Check out the new design

ಪವಿತ್ರ ಕುರ್‌ಆನ್ ಅರ್ಥಾನುವಾದ - ಕನ್ನಡ ಅನುವಾದ - ಬಶೀರ್ ಮೈಸೂರಿ * - ಅನುವಾದಗಳ ವಿಷಯಸೂಚಿ


ಅರ್ಥಗಳ ಅನುವಾದ ಅಧ್ಯಾಯ: ಫುಸ್ಸಿಲತ್   ಶ್ಲೋಕ:
فَقَضٰىهُنَّ سَبْعَ سَمٰوَاتٍ فِیْ یَوْمَیْنِ وَاَوْحٰی فِیْ كُلِّ سَمَآءٍ اَمْرَهَا وَزَیَّنَّا السَّمَآءَ الدُّنْیَا بِمَصَابِیْحَ ۖۗ— وَحِفْظًا ؕ— ذٰلِكَ تَقْدِیْرُ الْعَزِیْزِ الْعَلِیْمِ ۟
ಆಗ ಅವನು ಎರಡು ದಿನಗಳಲ್ಲಿ ಏಳು ಆಕಾಶಗಳನ್ನುಂಟು ಮಾಡಿದನು. ಹಾಗೂ ಪ್ರತಿಯೊಂದು ಆಕಾಶದಲ್ಲೂ ಅದಕ್ಕೆ ಯೋಗ್ಯವಾದ ನಿಯಮವನ್ನು ದಿವ್ಯ ವಾಣಿಯ ಮೂಲಕ ನೀಡಿದನು ಮತ್ತು ನಾವು ಜಗದ ಆಕಾಶವನ್ನು ದೀಪಗಳಿಂದ ಅಲಂಕರಿಸಿದ್ದೇವೆ ಹಾಗೂ ಸಂರಕ್ಷಣೆಯನ್ನು ಮಾಡಿದ್ದೇವೆ. ಇದು ಬಲಾಢ್ಯನೂ, ಸರ್ವಜ್ಞನೂ ಆದ ಅಲ್ಲಾಹನ ಯೋಜನೆಯಾಗಿದೆ.
ಅರಬ್ಬಿ ವ್ಯಾಖ್ಯಾನಗಳು:
فَاِنْ اَعْرَضُوْا فَقُلْ اَنْذَرْتُكُمْ صٰعِقَةً مِّثْلَ صٰعِقَةِ عَادٍ وَّثَمُوْدَ ۟ؕ
ಇನ್ನು ಅವರು ವಿಮುಖರಾದರೆ ನೀವು ಹೇಳಿರಿ: ನಾನು ನಿಮಗೆ ಆದ್ ಮತ್ತು ಸಮೂದರಿಗೆ ಬಾಧಿಸಿದ ಆರ್ಭಟದಂತಿರುವ ಒಂದು ಘೋರ ಆರ್ಭಟದ ಎಚ್ಚರಿಕೆ ನೀಡುತ್ತೇನೆ.
ಅರಬ್ಬಿ ವ್ಯಾಖ್ಯಾನಗಳು:
اِذْ جَآءَتْهُمُ الرُّسُلُ مِنْ بَیْنِ اَیْدِیْهِمْ وَمِنْ خَلْفِهِمْ اَلَّا تَعْبُدُوْۤا اِلَّا اللّٰهَ ؕ— قَالُوْا لَوْ شَآءَ رَبُّنَا لَاَنْزَلَ مَلٰٓىِٕكَةً فَاِنَّا بِمَاۤ اُرْسِلْتُمْ بِهٖ كٰفِرُوْنَ ۟
ಅವರ ಬಳಿಗೆ ಸಂದೇಶವಾಹಕರು ಅವರ ಮುಂದಿನಿAದಲೂ, ಅವರ ಹಿಂದಿನಿAದಲೂ ಬಂದು: ನೀವು ಅಲ್ಲಾಹನ ಹೊರತು ಇನ್ನಾರನ್ನೂ ಆರಾಧಿಸಬೇಡಿರಿ ಎಂದಾಗ ಅವರು ನಮ್ಮ ಪ್ರಭುವು ಇಚ್ಛಿಸುತ್ತಿದ್ದರೆ ಮಲಕ್‌ಗಳನ್ನು ಕಳುಹಿಸುತ್ತಿದ್ದನು. ಆದುದರಿಂದ ನಿಮ್ಮನ್ನು ಯಾವ ಸಂದೇಶದ ಮೂಲಕ ಕಳುಹಿಸಲಾಗಿದೆಯೋ ಅದನ್ನು ನಾವು ನಿರಾಕರಿಸುತ್ತೇವೆ ಎಂದರು.
ಅರಬ್ಬಿ ವ್ಯಾಖ್ಯಾನಗಳು:
فَاَمَّا عَادٌ فَاسْتَكْبَرُوْا فِی الْاَرْضِ بِغَیْرِ الْحَقِّ وَقَالُوْا مَنْ اَشَدُّ مِنَّا قُوَّةً ؕ— اَوَلَمْ یَرَوْا اَنَّ اللّٰهَ الَّذِیْ خَلَقَهُمْ هُوَ اَشَدُّ مِنْهُمْ قُوَّةً ؕ— وَكَانُوْا بِاٰیٰتِنَا یَجْحَدُوْنَ ۟
ಆದ್ ಜನಾಂಗದವರು ಭೂಮಿಯಲ್ಲಿ ಅನ್ಯಾಯವಾಗಿ ಅಹಂಕಾರ ತೋರುತ್ತಿದ್ದರು ಮತ್ತು ನಮಗಿಂತಲೂ ಶಕ್ತಿ ಸಾಮರ್ಥ್ಯದಲ್ಲಿ ಮಿಗಿಲಾದವರು ಯಾರಿದ್ದಾರೆ? ಎನ್ನುತ್ತಿದ್ದರು. ಅವರನ್ನು ಸೃಷ್ಟಿಸಿದವನಾದ ಅಲ್ಲಾಹನು ಅವರಿಗಿಂತ ಆದಷ್ಟೋ ಹೆಚ್ಚು ಬಲಿಷ್ಠನೆಂಬುದು ಅವರಿಗೆ ಕಾಣಲಿಲ್ಲವೇ? ಮಾತ್ರವಲ್ಲದೆ ಅವರು ನಮ್ಮದೃಷ್ಟಾಂತಗಳನ್ನು ನಿರಾಕರಿಸುತ್ತಿದ್ದರು.
ಅರಬ್ಬಿ ವ್ಯಾಖ್ಯಾನಗಳು:
فَاَرْسَلْنَا عَلَیْهِمْ رِیْحًا صَرْصَرًا فِیْۤ اَیَّامٍ نَّحِسَاتٍ لِّنُذِیْقَهُمْ عَذَابَ الْخِزْیِ فِی الْحَیٰوةِ الدُّنْیَا ؕ— وَلَعَذَابُ الْاٰخِرَةِ اَخْزٰی وَهُمْ لَا یُنْصَرُوْنَ ۟
ಆದ್ದರಿಂದ ನಾವು ಅವರಿಗೆ ಲೌಕಿಕ ಜೀವನದಲ್ಲೇ ಅಪಮಾನಕರ ಯಾತನೆಯನ್ನು ಸವಿಸಲೆಂದು ಭೀಕರ ಗಾಳಿಯನ್ನು ಅಶುಭಕರ ದಿನಗಳಲ್ಲಿ ಕಳುಹಿಸಿದೆವು ಮತ್ತು ಪರಲೋಕದ ಯಾತನೆಯು ಅದಕ್ಕಿಂತಲೂ ಅಪಮಾನಕರವಾಗಿದೆ. ಮತ್ತು ಅವರಿಗೆ ಸಹಾಯವು ನೀಡಲಾಗದು.
ಅರಬ್ಬಿ ವ್ಯಾಖ್ಯಾನಗಳು:
وَاَمَّا ثَمُوْدُ فَهَدَیْنٰهُمْ فَاسْتَحَبُّوا الْعَمٰی عَلَی الْهُدٰی فَاَخَذَتْهُمْ صٰعِقَةُ الْعَذَابِ الْهُوْنِ بِمَا كَانُوْا یَكْسِبُوْنَ ۟ۚ
ಇನ್ನು ಸಮೂದ್ ಜನಾಂಗಕ್ಕೆ ನಾವು ಸನ್ಮಾರ್ಗವನ್ನು ತೋರಿಸಿದೆವು. ಆದರೆ ಅವರು ಸನ್ಮಾರ್ಗಕ್ಕಿಂತ ಅಂಧತೆಯನ್ನೇ ಮೆಚ್ಚಿಕೊಂಡರು. ಆಗ ಅವರನ್ನು ಅವರ ದುಷ್ಕರ್ಮಗಳ ನಿಮಿತ್ತ ಅಪಮಾನಕರ ಯಾತನೆಯ ರೂಪದಲ್ಲಿ ಘೋರ ಆರ್ಭಟವು ಹಿಡಿದು ಬಟ್ಟಿತು.
ಅರಬ್ಬಿ ವ್ಯಾಖ್ಯಾನಗಳು:
وَنَجَّیْنَا الَّذِیْنَ اٰمَنُوْا وَكَانُوْا یَتَّقُوْنَ ۟۠
ಮತ್ತು ಸತ್ಯವಿಶ್ವಾಸವನ್ನಿರಿಸಿ, ಭಯಭಕ್ತಿ ತೋರಿದವರನ್ನು ನಾವು ರಕ್ಷಿಸಿದೆವು
ಅರಬ್ಬಿ ವ್ಯಾಖ್ಯಾನಗಳು:
وَیَوْمَ یُحْشَرُ اَعْدَآءُ اللّٰهِ اِلَی النَّارِ فَهُمْ یُوْزَعُوْنَ ۟
ಅಲ್ಲಾಹನ ಶತ್ರುಗಳನ್ನು ನರಕದೆಡೆಗೆ ಒಟ್ಟು ಗೂಡಿಸಲಾಗುವ ದಿನ ಅವರು ತಂಡೋಪ ತಂಡಗಳಾಗಿ ಒಟ್ಟು ಗೂಡಿಸಲಾಗುವರು.
ಅರಬ್ಬಿ ವ್ಯಾಖ್ಯಾನಗಳು:
حَتّٰۤی اِذَا مَا جَآءُوْهَا شَهِدَ عَلَیْهِمْ سَمْعُهُمْ وَاَبْصَارُهُمْ وَجُلُوْدُهُمْ بِمَا كَانُوْا یَعْمَلُوْنَ ۟
ಕೊನೆಗೆ ಅವರು ನರಕದ ಸಮೀಪಕ್ಕೆ ಬಂದಾಗ ಅವರ ಕಿವಿಗಳೂ, ಕಣ್ಣುಗಳೂ, ಚರ್ಮಗಳೂ ಅವರು ಮಾಡುತ್ತಿದ್ದುದರ ಕುರಿತು ಸಾಕ್ಷಿ ಹೇಳುವುವು.
ಅರಬ್ಬಿ ವ್ಯಾಖ್ಯಾನಗಳು:
 
ಅರ್ಥಗಳ ಅನುವಾದ ಅಧ್ಯಾಯ: ಫುಸ್ಸಿಲತ್
ಅಧ್ಯಾಯಗಳ ವಿಷಯಸೂಚಿ ಪುಟ ಸಂಖ್ಯೆ
 
ಪವಿತ್ರ ಕುರ್‌ಆನ್ ಅರ್ಥಾನುವಾದ - ಕನ್ನಡ ಅನುವಾದ - ಬಶೀರ್ ಮೈಸೂರಿ - ಅನುವಾದಗಳ ವಿಷಯಸೂಚಿ

ಅನುವಾದ - ಶೇಖ್ ಬಶೀರ್ ಮೈಸೂರಿ. ರುವ್ವಾದ್ ಭಾಷಾಂತರ ಕೇಂದ್ರದ ಮೇಲ್ವಿಚಾರಣೆಯಲ್ಲಿ ಇದನ್ನು ಅಭಿವೃದ್ಧಿಪಡಿಸಲಾಗಿದೆ.

ಮುಚ್ಚಿ