Check out the new design

وه‌رگێڕانی ماناكانی قورئانی پیرۆز - وەرگێڕاوی کەنادی - حەمزە بتور * - پێڕستی وه‌رگێڕاوه‌كان

PDF XML CSV Excel API
Please review the Terms and Policies

وه‌رگێڕانی ماناكان سوره‌تی: الأنفال   ئایه‌تی:
فَلَمْ تَقْتُلُوْهُمْ وَلٰكِنَّ اللّٰهَ قَتَلَهُمْ ۪— وَمَا رَمَیْتَ اِذْ رَمَیْتَ وَلٰكِنَّ اللّٰهَ رَمٰی ۚ— وَلِیُبْلِیَ الْمُؤْمِنِیْنَ مِنْهُ بَلَآءً حَسَنًا ؕ— اِنَّ اللّٰهَ سَمِیْعٌ عَلِیْمٌ ۟
ನೀವು ಅವರನ್ನು ಕೊಲ್ಲಲಿಲ್ಲ. ಆದರೆ ಅಲ್ಲಾಹು ಅವರನ್ನು ಕೊಂದನು.[1] ನೀವು ಎಸೆದಾಗ (ವಾಸ್ತವದಲ್ಲಿ) ನೀವು ಎಸೆದಿರಲಿಲ್ಲ, ಬದಲಿಗೆ, ಅಲ್ಲಾಹು ಎಸೆದಿದ್ದನು.[2] ಅಲ್ಲಾಹು ತನ್ನ ವತಿಯ ಒಂದು ಸುಂದರ ಪರೀಕ್ಷೆಯ ಮೂಲಕ ಸತ್ಯವಿಶ್ವಾಸಿಗಳನ್ನು ಪರೀಕ್ಷಿಸುವುದಕ್ಕಾಗಿ ಹೀಗೆ ಮಾಡಿದ್ದನು. ನಿಶ್ಚಯವಾಗಿಯೂ ಅಲ್ಲಾಹು ಎಲ್ಲವನ್ನು ಕೇಳುವವನು ಮತ್ತು ತಿಳಿದವನಾಗಿದ್ದಾನೆ.
[1] ಬದ್ರ್ ಯುದ್ಧದಲ್ಲಿ ನೀವು ಸತ್ಯನಿಷೇಧಿಗಳನ್ನು ಕೊಂದದ್ದು ನಿಮ್ಮ ಸಾಧನೆ ಎಂದು ಭಾವಿಸಬೇಡಿ. ಅಲ್ಲ, ಬದಲಿಗೆ ಅಲ್ಲಾಹು ನಿಮಗೆ ಸಹಾಯ ಮಾಡಿದ್ದರಿಂದಲೇ ನಿಮಗೆ ಈ ಶಕ್ತಿಯು ದೊರೆತಿದೆ. ಆದ್ದರಿಂದ, ವಾಸ್ತವವಾಗಿ ಅವರನ್ನು ಕೊಂದದ್ದು ಅಲ್ಲಾಹನಾಗಿದ್ದನು.
[2] ಬದ್ರ್ ಯುದ್ಧದಲ್ಲಿ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ವೈರಿಗಳ ಮೇಲೆ ಒಂದು ಹಿಡಿ ಮರಳನ್ನು ಎಸೆದರು. ಅವರು ಎಸೆದ ಈ ಮರಳನ್ನು ಅಲ್ಲಾಹು ವೈರಿಗಳ ಮುಖ ಮತ್ತು ಕಣ್ಣುಗಳನ್ನು ತಲುಪುವಂತೆ ಮಾಡಿ ಅವರನ್ನು ಘಾಸಿಗೊಳಿಸಿದ್ದನು. ಇದರಿಂದ ಅವರಿಗೆ ಏನೂ ಕಾಣದಂತಾಯಿತು.
تەفسیرە عەرەبیەکان:
ذٰلِكُمْ وَاَنَّ اللّٰهَ مُوْهِنُ كَیْدِ الْكٰفِرِیْنَ ۟
ಅವೆಲ್ಲವೂ ಅಲ್ಲಾಹನೇ ಮಾಡಿದ್ದು. ನಿಶ್ಚಯವಾಗಿಯೂ ಅಲ್ಲಾಹು ಸತ್ಯನಿಷೇಧಿಗಳ ತಂತ್ರವನ್ನು ದುರ್ಬಲಗೊಳಿಸುತ್ತಾನೆ.
تەفسیرە عەرەبیەکان:
اِنْ تَسْتَفْتِحُوْا فَقَدْ جَآءَكُمُ الْفَتْحُ ۚ— وَاِنْ تَنْتَهُوْا فَهُوَ خَیْرٌ لَّكُمْ ۚ— وَاِنْ تَعُوْدُوْا نَعُدْ ۚ— وَلَنْ تُغْنِیَ عَنْكُمْ فِئَتُكُمْ شَیْـًٔا وَّلَوْ كَثُرَتْ ۙ— وَاَنَّ اللّٰهَ مَعَ الْمُؤْمِنِیْنَ ۟۠
ನೀವು (ಸತ್ಯನಿಷೇಧಿಗಳು) ತೀರ್ಪನ್ನು ಬಯಸಿದ್ದೇ ಆದರೆ ಇಗೋ ಆ ತೀರ್ಪು (ಸೋಲು) ಬಂದುಬಿಟ್ಟಿದೆ.[1] ನೀವು (ಯುದ್ಧವನ್ನು) ನಿಲ್ಲಿಸುವುದಾದರೆ ಅದು ನಿಮಗೇ ಒಳ್ಳೆಯದು. ನೀವು ಪುನಃ (ಯುದ್ಧಕ್ಕೆ) ಮರಳುವುದಾದರೆ ನಾವು ಕೂಡ ಮರಳುವೆವು. ನಿಮ್ಮ ಸೈನ್ಯ ಎಷ್ಟು ದೊಡ್ಡದಿದ್ದರೂ ಅದರಿಂದ ನಿಮಗೇನೂ ಪ್ರಯೋಜನವಿಲ್ಲ. ನಿಶ್ಚಯವಾಗಿಯೂ ಅಲ್ಲಾಹು ಸತ್ಯವಿಶ್ವಾಸಿಗಳ ಜೊತೆಗಿದ್ದಾನೆ.
[1] ಅಬೂಜಹಲ್ ಸೇರಿದಂತೆ ಸತ್ಯನಿಷೇಧಿಗಳು ಮಕ್ಕಾದಿಂದ ಯುದ್ಧಕ್ಕೆ ಹೊರಡುವಾಗ ಕಅಬಾಲಯದ ಚಿಲಕವನ್ನು ಹಿಡಿದು ಪ್ರಾರ್ಥಿಸಿದರು: “ಓ ಅಲ್ಲಾಹ್! ನಮ್ಮಿಬ್ಬರ ಪೈಕಿ ನಿನಗೆ ಅವಿಧೇಯರಾಗಿರುವವರು ಮತ್ತು ಕುಟುಂಬ ಸಂಬಂಧಗಳನ್ನು ಕಡಿಯುವವರು ಯಾರೋ ಅವರನ್ನು ನೀನು ಈ ಯುದ್ಧದಲ್ಲಿ ಸೋಲಿಸು.” ಅವರ ದೃಷ್ಟಿಯಲ್ಲಿ ಮುಸಲ್ಮಾನರು ಅವಿಧೇಯರು ಮತ್ತು ಕುಟುಂಬ ಸಂಬಂಧ ಕಡಿಯುವವರಾಗಿದ್ದರು. ಆದರೆ ಯುದ್ಧದಲ್ಲಿ ಅಲ್ಲಾಹು ಮುಸಲ್ಮಾನರಿಗೆ ಜಯವನ್ನು ನೀಡಿ ಸತ್ಯನಿಷೇಧಿಗಳು ಏನು ಬೇಡಿದ್ದರೋ ಅದನ್ನೇ ದಯಪಾಲಿಸಿದ್ದನು.
تەفسیرە عەرەبیەکان:
یٰۤاَیُّهَا الَّذِیْنَ اٰمَنُوْۤا اَطِیْعُوا اللّٰهَ وَرَسُوْلَهٗ وَلَا تَوَلَّوْا عَنْهُ وَاَنْتُمْ تَسْمَعُوْنَ ۟
ಓ ಸತ್ಯವಿಶ್ವಾಸಿಗಳೇ! ನೀವು ಅಲ್ಲಾಹು ಮತ್ತು ಅವನ ಸಂದೇಶವಾಹಕರ ಆಜ್ಞಾಪಾಲನೆ ಮಾಡಿರಿ. (ಅವರ ಆಜ್ಞೆಗಳನ್ನು) ಕೇಳುತ್ತಾ ಅವರಿಂದ ಹಿಂದೆ ಸರಿಯಬೇಡಿ.
تەفسیرە عەرەبیەکان:
وَلَا تَكُوْنُوْا كَالَّذِیْنَ قَالُوْا سَمِعْنَا وَهُمْ لَا یَسْمَعُوْنَ ۟ۚ
ನಾವು ಕೇಳಿದೆವು ಎಂದು ಹೇಳಿ ಏನೂ ಕೇಳದ ಜನರಂತೆ ನೀವಾಗಬೇಡಿ.
تەفسیرە عەرەبیەکان:
اِنَّ شَرَّ الدَّوَآبِّ عِنْدَ اللّٰهِ الصُّمُّ الْبُكْمُ الَّذِیْنَ لَا یَعْقِلُوْنَ ۟
ನಿಶ್ಚಯವಾಗಿಯೂ ಅಲ್ಲಾಹನ ದೃಷ್ಟಿಯಲ್ಲಿ ಜೀವಿಗಳಲ್ಲೇ ಅತ್ಯಂತ ಕೀಳಾಗಿರುವವರು (ಸತ್ಯವನ್ನು) ಅರ್ಥಮಾಡಿಕೊಳ್ಳದ ಕಿವುಡರು ಮತ್ತು ಮೂಕರಾಗಿದ್ದಾರೆ.
تەفسیرە عەرەبیەکان:
وَلَوْ عَلِمَ اللّٰهُ فِیْهِمْ خَیْرًا لَّاَسْمَعَهُمْ ؕ— وَلَوْ اَسْمَعَهُمْ لَتَوَلَّوْا وَّهُمْ مُّعْرِضُوْنَ ۟
ಅವರು (ಸತ್ಯವನ್ನು) ಕೇಳುವುದರಲ್ಲಿ ಒಳಿತಿದೆಯೆಂದು ಅಲ್ಲಾಹು ತಿಳಿದಿದ್ದರೆ ಅವರು ಅದನ್ನು ಕೇಳುವಂತೆ ಅವನು ಮಾಡುತ್ತಿದ್ದನು. ಇನ್ನು (ಅವರ ಇಚ್ಛೆಗೆ ವಿರುದ್ಧವಾಗಿ) ಅವರು ಅದನ್ನು ಕೇಳುವಂತೆ ಮಾಡಿದರೂ ಸಹ ಅವರು ಅದನ್ನು ಲೆಕ್ಕಿಸದೆ ವಿಮುಖರಾಗುತ್ತಿದ್ದರು.
تەفسیرە عەرەبیەکان:
یٰۤاَیُّهَا الَّذِیْنَ اٰمَنُوا اسْتَجِیْبُوْا لِلّٰهِ وَلِلرَّسُوْلِ اِذَا دَعَاكُمْ لِمَا یُحْیِیْكُمْ ۚ— وَاعْلَمُوْۤا اَنَّ اللّٰهَ یَحُوْلُ بَیْنَ الْمَرْءِ وَقَلْبِهٖ وَاَنَّهٗۤ اِلَیْهِ تُحْشَرُوْنَ ۟
ಓ ಸತ್ಯವಿಶ್ವಾಸಿಗಳೇ! ನಿಮಗೆ ಜೀವ ತುಂಬುವ ವಿಷಯಕ್ಕೆ ಅಲ್ಲಾಹು ಮತ್ತು ಅವನ ಸಂದೇಶವಾಹಕರು ನಿಮ್ಮನ್ನು ಕರೆದರೆ ಅವರಿಗೆ ಉತ್ತರ ನೀಡಿರಿ. ತಿಳಿಯಿರಿ! ನಿಶ್ಚಯವಾಗಿಯೂ ಅಲ್ಲಾಹು ಮನುಷ್ಯನ ಮತ್ತು ಅವನ ಹೃದಯದ ನಡುವೆ ಪರದೆಯಾಗಿ ಬರುತ್ತಾನೆ. ನಿಮ್ಮನ್ನು ಅವನ ಬಳಿಗೇ ಒಟ್ಟುಗೂಡಿಸಲಾಗುತ್ತದೆ.
تەفسیرە عەرەبیەکان:
وَاتَّقُوْا فِتْنَةً لَّا تُصِیْبَنَّ الَّذِیْنَ ظَلَمُوْا مِنْكُمْ خَآصَّةً ۚ— وَاعْلَمُوْۤا اَنَّ اللّٰهَ شَدِیْدُ الْعِقَابِ ۟
ಒಂದು ಪರೀಕ್ಷೆಯ (ಶಿಕ್ಷೆಯ) ಬಗ್ಗೆ ಜಾಗೃತರಾಗಿರಿ. (ಅದು ಎಂತಹ ಪರೀಕ್ಷೆಯೆಂದರೆ) ನಿಮ್ಮಲ್ಲಿ ಅಕ್ರಮವೆಸಗಿದವರಿಗೆ ಮಾತ್ರ ಅದು ಬಾಧಿಸುವುದಿಲ್ಲ. ತಿಳಿಯಿರಿ! ನಿಶ್ಚಯವಾಗಿಯೂ ಅಲ್ಲಾಹು ಅತಿಕಠೋರವಾಗಿ ಶಿಕ್ಷಿಸುತ್ತಾನೆ.
تەفسیرە عەرەبیەکان:
 
وه‌رگێڕانی ماناكان سوره‌تی: الأنفال
پێڕستی سوره‌ته‌كان ژمارەی پەڕە
 
وه‌رگێڕانی ماناكانی قورئانی پیرۆز - وەرگێڕاوی کەنادی - حەمزە بتور - پێڕستی وه‌رگێڕاوه‌كان

وەرگێڕاوی کردووە محەمەد حەمزە بەتور. پەرەیپێدراوە بە سەرپەرشتیاری ناوەندی ڕوواد بۆ وەرگێڕان.

داخستن