Check out the new design

ಪವಿತ್ರ ಕುರ್‌ಆನ್ ಅರ್ಥಾನುವಾದ - ಕನ್ನಡ ಅನುವಾದ - ಬಶೀರ್ ಮೈಸೂರಿ * - ಅನುವಾದಗಳ ವಿಷಯಸೂಚಿ


ಅರ್ಥಗಳ ಅನುವಾದ ಅಧ್ಯಾಯ: ಅಶ್ಶೂರಾ   ಶ್ಲೋಕ:
وَالَّذِیْنَ یُحَآجُّوْنَ فِی اللّٰهِ مِنْ بَعْدِ مَا اسْتُجِیْبَ لَهٗ حُجَّتُهُمْ دَاحِضَةٌ عِنْدَ رَبِّهِمْ وَعَلَیْهِمْ غَضَبٌ وَّلَهُمْ عَذَابٌ شَدِیْدٌ ۟
ಮತ್ತು ಯಾರು ಅಲ್ಲಾಹನ ಧರ್ಮವು ಸ್ವೀಕೃತಗೊಂಡ ಬಳಿಕ ಅದರಲ್ಲಿ ತರ್ಕಿಸುತ್ತಾರೋ ಅವರ ತರ್ಕ ಅಲ್ಲಾಹನ ಬಳಿ ನಿರರ್ಥಕವಾಗಿದೆ. ಅವರ ಮೇಲೆ ಕ್ರೋಧವಿದೆ ಮತ್ತು ಅವರಿಗೆ ಕಠಿಣ ಶಿಕ್ಷೆಯಿರುವುದು.
ಅರಬ್ಬಿ ವ್ಯಾಖ್ಯಾನಗಳು:
اَللّٰهُ الَّذِیْۤ اَنْزَلَ الْكِتٰبَ بِالْحَقِّ وَالْمِیْزَانَ ؕ— وَمَا یُدْرِیْكَ لَعَلَّ السَّاعَةَ قَرِیْبٌ ۟
ಸತ್ಯದೊಂದಿಗೆ ಗ್ರಂಥವನ್ನು ಮತ್ತು ತಕ್ಕಡಿಯನ್ನು ಇಳಿಸಿದವನು ಅಲ್ಲಾಹನೇ. ನಿಮಗೇನು ಗೊತ್ತು? ಆ ಅಂತ್ಯಗಳಿಗೆಯು ಸಮೀಪದಲ್ಲೇ ಇರಬಹುದು.
ಅರಬ್ಬಿ ವ್ಯಾಖ್ಯಾನಗಳು:
یَسْتَعْجِلُ بِهَا الَّذِیْنَ لَا یُؤْمِنُوْنَ بِهَا ۚ— وَالَّذِیْنَ اٰمَنُوْا مُشْفِقُوْنَ مِنْهَا ۙ— وَیَعْلَمُوْنَ اَنَّهَا الْحَقُّ ؕ— اَلَاۤ اِنَّ الَّذِیْنَ یُمَارُوْنَ فِی السَّاعَةِ لَفِیْ ضَلٰلٍۢ بَعِیْدٍ ۟
ಅದರಲ್ಲಿ ಪ್ರಳಯದಿನದಲ್ಲಿ ವಿಶ್ವಾಸವಿಡದವರು ಅದರ ಕುರಿತು ಆತುರಪಡುತ್ತಿದ್ದಾರೆ. ಆದರೆ ಅದನ್ನು ನಂಬುವವರು ಅದರ ಕುರಿತು ಭಯಪಡುತ್ತಾರೆ ಮತ್ತು ಅದು ಸತ್ಯವೆಂದು ಅರಿತಿದ್ದಾರೆ. ತಿಳಿಯಿರಿ! ಯಾರು ಅಂತ್ಯಗಳಿಗೆಯ ವಿಷಯದಲ್ಲಿ ತರ್ಕಿಸುವರೋ ಅವರು ಬಹುದೂರದ ಪಥಭ್ರಷ್ಟತೆಯಲ್ಲಿದ್ದಾರೆ.
ಅರಬ್ಬಿ ವ್ಯಾಖ್ಯಾನಗಳು:
اَللّٰهُ لَطِیْفٌ بِعِبَادِهٖ یَرْزُقُ مَنْ یَّشَآءُ ۚ— وَهُوَ الْقَوِیُّ الْعَزِیْزُ ۟۠
ಅಲ್ಲಾಹನು ತನ್ನ ದಾಸರ ಮೇಲೆ ಮಹಾ ಕರುಣೆಯುಳ್ಳವನಾಗಿದ್ದಾನೆ. ಅವನು ತಾನಿಚ್ಛಿಸುವವರಿಗೆ ಜೀವನಾಧಾರವನ್ನು ನೀಡುತ್ತಾನೆ. ಅವನು ಬಲಿಷ್ಠನೂ, ಪ್ರತಾಪಶಾಲಿಯೂ ಆಗಿದ್ದಾನೆ.
ಅರಬ್ಬಿ ವ್ಯಾಖ್ಯಾನಗಳು:
مَنْ كَانَ یُرِیْدُ حَرْثَ الْاٰخِرَةِ نَزِدْ لَهٗ فِیْ حَرْثِهٖ ۚ— وَمَنْ كَانَ یُرِیْدُ حَرْثَ الدُّنْیَا نُؤْتِهٖ مِنْهَا ۙ— وَمَا لَهٗ فِی الْاٰخِرَةِ مِنْ نَّصِیْبٍ ۟
ಯಾರು ಪರಲೋಕದ ಕೃಷಿಯನ್ನು ಬಯಸುತ್ತಾನೋ ಅವನ ಕೃಷಿಯಲ್ಲಿ ನಾವು ಅವನಿಗಾಗಿ ಅಭಿವೃದ್ಧಿಯನ್ನು ನೀಡುತ್ತೇವೆ ಯಾರು ಲೌಕಿಕ ಕೃಷಿಯನ್ನು ಬಯಸುತ್ತಾನೋ ಅವನಿಗೆ ನಾವು ಅದರಿಂದ ಸ್ವಲ್ಪ ಭಾಗ ನೀಡುತ್ತೇವೆ. ಆದರೆ ಪರಲೋಕದಲ್ಲಿ ಅವನಿಗೆ ಯಾವ ಪಾಲೂ ಇರುವುದಿಲ್ಲ..
ಅರಬ್ಬಿ ವ್ಯಾಖ್ಯಾನಗಳು:
اَمْ لَهُمْ شُرَكٰٓؤُا شَرَعُوْا لَهُمْ مِّنَ الدِّیْنِ مَا لَمْ یَاْذَنْ بِهِ اللّٰهُ ؕ— وَلَوْلَا كَلِمَةُ الْفَصْلِ لَقُضِیَ بَیْنَهُمْ ؕ— وَاِنَّ الظّٰلِمِیْنَ لَهُمْ عَذَابٌ اَلِیْمٌ ۟
ಅಲ್ಲಾಹನು ಅನುಮತಿಸದೇ ಇರುವಂತಹ ಧರ್ಮಶಾಸನಗಳನ್ನು ಅವರಿಗೆ ನಿಶ್ಚಯಿಸಿರುವ ಸಹಭಾಗಿಗಳು ಇದ್ದಾರೆಯೇ? ತೀರ್ಪಿನ ದಿನದ ವಾಗ್ದಾನವು ಇಲ್ಲದಿರುತ್ತಿದ್ದರೆ ಅವರ ಮಧ್ಯೆ ತೀರ್ಮಾನ ಮಾಡಿಬಿಡಲಾಗುತ್ತಿತ್ತು. ಖಂಡಿತವಾಗಿಯೂ ಅಕ್ರಮಿಗಳಿಗೆ ಯಾತನಾಮಯ ಶಿಕ್ಷೆಯಿರುವುದು.
ಅರಬ್ಬಿ ವ್ಯಾಖ್ಯಾನಗಳು:
تَرَی الظّٰلِمِیْنَ مُشْفِقِیْنَ مِمَّا كَسَبُوْا وَهُوَ وَاقِعٌ بِهِمْ ؕ— وَالَّذِیْنَ اٰمَنُوْا وَعَمِلُوا الصّٰلِحٰتِ فِیْ رَوْضٰتِ الْجَنّٰتِ ۚ— لَهُمْ مَّا یَشَآءُوْنَ عِنْدَ رَبِّهِمْ ؕ— ذٰلِكَ هُوَ الْفَضْلُ الْكَبِیْرُ ۟
ಓ ಸಂದೇಶವಾಹಕರೇ, ಅಕ್ರಮಿಗಳು ತಮ್ಮ ಕರ್ಮಗಳ ಕುರಿತು ಭಯಭೀತರಾಗಿರುವುದಾಗಿ ನೀವು ಕಾಣುವಿರಿ. ಅದರ ವಿಪತ್ತು ಅವರಿಗೆ ಸಂಭವಿಸೇ ತೀರುವುದು. ಸತ್ಯವಿಶ್ವಾಸವಿರಿಸಿ ಸತ್ಕರ್ಮಗಳನ್ನು ಕೈಗೊಳ್ಳುವವರು ಸ್ವರ್ಗೋದ್ಯಾನಗಳಲ್ಲಿರುವರು. ಅವರು ಬಯಸಿದ್ದೆಲ್ಲವನ್ನೂ ತಮ್ಮ ಪ್ರಭುವಿನ ಬಳಿ ಪಡೆಯುವರು. ಇದುವೇ ಮಹಾ ಅನುಗ್ರಹವಾಗಿದೆ.
ಅರಬ್ಬಿ ವ್ಯಾಖ್ಯಾನಗಳು:
 
ಅರ್ಥಗಳ ಅನುವಾದ ಅಧ್ಯಾಯ: ಅಶ್ಶೂರಾ
ಅಧ್ಯಾಯಗಳ ವಿಷಯಸೂಚಿ ಪುಟ ಸಂಖ್ಯೆ
 
ಪವಿತ್ರ ಕುರ್‌ಆನ್ ಅರ್ಥಾನುವಾದ - ಕನ್ನಡ ಅನುವಾದ - ಬಶೀರ್ ಮೈಸೂರಿ - ಅನುವಾದಗಳ ವಿಷಯಸೂಚಿ

ಅನುವಾದ - ಶೇಖ್ ಬಶೀರ್ ಮೈಸೂರಿ. ರುವ್ವಾದ್ ಭಾಷಾಂತರ ಕೇಂದ್ರದ ಮೇಲ್ವಿಚಾರಣೆಯಲ್ಲಿ ಇದನ್ನು ಅಭಿವೃದ್ಧಿಪಡಿಸಲಾಗಿದೆ.

ಮುಚ್ಚಿ