟೆದು ನಿಲ್ಲುವುವು. ಕೊನೆಗೆ ಅವರ ಚರ್ಮಗಳು ಹಾಗೂ ಹೃದಯಗಳು ಅಲ್ಲಾಹನ ಸ್ಮರಣೆಯೆಡೆಗೆ ಮೃದುವಾಗಿ ಬಿಡುವುವು. ಇದು ಅಲ್ಲಾಹನ ಸನ್ಮಾರ್ಗವಾಗಿದೆ. ಅದರ ಮೂಲಕ ಅವನು ತಾನಿಚ್ಛಿಸಿದವರನ್ನು ಸನ್ಮಾರ್ಗದಲ್ಲಿ ಮುನ್ನಡೆಸುತ್ತಾನೆ ಮತ್ತು ಅಲ್ಲಾಹನು ಮಾರ್ಗಭ್ರಷ್ಟಗೊಳಿಸಿದವನಿಗೆ ಮಾರ್ಗದರ್ಶಕನಾರೂ ಇರಲಾರನು.