ಆಕಾಶಗಳು ಮೇಲ್ಭಾಗದಿಂದ ಸಿಡಿದು ಬೀಳುವುದರಲ್ಲಿದೆ ಮತ್ತು ಮಲಕ್ಗಳು ತಮ್ಮ ಪ್ರಭುವಿನ ಸ್ತುತಿ ಕೀರ್ತನೆಯೊಂದಿಗೆ ಅವನ ಪಾವಿತ್ರö್ಯವನ್ನು ಕೊಂಡಾಡುತ್ತಿದ್ದಾರೆ. ಮತ್ತು ಭೂವಾಸಿಗಳಿಗಾಗಿ ಅವರು ಪಾಪವಿಮೋಚನೆಯನ್ನು ಬೇಡುತ್ತಿರುತ್ತಾರೆ. ತಿಳಿಯಿರಿ! ಅಲ್ಲಾಹನೇ ಕ್ಷಮಿಸುವವನೂ ಕರುಣಾನಿಧಿಯೂ ಆಗಿದ್ದಾನೆ.
ಇದೇ ರೀತಿ ನಾವು ನಿಮ್ಮೆಡೆಗೆ ಅರಬೀ ಭಾಷೆಯಲ್ಲಿರುವ ಕುರ್ಆನನ್ನು ಅವತೀರ್ಣಗೊಳಿಸಿದ್ದೇವೆ. ಇದು ನೀವು ಮಕ್ಕಾ ಮತ್ತು ಅದರ ಸುತ್ತಮುತ್ತಲಲ್ಲಿರು ವವರನ್ನು ಎಚ್ಚರಿಸಲೆಂದೂ, ಮತ್ತು ಸರ್ವರನ್ನು ಒಟ್ಟು ಸೇರಿಸಲಾಗುವ ದಿನದ ಬಗ್ಗೆ ಮುನ್ನೆಚ್ಚರಿಕೆ ನೀಡಲೆಂದಾಗಿದೆ. ಅಂದು ಒಂದು ತಂಡವು ಸ್ವರ್ಗಕ್ಕೆ ಹೋಗುವುದು ಮತ್ತೊಂದು ತಂಡವು ನರಕಕ್ಕೆ ಹೋಗುವುದು
ಅಲ್ಲಾಹನು ಇಚ್ಛಿಸುತ್ತಿದ್ದರೆ ಅವರೆಲ್ಲರನ್ನು ಒಂದೇ ಸಮುದಾಯದವರನ್ನಾಗಿ ಮಾಡುತ್ತಿದ್ದನು. ಆದರೆ ಅವನು ತಾನಿಚ್ಛಿಸುವವರನ್ನು ತನ್ನ ಕೃಪೆಯಲ್ಲಿ ಸೇರಿಸುತ್ತಾನೆ ಮತ್ತು ಅಕ್ರಮಿಗಳಿಗೆ ರಕ್ಷಕಮಿತ್ರನಾಗಲೀ ಸಹಾಯಕನಾಗಲೀ ಯಾರೂ ಇರಲಾರನು.
ವಾಸ್ತವದಲ್ಲಿ ಅವರು ಅಲ್ಲಾಹನನ್ನು ಬಿಟ್ಟು ಇತರರನ್ನು ರಕ್ಷಕರನ್ನಾಗಿ ಮಾಡಿಕೊಂಡಿದ್ದಾರೆಯೇ? ಅಲ್ಲಾಹನೇ ರಕ್ಷಕನಾಗಿದ್ದಾನೆ. ಅವನೇ ಮೃತರನ್ನು ಜೀವಂತಗೊಳಿಸುತ್ತಾನೆ ಮತ್ತು ಅವನೇ ಸಕಲ ವಸ್ತುಗಳ ಮೇಲೆ ಸಾಮರ್ಥ್ಯವುಳ್ಳವನಾಗಿದ್ದಾನೆ.
ನೀವು ಯಾವ ವಿಷಯದಲ್ಲಿ ಭಿನ್ನಾಭಿಪ್ರಾಯ ಹೊಂದಿರುವಿರೋ ಅದರ ತೀರ್ಮಾನ ಅಲ್ಲಾಹನ ಕಡೆಯಿಂದಲೇ ಆಗುವುದು. ಆ ಅಲ್ಲಾಹನೇ ನನ್ನ ಪ್ರಭು. ನಾನು ಅವನ ಮೇಲೆ ಭರವಸೆಯನ್ನು ಇರಿಸಿದ್ದೇನೆ. ಮತ್ತು ಅವನ ಕಡೆಗೆ ನಾನು ಮರಳುತ್ತೇನೆ.