Check out the new design

ಪವಿತ್ರ ಕುರ್‌ಆನ್ ಅರ್ಥಾನುವಾದ - ಕನ್ನಡ ಅನುವಾದ - ಬಶೀರ್ ಮೈಸೂರಿ * - ಅನುವಾದಗಳ ವಿಷಯಸೂಚಿ


ಅರ್ಥಗಳ ಅನುವಾದ ಅಧ್ಯಾಯ: ಅಝ್ಝುಮರ್   ಶ್ಲೋಕ:
قُلْ اِنِّیْۤ اُمِرْتُ اَنْ اَعْبُدَ اللّٰهَ مُخْلِصًا لَّهُ الدِّیْنَ ۟ۙ
ಹೇಳಿರಿ: ಏಕನಿಷ್ಠನಾಗಿ ಧರ್ಮವನ್ನು ಅಲ್ಲಾಹನಿಗೆ ಮೀಸಲಿಟ್ಟು ಅವನನ್ನು ಆರಾಧಿಸಬೇಕೆಂದು ನನಗೆ ಆದೇಶ ನೀಡಲಾಗಿದೆ.
ಅರಬ್ಬಿ ವ್ಯಾಖ್ಯಾನಗಳು:
وَاُمِرْتُ لِاَنْ اَكُوْنَ اَوَّلَ الْمُسْلِمِیْنَ ۟
ಮತ್ತು ಎಲ್ಲರಿಗಿಂತ ಮೊದಲು ವಿಧೇಯನಾಗಿರಬೇಕೆಂದು ನನಗೆ ಆದೇಶ ನೀಡಲಾಗಿರುತ್ತದೆ.
ಅರಬ್ಬಿ ವ್ಯಾಖ್ಯಾನಗಳು:
قُلْ اِنِّیْۤ اَخَافُ اِنْ عَصَیْتُ رَبِّیْ عَذَابَ یَوْمٍ عَظِیْمٍ ۟
ಹೇಳಿರಿ: ನಾನು ನನ್ನ ಪ್ರಭುವಿನ ಆಜ್ಞಾಲ್ಲೋಂಘನೆ ಮಾಡುವುದಾದರೆ ಖಂಡಿತವಾಗಿಯು ಮಹಾದಿನದ ಯಾತನೆಯಿಂದ ಭಯಪಡುತ್ತೇನೆ.
ಅರಬ್ಬಿ ವ್ಯಾಖ್ಯಾನಗಳು:
قُلِ اللّٰهَ اَعْبُدُ مُخْلِصًا لَّهٗ دِیْنِیْ ۟ۙۚ
ಹೇಳಿರಿ: ನಾನು ನನ್ನ ಧರ್ಮವನ್ನು ಅಲ್ಲಾಹನಿಗೆ ಮೀಸಲಿಟ್ಟು ಏಕನಿಷ್ಠನಾಗಿ ಅವನನ್ನೇ, ಆರಾಧಿಸುತ್ತೇನೆ.
ಅರಬ್ಬಿ ವ್ಯಾಖ್ಯಾನಗಳು:
فَاعْبُدُوْا مَا شِئْتُمْ مِّنْ دُوْنِهٖ ؕ— قُلْ اِنَّ الْخٰسِرِیْنَ الَّذِیْنَ خَسِرُوْۤا اَنْفُسَهُمْ وَاَهْلِیْهِمْ یَوْمَ الْقِیٰمَةِ ؕ— اَلَا ذٰلِكَ هُوَ الْخُسْرَانُ الْمُبِیْنُ ۟
ನೀವು ಅವನ ಹೊರತು ನೀವಿಚ್ಛಿಸಿದವರನ್ನು ಆರಾಧಿಸುತ್ತಿರಿ, ಹೇಳಿರಿ: ಪುನರುತ್ಥಾನದÀ ದಿನ ತಮ್ಮನ್ನು ತಮ್ಮ ಕುಟುಂಬದವರನ್ನು ನಷ್ಟಕ್ಕೀಡು ಮಾಡಿದವರೇ ನಿಜವಾಗಿಯು ನಷ್ಟ ಹೊಂದಿದವರಾಗಿರುತ್ತಾರೆ. ನೆನಪಿರಲಿ: ಇದೇ ಸುಸ್ಪಷ್ಟವಾದ ನಷ್ಟವಾಗಿರುವುದು.
ಅರಬ್ಬಿ ವ್ಯಾಖ್ಯಾನಗಳು:
لَهُمْ مِّنْ فَوْقِهِمْ ظُلَلٌ مِّنَ النَّارِ وَمِنْ تَحْتِهِمْ ظُلَلٌ ؕ— ذٰلِكَ یُخَوِّفُ اللّٰهُ بِهٖ عِبَادَهٗ ؕ— یٰعِبَادِ فَاتَّقُوْنِ ۟
ಅವರಿಗೆ ಅವರ ಮೇಲ್ಭಾಗದಿಂದಲೂ, ಅವರ ಕೆಳಭಾಗದಿಂದಲೂ ಅಗ್ನಿಯ ಆಚ್ಛಾದನೆಯಿರುವುದು. ಅಲ್ಲಾಹನು ತನ್ನ ದಾಸರನ್ನು ಭಯಪಡಿಸುತ್ತಿರುವುದು (ಶಿಕ್ಷೆಯು) ಇದೇ ಆಗಿದೆ. ಆದುದರಿಂದ ಓ ನನ್ನ ದಾಸರೇ, ನನ್ನನ್ನೇ ಭಯಪಡುತ್ತಿರಿ.
ಅರಬ್ಬಿ ವ್ಯಾಖ್ಯಾನಗಳು:
وَالَّذِیْنَ اجْتَنَبُوا الطَّاغُوْتَ اَنْ یَّعْبُدُوْهَا وَاَنَابُوْۤا اِلَی اللّٰهِ لَهُمُ الْبُشْرٰی ۚ— فَبَشِّرْ عِبَادِ ۟ۙ
ಮತ್ತು ಮಿಥ್ಯಾರಾಧ್ಯರನ್ನು ತೊರೆದು ಅಲ್ಲಾಹನೆಡೆಗೆ ಮರಳುವವರಿಗೆ ಸುವಾರ್ತೆ ಇದೆ. ಆದುದರಿಂದ ನನ್ನ ದಾಸರಿಗೆ ಸುವಾರ್ತೆಯನ್ನು ನೀಡಿರಿ.
ಅರಬ್ಬಿ ವ್ಯಾಖ್ಯಾನಗಳು:
الَّذِیْنَ یَسْتَمِعُوْنَ الْقَوْلَ فَیَتَّبِعُوْنَ اَحْسَنَهٗ ؕ— اُولٰٓىِٕكَ الَّذِیْنَ هَدٰىهُمُ اللّٰهُ وَاُولٰٓىِٕكَ هُمْ اُولُوا الْاَلْبَابِ ۟
ಇವರು ಕುರ್‌ಆನನ್ನು ಗಮನವಿಟ್ಟು ಆಲಿಸುತ್ತಾರೆ. ತರುವಾಯ ಅದರಿಂದ ಅತ್ಯುತ್ತಮವಾಗಿರುವುದನ್ನು ಅನುಸರಿಸುತ್ತಾರೆ. ಇವರೇ ಅಲ್ಲಾಹನಕಡೆಯಿಂದ ಸನ್ಮಾರ್ಗ ಪಡೆದವರಾಗಿರುತ್ತಾರೆ ಮತ್ತು ಇವರೇ ಬುದ್ಧಿವಂತರಾಗಿದ್ದಾರೆ.
ಅರಬ್ಬಿ ವ್ಯಾಖ್ಯಾನಗಳು:
اَفَمَنْ حَقَّ عَلَیْهِ كَلِمَةُ الْعَذَابِ ؕ— اَفَاَنْتَ تُنْقِذُ مَنْ فِی النَّارِ ۟ۚ
ಇನ್ನು ಯಾರ ಮೇಲೆ ಯಾತನೆಯ ವಚನವು ಸಾಬೀತಾಗಿದೆಯೋ ಏನು ನರಕಾಗ್ನಿಯಲ್ಲಿರುವವನನ್ನು ನೀವು ವಿಮೋಚಿಸಬಲ್ಲಿರಾ?
ಅರಬ್ಬಿ ವ್ಯಾಖ್ಯಾನಗಳು:
لٰكِنِ الَّذِیْنَ اتَّقَوْا رَبَّهُمْ لَهُمْ غُرَفٌ مِّنْ فَوْقِهَا غُرَفٌ مَّبْنِیَّةٌ ۙ— تَجْرِیْ مِنْ تَحْتِهَا الْاَنْهٰرُ ؕ۬— وَعْدَ اللّٰهِ ؕ— لَا یُخْلِفُ اللّٰهُ الْمِیْعَادَ ۟
ಆದರೆ ತಮ್ಮ ಪ್ರಭುವನ್ನು ಭಯಪಡುವವರಿಗೆ ಅಂತಸ್ತಿನ ಮೇಲೆ ಅಂತಸ್ತಿನ ಉನ್ನತ ಭವನಗಳಿವೆ. ಅವುಗಳ ತಳಭಾಗದಲ್ಲಿ ಕಾಲುವೆಗಳು ಹರಿಯುತ್ತಿರುವುವು. ಇದು ಅಲ್ಲಾಹನ ವಾಗ್ದಾನ ಮತ್ತು ಅಲ್ಲಾಹನು ವಾಗ್ದಾನವನ್ನು ಉಲ್ಲಂಘಿಸುವುದಿಲ್ಲ.
ಅರಬ್ಬಿ ವ್ಯಾಖ್ಯಾನಗಳು:
اَلَمْ تَرَ اَنَّ اللّٰهَ اَنْزَلَ مِنَ السَّمَآءِ مَآءً فَسَلَكَهٗ یَنَابِیْعَ فِی الْاَرْضِ ثُمَّ یُخْرِجُ بِهٖ زَرْعًا مُّخْتَلِفًا اَلْوَانُهٗ ثُمَّ یَهِیْجُ فَتَرٰىهُ مُصْفَرًّا ثُمَّ یَجْعَلُهٗ حُطَامًا ؕ— اِنَّ فِیْ ذٰلِكَ لَذِكْرٰی لِاُولِی الْاَلْبَابِ ۟۠
ಅಲ್ಲಾಹನು ಆಕಾಶದಿಂದ ನೀರನ್ನು ಸುರಿಸಿದ್ದನ್ನು ನೀವು ನೋಡುವುದಿಲ್ಲವೇ? ಮತ್ತು ಅದನ್ನು ಭೂಮಿಯ ಚಿಲುಮೆಗಳಿಗೆ ತಲುಪಿಸುತ್ತಾನೆ. ತರುವಾಯ ಅದರ ಮೂಲಕ ವಿಭಿನ್ನ ಬಣ್ಣಗಳ ಕೃಷಿಗಳನ್ನು ಹೊರತರುತ್ತಾನೆ. ಅನಂತರ ಅವು ಒಣಗಿ ಹಳದಿ ಬಣ್ಣಕÉ್ಕತಿರುಗಿರುವುದಾಗಿ ನೀವು ಕಾಣುವಿರಿ. ಆ ಬಳಿಕ ಅವನು ಅವುಗಳನ್ನು ಹೊಟ್ಟಾಗಿ ಮಾಡಿಬಿಡುವನು. ಇದರಲ್ಲಿ ಬುದ್ಧಿವಂತರಿಗೆ ಅನೇಕ ಉದ್ಭೋಧೆಗಳಿವೆ.
ಅರಬ್ಬಿ ವ್ಯಾಖ್ಯಾನಗಳು:
 
ಅರ್ಥಗಳ ಅನುವಾದ ಅಧ್ಯಾಯ: ಅಝ್ಝುಮರ್
ಅಧ್ಯಾಯಗಳ ವಿಷಯಸೂಚಿ ಪುಟ ಸಂಖ್ಯೆ
 
ಪವಿತ್ರ ಕುರ್‌ಆನ್ ಅರ್ಥಾನುವಾದ - ಕನ್ನಡ ಅನುವಾದ - ಬಶೀರ್ ಮೈಸೂರಿ - ಅನುವಾದಗಳ ವಿಷಯಸೂಚಿ

ಅನುವಾದ - ಶೇಖ್ ಬಶೀರ್ ಮೈಸೂರಿ. ರುವ್ವಾದ್ ಭಾಷಾಂತರ ಕೇಂದ್ರದ ಮೇಲ್ವಿಚಾರಣೆಯಲ್ಲಿ ಇದನ್ನು ಅಭಿವೃದ್ಧಿಪಡಿಸಲಾಗಿದೆ.

ಮುಚ್ಚಿ