Check out the new design

ಪವಿತ್ರ ಕುರ್‌ಆನ್ ಅರ್ಥಾನುವಾದ - ಕನ್ನಡ ಅನುವಾದ - ಬಶೀರ್ ಮೈಸೂರಿ * - ಅನುವಾದಗಳ ವಿಷಯಸೂಚಿ


ಅರ್ಥಗಳ ಅನುವಾದ ಅಧ್ಯಾಯ: ಅಝ್ಝುಮರ್   ಶ್ಲೋಕ:
اِنَّاۤ اَنْزَلْنَا عَلَیْكَ الْكِتٰبَ لِلنَّاسِ بِالْحَقِّ ۚ— فَمَنِ اهْتَدٰی فَلِنَفْسِهٖ ۚ— وَمَنْ ضَلَّ فَاِنَّمَا یَضِلُّ عَلَیْهَا ۚ— وَمَاۤ اَنْتَ عَلَیْهِمْ بِوَكِیْلٍ ۟۠
ಸಂದೇಶವಾಹಕರೇ, ಖಂಡಿತವಾಗಿಯೂ ನಾವು ಸಕಲ ಮಾನವರಿಗಾಗಿ ಸತ್ಯಪೂರ್ಣಗ್ರಂಥವನ್ನು ನಿಮ್ಮೆಡೆಗೆ ಅವತೀರ್ಣಗೊಳಿಸಿದ್ದೇವೆ. ಯಾರು ಸನ್ಮಾರ್ಗ ಪಡೆಯುತ್ತಾನೋ ಅದು ಅವನ ಹಿತಕ್ಕಾಗಿಯೇ ಆಗಿದೆ. ಮತ್ತು ಯಾರು ಮಾರ್ಗಭ್ರಷ್ಟನಾಗುತ್ತಾನೋ ಅವನ ಮಾರ್ಗಭ್ರಷ್ಟತೆಯ ದೋಷವು ಅವನ ಮೇಲೆಯೇ ಇರುವುದು. ನೀವು ಅವರ ಮೇಲ್ವಿಚಾರಕರೇನು ಅಲ್ಲ.
ಅರಬ್ಬಿ ವ್ಯಾಖ್ಯಾನಗಳು:
اَللّٰهُ یَتَوَفَّی الْاَنْفُسَ حِیْنَ مَوْتِهَا وَالَّتِیْ لَمْ تَمُتْ فِیْ مَنَامِهَا ۚ— فَیُمْسِكُ الَّتِیْ قَضٰی عَلَیْهَا الْمَوْتَ وَیُرْسِلُ الْاُخْرٰۤی اِلٰۤی اَجَلٍ مُّسَمًّی ؕ— اِنَّ فِیْ ذٰلِكَ لَاٰیٰتٍ لِّقَوْمٍ یَّتَفَكَّرُوْنَ ۟
ಅಲ್ಲಾಹನು ಆತ್ಮಗಳನ್ನು ಅವುಗಳ ಮರಣದ ವೇಳೆಯಲ್ಲಿ ವಶಪಡಿಸಿಕೊಳ್ಳುತ್ತಾನೆ. ಮತ್ತು ಮರಣ ಹೊಂದದ ಆತ್ಮವನ್ನು ಅದರ ನಿದ್ರೆಯ ವೇಳೆಯಲ್ಲಿ ವಶಪಡಿಸಿಕೊಳ್ಳುತ್ತಾನೆ. ಅನಂತರ ಯಾವುದರ ಮೇಲೆ ಮರಣದ ಆದೇಶವು ನಿಶ್ಚಿತವಾಗಿದೆಯೋ ಅವುಗಳನ್ನು ತಡೆದಿರಿಸಿಕೊಳ್ಳುತ್ತಾನೆ ಹಾಗೂ ಉಳಿದವುಗಳನ್ನು ಒಂದು ನಿರ್ಧಿಷ್ಟಾವಧಿಯವರೆಗೆ ಬಿಟ್ಟು ಬಿಡುತ್ತಾನೆ. ನಿಸ್ಸಂದೇಹವಾಗಿಯು ಇದರಲ್ಲಿ ಚಿಂತಿಸುವ ಜನರಿಗೆ ಹಲವಾರು ದೃಷ್ಠಾಂತಗಳಿವೆ.
ಅರಬ್ಬಿ ವ್ಯಾಖ್ಯಾನಗಳು:
اَمِ اتَّخَذُوْا مِنْ دُوْنِ اللّٰهِ شُفَعَآءَ ؕ— قُلْ اَوَلَوْ كَانُوْا لَا یَمْلِكُوْنَ شَیْـًٔا وَّلَا یَعْقِلُوْنَ ۟
ಅವರು ಅಲ್ಲಾಹನ ಹೊರತು ಇತರರನ್ನು ತಮ್ಮ ಶಿಫಾರಸ್ಸುದಾರರನ್ನಾಗಿ ಮಾಡಿಕೊಂಡಿದ್ದಾರೆಯೇ? ಹೇಳಿರಿ: ಅವರು ಯಾವ ಅಧಿಕಾರವನ್ನು ಹೊಂದಿಲ್ಲದಿದÀ್ದರೂ ಮತ್ತು ಅವಿವೇಕಿಗಳಾಗಿದ್ದರೂ ಸರಿಯೇ?
ಅರಬ್ಬಿ ವ್ಯಾಖ್ಯಾನಗಳು:
قُلْ لِّلّٰهِ الشَّفَاعَةُ جَمِیْعًا ؕ— لَهٗ مُلْكُ السَّمٰوٰتِ وَالْاَرْضِ ؕ— ثُمَّ اِلَیْهِ تُرْجَعُوْنَ ۟
ಹೇಳಿರಿ: ಶಿಫಾರಸ್ಸು ಸಂಪೂರ್ಣವಾಗಿ ಅಲ್ಲಾಹನ ಅಧಿಕಾರದಲ್ಲಿದೆ. ಆಕಾಶಗಳ ಹಾಗೂ ಭೂಮಿಯ ಅಧಿಪತ್ಯವು ಅವನದ್ದಾಗಿರುವುದು. ನಂತರ ನೀವು ಅವನೆಡೆಗೆ ಮರಳಿಸಲಾಗುವಿರಿ.
ಅರಬ್ಬಿ ವ್ಯಾಖ್ಯಾನಗಳು:
وَاِذَا ذُكِرَ اللّٰهُ وَحْدَهُ اشْمَاَزَّتْ قُلُوْبُ الَّذِیْنَ لَا یُؤْمِنُوْنَ بِالْاٰخِرَةِ ۚ— وَاِذَا ذُكِرَ الَّذِیْنَ مِنْ دُوْنِهٖۤ اِذَا هُمْ یَسْتَبْشِرُوْنَ ۟
ಏಕÉÊಕ ಅಲ್ಲಾಹನ ಪ್ರಸ್ತಾಪನೆ ಮಾಡಲಾದಾಗ ಪರಲೋಕದಲ್ಲಿ ನಂಬಿಕೆಯಿಡದವರ ಹೃದಯಗಳು ಅಸಹ್ಯಪಡತೊಡಗುತ್ತವೆ. ಮತ್ತು ಅವನ ಹೊರತು ಇತರರನ್ನು ಪ್ರಸ್ತಾಪಿಸಲಾದರೆ ಅವರ ಹೃದಯಗಳು ಅರಳಿ ಹರುಷಭರಿತವಾಗುತ್ತವೆ.
ಅರಬ್ಬಿ ವ್ಯಾಖ್ಯಾನಗಳು:
قُلِ اللّٰهُمَّ فَاطِرَ السَّمٰوٰتِ وَالْاَرْضِ عٰلِمَ الْغَیْبِ وَالشَّهَادَةِ اَنْتَ تَحْكُمُ بَیْنَ عِبَادِكَ فِیْ مَا كَانُوْا فِیْهِ یَخْتَلِفُوْنَ ۟
ಹೇಳಿರಿ: ಓ ಅಲ್ಲಾಹ್, ಆಕಾಶಗಳ ಮತ್ತು ಭೂಮಿಯ ಸೃಷ್ಠಿಕರ್ತನೇ, ರಹಸ್ಯ-ಬಹಿರಂಗಗಳ ಜ್ಞಾನಿಯೇ, ನೀನೇ ನಿನ್ನದಾಸರ ನಡುವೆ ಅವರು ಭಿನ್ನತೆ ತೋರುತ್ತಿದ್ದಂತಹ ವಿಷಯಗಳ ತೀರ್ಮಾನ ಮಾಡಲಿರುವೆ.
ಅರಬ್ಬಿ ವ್ಯಾಖ್ಯಾನಗಳು:
وَلَوْ اَنَّ لِلَّذِیْنَ ظَلَمُوْا مَا فِی الْاَرْضِ جَمِیْعًا وَّمِثْلَهٗ مَعَهٗ لَافْتَدَوْا بِهٖ مِنْ سُوْٓءِ الْعَذَابِ یَوْمَ الْقِیٰمَةِ ؕ— وَبَدَا لَهُمْ مِّنَ اللّٰهِ مَا لَمْ یَكُوْنُوْا یَحْتَسِبُوْنَ ۟
ಅಕ್ರಮಿಗಳ ಬಳಿ ಭೂಮಿಯ ಸಕಲ ಸಂಪತ್ತೂ ಮಾತ್ರವಲ್ಲ ಅಷ್ಟೇ ಬೇರೆ ಇರುತ್ತಿದ್ದರೂ ಪುನರುತ್ಥಾನ ದಿನದ ಉಗ್ರಯಾತನೆಯಿಂದ ಪಾರಾಗಲಿಕ್ಕೆ ಪರಿಹಾರವಾಗಿ ಅವೆಲ್ಲವನ್ನೂ ನೀಡುತ್ತಿದ್ದರು ಮತ್ತು ಅಲ್ಲಾಹನ ಕಡೆಯಿಂದ ಅವರು ಊಹಿಸಿಯೂ ಇಲ್ಲದಿರುವಂತಹದ್ದು ಅವರ ಮುಂದೆ ಪ್ರಕಟವಾಗುವುದು.
ಅರಬ್ಬಿ ವ್ಯಾಖ್ಯಾನಗಳು:
 
ಅರ್ಥಗಳ ಅನುವಾದ ಅಧ್ಯಾಯ: ಅಝ್ಝುಮರ್
ಅಧ್ಯಾಯಗಳ ವಿಷಯಸೂಚಿ ಪುಟ ಸಂಖ್ಯೆ
 
ಪವಿತ್ರ ಕುರ್‌ಆನ್ ಅರ್ಥಾನುವಾದ - ಕನ್ನಡ ಅನುವಾದ - ಬಶೀರ್ ಮೈಸೂರಿ - ಅನುವಾದಗಳ ವಿಷಯಸೂಚಿ

ಅನುವಾದ - ಶೇಖ್ ಬಶೀರ್ ಮೈಸೂರಿ. ರುವ್ವಾದ್ ಭಾಷಾಂತರ ಕೇಂದ್ರದ ಮೇಲ್ವಿಚಾರಣೆಯಲ್ಲಿ ಇದನ್ನು ಅಭಿವೃದ್ಧಿಪಡಿಸಲಾಗಿದೆ.

ಮುಚ್ಚಿ