Check out the new design

ಪವಿತ್ರ ಕುರ್‌ಆನ್ ಅರ್ಥಾನುವಾದ - ಕನ್ನಡ ಅನುವಾದ - ಬಶೀರ್ ಮೈಸೂರಿ * - ಅನುವಾದಗಳ ವಿಷಯಸೂಚಿ


ಅರ್ಥಗಳ ಅನುವಾದ ಅಧ್ಯಾಯ: ಫುಸ್ಸಿಲತ್   ಶ್ಲೋಕ:
وَقَالُوْا لِجُلُوْدِهِمْ لِمَ شَهِدْتُّمْ عَلَیْنَا ؕ— قَالُوْۤا اَنْطَقَنَا اللّٰهُ الَّذِیْۤ اَنْطَقَ كُلَّ شَیْءٍ وَّهُوَ خَلَقَكُمْ اَوَّلَ مَرَّةٍ وَّاِلَیْهِ تُرْجَعُوْنَ ۟
ಅವರು ತಮ್ಮ ಚರ್ಮಗಳೊಡನೆ ಹೀಗೆ ಕೇಳುವರು ನೀವೇಕೆ ನಮ್ಮ ವಿರುದ್ಧ ಸಾಕ್ಷಿ ನೀಡಿದಿರಿ? ಆಗ ಅವು ಪ್ರತಿಯೊಂದು ವಸ್ತುವಿಗೂ ಮಾತನಾಡುವ ಶಕ್ತಿಯನ್ನು ನೀಡಿದ ಅಲ್ಲಾಹನೇ ನಮಗೂ ಮಾತನಾಡುವ ಶಕ್ತಿಯನ್ನು ನೀಡಿದ್ದಾನೆ ಎಂದು ಹೇಳುವರು. ಅವನೇ ನಿಮ್ಮನ್ನು ಮೊದಲ ಬಾರಿಗೆ ಸೃಷ್ಟಿಸಿದ್ದಾನೆ ಮತ್ತು ಅವನೆಡೆಗೇ ನೀವು ಮರಳಿಸಲಾಗುವಿರಿ.
ಅರಬ್ಬಿ ವ್ಯಾಖ್ಯಾನಗಳು:
وَمَا كُنْتُمْ تَسْتَتِرُوْنَ اَنْ یَّشْهَدَ عَلَیْكُمْ سَمْعُكُمْ وَلَاۤ اَبْصَارُكُمْ وَلَا جُلُوْدُكُمْ وَلٰكِنْ ظَنَنْتُمْ اَنَّ اللّٰهَ لَا یَعْلَمُ كَثِیْرًا مِّمَّا تَعْمَلُوْنَ ۟
ನೀವು ಅಪರಾಧಗಳನ್ನೆಸಗುತ್ತಿದ್ದಾಗ ನಿಮ್ಮ ಕಿವಿಗಳು, ಕಣ್ಣುಗಳು, ಚರ್ಮಗಳು ನಿಮ್ಮ ವಿರುದ್ಧ ಸಾಕ್ಷಿ ಹೇಳಬಲ್ಲವು ಎಂಬ ಯೋಚನೆಯಿಂದ ನೀವು ಅಡಗಿಕೊಳ್ಳುತ್ತಿರಲಿಲ್ಲ. ನೀವಂತು ನಿಮ್ಮ ಹಲವು ಕರ್ಮಗಳ ಕುರಿತು ಅಲ್ಲಾಹನಿಗೇ ತಿಳಿದಿಲ್ಲವೆಂದು ಭಾವಿಸಿಕೊಂಡಿದ್ದಿರಿ.
ಅರಬ್ಬಿ ವ್ಯಾಖ್ಯಾನಗಳು:
وَذٰلِكُمْ ظَنُّكُمُ الَّذِیْ ظَنَنْتُمْ بِرَبِّكُمْ اَرْدٰىكُمْ فَاَصْبَحْتُمْ مِّنَ الْخٰسِرِیْنَ ۟
ನೀವು ನಿಮ್ಮ ಪ್ರಭುವಿನ ಬಗ್ಗೆ ಇರಿಸಿಕೊಂಡಿದ್ದ ಭಾವನೆಯೇ ನಿಮ್ಮನ್ನು ನಾಶಕ್ಕೊಳಪಡಿಸಿದೆ. ಮತ್ತು ನೀವು ನಷ್ಟಹೊಂದಿದವರಲ್ಲಾಗಿಬಿಟ್ಟಿರಿ.
ಅರಬ್ಬಿ ವ್ಯಾಖ್ಯಾನಗಳು:
فَاِنْ یَّصْبِرُوْا فَالنَّارُ مَثْوًی لَّهُمْ ؕ— وَاِنْ یَّسْتَعْتِبُوْا فَمَا هُمْ مِّنَ الْمُعْتَبِیْنَ ۟
ಇನ್ನು ಅವರು ಸಹನೆವಹಿಸಿದರೂ ನರಕವೇ ಅವರ ವಾಸಸ್ಥಳವಾಗಿದೆ. ಮತ್ತು ಅವರು ಪಶ್ಚಾತ್ತಾಪ ಪಟ್ಟರೂ ಅವರ ಪಶ್ಚಾತ್ತಾಪವನ್ನು ಸ್ವೀಕರಿಸಲಾಗದು.
ಅರಬ್ಬಿ ವ್ಯಾಖ್ಯಾನಗಳು:
وَقَیَّضْنَا لَهُمْ قُرَنَآءَ فَزَیَّنُوْا لَهُمْ مَّا بَیْنَ اَیْدِیْهِمْ وَمَا خَلْفَهُمْ وَحَقَّ عَلَیْهِمُ الْقَوْلُ فِیْۤ اُمَمٍ قَدْ خَلَتْ مِنْ قَبْلِهِمْ مِّنَ الْجِنِّ وَالْاِنْسِ ۚ— اِنَّهُمْ كَانُوْا خٰسِرِیْنَ ۟۠
ನಾವು ಅವರಿಗೆ ಕೆಲವು ಸಂಗಡಿಗರನ್ನು ನಿಯೋಜಿಸಿದ್ದೆವು. ಅವರು ಅವರ ಮುಂದೆ ಮತ್ತು ಹಿಂದೆ ಇರುವ ಕರ್ಮಗಳನ್ನು ಅವರ ದೃಷ್ಟಿಯಲ್ಲಿ ಮನಮೋಹಕವಾಗಿ ತೋರಿಸಿದರು. ಮತ್ತು ಅವರಿಗಿಂತ ಮೊದಲು ಗತಿಸಿದ ಯಕ್ಷ ಹಾಗೂ ಮನುಷ್ಯರಲ್ಲಿನ ಸಮುದಾಯಗಳ ಮೇಲೆ ಸಾಬೀತಾದ ಶಿಕ್ಷೆಯ ತೀರ್ಮಾನವೇ ಅವರ ಮೇಲೂ ಸಾಬೀತುಗೊಂಡಿತು ನಿಶ್ಚಯವಾಗಿಯು ಅವರು ನಷ್ಟಹೊಂದಿದವರಾಗಿದ್ದರು.
ಅರಬ್ಬಿ ವ್ಯಾಖ್ಯಾನಗಳು:
وَقَالَ الَّذِیْنَ كَفَرُوْا لَا تَسْمَعُوْا لِهٰذَا الْقُرْاٰنِ وَالْغَوْا فِیْهِ لَعَلَّكُمْ تَغْلِبُوْنَ ۟
ಸತ್ಯನಿಷೇಧಿಗಳು ಹೇಳಿದರು: ನೀವು ಈ ಕುರ್‌ಆನನ್ನು ಕೇಳಬೇಡಿರಿ. ಅದರಲ್ಲಿ (ಪಠಣದ ವೇಳೆಯಲ್ಲಿ) ಗುಲ್ಲೆಬ್ಬಿಸಿರಿ. ನೀವು ಮೇಲುಗೈ ಸಾಧಿಸಬಹುದು.
ಅರಬ್ಬಿ ವ್ಯಾಖ್ಯಾನಗಳು:
فَلَنُذِیْقَنَّ الَّذِیْنَ كَفَرُوْا عَذَابًا شَدِیْدًا وَّلَنَجْزِیَنَّهُمْ اَسْوَاَ الَّذِیْ كَانُوْا یَعْمَلُوْنَ ۟
ನಿಶ್ಚಯವಾಗಿಯು ಆ ಸತ್ಯನಿಷೇಧಿಗಳಿಗೆ ನಾವು ಯಾತನೆಯ ಸವಿಯನ್ನು ಉಣಿಸುವೆವು. ಮತ್ತು ಅವರು ಮಾಡುತ್ತಿದ್ದಂತಹ ದುಪ್ಕರ್ಮಗಳ ಪ್ರತಿಫಲವನ್ನು ಅವರಿಗೆ ಖಂಡಿತ ನೀಡುವೆವು.
ಅರಬ್ಬಿ ವ್ಯಾಖ್ಯಾನಗಳು:
ذٰلِكَ جَزَآءُ اَعْدَآءِ اللّٰهِ النَّارُ ۚ— لَهُمْ فِیْهَا دَارُ الْخُلْدِ ؕ— جَزَآءً بِمَا كَانُوْا بِاٰیٰتِنَا یَجْحَدُوْنَ ۟
ಅದು ಅಲ್ಲಾಹನ ಶತ್ರುಗಳಿಗೆ ಪ್ರತಿಫಲವಾಗಿ ಸಿಗಲಿರುವ ಶಿಕ್ಷೆಯೇ ಈ ನರಕಾಗ್ನಿಯಾಗಿದೆ. ಅದರಲ್ಲೇ ಅವರಿಗೆ ಶಾಶ್ವತ ನೆಲೆ ಇದೆ. (ಇದು) ನಮ್ಮ ದೃಷ್ಟಾಂತಗಳನ್ನು ನಿಷೇಧಿಸುತ್ತಿದ್ದುದರ ಪ್ರತಿಫಲವಾಗಿದೆ.
ಅರಬ್ಬಿ ವ್ಯಾಖ್ಯಾನಗಳು:
وَقَالَ الَّذِیْنَ كَفَرُوْا رَبَّنَاۤ اَرِنَا الَّذَیْنِ اَضَلّٰنَا مِنَ الْجِنِّ وَالْاِنْسِ نَجْعَلْهُمَا تَحْتَ اَقْدَامِنَا لِیَكُوْنَا مِنَ الْاَسْفَلِیْنَ ۟
ಸತ್ಯಷೇಧಿಗಳು ಹೇಳುವರು: ನಮ್ಮ ಪ್ರಭು, ಯಕ್ಷ ಮತ್ತು ಮನುಷ್ಯರ ಪೈಕಿ ನಮ್ಮನ್ನು ದಾರಿಗೆಡಿಸಿದ ಆ ಎರಡೂ ತಂಡಗಳನ್ನು ನಮಗೊಮ್ಮೆ ತೋರಿಸಿ ಕೊಡು. ಅವರು ತೀವ್ರ ಅಪಮಾನಿತರಾಗಲು ನಾವು ಅವರನ್ನು ನಮ್ಮ ಪಾದದಡಿಯಲ್ಲಿ ಹಾಕಿ ತುಳಿಯುವೆವು.
ಅರಬ್ಬಿ ವ್ಯಾಖ್ಯಾನಗಳು:
 
ಅರ್ಥಗಳ ಅನುವಾದ ಅಧ್ಯಾಯ: ಫುಸ್ಸಿಲತ್
ಅಧ್ಯಾಯಗಳ ವಿಷಯಸೂಚಿ ಪುಟ ಸಂಖ್ಯೆ
 
ಪವಿತ್ರ ಕುರ್‌ಆನ್ ಅರ್ಥಾನುವಾದ - ಕನ್ನಡ ಅನುವಾದ - ಬಶೀರ್ ಮೈಸೂರಿ - ಅನುವಾದಗಳ ವಿಷಯಸೂಚಿ

ಅನುವಾದ - ಶೇಖ್ ಬಶೀರ್ ಮೈಸೂರಿ. ರುವ್ವಾದ್ ಭಾಷಾಂತರ ಕೇಂದ್ರದ ಮೇಲ್ವಿಚಾರಣೆಯಲ್ಲಿ ಇದನ್ನು ಅಭಿವೃದ್ಧಿಪಡಿಸಲಾಗಿದೆ.

ಮುಚ್ಚಿ