Check out the new design

আল-কোৰআনুল কাৰীমৰ অৰ্থানুবাদ - কানাড়া অনুবাদ- বশীৰ মিছুৰী * - অনুবাদসমূহৰ সূচীপত্ৰ


অৰ্থানুবাদ ছুৰা: আল-আ'ৰাফ   আয়াত:

ಅಲ್- ಅಅ್ ರಾಫ್

الٓمّٓصٓ ۟ۚ
ಅಲಿಫ್, ಲಾಮ್, ಮೀಮ್, ಸ್ವಾದ್
আৰবী তাফছীৰসমূহ:
كِتٰبٌ اُنْزِلَ اِلَیْكَ فَلَا یَكُنْ فِیْ صَدْرِكَ حَرَجٌ مِّنْهُ لِتُنْذِرَ بِهٖ وَذِكْرٰی لِلْمُؤْمِنِیْنَ ۟
ಇದು ನಿಮ್ಮೆಡೆಗೆ ಅವತೀರ್ಣ ಗೊಳಿಸಲಾದ ದಿವ್ಯ ಗ್ರಂಥವಾಗಿದೆ. ಇದರ ಮೂಲಕ ನೀವು ಎಚ್ಚರಿಕೆ ನೀಡಲೆಂದಾಗಿದೆ. ಆದ್ದರಿಂದ ನಿಮ್ಮ ಹೃದಯದಲ್ಲಿ ಇದರ ನಿಮಿತ್ತ ಯಾವುದೇ ಇಕ್ಕಟ್ಟುಂಟಾಗದಿರಲಿ. ಇದು ಸತ್ಯವಿಶ್ವಾಸಿಗಳಿಗೆ ಉಪದೇಶವಾಗಿದೆ.
আৰবী তাফছীৰসমূহ:
اِتَّبِعُوْا مَاۤ اُنْزِلَ اِلَیْكُمْ مِّنْ رَّبِّكُمْ وَلَا تَتَّبِعُوْا مِنْ دُوْنِهٖۤ اَوْلِیَآءَ ؕ— قَلِیْلًا مَّا تَذَكَّرُوْنَ ۟
ನಿಮ್ಮ ಪ್ರಭುವಿನ ಕಡೆಯಿಂದ ಅವತೀರ್ಣಗೊಳಿಸಲಾಗುವುದನ್ನು ನೀವು ಅನುಸರಿಸಿರಿ. ಅವನ ಹೊರತು ಇತರ ಮಿಥ್ಯ ನಾಯಕರನ್ನು ಅನುಸರಿಸಬೇಡಿರಿ. ನೀವು ಉಪದೇಶವನ್ನು ಅಲ್ಪವೇ ಸ್ವೀಕರಿಸುತ್ತೀರಿ.
আৰবী তাফছীৰসমূহ:
وَكَمْ مِّنْ قَرْیَةٍ اَهْلَكْنٰهَا فَجَآءَهَا بَاْسُنَا بَیَاتًا اَوْ هُمْ قَآىِٕلُوْنَ ۟
ಮತ್ತು ಅದೆಷ್ಟೋ ನಾಡುಗಳನ್ನು ನಾವು ನಾಶಗೊಳಿಸಿದ್ದೇವೆ ಮತ್ತು ರಾತ್ರಿ ವೇಳೆಯಲ್ಲಿ ಅಥವಾ ಅವರು ಮಧ್ಯಾಹ್ನದ ವೇಳೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾಗ ಅವರ ಮೇಲೆ ನಮ್ಮ ಶಿಕ್ಷೆಯು ಬಂದೆರಗಿಬಿಟ್ಟಿತು.
আৰবী তাফছীৰসমূহ:
فَمَا كَانَ دَعْوٰىهُمْ اِذْ جَآءَهُمْ بَاْسُنَاۤ اِلَّاۤ اَنْ قَالُوْۤا اِنَّا كُنَّا ظٰلِمِیْنَ ۟
ನಮ್ಮ ಶಿಕ್ಷೆಯು ಅವರ ಮೇಲೆ ಬಂದಾಗ ಅವರ ಆಕ್ರಂದನವು “ನಿಜವಾಗಿಯು ನಾವು ಅಕ್ರಮಿಗಳಾಗಿದ್ದೆವು” ಎಂಬುದರ ಹೊರತು ಬೇರೇನೂ ಆಗಿರಲಿಲ್ಲ.
আৰবী তাফছীৰসমূহ:
فَلَنَسْـَٔلَنَّ الَّذِیْنَ اُرْسِلَ اِلَیْهِمْ وَلَنَسْـَٔلَنَّ الْمُرْسَلِیْنَ ۟ۙ
ಯಾರ ಬಳಿಗೆ ನಾವು ಸಂದೇಶವಾಹಕರನ್ನು ಕಳಿಹಿಸಿರುವೆವೊ ನಾವು ಅವರನ್ನು ಖಂಡಿತ ವಿಚಾರಣೆಗೊಳಪಡಿಸುವೆವು ಮತ್ತು ಸಂದೇಶವಾಹಕರನ್ನೂ ಖಂಡಿತ ವಿಚಾರಣೆಗೊಳಪಡಿಸುವೆವು.
আৰবী তাফছীৰসমূহ:
فَلَنَقُصَّنَّ عَلَیْهِمْ بِعِلْمٍ وَّمَا كُنَّا غَآىِٕبِیْنَ ۟
ಅನಂತರ ನಾವು ಸಂಪೂರ್ಣ ಜ್ಞಾನದೊಂದಿಗೆ ಅವರಿಗೆ ಎಲ್ಲವನ್ನು ವಿವರಿಸಿ ಕೊಡುವೆವು ಮತ್ತು ನಾವೆಂದೂ ಅನುಪಸ್ಥಿತರಾಗಿರಲಿಲ್ಲ.
আৰবী তাফছীৰসমূহ:
وَالْوَزْنُ یَوْمَىِٕذِ ١لْحَقُّ ۚ— فَمَنْ ثَقُلَتْ مَوَازِیْنُهٗ فَاُولٰٓىِٕكَ هُمُ الْمُفْلِحُوْنَ ۟
ಅಂದು ಕರ್ಮಗಳನ್ನು ನ್ಯಾಯೋಚಿತವಾಗಿ ತೂಗಲಾಗುವುದು ಸತ್ಯವಾಗಿದೆ ಮತ್ತು ಯಾವ ವ್ಯಕ್ತಿಯ ಕರ್ಮ ತಕ್ಕಡಿಯು ಭಾರವಾಗಿರುವುದೋ ಅವರೇ ವಿಜಯಗಳಿಸುವರು.
আৰবী তাফছীৰসমূহ:
وَمَنْ خَفَّتْ مَوَازِیْنُهٗ فَاُولٰٓىِٕكَ الَّذِیْنَ خَسِرُوْۤا اَنْفُسَهُمْ بِمَا كَانُوْا بِاٰیٰتِنَا یَظْلِمُوْنَ ۟
ಮತ್ತು ಯಾವ ವ್ಯಕ್ತಿಯ ತಕ್ಕಡಿಯು ಹಗುರವಾಗಿರುವುದೋ ಅವರೆ ಸ್ವತಃ ತಮ್ಮನ್ನು ನಷ್ಟಕ್ಕೀಡು ಮಾಡಿದವರಾಗಿದ್ದಾರೆ. ಇದು ನಮ್ಮ ದೃಷ್ಟಾಂತಗಳೊAದಿಗೆ ಅವರು ಅತಿಕ್ರಮವನ್ನು ತೋರಿಸುತ್ತಿದ್ದುದರ ನಿಮಿತ್ತವಾಗಿದೆ.
আৰবী তাফছীৰসমূহ:
وَلَقَدْ مَكَّنّٰكُمْ فِی الْاَرْضِ وَجَعَلْنَا لَكُمْ فِیْهَا مَعَایِشَ ؕ— قَلِیْلًا مَّا تَشْكُرُوْنَ ۟۠
ಮತ್ತು ನಿಸ್ಸಂದೇಹವಾಗಿಯೂ ನಾವು ನಿಮಗೆ ಭೂಮಿಯಲ್ಲಿ ವಾಸಸ್ಥಾನವನ್ನು ಮತ್ತು ಅದರಲ್ಲಿ ನಿಮಗೆ ಜೀವನೋಪಾಯಗಳನ್ನು ಮಾಡಿಕೊಟ್ಟೆವು ಆದರೆ ನೀವು ಅತ್ಯಲ್ಪವೇ ಕೃತಜ್ಞತೆ ತೋರುತ್ತೀರಿ.
আৰবী তাফছীৰসমূহ:
وَلَقَدْ خَلَقْنٰكُمْ ثُمَّ صَوَّرْنٰكُمْ ثُمَّ قُلْنَا لِلْمَلٰٓىِٕكَةِ اسْجُدُوْا لِاٰدَمَ ۖۗ— فَسَجَدُوْۤا اِلَّاۤ اِبْلِیْسَ ؕ— لَمْ یَكُنْ مِّنَ السّٰجِدِیْنَ ۟
ಖಂಡಿತವಾಗಿಯು ನಾವು ನಿಮ್ಮನ್ನು ಸೃಷ್ಟಿಸಿದೆವು ಮತ್ತು ನಿಮಗೆ ರೂಪವನ್ನು ನೀಡಿದೆವು. ನಂತರ ನಾವು ಆದಮರಿಗೆ ಸಾಷ್ಟಾಂಗವೆರಗಿರಿ. ಎಂದು ದೇವಚರರೊಂದಿಗೆ ಹೇಳಿದೆವು. ಆಗ ಅವರು ಸಾಷ್ಟಾಂಗವೆರಗಿದರು,; ಇಬ್ಲೀಸನ ಹೊರತು. ಅವನು ಸಾಷ್ಟಾಂಗವೆರಗುವವರಲ್ಲಿ ಸೇರಲಿಲ್ಲ.
আৰবী তাফছীৰসমূহ:
قَالَ مَا مَنَعَكَ اَلَّا تَسْجُدَ اِذْ اَمَرْتُكَ ؕ— قَالَ اَنَا خَیْرٌ مِّنْهُ ۚ— خَلَقْتَنِیْ مِنْ نَّارٍ وَّخَلَقْتَهٗ مِنْ طِیْنٍ ۟
ಅಲ್ಲಾಹನು ಹೇಳಿದನು: ನಾನು ನಿನಗೆ ಆಜ್ಞೆ ನೀಡಿರುವಾಗ ನೀನು ಸಾಷ್ಟಾಂಗವೆರಗದಿರಲು ನಿನಗೆ ಅದ್ಯಾವ ವಸ್ತು ತಡೆಯಿತು; ಅವನು ಹೇಳಿದನು: ನಾನು ಅವನಿಗಿಂತಲು ಉತ್ತಮನಾಗಿದ್ದೇನೆ. ನೀನು ನನ್ನನ್ನು ಅಗ್ನಿಯಿಂದ ಸೃಷ್ಟಿಸಿರುವೆ ಮತ್ತು ಅವನನ್ನು ಮಣ್ಣಿನಿಂದ ಸೃಷ್ಟಿಸಿರುವೆ.
আৰবী তাফছীৰসমূহ:
قَالَ فَاهْبِطْ مِنْهَا فَمَا یَكُوْنُ لَكَ اَنْ تَتَكَبَّرَ فِیْهَا فَاخْرُجْ اِنَّكَ مِنَ الصّٰغِرِیْنَ ۟
ಅಲ್ಲಾಹನು ಹೇಳಿದನು: ನೀನು ಇಲ್ಲಿಂದ (ಈ ಸ್ವರ್ಗದಿಂದ) ಇಳಿದುಬಿಡು. ಆಕಾಶದಲ್ಲಿದ್ದುಕೊಂಡು ನಿನಗೆ ಅಹಂಕಾರ ತೋರಲು ಯಾವುದೇ ಹಕ್ಕಿರುವುದಿಲ್ಲ. ನೀನು ತೊಲಗು, ನಿಸ್ಸಂಶಯವಾಗಿಯು ನೀನು ನಿಂದ್ಯರಲ್ಲಿ ಸೇರಿರುವೆ.
আৰবী তাফছীৰসমূহ:
قَالَ اَنْظِرْنِیْۤ اِلٰی یَوْمِ یُبْعَثُوْنَ ۟
ಜನರನ್ನು ಪುನರುತ್ಥಾನಗೊಳಿಸುವವರೆಗೆ ನೀನು ನನಗೆ ಕಾಲವಕಾಶವನ್ನು ನೀಡು ಎಂದು ಕೇಳಿದನು.
আৰবী তাফছীৰসমূহ:
قَالَ اِنَّكَ مِنَ الْمُنْظَرِیْنَ ۟
ಅಲ್ಲಾಹನು ಹೇಳಿದನು: ನಿನಗೆ ಕಾಲಾವಕಾಶ ನೀಡಲಾಗಿದೆ.
আৰবী তাফছীৰসমূহ:
قَالَ فَبِمَاۤ اَغْوَیْتَنِیْ لَاَقْعُدَنَّ لَهُمْ صِرَاطَكَ الْمُسْتَقِیْمَ ۟ۙ
ಆಗ ಅವನು ಹೇಳಿದನು: ನೀನು ನನ್ನನ್ನು ಮಾರ್ಗ ಭ್ರಷ್ಟಗೊಳಿಸಿರುವುದರಿಂದ ನಾನು ಆಣೆ ಹಾಕುತ್ತೇನೆ, ನಿನ್ನ ಋಜುವಾದ ಮಾರ್ಗದಲ್ಲಿ ಮಾನವರಿಗಾಗಿ ಹೊಂಚು ಹಾಕಿ ಕುಳಿತುಕೊಳ್ಳುವೆನು.
আৰবী তাফছীৰসমূহ:
ثُمَّ لَاٰتِیَنَّهُمْ مِّنْ بَیْنِ اَیْدِیْهِمْ وَمِنْ خَلْفِهِمْ وَعَنْ اَیْمَانِهِمْ وَعَنْ شَمَآىِٕلِهِمْ ؕ— وَلَا تَجِدُ اَكْثَرَهُمْ شٰكِرِیْنَ ۟
ಅನಂತರ ಅವರ ಮುಂದಿನಿAದಲೂ, ಅವರ ಹಿಂದಿನಿAದಲೂ, ಅವರ ಬಲಗಡೆಯಿಂದಲೂ, ಅವರ ಎಡಗಡೆಯಿಂದಲೂ ನಾನು ಅವರ ಮೇಲೆ ಮುಗಿ ಬೀಳುವೆನು. ಆಗ ನೀನು ಅವರ ಪೈಕಿ ಹೆಚ್ಚಿನವರನ್ನು ಕೃತಜ್ಞರನ್ನಾಗಿ ಕಾಣಲಾರೆ.
আৰবী তাফছীৰসমূহ:
قَالَ اخْرُجْ مِنْهَا مَذْءُوْمًا مَّدْحُوْرًا ؕ— لَمَنْ تَبِعَكَ مِنْهُمْ لَاَمْلَـَٔنَّ جَهَنَّمَ مِنْكُمْ اَجْمَعِیْنَ ۟
ಅಲ್ಲಾಹನು ಹೇಳಿದನು: (ಓ ಇಬ್ಲೀಸ್) ನೀನು ಇಲ್ಲಿಂದ ಅಪಮಾನಿತನಾಗಿ, ಬಹಿಷ್ಕೃತನಾಗಿ ತೊಲಗು. ಅವರ ಪೈಕಿ ಯಾರು ನಿನ್ನನ್ನು ಅನುಸರಿಸುತ್ತಾನೋ ಖಂಡಿತವಾಗಿಯು ನಾನು ನಿಮ್ಮೆಲ್ಲರನ್ನು ಸೇರಿಸಿ ನರಕವನ್ನು ತುಂಬುವೆನು.
আৰবী তাফছীৰসমূহ:
وَیٰۤاٰدَمُ اسْكُنْ اَنْتَ وَزَوْجُكَ الْجَنَّةَ فَكُلَا مِنْ حَیْثُ شِئْتُمَا وَلَا تَقْرَبَا هٰذِهِ الشَّجَرَةَ فَتَكُوْنَا مِنَ الظّٰلِمِیْنَ ۟
ಅಲ್ಲಾಹನು ಹೇಳಿದನು: ಓ ಆದಮ್, ನೀವು ಮತ್ತು ನಿಮ್ಮ ಪತ್ನಿಯು ಸ್ವರ್ಗದಲ್ಲಿ ನೆಮ್ಮದಿಯಿಂದ ವಾಸಿಸಿರಿ ಮತ್ತು ನೀವು ಇಚ್ಛಿಸುವ ಕಡೆಗಳಿಂದ ತಿನ್ನಿರಿ ಮತ್ತು ಆ ಮರದ ಸಮೀಪಕ್ಕೂ ಸುಳಿಯಬೇಡಿರಿ. ಅನ್ಯಥಾ ನೀವು ಅಕ್ರಮಿಗಳಲ್ಲಿ ಸೇರಿ ಬಿಡುವಿರಿ.
আৰবী তাফছীৰসমূহ:
فَوَسْوَسَ لَهُمَا الشَّیْطٰنُ لِیُبْدِیَ لَهُمَا مَا وٗرِیَ عَنْهُمَا مِنْ سَوْاٰتِهِمَا وَقَالَ مَا نَهٰىكُمَا رَبُّكُمَا عَنْ هٰذِهِ الشَّجَرَةِ اِلَّاۤ اَنْ تَكُوْنَا مَلَكَیْنِ اَوْ تَكُوْنَا مِنَ الْخٰلِدِیْنَ ۟
ನಂತರ ಅವರ ಪರಸ್ಪರ ಮರೆಮಾಚಿರುವ ಅವರ ಗುಹ್ಯಾಂಗಗಳನ್ನು ಅವರಿಬ್ಬರ ಮುಂದೆ ಪ್ರಕಟಗೊಳಿಸಲು ಶೈತಾನನು ಅವರಿಬ್ಬರ ಹೃದಯದಲ್ಲಿ ದುಷ್ಪೆçÃರಣೆಯನ್ನು ಹಾಕಿದನು. ಮತ್ತು ಹೇಳಿದನು: ನಿಮ್ಮ ಪ್ರಭು ನಿಮ್ಮಿಬ್ಬರನ್ನು ಈ ಮರದಿಂದ ತಡೆದಿರುವುದು ನೀವು ಮಲಕ್‌ಗಳಾಗಿ ಬಿಡಬಾರದು ಅಥವಾ ಶಾಶ್ವತವಾಗಿ ವಾಸಿಸಬಾರದೆಂದಾಗಿದೆ.
আৰবী তাফছীৰসমূহ:
وَقَاسَمَهُمَاۤ اِنِّیْ لَكُمَا لَمِنَ النّٰصِحِیْنَ ۟ۙ
ಖಂಡಿತವಾಗಿಯೂ ನಾನು ನಿಮ್ಮಿಬ್ಬರ ಹಿತಕಾಂಕ್ಷಿಯಾಗಿರುವೆನೆAದು ಅವನು ಅವರ ಮುಂದೆ ಆಣೆಯಿಟ್ಟು ಹೇಳಿದನು.
আৰবী তাফছীৰসমূহ:
فَدَلّٰىهُمَا بِغُرُوْرٍ ۚ— فَلَمَّا ذَاقَا الشَّجَرَةَ بَدَتْ لَهُمَا سَوْاٰتُهُمَا وَطَفِقَا یَخْصِفٰنِ عَلَیْهِمَا مِنْ وَّرَقِ الْجَنَّةِ ؕ— وَنَادٰىهُمَا رَبُّهُمَاۤ اَلَمْ اَنْهَكُمَا عَنْ تِلْكُمَا الشَّجَرَةِ وَاَقُلْ لَّكُمَاۤ اِنَّ الشَّیْطٰنَ لَكُمَا عَدُوٌّ مُّبِیْنٌ ۟
ಹೀಗೆ ಅವನು ಅವರಿಬ್ಬರನ್ನೂ ಮೋಸದಿಂದ ತನ್ನ ಧಾಟಿಗೆ ತಂದನು. ಅವರಿಬ್ಬರೂ ಕೊನೆಗೆ ಆ ಮರದಿಂದ ರುಚಿಯನ್ನು ಸವಿದಾಗ ಅವರ ಗುಹ್ಯಾಂಗಗಳು ಅವರ ಮುಂದೆ ಪ್ರಕಟವಾದವು ಮತ್ತು ಅವರಿಬ್ಬರೂ ಸ್ವರ್ಗದ ಎಲೆಗಳಿಂದ ತಮ್ಮನ್ನು ಮರೆಮಾಚತೊಡಗಿದರು. ಮತ್ತು ಅವರ ಪ್ರಭು ಅವರನ್ನು ಕರೆದನು: ನಾನು ನಿಮ್ಮನ್ನು ಆ ಮರದಿಂದ ತಡೆದಿರಲಿಲ್ಲವೇ? ಮತ್ತು ಶೈತಾನನು ನಿಮ್ಮ ಪ್ರತ್ಯಕ್ಷ ಶತ್ರುವಾಗಿದ್ದಾನೆಂದು ನಾನು ನಿಮ್ಮೊಂದಿಗೆ ಹೇಳಿರಲಿಲ್ಲವೇ?
আৰবী তাফছীৰসমূহ:
قَالَا رَبَّنَا ظَلَمْنَاۤ اَنْفُسَنَا ٚ— وَاِنْ لَّمْ تَغْفِرْ لَنَا وَتَرْحَمْنَا لَنَكُوْنَنَّ مِنَ الْخٰسِرِیْنَ ۟
ಅವರಿಬ್ಬರೂ ಪ್ರಾರ್ಥಿಸಿದರು: ಓ ನಮ್ಮ ಪ್ರಭೂ, ನಾವು ನಮಗೇ ಆತ್ಮ ದ್ರೋಹ ಮಾಡಿರುವೆವು. ನೀನು ನಮಗೆ ಕ್ಷಮಿಸದಿದ್ದರೆ ಮತ್ತು ನಮ್ಮ ಮೇಲೆ ಕರುಣೆ ತೋರದಿದ್ದರೆ ಖಂಡಿತವಾಗಿಯು ನಾವು ನಷ್ಟ ಹೊಂದುವವರಲ್ಲಾಗುವೆವು.
আৰবী তাফছীৰসমূহ:
قَالَ اهْبِطُوْا بَعْضُكُمْ لِبَعْضٍ عَدُوٌّ ۚ— وَلَكُمْ فِی الْاَرْضِ مُسْتَقَرٌّ وَّمَتَاعٌ اِلٰی حِیْنٍ ۟
ಅವನು ಹೇಳಿದನು: ನೀವು (ಸ್ವರ್ಗದಿಂದ) ಇಳಿದು ಹೋಗಿರಿ. ನೀವು ಪರಸ್ಪರ ಶತ್ರುಗಳಾಗಿರುವಿರಿ. ನಿಮಗೆ ಭೂಮಿಯಲ್ಲಿ ವಾಸಸ್ಥಳವಿರುವುದು ಮತ್ತು ಒಂದು ನಿರ್ದಿಷ್ಟ ಕಾಲಾವಧಿಯವರೆಗೆ ಸುಖ ಭೋಗವಿರುವುದು.
আৰবী তাফছীৰসমূহ:
قَالَ فِیْهَا تَحْیَوْنَ وَفِیْهَا تَمُوْتُوْنَ وَمِنْهَا تُخْرَجُوْنَ ۟۠
ಅವನು ಹೇಳಿದನು: ಅಲ್ಲೇ (ಭೂಮಿಯಲ್ಲೇ) ನೀವು ಜೀವನ ಮಾಡುವಿರಿ ಮತ್ತು ಅಲ್ಲೇ ಮರÀಣ ಹೊಂದುವಿರಿ. ಮತ್ತು ಅಲ್ಲಿಂದಲೇ ನಿಮ್ಮನ್ನು ಪುನರುತ್ಥಾನದದಿನ ಹೊರತರಲಾಗುವುದು.
আৰবী তাফছীৰসমূহ:
یٰبَنِیْۤ اٰدَمَ قَدْ اَنْزَلْنَا عَلَیْكُمْ لِبَاسًا یُّوَارِیْ سَوْاٰتِكُمْ وَرِیْشًا ؕ— وَلِبَاسُ التَّقْوٰی ۙ— ذٰلِكَ خَیْرٌ ؕ— ذٰلِكَ مِنْ اٰیٰتِ اللّٰهِ لَعَلَّهُمْ یَذَّكَّرُوْنَ ۟
ಓ ಆದಮ್‌ನ ಸಂತತಿಗಳೇ, ನಿಮ್ಮ ಗುಹ್ಯಾಂಗಗಳನ್ನು ಮರೆಮಾಚಲಿಕ್ಕೂ ಮತ್ತು ಅಲಂಕಾರದ ಸಾಧನವನ್ನಾಗಿಯೂ ನಾವು ನಿಮ್ಮ ಮೇಲೆ ಉಡುಪನ್ನು ಇಳಿಸಿದ್ದೇವೆ. ಮತ್ತು ಭಯಭಕ್ತಿಯ ಉಡುಪು ಅತ್ಯುತ್ತಮವಾದುದು. ಇದು ಅಲ್ಲಾಹನ ದೃಷ್ಟಾಂತಗಳಲ್ಲಿ ಸೇರಿದ್ದಾಗಿದೆ. ಇದು ಜನರು ಸ್ಮರಿಸಿಕೊಳ್ಳಲ್ಲೆಂದಾಗಿದೆ.
আৰবী তাফছীৰসমূহ:
یٰبَنِیْۤ اٰدَمَ لَا یَفْتِنَنَّكُمُ الشَّیْطٰنُ كَمَاۤ اَخْرَجَ اَبَوَیْكُمْ مِّنَ الْجَنَّةِ یَنْزِعُ عَنْهُمَا لِبَاسَهُمَا لِیُرِیَهُمَا سَوْاٰتِهِمَا ؕ— اِنَّهٗ یَرٰىكُمْ هُوَ وَقَبِیْلُهٗ مِنْ حَیْثُ لَا تَرَوْنَهُمْ ؕ— اِنَّا جَعَلْنَا الشَّیٰطِیْنَ اَوْلِیَآءَ لِلَّذِیْنَ لَا یُؤْمِنُوْنَ ۟
ಓ ಆದಮ್ ಸಂತತಿಗಳೇ ಶೈತಾನನು ನಿಮ್ಮ ಮಾತಾಪಿತರನ್ನು ಒಬ್ಬರ ಮುಂದೆ ಇನ್ನೊಬ್ಬರ ಗುಹ್ಯಾಂಗಗಳನ್ನು ಗೋಚರಿಸುವಂತೆ ಮಾಡಿ, ಸ್ವರ್ಗದಿಂದ ಹೊರಗಟ್ಟಿದಂತೆ ನಿಮ್ಮನ್ನೂ ದಾರಿಗೆಡಿಸದಿರಲಿ. ಖಂಡಿತವಾಗಿಯು ಅವನು ಮತ್ತು ಅವನ ಸೈನ್ಯದವರು ನೀವು ಅವರನ್ನು ನೋಡದ ಸ್ಥಿತಿಯಲ್ಲಿ ನಿಮ್ಮನ್ನು ನೋಡುತ್ತಾರೆ. ನಾವು ಶೈತಾನರನ್ನು ಸತ್ಯವಿಶ್ವಾಸವಿಡದಂತಹ ಜನರಿಗೆ ಆಪ್ತಮಿತ್ರರನ್ನಾಗಿ ಮಾಡಿದ್ದೇವೆ.
আৰবী তাফছীৰসমূহ:
وَاِذَا فَعَلُوْا فَاحِشَةً قَالُوْا وَجَدْنَا عَلَیْهَاۤ اٰبَآءَنَا وَاللّٰهُ اَمَرَنَا بِهَا ؕ— قُلْ اِنَّ اللّٰهَ لَا یَاْمُرُ بِالْفَحْشَآءِ ؕ— اَتَقُوْلُوْنَ عَلَی اللّٰهِ مَا لَا تَعْلَمُوْنَ ۟
ಅವರು ಯಾವುದಾದರು ನೀಚ ಕೃತ್ಯವನ್ನು ಮಾಡಿದರೆ ಹೇಳುತ್ತಾರೆ: ನಾವು ನಮ್ಮ ಪೂರ್ವಿಕರನ್ನು ಹೀಗೆ ಮಾಡುತ್ತಿರುವುದಾಗಿ ಕಂಡಿದ್ದೇವೆ ಮತ್ತು ಅಲ್ಲಾಹನು ನಮಗೆ ಇದರ ಆಜ್ಞೆಯನ್ನು ನೀಡಿದ್ದಾನೆ. ನೀವು ಹೇಳಿರಿ: ಅಲ್ಲಾಹನು ನೀಚ ಕೃತ್ಯಗಳ ಆದೇಶ ನೀಡುವುದಿಲ್ಲ. ನಿಮಗೆ ಅರಿವಿಲ್ಲದ್ದನ್ನು ನೀವು ಅಲ್ಲಾಹನ ಹೆಸರಿನಲ್ಲಿ ಹೇಳುತ್ತಿರುವಿರಾ?
আৰবী তাফছীৰসমূহ:
قُلْ اَمَرَ رَبِّیْ بِالْقِسْطِ ۫— وَاَقِیْمُوْا وُجُوْهَكُمْ عِنْدَ كُلِّ مَسْجِدٍ وَّادْعُوْهُ مُخْلِصِیْنَ لَهُ الدِّیْنَ ؕ۬— كَمَا بَدَاَكُمْ تَعُوْدُوْنَ ۟ؕ
ಹೇಳಿರಿ: ನನ್ನ ಪ್ರಭುವು ನ್ಯಾಯವನ್ನು ಪಾಲಿಸಬೇಕೆಂದು ನನಗೆ ಆದೇಶಿಸಿದ್ದಾನೆ. ಪ್ರತಿಯೊಂದು ನಮಾಜಿನ ವೇಳೆಯಲ್ಲಿ ನೀವು ಏಕಾಗ್ರಚಿತ್ತರಾಗಿ ಮುಖವನ್ನು ಕಿಬ್ಲದೆಡೆಗೆ ತಿರುಗಿಸಿರಿ ಮತ್ತು ಆರಾಧನೆಯನ್ನು ಅವನಿಗೆ ಮಿಸಲಿಟ್ಟು ಅವನನ್ನು ಪ್ರಾರ್ಥಿಸಿರಿ. ನಿಮ್ಮನ್ನು ಅವನು ಮೊದಲ ಬಾರಿ ಸೃಷ್ಟಿಸಿದಂತೆ (ಮರಣದ ಬಳಿಕ) ನೀವು ಪುನಃ ಸೃಷ್ಟಿಸಲಾಗುವಿರಿ.
আৰবী তাফছীৰসমূহ:
فَرِیْقًا هَدٰی وَفَرِیْقًا حَقَّ عَلَیْهِمُ الضَّلٰلَةُ ؕ— اِنَّهُمُ اتَّخَذُوا الشَّیٰطِیْنَ اَوْلِیَآءَ مِنْ دُوْنِ اللّٰهِ وَیَحْسَبُوْنَ اَنَّهُمْ مُّهْتَدُوْنَ ۟
ಒಂದು ಪಂಗಡವನ್ನು ಅವನು ಸನ್ಮಾರ್ಗಕ್ಕೆ ಸೇರಿಸಿದನು. ಮತ್ತೊಂದು ಪಂಗಡಕ್ಕೆ ಪಥಭ್ರಷ್ಟತೆಯು ನಿಜಗೊಂಡಿದೆ. ಅವರು ಅಲ್ಲಾಹನನ್ನು ಬಿಟ್ಟು ಶೈತಾನರನ್ನು ಮಿತ್ರರನ್ನಾಗಿ ಮಾಡಿಕೊಂಡಿದ್ದಾರೆ ಮತ್ತು ಅವರು ತಾವು ಸನ್ಮಾರ್ಗದಲ್ಲಿದ್ದೇವೆಂದು ಭಾವಿಸುತ್ತಾರೆ.
আৰবী তাফছীৰসমূহ:
یٰبَنِیْۤ اٰدَمَ خُذُوْا زِیْنَتَكُمْ عِنْدَ كُلِّ مَسْجِدٍ وَّكُلُوْا وَاشْرَبُوْا وَلَا تُسْرِفُوْا ؕۚ— اِنَّهٗ لَا یُحِبُّ الْمُسْرِفِیْنَ ۟۠
ಓ ಆದಮ್ ಸಂತತಿಗಳೇ, ನೀವು ಪ್ರತಿಯೊಂದು ನಮಾಜಿನ ಸಮಯದಲ್ಲಿ ನಿಮ್ಮ ವಸ್ತಾçಲಂಕಾರಗಳನ್ನು ಧರಿಸಿಕೊಳ್ಳಿರಿ. ನೀವು ಉಣ್ಣಿರಿ ಹಾಗೂ ಕುಡಿಯಿರಿ ಮತ್ತು ದುರ್ವ್ಯಯ ಮಾಡಬೇಡಿರಿ. ನಿಸ್ಸಂಶಯವಾಗಿಯು ಅಲ್ಲಾಹನು ದುರ್ವ್ಯಯ ಮಾಡುವವರನ್ನು ಇಷ್ಟಪಡುವುದಿಲ್ಲ.
আৰবী তাফছীৰসমূহ:
قُلْ مَنْ حَرَّمَ زِیْنَةَ اللّٰهِ الَّتِیْۤ اَخْرَجَ لِعِبَادِهٖ وَالطَّیِّبٰتِ مِنَ الرِّزْقِ ؕ— قُلْ هِیَ لِلَّذِیْنَ اٰمَنُوْا فِی الْحَیٰوةِ الدُّنْیَا خَالِصَةً یَّوْمَ الْقِیٰمَةِ ؕ— كَذٰلِكَ نُفَصِّلُ الْاٰیٰتِ لِقَوْمٍ یَّعْلَمُوْنَ ۟
ಹೇಳಿರಿ: ಅಲ್ಲಾಹನು ತನ್ನ ದಾಸರಿಗಾಗಿ ಉಂಟು ಮಾಡಿರುವ ಅಲಂಕಾರ ವಸ್ತುಗಳನ್ನೂ, ಉತ್ತಮ ಅಹಾರಗಳನ್ನೂ ನಿಷಿದ್ಧಗೊಳಿಸಿರುವವನಾರು? ಹೇಳಿರಿ: ಈ ಅನುಗ್ರಹಗಳು ಐಹಿಕ ಜೀವನದಲ್ಲಿ ಸತ್ಯವಿಶ್ವಾಸಿಗಳಿಗೆ ಸೇರಿವೆ. ಮತ್ತು ಪುನರುತ್ಥಾನದ ದಿನದಂದು ಅವರಿಗೇ ಸೀಮಿತವಾಗಿರುವುವು. ನಾವು ಇದೇ ಪ್ರಕಾರ ದೃಷ್ಟಾಂತಗಳನ್ನು ವಿವೇಕ ಹೊಂದಿದ ಜನರಿಗೆ ಸ್ಪಷ್ಟವಾಗಿ ವಿವರಿಸಿಕೊಡುತ್ತೇವೆ.
আৰবী তাফছীৰসমূহ:
قُلْ اِنَّمَا حَرَّمَ رَبِّیَ الْفَوَاحِشَ مَا ظَهَرَ مِنْهَا وَمَا بَطَنَ وَالْاِثْمَ وَالْبَغْیَ بِغَیْرِ الْحَقِّ وَاَنْ تُشْرِكُوْا بِاللّٰهِ مَا لَمْ یُنَزِّلْ بِهٖ سُلْطٰنًا وَّاَنْ تَقُوْلُوْا عَلَی اللّٰهِ مَا لَا تَعْلَمُوْنَ ۟
ಹೇಳಿರಿ: ನನ್ನ ಪ್ರಭುವು ಪ್ರತ್ಯಕ್ಷವಾಗಿರುವ, ಪರೋಕ್ಷವಾಗಿರುವ ಸಕಲ ನೀಚಕೃತ್ಯಗಳನ್ನೂ, ಪಾಪದ ಸಂಗತಿಗಳನ್ನೂ, ಅನ್ಯಾಯವಾಗಿ ದೌರ್ಜನ್ಯವೆಸಗುವುದನ್ನೂ, ಯಾವುದೇ ಆಧಾರವಿಲ್ಲದೇ ಅಲ್ಲಾಹನೊಂದಿಗೆ ಸಹಭಾಗಿಯನ್ನಾಗಿ ನಿಶ್ಚಯಿಸುವುದನ್ನು, ನಿಮಗೆ ಅರಿವಿಲ್ಲದ್ದನ್ನು ಅಲ್ಲಾಹನ ಹೆಸರಿನಲ್ಲಿ ಹೇಳುವುದನ್ನು ನಿಶ್ಚಯವಾಗಿಯು ನಿಷಿದ್ಧಗೊಳಿಸಿದ್ದಾನೆ.
আৰবী তাফছীৰসমূহ:
وَلِكُلِّ اُمَّةٍ اَجَلٌ ۚ— فَاِذَا جَآءَ اَجَلُهُمْ لَا یَسْتَاْخِرُوْنَ سَاعَةً وَّلَا یَسْتَقْدِمُوْنَ ۟
ಪ್ರತಿಯೊಂದು ಸಮುದಾಯಕ್ಕೂ (ಮರಣದ) ಒಂದು ನಿಶ್ಚಿತ ಅವಧಿಯಿದೆ. ಹಾಗೆ ಅವರ ನಿಶ್ಚಿತಾವಧಿಯು ಬಂದರೆ ಅವರಿಗೆ ಒಂದು ಗಳಿಗೆಯಷ್ಟು ಹಿಂದಾಗಲಿಕ್ಕಾಗಲೀ, ಮುಂದಕ್ಕಾಗಲೀ ಸರಿಯಲು ಸಾಧ್ಯವಿಲ್ಲ.
আৰবী তাফছীৰসমূহ:
یٰبَنِیْۤ اٰدَمَ اِمَّا یَاْتِیَنَّكُمْ رُسُلٌ مِّنْكُمْ یَقُصُّوْنَ عَلَیْكُمْ اٰیٰتِیْ ۙ— فَمَنِ اتَّقٰی وَاَصْلَحَ فَلَا خَوْفٌ عَلَیْهِمْ وَلَا هُمْ یَحْزَنُوْنَ ۟
ಓ ಆದಮ್ ಸಂತತಿಗಳೇ, ನಿಮ್ಮ ಬಳಿಗೆ ನನ್ನ ದೃಷ್ಟಾಂತಗಳನ್ನು ವಿವರಿಸಿಕೊಡುತ್ತಾ ನಿಮ್ಮಿಂದಲೇ ಆದ ಸಂದೇಶವಾಹಕರು ಬಂದರೆ ಯಾರು ಭಯಭಕ್ತಿ ಪಾಲಿಸುತ್ತಾನೋ ಮತ್ತು ಸುಧಾರಣೆ ಮಾಡಿಕೊಳ್ಳುತ್ತಾನೋ ಅವರಿಗೆ ಯಾವುದೇ ಭಯವಿರುವುದಿಲ್ಲ. ಮತ್ತು ಅವರು ದುಃಖಿತರಾಗಲಾರರು.
আৰবী তাফছীৰসমূহ:
وَالَّذِیْنَ كَذَّبُوْا بِاٰیٰتِنَا وَاسْتَكْبَرُوْا عَنْهَاۤ اُولٰٓىِٕكَ اَصْحٰبُ النَّارِ ۚ— هُمْ فِیْهَا خٰلِدُوْنَ ۟
ಮತ್ತು ಯಾರು ನಮ್ಮ ಸೂಕ್ತಿ (ನಿಯಮ) ಗಳನ್ನು ನಿಷೇಧಿಸುತ್ತಾರೋ ಮತ್ತು ಅದರ (ಅನುಸರಣೆ ಮಾಡುವುದರ) ವಿರುದ್ಧ ಅಹಂಕಾರ ತೋರಿಸುತ್ತಾರೋ ಅವರು ನರಕವಾಸಿಗಳು. ಮತ್ತು ಅವರು ಅದರಲ್ಲಿ ಶಾಶ್ವತವಾಗಿರುವರು.
আৰবী তাফছীৰসমূহ:
فَمَنْ اَظْلَمُ مِمَّنِ افْتَرٰی عَلَی اللّٰهِ كَذِبًا اَوْ كَذَّبَ بِاٰیٰتِهٖ ؕ— اُولٰٓىِٕكَ یَنَالُهُمْ نَصِیْبُهُمْ مِّنَ الْكِتٰبِ ؕ— حَتّٰۤی اِذَا جَآءَتْهُمْ رُسُلُنَا یَتَوَفَّوْنَهُمْ ۙ— قَالُوْۤا اَیْنَ مَا كُنْتُمْ تَدْعُوْنَ مِنْ دُوْنِ اللّٰهِ ؕ— قَالُوْا ضَلُّوْا عَنَّا وَشَهِدُوْا عَلٰۤی اَنْفُسِهِمْ اَنَّهُمْ كَانُوْا كٰفِرِیْنَ ۟
ಅಲ್ಲಾಹನ ಮೇಲೆ ಸುಳ್ಳನ್ನು ಹೆಣೆದವನಿಗಿಂತ ಅಥವಾ ಅವನ ದೃಷ್ಟಾಂತಗಳನ್ನು ಸುಳ್ಳೆಂದು ವಾದಿಸಿದವನಿಗಿಂತ ದೊಡ್ಡ ಅಕ್ರಮಿ ಇನ್ನಾರಿದ್ದಾನೆ? ಅವರ ವಿಧಿಯಲ್ಲಿ ಬಂದಿರುವ ತಮ್ಮ ಪಾಲನ್ನು ಇಹದಲ್ಲಿ ಪಡೆದುಕೊಳ್ಳಲಿರುವರು. ಕೊನೆಗೆ ಅವರ ಪ್ರಾಣವನ್ನು ವಶಪಡಿಸಿಕೊಳ್ಳಲು ನಮ್ಮ ದೂತರು ಬರುವಾಗ ಹೇಳುವರು: ಅಲ್ಲಾಹನನ್ನು ಬಿಟ್ಟು ನೀವು ಆರಾಧಿಸುತ್ತಿದ್ದವರು ಎಲ್ಲಿರುವರು? ಅವರು ಹೇಳುವರು: ಅವರು ನಮ್ಮಿಂದ ಕಣ್ಮರೆಯಾಗಿದ್ದಾರೆ ಮತ್ತು ತಾವು ಸತ್ಯನಿಷೇಧಿಗಳಾಗಿದ್ದೇವೆಂದು ಅವರು ಸಾಕ್ಷö್ಯವಹಿಸುವರು.
আৰবী তাফছীৰসমূহ:
قَالَ ادْخُلُوْا فِیْۤ اُمَمٍ قَدْ خَلَتْ مِنْ قَبْلِكُمْ مِّنَ الْجِنِّ وَالْاِنْسِ فِی النَّارِ ؕ— كُلَّمَا دَخَلَتْ اُمَّةٌ لَّعَنَتْ اُخْتَهَا ؕ— حَتّٰۤی اِذَا ادَّارَكُوْا فِیْهَا جَمِیْعًا ۙ— قَالَتْ اُخْرٰىهُمْ لِاُوْلٰىهُمْ رَبَّنَا هٰۤؤُلَآءِ اَضَلُّوْنَا فَاٰتِهِمْ عَذَابًا ضِعْفًا مِّنَ النَّارِ ؕ۬— قَالَ لِكُلٍّ ضِعْفٌ وَّلٰكِنْ لَّا تَعْلَمُوْنَ ۟
ಅಲ್ಲಾಹನು ಹೇಳುವನು: ನಿಮಗಿಂತ ಮುಂಚೆ ಗತಿಸಿದ ಯಕ್ಷ ಮತ್ತು ಮನುಷ್ಯ ಸತ್ಯನಿಷೇಧಿ ಸಮುದಾಯದೊಂದಿಗೆ ನೀವು ನರಕವನ್ನು ಪ್ರವೇಶಿಸಿರಿ. ಪ್ರತಿಯೊಂದು ಸಮುದಾಯವು ನರಕವನ್ನು ಪ್ರವೇಶಿಸುವಾಗ ತನಗಿಂತ ಮುಂಚೆ ಬಂದ ಇನ್ನೊಂದು ಸಮುದಾಯವನ್ನು ಶಪಿಸುವುದು ಅವರೆಲ್ಲರನ್ನು ಅಲ್ಲಿ ಒಟ್ಟು ಸೇರಿಸಲಾದಾಗ ಅವರ ಪೈಕಿ ನಂತರ ಬಂದವರು ತಮಗಿಂತ ಮೊದಲು ಬಂದವರ ಕುರಿತು ಹೇಳುವರು: ಓ ನಮ್ಮ ಪ್ರಭು, ನಮ್ಮನ್ನು ದಾರಿಗೆಡಿಸಿದವರು ಇವರೇ. ಆದ್ದರಿಂದ ನೀನು ಅವರಿಗೆ ನರಕದ ಇಮ್ಮಡಿ ಶಿಕ್ಷೆಯನ್ನು ನೀಡು. ಅಲ್ಲಾಹನು ಹೇಳುವನು: ಪ್ರತಿಯೊಬ್ಬರಿಗೂ ಇಮ್ಮಡಿ ಶಿಕ್ಷೆಯಿದೆ. ಆದರೆ ನಿಮಗೆ ಅರಿವಿಲ್ಲ.
আৰবী তাফছীৰসমূহ:
وَقَالَتْ اُوْلٰىهُمْ لِاُخْرٰىهُمْ فَمَا كَانَ لَكُمْ عَلَیْنَا مِنْ فَضْلٍ فَذُوْقُوا الْعَذَابَ بِمَا كُنْتُمْ تَكْسِبُوْنَ ۟۠
ಅವರ ಪೈಕಿ ಮೊದಲಿನವರು ನಂತರ ಬಂದವರೊಡನೆ ಹೇಳುವರು: ಇನ್ನು ನಿಮಗೆ ನಮ್ಮ ಮೇಲೆ ಯಾವುದೇ ಶ್ರೇಷ್ಠತೆಯಿಲ್ಲ. ಆದ್ದರಿಂದ ನೀವು ನಿಮ್ಮ ಗಳಿಕೆಯ ಫಲವಾಗಿ ಶಿಕ್ಷೆಯನ್ನು ಸವಿಯಿರಿ.
আৰবী তাফছীৰসমূহ:
اِنَّ الَّذِیْنَ كَذَّبُوْا بِاٰیٰتِنَا وَاسْتَكْبَرُوْا عَنْهَا لَا تُفَتَّحُ لَهُمْ اَبْوَابُ السَّمَآءِ وَلَا یَدْخُلُوْنَ الْجَنَّةَ حَتّٰی یَلِجَ الْجَمَلُ فِیْ سَمِّ الْخِیَاطِ ؕ— وَكَذٰلِكَ نَجْزِی الْمُجْرِمِیْنَ ۟
ಯಾರು ನಮ್ಮ ದೃಷ್ಟಾಂತಗಳನ್ನು ನಿಷೇಧಿಸಿದರೊ ಮತ್ತು ಅವುಗಳ ವಿರುದ್ಧ ಅಹಂಕಾರ ತೋರಿದರೋ ಅವರಿಗಾಗಿ ಆಕಾಶದ ದ್ವಾರಗಳನ್ನು ತೆರೆಯಲಾಗದು. ಮತ್ತು ಸೂಜಿ ರಂಧ್ರದೊಳಗೆ ಒಂಟೆಯು ಪ್ರವೇಶಿಸುವವರೆಗೆ ಅವರು ಸ್ವರ್ಗವನ್ನು ಪ್ರವೇಶಿಸಲಾರರು. ಮತ್ತು ಅಪರಾಧಿಗಳಿಗೆ ನಾವು ಇದೇ ರೀತಿ ಪ್ರತಿಫಲ ನೀಡುತ್ತೇವೆ.
আৰবী তাফছীৰসমূহ:
لَهُمْ مِّنْ جَهَنَّمَ مِهَادٌ وَّمِنْ فَوْقِهِمْ غَوَاشٍ ؕ— وَكَذٰلِكَ نَجْزِی الظّٰلِمِیْنَ ۟
ಅವರಿಗೆ ನರಕಾಗ್ನಿಯ ಹಾಸಿಗೆಯಿದೆ. ಅವರ ಮೇಲೆ ಅದರದ್ದೇ ಹೊದಿಕೆಗಳೂ ಇರುವುವು. ಅಕ್ರಮಿಗಳಿಗೆ ನಾವು ಇದೇ ರೀತಿ ಪ್ರತಿಫಲ ನೀಡುತ್ತೇವೆ.
আৰবী তাফছীৰসমূহ:
وَالَّذِیْنَ اٰمَنُوْا وَعَمِلُوا الصّٰلِحٰتِ لَا نُكَلِّفُ نَفْسًا اِلَّا وُسْعَهَاۤ ؗ— اُولٰٓىِٕكَ اَصْحٰبُ الْجَنَّةِ ۚ— هُمْ فِیْهَا خٰلِدُوْنَ ۟
ಯಾರು ಸತ್ಯವಿಶ್ವಾಸವಿಟ್ಟು ಸತ್ಕರ್ಮ ಮಾಡಿದರೋ ತಿಳಿದುಕೊಳ್ಳಿರಿ ನಾವು ಯಾವ ವ್ಯಕ್ತಿಗೂ ಅವನ ಸಾಮರ್ಥ್ಯಕ್ಕೆ ಮಿಗಿಲಾಗಿ ಹೊಣೆಯನ್ನು ವಹಿಸಿ ಕೊಡುವುದಿಲ್ಲ. ಅವರೇ ಸ್ವರ್ಗವಾಸಿಗಳಾಗಿದ್ದಾರೆ ಮತ್ತು ಅವರು ಅದರಲ್ಲಿ ಶಾಶ್ವತವಾಗಿರುವರು.
আৰবী তাফছীৰসমূহ:
وَنَزَعْنَا مَا فِیْ صُدُوْرِهِمْ مِّنْ غِلٍّ تَجْرِیْ مِنْ تَحْتِهِمُ الْاَنْهٰرُ ۚ— وَقَالُوا الْحَمْدُ لِلّٰهِ الَّذِیْ هَدٰىنَا لِهٰذَا ۫— وَمَا كُنَّا لِنَهْتَدِیَ لَوْلَاۤ اَنْ هَدٰىنَا اللّٰهُ ۚ— لَقَدْ جَآءَتْ رُسُلُ رَبِّنَا بِالْحَقِّ ؕ— وَنُوْدُوْۤا اَنْ تِلْكُمُ الْجَنَّةُ اُوْرِثْتُمُوْهَا بِمَا كُنْتُمْ تَعْمَلُوْنَ ۟
ಮತ್ತು ಅವರ ಹೃದಯಗಳಲ್ಲಿದ್ದ ದ್ವೇಷವನ್ನು ನಾವು ನೀಗಿಸುವೆವು. ಅವರ ತಳಭಾಗದಿಂದ ಕಾಲುವೆಗಳು ಹರಿಯುತ್ತಿರುವುವು ಮತ್ತು ಅವರು ಹೇಳುವರು: ನಮ್ಮನ್ನು ಈ ಸ್ಥಾನಕ್ಕೆ ತಲುಪಿಸಿದ ಅಲ್ಲಾಹನಿಗೆ ಸರ್ವಸ್ತುತಿ. ಅಲ್ಲಾಹನು ನಮ್ಮನ್ನು ಮಾರ್ಗದರ್ಶನ ಮಾಡದಿರುತ್ತಿದ್ದರೆ ನಾವು ಸನ್ಮಾರ್ಗವನ್ನು ಪಡೆಯುತ್ತಿರಲಿಲ್ಲ. ವಾಸ್ತವದಲ್ಲಿ ನಮ್ಮ ಪ್ರಭುವಿನ ಸಂದೇಶವಾಹಕರು ಸತ್ಯವನ್ನು ತಂದಿದ್ದರು ಮತ್ತು ಅವರೊಂದಿಗೆ ಕರೆದು ಹೇಳಲಾಗುವುದು: 'ನಿಮ್ಮ ಕರ್ಮಗಳ ಪ್ರತಿಫಲವಾಗಿ ನಿಮ್ಮನ್ನು ಈ ಸ್ವರ್ಗದ ಹಕ್ಕುದಾರರನ್ನಾಗಿ ನಿಶ್ಚಯಿಸಲಾಗಿದೆ.
আৰবী তাফছীৰসমূহ:
وَنَادٰۤی اَصْحٰبُ الْجَنَّةِ اَصْحٰبَ النَّارِ اَنْ قَدْ وَجَدْنَا مَا وَعَدَنَا رَبُّنَا حَقًّا فَهَلْ وَجَدْتُّمْ مَّا وَعَدَ رَبُّكُمْ حَقًّا ؕ— قَالُوْا نَعَمْ ۚ— فَاَذَّنَ مُؤَذِّنٌ بَیْنَهُمْ اَنْ لَّعْنَةُ اللّٰهِ عَلَی الظّٰلِمِیْنَ ۟ۙ
ಮತ್ತು ಸ್ವರ್ಗವಾಸಿಗಳು ನರಕವಾಸಿಗಳನ್ನು ಕೂಗಿ ಹೇಳುವರು: ನಮ್ಮ ಪ್ರಭು ನಮ್ಮೊಂದಿಗೆ ಮಾಡಿದ ವಾಗ್ದಾನವು ಸತ್ಯಕ್ಕನುಗುಣವಾಗಿದೆಯೆಂದು ನಾವು ಕಂಡೆವು. ನಿಮ್ಮ ಪ್ರಭು ನಿಮ್ಮೊಂದಿಗೆ ಮಾಡಿದ ವಾಗ್ದಾನವು ಸತ್ಯಕ್ಕನುಗುಣವಾಗಿದೆಯೆಂದು ನೀವು ಕಂಡಿರಾ? ಅವರು ಹೇಳುವರು: 'ಹೌದು'. ಅನಂತರ ಒಬ್ಬ ಕರೆ ನಿಡುವಾತನು ಅವರ ನಡುವೆ ಘೋಷಿಸುವನು: ಅಕ್ರಮಿಗಳ ಮೇಲೆ ಅಲ್ಲಾಹನ ಶಾಪವಿರಲಿ.
আৰবী তাফছীৰসমূহ:
الَّذِیْنَ یَصُدُّوْنَ عَنْ سَبِیْلِ اللّٰهِ وَیَبْغُوْنَهَا عِوَجًا ۚ— وَهُمْ بِالْاٰخِرَةِ كٰفِرُوْنَ ۟ۘ
ಇವರೇ ಅಲ್ಲಾಹನ ಮಾರ್ಗದಿಂದ ಜನರನ್ನು ತಡೆಯುವವರು ಮತ್ತು ವಕ್ರತೆಯನ್ನು ಅರಸುವವರು ಹಾಗು ಪರಲೋಕವನ್ನು ನಿಷೇಧಿಸುವವರಾಗಿದ್ದರು.
আৰবী তাফছীৰসমূহ:
وَبَیْنَهُمَا حِجَابٌ ۚ— وَعَلَی الْاَعْرَافِ رِجَالٌ یَّعْرِفُوْنَ كُلًّا بِسِیْمٰىهُمْ ۚ— وَنَادَوْا اَصْحٰبَ الْجَنَّةِ اَنْ سَلٰمٌ عَلَیْكُمْ ۫— لَمْ یَدْخُلُوْهَا وَهُمْ یَطْمَعُوْنَ ۟
ಆ ಎರಡು ಪಂಗಡಗಳ ನಡುವೆ ಒಂದು ತಡೆಯಿದೆ ಮತ್ತು ಎತ್ತರದ ಸ್ಥಳದಲ್ಲಿ ಕೆಲವು ಜನರಿರುವರು. ಅವರು ಪ್ರತಿಯೊಬ್ಬರನ್ನು ಅವರ ಲಕ್ಷಣದ ಮೂಲಕ ಗುರುತಿಸುವರು ಮತ್ತು ಅವರು ಸ್ವರ್ಗವಾಸಿಗಳನ್ನು ಕರೆದು ಹೇಳುವರು: ನಿಮ್ಮ ಮೇಲೆ ಶಾಂತಿಯಿರಲಿ, ಅವರು (ಎತ್ತರದ ಸ್ಥಳದವರು) ಇನ್ನೂ ಸ್ವರ್ಗವನ್ನು ಪ್ರವೇಶಿಸಿರುವುದಿಲ್ಲ. ಆದರೆ ಅದರ ನಿರೀಕ್ಷೆಯಲ್ಲಿರುವರು.
আৰবী তাফছীৰসমূহ:
وَاِذَا صُرِفَتْ اَبْصَارُهُمْ تِلْقَآءَ اَصْحٰبِ النَّارِ ۙ— قَالُوْا رَبَّنَا لَا تَجْعَلْنَا مَعَ الْقَوْمِ الظّٰلِمِیْنَ ۟۠
ಮತ್ತು ಅವರ ದೃಷ್ಟಿಗಳನ್ನು ನರಕವಾಸಿಗಳೆಡೆಗೆ ತಿರುಗಿಸಲಾದಾಗ ಅವರು ಹೇಳುವರು: ನಮ್ಮ ಪ್ರಭು, ನಮ್ಮನ್ನು ಅಕ್ರಮಿಗಳೊಂದಿಗೆ ಸೇರಿಸದಿರು.
আৰবী তাফছীৰসমূহ:
وَنَادٰۤی اَصْحٰبُ الْاَعْرَافِ رِجَالًا یَّعْرِفُوْنَهُمْ بِسِیْمٰىهُمْ قَالُوْا مَاۤ اَغْنٰی عَنْكُمْ جَمْعُكُمْ وَمَا كُنْتُمْ تَسْتَكْبِرُوْنَ ۟
ಎತ್ತರದ ಸ್ಥಳದವರು ಲಕ್ಷಣದ ಮೂಲಕ ಗುರುತಿಸಬಹುದಾದ ನರಕವಾಸಿಗಳನ್ನು ಕರೆದು ಹೇಳುವರು: ನಿಮ್ಮ ಜನಬಲ ಹಾಗೂ ಪ್ರತಿಷ್ಠೆಯು ನಿಮ್ಮ ಯಾವ ಪ್ರಯೋಜನಕ್ಕೂ ಬರಲಿಲ್ಲ.
আৰবী তাফছীৰসমূহ:
اَهٰۤؤُلَآءِ الَّذِیْنَ اَقْسَمْتُمْ لَا یَنَالُهُمُ اللّٰهُ بِرَحْمَةٍ ؕ— اُدْخُلُوا الْجَنَّةَ لَا خَوْفٌ عَلَیْكُمْ وَلَاۤ اَنْتُمْ تَحْزَنُوْنَ ۟
ಅಲ್ಲಾಹನು ಅವರ ಮೆಲೆ ಕರುಣೆ ತೋರಲಾರನು ಎಂದು ನೀವು ಆಣೆಯಿಟ್ಟು ಹೇಳುತ್ತಿದ್ದುದ್ದು ಈ ಜನರ ಕುರಿತಾಗಿತ್ತೇ? ನಂತರ ಅವರ ಪ್ರಭು ಅವರಿಗೆ ಹೇಳುವನು: ನೀವು ಸ್ವರ್ಗವನ್ನು ಪ್ರವೇಶಿಸಿರಿ. ನಿಮ್ಮ ಮೇಲೆ ಯಾವುದೇ ಭವಿಷ್ಯದ ಭಯವಿಲ್ಲ ಮತ್ತು ಗತಿಸಿ ಹೋಗಿರುವುದರ ವ್ಯಥೆಯಿಲ್ಲ.
আৰবী তাফছীৰসমূহ:
وَنَادٰۤی اَصْحٰبُ النَّارِ اَصْحٰبَ الْجَنَّةِ اَنْ اَفِیْضُوْا عَلَیْنَا مِنَ الْمَآءِ اَوْ مِمَّا رَزَقَكُمُ اللّٰهُ ؕ— قَالُوْۤا اِنَّ اللّٰهَ حَرَّمَهُمَا عَلَی الْكٰفِرِیْنَ ۟ۙ
ಮತ್ತು ನರಕವಾಸಿಗಳು ಸ್ವರ್ಗವಾಸಿಗಳನ್ನು ಕರೆದು ಹೇಳುವರು: ನಮಗೆ ಸ್ವಲ್ಪ ನೀರನ್ನಾದರೂ ಕೊಡಿರಿ ಅಥವಾ ಅಲ್ಲಾಹನು ನಿಮಗೆ ದಯಪಾಲಿಸಿದವುಗಳಿಂದ ಏನನ್ನಾದರು ಕೊಡಿರಿ. ಅವರು ಹೇಳುವರು: ಅಲ್ಲಾಹನು ಅವೆರಡನ್ನು ಸತ್ಯನಿಷೇಧಿಗಳ ಮೇಲೆ ನಿಷಿದ್ಧಗೊಳಿಸಿದ್ದಾನೆ.
আৰবী তাফছীৰসমূহ:
الَّذِیْنَ اتَّخَذُوْا دِیْنَهُمْ لَهْوًا وَّلَعِبًا وَّغَرَّتْهُمُ الْحَیٰوةُ الدُّنْیَا ۚ— فَالْیَوْمَ نَنْسٰىهُمْ كَمَا نَسُوْا لِقَآءَ یَوْمِهِمْ هٰذَا ۙ— وَمَا كَانُوْا بِاٰیٰتِنَا یَجْحَدُوْنَ ۟
ಅವರು ಇಹಲೋಕದಲ್ಲಿ ತಮ್ಮ ಧರ್ಮವನ್ನು ವಿನೋದವನ್ನಾಗಿಯು, ಮೋಜನ್ನಾಗಿಯು ಮಾಡಿದರು ಹಾಗೂ ಐಹಿಕ ಜೀವನಕ್ಕೆ ಮರಳಾದವರಾಗಿದ್ದಾರೆ. ಇಂದಿನ ದಿನವನ್ನು ಅವರು ಮರೆತು ಬಿಟ್ಟಿದ್ದ ಹಾಗೆ ನಾವು ಈ ದಿನ ಅವರನ್ನು ಮರೆತು ಬಿಡುವೆವು. ಏಕೆಂದರೆ ಅವರು ನಮ್ಮ ದೃಷ್ಟಾಂತಗಳನ್ನು ನಿರಾಕರಿಸುತ್ತಿದ್ದರು.
আৰবী তাফছীৰসমূহ:
وَلَقَدْ جِئْنٰهُمْ بِكِتٰبٍ فَصَّلْنٰهُ عَلٰی عِلْمٍ هُدًی وَّرَحْمَةً لِّقَوْمٍ یُّؤْمِنُوْنَ ۟
ಜ್ಞಾನದ ಆಧಾರದಲ್ಲಿ ಸ್ಪಷ್ಟ ಪಡಿಸಿರುವಂತಹ ಒಂದು ಗ್ರಂಥವನ್ನು ಖಂಡಿತವಾಗಿಯು ನಾವು ಅವರ ಬಳಿಗೆ ತಂದೆವು. ಅದು ಸತ್ಯವಿಶ್ವಾಸ ಹೊಂದುವ ಜನರಿಗೆ ಸನ್ಮಾರ್ಗವು, ಕಾರಣ್ಯವು ಆಗಿದೆ.
আৰবী তাফছীৰসমূহ:
هَلْ یَنْظُرُوْنَ اِلَّا تَاْوِیْلَهٗ ؕ— یَوْمَ یَاْتِیْ تَاْوِیْلُهٗ یَقُوْلُ الَّذِیْنَ نَسُوْهُ مِنْ قَبْلُ قَدْ جَآءَتْ رُسُلُ رَبِّنَا بِالْحَقِّ ۚ— فَهَلْ لَّنَا مِنْ شُفَعَآءَ فَیَشْفَعُوْا لَنَاۤ اَوْ نُرَدُّ فَنَعْمَلَ غَیْرَ الَّذِیْ كُنَّا نَعْمَلُ ؕ— قَدْ خَسِرُوْۤا اَنْفُسَهُمْ وَضَلَّ عَنْهُمْ مَّا كَانُوْا یَفْتَرُوْنَ ۟۠
ಅವರು ಅದರ ಪ್ರಳಯದ ಅಂತ್ಯ ಪರಿಣಾಮವನ್ನಲ್ಲದೇ ಇನ್ನೇನಾದರು ನಿರೀಕ್ಷಿಸುತ್ತಿದ್ದಾರೆಯೇ? ಈ ಮುಂಚೆ ಅದನ್ನು ಮರೆತು ಬಿಟ್ಟವರು ಅದರ ಪರಿಣಾಮವು ಪ್ರಕಟವಾಗುವ ದಿನ ಹೇಳುವರು: ನಿಜವಾಗಿಯು ನಮ್ಮ ಪ್ರಭುವಿನ ಸಂದೇಶವಾಹಕರು ಸತ್ಯವನ್ನು ತಂದಿದ್ದರು. ಇನ್ನು ನಮಗಾಗಿ ಶಿಫಾರಸ್ಸು ಮಾಡುವ ಶಿಫಾರಸ್ಸುಗಾರರು ಯಾರಾದರೂ ಇದ್ದಾರೆಯೇ? ಅಥವಾ ನಮ್ಮನ್ನು (ಭೂಲೋಕಕ್ಕೆ) ಮರಳಿ ಕಳುಹಿಸಲಾಗುವುದೇ? ಹಾಗಿದ್ದರೆ ನಾವು ಮುಂಚೆ ಮಾಡುತ್ತಿದ್ದಂತಹ ಕರ್ಮಗಳಿಗೆ ವಿರುದ್ಧವಾದ ಕರ್ಮಗಳನ್ನು ಮಾಡುತ್ತಿದ್ದೆವು. ಖಂಡಿತವಾಗಿಯು ಅವರು ಸ್ವತಃ ತಮ್ಮನ್ನು ನಷ್ಟಕ್ಕೊಳಗಾಗಿಸಿದವರು. ಅವರು ಹೆಣೆಯುತ್ತಿದ್ದುದೆಲ್ಲವೂ ಕಣ್ಮರೆಯಾಗಿಬಿಟ್ಟವು.
আৰবী তাফছীৰসমূহ:
اِنَّ رَبَّكُمُ اللّٰهُ الَّذِیْ خَلَقَ السَّمٰوٰتِ وَالْاَرْضَ فِیْ سِتَّةِ اَیَّامٍ ثُمَّ اسْتَوٰی عَلَی الْعَرْشِ ۫— یُغْشِی الَّیْلَ النَّهَارَ یَطْلُبُهٗ حَثِیْثًا ۙ— وَّالشَّمْسَ وَالْقَمَرَ وَالنُّجُوْمَ مُسَخَّرٰتٍ بِاَمْرِهٖ ؕ— اَلَا لَهُ الْخَلْقُ وَالْاَمْرُ ؕ— تَبٰرَكَ اللّٰهُ رَبُّ الْعٰلَمِیْنَ ۟
ನಿಸ್ಸಂಶಯವಾಗಿಯು ಆಕಾಶಗಳನ್ನು ಮತ್ತು ಭೂಮಿಯನ್ನು ಆರು ದಿನಗಳಲ್ಲಿ ಸೃಷ್ಟಿಸಿದವನು ನಿಮ್ಮ ಪ್ರಭು ಅಲ್ಲಾಹನೆ. ನಂತರ ಅವನು ಸಿಂಹಾಸನದ ಮೇಲೆ ಆರೂಢನಾದನು ಅವನು ಹಗಲನ್ನು ರಾತ್ರಿಯಿಂದ ಮುಚ್ಚುತ್ತಾನೆ ಮತ್ತು ರಾತ್ರಿಯು ಕ್ಷಿಪ್ರಗತಿಯಲ್ಲಿ ಹಗಲನ್ನು ಬೆನ್ನತ್ತಿ ಬರುವುದು ಮತ್ತು ಸೂರ್ಯ, ಚಂದ್ರ ಹಾಗೂ ಇತರ ನಕ್ಷತ್ರಗಳನ್ನು ಅವನ ಆಜ್ಞೆಗೆ ವಿಧೇಯಗೊಳಿಸಿ ಸೃಷ್ಟಿಸಿದ್ದಾನೆ. ಗಮನಿಸಿ, ಸೃಷ್ಟಿಯು ಅವನದೇ ಹಾಗೂ ಆಜ್ಞಾಧಿಕಾರವು ಅವನದೇ. ಸರ್ವಲೋಕಗಳ ಪ್ರಭುವಾದ ಅಲ್ಲಾಹನು ಮಹಾ ಅನುಗ್ರಹಪೂರ್ಣನಾಗಿದ್ದಾನೆ.
আৰবী তাফছীৰসমূহ:
اُدْعُوْا رَبَّكُمْ تَضَرُّعًا وَّخُفْیَةً ؕ— اِنَّهٗ لَا یُحِبُّ الْمُعْتَدِیْنَ ۟ۚ
ನೀವು ನಿಮ್ಮ ಪ್ರಭುವನ್ನು ವಿನಮ್ರತೆ ಹಾಗೂ ರಹಸ್ಯವಾಗಿ ಕರೆದು ಪ್ರಾರ್ಥಿಸಿರಿ. ಖಂಡಿತವಾಗಿಯು ಅವನು ಹದ್ದು ಮೀರಿರುವವರನ್ನು ಇಷ್ಟಪಡುವುದಿಲ್ಲ.
আৰবী তাফছীৰসমূহ:
وَلَا تُفْسِدُوْا فِی الْاَرْضِ بَعْدَ اِصْلَاحِهَا وَادْعُوْهُ خَوْفًا وَّطَمَعًا ؕ— اِنَّ رَحْمَتَ اللّٰهِ قَرِیْبٌ مِّنَ الْمُحْسِنِیْنَ ۟
ಮತ್ತು ಭೂಮಿಯಲ್ಲಿ ಸುಧಾರಣೆಯಾದ ಬಳಿಕ ನೀವು ಕ್ಷೆÆÃಭೆ ಹರಡಬೇಡಿರಿ ಮತ್ತು ಅಲ್ಲಾಹನನ್ನು ಭಯ ಹಾಗೂ ನಿರೀಕ್ಷೆಯೊಂದಿಗೆ ಕರೆದು ಪ್ರಾರ್ಥಿಸಿರಿ. ನಿಸ್ಸಂಶಯವಾಗಿಯು ಅಲ್ಲಾಹನ ಕರುಣೆಯು ಸತ್ಕರ್ಮಿಗಳಿಗೆ ನಿಕಟವಾಗಿದೆ.
আৰবী তাফছীৰসমূহ:
وَهُوَ الَّذِیْ یُرْسِلُ الرِّیٰحَ بُشْرًاۢ بَیْنَ یَدَیْ رَحْمَتِهٖ ؕ— حَتّٰۤی اِذَاۤ اَقَلَّتْ سَحَابًا ثِقَالًا سُقْنٰهُ لِبَلَدٍ مَّیِّتٍ فَاَنْزَلْنَا بِهِ الْمَآءَ فَاَخْرَجْنَا بِهٖ مِنْ كُلِّ الثَّمَرٰتِ ؕ— كَذٰلِكَ نُخْرِجُ الْمَوْتٰی لَعَلَّكُمْ تَذَكَّرُوْنَ ۟
ಅವನು ತನ್ನ ಅನುಗ್ರಹಕ್ಕೆ ಮುಂಚಿತವಾಗಿ ಶುಭವಾರ್ತೆಯನ್ನು ತಿಳಿಸುವ ಮಾರುತಗಳನ್ನು ಕಳುಹಿಸುವವನಾಗಿದ್ದಾನೆ. ಆ ಮಾರುತಗಳು ಘನೀಕೃತ ಮೋಡಗಳನ್ನು ಹೊತ್ತುಕೊಂಡಾಗ ನಾವು ಆ ಮೋಡವನ್ನು ನಿರ್ಜೀವ ಭೂಮಿಯ ಕಡೆಗೆ ಸಾಗಿಸುತ್ತೇವೆ. ನಂತರ ಆ ಮೋಡದಿಂದ ನಾವು ನೀರನ್ನು ಸುರಿಸುತ್ತೇವೆ. ನಂತರ ಅದರಿಂದ ಸಕಲ ವಿಧದ ಫಲಗಳನ್ನು ಹೊರತರುತ್ತೇವೆ. ಇದೇ ರೀತಿ ನಾವು ಮೃತರನ್ನು ಹೊರತರುತ್ತೇವೆ. ಇದು ನೀವು ಅರಿತುಕೊಳ್ಳಲೆಂದಾಗಿದೆ.
আৰবী তাফছীৰসমূহ:
وَالْبَلَدُ الطَّیِّبُ یَخْرُجُ نَبَاتُهٗ بِاِذْنِ رَبِّهٖ ۚ— وَالَّذِیْ خَبُثَ لَا یَخْرُجُ اِلَّا نَكِدًا ؕ— كَذٰلِكَ نُصَرِّفُ الْاٰیٰتِ لِقَوْمٍ یَّشْكُرُوْنَ ۟۠
ಫಲವತ್ತಾದ ಪ್ರದೇಶದಲ್ಲಿ ಸಸ್ಯಗಳು ಅಲ್ಲಾಹನ ಅಪ್ಪಣೆಯಿಂದ ಅದರ ಬೆಳೆಗಳು ಚೆನ್ನಾಗಿ ಬೆಳೆಯುತ್ತವೆ ಮತ್ತು ಕೆಟ್ಟ ಪ್ರದೇಶದಲ್ಲಿ ಸಸ್ಯಗಳು ನಿಷ್ಪçಯೋಜಕವಾಗಿ ಬೆಳೆಯುತ್ತವೆ. ಕೃತಜ್ಞತೆ ತೋರುವ ಜನರಿಗಾಗಿ ನಾವು ವಿವಿಧ ರೀತಿಯಲ್ಲಿ ದೃಷ್ಟಾಂತಗಳನ್ನು ವಿವರಿಸಿ ಕೊಡುತ್ತೇವೆ.
আৰবী তাফছীৰসমূহ:
لَقَدْ اَرْسَلْنَا نُوْحًا اِلٰی قَوْمِهٖ فَقَالَ یٰقَوْمِ اعْبُدُوا اللّٰهَ مَا لَكُمْ مِّنْ اِلٰهٍ غَیْرُهٗ ؕ— اِنِّیْۤ اَخَافُ عَلَیْكُمْ عَذَابَ یَوْمٍ عَظِیْمٍ ۟
ನಾವು ನೂಹ್‌ರನ್ನು ಅವರ ಜನತೆಯೆಡೆಗೆ ನಿಯೋಗಿಸಿದಾಗ ಅವರು ಹೇಳಿದರು: ಓ ನನ್ನ ಜನತೆಯೇ, ನೀವು ಅಲ್ಲಾಹನನ್ನು ಆರಾಧಿಸಿರಿ. ಅವನ ಹೊರತು ನಿಮಗೆ ಅನ್ಯ ಆರಾಧ್ಯನಿಲ್ಲ. ನಾನು ನಿಮ್ಮ ಕುರಿತು ಒಂದು ಮಹಾ ದಿನದ ಯಾತನೆಯ ಭಯ ಪಡುತ್ತೇನೆ.
আৰবী তাফছীৰসমূহ:
قَالَ الْمَلَاُ مِنْ قَوْمِهٖۤ اِنَّا لَنَرٰىكَ فِیْ ضَلٰلٍ مُّبِیْنٍ ۟
ಅವರ ಜನತೆಯ ಪ್ರಮುಖರು ಹೇಳಿದರು: ನಾವು ನಿಮ್ಮನ್ನು ಸ್ಪಷ್ಟ ಮಾರ್ಗ ಭ್ರಷ್ಟತೆಯಲ್ಲಿರುವುದಾಗಿ ಕಾಣುತ್ತಿದ್ದೇವೆ.
আৰবী তাফছীৰসমূহ:
قَالَ یٰقَوْمِ لَیْسَ بِیْ ضَلٰلَةٌ وَّلٰكِنِّیْ رَسُوْلٌ مِّنْ رَّبِّ الْعٰلَمِیْنَ ۟
ನೂಹ್‌ರು ಹೇಳಿದರು: ಓ ನನ್ನ ಜನತೆಯೇ, ನನ್ನಲ್ಲಿ ಯಾವುದೇ ಪಥ ಭ್ರಷ್ಟತೆಯಿಲ್ಲ. ಆದರೆ ನಾನು ಸರ್ವಲೋಕಗಳ ಪ್ರಭುವಿನ ಸಂದೇಶವಾಹಕನಾಗಿದ್ದೇನೆ.
আৰবী তাফছীৰসমূহ:
اُبَلِّغُكُمْ رِسٰلٰتِ رَبِّیْ وَاَنْصَحُ لَكُمْ وَاَعْلَمُ مِنَ اللّٰهِ مَا لَا تَعْلَمُوْنَ ۟
ನನ್ನ ಪ್ರಭುವಿನ ಸಂದೇಶಗಳನ್ನು ನಾನು ನಿಮಗೆ ತಲುಪಿಸುತ್ತೇನೆ ಮತ್ತು ನಾನು ನಿಮ್ಮ ಹಿತ ಚಿಂತನೆ ಮಾಡುತ್ತೇನೆ ಮತ್ತು ನಿಮಗೆ ತಿಳಿಯದಿರುವಂತಹ ಅನೇಕ ವಿಚಾರಗಳನ್ನು ನಾನು ಅಲ್ಲಾಹನಿಂದ ತಿಳಿದು ಕೊಂಡಿದ್ದೇನೆ.
আৰবী তাফছীৰসমূহ:
اَوَعَجِبْتُمْ اَنْ جَآءَكُمْ ذِكْرٌ مِّنْ رَّبِّكُمْ عَلٰی رَجُلٍ مِّنْكُمْ لِیُنْذِرَكُمْ وَلِتَتَّقُوْا وَلَعَلَّكُمْ تُرْحَمُوْنَ ۟
ನಿಮಗೆ ಎಚ್ಚರಿಕೆ ನೀಡಲಿಕ್ಕೂ, ನೀವು ಭಯಪಡಲಿಕ್ಕೂ ಹಾಗೂ ನಿಮ್ಮ ಮೇಲೆ ಕರುಣೆ ತೋರಲಿಕ್ಕೂ ನಿಮ್ಮಲ್ಲೊಬ್ಬ ವ್ಯಕ್ತಿಯ ಮೇಲೆ ನಿಮ್ಮ ಪ್ರಭುವಿನ ವತಿಯಿಂದ ಒಂದು ಉಪದೇಶವು ಬಂದಿರುವುದರ ಕುರಿತು ನೀವು ಆಶ್ಚರ್ಯ ಪಡುತ್ತಿದ್ದೀರಾ?
আৰবী তাফছীৰসমূহ:
فَكَذَّبُوْهُ فَاَنْجَیْنٰهُ وَالَّذِیْنَ مَعَهٗ فِی الْفُلْكِ وَاَغْرَقْنَا الَّذِیْنَ كَذَّبُوْا بِاٰیٰتِنَا ؕ— اِنَّهُمْ كَانُوْا قَوْمًا عَمِیْنَ ۟۠
ಆದರೆ ಅವರು ಅವರನ್ನು (ನೂಹ್‌ರನ್ನು) ಸುಳ್ಳಾಗಿಸುತ್ತಲೇ ಇದ್ದರು. ಆಗ ನಾವು ಅವರನ್ನು, ಅವರ ಜೊತೆ ಹಡಗಿನಲ್ಲಿದ್ದವರನ್ನೂ ರಕ್ಷಿಸಿದೆವು ಮತ್ತು ನಮ್ಮ ದೃಷ್ಟಾಂತಗಳನ್ನು ನಿಷೇಧಿಸುತ್ತಿದ್ದವರನ್ನು ಮುಳುಗಿಸಿ ಬಿಟ್ಟೆವು. ನಿಸ್ಸಂಶಯವಾಗಿಯು ಅವರು ಅಂಧರಾದ ಜನರಾಗಿದ್ದರು.
আৰবী তাফছীৰসমূহ:
وَاِلٰی عَادٍ اَخَاهُمْ هُوْدًا ؕ— قَالَ یٰقَوْمِ اعْبُدُوا اللّٰهَ مَا لَكُمْ مِّنْ اِلٰهٍ غَیْرُهٗ ؕ— اَفَلَا تَتَّقُوْنَ ۟
ಮತ್ತು ಆದ್ ಜನಾಂಗದೆಡೆಗೆ ನಾವು ಅವರ ಸಹೋದರ ಹೂದ್‌ರನ್ನು ಕಳುಹಿಸಿದೆವು. ಅವರು ಹೇಳಿದರು: ಓ ನನ್ನ ಜನಾಂಗದವರೇ, ನೀವು ಅಲ್ಲಾಹನನ್ನು ಆರಾಧಿಸಿರಿ. ಅವನ ಹೊರತು ನಿಮಗೆ ಅನ್ಯ ಆರಾಧ್ಯನಿಲ್ಲ. ನೀವು ಭಯಭಕ್ತಿ ಪಾಲಿಸುವುದಿಲ್ಲವೇ?
আৰবী তাফছীৰসমূহ:
قَالَ الْمَلَاُ الَّذِیْنَ كَفَرُوْا مِنْ قَوْمِهٖۤ اِنَّا لَنَرٰىكَ فِیْ سَفَاهَةٍ وَّاِنَّا لَنَظُنُّكَ مِنَ الْكٰذِبِیْنَ ۟
ಅವರ ಜನಾಂಗದ ಸತ್ಯನಿಷೇಧಿಗಳಾದ ಪ್ರಮುಖರು ಹೇಳಿದರು: ನಾವು ನಿಮ್ಮನ್ನು ಮೂರ್ಖತನದಲ್ಲಿ ಕಾಣುತ್ತಿದ್ದೇವೆ ಮತ್ತು ನಿಸ್ಸಂಶಯವಾಗಿಯು ನಾವು ನಿಮ್ಮನ್ನು ಸುಳ್ಳರಲ್ಲಿ ಸೇರಿದವರೆಂದು ಭಾವಿಸುತ್ತಿದ್ದೇವೆ.
আৰবী তাফছীৰসমূহ:
قَالَ یٰقَوْمِ لَیْسَ بِیْ سَفَاهَةٌ وَّلٰكِنِّیْ رَسُوْلٌ مِّنْ رَّبِّ الْعٰلَمِیْنَ ۟
ಹೂದ್‌ರವರು ಹೇಳಿದರು: ನನ್ನ ಜನಾಂಗದವರೇ, ನನ್ನಲ್ಲಿ ಯಾವುದೇ ಮೂರ್ಖತನವಿಲ್ಲ. ಆದರೆ ನಾನು ಸರ್ವಲೋಕಗಳ ಪ್ರಭುವಿನ ಸಂದೇಶವಾಹಕನಾಗಿದ್ದೇನೆ.
আৰবী তাফছীৰসমূহ:
اُبَلِّغُكُمْ رِسٰلٰتِ رَبِّیْ وَاَنَا لَكُمْ نَاصِحٌ اَمِیْنٌ ۟
ನಿಮಗೆ ನನ್ನ ಪ್ರಭುವಿನ ಸಂದೇಶಗಳನ್ನು ತಲುಪಿಸುತ್ತಿದ್ದೇನೆ ಮತ್ತು ನಾನು ನಿಮ್ಮ ನಂಬಿಗಸ್ಥನಾದ ಹಿತಕಾಂಕ್ಷಿಯಾಗಿದ್ದೇನೆ.
আৰবী তাফছীৰসমূহ:
اَوَعَجِبْتُمْ اَنْ جَآءَكُمْ ذِكْرٌ مِّنْ رَّبِّكُمْ عَلٰی رَجُلٍ مِّنْكُمْ لِیُنْذِرَكُمْ ؕ— وَاذْكُرُوْۤا اِذْ جَعَلَكُمْ خُلَفَآءَ مِنْ بَعْدِ قَوْمِ نُوْحٍ وَّزَادَكُمْ فِی الْخَلْقِ بَصْۜطَةً ۚ— فَاذْكُرُوْۤا اٰلَآءَ اللّٰهِ لَعَلَّكُمْ تُفْلِحُوْنَ ۟
ನಿಮಗೆ ಮುನ್ನೆಚ್ಚರಿಕೆ ನೀಡುವ ಸಲುವಾಗಿ ನಿಮ್ಮಲ್ಲೊಬ್ಬ ವ್ಯಕ್ತಿಯ ಮೇಲೆ ನಿಮ್ಮ ಪ್ರಭುವಿನ ವತಿಯಿಂದ ನಿಮ್ಮೆಡೆಗೆ ಒಂದು ಉಪದೇಶವು ಬಂದಿರುವುದರ ಕುರಿತು ನೀವು ಆಶ್ಚರ್ಯಪಡುತ್ತಿದ್ದೀರಾ? ಮತ್ತು ಅವನು ನಿಮ್ಮನ್ನು ನೂಹ್‌ರವರ ಜನತೆಯ ಬಳಿಕ ಉತ್ತರಾಧಿಕಾರಿಗಳನ್ನಾಗಿ ಮಾಡಿರುವುದನ್ನೂ, ದೇಹದಾರ್ಢ್ಯತೆಯಲ್ಲಿ ಹೆಚ್ಚಿನ ವರ್ಧನೆಯನ್ನು ನೀಡಿರುವುದನ್ನು ಸ್ಮರಿಸಿರಿ. ಇನ್ನು ನೀವು ಯಶಸ್ಸು ಪಡೆಯಲೆಂದು ಅಲ್ಲಾಹನ ಅನುಗ್ರಹಗಳನ್ನು ಸ್ಮರಿಸಿರಿ.
আৰবী তাফছীৰসমূহ:
قَالُوْۤا اَجِئْتَنَا لِنَعْبُدَ اللّٰهَ وَحْدَهٗ وَنَذَرَ مَا كَانَ یَعْبُدُ اٰبَآؤُنَا ۚ— فَاْتِنَا بِمَا تَعِدُنَاۤ اِنْ كُنْتَ مِنَ الصّٰدِقِیْنَ ۟
ಅವರು ಹೇಳಿದರು: ನಾವು ಕೇವಲ ಅಲ್ಲಾಹನ ಆರಾಧನೆ ಮಾಡಬೇಕು ಮತ್ತು ನಮ್ಮ ಪೂರ್ವಿಕರು ಆರಾಧಿಸುತ್ತಿದ್ದುದ್ದನ್ನು ನಾವು ತೊರೆಯಬೇಕು ಎಂದು ಹೇಳುವುದಕ್ಕಾಗಿ ನೀನು ನಮ್ಮ ಬಳಿಗೆ ಬಂದಿರುವೆಯಾ? ನೀನು ಸತ್ಯಸಂಧನಾಗಿದ್ದರೆ, ನಮಗೆ ಬೆದರಿಸುತ್ತಿರುವ ಆ ಶಿಕ್ಷೆಯನ್ನು ತಂದು ಬಿಡು.
আৰবী তাফছীৰসমূহ:
قَالَ قَدْ وَقَعَ عَلَیْكُمْ مِّنْ رَّبِّكُمْ رِجْسٌ وَّغَضَبٌ ؕ— اَتُجَادِلُوْنَنِیْ فِیْۤ اَسْمَآءٍ سَمَّیْتُمُوْهَاۤ اَنْتُمْ وَاٰبَآؤُكُمْ مَّا نَزَّلَ اللّٰهُ بِهَا مِنْ سُلْطٰنٍ ؕ— فَانْتَظِرُوْۤا اِنِّیْ مَعَكُمْ مِّنَ الْمُنْتَظِرِیْنَ ۟
ಹೂದ್ ಹೇಳಿದರು: ಖಂಡಿತವಾಗಿಯು ನಿಮ್ಮ ಮೇಲೆ ಅಲ್ಲಾಹನ ಕಡೆಯ ಶಿಕ್ಷೆ ಮತ್ತು ಕ್ರೋಧವು ಎರಗಿದೆ. ನೀವು ಮತ್ತು ನಿಮ್ಮ ಪೂರ್ವಿಕರು ನಿಶ್ಚಿಯಿಸಿದಂತಹ ಹೆಸರುಗಳ (ವಿಗ್ರಹಗಳ) ಕುರಿತು ನೀವು ನನ್ನಲ್ಲಿ ತರ್ಕ ಮಾಡುತ್ತಿರುವಿರಾ? ಮತ್ತು ಅವು ಆರಾಧ್ಯರೆಂಬುದಕ್ಕೆ ಅಲ್ಲಾಹನು ಯಾವುದೇ ಪುರಾವೆಯನ್ನು ಇಳಿಸಿಲ್ಲ. ಹಾಗಾದರೆ ನೀವು ಕಾಯುತ್ತಿರಿ, ನಾನೂ ಸಹ ನಿಮ್ಮೊಂದಿಗೆ ಕಾಯುತ್ತಿರುವೆನು.
আৰবী তাফছীৰসমূহ:
فَاَنْجَیْنٰهُ وَالَّذِیْنَ مَعَهٗ بِرَحْمَةٍ مِّنَّا وَقَطَعْنَا دَابِرَ الَّذِیْنَ كَذَّبُوْا بِاٰیٰتِنَا وَمَا كَانُوْا مُؤْمِنِیْنَ ۟۠
ತುರವಾಯ ನಾವು ಹೂದ್ ಮತ್ತು ಅವರ ಸಂಗಡಿಗರನ್ನು ನಮ್ಮ ಕಾರುಣ್ಯದಿಂದ ರಕ್ಷಿಸಿದೆವು ಮತ್ತು ನಮ್ಮ ದೃಷ್ಟಾಂತಗಳನ್ನು ನಿರಾಕರಿಸಿದವರನ್ನು ನಿರ್ಮೂಲ ಮಾಡಿದೆವು. ಅವರು ಸತ್ಯವಿಶ್ವಾಸ ಸ್ವೀಕರಿಸುವವರಾಗಿರಲಿಲ್ಲ.
আৰবী তাফছীৰসমূহ:
وَاِلٰی ثَمُوْدَ اَخَاهُمْ صٰلِحًا ۘ— قَالَ یٰقَوْمِ اعْبُدُوا اللّٰهَ مَا لَكُمْ مِّنْ اِلٰهٍ غَیْرُهٗ ؕ— قَدْ جَآءَتْكُمْ بَیِّنَةٌ مِّنْ رَّبِّكُمْ ؕ— هٰذِهٖ نَاقَةُ اللّٰهِ لَكُمْ اٰیَةً فَذَرُوْهَا تَاْكُلْ فِیْۤ اَرْضِ اللّٰهِ وَلَا تَمَسُّوْهَا بِسُوْٓءٍ فَیَاْخُذَكُمْ عَذَابٌ اَلِیْمٌ ۟
ಮತ್ತು ನಾವು ಸಮೂದ್ ಜನಾಂಗದೆಡೆಗೆ ಅವರ ಸಹೋದರ ಸ್ವಾಲಿಹ್‌ರವರನ್ನು ಕಳುಹಿಸಿದೆವು. ಅವರು ಹೇಳಿದರು: ಓ ನನ್ನ ಜನತೆಯೇ, ನೀವು ಅಲ್ಲಾಹನನ್ನು ಆರಾಧಿಸಿರಿ. ಅವನ ಹೊರತು ನಿಮಗೆ ಅನ್ಯ ಆರಾಧ್ಯನಿಲ್ಲ. ನಿಮ್ಮ ಬಳಿಗೆ ನಿಮ್ಮ ಪ್ರಭುವಿನ ಕಡೆಯಿಂದ ಸ್ಪಷ್ಟವಾದ ಒಂದು ಪುರಾವೆಯು ಬಂದಿರುತ್ತದೆ. ಇದು ನಿಮಗೆ ದೃಷ್ಟಾಂತವಾಗಿರುವ ಅಲ್ಲಾಹನ ಒಂಟೆಯಾಗಿದೆ. ಅದ್ದರಿಂದ ನೀವಿದನ್ನು ಅಲ್ಲಾಹನ ಭೂಮಿಯಲ್ಲಿ ಮೇಯುತ್ತಿರಲು ಬಿಟ್ಟು ಬಿಡಿರಿ. ನೀವು ಇದರ ಮೇಲೆ ಕೆಟ್ಟ ಉದ್ದೇಶದಿಂದ ಕೈಹಾಕಬೇಡಿರಿ. ಅನ್ಯಥಾ ವೇದನಾಜನಕವಾದ ಶಿಕ್ಷೆಯು ನಿಮ್ಮನ್ನು ಹಿಡಿದುಕೊಳ್ಳುವುದು.
আৰবী তাফছীৰসমূহ:
وَاذْكُرُوْۤا اِذْ جَعَلَكُمْ خُلَفَآءَ مِنْ بَعْدِ عَادٍ وَّبَوَّاَكُمْ فِی الْاَرْضِ تَتَّخِذُوْنَ مِنْ سُهُوْلِهَا قُصُوْرًا وَّتَنْحِتُوْنَ الْجِبَالَ بُیُوْتًا ۚ— فَاذْكُرُوْۤا اٰلَآءَ اللّٰهِ وَلَا تَعْثَوْا فِی الْاَرْضِ مُفْسِدِیْنَ ۟
ಅಲ್ಲಾಹನು ನಿಮ್ಮನ್ನು ಆದ್ ಸಮುದಾಯದ ನಂತರ ಉತ್ತರಾಧಿಕಾರಿಗಳನ್ನಾಗಿ ಮಾಡಿರುವುದನ್ನು ಸ್ಮರಿಸಿರಿ ಮತ್ತು ಅವನು ನಿಮಗೆ ಭೂಮಿಯಲ್ಲಿ ವಾಸಸ್ಥಳವನ್ನು ಮಾಡಿಕೊಟ್ಟನು. ಹೀಗೆ ನೀವು ಸಮತಟ್ಟಾದ ಭೂಮಿಯಲ್ಲಿ ಉನ್ನತ ಸೌಧಗಳನ್ನು ಕಟ್ಟುತ್ತೀರಿ ಮತ್ತು ಪರ್ವತಗಳನ್ನು ಕೊರೆದು ಅವುಗಳಲ್ಲಿ ಭವನಗಳನ್ನು ನಿರ್ಮಿಸುತ್ತೀರಿ. ಆದ್ದರಿಂದ ನೀವು ಅಲ್ಲಾಹನ ಅನುಗ್ರಹಗಳನ್ನು ಸ್ಮರಿಸಿರಿ ಮತ್ತು ಭೂಮಿಯಲ್ಲಿ ಕ್ಷೆÆÃಭೆಯನ್ನು ಹರಡಬೇಡಿರಿ.
আৰবী তাফছীৰসমূহ:
قَالَ الْمَلَاُ الَّذِیْنَ اسْتَكْبَرُوْا مِنْ قَوْمِهٖ لِلَّذِیْنَ اسْتُضْعِفُوْا لِمَنْ اٰمَنَ مِنْهُمْ اَتَعْلَمُوْنَ اَنَّ صٰلِحًا مُّرْسَلٌ مِّنْ رَّبِّهٖ ؕ— قَالُوْۤا اِنَّا بِمَاۤ اُرْسِلَ بِهٖ مُؤْمِنُوْنَ ۟
ಅವರ ಜನಾಂಗದ ಅಹಂಕಾರಿಗಳಾದ ಪ್ರಮುಖರು ಅವರ ಪೈಕಿ ಸತ್ಯವಿಶ್ವಾಸವಿರಿಸಿದಂತಹ ದುರ್ಬಲರೊಂದಿಗೆ ಕೇಳಿದರು: ಸ್ವಾಲಿಹ್ ತಮ್ಮ ಪ್ರಭುವಿನ ವತಿಯಿಂದ ಕಳುಹಿಸಲ್ಪಟ್ಟವರೆಂಬುದರ ಬಗ್ಗೆ ನಿಮಗೆ ನಂಬಿಕೆಯಿದೆಯೇ? ಅವರು ಹೇಳಿದರು: ನಿಸ್ಸಂಶಯವಾಗಿಯು ಅವರು ಯಾವ ಸಂದೇಶದೊAದಿಗೆ ಕಳುಹಿಸಲ್ಪಟ್ಟಿರುವರೋ ಅದರಲ್ಲಿ ನಮಗೆ ಸಂಪೂರ್ಣವಾಗಿ ನಂಬಿಕೆಯಿದೆ.
আৰবী তাফছীৰসমূহ:
قَالَ الَّذِیْنَ اسْتَكْبَرُوْۤا اِنَّا بِالَّذِیْۤ اٰمَنْتُمْ بِهٖ كٰفِرُوْنَ ۟
ಆ ಅಹಂಕಾರಿಗಳು ಹೇಳಿದರು: ನೀವು ಯಾವುದರಲ್ಲಿ ವಿಶ್ವಾಸವಿಟ್ಟಿರುವಿರೋ ನಿಸ್ಸಂಶಯವಾಗಿಯು ನಾವು ಅದನ್ನು ಧಿಕ್ಕರಿಸುವವರಾಗಿದ್ದೇವೆ.
আৰবী তাফছীৰসমূহ:
فَعَقَرُوا النَّاقَةَ وَعَتَوْا عَنْ اَمْرِ رَبِّهِمْ وَقَالُوْا یٰصٰلِحُ ائْتِنَا بِمَا تَعِدُنَاۤ اِنْ كُنْتَ مِنَ الْمُرْسَلِیْنَ ۟
ಕೊನೆಗೆ ಅವರು ಆ ಒಂಟೆಯನ್ನು ಕೊಂದು ಬಿಟ್ಟರು ಮತ್ತು ತಮ್ಮ ಪ್ರಭುವಿನ ಆಜ್ಞೆಯನ್ನು ಧಿಕ್ಕರಿಸಿದರು ಮತ್ತು ಹೇಳಿದರು: ಓ ಸ್ವಾಲಿಹ್, ನೀನು ಸಂದೇಶವಾಹಕರಲ್ಲಿ ಸೇರಿದವನಾಗಿದ್ದರೆ ನಮ್ಮನ್ನು ಯಾವ ಯಾತನೆಯ ಬಗ್ಗೆ ಬೆದರಿಸುತ್ತಿದ್ದೆಯೋ ಅದನ್ನು ತಂದು ಕೊಡು.
আৰবী তাফছীৰসমূহ:
فَاَخَذَتْهُمُ الرَّجْفَةُ فَاَصْبَحُوْا فِیْ دَارِهِمْ جٰثِمِیْنَ ۟
ಕೊನೆಗೆ ಭೂಕಂಪವು ಅವರನ್ನು ಹಿಡಿದು ಬಿಟ್ಟಿತು ಮತ್ತು ಪ್ರಭಾತವಾದಾಗ ಅವರು ತಮ್ಮ ಮನೆಗಳಲ್ಲಿ ಅಧೋಮುಖಿಗಳಾಗಿ ಬಿದ್ದಿದ್ದರು.
আৰবী তাফছীৰসমূহ:
فَتَوَلّٰی عَنْهُمْ وَقَالَ یٰقَوْمِ لَقَدْ اَبْلَغْتُكُمْ رِسَالَةَ رَبِّیْ وَنَصَحْتُ لَكُمْ وَلٰكِنْ لَّا تُحِبُّوْنَ النّٰصِحِیْنَ ۟
ಆಗ ಅವರು (ಸ್ವಾಲಿಹ್) ಅವರಲ್ಲಿಂದ ನಿರ್ಗಮಿಸುತ್ತಾ ಹೇಳಿದರು: ಓ ನನ್ನ ಜನತೆಯೇ, ನಾನಂತು ನಿಮಗೆ ನನ್ನ ಪ್ರಭುವಿನ ಆದೇಶವನ್ನು ತಲುಪಿಸಿದ್ದೆನು ಮತ್ತು ನಾನು ನಿಮ್ಮ ಹಿತಚಿಂತನೆಯನ್ನು ಮಾಡಿದೆನು. ಆದರೆ ಹಿತಚಿಂತಕರನ್ನು ನೀವು ಇಷ್ಟಪಡುವವರಾಗಿರಲಿಲ್ಲ.
আৰবী তাফছীৰসমূহ:
وَلُوْطًا اِذْ قَالَ لِقَوْمِهٖۤ اَتَاْتُوْنَ الْفَاحِشَةَ مَا سَبَقَكُمْ بِهَا مِنْ اَحَدٍ مِّنَ الْعٰلَمِیْنَ ۟
ಮತ್ತು ನಾವು ಲೂತ್‌ರವರನ್ನು ಕಳಿಹಿಸಿದೆವು. ಅವರು ತಮ್ಮ ಜನಾಂಗದೊAದಿಗೆ ಹೇಳಿದ ಸಂದರ್ಭ: ನಿಮಗಿಂತ ಮುಂಚೆ ಲೋಕದಲ್ಲಿ ಯಾರೂ ಮಾಡಿರದಂತಹ ನೀಚ ಕೃತ್ಯವನ್ನು ನೀವು ಮಾಡುತ್ತಿರುವಿರಾ?
আৰবী তাফছীৰসমূহ:
اِنَّكُمْ لَتَاْتُوْنَ الرِّجَالَ شَهْوَةً مِّنْ دُوْنِ النِّسَآءِ ؕ— بَلْ اَنْتُمْ قَوْمٌ مُّسْرِفُوْنَ ۟
ನೀವು ಸ್ತಿçÃಯರನ್ನು ಬಿಟ್ಟು ಪುರುಷರೊಂದಿಗೆ ಕಾಮಶಮನವನ್ನು ಮಾಡುತ್ತಿದ್ದೀರಿ. ಅಲ್ಲ ನೀವಂತು ಹದ್ದು ಮೀರಿದ ಜನಾಂಗವಾಗಿರುವಿರಿ.
আৰবী তাফছীৰসমূহ:
وَمَا كَانَ جَوَابَ قَوْمِهٖۤ اِلَّاۤ اَنْ قَالُوْۤا اَخْرِجُوْهُمْ مِّنْ قَرْیَتِكُمْ ۚ— اِنَّهُمْ اُنَاسٌ یَّتَطَهَّرُوْنَ ۟
ಇವರನ್ನು ನಿಮ್ಮ ನಾಡಿನಿಂದ ಹೊರಗಟ್ಟಿರಿ. ಇವರು ಮಹಾ ಪರಿಶುದ್ಧರು ಎನ್ನುವುದರ ಹೊರತು ಅವರ ಜನತೆಯ ಉತ್ತರ ಬೇರೇನೂ ಆಗಿರಲಿಲ್ಲ.
আৰবী তাফছীৰসমূহ:
فَاَنْجَیْنٰهُ وَاَهْلَهٗۤ اِلَّا امْرَاَتَهٗ ۖؗ— كَانَتْ مِنَ الْغٰبِرِیْنَ ۟
ಆದ್ದರಿಂದ ನಾವು ಲೂತ್‌ರವರನ್ನು ಮತ್ತು ಅವರ ಮನೆಯವರನ್ನು ರಕ್ಷಿಸಿದೆವು: ಆದರೆ ಅವರ ಪತ್ನಿಯ ಹೊರತು. ಆಕೆ ಶಿಕ್ಷೆಗೆ ಗುರಿಯಾದವರೊಂದಿಗೆ ಸೇರಿದ್ದಳು.
আৰবী তাফছীৰসমূহ:
وَاَمْطَرْنَا عَلَیْهِمْ مَّطَرًا ؕ— فَانْظُرْ كَیْفَ كَانَ عَاقِبَةُ الْمُجْرِمِیْنَ ۟۠
ನಾವು ಅವರ ಮೇಲೆ ಸುಡುಗಲ್ಲಿನ ಮಳೆಯನ್ನು ಸುರಿಸಿದೆವು. ಇನ್ನು ನೀವು ಅಕ್ರಮಿಗಳ ಅಂತ್ಯ ಹೇಗಾಯಿತೆಂಬುದನ್ನು ನೋಡಿರಿ.
আৰবী তাফছীৰসমূহ:
وَاِلٰی مَدْیَنَ اَخَاهُمْ شُعَیْبًا ؕ— قَالَ یٰقَوْمِ اعْبُدُوا اللّٰهَ مَا لَكُمْ مِّنْ اِلٰهٍ غَیْرُهٗ ؕ— قَدْ جَآءَتْكُمْ بَیِّنَةٌ مِّنْ رَّبِّكُمْ فَاَوْفُوا الْكَیْلَ وَالْمِیْزَانَ وَلَا تَبْخَسُوا النَّاسَ اَشْیَآءَهُمْ وَلَا تُفْسِدُوْا فِی الْاَرْضِ بَعْدَ اِصْلَاحِهَا ؕ— ذٰلِكُمْ خَیْرٌ لَّكُمْ اِنْ كُنْتُمْ مُّؤْمِنِیْنَ ۟ۚ
ಮತ್ತು ನಾವು ಮದ್‌ಯನ್ ಜನಾಂಗದೆಡೆಗೆ ಅವರ ಸಹೋದರ ಶುಐಬ್‌ರವರನ್ನು ಕಳುಹಿಸಿದೆವು. ಅವರು ಹೇಳಿದರು: ಓ ನನ್ನ ಜನರೇ, ನೀವು ಅಲ್ಲಾಹನನ್ನು ಆರಾಧಿಸಿರಿ. ನಿಮಗೆ ಅವನ ಹೊರತು ಇನ್ನಾವ ಆರಾಧ್ಯನಿಲ್ಲ. ನಿಮ್ಮ ಬಳಿಗೆ ನಿಮ್ಮ ಪ್ರಭುವಿನ ವತಿಯಿಂದ ಸ್ಪಷ್ಟವಾದ ಪುರಾವೆಯು ಬಂದಿರುತ್ತದೆ. ಆದ್ದರಿಂದ ನೀವು ಅಳತೆ ಮತ್ತು ತೂಕವನ್ನು ಪರಿಪೂರ್ಣವಾಗಿ ಕೊಡಿರಿ ಮತ್ತು ಜನರಿಗೆ ಅವರ ಸಾಮಗ್ರಿಗಳನ್ನು ನೀವು ಕಡಿತಗೊಳಿಸಿ ಕೊಡಬೇಡಿರಿ. ಭೂಮಿಯಲ್ಲಿ ಅದರ ವಾತಾವರಣ ಸುಧಾರಣೆಯಾದ ಬಳಿಕ ನೀವು ಕ್ಷೆÆÃಭೆಯನ್ನು ಹರಡಬೇಡಿರಿ. ನೀವು ಸತ್ಯವಿಶ್ವಾಸಿಗಳಾಗಿದ್ದರೆ ಇದು ನಿಮಗೆ ಉತ್ತಮವಾಗಿದೆ.
আৰবী তাফছীৰসমূহ:
وَلَا تَقْعُدُوْا بِكُلِّ صِرَاطٍ تُوْعِدُوْنَ وَتَصُدُّوْنَ عَنْ سَبِیْلِ اللّٰهِ مَنْ اٰمَنَ بِهٖ وَتَبْغُوْنَهَا عِوَجًا ۚ— وَاذْكُرُوْۤا اِذْ كُنْتُمْ قَلِیْلًا فَكَثَّرَكُمْ ۪— وَانْظُرُوْا كَیْفَ كَانَ عَاقِبَةُ الْمُفْسِدِیْنَ ۟
ನೀವು ಸತ್ಯವಿಶ್ವಾಸಿಗಳನ್ನು ಬೆದರಿಸುವ ಸಲುವಾಗಿ ಹಾಗೂ ಅಲ್ಲಾಹನ ಮಾರ್ಗದಿಂದ ತಡೆಯುವ ಸಲುವಾಗಿ ಮತ್ತು ಅದರಲ್ಲಿ ವಕ್ರತೆಯನ್ನು ಹುಡುಕುವ ಸಲುವಾಗಿ ಪ್ರತಿಯೊಂದು ಮಾರ್ಗದಲ್ಲಿ ಕುಳಿತು ಕೊಳ್ಳಬೇಡಿರಿ. ನೀವು ಅಲ್ಪಸಂಖ್ಯಾತರಾಗಿದ್ದಾಗ ಅಲ್ಲಾಹನು ನಿಮ್ಮನ್ನು ಬಹುಸಂಖ್ಯಾತರನ್ನಾಗಿ ಮಾಡಿದ್ದನ್ನು ಸ್ಮರಿಸರಿ ಮತ್ತು ವಿಛಿದ್ರಕಾರಿಗಳ ಅಂತ್ಯವು ಹೇಗಾಯಿತೆಂಬುದನ್ನು ನೋಡಿರಿ.
আৰবী তাফছীৰসমূহ:
وَاِنْ كَانَ طَآىِٕفَةٌ مِّنْكُمْ اٰمَنُوْا بِالَّذِیْۤ اُرْسِلْتُ بِهٖ وَطَآىِٕفَةٌ لَّمْ یُؤْمِنُوْا فَاصْبِرُوْا حَتّٰی یَحْكُمَ اللّٰهُ بَیْنَنَا ۚ— وَهُوَ خَیْرُ الْحٰكِمِیْنَ ۟
ಮತ್ತು ನಾನು ಯಾವ ಸಂದೇಶದೊAದಿಗೆ ಕಳುಹಿಸಲ್ಪಟ್ಟಿರುವನೋ ಆ ಆದೇಶದ ಮೇಲೆ ನಿಮ್ಮ ಪೈಕಿ ಒಂದು ಪಂಗಡವು ವಿಶ್ವಾಸವಿಟ್ಟಿದ್ದರೆ ಮತ್ತು ಇನ್ನೊಂದು ಪಂಗಡವು ವಿಶ್ವಾಸವಿಡದಿದ್ದರೆ ನಮ್ಮ ಮಧ್ಯೆ ಅಲ್ಲಾಹನು ತೀರ್ಪು ನೀಡುವವರೆಗೆ ನೀವು ಸ್ವಲ್ಪ ತಾಳ್ಮೆಯಿಂದಿರಿ ಮತ್ತು ಅವನು ತೀರ್ಪು ನೀಡುವವರಲ್ಲಿ ಅತ್ಯುತ್ತಮನಾಗಿದ್ದಾನೆ.
আৰবী তাফছীৰসমূহ:
قَالَ الْمَلَاُ الَّذِیْنَ اسْتَكْبَرُوْا مِنْ قَوْمِهٖ لَنُخْرِجَنَّكَ یٰشُعَیْبُ وَالَّذِیْنَ اٰمَنُوْا مَعَكَ مِنْ قَرْیَتِنَاۤ اَوْ لَتَعُوْدُنَّ فِیْ مِلَّتِنَا ؕ— قَالَ اَوَلَوْ كُنَّا كٰرِهِیْنَ ۟ۚ
ಅವರ ಜನಾಂಗದ ಅಹಂಕಾರಿಗಳಾದ ಪ್ರಮುಖರು ಹೇಳಿದರು: 'ಓ ಶುಐಬ್, ನಾವು ನಿಮ್ಮನ್ನು ಮತ್ತು ನಿಮ್ಮ ಜೊತೆಯಲ್ಲಿರುವ ವಿಶ್ವಾಸಿಗಳನ್ನು ನಮ್ಮ ಊರಿನಿಂದ ಖಂಡಿತ ಹೊರಗಟ್ಟುವೆವು. ಇಲ್ಲವೇ ನೀವು ನಮ್ಮ ಧರ್ಮಕ್ಕೆ ಮರಳಿ ಬರಬೇಕು. ಶುಐಬ್ ಉತ್ತರಿಸಿದರು: 'ನಾವು ನಿಮ್ಮ ಧರ್ಮವನ್ನು ಇಷ್ಟಪಡದಿದ್ದರೂ ಮರಳಬೇಕೆ?'.
আৰবী তাফছীৰসমূহ:
قَدِ افْتَرَیْنَا عَلَی اللّٰهِ كَذِبًا اِنْ عُدْنَا فِیْ مِلَّتِكُمْ بَعْدَ اِذْ نَجّٰىنَا اللّٰهُ مِنْهَا ؕ— وَمَا یَكُوْنُ لَنَاۤ اَنْ نَّعُوْدَ فِیْهَاۤ اِلَّاۤ اَنْ یَّشَآءَ اللّٰهُ رَبُّنَا ؕ— وَسِعَ رَبُّنَا كُلَّ شَیْءٍ عِلْمًا ؕ— عَلَی اللّٰهِ تَوَكَّلْنَا ؕ— رَبَّنَا افْتَحْ بَیْنَنَا وَبَیْنَ قَوْمِنَا بِالْحَقِّ وَاَنْتَ خَیْرُ الْفٰتِحِیْنَ ۟
ನಿಮ್ಮ ಧÀರ್ಮದಿಂದ ಅಲ್ಲಾಹನು ನಮ್ಮನ್ನು ರಕ್ಷಿಸಿದ ನಂತರ ಅದರೆಡೆಗೆ ನಾವು ಮರಳುವುದಾದರೆ ನಾವು ಅಲ್ಲಾಹನ ಮೇಲೆ ಸುಳ್ಳಾರೋಪವನ್ನು ಹೊರಿಸಿದವರಾಗುವೆವು. ನಿಮ್ಮ ಧರ್ಮದೆಡೆಗೆ ಪುನಃ ಮರಳುವುದು ನಮ್ಮಿಂದ ಸಾಧ್ಯವಿಲ್ಲ ಆದರೆ ನಮ್ಮ ಪ್ರಭುವಾದ ಅಲ್ಲಾಹನು ಬಯಸಿದರೆ ಹೊರತು ನಮ್ಮ ಪ್ರಭು ತನ್ನ ಜ್ಞಾನದಿಂದ ಸರ್ವ ವಸ್ತುಗಳನ್ನೂ ಆವರಿಸಿರುವನು. ನಾವು ಅಲ್ಲಾಹನ ಮೇಲೆಯೇ ಭರವಸೆಯಿಟ್ಟಿದ್ದೇವೆ. ಓ ನಮ್ಮ ಪ್ರಭೂ, ನಮ್ಮ ಮತ್ತು ನಮ್ಮ ಜನಾಂಗದ ನಡುವೆ ನೀನು ನ್ಯಾಯಕ್ಕನುಸಾರ ತೀರ್ಪನ್ನು ನೀಡು ಮತ್ತು ನೀನು ಎಲ್ಲರಿಗಿಂತಲೂ ಉತ್ತಮ ತೀರ್ಪುಗಾರನಾಗಿರುವೆ.
আৰবী তাফছীৰসমূহ:
وَقَالَ الْمَلَاُ الَّذِیْنَ كَفَرُوْا مِنْ قَوْمِهٖ لَىِٕنِ اتَّبَعْتُمْ شُعَیْبًا اِنَّكُمْ اِذًا لَّخٰسِرُوْنَ ۟
ಅವರ ಜನಾಂಗದ ಸತ್ಯನಿಷೇಧಿಗಳಾದ ಪ್ರಮುಖರು ಹೇಳಿದರು: 'ನೀವು ಶುಐಬ್‌ರವರನ್ನು ಅನುಸರಿಸುವುದಾದರೆ ನಿಸ್ಸಂಶಯವಾಗಿಯು ನಷ್ಟಕ್ಕೊಳಗಾಗುವಿರಿ.
আৰবী তাফছীৰসমূহ:
فَاَخَذَتْهُمُ الرَّجْفَةُ فَاَصْبَحُوْا فِیْ دَارِهِمْ جٰثِمِیْنَ ۟
ತರುವಾಯ ಅವರನ್ನು ಭೂಕಂಪವು ಹಿಡಿದು ಬಿಟ್ಟಿತು. ಆಗ ಅವರು ತಮ್ಮ ಮನೆಗಳಲ್ಲಿ ಅಧೋಮುಖಿಗಳಾಗಿ ಬಿದ್ದಿದ್ದರು.
আৰবী তাফছীৰসমূহ:
الَّذِیْنَ كَذَّبُوْا شُعَیْبًا كَاَنْ لَّمْ یَغْنَوْا فِیْهَا ۛۚ— اَلَّذِیْنَ كَذَّبُوْا شُعَیْبًا كَانُوْا هُمُ الْخٰسِرِیْنَ ۟
ಶುಐಬ್‌ರವರನ್ನು ಧಿಕ್ಕರಿಸುತ್ತಿದ್ದವರ ಸ್ಥಿತಿಯು ಅವರು ಅಲ್ಲಿ ವಾಸಿಸಿರಲಿಲ್ಲವೆಂಬAತೆ ಆಯಿತು ಶುಐಬ್‌ರವರನ್ನು, ಧಿಕ್ಕರಿಸುತ್ತಿದ್ದವರು ನಷ್ಟಕ್ಕೊಳಗಾಗಿಬಿಟ್ಟರು.
আৰবী তাফছীৰসমূহ:
فَتَوَلّٰی عَنْهُمْ وَقَالَ یٰقَوْمِ لَقَدْ اَبْلَغْتُكُمْ رِسٰلٰتِ رَبِّیْ وَنَصَحْتُ لَكُمْ ۚ— فَكَیْفَ اٰسٰی عَلٰی قَوْمٍ كٰفِرِیْنَ ۟۠
ತರುವಾಯ ಶುಐಬ್ ಅವರಿಂದ ದೂರ ಸರಿದರು ಮತ್ತು ಹೇಳಿದರು: 'ಓ ನನ್ನ ಜನತೆಯೇ, ನಾನು ನನ್ನ ಪ್ರಭುವಿನ ಸಂದೇಶಗಳನ್ನು ನಿಮಗೆ ತಲುಪಿಸಿಕೊಟ್ಟಿದ್ದೆನು ಮತ್ತು ನಿಮ್ಮ ಹಿತಚಿಂತನೆಯನ್ನು ನಡೆಸಿದೆನು. ಹೀಗಿರುವಾಗ ಸತ್ಯನಿಷೇಧಿಗಳಾದ ಜನತೆಯ ಬಗ್ಗೆ ನಾನೇಕೆ ದುಃಖಿಸಬೇಕು?’
আৰবী তাফছীৰসমূহ:
وَمَاۤ اَرْسَلْنَا فِیْ قَرْیَةٍ مِّنْ نَّبِیٍّ اِلَّاۤ اَخَذْنَاۤ اَهْلَهَا بِالْبَاْسَآءِ وَالضَّرَّآءِ لَعَلَّهُمْ یَضَّرَّعُوْنَ ۟
ಯಾವುದೇ ನಾಡಿಗೂ ನಾವು ಪೈಗಂಬರರನ್ನು ಕಳುಹಿಸಿದಾಗಲೆಲ್ಲಾ ಅಲ್ಲಿನ ನಿವಾಸಿಗಳಿಗೆ ನಾವು ಬಡತನ ಮತ್ತು ಸಂಕಷ್ಟಕ್ಕೆ ಗುರಿಪಡಿಸದೆ ಬಿಡಲಿಲ್ಲ. ಅದು ಅವರು ವಿನಯವಂತರಾಗಲೆAದಾಗಿತ್ತು.
আৰবী তাফছীৰসমূহ:
ثُمَّ بَدَّلْنَا مَكَانَ السَّیِّئَةِ الْحَسَنَةَ حَتّٰی عَفَوْا وَّقَالُوْا قَدْ مَسَّ اٰبَآءَنَا الضَّرَّآءُ وَالسَّرَّآءُ فَاَخَذْنٰهُمْ بَغْتَةً وَّهُمْ لَا یَشْعُرُوْنَ ۟
ಅನಂತರ ನಾವು ಕಷ್ಟದ ಬದಲಿಗೆ ಸುಖವನ್ನು ನೀಡಿದೆವು. ಆಗ ಅವರು ತುಂಬಾ ಅಭಿವೃದ್ಧಿಯನ್ನು ಹೊಂದಿದರು ಮತ್ತು ಹೇಳಿದರು. ನಮ್ಮ ಪೂರ್ವಿಕರಿಗೂ ಸಂಕಷ್ಟ ಮತ್ತು ಸಂತಸಗಳು ಬಂದಿದ್ದವು. ಆಗ ನಾವು ಅವರಿಗೆ ಅರಿವಾಗದಂತೆ ಅವರನ್ನು ಹಠಾತ್ತನೆ ಹಿಡಿದುಬಿಟ್ಟೆವು.
আৰবী তাফছীৰসমূহ:
وَلَوْ اَنَّ اَهْلَ الْقُرٰۤی اٰمَنُوْا وَاتَّقَوْا لَفَتَحْنَا عَلَیْهِمْ بَرَكٰتٍ مِّنَ السَّمَآءِ وَالْاَرْضِ وَلٰكِنْ كَذَّبُوْا فَاَخَذْنٰهُمْ بِمَا كَانُوْا یَكْسِبُوْنَ ۟
ಆ ನಾಡಿನವರು ವಿಶ್ವಾಸವಿಡುತ್ತಿದ್ದರೆ ಮತ್ತು ಭಯಭಕ್ತಿ ಪಾಲಿಸುತ್ತಿದ್ದರೆ ನಾವು ಅವರಿಗೆ ಆಕಾಶ ಮತ್ತು ಭೂಮಿಯಿಂದ ಸಮೃದ್ಧಿಯನ್ನು ತೆರೆದು ಕೊಡುತ್ತಿದ್ದೆವು. ಆದರೆ ಅವರು ಧಿಕ್ಕರಿಸಿಬಿಟ್ಟರು. ಆದ್ದರಿಂದ ನಾವು ಅವರ ಕರ್ಮಗಳ ನಿಮಿತ್ತ ಅವರನ್ನು ಹಿಡಿದುಬಿಟ್ಟೆವು.
আৰবী তাফছীৰসমূহ:
اَفَاَمِنَ اَهْلُ الْقُرٰۤی اَنْ یَّاْتِیَهُمْ بَاْسُنَا بَیَاتًا وَّهُمْ نَآىِٕمُوْنَ ۟ؕ
ಹಾಗಿದ್ದೂ ಈ ನಾಡುಗಳ ನಿವಾಸಿಗಳು ನಿದ್ರಿಸುತ್ತಿರುವಾಗ ರಾತ್ರಿಯ ವೇಳೆ ನಮ್ಮ ಶಿಕ್ಷೆ ಬಂದೆರಗಬಹುದೆAಬ ವಿಚಾರದ ಕುರಿತು ನಿಶ್ಚಿಂತರಾಗಿರುವರೇ?
আৰবী তাফছীৰসমূহ:
اَوَاَمِنَ اَهْلُ الْقُرٰۤی اَنْ یَّاْتِیَهُمْ بَاْسُنَا ضُحًی وَّهُمْ یَلْعَبُوْنَ ۟
ಅಥವಾ ಈ ನಾಡುಗಳ ನಿವಾಸಿಗಳು ಹಗಲಿನ ವೇಳೆ ವಿನೋದದಲ್ಲಿ ತಲ್ಲೀನರಾಗಿರುವಾಗ ನಮ್ಮ ಶಿಕ್ಷೆ ಬಂದೆರಗುವುದರ ಕುರಿತು ನಿಶ್ಚಿಂತರಾಗಿರುವರೇ?
আৰবী তাফছীৰসমূহ:
اَفَاَمِنُوْا مَكْرَ اللّٰهِ ۚ— فَلَا یَاْمَنُ مَكْرَ اللّٰهِ اِلَّا الْقَوْمُ الْخٰسِرُوْنَ ۟۠
ಅವರು ಅಲ್ಲಾಹನ ತಂತ್ರದ ಕುರಿತು ನಿರ್ಭಯರಾಗಿರುವರೇ? ವಾಸ್ತವದಲ್ಲಿ ನಷ್ಟಕ್ಕೊಳಗಾದವರ ಹೊರತು ಇನ್ನಾರೂ ಅಲ್ಲಾಹನ ತಂತ್ರದ ಕುರಿತು ನಿರ್ಭಯರಾಗಿರಲಾರರು.
আৰবী তাফছীৰসমূহ:
اَوَلَمْ یَهْدِ لِلَّذِیْنَ یَرِثُوْنَ الْاَرْضَ مِنْ بَعْدِ اَهْلِهَاۤ اَنْ لَّوْ نَشَآءُ اَصَبْنٰهُمْ بِذُنُوْبِهِمْ ۚ— وَنَطْبَعُ عَلٰی قُلُوْبِهِمْ فَهُمْ لَا یَسْمَعُوْنَ ۟
ಮತ್ತು ಭೂಮಿಯ ಪೂರ್ವನಿವಾಸಿಗಳ ಬಳಿಕ ಅದರ ವಾರೀಸುದಾರರಾದವರಿಗೆ ನಾವು ಇಚ್ಛಿಸಿದರೆ ಅವರ ಅಪರಾಧಗಳ ನಿಮಿತ್ತ ಅವರನ್ನು ನಾಶಮಾಡುತ್ತಿದ್ದೆವು ಎಂಬ ವಿಚಾರವು ಪಾಠಕಲಿಸಿಕೊಡಲಿಲ್ಲವೇ? ಮತ್ತು ನಾವು ಅವರು ಆಲಿಸದಂತೆ ಅವರ ಹೃದಯಗಳಿಗೆ ಮುದ್ರೆಯೊತ್ತಿರುತ್ತೇವೆ.
আৰবী তাফছীৰসমূহ:
تِلْكَ الْقُرٰی نَقُصُّ عَلَیْكَ مِنْ اَنْۢبَآىِٕهَا ۚ— وَلَقَدْ جَآءَتْهُمْ رُسُلُهُمْ بِالْبَیِّنٰتِ ۚ— فَمَا كَانُوْا لِیُؤْمِنُوْا بِمَا كَذَّبُوْا مِنْ قَبْلُ ؕ— كَذٰلِكَ یَطْبَعُ اللّٰهُ عَلٰی قُلُوْبِ الْكٰفِرِیْنَ ۟
ಆ ನಾಡಿನವರ ಕೆಲವು ವೃತ್ತಾಂತಗಳನ್ನು ನಾವು ನಿಮಗೆ ವಿವರಿಸಿ ಕೊಡುತ್ತಿದ್ದೇವೆ. ಅವರ ಬಳಿಗೆ ಅವರ ಸಂದೇಶವಾಹಕರು ದೃಷ್ಟಾಂತಗಳೊAದಿಗೆ ಬಂದಿದ್ದರು. ಅನಂತರ ಅವರು ಯಾವುದನ್ನು ಮೊದಲು ಸುಳ್ಳೆಂದು ಹೇಳಿದ್ದರೋ ಅದನ್ನು ಸತ್ಯವೆಂದು ಒಪ್ಪಿಕೊಳ್ಳುವುದು ಸಾಧ್ಯವಿರಲಿಲ್ಲ. ಇದೇ ಪ್ರಕಾರ ಅಲ್ಲಾಹನು ಸತ್ಯ ನಿಷೇಧಿಗಳ ಹೃದಯಗಳಿಗೆ ಮುದ್ರೆಯೊತ್ತಿರುತ್ತಾನೆ.
আৰবী তাফছীৰসমূহ:
وَمَا وَجَدْنَا لِاَكْثَرِهِمْ مِّنْ عَهْدٍ ۚ— وَاِنْ وَّجَدْنَاۤ اَكْثَرَهُمْ لَفٰسِقِیْنَ ۟
ನಾವು ಅವರ ಪೈಕಿ ಹೆಚ್ಚಿನವರನ್ನು ಕರಾರು ಪಾಲಿಸುವವರಾಗಿ ಕಂಡಿಲ್ಲ. ಅವರ ಪೈಕಿ ಹೆಚ್ಚಿನವರನ್ನು ನಾವು ಧಿಕ್ಕಾರಿಗಳಾಗಿಯೇ ಕಂಡೆವು.
আৰবী তাফছীৰসমূহ:
ثُمَّ بَعَثْنَا مِنْ بَعْدِهِمْ مُّوْسٰی بِاٰیٰتِنَاۤ اِلٰی فِرْعَوْنَ وَمَلَاۡىِٕهٖ فَظَلَمُوْا بِهَا ۚ— فَانْظُرْ كَیْفَ كَانَ عَاقِبَةُ الْمُفْسِدِیْنَ ۟
ನಂತರ ಅವರ ಬಳಿಕ ನಾವು ಮೂಸಾರವರನ್ನು ನಮ್ಮ ದೃಷ್ಟಾಂತಗಳೊAದಿಗೆ ಫಿರ್‌ಔನ್ ಮತ್ತು ಅವನ ಪ್ರಮುಖರೆಡೆಗೆ ಕಳುಹಿಸಿದೆವು. ಅದರೆ ಅವರು ಅವುಗಳೊಂದಿಗೆ ಅಕ್ರಮವೆಸಗಿದರು. ಆದ್ದರಿಂದ ಆ ವಿನಾಶಕಾರಿಗಳ ಪರಿಣಾಮ ಏನಾಯಿತೆಂಬುದನ್ನು ನೋಡಿರಿ.
আৰবী তাফছীৰসমূহ:
وَقَالَ مُوْسٰی یٰفِرْعَوْنُ اِنِّیْ رَسُوْلٌ مِّنْ رَّبِّ الْعٰلَمِیْنَ ۟ۙ
ಮೂಸಾ ಹೇಳಿದರು: 'ಓ ಫಿರ್‌ಔನ್ ನಿಶ್ಚಯವಾಗಿಯು ನಾನು ಸರ್ವಲೋಕಗಳ ಪ್ರಭುವಿನ ಕಡೆಯ ಸಂದೇಶವಾಹಕನಾಗಿರುವೆನು.
আৰবী তাফছীৰসমূহ:
حَقِیْقٌ عَلٰۤی اَنْ لَّاۤ اَقُوْلَ عَلَی اللّٰهِ اِلَّا الْحَقَّ ؕ— قَدْ جِئْتُكُمْ بِبَیِّنَةٍ مِّنْ رَّبِّكُمْ فَاَرْسِلْ مَعِیَ بَنِیْۤ اِسْرَآءِیْلَ ۟ؕ
ಅಲ್ಲಾಹನ ಮೇಲೆ ಸತ್ಯವನ್ನಲ್ಲದೆ ಇನ್ನೇನನ್ನು ಹೇಳದಿರುವುದೇ ನನಗೆ ಭೂಷಣವಾಗಿದೆ. ನಾನು ನಿಮ್ಮ ಬಳಿಗೆ ನಿಮ್ಮ ಪ್ರಭುವಿನ ವತಿಯ ಒಂದು ಪುರಾವೆಯನ್ನು ತಂದಿರುವೆನು. ಆದ್ದರಿಂದ ಇಸ್ರಾಯೀಲ್ ಸಂತತಿಗಳನ್ನು ನನ್ನ ಜೊತೆ ಕಳುಹಿಸಿಕೊಡು'.
আৰবী তাফছীৰসমূহ:
قَالَ اِنْ كُنْتَ جِئْتَ بِاٰیَةٍ فَاْتِ بِهَاۤ اِنْ كُنْتَ مِنَ الصّٰدِقِیْنَ ۟
ಫಿರ್‌ಔನ್ ಹೇಳಿದನು: ನೀನು ಯಾವುದಾದರೂ ಪುರಾವೆಯನ್ನು ತಂದಿರುವುದಾದರೆ ಅದನ್ನು ಮುಂದಿಡು; ನೀನು ಸತ್ಯಸಂಧನಾಗಿದ್ದರೆ.
আৰবী তাফছীৰসমূহ:
فَاَلْقٰی عَصَاهُ فَاِذَا هِیَ ثُعْبَانٌ مُّبِیْنٌ ۟ۚۖ
ಆಗ ಅವರು ತನ್ನ ಬೆತ್ತವನ್ನು ಹಾಕಿದರು. ಕೂಡಲೇ ಅದು ಪ್ರತ್ಯಕ್ಷವಾದ ಸರ್ಪವಾಗಿ ಬಿಟ್ಟಿತು.
আৰবী তাফছীৰসমূহ:
وَّنَزَعَ یَدَهٗ فَاِذَا هِیَ بَیْضَآءُ لِلنّٰظِرِیْنَ ۟۠
ಮತ್ತು ಅವರು ತನ್ನ ಕೈಯ್ಯನ್ನು ಹೊರತೆಗೆದರು. ತಕ್ಷಣ ಅದು ನೋಡುವವರಿಗೆ ಬೆಳ್ಳಗೆ ಹೊಳೆಯುತ್ತಿರುವುದಾಗಿ ಕಂಡು ಬಂದಿತು.
আৰবী তাফছীৰসমূহ:
قَالَ الْمَلَاُ مِنْ قَوْمِ فِرْعَوْنَ اِنَّ هٰذَا لَسٰحِرٌ عَلِیْمٌ ۟ۙ
ಫಿರ್‌ಔನನ ಜನತೆಯ ಪ್ರಮುಖರು ಹೇಳಿದರು: ನಿಜವಾಗಿಯು ಇವನೊಬ್ಬ ನಿಪುಣ ಜಾದುಗಾರನಾಗಿದ್ದಾನೆ.
আৰবী তাফছীৰসমূহ:
یُّرِیْدُ اَنْ یُّخْرِجَكُمْ مِّنْ اَرْضِكُمْ ۚ— فَمَاذَا تَاْمُرُوْنَ ۟
ಇವನು ನಿಮ್ಮನ್ನು ನಿಮ್ಮ ನಾಡಿನಿಂದ ಹೊರಗಟ್ಟಲು ಇಚ್ಛಿಸುತ್ತಿದ್ದಾನೆ. ಆದ್ದರಿಂದ ನೀವು ಯಾವ ಸಲಹೆಯನ್ನು ನೀಡುವಿರಿ?
আৰবী তাফছীৰসমূহ:
قَالُوْۤا اَرْجِهْ وَاَخَاهُ وَاَرْسِلْ فِی الْمَدَآىِٕنِ حٰشِرِیْنَ ۟ۙ
ಅವರು ಹೇಳಿದರು: ನೀವು ಅವರಿಗೂ, ಅವರ ಸೋದರರಿಗೂ ಕಾಲಾವಕಾಶ ನೀಡಿರಿ. ನಗರಗಳಲ್ಲಿ ದೂತರನ್ನು ಕಳುಹಿಸಿರಿ.
আৰবী তাফছীৰসমূহ:
یَاْتُوْكَ بِكُلِّ سٰحِرٍ عَلِیْمٍ ۟
ಅವರು ಸಕಲ ನಿಪುಣ ಜಾದುಗಾರರನ್ನು ತಮ್ಮ ಬಳಿಗೆ ಕರೆ ತರಲಿ.
আৰবী তাফছীৰসমূহ:
وَجَآءَ السَّحَرَةُ فِرْعَوْنَ قَالُوْۤا اِنَّ لَنَا لَاَجْرًا اِنْ كُنَّا نَحْنُ الْغٰلِبِیْنَ ۟
ಆ ಜಾದುಗಾರರು ಫಿರ್‌ಔನ್‌ನ ಬಳಿಗೆ ಬಂದರು ಮತ್ತು ಹೇಳಿದರು: ನಾವು ಜಯಗಳಿಸಿದರೆ ನಮಗೆ ಉತ್ತಮ ಪ್ರತಿಫಲವು ಸಿಗುವುದೇ?
আৰবী তাফছীৰসমূহ:
قَالَ نَعَمْ وَاِنَّكُمْ لَمِنَ الْمُقَرَّبِیْنَ ۟
ಫಿರ್‌ಔನ್ ಹೇಳಿದನು: ಹೌದು ಮತ್ತು ನೀವು ಆಸ್ಥಾನದ ಸಮೀಪಸ್ಥರಲ್ಲಿ ಸೇರುವಿರಿ.
আৰবী তাফছীৰসমূহ:
قَالُوْا یٰمُوْسٰۤی اِمَّاۤ اَنْ تُلْقِیَ وَاِمَّاۤ اَنْ نَّكُوْنَ نَحْنُ الْمُلْقِیْنَ ۟
ಅವರು ಹೇಳಿದರು: ಓ ಮೂಸಾ, ಒಂದೋ ನೀವು ಮೊಡಿ ಹಾಕಿರಿ ಅಥವಾ ನಾವು ಹಾಕುವೆವು.
আৰবী তাফছীৰসমূহ:
قَالَ اَلْقُوْا ۚ— فَلَمَّاۤ اَلْقَوْا سَحَرُوْۤا اَعْیُنَ النَّاسِ وَاسْتَرْهَبُوْهُمْ وَجَآءُوْ بِسِحْرٍ عَظِیْمٍ ۟
ಮೂಸಾ ಹೇಳಿದರು: ನೀವೇ ಹಾಕಿರಿ. ಆಗ ಅವರು ಮೋಡಿ ಹಾಕಿದಾಗ ಅವರು ಜನರ ಕಣ್ಣುಗಳನ್ನು ಭ್ರಾಂತಿಗೊಳಿಸಿದರು ಮತ್ತು ಅವರನ್ನು ಭಯಪಡಿಸಿದರು. ಅವರು ಒಂದು ವಿಧದ ಮಹಾ ಜಾದುವನ್ನು ಪ್ರದರ್ಶಿಸಿದರು.
আৰবী তাফছীৰসমূহ:
وَاَوْحَیْنَاۤ اِلٰی مُوْسٰۤی اَنْ اَلْقِ عَصَاكَ ۚ— فَاِذَا هِیَ تَلْقَفُ مَا یَاْفِكُوْنَ ۟ۚ
ಆಗ ನಾವು ಮೂಸರವರಿಗೆ ದಿವ್ಯ ಸಂದೇಶ ನೀಡಿದೆವು: ನೀವು ತಮ್ಮ ಬೆತ್ತವನ್ನು ಹಾಕಿರಿ. ಆಗ ಅದು ಅವರು ಕೃತಕವಾಗಿ ಸೃಷ್ಟಿಸಿದ್ದನ್ನು ತಕ್ಷಣ ನುಂಗತೊಡಗಿತು.
আৰবী তাফছীৰসমূহ:
فَوَقَعَ الْحَقُّ وَبَطَلَ مَا كَانُوْا یَعْمَلُوْنَ ۟ۚ
ಹೀಗೆ ಸತ್ಯವು ಮೇಲುಗೈ ಸಾಧಿಸಿತು ಮತ್ತು ಅವರು ಮಾಡಿರುವುದೆಲ್ಲವೂ ವ್ಯರ್ಥವಾಯಿತು.
আৰবী তাফছীৰসমূহ:
فَغُلِبُوْا هُنَالِكَ وَانْقَلَبُوْا صٰغِرِیْنَ ۟ۚ
ಅವರು ಆ ಸಂದರ್ಭದಲ್ಲಿ ಸೋತು ಹೋದರು ಮತ್ತು ಅಪಮಾನಿತರಾಗಿ ಮರಳಿದರು.
আৰবী তাফছীৰসমূহ:
وَاُلْقِیَ السَّحَرَةُ سٰجِدِیْنَ ۟ۙ
ಮತ್ತು ಆ ಜಾದುಗಾರರು ಸಾಷ್ಟಾಂಗವೆರಗಿದರು.
আৰবী তাফছীৰসমূহ:
قَالُوْۤا اٰمَنَّا بِرَبِّ الْعٰلَمِیْنَ ۟ۙ
ಅವರು ಹೇಳಿದರು: ನಾವು ಸರ್ವಲೋಕಗಳ ಪ್ರಭುವಿನಲ್ಲಿ ವಿಶ್ವಾಸವಿಟ್ಟೆವು.
আৰবী তাফছীৰসমূহ:
رَبِّ مُوْسٰی وَهٰرُوْنَ ۟
ಅವನು ಮೂಸಾ ಮತ್ತು ಹಾರೂನರ ಪ್ರಭು.
আৰবী তাফছীৰসমূহ:
قَالَ فِرْعَوْنُ اٰمَنْتُمْ بِهٖ قَبْلَ اَنْ اٰذَنَ لَكُمْ ۚ— اِنَّ هٰذَا لَمَكْرٌ مَّكَرْتُمُوْهُ فِی الْمَدِیْنَةِ لِتُخْرِجُوْا مِنْهَاۤ اَهْلَهَا ۚ— فَسَوْفَ تَعْلَمُوْنَ ۟
ಫಿರ್‌ಔನ್ ಹೇಳಿದನು: ನಾನು ನಿಮಗೆ ಅನುಮತಿ ನೀಡುವುದಕ್ಕೆ ಮುಂಚೆಯೇ ನೀವು ವಿಶ್ವಾಸವಿಟ್ಟಿರಾ? ನಿಸ್ಸಂಶಯವಾಗಿಯು ಇದು ಈ ನಗರದ ವಾಸಿಗಳನ್ನು ಇಲ್ಲಿಂದ ಹೊರಗಟ್ಟಲು ನೀವು ಮಾಡಿದ ಒಳ ಸಂಚಾಗಿದೆ. ಇನ್ನು ಇದರ ಪರಿಣಾಮವು ನಿಮಗೆ ಸದ್ಯವೇ ಗೊತ್ತಾಗಲಿದೆ.
আৰবী তাফছীৰসমূহ:
لَاُقَطِّعَنَّ اَیْدِیَكُمْ وَاَرْجُلَكُمْ مِّنْ خِلَافٍ ثُمَّ لَاُصَلِّبَنَّكُمْ اَجْمَعِیْنَ ۟
ಖಂಡಿತವಾಗಿಯು ನಾನು ನಿಮ್ಮ ಕೈಗಳನ್ನೂ ಮತ್ತು ಕಾಲುಗಳನ್ನೂ ವಿರುದ್ಧ ದಿಕ್ಕಿನಿಂದ ಕತ್ತರಿಸಿ ಅನಂತರ ನಿಮ್ಮೆಲ್ಲರನ್ನು ಶಿಲುಬೆಗೇರಿಸುವೆನು.
আৰবী তাফছীৰসমূহ:
قَالُوْۤا اِنَّاۤ اِلٰی رَبِّنَا مُنْقَلِبُوْنَ ۟ۚ
ಅವರು ಉತ್ತರಿಸಿದರು: ನಾವಂತು ನಮ್ಮ ಪ್ರಭುವಿನ ಬಳಿಗೇ ಮರಳಲಿದ್ದೇವೆ.
আৰবী তাফছীৰসমূহ:
وَمَا تَنْقِمُ مِنَّاۤ اِلَّاۤ اَنْ اٰمَنَّا بِاٰیٰتِ رَبِّنَا لَمَّا جَآءَتْنَا ؕ— رَبَّنَاۤ اَفْرِغْ عَلَیْنَا صَبْرًا وَّتَوَفَّنَا مُسْلِمِیْنَ ۟۠
ಮತ್ತು ನಮ್ಮ ಪ್ರಭುವಿನ ದೃಷ್ಟಾಂತಗಳು ನಮ್ಮ ಬಳಿಗೆ ಬಂದಾಗ ನಾವು ಅವುಗಳ ಮೇಲೆ ವಿಶ್ವಾಸವಿರಿಸಿದೆವು ಎಂಬುದನ್ನು ಬಿಟ್ಟರೆ ಇನ್ನಾವ ಕಾರಣಕ್ಕೂ ನೀನು ನಮ್ಮನ್ನು ಶಿಕ್ಷಿಸುತ್ತಿಲ್ಲ. ಓ ನಮ್ಮ ಪ್ರಭೂ, ನಮ್ಮ ಮೇಲೆ ನೀನು ಸಹನೆಯನ್ನು ಸುರಿಸು ಮತ್ತು ನಮ್ಮ ಜೀವವನ್ನು ಶರಣರಾಗಿರುವ ಸ್ಥಿತಿಯಲ್ಲಿ ವಶಪಡಿಸು.
আৰবী তাফছীৰসমূহ:
وَقَالَ الْمَلَاُ مِنْ قَوْمِ فِرْعَوْنَ اَتَذَرُ مُوْسٰی وَقَوْمَهٗ لِیُفْسِدُوْا فِی الْاَرْضِ وَیَذَرَكَ وَاٰلِهَتَكَ ؕ— قَالَ سَنُقَتِّلُ اَبْنَآءَهُمْ وَنَسْتَحْیٖ نِسَآءَهُمْ ۚ— وَاِنَّا فَوْقَهُمْ قٰهِرُوْنَ ۟
ಫಿರ್‌ಔನ್‌ನ ಜನತೆಯ ಪ್ರಮುಖರು ಹೇಳಿದರು: ಭೂಮಿಯಲ್ಲಿ ಕ್ಷೆÆÃಭೆಯನ್ನುಂಟುಮಾಡುತ್ತಾ ಇರಲು, ನಿನ್ನನ್ನು ಹಾಗೂ ನಿನ್ನ ಆರಾಧ್ಯರನ್ನು ತೊರೆದು ಬಿಡಲು ನೀನು ಮೂಸಾ ಮತ್ತು ಅವರ ಜನರನ್ನು ಬಿಟ್ಟು ಬಿಡುವೆಯಾ? ಫಿರ್‌ಔನ್ ಹೇಳಿದನು: ನಾವು ಅವರ ಗಂಡು ಮಕ್ಕಳನ್ನು ಕೊಲ್ಲುವೆವು ಮತ್ತು ಅವರ ಸ್ತಿçÃಯರನ್ನು ಜೀವಂತವಾಗಿ ಬಿಟ್ಟುಬಿಡುವೆವು. ಮತ್ತು ಖಂಡಿತವಾಗಿಯು ನಾವು ಅವರ ಮೇಲೆ ಸರ್ವಾಧಿಕಾರವುಳ್ಳವರಾಗಿದ್ದೇವೆ.
আৰবী তাফছীৰসমূহ:
قَالَ مُوْسٰی لِقَوْمِهِ اسْتَعِیْنُوْا بِاللّٰهِ وَاصْبِرُوْا ۚ— اِنَّ الْاَرْضَ لِلّٰهِ ۙ۫— یُوْرِثُهَا مَنْ یَّشَآءُ مِنْ عِبَادِهٖ ؕ— وَالْعَاقِبَةُ لِلْمُتَّقِیْنَ ۟
ಮೂಸಾ ತಮ್ಮ ಜನರೊಂದಿಗೆ ಹೇಳಿದರು: ನೀವು ಅಲ್ಲಾಹನೊಂದಿಗೆ ಸಹಾಯ ಬೇಡಿರಿ ಮತ್ತು ಸಹನೆಯನ್ನು ಪಾಲಿಸಿರಿ. ಖಂಡಿತವಾಗಿ ಭೂಮಿ ಅಲ್ಲಾಹನದ್ದಾಗಿದೆ. ಅವನು ತನ್ನ ದಾಸರ ಪೈಕಿ ತಾನಿಚ್ಛಿಸುವವರನ್ನು ಅದರ ವಾರಸುದಾರರನ್ನಾಗಿ ಮಾಡುವನು ಮತ್ತು ಅಂತಿಮ ಯಶಸ್ಸು ಅಲ್ಲಾಹನಲ್ಲಿ ಭಯಭಕ್ತಿ ಹೊಂದಿರುವ ಜನರಿಗಾಗಿರುತ್ತದೆ.
আৰবী তাফছীৰসমূহ:
قَالُوْۤا اُوْذِیْنَا مِنْ قَبْلِ اَنْ تَاْتِیَنَا وَمِنْ بَعْدِ مَا جِئْتَنَا ؕ— قَالَ عَسٰی رَبُّكُمْ اَنْ یُّهْلِكَ عَدُوَّكُمْ وَیَسْتَخْلِفَكُمْ فِی الْاَرْضِ فَیَنْظُرَ كَیْفَ تَعْمَلُوْنَ ۟۠
ಅವರ ಜನಾಂಗದವರು ಹೇಳಿದರು: ನಿಮ್ಮ ಅಗಮನಕ್ಕೆ ಮೊದಲೂ ಹಾಗೂ ನಿಮ್ಮ ಆಗಮನದ ನಂತರವೂ ನಾವು ಹಿಂಸೆಗೊಳಗಾದೆವು. ಮೂಸಾ ಹೇಳಿದರು: ಅಲ್ಲಾಹನು ಶೀಘ್ರವೇ ನಿಮ್ಮ ಶತ್ರುವನ್ನು ನಾಶಗೊಳಿಸುವನು ಮತ್ತು ನಿಮ್ಮನ್ನು ಅವನು ಈ ಭೂಮಿಯ ಉತ್ತರಾಧಿಕಾರಿಗಳನ್ನಾಗಿ ಮಾಡುವನು. ಅನಂತರ ಅವನು ನಿಮ್ಮ ಕಾರ್ಯ ವೈಖರಿಯನ್ನು ನೋಡುವನು.
আৰবী তাফছীৰসমূহ:
وَلَقَدْ اَخَذْنَاۤ اٰلَ فِرْعَوْنَ بِالسِّنِیْنَ وَنَقْصٍ مِّنَ الثَّمَرٰتِ لَعَلَّهُمْ یَذَّكَّرُوْنَ ۟
ಮತ್ತು ನಾವು ಫಿರ್‌ಔನನ ಜನರನ್ನು ಬರಗಾಲದಿಂದಲೂ, ಫಲಬೆಳೆಗಳ ಕೊರತೆಯಿಂದಲೂ ಪರೀಕ್ಷಿಸಿದೆವು; ಇದು ಅವರು ಉಪದೇಶ ಸ್ವೀಕರಿಸಲೆಂದಾಗಿತ್ತು.
আৰবী তাফছীৰসমূহ:
فَاِذَا جَآءَتْهُمُ الْحَسَنَةُ قَالُوْا لَنَا هٰذِهٖ ۚ— وَاِنْ تُصِبْهُمْ سَیِّئَةٌ یَّطَّیَّرُوْا بِمُوْسٰی وَمَنْ مَّعَهٗ ؕ— اَلَاۤ اِنَّمَا طٰٓىِٕرُهُمْ عِنْدَ اللّٰهِ وَلٰكِنَّ اَكْثَرَهُمْ لَا یَعْلَمُوْنَ ۟
ಅವರಿಗೆ ಒಳಿತೇನಾದರು ತಲುಪಿದರೆ ಇದು ನಮಗೆ ದಕ್ಕಬೇಕಾದದ್ದು ಎಂದು ಹೇಳುತ್ತಾರೆ ಮತ್ತು ಅವರಿಗೆ ಕೆಡುಕೇನಾದರು ಎದುರಾದರೆ ಅವರು ಅದನ್ನು ಮೂಸಾ ಮತ್ತು ಅವರ ಸಂಗಡಿಗರ ಅಪಶಕುನವೆಂದು ಹೇಳುತ್ತಾರೆ. ತಿಳಿದುಕೊಳ್ಳಿರಿ, ಅವರ ಅಪಶÀಕುನವು ಅಲ್ಲಾಹನ ಬಳಿಯಿದೆ. ಆದರೆ ಅವರಲ್ಲಿ ಹೆಚ್ಚಿನವರು ಅರಿಯುವುದಿಲ್ಲ.
আৰবী তাফছীৰসমূহ:
وَقَالُوْا مَهْمَا تَاْتِنَا بِهٖ مِنْ اٰیَةٍ لِّتَسْحَرَنَا بِهَا ۙ— فَمَا نَحْنُ لَكَ بِمُؤْمِنِیْنَ ۟
ಮತ್ತು ಫಿರ್‌ಔನ್‌ನ ಜನರು ಹೇಳಿದರು: ನೀನು ನಮ್ಮನ್ನು ವಶೀಕರಿಸಲು ಎಂತಹ ದೃಷ್ಟಾಂತವನ್ನು ತಂದರೂ, ನಾವು ನಿನ್ನ ಮೇಲೆ ವಿಶ್ವಾಸವಿಡಲಾರೆವು.
আৰবী তাফছীৰসমূহ:
فَاَرْسَلْنَا عَلَیْهِمُ الطُّوْفَانَ وَالْجَرَادَ وَالْقُمَّلَ وَالضَّفَادِعَ وَالدَّمَ اٰیٰتٍ مُّفَصَّلٰتٍ ۫— فَاسْتَكْبَرُوْا وَكَانُوْا قَوْمًا مُّجْرِمِیْنَ ۟
ಅನಂತರ ನಾವು ಅವರ ವಿರುದ್ಧ ಚಂಡಮಾರುತ, ಮಿಡತೆ, ಹೇನು, ಕಪ್ಪೆ, ರಕ್ತ ಮುಂತಾದ ಸ್ಪಷ್ಟ (ಎಚ್ಚರಿಕೆ ನೀಡುವ) ದೃಷ್ಟಾಂತಗಳನ್ನು ಕಳುಹಿಸಿದೆವು. ಆದರೆ ಅವರು ಅಹಂಭಾವ ತೋರಿದರು ಮತ್ತು ಅವರು ಅಪರಾಧಿಗಳಾದ ಒಂದು ಜನಾಂಗವಾಗಿದ್ದರು.
আৰবী তাফছীৰসমূহ:
وَلَمَّا وَقَعَ عَلَیْهِمُ الرِّجْزُ قَالُوْا یٰمُوْسَی ادْعُ لَنَا رَبَّكَ بِمَا عَهِدَ عِنْدَكَ ۚ— لَىِٕنْ كَشَفْتَ عَنَّا الرِّجْزَ لَنُؤْمِنَنَّ لَكَ وَلَنُرْسِلَنَّ مَعَكَ بَنِیْۤ اِسْرَآءِیْلَ ۟ۚ
ಮತ್ತು ಶಿಕ್ಷೆಯು ಅವರಿಗೆ ಬಾಧಿಸಿದಾಗ ಅವರು ಹೇಳಿದರು: ಓ ಮೂಸಾ, ನಿಮ್ಮ ಪ್ರಭು ನಿಮ್ಮೊಂದಿಗೆ ಮಾಡಿದ ಕರಾರಿನ ಆಧಾರದಲ್ಲಿ ಅವನೊಂದಿಗೆ ನಮಗಾಗಿ ಪ್ರಾರ್ಥಿಸಿರಿ. ನೀವು ಈ ಶಿಕ್ಷೆಯನ್ನು ನಮ್ಮಿಂದ ಸರಿಸಿ ಬಿಟ್ಟರೆ ಖಂಡಿತವಾಗಿಯು ನಾವು ನಿಮ್ಮ ಮಾತಿನಂತೆ ಸತ್ಯವಿಶ್ವಾಸವಿಡುವೆವು ಮತ್ತು ಇಸ್ರಾಯೀಲ್ ಸಂತತಿಗಳನ್ನು ನಿಮ್ಮ ಜೊತೆ ಕಳುಹಿಸಿ ಕೊಡುವೆವು.
আৰবী তাফছীৰসমূহ:
فَلَمَّا كَشَفْنَا عَنْهُمُ الرِّجْزَ اِلٰۤی اَجَلٍ هُمْ بٰلِغُوْهُ اِذَا هُمْ یَنْكُثُوْنَ ۟
ಬಳಿಕ ಅವರು ತಲುಪಬೇಕಾದ ಒಂದು ಅವಧಿಯವರೆಗೆ ನಾವು ಅವರಿಂದ ಆ ಶಿಕ್ಷೆಯನ್ನು ಸರಿಸಿ ಬಿಟ್ಟರೆ ಕೂಡಲೇ ಅವರು ವಾಗ್ದಾನ ಉಲ್ಲಂಘಿಸತೊಡಗುತ್ತಾರೆ.
আৰবী তাফছীৰসমূহ:
فَانْتَقَمْنَا مِنْهُمْ فَاَغْرَقْنٰهُمْ فِی الْیَمِّ بِاَنَّهُمْ كَذَّبُوْا بِاٰیٰتِنَا وَكَانُوْا عَنْهَا غٰفِلِیْنَ ۟
ಅನಂತರ ನಾವು ಅವರೊಂದಿಗೆ ಪ್ರತೀಕಾರ ಕ್ರಮವನ್ನೂ ಕೈಗೊಂಡೆವು; ಇದು ಅವರು ನಮ್ಮ ದೃಷ್ಟಾಂತಗಳನ್ನು ಧಿಕ್ಕರಿಸುತ್ತಿದ್ದುದ್ದರ ನಿಮಿತ್ತ ಮತ್ತು ಅವುಗಳ ಕುರಿತು ನಿರ್ಲಕ್ಷö್ಯತನ ತೋರುತ್ತಿದ್ದುದ್ದರ ನಿಮಿತ್ತ ನಾವು ಅವರನ್ನು ಸಮುದ್ರದಲ್ಲಿ ಮುಳಿಗಿಸಿ ಬಿಟ್ಟೆವು.
আৰবী তাফছীৰসমূহ:
وَاَوْرَثْنَا الْقَوْمَ الَّذِیْنَ كَانُوْا یُسْتَضْعَفُوْنَ مَشَارِقَ الْاَرْضِ وَمَغَارِبَهَا الَّتِیْ بٰرَكْنَا فِیْهَا ؕ— وَتَمَّتْ كَلِمَتُ رَبِّكَ الْحُسْنٰی عَلٰی بَنِیْۤ اِسْرَآءِیْلَ ۙ۬— بِمَا صَبَرُوْا ؕ— وَدَمَّرْنَا مَا كَانَ یَصْنَعُ فِرْعَوْنُ وَقَوْمُهٗ وَمَا كَانُوْا یَعْرِشُوْنَ ۟
ಅವರ ಸ್ಥಾನದಲ್ಲಿ ಅತ್ಯಂತ ದುರ್ಬಲರೆಂದು ಪರಿಗಣಿಸಲ್ಪಟ್ಟಿದ್ದ ಜನರನ್ನು ನಾವು ಸಮೃದ್ಧಿಯನ್ನಿರಿಸಿದ್ದ ಆ ಭೂಪ್ರದೇಶದ ಪೂರ್ವ ಮತ್ತು ಪಶ್ಚಿಮಗಳ ವಾರೀಸುದಾರರನ್ನಾಗಿ ಮಾಡಿಬಿಟ್ಟೆವು. ಈ ರೀತಿ ಇಸ್ರಾಯೀಲರಿಗೆ ನಿನ್ನ ಪ್ರಭುವಿನ ಉತ್ತಮ ವಾಗ್ದಾನವು ನೆರವೇರಿತು, ಏಕೆಂದರೆ ಅವರು ತಾಳ್ಮೆವಹಿಸಿದ್ದರು. ನಾವು ಫಿರ್‌ಔನ್ ಮತ್ತು ಅವನ ಜನತೆಯು ನಿರ್ಮಿಸಿದ ವಸ್ತುಗಳನ್ನೂ, ಮತ್ತು ಎತ್ತರ ಕಟ್ಟಡಗಳನ್ನೂ ಧ್ವಂಸಗೊಳಿಸಿಬಿಟ್ಟೆವು.
আৰবী তাফছীৰসমূহ:
وَجٰوَزْنَا بِبَنِیْۤ اِسْرَآءِیْلَ الْبَحْرَ فَاَتَوْا عَلٰی قَوْمٍ یَّعْكُفُوْنَ عَلٰۤی اَصْنَامٍ لَّهُمْ ۚ— قَالُوْا یٰمُوْسَی اجْعَلْ لَّنَاۤ اِلٰهًا كَمَا لَهُمْ اٰلِهَةٌ ؕ— قَالَ اِنَّكُمْ قَوْمٌ تَجْهَلُوْنَ ۟
ಮತ್ತು ನಾವು ಇಸ್ರಾಯೀಲ್ ಸಂತತಿಗಳನ್ನು ಸಮುದ್ರ ದಾಟಿಸಿ ರಕ್ಷಿಸಿದೆವು. ತರುವಾಯ ತಮ್ಮ ಕೆಲವು ವಿಗ್ರಹಗಳ ಮುಂದೆ ಉಪಾಸಕರಾಗಿ ಕೂತಿದ್ದ ಒಂದು ಜನತೆಯ ಮುಂದಿನಿAದ ಅವರು ಹಾದು ಹೋಗುವಾಗ ಹೇಳತೊಡಗಿದರು: ಓ ಮೂಸಾ, ಇವರಿಗೆ ಆರಾಧ್ಯರಿರುವಂತೆಯೇ ನಮಗೂ ಒಂದು ಆರಾಧ್ಯನನ್ನು ಮಾಡಿಕೊಡಿ. ಅವರು ಹೇಳಿದರು: ಖಂಡಿತವಾಗಿಯು ನೀವು ಅವಿವೇಕಿ ಜನರಾಗಿರುವಿರಿ.
আৰবী তাফছীৰসমূহ:
اِنَّ هٰۤؤُلَآءِ مُتَبَّرٌ مَّا هُمْ فِیْهِ وَبٰطِلٌ مَّا كَانُوْا یَعْمَلُوْنَ ۟
ಖಂಡಿತವಾಗಿಯು ಇವರು ಯಾವ ಕೃತ್ಯದಲ್ಲಿ ಮಗ್ನರಾಗಿರುವರೋ ಅದು ನಾಶ ಮಾಡಲಾಗುವುದು ಮತ್ತು ಅವರ ಈ ಕೃತ್ಯವು ವ್ಯರ್ಥವಾಗಿದೆ.
আৰবী তাফছীৰসমূহ:
قَالَ اَغَیْرَ اللّٰهِ اَبْغِیْكُمْ اِلٰهًا وَّهُوَ فَضَّلَكُمْ عَلَی الْعٰلَمِیْنَ ۟
ಅವರು ಹೇಳಿದರು: ನಾನು ಅಲ್ಲಾಹನ ಹೊರತು ಬೇರೆ ಆರಾಧ್ಯನನ್ನು ನಿಮಗೆ ನಿಶ್ಚಯಿಸಿ ಕೊಡುವುದೇ? ಅವನಾದರೋ ನಿಮಗೆ ಸಕಲ ಲೋಕದವರ ಮೇಲೆ ಔನ್ನತ್ಯವನ್ನು ನೀಡಿರುವನು.
আৰবী তাফছীৰসমূহ:
وَاِذْ اَنْجَیْنٰكُمْ مِّنْ اٰلِ فِرْعَوْنَ یَسُوْمُوْنَكُمْ سُوْٓءَ الْعَذَابِ ۚ— یُقَتِّلُوْنَ اَبْنَآءَكُمْ وَیَسْتَحْیُوْنَ نِسَآءَكُمْ ؕ— وَفِیْ ذٰلِكُمْ بَلَآءٌ مِّنْ رَّبِّكُمْ عَظِیْمٌ ۟۠
ಮತ್ತು ನಿಮಗೆ ಕಠಿಣವಾಗಿ ಶಿಕ್ಷಿಸುತ್ತಿದ್ದ, ನಿಮ್ಮ ಗಂಡು ಮಕ್ಕಳನ್ನು ವಧಿಸಿ, ನಿಮ್ಮ ಹೆಣ್ಣುಮಕ್ಕಳನ್ನು ಜೀವಂತವಾಗಿ ಬಿಡುತ್ತಿದ್ದ ಫಿರ್‌ಔನನ ಜನರಿಂದ ನಿಮ್ಮನ್ನು ನಾವು ರಕ್ಷಿಸಿದ ಸಂದರ್ಭವನ್ನು ಸ್ಮರಿಸಿರಿ ಮತ್ತು ಇದರಲ್ಲಿ ನಿಮ್ಮ ಪ್ರಭುವಿನ ಕಡೆಯಿಂದ ಒಂದು ದೊಡ್ಡ ಪರೀಕ್ಷೆಯಿತ್ತು.
আৰবী তাফছীৰসমূহ:
وَوٰعَدْنَا مُوْسٰی ثَلٰثِیْنَ لَیْلَةً وَّاَتْمَمْنٰهَا بِعَشْرٍ فَتَمَّ مِیْقَاتُ رَبِّهٖۤ اَرْبَعِیْنَ لَیْلَةً ۚ— وَقَالَ مُوْسٰی لِاَخِیْهِ هٰرُوْنَ اخْلُفْنِیْ فِیْ قَوْمِیْ وَاَصْلِحْ وَلَا تَتَّبِعْ سَبِیْلَ الْمُفْسِدِیْنَ ۟
ಮತ್ತು ನಾವು ಮೂಸಾರವರಿಗೆ ಮೂವತ್ತು ರಾತ್ರಿಗಳ ವಾಗ್ದಾನವನ್ನು ಮಾಡಿದೆವು ನಂತರ ಹತ್ತು ರಾತ್ರಿಗಳನ್ನು ಹೆಚ್ಚಿಸಿ ಅವರ ಪ್ರಭೂ ನಿಶ್ಚಯಿಸಿದ ಅವಧಿಯು ಒಟ್ಟು ನಲ್ವತ್ತು ರಾತ್ರಿಗಳಾಗಿ ಪೂರ್ಣಗೊಂಡಿತು ಮತ್ತು ಮೂಸಾ ತನ್ನ ಸಹೋದರ ಹಾರೂನ್‌ರವರೊಂದಿಗೆ ಹೇಳಿದರು: ನನ್ನ ಪ್ರತಿನಿಧಿಯಾಗಿ ನನ್ನ ಜನಾಂಗದ ನಡುವೆ ಸುಧಾರಣೆ ಮಾಡುತ್ತಿರು ಮತ್ತು ಗಲಭೆ ಕೋರರ ಮಾರ್ಗವನ್ನು ಅನುಸರಿಸದಿರು.
আৰবী তাফছীৰসমূহ:
وَلَمَّا جَآءَ مُوْسٰی لِمِیْقَاتِنَا وَكَلَّمَهٗ رَبُّهٗ ۙ— قَالَ رَبِّ اَرِنِیْۤ اَنْظُرْ اِلَیْكَ ؕ— قَالَ لَنْ تَرٰىنِیْ وَلٰكِنِ انْظُرْ اِلَی الْجَبَلِ فَاِنِ اسْتَقَرَّ مَكَانَهٗ فَسَوْفَ تَرٰىنِیْ ۚ— فَلَمَّا تَجَلّٰی رَبُّهٗ لِلْجَبَلِ جَعَلَهٗ دَكًّا وَّخَرَّ مُوْسٰی صَعِقًا ۚ— فَلَمَّاۤ اَفَاقَ قَالَ سُبْحٰنَكَ تُبْتُ اِلَیْكَ وَاَنَا اَوَّلُ الْمُؤْمِنِیْنَ ۟
ಮತ್ತು ನಮ್ಮ ಸಮಯಕ್ಕೆ ಮೂಸಾ ಬಂದಾಗ ಮತ್ತು ಅವರ ಪ್ರಭು ಅವರೊಂದಿಗೆ ಮಾತನಾಡಿದಾಗ ಹೇಳಿದರು: ನನ್ನ ಪ್ರಭೂ, ನನಗೆ ನಿನ್ನ ದರ್ಶನವನ್ನು ನೀಡು, ನಾನು ನಿನ್ನನ್ನೊಮ್ಮೆ ನೋಡಬೇಕು. ಆಗ ಹೇಳಲಾಯಿತು: ನೀನು ನನ್ನನ್ನು ಎಂದಿಗೂ ನೋಡಲಾರೆ. ಆದರೆ ನೀನು ಆ ಪರ್ವತದೆಡೆಗೆ ನೋಡುತ್ತಿರು. ಅದು ಅದರ ಸ್ಥಳದಲ್ಲಿಯೇ ದೃಢವಾಗಿ ನಿಂತರೆ ನೀನು ನನ್ನನ್ನು ನೋಡಬಲ್ಲೆ. ಹಾಗೆ ಅವರ ಪ್ರಭು ಪರ್ವತಕ್ಕೆ ತನ್ನ ದಿವ್ಯ ಪ್ರಕಾಶವನ್ನು ಬೀರಿದಾಗ ಅದು ಪುಡಿಗಟ್ಟಿ ಬಿಟ್ಟಿತು ಮತ್ತು ಮೂಸಾ ಪ್ರಜ್ಞೆ ತಪ್ಪಿ ಬಿದ್ದು ಬಿಟ್ಟರು. ನಂತರ ಅವರು ಪ್ರಜ್ಞೆಗೆ ಬಂದಾಗ ಹೇಳಿದರು: ನಿಸ್ಸಂಶಯವಾಗಿಯು ನಾನು ನಿನ್ನ ಸನ್ನಿಧಿಯಲ್ಲಿ ಪಶ್ಚಾತ್ತಾಪ ಹೊಂದಿ ಮರಳಿರುವೆನು ಮತ್ತು ಎಲ್ಲರಿಗಿಂತ ಮೊದಲು ನಿನ್ನ ಮೇಲೆ ಸತ್ಯವಿಶ್ವಾಸ ಕೈಗೊಂಡಿರುವೆನು.
আৰবী তাফছীৰসমূহ:
قَالَ یٰمُوْسٰۤی اِنِّی اصْطَفَیْتُكَ عَلَی النَّاسِ بِرِسٰلٰتِیْ وَبِكَلَامِیْ ۖؗ— فَخُذْ مَاۤ اٰتَیْتُكَ وَكُنْ مِّنَ الشّٰكِرِیْنَ ۟
ಹೇಳಲಾಯಿತು: ಓ ಮೂಸಾ, ನಾನು ನನ್ನ ಪೈಗಂಬರರ ಮತ್ತು ನನ್ನೊಡನೆಯ ಸಂಭಾಷಣೆಯಿAದ ಇತರ ಜನರ ಪೈಕಿ ನಿಮ್ಮನ್ನು ಆರಿಸಿರುವೆನು. ಆದ್ದರಿಂದ ನಾನು ನಿಮಗೆ ನೀಡಿರುವುದನ್ನು ಸ್ವೀಕರಿಸಿರಿ ಮತ್ತು ಕೃತಜ್ಞತೆ ತೋರಿಸಿರಿ.
আৰবী তাফছীৰসমূহ:
وَكَتَبْنَا لَهٗ فِی الْاَلْوَاحِ مِنْ كُلِّ شَیْءٍ مَّوْعِظَةً وَّتَفْصِیْلًا لِّكُلِّ شَیْءٍ ۚ— فَخُذْهَا بِقُوَّةٍ وَّاْمُرْ قَوْمَكَ یَاْخُذُوْا بِاَحْسَنِهَا ؕ— سَاُورِیْكُمْ دَارَ الْفٰسِقِیْنَ ۟
ಮತ್ತು ನಾವು ಸರ್ವ ವಿಧದ ಉಪದೇಶ ಹಾಗೂ ಸಕಲ ವಿಷಯಗಳ ವಿವರಣೆಯನ್ನು ಅವರಿಗೆ ಫಲಕಗಳ ಮೇಲೆ ಬರೆದು ಕೊಟ್ಟೆವು. ನೀವು ಇದನ್ನು ಬಿಗಿಯಾಗಿ ಹಿಡಿದುಕೊಳ್ಳಿರಿ ಮತ್ತು ಅದರಲ್ಲಿರುವ ಉತ್ತಮ ಕಾರ್ಯಗಳನ್ನು ಅನುಸರಿಸಲು ನಿಮ್ಮ ಜನರಿಗೆ ಆದೇಶಿಸಿರಿ. ಇನ್ನು ಶೀಘ್ರವೇ ಧಿಕ್ಕಾರಿಗಳ ವಾಸಸ್ಥಳವನ್ನು ನಾನು ನಿಮಗೆ ತೋರಿಸಿಕೊಡಲಿರುವೆನು.
আৰবী তাফছীৰসমূহ:
سَاَصْرِفُ عَنْ اٰیٰتِیَ الَّذِیْنَ یَتَكَبَّرُوْنَ فِی الْاَرْضِ بِغَیْرِ الْحَقِّ ؕ— وَاِنْ یَّرَوْا كُلَّ اٰیَةٍ لَّا یُؤْمِنُوْا بِهَا ۚ— وَاِنْ یَّرَوْا سَبِیْلَ الرُّشْدِ لَا یَتَّخِذُوْهُ سَبِیْلًا ۚ— وَاِنْ یَّرَوْا سَبِیْلَ الْغَیِّ یَتَّخِذُوْهُ سَبِیْلًا ؕ— ذٰلِكَ بِاَنَّهُمْ كَذَّبُوْا بِاٰیٰتِنَا وَكَانُوْا عَنْهَا غٰفِلِیْنَ ۟
ಇಹಲೋಕದಲ್ಲಿ ಅನ್ಯಾಯವಾಗಿ ಅಹಂಕಾರ ತೋರುವವರನ್ನು ನಾನು ನನ್ನ ಆದೇಶಗಳಿಂದ ದೂರಸರಿಸಿರುವೆನು ಮತ್ತು ಅವರು ಸಕಲ ದೃಷ್ಟಾಂತವನ್ನು ಕಂಡರೂ ಅದರಲ್ಲಿ ವಿಶ್ವಾಸವಿಡಲಾರರು ಮತ್ತು ಸನ್ಮಾರ್ಗವನ್ನು ಕಂಡರೆ ಅದನ್ನು ತಮ್ಮ ಮಾರ್ಗವನ್ನಾಗಿ ಸ್ವೀಕರಿಸುವುದಿಲ್ಲ ಮತ್ತು ದುರ್ಮಾರ್ಗವನ್ನು ಕಂಡರೆ ಅದನ್ನು ತಮ್ಮ ಮಾರ್ಗವನ್ನಾಗಿ ಸ್ವೀಕರಿಸುತ್ತಾರೆ. ಇದು ಅವರು ನಮ್ಮ ದೃಷ್ಟಾಂತಗಳನ್ನು ನಿಷೇಧಿಸಿದುದರ ಮತ್ತು ಅವುಗಳ ಕುರಿತು ನಿರಾಕರಿಸಿದ್ದುದರ ಫಲವಾಗಿದೆ.
আৰবী তাফছীৰসমূহ:
وَالَّذِیْنَ كَذَّبُوْا بِاٰیٰتِنَا وَلِقَآءِ الْاٰخِرَةِ حَبِطَتْ اَعْمَالُهُمْ ؕ— هَلْ یُجْزَوْنَ اِلَّا مَا كَانُوْا یَعْمَلُوْنَ ۟۠
ಮತ್ತು ಯಾರು ನಮ್ಮ ದೃಷ್ಟಾಂತಗಳನ್ನು ಮತ್ತು ಪರಲೋಕದ ಭೇಟಿಯನ್ನು ನಿರಾಕರಿಸಿದರೋ ಅವರ ಸಕಲ ಕರ್ಮಗಳು ನಿಷ್ಫಲವಾಗಿ ಬಿಟ್ಟವು. ಅವರಿಗೆ ಅವರು ಮಾಡಿಕೊಳ್ಳುತ್ತಿದ್ದುದನ್ನೇ ಶಿಕ್ಷೆಯಾಗಿ ನೀಡಲಾಗುವುದು.
আৰবী তাফছীৰসমূহ:
وَاتَّخَذَ قَوْمُ مُوْسٰی مِنْ بَعْدِهٖ مِنْ حُلِیِّهِمْ عِجْلًا جَسَدًا لَّهٗ خُوَارٌ ؕ— اَلَمْ یَرَوْا اَنَّهٗ لَا یُكَلِّمُهُمْ وَلَا یَهْدِیْهِمْ سَبِیْلًا ۘ— اِتَّخَذُوْهُ وَكَانُوْا ظٰلِمِیْنَ ۟
ಮೂಸಾರವರು ತೂರ್ ಯಾತ್ರೆ ಹೋದ ಬಳಿಕ ಅವರ ಜನತೆಯು ತಮ್ಮ ಆಭರಣಗಳಿಂದ ಒಂದು ಕರುವಿನ ಪ್ರತಿಮೆಯನ್ನು ಆರಾಧ್ಯವನ್ನಾಗಿ ಮಾಡಿಕೊಂಡರು. ಅದು ಶಬ್ದ ಹೊರಡಿಸುವ ಒಂದು ಅಸ್ಥಿ ಪಂಜರ, ಅದು ಅವರೊಂದಿಗೆ ಮಾತನಾಡುವುದಿಲ್ಲವೆಂದು ಮತ್ತು ಮಾರ್ಗದರ್ಶನ ಮಾಡುವುದಿಲ್ಲವೆಂದೂ ಅವರು ಕಂಡಿಲ್ಲವೇ? ಆದರೂ ಅವರು ಅದನ್ನು ಆರಾಧ್ಯನನ್ನಾಗಿ ಮಾಡಿಕೊಂಡರು ಮತ್ತು ಅಕ್ರಮಿಗಳಾಗಿ ಬಿಟ್ಟರು.
আৰবী তাফছীৰসমূহ:
وَلَمَّا سُقِطَ فِیْۤ اَیْدِیْهِمْ وَرَاَوْا اَنَّهُمْ قَدْ ضَلُّوْا ۙ— قَالُوْا لَىِٕنْ لَّمْ یَرْحَمْنَا رَبُّنَا وَیَغْفِرْ لَنَا لَنَكُوْنَنَّ مِنَ الْخٰسِرِیْنَ ۟
ಮತ್ತು ಅವರು (ಕರುವನ್ನು ಆರಾಧಿಸುವವರು) ಪಶ್ಚಾತ್ತಾಪ ಪಡುವವರಾದಾಗ ಮತ್ತು ತಾವು ನಿಜವಾಗಿಯು ಪಥಭ್ರಷ್ಟರಾಗಿದ್ದೇವೆಂದು ಅವರು ಮನಗಂಡಾಗ ಹೇಳಿದರು: ನಮ್ಮ ಪ್ರಭೂ, ನಮ್ಮ ಮೇಲೆ ಕರುಣೆ ತೋರದಿದ್ದರೆ ಮತ್ತು ನಮ್ಮ ಪಾಪವನ್ನು ಕ್ಷಮಿಸದಿದ್ದರೆ ಖಂಡಿತ ನಾವು ನಷ್ಟ ಹೊಂದುವವರಲ್ಲಾಗುವೆವು.
আৰবী তাফছীৰসমূহ:
وَلَمَّا رَجَعَ مُوْسٰۤی اِلٰی قَوْمِهٖ غَضْبَانَ اَسِفًا ۙ— قَالَ بِئْسَمَا خَلَفْتُمُوْنِیْ مِنْ بَعْدِیْ ۚ— اَعَجِلْتُمْ اَمْرَ رَبِّكُمْ ۚ— وَاَلْقَی الْاَلْوَاحَ وَاَخَذَ بِرَاْسِ اَخِیْهِ یَجُرُّهٗۤ اِلَیْهِ ؕ— قَالَ ابْنَ اُمَّ اِنَّ الْقَوْمَ اسْتَضْعَفُوْنِیْ وَكَادُوْا یَقْتُلُوْنَنِیْ ۖؗ— فَلَا تُشْمِتْ بِیَ الْاَعْدَآءَ وَلَا تَجْعَلْنِیْ مَعَ الْقَوْمِ الظّٰلِمِیْنَ ۟
ಮತ್ತು ಮೂಸಾ ತಮ್ಮ ಜನರೆಡೆಗೆ ಕೋಪಿತರಾಗಿ ಹಾಗು ದುಃಖಿತರಾಗಿ ಮರಳಿದಾಗ ಹೇಳಿದರು: ನೀವು ನನ್ನ ನಂತರ ಅತಿ ನಿಕೃಷ್ಟ ಉತ್ತರಾಧಿಕಾರವನ್ನು ತೋರಿದಿರಿ. ನಿಮ್ಮ ಪ್ರಭುವಿನ ಆದೇಶಕ್ಕೆ ಮೊದಲೇ ನೀವು ಆತುರ ಪಟ್ಟಿರುವಿರಾ? ಮತ್ತು ಅವರು ಕೂಡಲೇ ಫಲಕಗಳನ್ನು ಕೆಳಗಡೆ ಹಾಕಿ ತಮ್ಮ ಸಹೊದರನ ತಲೆಗೂದಲನ್ನು ಹಿಡಿದು ತಮ್ಮೆಡೆಗೆ ಎಳೆಯ ತೊಡಗಿದರು. ಹಾರೂನ್ ಹೇಳಿದರು: ನನ್ನ ತಾಯಿ ಪುತ್ರನೇ, ಜನರು ನನ್ನನ್ನು ಬಲಹೀನನ್ನಾಗಿ ಮಾಡಿಬಿಟ್ಟರು ಮತ್ತು ನನ್ನನ್ನು ಕೊಂದುಬಿಡುವಷ್ಟಕ್ಕು ತಲುಪಿದರು. ಆದ್ದರಿಂದ ನೀನು ನನ್ನ ಮೇಲೆ ಶತ್ರುಗಳು ನಗುವಂತೆ ಮಾಡದಿರು ಮತ್ತು ಅಕ್ರಮಿಗಳ ಸಾಲಿನಲ್ಲಿ ನನ್ನನ್ನು ಸೇರಿಸದಿರು.
আৰবী তাফছীৰসমূহ:
قَالَ رَبِّ اغْفِرْ لِیْ وَلِاَخِیْ وَاَدْخِلْنَا فِیْ رَحْمَتِكَ ۖؗ— وَاَنْتَ اَرْحَمُ الرّٰحِمِیْنَ ۟۠
ಮೂಸಾ ಹೇಳಿದರು: ನನ್ನ ಪ್ರಭೂ, ನನ್ನನ್ನು ಮತ್ತು ನನ್ನ ಸಹೋದರನನ್ನು ಕ್ಷಮಿಸು ಮತ್ತು ನಮ್ಮನ್ನು ನಿನ್ನ ಕಾರುಣ್ಯದಲ್ಲಿ ಪ್ರವೇಶಗೊಳಿಸು ಮತ್ತು ನೀನು ಕರುಣೆ ತೋರುವವರಲ್ಲಿ ಅತ್ಯಂತ ಹೆಚ್ಚು ಕರುಣೆ ತೋರುವವನಾಗಿರುವೆ.
আৰবী তাফছীৰসমূহ:
اِنَّ الَّذِیْنَ اتَّخَذُوا الْعِجْلَ سَیَنَالُهُمْ غَضَبٌ مِّنْ رَّبِّهِمْ وَذِلَّةٌ فِی الْحَیٰوةِ الدُّنْیَا ؕ— وَكَذٰلِكَ نَجْزِی الْمُفْتَرِیْنَ ۟
(ಅಲ್ಲಾಹನು ಹೇಳಿದನು) ನಿಸ್ಸಂಶಯವಾಗಿಯು ಕರುವನ್ನು ಆರಾಧ್ಯನನ್ನಾಗಿ ಮಾಡಿಕೊಂಡವರಿಗೆ ಶೀಘ್ರವೇ ತಮ್ಮ ಪ್ರಭುವಿನ ಕಡೆಯಿಂದ ಕ್ರೋಧ ತಟ್ಟಲಿದೆ ಹಾಗೂ ಐಹಿಕ ಜೀವನದಲ್ಲೇ ಅಪಮಾನವೆರಗಲಿದೆ. ಮತ್ತು ಸುಳ್ಳು ಹೆಣೆಯುವವರಿಗೆ ನಾವು ಇದೇ ರೀತಿ ಪ್ರತಿಫಲ ನೀಡುತ್ತೇವೆ.
আৰবী তাফছীৰসমূহ:
وَالَّذِیْنَ عَمِلُوا السَّیِّاٰتِ ثُمَّ تَابُوْا مِنْ بَعْدِهَا وَاٰمَنُوْۤا ؗ— اِنَّ رَبَّكَ مِنْ بَعْدِهَا لَغَفُوْرٌ رَّحِیْمٌ ۟
ಯಾರು ದುಷ್ಕರ್ಮವೆಸಗಿದ, ನಂತರ ಪಶ್ಚಾತ್ತಾಪ ಪಟ್ಟರೋ ಮತ್ತು ಸತ್ಯವಿಶ್ವಾಸವಿಟ್ಟರೋ ಆಗ ನಿಮ್ಮ ಪ್ರಭು ಪಶ್ಚಾತ್ತಾಪದ ಬಳಿಕ ಪಾಪವನ್ನು ಕ್ಷಮಿಸುವವನು, ಕರುಣೆ ತೋರುವವನು ಆಗಿರುವನು.
আৰবী তাফছীৰসমূহ:
وَلَمَّا سَكَتَ عَنْ مُّوْسَی الْغَضَبُ اَخَذَ الْاَلْوَاحَ ۖۚ— وَفِیْ نُسْخَتِهَا هُدًی وَّرَحْمَةٌ لِّلَّذِیْنَ هُمْ لِرَبِّهِمْ یَرْهَبُوْنَ ۟
ಮತ್ತು ಮೂಸಾರವರ ಕೋಪವು ತಣ್ಣಗಾದಾಗ ಆ ಫಲಕಗಳನ್ನು ಎತ್ತಿಕೊಂಡರು ಅವುಗಳಲ್ಲಿ ತಮ್ಮ ಪ್ರಭುವನ್ನು ಭಯಪಡುವ ಜನರಿಗೆ ಮಾರ್ಗದರ್ಶನವೂ, ಕಾರಣ್ಯವೂ ಇತ್ತು.
আৰবী তাফছীৰসমূহ:
وَاخْتَارَ مُوْسٰی قَوْمَهٗ سَبْعِیْنَ رَجُلًا لِّمِیْقَاتِنَا ۚ— فَلَمَّاۤ اَخَذَتْهُمُ الرَّجْفَةُ قَالَ رَبِّ لَوْ شِئْتَ اَهْلَكْتَهُمْ مِّنْ قَبْلُ وَاِیَّایَ ؕ— اَتُهْلِكُنَا بِمَا فَعَلَ السُّفَهَآءُ مِنَّا ۚ— اِنْ هِیَ اِلَّا فِتْنَتُكَ ؕ— تُضِلُّ بِهَا مَنْ تَشَآءُ وَتَهْدِیْ مَنْ تَشَآءُ ؕ— اَنْتَ وَلِیُّنَا فَاغْفِرْ لَنَا وَارْحَمْنَا وَاَنْتَ خَیْرُ الْغٰفِرِیْنَ ۟
ಮತ್ತು ಮೂಸಾ ತಮ್ಮ ಜನರ ಪೈಕಿ ಎಪ್ಪತ್ತು ಮಂದಿಯನ್ನು ನಮ್ಮ ನಿಶ್ಚಿತ ಸಮಯಕ್ಕಾಗಿ (ತೂರ್ ಪರ್ವತದೆಡೆಗೆ ಹೋಗಲು) ಆರಿಸಿಕೊಂಡರು. ನಂತರ (ಅಲ್ಲಿ ಅವರು ಅಲ್ಲಾಹನನ್ನು ಪ್ರತ್ಯಕ್ಷವಾಗಿ ಕಾಣಲೇಬೇಕೆಂದ ಕಾರಣದಿಂದ) ಭೀಕರವಾದ ಕಂಪನವು ಅವರನ್ನು ಹಿಡಿದು ಬಿಟ್ಟಾಗ ಮೂಸಾ ಹೇಳಿದರು: ನನ್ನ ಪ್ರಭೂ, ನೀನು ಇಚ್ಛಿಸಿದ್ದರೆ ಇದಕ್ಕಿಂತ ಮುಂಚೆಯೇ ಅವರನ್ನು ಮತ್ತು ನನ್ನನ್ನು ನಾಶಗೊಳಿಸಿಬಿಡುತ್ತಿದ್ದೆ. ನಮ್ಮಲ್ಲಿನ ಕೆಲವು ಅವಿವೇಕಿಗಳು ಮಾಡಿದ ಕೃತ್ಯದ ನಿಮಿತ್ತ ನೀನು ನಮ್ಮನ್ನು ನಾಶಗೊಳಿಸುವೆಯಾ? ಇದು ನಿನ್ನ ಒಂದು ಪರೀಕ್ಷೆಯೇ ಆಗಿದೆ. ಇದರ ಮೂಲಕ ನೀನು ಇಚ್ಛಿಸುವವರನ್ನು ಪಥಭ್ರಷ್ಟಗೊಳಿಸುವೆ ಮತ್ತು ನೀನು ಇಚ್ಛಿಸುವವರನ್ನು ಸನ್ಮಾರ್ಗದಲ್ಲಿ ಸೇರಿಸುವೆ. ನೀನೇ ನಮ್ಮ ಕಾರ್ಯಸಾಧಕನಾಗಿರುವೆ. ಹಾಗೆಯೇ ನೀನು ನಮ್ಮನ್ನು ಕ್ಷಮಿಸು ಹಾಗೂ ನಮ್ಮ ಮೇಲೆ ಕಾರುಣ್ಯವನ್ನು ತೋರು. ಕ್ಷಮೆ ನೀಡುವವರಲ್ಲಿ ನೀನು ಅತ್ಯುತ್ತಮನಾಗಿರುವೆ.
আৰবী তাফছীৰসমূহ:
وَاكْتُبْ لَنَا فِیْ هٰذِهِ الدُّنْیَا حَسَنَةً وَّفِی الْاٰخِرَةِ اِنَّا هُدْنَاۤ اِلَیْكَ ؕ— قَالَ عَذَابِیْۤ اُصِیْبُ بِهٖ مَنْ اَشَآءُ ۚ— وَرَحْمَتِیْ وَسِعَتْ كُلَّ شَیْءٍ ؕ— فَسَاَكْتُبُهَا لِلَّذِیْنَ یَتَّقُوْنَ وَیُؤْتُوْنَ الزَّكٰوةَ وَالَّذِیْنَ هُمْ بِاٰیٰتِنَا یُؤْمِنُوْنَ ۟ۚ
ಇಹಲೋಕದಲ್ಲೂ ಪರಲೋಕದಲ್ಲೂ ನಮಗಾಗಿ ಒಳಿತನ್ನು ದಾಖಲಿಸು. ನಾವು ನಿನ್ನೆಡೆಗೆ ಮರಳುತ್ತೇವೆ. ಅಲ್ಲಾಹನು ಹೇಳುವನು: ನಾನು ಇಚ್ಛಿಸುವವರ ಮೇಲೆಯೇ ನನ್ನ ಶಿಕ್ಷೆಯನ್ನು ಜಾರಿಗೊಳಿಸುವೆನು ಮತ್ತು ನನ್ನ ಕಾರುಣ್ಯವು ಸರ್ವ ವಸ್ತುಗಳನ್ನು ಆವರಿಸಿಕೊಂಡಿದೆ. ಆದ್ದರಿಂದ ಭಯಪಡುವ, ಝಕಾತ್ ನೀಡುವ ಮತ್ತು ನಮ್ಮ ದೃಷ್ಟಾಂತಗಳಲ್ಲಿ ವಿಶ್ವಾಸವಿಡುವ ಜನರಿಗಾಗಿ ಕಾರುಣ್ಯವನ್ನು ನಾನು ದಾಖಲಿಸಿಡುವೆನು.
আৰবী তাফছীৰসমূহ:
اَلَّذِیْنَ یَتَّبِعُوْنَ الرَّسُوْلَ النَّبِیَّ الْاُمِّیَّ الَّذِیْ یَجِدُوْنَهٗ مَكْتُوْبًا عِنْدَهُمْ فِی التَّوْرٰىةِ وَالْاِنْجِیْلِ ؗ— یَاْمُرُهُمْ بِالْمَعْرُوْفِ وَیَنْهٰىهُمْ عَنِ الْمُنْكَرِ وَیُحِلُّ لَهُمُ الطَّیِّبٰتِ وَیُحَرِّمُ عَلَیْهِمُ الْخَبٰٓىِٕثَ وَیَضَعُ عَنْهُمْ اِصْرَهُمْ وَالْاَغْلٰلَ الَّتِیْ كَانَتْ عَلَیْهِمْ ؕ— فَالَّذِیْنَ اٰمَنُوْا بِهٖ وَعَزَّرُوْهُ وَنَصَرُوْهُ وَاتَّبَعُوا النُّوْرَ الَّذِیْۤ اُنْزِلَ مَعَهٗۤ ۙ— اُولٰٓىِٕكَ هُمُ الْمُفْلِحُوْنَ ۟۠
ಅವರು ತಮ್ಮ ಬಳಿಯಿರುವ ತೌರಾತ್‌ನಲ್ಲೂ, ಇಂಜೀಲ್‌ನಲ್ಲೂ ಅವರನ್ನು (ಮುಹಮ್ಮದರನ್ನು) ದಾಖಲಿಸಲ್ಪಟ್ಟಿರುವುದಾಗಿ ಕಾಣುವ ನಿರಕ್ಷರಿಯಾದ ಪೈಗಂಬರರಲ್ಲಿ ವಿಶ್ವಾಸವಿರಿಸುತ್ತಾರೆ. ಅವರು ಅವರಿಗೆ ಒಳಿತಿನ ಆದೇಶ ನೀಡುತ್ತಾರೆ. ಮತ್ತು ಕೆಡುಕುಗಳಿಂದ ತಡೆಯುತ್ತಾರೆ. ಉತ್ತಮ ವಸ್ತುಗಳನ್ನು ಅವರಿಗೆ ಧರ್ಮ ಸಮ್ಮತಗೊಳಿಸುತ್ತಾರೆ ಮತ್ತು ಅಶುದ್ಧ ವಸ್ತುಗಳನ್ನು ಅವರ ಮೇಲೆ ನಿಷಿದ್ಧಗೊಳಿಸುತ್ತಾರೆ. ಅವರ ಮೇಲಿರುವ ಭಾರಗಳನ್ನೂ (ಮೂಡನಂಬಿಕೆ, ಧಾರ್ಮಿಕ ಬಿಕ್ಕಟ್ಟು) ಇಳಿಸುತ್ತಾರೆ ಮತ್ತು ಸಂಕೋಲೆಗಳನ್ನೂ (ಸಿಲುಕಿರುವ ತಪ್ಪು ಸಂಪ್ರದಾಯಗಳನ್ನು) ಬಿಡಿಸುತ್ತಾರೆ. ಇನ್ನು ಯಾರು ಆ ಪೈಗಂಬರರ ಮೇಲೆ ವಿಶ್ವಾಸವಿಡುತ್ತಾರೋ, ಅವರಿಗೆ ಬೆಂಬಲ ನೀಡುತ್ತಾರೋ ಮತ್ತು ಅವರಿಗೆ ಸಹಾಯ ಮಾಡುತ್ತಾರೋ ಮತ್ತು ಅವರ ಜೊತೆ ಇಳಿಸಲಾಗಿರುವ ಪ್ರಕಾಶವನ್ನು ಅನುಸರಿಸುತ್ತಾರೋ ಅಂತಹವರೇ ಯಶಸ್ಸು ಪಡೆಯುವವರಾಗಿರುತ್ತಾರೆ.
আৰবী তাফছীৰসমূহ:
قُلْ یٰۤاَیُّهَا النَّاسُ اِنِّیْ رَسُوْلُ اللّٰهِ اِلَیْكُمْ جَمِیْعَا ١لَّذِیْ لَهٗ مُلْكُ السَّمٰوٰتِ وَالْاَرْضِ ۚ— لَاۤ اِلٰهَ اِلَّا هُوَ یُحْیٖ وَیُمِیْتُ ۪— فَاٰمِنُوْا بِاللّٰهِ وَرَسُوْلِهِ النَّبِیِّ الْاُمِّیِّ الَّذِیْ یُؤْمِنُ بِاللّٰهِ وَكَلِمٰتِهٖ وَاتَّبِعُوْهُ لَعَلَّكُمْ تَهْتَدُوْنَ ۟
ಓ ಪೈಗಂಬರರೇ ಹೇಳಿರಿ: ಓ ಜನರೇ, ನಿಮ್ಮೆಲ್ಲರ ಕಡೆಗೆ ಆಕಾಶಗಳ ಮತ್ತು ಭೂಮಿಯ ಆಧಿಪತ್ಯ ಹೊಂದಿರುವ ಅಲ್ಲಾಹನ ಸಂದೇಶ ವಾಹಕನಾಗಿರುವೆನು. ಅವನ ಹೊರತು ಅನ್ಯ ಆರಾಧ್ಯರಿಲ್ಲ. ಅವನೇ ಜೀವ ನೀಡುತ್ತಾನೆ ಮತ್ತು ಮರಣ ನೀಡುತ್ತಾನೆ. ಆದ್ದರಿಂದ ನೀವು ಅಲ್ಲಾಹನ ಮೇಲೂ, ಅವನ ವಚನಗಳಲ್ಲಿ ವಿಶ್ವಾಸವಿಟ್ಟ ನಿರಕ್ಷರಿ ಪೈಗಂಬರರಾದ ಅವನ ಸಂದೇಶವಾಹಕರ ಮೇಲೂ ವಿಶ್ವಾಸವಿರಿಸಿರಿ ಮತ್ತು ಅವರ ಅನುಸರಣೆ ಮಾಡಿರಿ. ಪ್ರಾಯಶಃ ನೀವು ಸನ್ಮಾರ್ಗ ಪಡೆಯಬಹುದು.
আৰবী তাফছীৰসমূহ:
وَمِنْ قَوْمِ مُوْسٰۤی اُمَّةٌ یَّهْدُوْنَ بِالْحَقِّ وَبِهٖ یَعْدِلُوْنَ ۟
ಮತ್ತು ಮೂಸಾರವರ ಜನತೆಯ ಪೈಕಿ ಸತ್ಯಕ್ಕನುಗುಣವಾಗಿ ಮಾರ್ಗದರ್ಶನ ನೀಡುವ ಮತ್ತು ಅದರ ಪ್ರಕಾರ ನ್ಯಾಯವನ್ನೂ ಪಾಲಿಸುವ ಒಂದು ಪಂಗಡವಿತ್ತು.
আৰবী তাফছীৰসমূহ:
وَقَطَّعْنٰهُمُ اثْنَتَیْ عَشْرَةَ اَسْبَاطًا اُمَمًا ؕ— وَاَوْحَیْنَاۤ اِلٰی مُوْسٰۤی اِذِ اسْتَسْقٰىهُ قَوْمُهٗۤ اَنِ اضْرِبْ بِّعَصَاكَ الْحَجَرَ ۚ— فَانْۢبَجَسَتْ مِنْهُ اثْنَتَا عَشْرَةَ عَیْنًا ؕ— قَدْ عَلِمَ كُلُّ اُنَاسٍ مَّشْرَبَهُمْ ؕ— وَظَلَّلْنَا عَلَیْهِمُ الْغَمَامَ وَاَنْزَلْنَا عَلَیْهِمُ الْمَنَّ وَالسَّلْوٰی ؕ— كُلُوْا مِنْ طَیِّبٰتِ مَا رَزَقْنٰكُمْ ؕ— وَمَا ظَلَمُوْنَا وَلٰكِنْ كَانُوْۤا اَنْفُسَهُمْ یَظْلِمُوْنَ ۟
ಮತ್ತು ನಾವು ಅವರನ್ನು ಹನ್ನೆರಡು ಗೋತ್ರಗಳಲ್ಲಿ ವಿಂಗಡಿಸಿ ಪ್ರತ್ಯೇಕ ಪಂಗಡಗಳನ್ನಾಗಿ ಮಾಡಿದೆವು. ಮೂಸಾರವರೊಂದಿಗೆ ಅವನ ಜನತೆಯು ನೀರನ್ನು ಕೇಳಿದಾಗ ನಾವು ಅವರಿಗೆ ಆದೇಶ ನೀಡಿದೆವು ತನ್ನ ಬೆತ್ತದಿಂದ ಆ ಬಂಡೆಯ ಮೇಲೆ ಹೊಡಯಿರೆಂದು, ಆಗ ಅದರಿಂದ ಹನ್ನೆರಡು ಚಿಲುಮೆಗಳು ಹೊರಬಂದವು. ಪ್ರತಿಯೊಂದು ಪಂಗಡವು ತಮ್ಮ ಕುಡಿಯುವ ಘಟಕವನ್ನು ಅರಿತುಕೊಂಡಿತು ಮತ್ತು ನಾವು ಅವರ ಮೇಲೆ ಮೋಡದ ನೆರಳನ್ನು ನೀಡಿದೆವು ಮತ್ತು ಅವರಿಗೆ ಮನ್ನಃ(ಸಿಹಿಪದಾರ್ಥ) ಹಾಗೂ ಲಾವಕ್ಕಿಗಳನ್ನು ಇಳಿಸಿಕೊಟ್ಟೆವು ಮತ್ತು ನಾವು ನಿಮಗೆ ನೀಡಿರುವ ಶುದ್ಧ ವಸ್ತುಗಳನ್ನು ತಿನ್ನಿರಿ ಎಂದೆವು ಮತ್ತು ಅವರು ನಮ್ಮ ಮೇಲೆ ಅಕ್ರಮವೇನೂ ಎಸಗಲಿಲ್ಲ. ಅವರು ಸ್ವತಃ ತಮ್ಮ ಮೇಲೆಯೇ ಅಕ್ರ‍್ರಮವೆಸಗುತ್ತಿದ್ದರು.
আৰবী তাফছীৰসমূহ:
وَاِذْ قِیْلَ لَهُمُ اسْكُنُوْا هٰذِهِ الْقَرْیَةَ وَكُلُوْا مِنْهَا حَیْثُ شِئْتُمْ وَقُوْلُوْا حِطَّةٌ وَّادْخُلُوا الْبَابَ سُجَّدًا نَّغْفِرْ لَكُمْ خَطِیْٓـٰٔتِكُمْ ؕ— سَنَزِیْدُ الْمُحْسِنِیْنَ ۟
ಅವರು ಈ ಆಹಾರದಿಂದ ಸಂತೃಪ್ತರಾಗಿರಲಿಲ್ಲ ನೀವು ಆ ಪಟ್ಟಣದಲ್ಲಿ ನೆಲೆಸಿರಿ ಮತ್ತು ನೀವಿಚ್ಛಿಸುವಲ್ಲಿಂದ ಯಥೇಷ್ಟವಾಗಿ ತಿನ್ನಿರಿ ಮತ್ತು ಪಶ್ಚಾತ್ತಾಪದಿಂದ ಮರಳಿರುವೆವು ಎನ್ನುತ್ತಾ ಹೋಗಿರಿ ಹಾಗೂ ತಲೆಬಾಗಿದವರಾಗಿ ದ್ವಾರವನ್ನು ಪ್ರವೇಶಿಸಿರಿ. ನಾವು ನಿಮ್ಮ ಪಾಪಗಳನ್ನು ಕ್ಷಮಿಸುವೆವು. ಸತ್ಕರ್ಮಗಳನ್ನು ಮಾಡುವವರಿಗೆ ಇನ್ನಷ್ಟು ಅಧಿಕ ನೀಡುವೆವು ಎಂದು ನಾವು ಅವರಿಗೆ ಆದೇಶ ನೀಡಲಾದ ಸಂದರ್ಭವನ್ನು ಸ್ಮರಿಸಿರಿ.
আৰবী তাফছীৰসমূহ:
فَبَدَّلَ الَّذِیْنَ ظَلَمُوْا مِنْهُمْ قَوْلًا غَیْرَ الَّذِیْ قِیْلَ لَهُمْ فَاَرْسَلْنَا عَلَیْهِمْ رِجْزًا مِّنَ السَّمَآءِ بِمَا كَانُوْا یَظْلِمُوْنَ ۟۠
ಆದರೆ ಆ ಅಕ್ರಮಿಗಳು ತಮಗೆ ಹೇಳಲಾದ ಮಾತಿನ ಬದಲಿಗೆ ಬೇರೆ ಮಾತನ್ನು ಹೇಳಿಬಿಟ್ಟರು. ಅವರ ಅಕ್ರಮದ ಫಲವಾಗಿ ನಾವು ಅವರಿಗೆ ಆಕಾಶದ ವಿಪತ್ತನ್ನು ಎರಗಿಸಿದೆವು.
আৰবী তাফছীৰসমূহ:
وَسْـَٔلْهُمْ عَنِ الْقَرْیَةِ الَّتِیْ كَانَتْ حَاضِرَةَ الْبَحْرِ ۘ— اِذْ یَعْدُوْنَ فِی السَّبْتِ اِذْ تَاْتِیْهِمْ حِیْتَانُهُمْ یَوْمَ سَبْتِهِمْ شُرَّعًا وَّیَوْمَ لَا یَسْبِتُوْنَ ۙ— لَا تَاْتِیْهِمْ ۛۚ— كَذٰلِكَ ۛۚ— نَبْلُوْهُمْ بِمَا كَانُوْا یَفْسُقُوْنَ ۟
ನೀವು ಅವರೊಂದಿಗೆ ಸಮುದ್ರ ತೀರದಲ್ಲಿದ್ದ ಆ ಪಟ್ಟಣದವರ ಕುರಿತು ವಿಚಾರಿಸಿರಿ; ಶನಿವಾರದ ಕುರಿತು ಅವರು ಅತಿಕ್ರಮ ತೋರುತ್ತಿದ್ದ ಸಂದರ್ಭ ಶನಿವಾರದ ದಿನ ಮೀನುಗಳು ಪ್ರತ್ಯಕ್ಷವಾಗಿ ಅವರ ಮುಂದೆ ಬರುತ್ತಿದ್ದವು ಮತ್ತು ಬೇರೆ ದಿನಗಳಲ್ಲಿ ಅವು ಅವರ ಮುಂದೆ ಬರುತ್ತಿರಲಿಲ್ಲ. ಇದೇ ಪ್ರಕಾರ ನಾವು ಅವರನ್ನು ಅವರು ಧಿಕ್ಕಾರ ತೋರುತ್ತಿದ್ದುದರ ಫಲವಾಗಿ ಪರೀಕ್ಷಿಸುತ್ತಿದ್ದೆವು.
আৰবী তাফছীৰসমূহ:
وَاِذْ قَالَتْ اُمَّةٌ مِّنْهُمْ لِمَ تَعِظُوْنَ قَوْمَا ۙ— ١للّٰهُ مُهْلِكُهُمْ اَوْ مُعَذِّبُهُمْ عَذَابًا شَدِیْدًا ؕ— قَالُوْا مَعْذِرَةً اِلٰی رَبِّكُمْ وَلَعَلَّهُمْ یَتَّقُوْنَ ۟
ಅಲ್ಲಾಹನು ನಾಶಗೊಳಿಸಿಲಿರುವ ಅಥವಾ ಕಠಿಣವಾಗಿ ಶಿಕ್ಷಿಸಲಿರುವ ಒಂದು ಜನತೆಗೆ ನೀವೇಕೆ ಉಪದೇಶಿಸುತ್ತಿರುವಿರಿ? ಎಂದು ಅವರ ಪೈಕಿ ಗುಂಪೊAದು ಹೇಳಿದ ಸಂದರ್ಭ ಅವರು ಹೇಳಿದರು: ಇದು ನಿಮ್ಮ ಪ್ರಭುವಿನ ಬಳಿ ಹೊಣೆ ಮುಕ್ತರಾಗಲೆಂದಾಗಿದೆ ಮತ್ತು ಪ್ರಾಯಶಃ ಅವರು ಭಯ ಭಕ್ತಿ ಪಾಲಿಸಬಹುದು.
আৰবী তাফছীৰসমূহ:
فَلَمَّا نَسُوْا مَا ذُكِّرُوْا بِهٖۤ اَنْجَیْنَا الَّذِیْنَ یَنْهَوْنَ عَنِ السُّوْٓءِ وَاَخَذْنَا الَّذِیْنَ ظَلَمُوْا بِعَذَابٍۭ بَىِٕیْسٍ بِمَا كَانُوْا یَفْسُقُوْنَ ۟
ಹಾಗೆಯೇ ಅವರಿಗೆ ಉಪದೇಶ ನೀಡಲಾಗುತ್ತಿದ್ದುದನ್ನು ಮರೆತು ಬಿಟ್ಟಾಗ ನಾವು ಕೆಡುಕಿನಿಂದ ತಡೆಯುತ್ತಿದ್ದವರನ್ನು ರಕ್ಷಿಸಿದೆವು ಮತ್ತು ಅಕ್ರಮಿಗಳನ್ನು ಅವರು ಧಿಕ್ಕಾರ ತೋರಿದುದರ ನಿಮಿತ್ತ ಕಠಿಣವಾದ ಶಿಕ್ಷೆಗೆ ಗುರಿಪಡಿಸಿದೆವು.
আৰবী তাফছীৰসমূহ:
فَلَمَّا عَتَوْا عَنْ مَّا نُهُوْا عَنْهُ قُلْنَا لَهُمْ كُوْنُوْا قِرَدَةً خٰسِىِٕیْنَ ۟
ಅವರನ್ನು ತಡೆಯಲಾಗುತ್ತಿದ್ದ ಕೃತ್ಯವನ್ನು ಅವರು ಧಿಕ್ಕರಿಸಿದಾಗ ನಾವು ಅವರೊಂದಿಗೆ ನೀವು ನಿಂದ್ಯರಾದ ಕಪಿಗಳಾಗಿರಿ ಎಂದು ಹೇಳಿದೆವು.
আৰবী তাফছীৰসমূহ:
وَاِذْ تَاَذَّنَ رَبُّكَ لَیَبْعَثَنَّ عَلَیْهِمْ اِلٰی یَوْمِ الْقِیٰمَةِ مَنْ یَّسُوْمُهُمْ سُوْٓءَ الْعَذَابِ ؕ— اِنَّ رَبَّكَ لَسَرِیْعُ الْعِقَابِ ۖۚ— وَاِنَّهٗ لَغَفُوْرٌ رَّحِیْمٌ ۟
ಪುನರುತ್ಥಾನದ ದಿನದವರೆಗೆ ಯಹೂದಿಗಳಿಗೆ ಕಠಿಣವಾಗಿ ಶಿಕ್ಷಿಸುವವರನ್ನು ಹೇರುತ್ತಲೇ ಇರುವೆನೆಂದು ನಿಮ್ಮ ಪ್ರಭು ಹೇಳಿರುವುದನ್ನು ಸ್ಮರಿಸಿರಿ. ನಿಸ್ಸಂದೇಹವಾಗಿಯು ನಿಮ್ಮ ಪ್ರಭುವು ಶೀಘ್ರವಾಗಿ ಶಿಕ್ಷೆ ನೀಡುತ್ತಾನೆ. ಮತ್ತು ಖಂಡಿತವಾಗಿಯು ಅವನು ಮಹಾಕ್ಷಮಾಳುವೂ, ಕರುಣಾನಿಧಿಯೂ ಆಗಿದ್ದಾನೆ.
আৰবী তাফছীৰসমূহ:
وَقَطَّعْنٰهُمْ فِی الْاَرْضِ اُمَمًا ۚ— مِنْهُمُ الصّٰلِحُوْنَ وَمِنْهُمْ دُوْنَ ذٰلِكَ ؗ— وَبَلَوْنٰهُمْ بِالْحَسَنٰتِ وَالسَّیِّاٰتِ لَعَلَّهُمْ یَرْجِعُوْنَ ۟
ಮತ್ತು ನಾವು ಭೂಮಿಯಲ್ಲಿ ಅವರನ್ನು ಹಲವು ಪಂಗಡಗಳನ್ನಾಗಿ ವಿಂಗಡಿಸಿದ್ದೇವೆ. ಅವರಲ್ಲಿ ಸಜ್ಜನರೂ ಇರುವರು ಮತ್ತು ಅವರ ಹೊರತು ಬೇರೆಯವರೂ ಇರುವರು ಮತ್ತು ನಾವು ಅವರನ್ನು ಸುಸ್ಥಿತಿಗಳಲ್ಲೂ, ದುಸ್ಥಿತಿಗಳಲ್ಲೂ ಪರೀಕ್ಷಿಸಿದೆವು. ಪ್ರಾಯಶಃ ಅವರು ಮರಳಬಹುದೆಂದು.
আৰবী তাফছীৰসমূহ:
فَخَلَفَ مِنْ بَعْدِهِمْ خَلْفٌ وَّرِثُوا الْكِتٰبَ یَاْخُذُوْنَ عَرَضَ هٰذَا الْاَدْنٰی وَیَقُوْلُوْنَ سَیُغْفَرُ لَنَا ۚ— وَاِنْ یَّاْتِهِمْ عَرَضٌ مِّثْلُهٗ یَاْخُذُوْهُ ؕ— اَلَمْ یُؤْخَذْ عَلَیْهِمْ مِّیْثَاقُ الْكِتٰبِ اَنْ لَّا یَقُوْلُوْا عَلَی اللّٰهِ اِلَّا الْحَقَّ وَدَرَسُوْا مَا فِیْهِ ؕ— وَالدَّارُ الْاٰخِرَةُ خَیْرٌ لِّلَّذِیْنَ یَتَّقُوْنَ ؕ— اَفَلَا تَعْقِلُوْنَ ۟
ಅನಂತರ ಅವರ ಬಳಿಕ ಅವರ ಉತ್ತರಾಧಿಕಾರಿಗಳಾದ ಒಂದು ಪೀಳಿಗೆ ಬಂದಿತು. ಅವರು ಗ್ರಂಥದ ವಾರೀಸುದಾರರಾದರು. ಅವರು ಈ ನಶ್ವರ ಲೋಕದ ಸಂಪತ್ತು ಸವಲತ್ತುಗಳನ್ನು ಪಡೆದುಕೊಳ್ಳುವರು ಮತ್ತು ಹೇಳುವರು: ನಮಗೆ ಕ್ಷಮೆ ನೀಡಲಾಗುವುದು. ವಸ್ತುತಃ ಅವರ ಬಳಿ ಅಂತಹದೇ ಬೇರೆ ಸವಲತ್ತುಗಳು ಬಂದರೂ ಅವರದನ್ನು ಪಡೆದುಕೊಳ್ಳುವರು. ಅಲ್ಲಾಹನ ಮೇಲೆ ಸತ್ಯದ ಹೊರತು ಬೇರೇನನ್ನೂ ಹೇಳಬಾರದೆಂದು ಗ್ರಂಥದ ಮೂಲಕ ಅವರಿಂದ ಕರಾರನ್ನು ಪಡೆಯಲಾಗಿಲ್ಲವೇ ಅದರಲ್ಲಿರುವುದನ್ನು ಅವರು ಅಧ್ಯಯನ ಮಾಡಲಿಲ್ಲವೇ? ಮತ್ತು ಭಯಭಕ್ತಿ ಪಾಲಿಸುವವರಿಗೆ ಪರಲೋಕ ಭವನವು ಉತ್ತಮವಾಗಿದೆ. ಅದಾಗ್ಯೂ ನೀವು ಗ್ರಹಿಸಿಕೊಳ್ಳುವುದಿಲ್ಲವೇ?
আৰবী তাফছীৰসমূহ:
وَالَّذِیْنَ یُمَسِّكُوْنَ بِالْكِتٰبِ وَاَقَامُوا الصَّلٰوةَ ؕ— اِنَّا لَا نُضِیْعُ اَجْرَ الْمُصْلِحِیْنَ ۟
ಮತ್ತು ಯಾರು ಗ್ರಂಥವನ್ನು ಸದೃಢವಾಗಿ ಹಿಡಿದುಕೊಂಡರೋ ಮತ್ತು ನಮಾಝನ್ನು ಸಂಸ್ಥಾಪಿಸಿದರೋ ಖಂಡಿತವಾಗಿಯು ನಾವು ಅಂತಹ ಸದಾಚಾರಿಗಳ ಪ್ರತಿಫಲವನ್ನು ವ್ಯರ್ಥಗೊಳಿಸಲಾರೆವು.
আৰবী তাফছীৰসমূহ:
وَاِذْ نَتَقْنَا الْجَبَلَ فَوْقَهُمْ كَاَنَّهٗ ظُلَّةٌ وَّظَنُّوْۤا اَنَّهٗ وَاقِعٌ بِهِمْ ۚ— خُذُوْا مَاۤ اٰتَیْنٰكُمْ بِقُوَّةٍ وَّاذْكُرُوْا مَا فِیْهِ لَعَلَّكُمْ تَتَّقُوْنَ ۟۠
ನಾವು ಪರ್ವತವನ್ನು ನೆರಳಿನಂತೆ ಅವರ ಮೇಲೆ ಎತ್ತಿ ಹಿಡಿದ ಸಂದರ್ಭ, ಅದು ತಮ್ಮ ಮೇಲೆ ಬಿದ್ದು ಬಿಡುತ್ತದೆಂದು ಅವರಿಗೆ ಮನದಟ್ಟಾದ ಸಂದರ್ಭವನ್ನು ಸ್ಮರಿಸಿರಿ. ಮತ್ತು ಹೇಳಿದೆವು; ನಾವು ನಿಮಗೆ ನೀಡಿರುವ ಗ್ರಂಥವನ್ನು ಸಧೃಢವಾಗಿ ಹಿಡಿದುಕೊಳ್ಳಿರಿ ಮತ್ತು ಅದರಲ್ಲಿರುವುದನ್ನು ಸ್ಮರಿಸಿರಿ ನೀವು ಭಯಭಕ್ತಿ ಪಾಲಿಸಬಹುದು.
আৰবী তাফছীৰসমূহ:
وَاِذْ اَخَذَ رَبُّكَ مِنْ بَنِیْۤ اٰدَمَ مِنْ ظُهُوْرِهِمْ ذُرِّیَّتَهُمْ وَاَشْهَدَهُمْ عَلٰۤی اَنْفُسِهِمْ ۚ— اَلَسْتُ بِرَبِّكُمْ ؕ— قَالُوْا بَلٰی ۛۚ— شَهِدْنَا ۛۚ— اَنْ تَقُوْلُوْا یَوْمَ الْقِیٰمَةِ اِنَّا كُنَّا عَنْ هٰذَا غٰفِلِیْنَ ۟ۙ
ನಿಮ್ಮ ಪ್ರಭುವು ಆದಮರ ಮಕ್ಕಳ ಬೆನ್ನುಗಳಿಂದ ಅವರ ಸಂತಾನಗಳನ್ನು ಹೊರತೆಗೆದು ಅವರನ್ನು ಸ್ವತಃ ಅವರ ಮೇಲೆ ಸಾಕ್ಷಿಯನ್ನಾಗಿರಿಸಿ, ನಾನು ನಿಮ್ಮ ಪ್ರಭುವಲ್ಲವೇ? ಎಂದು ಅವರೊಡನೆ ಕೇಳಿದ ಸಂದರ್ಭವನ್ನು ಸ್ಮರಿಸಿರಿ. ಆಗ ಎಲ್ಲರೂ ಉತ್ತರಿಸಿದರು; ಏಕಿಲ್ಲ, ನಾವೆಲ್ಲರೂ ಸಾಕ್ಷö್ಯವಹಿಸುತ್ತೇವೆ. ಇದೇಕೆಂದರೆ ನೀವು ಪುನರುತ್ಥಾನದ ದಿನ ನಾವು ಈ ಕುರಿತು ಅಲಕ್ಷö್ಯರಾಗಿದ್ದೆವು ಎಂದು ಹೇಳಬಾರದೆಂದಾಗಿದೆ.
আৰবী তাফছীৰসমূহ:
اَوْ تَقُوْلُوْۤا اِنَّمَاۤ اَشْرَكَ اٰبَآؤُنَا مِنْ قَبْلُ وَكُنَّا ذُرِّیَّةً مِّنْ بَعْدِهِمْ ۚ— اَفَتُهْلِكُنَا بِمَا فَعَلَ الْمُبْطِلُوْنَ ۟
ಅಥವಾ ಈ ಮೊದಲು ನಮ್ಮ ಪೂರ್ವಿಕರು ಬಹುದೇವಾರಾಧನೆಯನ್ನು ಮಾಡಿದ್ದರು ಮತ್ತು ನಾವು ಅವರ ನಂತರ ಅವರ ಸಂತತಿಗಳಲ್ಲಿ ಬಂದವರಾಗಿದ್ದೇವೆ. ಹೀಗಿರುವಾಗ ಆ ಪಥಭ್ರಷ್ಟ ಕೃತ್ಯದ ನಿಮಿತ್ತ ನೀನು ನಮ್ಮನ್ನು ನಾಶ ಮಾಡಿ ಬಿಡುವೆಯಾ? ಎಂದು ಹೇಳಬಾರದೆಂದಾಗಿದೆ.
আৰবী তাফছীৰসমূহ:
وَكَذٰلِكَ نُفَصِّلُ الْاٰیٰتِ وَلَعَلَّهُمْ یَرْجِعُوْنَ ۟
ನಾವು ಇದೇ ಪ್ರಕಾರ ದೃಷ್ಟಾಂತಗಳನ್ನು ವಿವರಸಿಕೊಡುತ್ತೇವೆ. ಪ್ರಾಯಶಃ ಅವರು ಮರಳಬಹುದು.
আৰবী তাফছীৰসমূহ:
وَاتْلُ عَلَیْهِمْ نَبَاَ الَّذِیْۤ اٰتَیْنٰهُ اٰیٰتِنَا فَانْسَلَخَ مِنْهَا فَاَتْبَعَهُ الشَّیْطٰنُ فَكَانَ مِنَ الْغٰوِیْنَ ۟
ನೀವು ಅವರಿಗೆ ಆ ವ್ಯಕ್ತಿಯ ವೃತ್ತಾಂತವನ್ನು ಓದಿ ಹೇಳಿರಿ; ಅವನಿಗೆ ನಾವು ನಮ್ಮ ದೃಷ್ಟಾಂತಗಳ ಜ್ಞಾನವನ್ನು ನೀಡಿದ್ದೆವು ಅನಂತರ ಅವನು ಅವುಗಳಿಂದ ಹೊರಬಂದುಬಿಟ್ಟನು. ಬಳಿಕ ಶೈತಾನನು ಅವನ ಹಿಂದೆ ಬಿದ್ದನು. ಹೀಗೆ ಅವನು ಪಥಭ್ರಷ್ಟರಲ್ಲಿ ಸೇರಿದನು.
আৰবী তাফছীৰসমূহ:
وَلَوْ شِئْنَا لَرَفَعْنٰهُ بِهَا وَلٰكِنَّهٗۤ اَخْلَدَ اِلَی الْاَرْضِ وَاتَّبَعَ هَوٰىهُ ۚ— فَمَثَلُهٗ كَمَثَلِ الْكَلْبِ ۚ— اِنْ تَحْمِلْ عَلَیْهِ یَلْهَثْ اَوْ تَتْرُكْهُ یَلْهَثْ ؕ— ذٰلِكَ مَثَلُ الْقَوْمِ الَّذِیْنَ كَذَّبُوْا بِاٰیٰتِنَا ۚ— فَاقْصُصِ الْقَصَصَ لَعَلَّهُمْ یَتَفَكَّرُوْنَ ۟
ಮತ್ತು ನಾವು ಇಚ್ಛಿಸುತ್ತಿದ್ದರೆ ಆ ಜ್ಞಾನದ ನಿಮಿತ್ತ ಅವನನ್ನು ಉನ್ನತಕ್ಕೇರಿಸುತ್ತಿದ್ದೆವು. ಆದರೆ ಅವನು ಐಹಿಕತೆಯೆಡೆಗೆ ವಾಲಿ ತನ್ನ ಸ್ವೇಚ್ಛೆಯನ್ನು ಅನುಸರಿಸಿದನು. ಹೀಗೆ ಅವನ ಸ್ಥಿತಿಯು ನಾಯಿಯಂತಾಗಿ ಬಿಟ್ಟಿತು. ನೀನು ಅದನ್ನು ಅಟ್ಟಿದರೂ ಅದು ನಾಲಿಗೆ ಚಾಚಿಕೊಂಡಿರುತ್ತದೆ. ಮತ್ತು ನೀನದನ್ನು ಬಿಟ್ಟರೂ ಅದು ನಾಲಿಗೆ ಚಾಚಿಕೊಂಡಿರುತ್ತದೆ. ನಮ್ಮ ದೃಷ್ಟಾಂತಗಳನ್ನು ನಿರಾಕರಿಸುವವರ ಉಪಮೆ ಇದೇ ಆಗಿರುತ್ತದೆ. ಆದ್ದರಿಂದ ನೀವು ಯಹೂದರಿಗೆ ಇದನ್ನು ವಿವರಿಸಿ ಕೊಡಿರಿ. ಪ್ರಾಯಶಃ ಅವರು ಚಿಂತಿಸಬಹುದು.
আৰবী তাফছীৰসমূহ:
سَآءَ مَثَلَا ١لْقَوْمُ الَّذِیْنَ كَذَّبُوْا بِاٰیٰتِنَا وَاَنْفُسَهُمْ كَانُوْا یَظْلِمُوْنَ ۟
ನಮ್ಮ ದೃಷ್ಟಾಂತಗಳನ್ನು ನಿರಾಕರಿಸಿದವರ ಉಪಮೆಯು ಅತಿ ನಿಕೃಷ್ಟವಾಗಿದೆ ಮತ್ತು ಅವರು ಸ್ವತಃ ತಮ್ಮ ಮೇಲೆಯೇ ಅಕ್ರಮವೆಸಗುತ್ತಿದ್ದರು.
আৰবী তাফছীৰসমূহ:
مَنْ یَّهْدِ اللّٰهُ فَهُوَ الْمُهْتَدِیْ ۚ— وَمَنْ یُّضْلِلْ فَاُولٰٓىِٕكَ هُمُ الْخٰسِرُوْنَ ۟
ಅಲ್ಲಾಹನು ಯಾರಿಗೆ ಸನ್ಮಾರ್ಗವನ್ನು ಕರುಣಿಸುವನೋ ಅವನೇ ಸನ್ಮಾರ್ಗವನ್ನು ಪಡೆಯುವವನಾಗಿದ್ದಾನೆ. ಮತ್ತು ಅವನು ಯಾರನ್ನು ಪಥಭ್ರಷ್ಟಗೊಳಿಸುವನೋ ಅವರೇ ನಷ್ಟ ಹೊಂದುವವರಾಗಿದ್ದಾರೆ.
আৰবী তাফছীৰসমূহ:
وَلَقَدْ ذَرَاْنَا لِجَهَنَّمَ كَثِیْرًا مِّنَ الْجِنِّ وَالْاِنْسِ ۖؗ— لَهُمْ قُلُوْبٌ لَّا یَفْقَهُوْنَ بِهَا ؗ— وَلَهُمْ اَعْیُنٌ لَّا یُبْصِرُوْنَ بِهَا ؗ— وَلَهُمْ اٰذَانٌ لَّا یَسْمَعُوْنَ بِهَا ؕ— اُولٰٓىِٕكَ كَالْاَنْعَامِ بَلْ هُمْ اَضَلُّ ؕ— اُولٰٓىِٕكَ هُمُ الْغٰفِلُوْنَ ۟
ಯಕ್ಷ ಮತ್ತು ಮನುಷ್ಯರ ಪೈಕಿಯ ಅನೇಕ ಜನರನ್ನು ನಾವು ನರಕಕ್ಕಾಗಿ ಸೃಷ್ಟಿಸಿದ್ದೇವೆ. ಅವರಿಗೆ ಹೃದಯಗಳಿವೆ ಆದರೆ ಅವುಗಳಿಂದ ಅವರು (ಸತ್ಯವನ್ನು) ಗ್ರಹಿಸಿಕೊಳ್ಳಲಾರರು. ಅವರಿಗೆ ಕಣ್ಣುಗಳಿವೆ ಆದರೆ ಅವುಗಳಿಂದ ಅವರು ನೋಡಲಾರರು ಮತ್ತು ಅವರಿಗೆ ಕಿವಿಗಳಿವೆ, ಆದರೆ ಅವುಗಳಿಂದ ಅವರು ಆಲಿಸಲಾರರು. ಅವರು ಜಾನುವಾರುಗಳಂತಿರುವರು, ಹಾಗಲ್ಲ, ಅವುಗಳಿಗಿಂತಲೂ ಹೆಚ್ಚು ದಾರಿಗೆಟ್ಟವರಾಗಿರುತ್ತಾರೆ. ಅವರೇ ಅಲಕ್ಷö್ಯರಾಗಿರುವವರಾಗಿದ್ದಾರೆ.
আৰবী তাফছীৰসমূহ:
وَلِلّٰهِ الْاَسْمَآءُ الْحُسْنٰی فَادْعُوْهُ بِهَا ۪— وَذَرُوا الَّذِیْنَ یُلْحِدُوْنَ فِیْۤ اَسْمَآىِٕهٖ ؕ— سَیُجْزَوْنَ مَا كَانُوْا یَعْمَلُوْنَ ۟
ಅತ್ಯುತ್ತಮ ನಾಮಗಳು ಅಲ್ಲಾಹನಿಗೆ ಮಾತ್ರ ಇವೆ. ಆದ್ದರಿಂದ ಅವುಗಳ ಮೂಲಕ ಅಲ್ಲಾಹನನ್ನು ಕರೆದು ಪ್ರಾರ್ಥಿಸಿರಿ ಮತ್ತು ಅವನ ನಾಮಗಳಲ್ಲಿ ವಕ್ರತೆಯನ್ನು ತೋರುವವರನ್ನು ಬಿಟ್ಟು ಬಿಡಿರಿ. ಅವರಿಗೆ ಸಧ್ಯದಲ್ಲೇ ಅವರ ದುಷ್ಕೃತ್ಯಗಳ ಶಿಕ್ಷೆಯು ನೀಡಲಾಗುವುದು.
আৰবী তাফছীৰসমূহ:
وَمِمَّنْ خَلَقْنَاۤ اُمَّةٌ یَّهْدُوْنَ بِالْحَقِّ وَبِهٖ یَعْدِلُوْنَ ۟۠
ನಮ್ಮ ಸೃಷ್ಟಿಗಳ ಪೈಕಿ ಸತ್ಯಕ್ಕನುಗುಣವಾಗಿ ಮಾರ್ಗದರ್ಶನವನ್ನೂ ಮಾಡುವ ಮತ್ತು ಅದಕ್ಕನುಗುಣವಾಗಿ ನ್ಯಾಯವನ್ನೂ ಪಾಲಿಸುವ ಒಂದು ಸಮುದಾಯವಿದೆ.
আৰবী তাফছীৰসমূহ:
وَالَّذِیْنَ كَذَّبُوْا بِاٰیٰتِنَا سَنَسْتَدْرِجُهُمْ مِّنْ حَیْثُ لَا یَعْلَمُوْنَ ۟ۚ
ನಮ್ಮ ದೃಷ್ಟಾಂತಗಳನ್ನು ನಿರಾಕರಿಸುವವರನ್ನು ಅವರಿಗೆ ಅರಿವಾಗದಂತೆ ನಾವು ಹಂತ ಹಂತವಾಗಿ ವಿನಾಶದೆಡೆಗೆ ಕೊಂಡುಯ್ಯುತ್ತಿರುವೆವು.
আৰবী তাফছীৰসমূহ:
وَاُمْلِیْ لَهُمْ ؕ— اِنَّ كَیْدِیْ مَتِیْنٌ ۟
ನಾವು ಅವರಿಗೆ ಕಾಲಾವಕಾಶ ನೀಡುತ್ತೇವೆ. ನಿಸ್ಸಂಶಯವಾಗಿಯು ನನ್ನ ತಂತ್ರವು ಅತ್ಯಂತಪ್ರಬಲವಾಗಿದೆ.
আৰবী তাফছীৰসমূহ:
اَوَلَمْ یَتَفَكَّرُوْا ٚ— مَا بِصَاحِبِهِمْ مِّنْ جِنَّةٍ ؕ— اِنْ هُوَ اِلَّا نَذِیْرٌ مُّبِیْنٌ ۟
ಅವರು ತಮ್ಮ ಸಂಗಾತಿಗೆ(ಮುಹಮ್ಮದ್‌ರವರಿಗೆ) ಯಾವುದೇ ಮತಿ ಭ್ರಾಂತಿಯಿಲ್ಲ ಎಂಬ ವಿಚಾರದ ಬಗ್ಗೆ ಚಿಂತಿಸಲಿಲ್ಲವೇ? ಅವರಂತು ಒಬ್ಬ ಸ್ಪಷ್ಟ ಮುನ್ನೆಚ್ಚರಿಕೆ ನೀಡುವವರು ಮಾತ್ರವಾಗಿದ್ದಾರೆ.
আৰবী তাফছীৰসমূহ:
اَوَلَمْ یَنْظُرُوْا فِیْ مَلَكُوْتِ السَّمٰوٰتِ وَالْاَرْضِ وَمَا خَلَقَ اللّٰهُ مِنْ شَیْءٍ ۙ— وَّاَنْ عَسٰۤی اَنْ یَّكُوْنَ قَدِ اقْتَرَبَ اَجَلُهُمْ ۚ— فَبِاَیِّ حَدِیْثٍ بَعْدَهٗ یُؤْمِنُوْنَ ۟
ಆಕಾಶಗಳ ಹಾಗೂ ಭೂಮಿಯ ಸಾಮ್ರಾಜ್ಯದ ಕುರಿತು ಮತ್ತು ಅಲ್ಲಾಹನು ಸೃಷ್ಟಿಸಿದ ಎಲ್ಲಾ ವಸ್ತುಗಳ ಕುರಿತು ಮತ್ತು ಅವರ ಮರಣಾವಧಿಯು ಸಮೀಪ ಬಂದಿರುವುದರ ಕುರಿತು ಅವರು ಚಿಂತಿಸಲಿಲ್ಲವೇ? ಇನ್ನು ಕುರ್‌ಆನ್‌ನ ನಂತರ ಯಾವ ಗ್ರಂಥದಲ್ಲಿ ಅವರು ವಿಶ್ವಾಸವಿಡುವರು?
আৰবী তাফছীৰসমূহ:
مَنْ یُّضْلِلِ اللّٰهُ فَلَا هَادِیَ لَهٗ ؕ— وَیَذَرُهُمْ فِیْ طُغْیَانِهِمْ یَعْمَهُوْنَ ۟
ಅಲ್ಲಾಹನು ಯಾರನ್ನು ದಾರಿಗೆಡಸುತ್ತಾನೋ ಅವನನ್ನು ಸನ್ಮಾರ್ಗಕ್ಕೆ ತರುವವನು ಯಾರೂ ಇಲ್ಲ ಮತ್ತು ಅಲ್ಲಾಹನು ಅವರನ್ನು ಪಥಭ್ರಷ್ಟತೆಯಲ್ಲಿ ಅಲೆದಾಡುತ್ತಿರಲು ಬಿಟ್ಟುಬಿಡುತ್ತಾನೆ.
আৰবী তাফছীৰসমূহ:
یَسْـَٔلُوْنَكَ عَنِ السَّاعَةِ اَیَّانَ مُرْسٰىهَا ؕ— قُلْ اِنَّمَا عِلْمُهَا عِنْدَ رَبِّیْ ۚ— لَا یُجَلِّیْهَا لِوَقْتِهَاۤ اِلَّا هُوَ ؔؕۘ— ثَقُلَتْ فِی السَّمٰوٰتِ وَالْاَرْضِ ؕ— لَا تَاْتِیْكُمْ اِلَّا بَغْتَةً ؕ— یَسْـَٔلُوْنَكَ كَاَنَّكَ حَفِیٌّ عَنْهَا ؕ— قُلْ اِنَّمَا عِلْمُهَا عِنْدَ اللّٰهِ وَلٰكِنَّ اَكْثَرَ النَّاسِ لَا یَعْلَمُوْنَ ۟
ಅವರು ಅಂತ್ಯಘಳಿಗೆಯ ಕುರಿತು ಅದು ಯಾವಾಗ ಸಂಭವಿಸುತ್ತದೆಯೆAದು ನಿಮ್ಮೊಂದಿಗೆ ಕೇಳುತ್ತಾರೆ ಹೇಳಿರಿ: ಅದರ ಜ್ಞಾನವು ನನ್ನ ಪ್ರಭುವಿನ ಬಳಿ ಮಾತ್ರವಿದೆ. ಅದರ ಸಮಯವನ್ನು ಅಲ್ಲಾಹನ ಹೊರತು ಇನ್ನಾರೂ ಪ್ರಕಟಗೊಳಿಸಲಾರರು. ಅದು ಆಕಾಶಗಳಲ್ಲೂ, ಭೂಮಿಯಲ್ಲೂ ಭಯಂಕರ ಸಂಭವವಾಗಿರುವುದು. ಅದು ನಿಮ್ಮ ಮೇಲೆ ಹಠಾತ್ತನೆ ಬಂದೆರಗುವುದು ಅದರ ಬಗ್ಗೆ ನಿಮಗೆ ಸದೃಢ ಜ್ಞಾನವಿದೆ ಎಂಬ ಮಟ್ಟಿನಲ್ಲಿ ನಿಮ್ಮೊಂದಿಗೆ ಅವರು ಕೇಳುತ್ತಿದ್ದಾರೆ. ಹೇಳಿರಿ: ಅದರ ಜ್ಞಾನವು ಅಲ್ಲಾಹನ ಬಳಿ ಮಾತ್ರವಿದೆ. ಆದರೆ ಹೆಚ್ಚಿನ ಜನರು ಅರಿತುಕೊಳ್ಳುವುದಿಲ್ಲ.
আৰবী তাফছীৰসমূহ:
قُلْ لَّاۤ اَمْلِكُ لِنَفْسِیْ نَفْعًا وَّلَا ضَرًّا اِلَّا مَا شَآءَ اللّٰهُ ؕ— وَلَوْ كُنْتُ اَعْلَمُ الْغَیْبَ لَاسْتَكْثَرْتُ مِنَ الْخَیْرِ ۛۚ— وَمَا مَسَّنِیَ السُّوْٓءُ ۛۚ— اِنْ اَنَا اِلَّا نَذِیْرٌ وَّبَشِیْرٌ لِّقَوْمٍ یُّؤْمِنُوْنَ ۟۠
ಹೇಳಿರಿ: ಅಲ್ಲಾಹನು ಇಚ್ಛಿಸುವುದರ ಹೊರತು ನಾನು ಸ್ವತಃ ನನಗೂ ಯಾವುದೇ ಪ್ರಯೋಜನವನ್ನುಂಟು ಮಾಡುವ ಅಥವಾ ಹಾನಿಯನ್ನುಂಟು ಮಾಡುವ ಅಧಿಕಾರವನ್ನು ಹೊಂದಿಲ್ಲ; ಮತ್ತು ನಾನು ಅದೃಷ್ಯಜ್ಞಾನವನ್ನು ಹೊಂದಿರುತ್ತಿದ್ದರೆ ಸಾಕಷ್ಟು ಒಳಿತುಗಳನ್ನು ಗಳಿಸುತ್ತಿದ್ದೆನು ಮತ್ತು ಯಾವುದೇ ನಷ್ಟ ನನಗುಂಟಾಗುತ್ತಿರಲಿಲ್ಲ. ನಾನು ಕೇವಲ ಒಬ್ಬ ಮುನ್ನೆಚ್ಚರಿಕೆ ನೀಡುವವನು ಮತ್ತು ವಿಶ್ವಾಸವಿಡುವ ಜನರಿಗೆ ಶುಭವಾರ್ತೆ ನೀಡುವವನು ಆಗಿದ್ದೇನೆ.
আৰবী তাফছীৰসমূহ:
هُوَ الَّذِیْ خَلَقَكُمْ مِّنْ نَّفْسٍ وَّاحِدَةٍ وَّجَعَلَ مِنْهَا زَوْجَهَا لِیَسْكُنَ اِلَیْهَا ۚ— فَلَمَّا تَغَشّٰىهَا حَمَلَتْ حَمْلًا خَفِیْفًا فَمَرَّتْ بِهٖ ۚ— فَلَمَّاۤ اَثْقَلَتْ دَّعَوَا اللّٰهَ رَبَّهُمَا لَىِٕنْ اٰتَیْتَنَا صَالِحًا لَّنَكُوْنَنَّ مِنَ الشّٰكِرِیْنَ ۟
ಅವನೇ ನಿಮ್ಮನ್ನು ಒಂದು ಜೀವದಿಂದ ಸೃಷ್ಟಿಸಿದವನು ಮತ್ತು ಅದರಿಂದಲೇ ಅದರ ಜೋಡಿಯನ್ನುಂಟು ಮಾಡಿದನು. ಇದು ಆಕೆಯೊಂದಿಗೆ ಅವನು ಮನಃ ಶಾಂತಿಯನ್ನು ಪಡೆಯಲೆಂದಾಗಿದೆ. ನಂತರ ಪತಿಯು ಪತ್ನಿಯನ್ನು ಸಮೀಪಿಸಿದಾಗ ಅವಳಿಗೆ ಹಗುರವಾದ ಗರ್ಭವು ನಿಂತಿತು. ನಂತರ ಅವಳು ಅದನ್ನು ಹೊತ್ತುಕೊಂಡು ನಡೆದಾಡಿದಳು. ತದನಂತರ ಅವಳಿಗೆ ಭಾರವು ಹೆಚ್ಚಾದಾಗ ಪತಿ-ಪತ್ನಿಯರಿಬ್ಬರೂ ತಮ್ಮ ಒಡೆಯನಾದ ಅಲ್ಲಾಹನೊಂದಿಗೆ ನೀನು ನಮಗೆ ಉತ್ತಮ ಹಾಗೂ ಆರೋಗ್ಯವಂತ ಸಂತತಿಯನ್ನು ಕರುಣಿಸಿದರೆ ನಾವು ಕೃತಜ್ಞತೆ ತೋರುವೆವು ಎಂದು ಪ್ರಾರ್ಥಿಸಿದರು.
আৰবী তাফছীৰসমূহ:
فَلَمَّاۤ اٰتٰىهُمَا صَالِحًا جَعَلَا لَهٗ شُرَكَآءَ فِیْمَاۤ اٰتٰىهُمَا ۚ— فَتَعٰلَی اللّٰهُ عَمَّا یُشْرِكُوْنَ ۟
ಆದರೆ ಅಲ್ಲಾಹನು ಅವರಿಗೆ ಉತ್ತಮ ಸಂತತಿಯನ್ನು ನೀಡಿದಾಗ, ಅವನು ದಯಪಾಲಿಸಿರುವುದರಲ್ಲಿ ಅವರು ಅಲ್ಲಾಹನಿಗೆ ಸಹಭಾಗಿಗಳನ್ನು ನಿಶ್ಚಯಿಸತೊಡಗಿದರು. ಮತ್ತು ಅಲ್ಲಾಹನು ಅವರು ನಿಶ್ಚಯಿಸುತ್ತಿರುವ ಸಹಭಾಗಿತ್ವದಿಂದ ಅತ್ತುö್ಯನ್ನತನಾಗಿದ್ದಾನೆ.
আৰবী তাফছীৰসমূহ:
اَیُشْرِكُوْنَ مَا لَا یَخْلُقُ شَیْـًٔا وَّهُمْ یُخْلَقُوْنَ ۟ۚ
ಏನನ್ನೂ ಸೃಷ್ಟಿಸಲಾಗದ, ಸ್ವತಃ ಸೃಷ್ಟಿಸಲ್ಪಟ್ಟವರನ್ನು ಅವರು ಅಲ್ಲಾಹನಿಗೆ ಸಹಭಾಗಿಯಾಗಿ ನಿಶ್ಚಯಿಸುತ್ತಿದ್ದಾರೆಯೇ?
আৰবী তাফছীৰসমূহ:
وَلَا یَسْتَطِیْعُوْنَ لَهُمْ نَصْرًا وَّلَاۤ اَنْفُسَهُمْ یَنْصُرُوْنَ ۟
ಅವರು ಅವರಿಗೆ ಯಾವುದೇ ಸಹಾಯ ಮಾಡಲು ಸಾಧ್ಯವಿಲ್ಲ. ಮತ್ತು ಸ್ವತಃ ತಮಗೂ ಅವರು ಸಹಾಯ ಮಾಡಿಕೊಳ್ಳಲಾರರು.
আৰবী তাফছীৰসমূহ:
وَاِنْ تَدْعُوْهُمْ اِلَی الْهُدٰی لَا یَتَّبِعُوْكُمْ ؕ— سَوَآءٌ عَلَیْكُمْ اَدَعَوْتُمُوْهُمْ اَمْ اَنْتُمْ صَامِتُوْنَ ۟
ನೀವು ಅವರನ್ನು ಸನ್ಮಾರ್ಗದೆಡೆಗೆ ಕರೆದರೂ ಅವರು ನಿಮ್ಮನ್ನು ಅನುಸರಿಸಲಾರರು. ಅಥವಾ ಮೌನವಹಿಸಿದರೂ ನಿಮ್ಮ ಮಟ್ಟಿಗೆ ಅವರೆಡೂ ಸಮಾನವಾಗಿವೆ.
আৰবী তাফছীৰসমূহ:
اِنَّ الَّذِیْنَ تَدْعُوْنَ مِنْ دُوْنِ اللّٰهِ عِبَادٌ اَمْثَالُكُمْ فَادْعُوْهُمْ فَلْیَسْتَجِیْبُوْا لَكُمْ اِنْ كُنْتُمْ صٰدِقِیْنَ ۟
ಖಂಡಿತವಾಗಿಯು ಅಲ್ಲಾಹನ ಹೊರತು ನೀವು ಯಾರನ್ನು ಕರೆದು ಪ್ರಾರ್ಥಿಸುತ್ತಿರುವಿರೋ ಅವರು ನಿಮ್ಮಂತೆಯೇ ಇರುವ ದಾಸರಾಗಿದ್ದಾರೆ. ಇನ್ನು ನೀವು ಅವರನ್ನು ಕರೆದು ಪ್ರಾರ್ಥಿಸಿರಿ. ನೀವು ಸತ್ಯಸಂಧರಾಗಿದ್ದರೆ ಅವರು ನಿಮ್ಮ ಕರೆಗೆ ಉತ್ತರ ಕೊಡಲಿ.
আৰবী তাফছীৰসমূহ:
اَلَهُمْ اَرْجُلٌ یَّمْشُوْنَ بِهَاۤ ؗ— اَمْ لَهُمْ اَیْدٍ یَّبْطِشُوْنَ بِهَاۤ ؗ— اَمْ لَهُمْ اَعْیُنٌ یُّبْصِرُوْنَ بِهَاۤ ؗ— اَمْ لَهُمْ اٰذَانٌ یَّسْمَعُوْنَ بِهَا ؕ— قُلِ ادْعُوْا شُرَكَآءَكُمْ ثُمَّ كِیْدُوْنِ فَلَا تُنْظِرُوْنِ ۟
ಅವರಿಗೆ ನಡೆದಾಡಲು ಕಾಲುಗಳಿವೆಯೇ? ಅವರಿಗೆ ಹಿಡಿದುಕೊಳ್ಳಲು ಕೈಗಳಿವೆಯೇ? ಅವರಿಗೆ ನೋಡಲು ಕಣ್ಣುಗಳಿವೆಯೇ? ಅವರಿಗೆ ಆಲಿಸಲು ಕಿವಿಗಳಿವೆಯೇ? ಹೇಳಿರಿ: ನೀವು ನಿಮ್ಮ ಎಲ್ಲಾ ಉಪದೇವತೆಗಳನ್ನು ಕರೆದುಕೊಳ್ಳಿರಿ. ಅನಂತರ ನನ್ನ ವಿರುದ್ಧ ತಂತ್ರಗಳನ್ನು ಹೂಡಿರಿ. ಬಳಿಕ ನನಗೆ ಯಾವುದೇ ಕಾಲಾವಕಾಶವನ್ನು ನೀಡಬೇಡಿರಿ.
আৰবী তাফছীৰসমূহ:
اِنَّ وَلِیِّ اللّٰهُ الَّذِیْ نَزَّلَ الْكِتٰبَ ۖؗ— وَهُوَ یَتَوَلَّی الصّٰلِحِیْنَ ۟
ಖಂಡಿತವಾಗಿಯು ನನ್ನ ಸಹಾಯಕ ಈ ಗ್ರಂಥವನ್ನು ಅವತೀರ್ಣಗೊಳಿಸಿದವನು ಅಲ್ಲಾಹನಾಗಿದ್ದಾನೆ ಮತ್ತು ಅವನೇ ಸಜ್ಜನ ದಾಸರಿಗೆ ನೆರವು ನೀಡುತ್ತಾನೆ.
আৰবী তাফছীৰসমূহ:
وَالَّذِیْنَ تَدْعُوْنَ مِنْ دُوْنِهٖ لَا یَسْتَطِیْعُوْنَ نَصْرَكُمْ وَلَاۤ اَنْفُسَهُمْ یَنْصُرُوْنَ ۟
ನೀವು ಅಲ್ಲಾಹನ ಹೊರತು ಯಾರನ್ನು ಕರೆದು ಪ್ರಾರ್ಥಿಸುತ್ತಿರುವಿರೋ ಅವರಿಗೆ (ಆ ವಿಗ್ರಹಗಳಿಗೆ) ನಿಮ್ಮ ಸಹಾಯ ಮಾಡಲು ಸಾಧ್ಯವಾಗದು ಮತ್ತು ಸ್ವತಃ ತಮಗೂ ಅವರು ಸಹಾಯ ಮಾಡಿಕೊಳ್ಳಲಾರರು.
আৰবী তাফছীৰসমূহ:
وَاِنْ تَدْعُوْهُمْ اِلَی الْهُدٰی لَا یَسْمَعُوْا ؕ— وَتَرٰىهُمْ یَنْظُرُوْنَ اِلَیْكَ وَهُمْ لَا یُبْصِرُوْنَ ۟
ಮತ್ತು ನೀವು ಅವರನ್ನು ಸನ್ಮಾರ್ಗದೆಡೆಗೆ ಕರೆದರೆ ಅವರು ಆಲಿಸಲಾರರು. ಅವರು ನಿಮ್ಮೆಡೆಗೆ ನೋಡುತ್ತಿರುವುದಾಗಿ ನಿಮಗೆ ಕಾಣಬಹುದು ಆದರೆ ಅವರು ಏನನ್ನೂ ಕಾಣಲಾರರು.
আৰবী তাফছীৰসমূহ:
خُذِ الْعَفْوَ وَاْمُرْ بِالْعُرْفِ وَاَعْرِضْ عَنِ الْجٰهِلِیْنَ ۟
(ಪೈಗಂಬರರೇ) ನೀವು ಕ್ಷಮೆಯನ್ನು ಕೈಗೊಳ್ಳಿರಿ, ಒಳಿತಿನ ಆದೇಶವನ್ನು ನೀಡಿರಿ ಮತ್ತು ಅವಿವೇಕಿಗಳಿಂದ ವಿಮುಖರಾಗಿರಿ.
আৰবী তাফছীৰসমূহ:
وَاِمَّا یَنْزَغَنَّكَ مِنَ الشَّیْطٰنِ نَزْغٌ فَاسْتَعِذْ بِاللّٰهِ ؕ— اِنَّهٗ سَمِیْعٌ عَلِیْمٌ ۟
ನಿಮಗೆ ಶೈತಾನನ ಕಡೆಯಿಂದ ದುಷ್ಪೆçÃರಣೆಯೇನಾದರು ಉಂಟಾದರೆ ನೀವು ಅಲ್ಲಾಹನ ಅಭಯವನ್ನು ಯಾಚಿಸಿರಿ. ನಿಸ್ಸಂಶಯವಾಗಿಯೂ ಅವನು ಚೆನ್ನಾಗಿ ಆಲಿಸುವವನೂ, ಸರ್ವವನ್ನು ಅರಿಯುವವನೂ ಆಗಿದ್ದಾನೆ.
আৰবী তাফছীৰসমূহ:
اِنَّ الَّذِیْنَ اتَّقَوْا اِذَا مَسَّهُمْ طٰٓىِٕفٌ مِّنَ الشَّیْطٰنِ تَذَكَّرُوْا فَاِذَا هُمْ مُّبْصِرُوْنَ ۟ۚ
ಖಂಡಿತವಾಗಿಯು ಭಯಭಕ್ತಿ ಪಾಲಿಸುವವರಿಗೆ ಶೈತಾನನ ಕಡೆಯಿಂದ ಯಾವುದಾದರೂ ದುಷ್ಪೆçÃರಣೆ ಉಂಟಾದರೆ ಅವರು ಅಲ್ಲಾಹನನ್ನು ಸ್ಮರಿಸಿಕೊಳ್ಳುವರು. ತಕ್ಷಣ ಅವರು ಅಂತರ್‌ದೃಷ್ಟಿಯುಳ್ಳವರಾಗುವರು.
আৰবী তাফছীৰসমূহ:
وَاِخْوَانُهُمْ یَمُدُّوْنَهُمْ فِی الْغَیِّ ثُمَّ لَا یُقْصِرُوْنَ ۟
ಶೈತಾನರು ತಮ್ಮ ಸಹೋದರರನ್ನು ದುರ್ಮಾಗಕ್ಕೆ ತಳ್ಳಿಬಿಡುವರು. ಹಾಗೆಯೇ ಅವರು ಅದರಲ್ಲಿ ಯಾವುದೇ ಲೋಪ ಮಾಡುವುದಿಲ್ಲ.
আৰবী তাফছীৰসমূহ:
وَاِذَا لَمْ تَاْتِهِمْ بِاٰیَةٍ قَالُوْا لَوْلَا اجْتَبَیْتَهَا ؕ— قُلْ اِنَّمَاۤ اَتَّبِعُ مَا یُوْحٰۤی اِلَیَّ مِنْ رَّبِّیْ ۚ— هٰذَا بَصَآىِٕرُ مِنْ رَّبِّكُمْ وَهُدًی وَّرَحْمَةٌ لِّقَوْمٍ یُّؤْمِنُوْنَ ۟
ನೀವು ಅವರ ಬೇಡಿಕೆಯ ಪ್ರಕಾರ ಯಾವುದೇ ದೃಷ್ಟಾಂತಗಳನ್ನು ಅವರ ಮುಂದೆ ಪ್ರಕಟಗೊಳಿಸದಿದ್ದರೆ. ಅವರು (ಹಾಸ್ಯದೊಂದಿಗೆ) ಹೇಳುವರು: ನೀವು ಈ ದೃಷ್ಟಾಂತವನ್ನೇಕೆ ಸ್ವತಃ ರಚಿಸಿ ತರಲಿಲ್ಲ? ಹೇಳಿರಿ: ನನ್ನ ಪ್ರಭುವಿನ ವತಿಯಿಂದ ನನ್ನ ಮೇಲೆ ಕಳುಹಿಸಲಾಗುವ ಆದೇಶವನ್ನು ನಾನು ಅನುಸರಿಸುತ್ತಿದ್ದೇನೆ. ಇವು ನಿಮ್ಮ ಪ್ರಭುವಿನ ಕಡೆಯ ಸಾಕಷ್ಟು ಪುರಾವೆಗಳಾಗಿವೆ ಮತ್ತು ವಿಶ್ವಾಸವಿಡುವ ಜನತೆಗೆ ಮಾರ್ಗದರ್ಶನವೂ, ಕಾರುಣ್ಯವೂ ಆಗಿದೆ.
আৰবী তাফছীৰসমূহ:
وَاِذَا قُرِئَ الْقُرْاٰنُ فَاسْتَمِعُوْا لَهٗ وَاَنْصِتُوْا لَعَلَّكُمْ تُرْحَمُوْنَ ۟
ಮತ್ತು ಖುರ್‌ಆನ್ ಪರಾಯಣ ಮಾಡಲಾದರೆ ನೀವದರೆಡೆಗೆ ಗಮನವಿಟ್ಟು ಆಲಿಸಿರಿ ಮತ್ತು ಮೌನ ಪಾಲಿಸಿರಿ. ನಿಮ್ಮ ಮೇಲೆ ಕಾರುಣ್ಯ ತೋರಬಹುದು.
আৰবী তাফছীৰসমূহ:
وَاذْكُرْ رَّبَّكَ فِیْ نَفْسِكَ تَضَرُّعًا وَّخِیْفَةً وَّدُوْنَ الْجَهْرِ مِنَ الْقَوْلِ بِالْغُدُوِّ وَالْاٰصَالِ وَلَا تَكُنْ مِّنَ الْغٰفِلِیْنَ ۟
ವಿನಮ್ರತೆ ಹಾಗೂ ಭಯದೊಂದಿಗೆ, ಉಚ್ಛ ಸ್ವರ ರಹಿತವಾಗಿ ಸಂಜೆ, ಮುಂಜಾನೆಯಲ್ಲಿ ನಿಮ್ಮ ಪ್ರಭುವನ್ನು ಮನಸ್ಸಿನಲ್ಲಿ ಸ್ಮರಿಸಿರಿ. ಮತ್ತು ಅಲಕ್ಷö್ಯರಲ್ಲಿ ಸೇರಬೇಡಿರಿ.
আৰবী তাফছীৰসমূহ:
اِنَّ الَّذِیْنَ عِنْدَ رَبِّكَ لَا یَسْتَكْبِرُوْنَ عَنْ عِبَادَتِهٖ وَیُسَبِّحُوْنَهٗ وَلَهٗ یَسْجُدُوْنَ ۟
ಖಂಡಿತವಾಗಿಯು ನಿಮ್ಮ ಪ್ರಭುವಿನ ಬಳಿಯಿರುವವರು (ದೇವಚರರು) ಅವನ ಆರಾಧನೆ ಮಾಡುವುದರಿಂದ ಅಹಂಕಾರ ತೋರುವುದಿಲ್ಲ ಮತ್ತು ಅವರು ಅವನ ಪಾವನತೆಯನ್ನು ಕೊಂಡಾಡುತ್ತಾರೆ ಮತ್ತು ಅವನಿಗೆ ಸಾಷ್ಟಾಂಗವೆರಗುತ್ತಾರೆ.
আৰবী তাফছীৰসমূহ:
 
অৰ্থানুবাদ ছুৰা: আল-আ'ৰাফ
ছুৰাৰ তালিকা পৃষ্ঠা নং
 
আল-কোৰআনুল কাৰীমৰ অৰ্থানুবাদ - কানাড়া অনুবাদ- বশীৰ মিছুৰী - অনুবাদসমূহৰ সূচীপত্ৰ

শ্বেইখ বশীৰ মাইছুৰীয়ে অনুবাদ কৰিছে। মৰ্কজ ৰুৱাদুত তাৰ্জামাৰ তত্ত্বাৱধানত ইয়াক উন্নীত কৰা হৈছে।

বন্ধ