ಪವಿತ್ರ ಕುರ್‌ಆನ್ ಅರ್ಥಾನುವಾದ - ಕನ್ನಡ ಅನುವಾದ * - ಅನುವಾದಗಳ ವಿಷಯಸೂಚಿ

XML CSV Excel API
Please review the Terms and Policies

ಅರ್ಥಗಳ ಅನುವಾದ ಶ್ಲೋಕ: (33) ಅಧ್ಯಾಯ: ಸೂರ ಅನ್ನೂರ್
وَلْیَسْتَعْفِفِ الَّذِیْنَ لَا یَجِدُوْنَ نِكَاحًا حَتّٰی یُغْنِیَهُمُ اللّٰهُ مِنْ فَضْلِهٖ ؕ— وَالَّذِیْنَ یَبْتَغُوْنَ الْكِتٰبَ مِمَّا مَلَكَتْ اَیْمَانُكُمْ فَكَاتِبُوْهُمْ اِنْ عَلِمْتُمْ فِیْهِمْ خَیْرًا ۖۗ— وَّاٰتُوْهُمْ مِّنْ مَّالِ اللّٰهِ الَّذِیْۤ اٰتٰىكُمْ ؕ— وَلَا تُكْرِهُوْا فَتَیٰتِكُمْ عَلَی الْبِغَآءِ اِنْ اَرَدْنَ تَحَصُّنًا لِّتَبْتَغُوْا عَرَضَ الْحَیٰوةِ الدُّنْیَا ؕ— وَمَنْ یُّكْرِهْهُّنَّ فَاِنَّ اللّٰهَ مِنْ بَعْدِ اِكْرَاهِهِنَّ غَفُوْرٌ رَّحِیْمٌ ۟
ವಿವಾಹವಾಗುವ ಸಾಮರ್ಥ್ಯವಿಲ್ಲದವರು—ಅಲ್ಲಾಹು ಅವರಿಗೆ ತನ್ನ ಔದಾರ್ಯದಿಂದ ಶ್ರೀಮಂತಿಕೆಯನ್ನು ಒದಗಿಸುವ ತನಕ ತಮ್ಮ ಪರಿಶುದ್ಧತೆಯನ್ನು ಕಾಪಾಡಿಕೊಳ್ಳಲಿ. ನಿಮ್ಮ ಅಧೀನದಲ್ಲಿರುವ ಗುಲಾಮರಲ್ಲಿ ಯಾರಾದರೂ ನಿಮಗೆ ಏನಾದರೂ ನೀಡಿ ಸ್ವತಂತ್ರರಾಗಲು ಬಯಸಿದರೆ, ಅವರಲ್ಲಿ ಒಳಿತಿದೆಯೆಂದು ನಿಮಗೆ ತಿಳಿದು ಬಂದರೆ ಅವರನ್ನು ಸ್ವತಂತ್ರಗೊಳಿಸಿರಿ.[1] ಅಲ್ಲಾಹು ನಿಮಗೆ ನೀಡಿದ ಸಂಪತ್ತಿನಿಂದ ಅವರಿಗೂ ಸ್ವಲ್ಪ ನೀಡಿರಿ. ನಿಮ್ಮ ಗುಲಾಮ ಸ್ತ್ರೀಯರು ಪರಿಶುದ್ಧರಾಗಿ ಬದುಕಲು ಬಯಸಿದರೆ, ಐಹಿಕ ಲಾಭಗಳನ್ನು ದೃಷ್ಟಿಯಲ್ಲಿಟ್ಟು ಅವರನ್ನು ಬಲವಂತವಾಗಿ ವ್ಯಭಿಚಾರಕ್ಕೆ ತಳ್ಳಬೇಡಿ.[2] ಯಾರಾದರೂ ಅವರನ್ನು ಬಲವಂತಪಡಿಸಿದರೆ, ಆ ಗುಲಾಮ ಸ್ತ್ರೀಯರು ಬಲವಂತದಿಂದ ತಪ್ಪೆಸಗಿದ ಬಳಿಕವೂ ಅಲ್ಲಾಹು ಕ್ಷಮಿಸುವವನು ಮತ್ತು ದಯೆ ತೋರುವವನಾಗಿದ್ದಾನೆ.
[1] ನಾನು ಇಂತಿಷ್ಟು ಮೊತ್ತ ಹಣವನ್ನು ಸಂಗ್ರಹಿಸಿಕೊಟ್ಟರೆ ನೀವು ನನ್ನನ್ನು ಸ್ವತಂತ್ರಗೊಳಿಸಬೇಕೆಂದು ಗುಲಾಮರು ತಮ್ಮ ಯಜಮಾನರೊಡನೆ ವಿಮೋಚನಾ ಒಪ್ಪಂದ ಮಾಡುತ್ತಿದ್ದರು. ಅವರಲ್ಲಿ ಒಳಿತಿದೆಯೆಂದು ನಿಮಗೆ ತಿಳಿದು ಬಂದರೆ ಎಂಬ ವಚನದ ಅರ್ಥವೇನೆಂದರೆ, ಆ ಗುಲಾಮರಲ್ಲಿ ಸತ್ಯವಂತಿಕೆ ಮತ್ತು ಪ್ರಾಮಾಣಿಕತೆಯಿದೆಯೆಂದು ನಿಮಗೆ ತಿಳಿದು ಬಂದರೆ, ಅಥವಾ ಅವರು ಯಾವುದಾದರೂ ವೃತ್ತಿಯಲ್ಲಿ ತರಬೇತಿ ಪಡೆದಿದ್ದು ಆ ವೃತ್ತಿ ಮಾಡಿ ನಿಮ್ಮ ಹಣವನ್ನು ಪಾವತಿಸುವರೆಂಬ ಭರವಸೆ ನಿಮಗಿದ್ದರೆ ಅವರನ್ನು ಸ್ವತಂತ್ರಗೊಳಿಸಿರಿ ಎಂದರ್ಥ. [2] ಇಸ್ಲಾಮೀ ಪೂರ್ವ ಕಾಲದಲ್ಲಿ (ಅಜ್ಞಾನಕಾಲದಲ್ಲಿ) ಯಜಮಾನರು ತಮ್ಮ ಗುಲಾಮ ಸ್ತ್ರೀಯರನ್ನು ವೇಶ್ಯಾವಾಟಿಕೆಗೆ ತಳ್ಳಿ ಆದಾಯ ಗಳಿಸುತ್ತಿದ್ದರು. ಮುಸಲ್ಮಾನರು ತಮ್ಮ ಅಧೀನದಲ್ಲಿರುವ ಗುಲಾಮಸ್ತ್ರೀಯರಿಂದ ಇಂತಹ ಕೆಲಸಗಳನ್ನು ಮಾಡಿಸಬಾರದೆಂದು ಇಲ್ಲಿ ಆದೇಶ ನೀಡಲಾಗಿದೆ.
ಅರಬ್ಬಿ ವ್ಯಾಖ್ಯಾನಗಳು:
 
ಅರ್ಥಗಳ ಅನುವಾದ ಶ್ಲೋಕ: (33) ಅಧ್ಯಾಯ: ಸೂರ ಅನ್ನೂರ್
ಅಧ್ಯಾಯಗಳ ವಿಷಯಸೂಚಿ ಪುಟ ಸಂಖ್ಯೆ
 
ಪವಿತ್ರ ಕುರ್‌ಆನ್ ಅರ್ಥಾನುವಾದ - ಕನ್ನಡ ಅನುವಾದ - ಅನುವಾದಗಳ ವಿಷಯಸೂಚಿ

ಪವಿತ್ರ ಕುರ್‌ಆನ್ ಕನ್ನಡ ಅರ್ಥಾನುವಾದ - ಮುಹಮ್ಮದ್ ಹಂಝ ಪುತ್ತೂರು

ಮುಚ್ಚಿ