ಅವನೇ ಸತ್ಯವಿಶ್ವಾಸಿಗಳ ಹೃದಯಗಳಲ್ಲಿ ಶಾಂತಿಯನ್ನು ಇಳಿಸಿದವನು, ಇದು ಅವರ ಸತ್ಯವಿಶ್ವಾಸದ ಜೊತೆಗೆ ಇನ್ನಷ್ಟು ವಿಶ್ವಾಸವನ್ನು ವರ್ಧಿಸಲೆಂದಾಗಿದೆ. ಆಕಾಶಗಳ ಮತ್ತು ಭೂಮಿಯ ಸೈನ್ಯಗಳು ಅಲ್ಲಾಹನದ್ದಾಗಿವೆ ಮತ್ತು ಅಲ್ಲಾಹನು ಸರ್ವಜ್ಞಾನಿಯೂ, ಯುಕ್ತಿಪೂರ್ಣನೂ ಆಗಿದ್ದಾನೆ.
ಇದು ಅವನು ಸತ್ಯವಿಶ್ವಾಸಿ ಪುರುಷರನ್ನೂ, ಸ್ತಿçÃಯರನ್ನೂ ತಳಭಾಗದಲ್ಲಿ ಕಾಲುವೆಗಳು ಹರಿಯುತ್ತಿರುವಂತಹ ಸ್ವರ್ಗೋದ್ಯಾನಗಳಲ್ಲಿ ಶಾಶ್ವತರಾಗಿರಲು ಪ್ರವೇಶಿಸಲೆಂದೂ, ಅವರಿಂದ ಅವರ ದೋಷಗಳನ್ನು ಮನ್ನಿಸಲೆಂದೂ ಆಗಿದೆ. ಇದು ಅಲ್ಲಾಹನ ಬಳಿ ಮಹಾ ಯಶಸ್ಸು ಆಗಿದೆ.
ಇದು ಅಲ್ಲಾಹನ ಕುರಿತು ಅನುಮಾನಗಳನ್ನು ಇರಿಸಿಕೊಂಡ ಕಪಟವಿಶ್ವಾಸಿಗಳನ್ನೂ, ಕಪಟವಿಶ್ವಾಸಿನಿಗಳನ್ನೂ, ಬಹುದೇವಾರಾಧಕರನ್ನೂ, ಬಹುದೇವಾರಾಧಕಿಯರನ್ನೂ ಶಿಕ್ಷಿಸಲೆಂದಾಗಿದೆ. (ವಾಸ್ತವದಲ್ಲಿ) ಅವರ ಮೇಲೆ ಕೆಡುಕಿನ ಆವರಣವಿದೆ, ಅಲ್ಲಾಹನು ಅವರ ಮೇಲೆ ಕುಪಿತನಾಗಿದ್ದಾನೆ ಹಾಗು ಅವರನ್ನು ಶಪಿಸಿರುತ್ತಾನೆ ಮತ್ತು ಅವರಿಗಾಗಿ ನರಕವನ್ನು ಸಿದ್ಧಗೊಳಿಸಿರುತ್ತಾನೆ. ಅದು (ಅತ್ಯಂತ) ನಿಕೃಷ್ಟ ಮರಳುವ ಸ್ಥಾನವಾಗಿದೆ.
(ಓ ಸತ್ಯವಿಶ್ವಾಸಿಗಳೇ) ಇದು ನೀವು ಅಲ್ಲಾಹನಲ್ಲೂ, ಅವನ ಸಂದೇಶವಾಹಕರಲ್ಲೂ ವಿಶ್ವಾಸವಿರಿಸಲು, ಅವನ ಧರ್ಮಕ್ಕೆ ನೆರವು ನೀಡಲು, ಅವನಿಗೆ ಗೌರವಿಸಲು ಮತ್ತು ಸಂಜೆ ಮುಂಜಾನೆಗಳಲ್ಲಿ ಅಲ್ಲಾಹನ ಪಾವಿತ್ರö್ಯವನ್ನು ಸ್ತುತಿಸಲೆಂದಾಗಿದೆ.