ಆಕಾಶಗಳನ್ನು, ಭೂಮಿಯನ್ನು ಸೃಷ್ಟಿಸಿದ ಹಾಗೂ ಅಂಧಕಾರಗಳನ್ನು ಮತ್ತು ಪ್ರಕಾಶವನ್ನು ಉಂಟುಮಾಡಿದ ಅಲ್ಲಾಹನಿಗೆ ಸರ್ವಸ್ತುತಿಗಳು ಹಾಗಿದ್ದೂ ಸತ್ಯನಿಷೇಧಿಗಳು ಇತರರನ್ನು ತಮ್ಮ ಪರಿಪಾಲಕ ಪ್ರಭುವಿಗೆ ಸಮಾನರೆಂದು ನಿರ್ಣಯಿಸುತ್ತಾರೆ.
ಅವನು ನಿಮ್ಮನ್ನು (ಮೊದಲಬಾರಿ) ಮಣ್ಣಿನಿಂದ ಸೃಷ್ಟಿಸಿದನು. ನಂತರ (ಮರಣದ) ಒಂದು ಅವಧಿಯನ್ನು ನಿಶ್ಚಯಿಸಿದನು ಮತ್ತು ಅವನ ಬಳಿ (ಪುನಃ ಜೀವಂತಗೊಳಿಸುವ) ನಿಶ್ಚಿತಾವಧಿಯಿದೆ. ಹಾಗಿದ್ದೂ ನೀವು ಸಂದೇಹಪಡುತ್ತಿರುವಿರಾ.
ಆಕಾಶಗಳಲ್ಲೂ, ಭೂಮಿಯಲ್ಲೂ ಇರುವ ನೈಜ ಆರಾಧ್ಯನು ಅಲ್ಲಾಹನಾಗಿದ್ದಾನೆ. ನಿಮ್ಮ ರಹಸ್ಯ ಸ್ಥಿತಿಗತಿಗಳನ್ನೂ, ಬಹಿರಂಗ ಸ್ಥಿತಿಗಳನ್ನೂ ಅವನು ಅರಿಯುತ್ತಾನೆ ಮತ್ತು ನೀವು ಮಾಡುತ್ತಿರುವ ಕರ್ಮಗಳನ್ನು ಅವನು ಅರಿಯುತ್ತಾನೆ.
ಅವರಿಗಿಂತ ಮೊದಲು ನಾವು ಅದೆಷ್ಟೋ ತಲೆಮಾರುಗಳನ್ನು ನಾಶಗೊಳಿಸಿದ್ದೇವೆಂಬುದನ್ನು ಅವರು ನೋಡಲಿಲ್ಲವೇ? ನಾವು ಅವರಿಗೆ ನಿಮಗೆ ನೀಡಿರದಂತಹ ಶಕ್ತಿ ಸಾಮರ್ಥ್ಯವನ್ನು ನೀಡಿದ್ದೆವು. ನಾವು ಅವರ ಮೇಲೆ ಧಾರಾಕಾರವಾಗಿ ಮಳೆಯನ್ನು ಸುರಿಸಿದೆವು ಮತ್ತು ಅವರ ತಳಭಾಗದಿಂದ ಕಾಲುವೆಗಳನ್ನು ಹರಿಸಿದೆವು. ನಂತರ ನಾವು ಅವರನ್ನು ಅವರ ಪಾಪಗಳ ನಿಮಿತ್ತ ನಾಶಗೊಳಿಸಿ ಬಿಟ್ಟೆವು ಮತ್ತು ಅವರ ನಂತರ ಬೇರೆ ತಲೆಮಾರುಗಳನ್ನು ಸೃಷ್ಟಿಸಿದೆವು.
(ಓ ಪೈಗಂಗರರೇ) ನಾವು ನಿಮ್ಮ ಮೇಲೆ ಕಾಗದದಲ್ಲಿ ಬರೆದಿರುವ ಯಾವುದದರೂ ಒಂದು ಗ್ರಂಥವನ್ನು ಅವತೀರ್ಣಗೊಳಿಸಿ ನಂತರ ಅವರು ಅದನ್ನು ಸ್ವತಃ ತಮ್ಮ ಕೈಗಳಿಂದ ಸ್ಪರ್ಶಿಸಿ ನೋಡಿದರೂ ‘ಇದು ಸ್ಪಷ್ಟವಾದ ಜಾದುವಲ್ಲದೆ ಇನ್ನೇನೂ ಅಲ್ಲ' ಎಂದೇ ಸತ್ಯನಿಷೇಧಿಗಳು ಹೇಳುವರು.
ಅವರೊಂದಿಗೆ (ಪೈಗಂಬರರೊAದಿಗೆ) ಓರ್ವ ದೇವಚರನನ್ನು ಏಕೆ ಇಳಿಸಲಾಗಿಲ್ಲ ಎಂದು ಅವರು ಹೇಳುತ್ತಾರೆ ಮತ್ತು ನಾವು ದೇವಚರರನ್ನು ಇಳಿಸುತ್ತಿದ್ದರೆ ಅವರ ಕಥೆಯೇ ಮುಗಿಸಲಾಗುತ್ತಿತ್ತು. ನಂತರ ಅವರಿಗೆ ಸ್ವಲ್ಪವೂ ಕಾಲಾವಧಿಯನ್ನು ನೀಡಲಾಗುತ್ತಿರಲಿಲ್ಲ.