Check out the new design

ಪವಿತ್ರ ಕುರ್‌ಆನ್ ಅರ್ಥಾನುವಾದ - ಕನ್ನಡ ಅನುವಾದ - ಬಶೀರ್ ಮೈಸೂರಿ * - ಅನುವಾದಗಳ ವಿಷಯಸೂಚಿ


ಅರ್ಥಗಳ ಅನುವಾದ ಅಧ್ಯಾಯ: ಅಲ್ -ಮುಲ್ಕ್   ಶ್ಲೋಕ:
فَلَمَّا رَاَوْهُ زُلْفَةً سِیْٓـَٔتْ وُجُوْهُ الَّذِیْنَ كَفَرُوْا وَقِیْلَ هٰذَا الَّذِیْ كُنْتُمْ بِهٖ تَدَّعُوْنَ ۟
ಅವರು ಆ (ಪುರುತ್ಥಾನದ) ಶಿಕ್ಷೆಯನ್ನು ಸಮೀಪದಿಂದ ಕಂಡಾಗ ಸತ್ಯನಿಷೇಧಿಗಳ ಮುಖಗಳು ವಿಕಾರವಾಗಿಬಿಡುವುವು ನೀವು ಬೇಡುತ್ತಿದ್ದಂತಹ ವಸ್ತು ಇದುವೇ ಆಗಿದೆ ಎಂದು ಅವರೊಂದಿಗೆ ಹೇಳಲಾಗುವುದು.
ಅರಬ್ಬಿ ವ್ಯಾಖ್ಯಾನಗಳು:
قُلْ اَرَءَیْتُمْ اِنْ اَهْلَكَنِیَ اللّٰهُ وَمَنْ مَّعِیَ اَوْ رَحِمَنَا ۙ— فَمَنْ یُّجِیْرُ الْكٰفِرِیْنَ مِنْ عَذَابٍ اَلِیْمٍ ۟
ಹೇಳಿರಿ; ನೀವು ಆಲೋಚಿಸಿದ್ದೀರಾ ನನ್ನನ್ನು ಮತ್ತು ನನ್ನ ಸಂಗಾತಿಗಳನ್ನು ಅಲ್ಲಾಹನು ಮರಣಗೊಳಿಸಬಹುದು ಅಥವಾ ನಮ್ಮ ಮೇಲೆ ಅವನು ಕರುಣೆ ತೋರಬಹುದು, ಆದರೆ ಸತ್ಯನಿಷೇಧಿಗಳನ್ನು ವೇದನಾಜನಕ ಶಿಕ್ಷೆಯಿಂದ ರಕ್ಷಿಸುವವರು ಯಾರಿದ್ದಾರೆ ?
ಅರಬ್ಬಿ ವ್ಯಾಖ್ಯಾನಗಳು:
قُلْ هُوَ الرَّحْمٰنُ اٰمَنَّا بِهٖ وَعَلَیْهِ تَوَكَّلْنَا ۚ— فَسَتَعْلَمُوْنَ مَنْ هُوَ فِیْ ضَلٰلٍ مُّبِیْنٍ ۟
ಹೇಳಿರಿ; ಅವನು ಪರಮದಯಾಮಯನಾ ಗಿದ್ದಾನೆ, ನಾವು ಅವನ ಮೇಲೆಯೇ ವಿಶ್ವಾಸವಿರಿಸಿದ್ದೇವೆ ಮತ್ತು ಅವನ ಮೇಲೆಯೇ ನಾವು ಭರವಸೆಯಿಟ್ಟಿದ್ದೇವೆ. ಸದ್ಯದಲ್ಲೇ ನಿಮಗೆ ಸ್ಪಷ್ಟವಾದ ಪಥಭ್ರಷ್ಟತೆಯ ಲ್ಲಿರುವವರು ಯಾರೆಂದು ತಿಳಿಯಲಿರುವುದು.
ಅರಬ್ಬಿ ವ್ಯಾಖ್ಯಾನಗಳು:
قُلْ اَرَءَیْتُمْ اِنْ اَصْبَحَ مَآؤُكُمْ غَوْرًا فَمَنْ یَّاْتِیْكُمْ بِمَآءٍ مَّعِیْنٍ ۟۠
ಹೇಳಿರಿ; ನಿಮ್ಮ ಬಾವಿಗಳ ನೀರು ಭೂಮಿಯೊಳಗೆ ಇಂಗಿ ಹೋದರೆ ನರ‍್ಮಲವಾದ ನೀರನ್ನು ನಿಮಗೆ ತರುವವರು ಯಾರಿದ್ದಾರೆಂದು ಯೋಚಿಸಿದ್ದೀರಾ ?
ಅರಬ್ಬಿ ವ್ಯಾಖ್ಯಾನಗಳು:
 
ಅರ್ಥಗಳ ಅನುವಾದ ಅಧ್ಯಾಯ: ಅಲ್ -ಮುಲ್ಕ್
ಅಧ್ಯಾಯಗಳ ವಿಷಯಸೂಚಿ ಪುಟ ಸಂಖ್ಯೆ
 
ಪವಿತ್ರ ಕುರ್‌ಆನ್ ಅರ್ಥಾನುವಾದ - ಕನ್ನಡ ಅನುವಾದ - ಬಶೀರ್ ಮೈಸೂರಿ - ಅನುವಾದಗಳ ವಿಷಯಸೂಚಿ

ಅನುವಾದ - ಶೇಖ್ ಬಶೀರ್ ಮೈಸೂರಿ. ರುವ್ವಾದ್ ಭಾಷಾಂತರ ಕೇಂದ್ರದ ಮೇಲ್ವಿಚಾರಣೆಯಲ್ಲಿ ಇದನ್ನು ಅಭಿವೃದ್ಧಿಪಡಿಸಲಾಗಿದೆ.

ಮುಚ್ಚಿ