Check out the new design

ಪವಿತ್ರ ಕುರ್‌ಆನ್ ಅರ್ಥಾನುವಾದ - ಕನ್ನಡ ಅನುವಾದ - ಬಶೀರ್ ಮೈಸೂರಿ * - ಅನುವಾದಗಳ ವಿಷಯಸೂಚಿ


ಅರ್ಥಗಳ ಅನುವಾದ ಅಧ್ಯಾಯ: ಅಲ್ -ಇಸ್ರಾಅ್   ಶ್ಲೋಕ:
وَاِذَا مَسَّكُمُ الضُّرُّ فِی الْبَحْرِ ضَلَّ مَنْ تَدْعُوْنَ اِلَّاۤ اِیَّاهُ ۚ— فَلَمَّا نَجّٰىكُمْ اِلَی الْبَرِّ اَعْرَضْتُمْ ؕ— وَكَانَ الْاِنْسَانُ كَفُوْرًا ۟
ಮತ್ತು ಸಮುದ್ರದಲ್ಲಿ ಯಾವುದಾದರೂ ಸಂಕಷ್ಟವು ಬಾಧಿಸಿದ ಕೂಡಲೇ ನೀವು ಕರೆದು ಬೇಡುತ್ತಿರುವವರೆಲ್ಲ ಮಾಯವಾಗಿ ಬಿಡುತ್ತಾರೆ. ಕೇವಲ ಆ ಅಲ್ಲಾಹನ ಹೊರತು. ಅನಂತರ ಅವನು ನಿಮ್ಮನ್ನು ದಡ ತಲುಪಿಸಿದಾಗ ನೀವು ವಿಮುಖರಾಗಿ ಬಿಡುತ್ತೀರಿ ಮತ್ತು ಮನುಷ್ಯನು ಮಹಾ ಕೃತಘ್ನನಾಗಿದ್ದಾನೆ.
ಅರಬ್ಬಿ ವ್ಯಾಖ್ಯಾನಗಳು:
اَفَاَمِنْتُمْ اَنْ یَّخْسِفَ بِكُمْ جَانِبَ الْبَرِّ اَوْ یُرْسِلَ عَلَیْكُمْ حَاصِبًا ثُمَّ لَا تَجِدُوْا لَكُمْ وَكِیْلًا ۟ۙ
ಅವನು ನಿಮ್ಮನ್ನು ದಡಕ್ಕೆ ಕೊಂಡಯ್ದು ಹೂತು ಬಿಡುವುದರಿಂದ, ಅಥವಾ ನಿಮ್ಮ ಮೇಲೆ ಕಲ್ಲಿನ ಮಳೆಗೆರೆಯುವ ಚಂಡ ಮಾರುತವನ್ನು ಕಳುಹಿಸಿ ಬಿಡುವುದರಿಂದ ನಿರ್ಭಯರಾಗಿ ಬಿಟ್ಟಿರಾ? ಆಗ ನೀವು ಯಾರನ್ನೂ ಕಾರ್ಯ ಸಾಧಕನನ್ನಾಗಿ ಪಡೆಯಲಾರಿರಿ.
ಅರಬ್ಬಿ ವ್ಯಾಖ್ಯಾನಗಳು:
اَمْ اَمِنْتُمْ اَنْ یُّعِیْدَكُمْ فِیْهِ تَارَةً اُخْرٰی فَیُرْسِلَ عَلَیْكُمْ قَاصِفًا مِّنَ الرِّیْحِ فَیُغْرِقَكُمْ بِمَا كَفَرْتُمْ ۙ— ثُمَّ لَا تَجِدُوْا لَكُمْ عَلَیْنَا بِهٖ تَبِیْعًا ۟
ಅಥವಾ ಪುನಃ ನಿಮ್ಮನ್ನು ಸಮುದ್ರ ಯಾತ್ರೆಗೆ ಮರಳಿಸಿ ನಿಮ್ಮ ಮೇಲೆ ಭೀಕರವಾಗಿರುವ ಬಿರುಗಾಳಿಯೊಂದನ್ನು ಕಳುಹಿಸುವುದರಿಂದ ಮತ್ತು ನಿಮ್ಮ ಸತ್ಯನಿಷೇಧದ ನಿಮಿತ್ತ ನಿಮ್ಮನ್ನು ಮುಳುಗಿಸುವುದರಿಂದ ನಿರ್ಭಯರಾಗಿಬಿಟ್ಟಿರಾ? ಆಗ ನೀವು ನಿಮಗೋಸ್ಕರ ನಮ್ಮ ವಿರುದ್ಧ ವಾದಿಸುವ ಯಾವೊಬ್ಬ ಸಹಾಯಕನನ್ನೂ ಪಡೆಯಲಾರಿರಿ.
ಅರಬ್ಬಿ ವ್ಯಾಖ್ಯಾನಗಳು:
وَلَقَدْ كَرَّمْنَا بَنِیْۤ اٰدَمَ وَحَمَلْنٰهُمْ فِی الْبَرِّ وَالْبَحْرِ وَرَزَقْنٰهُمْ مِّنَ الطَّیِّبٰتِ وَفَضَّلْنٰهُمْ عَلٰی كَثِیْرٍ مِّمَّنْ خَلَقْنَا تَفْضِیْلًا ۟۠
ನಿಶ್ಚಯವಾಗಿಯೂ ನಾವು ಆದಮನ ಸಂತತಿಗೆ ಗೌರವವನ್ನು ನೀಡಿದ್ದೇವೆ ಮತ್ತು ಅವರಿಗೆ ನಾವು ನೆಲದಲ್ಲೂ, ಸಮುದ್ರದಲ್ಲೂ ಸಾರಿಗೆಗಳನ್ನು ನೀಡಿರುತ್ತೇವೆ ಮತ್ತು ಅವರಿಗೆ ಶುದ್ಧ ವಸ್ತುಗಳಿಂದ ಆಹಾರವನ್ನು ನೀಡಿರುವೆವು ಹಾಗೂ ನಾವು ನಮ್ಮ ಅನೇಕ ಸೃಷ್ಟಿಗಳಿಗಿಂತ ಅವರಿಗೆ ಶ್ರೇಷ್ಠತೆಯನ್ನು ದಯಪಾಲಿಸಿರುತ್ತೇವೆ.
ಅರಬ್ಬಿ ವ್ಯಾಖ್ಯಾನಗಳು:
یَوْمَ نَدْعُوْا كُلَّ اُنَاسٍ بِاِمَامِهِمْ ۚ— فَمَنْ اُوْتِیَ كِتٰبَهٗ بِیَمِیْنِهٖ فَاُولٰٓىِٕكَ یَقْرَءُوْنَ كِتٰبَهُمْ وَلَا یُظْلَمُوْنَ فَتِیْلًا ۟
ಅಂದು ನಾವು ಪ್ರತಿಯೊಂದು ಜನಕೂಟವನ್ನು ಅವರವರ ನಾಯಕರೊಂದಿಗೆ ಕರೆಯುವೆವು. ಅನಂತರ ಯಾರ ಕರ್ಮಪತ್ರವು ಬಲಗೈಯಲ್ಲಿ ನೀಡಲಾಗುತ್ತದೆಯೋ ಅವರು ತಮ್ಮ ಕರ್ಮಪತ್ರವನ್ನು ಆಸಕ್ತಿಯಿಂದ ಓದುವರು ಮತ್ತು ಅವರು ಕೂದಲೆಳೆಯಷ್ಟೂ ಅನ್ಯಾಯಕ್ಕೊಳಗಾಗಲಾರರು.
ಅರಬ್ಬಿ ವ್ಯಾಖ್ಯಾನಗಳು:
وَمَنْ كَانَ فِیْ هٰذِهٖۤ اَعْمٰی فَهُوَ فِی الْاٰخِرَةِ اَعْمٰی وَاَضَلُّ سَبِیْلًا ۟
ಯಾರು ಇಹಲೋಕದಲ್ಲಿ ಅಂಧನಾಗಿದ್ದನೋ ಅವನು ಪರಲೋಕದಲ್ಲೂ ಅಂಧನಾಗಿರುವನು ಹಾಗೂ ಅತ್ಯಂತ ಮಾರ್ಗ ಭ್ರಷ್ಟನಾಗಿರುವನು.
ಅರಬ್ಬಿ ವ್ಯಾಖ್ಯಾನಗಳು:
وَاِنْ كَادُوْا لَیَفْتِنُوْنَكَ عَنِ الَّذِیْۤ اَوْحَیْنَاۤ اِلَیْكَ لِتَفْتَرِیَ عَلَیْنَا غَیْرَهٗ ۖۗ— وَاِذًا لَّاتَّخَذُوْكَ خَلِیْلًا ۟
(ಏಕೆಂದರೆ) ನೀವು ನಮ್ಮ ಹೆಸರಲ್ಲಿ ಇದರ ಹೊರತು ಬೇರೊಂದನ್ನು ರಚಿಸಿ ತರಲೆಂದು. ನಾವು ನಿಮ್ಮೆಡೆಗೆ ಮಾಡಿರುವ ದಿವ್ಯವಾಣಿಯಿಂದ (ಈ ಸತ್ಯನಿಷೇಧಿಗಳು) ಅವರು ನಿಮ್ಮನ್ನು ಸರಿಸಿ ಬಿಡಲಿಚ್ಛಿಸುತ್ತಾರೆ. ಓ ಸಂದೇಶವಾಹಕರೇ ಆಗಂತು ಅವರು ನಿಮ್ಮನ್ನು ಆಪ್ತಮಿತ್ರನನ್ನಾಗಿ ಮಾಡಿಕೊಳ್ಳುತ್ತಿದ್ದರು.
ಅರಬ್ಬಿ ವ್ಯಾಖ್ಯಾನಗಳು:
وَلَوْلَاۤ اَنْ ثَبَّتْنٰكَ لَقَدْ كِدْتَّ تَرْكَنُ اِلَیْهِمْ شَیْـًٔا قَلِیْلًا ۟ۗۙ
ನಾವೇನಾದರೂ ನಿಮ್ಮನ್ನು ಸ್ಥಿರಗೊಳಿಸದಿರುತ್ತಿದ್ದರೆ ನೀವು ಅವರೆಡೆಗೆ ಸ್ವಲ್ಪವಾದರೂ ವಾಲಿಬಿಡುವ ಸಾಧ್ಯತೆಯಿತ್ತು.
ಅರಬ್ಬಿ ವ್ಯಾಖ್ಯಾನಗಳು:
اِذًا لَّاَذَقْنٰكَ ضِعْفَ الْحَیٰوةِ وَضِعْفَ الْمَمَاتِ ثُمَّ لَا تَجِدُ لَكَ عَلَیْنَا نَصِیْرًا ۟
ಹಾಗೇನದರೂ ನೀವು ಮಾಡಿರುತ್ತಿದ್ದರೆ ನಾವು ನಿಮಗೆ ಇಹಲೋಕ ಜೀವನದ ಇಮ್ಮಡಿ ಶಿಕ್ಷೆಯನ್ನು ಹಾಗೂ ಮರಣದ ಇಮ್ಮಡಿ ಶಿಕ್ಷೆಯನ್ನು ನೀಡುತ್ತಿದ್ದೆವು. ಅನಂತರ ನೀವು ನಿಮಗಾಗಿ ನಮ್ಮ ವಿರುದ್ಧ ಯಾರನ್ನು ಸಹಾಯಕನನ್ನಾಗಿ ಪಡೆಯುತ್ತಿರಲಿಲ್ಲ.
ಅರಬ್ಬಿ ವ್ಯಾಖ್ಯಾನಗಳು:
 
ಅರ್ಥಗಳ ಅನುವಾದ ಅಧ್ಯಾಯ: ಅಲ್ -ಇಸ್ರಾಅ್
ಅಧ್ಯಾಯಗಳ ವಿಷಯಸೂಚಿ ಪುಟ ಸಂಖ್ಯೆ
 
ಪವಿತ್ರ ಕುರ್‌ಆನ್ ಅರ್ಥಾನುವಾದ - ಕನ್ನಡ ಅನುವಾದ - ಬಶೀರ್ ಮೈಸೂರಿ - ಅನುವಾದಗಳ ವಿಷಯಸೂಚಿ

ಅನುವಾದ - ಶೇಖ್ ಬಶೀರ್ ಮೈಸೂರಿ. ರುವ್ವಾದ್ ಭಾಷಾಂತರ ಕೇಂದ್ರದ ಮೇಲ್ವಿಚಾರಣೆಯಲ್ಲಿ ಇದನ್ನು ಅಭಿವೃದ್ಧಿಪಡಿಸಲಾಗಿದೆ.

ಮುಚ್ಚಿ