Check out the new design

ಪವಿತ್ರ ಕುರ್‌ಆನ್ ಅರ್ಥಾನುವಾದ - ಕನ್ನಡ ಅನುವಾದ - ಬಶೀರ್ ಮೈಸೂರಿ * - ಅನುವಾದಗಳ ವಿಷಯಸೂಚಿ


ಅರ್ಥಗಳ ಅನುವಾದ ಅಧ್ಯಾಯ: ಇಬ್ರಾಹೀಮ್   ಶ್ಲೋಕ:
قَالَتْ لَهُمْ رُسُلُهُمْ اِنْ نَّحْنُ اِلَّا بَشَرٌ مِّثْلُكُمْ وَلٰكِنَّ اللّٰهَ یَمُنُّ عَلٰی مَنْ یَّشَآءُ مِنْ عِبَادِهٖ ؕ— وَمَا كَانَ لَنَاۤ اَنْ نَّاْتِیَكُمْ بِسُلْطٰنٍ اِلَّا بِاِذْنِ اللّٰهِ ؕ— وَعَلَی اللّٰهِ فَلْیَتَوَكَّلِ الْمُؤْمِنُوْنَ ۟
ಅವರಿಗೆ ಅವರ ಸಂದೇಶವಾಹಕರು ಹೇಳಿದರು; ನಾವು ನಿಮ್ಮಂತಹ ಮನುಷÀ್ಯರೇ ಆಗಿದ್ದೇವೆ ಎಂಬುದು ನಿಜ. ಆದರೆ ಅಲ್ಲಾಹನು ತನ್ನ ದಾಸರ ಪೈಕಿ ತಾನಿಚ್ಛಿಸಿದವರನ್ನು (ದೌತ್ಯ ಕಾರ್ಯಕ್ಕೆ ಆಯ್ದುಕೊಂಡು) ಅನುಗ್ರಹಿಸುತ್ತಾನೆ, ಅಲ್ಲಾಹನ ಅಪ್ಪಣೆಯ ವಿನಃ ನಿಮ್ಮ ಬಳಿಗೆ ಯಾವ ಆಧಾರ ಪ್ರಮಾಣವನ್ನು ತಂದುಕೊಡುವುದು ನಮ್ಮ ಅಧಿಕಾರದಲ್ಲಿಲ,್ಲ ಮತ್ತು ಸತ್ಯ ವಿಶ್ವಾಸಿಗಳು ಅಲ್ಲಾಹನ ಮೇಲೆಯೇ ಭರವಸೆಯನ್ನಿರಿಸಲಿ.
ಅರಬ್ಬಿ ವ್ಯಾಖ್ಯಾನಗಳು:
وَمَا لَنَاۤ اَلَّا نَتَوَكَّلَ عَلَی اللّٰهِ وَقَدْ هَدٰىنَا سُبُلَنَا ؕ— وَلَنَصْبِرَنَّ عَلٰی مَاۤ اٰذَیْتُمُوْنَا ؕ— وَعَلَی اللّٰهِ فَلْیَتَوَكَّلِ الْمُتَوَكِّلُوْنَ ۟۠
ನಾವು ಅಲ್ಲಾಹನ ಮೇಲೆಯೇ ಭರವಸೆಯನ್ನೇಕೆ ಇಡಬಾರದು ? ವಸ್ತುತಃ ಅವನು ನಮಗೆ ನಮ್ಮ ಮಾರ್ಗಗಳನ್ನು ತೋರಿರುವನು ನೀವು ನಮಗೆ ಕೊಡುತ್ತಿರುವ ಹಿಂಸೆಗಳನ್ನು ಖಂಡಿತ ನಾವು ಸಹಿಸುವೆವು ಮತ್ತು ಭರವಸೆಯನ್ನಿರಿಸುವವರು ಅಲ್ಲಾಹನ ಮೇಲೆಯೇ ಭರವಸೆಯನ್ನಿರಿಸಲಿ.
ಅರಬ್ಬಿ ವ್ಯಾಖ್ಯಾನಗಳು:
وَقَالَ الَّذِیْنَ كَفَرُوْا لِرُسُلِهِمْ لَنُخْرِجَنَّكُمْ مِّنْ اَرْضِنَاۤ اَوْ لَتَعُوْدُنَّ فِیْ مِلَّتِنَا ؕ— فَاَوْحٰۤی اِلَیْهِمْ رَبُّهُمْ لَنُهْلِكَنَّ الظّٰلِمِیْنَ ۟ۙ
ಸತ್ಯ ನಿಷÉÃಧಿಸಿದವರು ತಮ್ಮ ಸಂದೇಶವಾಹಕರಿಗೆ ಹೇಳಿದರು; ನೀವು ನಮ್ಮ ಧರ್ಮಕ್ಕೆ ಮರಳದಿದ್ದರೆ ನಾವು ನಿಮ್ಮನ್ನು ನಮ್ಮ ನಾಡಿನಿಂದ ಗಡಿಪಾರು ಮಾಡುವೆವು, ಆಗ ಅವರ ಪ್ರಭು ಅವರೆಡೆಗೆ ಸಂದೇಶ ನೀಡಿದನು. ಖಂಡಿತವಾಗಿಯೂ ನಾವು ಅಕ್ರಮಿಗಳನ್ನೇ ನಾಶಗೊಳಿಸುವೆವು
ಅರಬ್ಬಿ ವ್ಯಾಖ್ಯಾನಗಳು:
وَلَنُسْكِنَنَّكُمُ الْاَرْضَ مِنْ بَعْدِهِمْ ؕ— ذٰلِكَ لِمَنْ خَافَ مَقَامِیْ وَخَافَ وَعِیْدِ ۟
ಮತ್ತು ಅವರ ನಂತರ ನಾವು ನಿಮ್ಮನ್ನು ಭೂಮಿಯಲ್ಲಿ ನೆಲೆಗೊಳಿಸುವೆವು. ಇದು ನನ್ನ ಬಳಿ ನಡೆಯಲಿರುವ ವಿಚಾರಣೆ ಮತ್ತು ನನ್ನ ಎಚ್ಚರಿಕೆಯಿಂದ ಭಯಪಟ್ಟವನಿಗೆ ಇರುವ ಅನುಗ್ರಹವಾಗಿದೆ.
ಅರಬ್ಬಿ ವ್ಯಾಖ್ಯಾನಗಳು:
وَاسْتَفْتَحُوْا وَخَابَ كُلُّ جَبَّارٍ عَنِیْدٍ ۟ۙ
ಸತ್ಯನಿಷÉÃಧಿಗಳು ಸ್ವತಃ ತೀರ್ಪನ್ನು ಬೇಡಿದರು ಪರಿಣಾಮವಾಗಿ ಪ್ರತಿಯೊಬ್ಬ ಹಠಮಾರಿಯಾದ ದುರಹಂಕಾರಿ ಪರಾಜಿತನಾದನು.
ಅರಬ್ಬಿ ವ್ಯಾಖ್ಯಾನಗಳು:
مِّنْ وَّرَآىِٕهٖ جَهَنَّمُ وَیُسْقٰی مِنْ مَّآءٍ صَدِیْدٍ ۟ۙ
ಅವನ ಮುಂದೆ ನರಕವು ಇದೆ ಅಲ್ಲಿ ಅವನಿಗೆ ರಕ್ತಮಿಶ್ರಿತ ಕೀವಿನ ನೀರನ್ನು ಕುಡಿಸಲಾಗುವುದು.
ಅರಬ್ಬಿ ವ್ಯಾಖ್ಯಾನಗಳು:
یَّتَجَرَّعُهٗ وَلَا یَكَادُ یُسِیْغُهٗ وَیَاْتِیْهِ الْمَوْتُ مِنْ كُلِّ مَكَانٍ وَّمَا هُوَ بِمَیِّتٍ ؕ— وَمِنْ وَّرَآىِٕهٖ عَذَابٌ غَلِیْظٌ ۟
ಅವನು ಅದನ್ನು ಗುಟುಕು ಗುಟುಕಾಗಿ ಕುಡಿಯಲು ಯತ್ನಿಸುವನು. ಆದರೂ ಅದನ್ನು ಗಂಟಲಿನಿAದ ಇಳಿಸಲು ಸಾಧ್ಯವಾಗದು, ಮತ್ತು ಅವನಿಗೆ ಎಲ್ಲಾ ಕಡೆಯಿಂದಲೂ ಮರಣವು ಬಂದುಬಿಡುವುದು, ಆದರೆ ಅವನು ಸಾಯಲಾರ. ಅನಂತರ ಅದರ ಹಿಂದೆಯೇ ಕಠಿಣ ಯಾತನೆಯು ಸಹ ಇರುವುದು.
ಅರಬ್ಬಿ ವ್ಯಾಖ್ಯಾನಗಳು:
مَثَلُ الَّذِیْنَ كَفَرُوْا بِرَبِّهِمْ اَعْمَالُهُمْ كَرَمَادِ ١شْتَدَّتْ بِهِ الرِّیْحُ فِیْ یَوْمٍ عَاصِفٍ ؕ— لَا یَقْدِرُوْنَ مِمَّا كَسَبُوْا عَلٰی شَیْءٍ ؕ— ذٰلِكَ هُوَ الضَّلٰلُ الْبَعِیْدُ ۟
ತಮ್ಮ ಪ್ರಭುವನ್ನು ನಿಷÉÃಧಿಸಿದವರ ಕರ್ಮಗಳ ಉದಾಹರಣೆಯು ಬೂದಿಯಂತೆ. ಒಂದು ಬಿರುಗಾಳಿಯ ದಿನ ಚಂಡಮಾರುತವು ಅದನ್ನು ಹಾರಿಸಿತು. ಅವರು ತಮ್ಮ ಸಂಪಾದನೆಯ ಯಾವ ಪ್ರತಿಫಲವನ್ನು ಪಡೆಯಲು ಸಾಮರ್ಥ್ಯ ಹೊಂದಲಾರರು. ಇದುವೇ ಅತಿ ವಿದೂರ ಪಥಭ್ರಷÀ್ಟತೆಯಾಗಿದೆ.
ಅರಬ್ಬಿ ವ್ಯಾಖ್ಯಾನಗಳು:
 
ಅರ್ಥಗಳ ಅನುವಾದ ಅಧ್ಯಾಯ: ಇಬ್ರಾಹೀಮ್
ಅಧ್ಯಾಯಗಳ ವಿಷಯಸೂಚಿ ಪುಟ ಸಂಖ್ಯೆ
 
ಪವಿತ್ರ ಕುರ್‌ಆನ್ ಅರ್ಥಾನುವಾದ - ಕನ್ನಡ ಅನುವಾದ - ಬಶೀರ್ ಮೈಸೂರಿ - ಅನುವಾದಗಳ ವಿಷಯಸೂಚಿ

ಅನುವಾದ - ಶೇಖ್ ಬಶೀರ್ ಮೈಸೂರಿ. ರುವ್ವಾದ್ ಭಾಷಾಂತರ ಕೇಂದ್ರದ ಮೇಲ್ವಿಚಾರಣೆಯಲ್ಲಿ ಇದನ್ನು ಅಭಿವೃದ್ಧಿಪಡಿಸಲಾಗಿದೆ.

ಮುಚ್ಚಿ