Check out the new design

ಪವಿತ್ರ ಕುರ್‌ಆನ್ ಅರ್ಥಾನುವಾದ - ಕನ್ನಡ ಅನುವಾದ - ಹಂಝ ಪುತ್ತೂರು * - ಅನುವಾದಗಳ ವಿಷಯಸೂಚಿ

PDF XML CSV Excel API
Please review the Terms and Policies

ಅರ್ಥಗಳ ಅನುವಾದ ಅಧ್ಯಾಯ: ಅಲ್ -ಅನ್ ಫಾಲ್   ಶ್ಲೋಕ:

ಅಲ್ -ಅನ್ ಫಾಲ್

یَسْـَٔلُوْنَكَ عَنِ الْاَنْفَالِ ؕ— قُلِ الْاَنْفَالُ لِلّٰهِ وَالرَّسُوْلِ ۚ— فَاتَّقُوا اللّٰهَ وَاَصْلِحُوْا ذَاتَ بَیْنِكُمْ ۪— وَاَطِیْعُوا اللّٰهَ وَرَسُوْلَهٗۤ اِنْ كُنْتُمْ مُّؤْمِنِیْنَ ۟
ಅವರು ನಿಮ್ಮಲ್ಲಿ ಯುದ್ಧಾರ್ಜಿತ ಸೊತ್ತುಗಳ ಬಗ್ಗೆ ಕೇಳುತ್ತಾರೆ.[1] ಹೇಳಿರಿ: “ಯುದ್ಧಾರ್ಜಿತ ಸೊತ್ತು ಅಲ್ಲಾಹನಿಗೆ ಮತ್ತು ಸಂದೇಶವಾಹಕರಿಗೆ ಸೇರಿದ್ದು.”[2] ನೀವು ಅಲ್ಲಾಹನನ್ನು ಭಯಪಡಿರಿ ಮತ್ತು ಪರಸ್ಪರ ನಿಮ್ಮ ಸಂಬಂಧಗಳನ್ನು ಸುಧಾರಿಸಿರಿ. ಅಲ್ಲಾಹನನ್ನು ಮತ್ತು ಸಂದೇಶವಾಹಕರ ಆಜ್ಞಾಪಾಲನೆ ಮಾಡಿರಿ. ನೀವು ಸತ್ಯವಿಶ್ವಾಸಿಗಳಾಗಿದ್ದರೆ.
[1] ಯುದ್ಧಾರ್ಜಿತ ಸೊತ್ತುಗಳು ಎಂದರೆ ಸತ್ಯನಿಷೇಧಿಗಳೊಡನೆ ಯುದ್ಧ ಮಾಡಿ ಗೆದ್ದಾಗ ಸಿಗುವ ಸೊತ್ತುಗಳು.
[2] ಯುದ್ಧಾರ್ಜಿತ ಸೊತ್ತುಗಳು ಅಲ್ಲಾಹನಿಗೆ ಮತ್ತು ಸಂದೇಶವಾಹಕರಿಗೆ ಸೇರಿದ್ದು. ಅವುಗಳನ್ನು ಯೋಧರು ಮನಬಂದಂತೆ ಹಂಚಿಕೊಳ್ಳುವಂತಿಲ್ಲ. ಬದಲಿಗೆ, ಅಲ್ಲಾಹು ಮತ್ತು ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಆಜ್ಞಾಪಿಸಿದಂತೆ ಹಂಚಿಕೊಳ್ಳಬೇಕಾಗಿದೆ.
ಅರಬ್ಬಿ ವ್ಯಾಖ್ಯಾನಗಳು:
اِنَّمَا الْمُؤْمِنُوْنَ الَّذِیْنَ اِذَا ذُكِرَ اللّٰهُ وَجِلَتْ قُلُوْبُهُمْ وَاِذَا تُلِیَتْ عَلَیْهِمْ اٰیٰتُهٗ زَادَتْهُمْ اِیْمَانًا وَّعَلٰی رَبِّهِمْ یَتَوَكَّلُوْنَ ۟ۚۙ
ಅಲ್ಲಾಹನ ಹೆಸರು ಹೇಳಿದಾಗ ಯಾರ ಹೃದಯಗಳು ಭಯದಿಂದ ನಡುಗುತ್ತದೋ, ಅವನ ವಚನಗಳನ್ನು ಪಠಿಸಲಾದರೆ ಯಾರ ವಿಶ್ವಾಸವು ಅಧಿಕವಾಗುತ್ತದೋ ಮತ್ತು ಯಾರು ತಮ್ಮ ಪರಿಪಾಲಕನಲ್ಲಿ (ಅಲ್ಲಾಹನಲ್ಲಿ) ಭರವಸೆಯಿಡುತ್ತಾರೋ ಅವರೇ ಸತ್ಯವಿಶ್ವಾಸಿಗಳು.
ಅರಬ್ಬಿ ವ್ಯಾಖ್ಯಾನಗಳು:
الَّذِیْنَ یُقِیْمُوْنَ الصَّلٰوةَ وَمِمَّا رَزَقْنٰهُمْ یُنْفِقُوْنَ ۟ؕ
ಅವರು ನಮಾಝನ್ನು ಸಂಸ್ಥಾಪಿಸುವವರು ಮತ್ತು ನಾವು ಒದಗಿಸಿದ ಧನದಿಂದ ಖರ್ಚು ಮಾಡುವವರು.
ಅರಬ್ಬಿ ವ್ಯಾಖ್ಯಾನಗಳು:
اُولٰٓىِٕكَ هُمُ الْمُؤْمِنُوْنَ حَقًّا ؕ— لَهُمْ دَرَجٰتٌ عِنْدَ رَبِّهِمْ وَمَغْفِرَةٌ وَّرِزْقٌ كَرِیْمٌ ۟ۚ
ಅವರೇ ನಿಜವಾದ ಸತ್ಯವಿಶ್ವಾಸಿಗಳು. ಅವರಿಗೆ ಅವರ ಪರಿಪಾಲಕನ (ಅಲ್ಲಾಹನ) ಬಳಿ ಉನ್ನತ ಸ್ಥಾನಮಾನಗಳು, ಕ್ಷಮೆ ಮತ್ತು ಗೌರವಾರ್ಹ ಉಪಜೀವನವಿದೆ.
ಅರಬ್ಬಿ ವ್ಯಾಖ್ಯಾನಗಳು:
كَمَاۤ اَخْرَجَكَ رَبُّكَ مِنْ بَیْتِكَ بِالْحَقِّ ۪— وَاِنَّ فَرِیْقًا مِّنَ الْمُؤْمِنِیْنَ لَكٰرِهُوْنَ ۟ۙ
ಅದು ಹೇಗೆಂದರೆ, ನಿಮ್ಮ ಪರಿಪಾಲಕ (ಅಲ್ಲಾಹು) ನಿಮ್ಮನ್ನು ನಿಮ್ಮ ಮನೆಯಿಂದ ಸತ್ಯದೊಂದಿಗೆ ಹೊರಡಿಸಿದಂತೆ. ನಿಶ್ಚಯವಾಗಿಯೂ ಸತ್ಯವಿಶ್ವಾಸಿಗಳಲ್ಲಿ ಒಂದು ಗುಂಪಿಗೆ ಅದು ಇಷ್ಟವಿರಲಿಲ್ಲ.
ಅರಬ್ಬಿ ವ್ಯಾಖ್ಯಾನಗಳು:
یُجَادِلُوْنَكَ فِی الْحَقِّ بَعْدَ مَا تَبَیَّنَ كَاَنَّمَا یُسَاقُوْنَ اِلَی الْمَوْتِ وَهُمْ یَنْظُرُوْنَ ۟ؕ
ಯುದ್ಧವು ಸಂಭವಿಸುತ್ತದೆಯೆಂದು ಸ್ಪಷ್ಟವಾದ ಬಳಿಕವೂ ಅವರು ನಿಮ್ಮೊಡನೆ ಅದರ ಬಗ್ಗೆ ತರ್ಕಿಸುತ್ತಾರೆ. ಸಾವನ್ನು ನೋಡುತ್ತಿರುವಂತೆಯೇ ಅವರನ್ನು ಅದಕ್ಕೆ ಸಾಗಿಸಲಾಗುತ್ತಿದೆಯೋ ಎಂಬಂತೆ.
ಅರಬ್ಬಿ ವ್ಯಾಖ್ಯಾನಗಳು:
وَاِذْ یَعِدُكُمُ اللّٰهُ اِحْدَی الطَّآىِٕفَتَیْنِ اَنَّهَا لَكُمْ وَتَوَدُّوْنَ اَنَّ غَیْرَ ذَاتِ الشَّوْكَةِ تَكُوْنُ لَكُمْ وَیُرِیْدُ اللّٰهُ اَنْ یُّحِقَّ الْحَقَّ بِكَلِمٰتِهٖ وَیَقْطَعَ دَابِرَ الْكٰفِرِیْنَ ۟ۙ
ಎರಡು ಗುಂಪುಗಳಲ್ಲಿ ಒಂದನ್ನು ನಿಮ್ಮ ವಶಕ್ಕೆ ನೀಡುತ್ತೇನೆಂದು ಅಲ್ಲಾಹು ನಿಮಗೆ ಆಶ್ವಾಸನೆ ನೀಡಿದ ಸಂದರ್ಭ(ವನ್ನು ಸ್ಮರಿಸಿ). ನಿಶ್ಶಸ್ತ್ರ ಗುಂಪು ನಿಮ್ಮ ವಶಕ್ಕೆ ಬರಬೇಕೆಂದು ನೀವು ಬಯಸುತ್ತೀರಿ. ಆದರೆ ಅಲ್ಲಾಹು ತನ್ನ ವಚನಗಳ ಮೂಲಕ ಸತ್ಯವನ್ನು ಸ್ಥಾಪಿಸಲು ಮತ್ತು ಸತ್ಯನಿಷೇಧಿಗಳನ್ನು ಬೇರು ಸಹಿತ ನಿರ್ನಾಮ ಮಾಡಲು ಬಯಸುತ್ತಿದ್ದನು.[1]
[1] ಕುರೈಷರ ವ್ಯಾಪಾರ ತಂಡವನ್ನು (ನಿಶ್ಶಸ್ತ್ರ ಗುಂಪನ್ನು) ಅಥವಾ ಕುರೈಷ್ ಸೈನ್ಯವನ್ನು ನಿಮ್ಮ ವಶಕ್ಕೆ ನೀಡುತ್ತೇನೆಂದು ಅಲ್ಲಾಹು ಪ್ರವಾದಿಯವರಿಗೆ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಮಾತು ಕೊಟ್ಟಿದ್ದನು. ಕುರೈಷರ ವ್ಯಾಪಾರ ತಂಡದ ಮೇಲೆ ದಾಳಿ ಮಾಡಿ ವಶಪಡಿಸುವುದಕ್ಕೆ ಯುದ್ಧದ ಅಗತ್ಯವಿಲ್ಲದ್ದರಿಂದ ಮುಸಲ್ಮಾನರು ಅದನ್ನೇ ಬಯಸಿದ್ದರು. ಆದರೆ ಅಲ್ಲಾಹನ ಉದ್ದೇಶವು ಸತ್ಯ ಮತ್ತು ಅಸತ್ಯವನ್ನು ನಿರ್ಣಾಯಕವಾಗಿ ಬೇರ್ಪಡಿಸಿ ತೋರಿಸುವ ಬದ್ರ್ ಯುದ್ಧ ನಡೆಯಬೇಕು ಎಂಬುದಾಗಿತ್ತು.
ಅರಬ್ಬಿ ವ್ಯಾಖ್ಯಾನಗಳು:
لِیُحِقَّ الْحَقَّ وَیُبْطِلَ الْبَاطِلَ وَلَوْ كَرِهَ الْمُجْرِمُوْنَ ۟ۚ
ಅವನು ಸತ್ಯವನ್ನು ಸ್ಥಾಪಿಸಲು ಮತ್ತು ಅಸತ್ಯವನ್ನು ನಿರ್ಮೂಲನ ಮಾಡಲು (ಬಯಸಿದ್ದನು). ಅಪರಾಧಿಗಳು ಎಷ್ಟು ದ್ವೇಷಿಸಿದರೂ ಸಹ.
ಅರಬ್ಬಿ ವ್ಯಾಖ್ಯಾನಗಳು:
 
ಅರ್ಥಗಳ ಅನುವಾದ ಅಧ್ಯಾಯ: ಅಲ್ -ಅನ್ ಫಾಲ್
ಅಧ್ಯಾಯಗಳ ವಿಷಯಸೂಚಿ ಪುಟ ಸಂಖ್ಯೆ
 
ಪವಿತ್ರ ಕುರ್‌ಆನ್ ಅರ್ಥಾನುವಾದ - ಕನ್ನಡ ಅನುವಾದ - ಹಂಝ ಪುತ್ತೂರು - ಅನುವಾದಗಳ ವಿಷಯಸೂಚಿ

ಅನುವಾದ - ಮುಹಮ್ಮದ್ ಹಂಝ ಪುತ್ತೂರು ರುವ್ವಾದ್ ಭಾಷಾಂತರ ಕೇಂದ್ರದ ಮೇಲ್ವಿಚಾರಣೆಯಲ್ಲಿ ಇದನ್ನು ಅಭಿವೃದ್ಧಿಪಡಿಸಲಾಗಿದೆ.

ಮುಚ್ಚಿ